Homeಅಂಕಣಗಳುರಾಜಕಾರಣದಲ್ಲಿ ಶೈಕ್ಷಣಿಕ ಅರ್ಹತೆ

ರಾಜಕಾರಣದಲ್ಲಿ ಶೈಕ್ಷಣಿಕ ಅರ್ಹತೆ

- Advertisement -
- Advertisement -

ಕುಮಾರಸ್ವಾಮಿಯವರ ಸರ್ಕಾರ ಮೂರು ಅಗ್ನಿಪರೀಕ್ಷೆಗಳನ್ನು ಹಾಯಬೇಕಾಯಿತು. ಅ. ಸದನದಲ್ಲಿ ಬಹುಮತ ರುಜುವಾತು ಪಡಿಸುವುದು. ಆ. ಮಂತ್ರಿಮಂಡಲ ರಚನೆ. ಇ. ಖಾತೆ ಹಂಚಿಕೆ ಮತ್ತು ಹಂಚಿಕೆ ಬಳಿಕ ಎದ್ದ ಬಿರುಗಾಳಿಯಲ್ಲಿ ಬೇಕಾದ ಖಾತೆ ಸಿಗಲಿಲ್ಲವೆಂಬ ಬೇಸರಿಗಳನ್ನು ಒಲಿಸುವುದು. ಈ ಮೂರನೆಯ ಕೆಲಸದಲ್ಲಿ ಹೆಚ್ಚು ಸುದ್ದಿಯಾಗಿದ್ದು ಜಿ.ಟಿ. ದೇವೇಗೌಡರಿಗೆ ಕೊಡಲಾದ ಉನ್ನತ ಶಿಕ್ಷಣ ಖಾತೆ. ಈ ಖಾತೆ ಹಂಚಿಕೆ ಹಿಂದಿನ ತರ್ಕವೇನೆÉಂದು ಸ್ಪಷ್ಟವಾಗುತ್ತಿಲ್ಲ. ಆದರೆ ಇದರಿಂದ ಎದ್ದ ಸಾರ್ವಜನಿಕ ಟೀಕೆಗಳಿಂದಲೊ ತಮ್ಮ ಶೈಕ್ಷಣಿಕ ಕೀಳರಿಮೆಯಿಂದಲೂ ಗೌಡರು ಆ ಖಾತೆ ನನಗೊಲ್ಲೆ ಎಂದರು. ದೊಡ್ಡಗೌಡರಲ್ಲಿ ಹೋಗಿ `ಜನ ತಮಾಶೆ ಮಾಡುತ್ತಿದ್ದಾರೆ, ಜನರ ಜತೆ ಬೆರೆಯುವಂತಹ ಸಹಕಾರ ನೀರಾವರಿ ತರಹದ ಖಾತೆ ಕೊಡಿ’ ಎಂದು ಅಲವತ್ತುಕೊಂಡರು. ಸದ್ಯಕ್ಕೆ, ಮುಖ್ಯಮಂತ್ರಿಯವರೇ ಶಿಕ್ಷಣ ಖಾತೆಯನ್ನು ತಮ್ಮಲ್ಲಿಟ್ಟುಕೊಂಡು, ಅವರಿಗೆ ಬೇರೆ ಖಾತೆ ಕೊಡಲು ಚಿಂತನೆ ಮಾಡುತ್ತಿರುವಲ್ಲಿಗೆ ಪ್ರಕರಣ ಬಂದು ನಿಂತಿದೆ. ಹಿಂದೆ ರೈತಾಪಿ ಗ್ರಾಮೀಣ ಹಿನ್ನೆಲೆಯಿಂದ ಬಂದ ಪಾಟೀಲರಿಗೆ ಐಟಿಖಾತೆ ಕೊಟ್ಟಾಗಲೂ ಉದ್ಯಮವಲಯದಿಂದ ಟೀಕೆ-ಅದನ್ನು ಅಮೆರಿಕದಲ್ಲಿದ್ದು ಬಂದಿರುವ ಕೃಷ್ಣಭೈರಾರೆಡ್ಡಿಯವರಿಗೆ ಕೊಡಬೇಕಾಗಿತ್ತು ಎಂಬ ಸಲಹೆಯ ಸಮೇತ- ಬಂದಿತ್ತು.
ಈ ಪ್ರಕರಣಗಳು ಅಕ್ಷರಸ್ಥ ವಿದ್ಯೆ, ಪದವಿ ಶಿಕ್ಷಣ ಹಾಗೂ ಖಾತೆಯ ಸ್ವರೂಪ ನಡುವಣ ಸಂಬಂಧ ಕುರಿತಂತೆ ಸಮಾಜದಲ್ಲಿರುವ ಜನಪ್ರಿಯ ಗ್ರಹಿಕೆಯ ದ್ಯೋತಕವಾಗಿವೆ. ಈ ಗ್ರಹಿಕೆ ಮೂರು ಪ್ರಶ್ನೆ ಹುಟ್ಟಿಸಿದೆ. 1. ನಿರ್ದಿಷ್ಟ ಖಾತೆ ನಿರ್ವಹಿಸಲು ರಾಜಕಾರಣಿಗೆ ಇರಬೇಕಾದುದು ಆ ಖಾತೆ ಸಂಬಂಧ ಶೈಕ್ಷಣಿಕ ಅರ್ಹತೆಯೊ ಅನುಭವವೊ ಆಸಕ್ತಿಯೊ ಆಡಳಿತಾತ್ಮಕ ದಕ್ಷತೆಯೊ? 2. ಶೈಕ್ಷಣಿಕ ಅರ್ಹತೆ ಎನ್ನುವಾಗ ಇರುವ ಶಿಕ್ಷಣ ಅಥವಾ ವಿದ್ಯೆಯ ಪರಿಕಲ್ಪನೆ ಯಾವುದು? 3. ಶೈಕ್ಷಣಿಕ ಅರ್ಹತೆಯ ಪರವಾಗಿ ವಾದಿಸುತ್ತಿರುವ ಜನ ಯಾರು ಮತ್ತು ಅವರು ಪ್ರತಿಪಾದಿಸುತ್ತಿರುವ ಮೌಲ್ಯ ಮತ್ತು ಮರೆಮಾಚುತ್ತಿರುವ ಸಂಗತಿಗಳು ಯಾವುವು?
ರಾಜಕಾರಣಿಯೊಬ್ಬನಿಗೆ ನಿರ್ದಿಷ್ಟ ಖಾತೆ ನಿಭಾಯಿಸಲು ಸಂವಿಧಾನವು ಶೈಕ್ಷಣಿಕ ಇಲ್ಲವೇ ಅನುಭವದ ಹಿನ್ನೆಲೆಯನ್ನು ನಿರ್ದಿಷ್ಟಪಡಿಸಿಲ್ಲ. ಇದರಿಂದ ಪದವೀಧರರಲ್ಲದ ಎಚ್.ಡಿ. ದೇವೇಗೌಡರು ಪ್ರಧಾನಿಗಳಾದರು. ಪದವಿ ವಿಷಯದಲ್ಲಿ ಸಂಶಯಕ್ಕೀಡಾಗಿರುವ ಸ್ಮøತಿ ಇರಾನಿಯವರೂ ವಿಶ್ವವಿದ್ಯಾಲಯಗಳ ಆಡಳಿತ ನೋಡಿಕೊಳ್ಳುವ ಮಾನವ ಸಂಪನ್ಮೂಲ ಖಾತೆಗೆ ಮಂತ್ರಿಯಾಗಿದ್ದರು. ಆದ್ದರಿಂದ ಜಿ.ಟಿ.ದೇವೇಗೌಡರು ಶಿಕ್ಷಣಖಾತೆ ಮಂತ್ರಿಯಾಗುವುದು ಔಚಿತ್ಯದ ಅಥವಾ ನೈತಿಕ ಪ್ರಶ್ನೆ ಆಗಬಹುದೇ ಹೊರತು, ಕಾನೂನಾತ್ಮಕ ಸಂವಿಧಾನಾತ್ಮಕ ತೊಡಕಲ್ಲ. ಆದರೂ ಔಪಚಾರಿಕ ಪದವಿಯ ಹಿನ್ನೆಲೆ ಕೊಡುವ ಅಧಿಕೃತತೆ, ಅದು ಹುಟ್ಟಿಸುವ ಕೀಳರಿಮೆ, ಮೋದಿ ಮತ್ತು ಸ್ಮøತಿ ತಾವೂ ಪದವಿ ಪಡೆದಿದ್ದೇವೆ ಎಂದು ರುಜುವಾತುಪಡಿಸುವ ಒತ್ತಡಕ್ಕೆ ದೂಡಿರುವುದನ್ನು ಗಮನಿಸಬಹುದು.
ಇನ್ನು ಮಂತ್ರಿಯಾದವರು ಪಡೆದ ಪದವಿಗೂ ಅವರ ಖಾತೆಗೂ ಇರುವ ಸಂಬಂಧದಲ್ಲೂ ನಿರ್ಬಂಧವಿಲ್ಲ. ಭಾರತದ ಶಕ್ತಿ ರಾಜಕಾರಣಕ್ಕೆ ಪ್ರವೇಶಿಸಿದ ಹೆಚ್ಚು ಜನರು ಕಾನೂನು ಪದವಿ ಹಿನ್ನೆಲೆಯವರು. ವಕೀಲಿಕೆ ಹಿನ್ನೆಲೆಯ ಸಿದ್ದರಾಮಯ್ಯ ಹಣಕಾಸು ಮಂತ್ರಿಯಾಗಿ ಹತ್ತಕ್ಕಿಂತ ಹೆಚ್ಚು ಬಜೆಟ್ ಮಂಡಿಸಿದರು; ಅರ್ಥತಜ್ಞರಾಗಿದ್ದ ಮನಮೋಹನ ಸಿಂಗ್ ಪ್ರಧಾನಮಂತ್ರಿಯಾದರು; ಎಚ್.ಡಿ ದೇವೇಗೌಡರು ರಾಜಕಾರಣಕ್ಕೆ ಬರುವ ಮೊದಲು ನೀರಾವರಿ ಇಲಾಖೆಯ ಇಂಜಿನಿಯರಾಗಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಖಾದರ್ ತಮಗೆ ಕೊಟ್ಟ ಆರೋಗ್ಯ ಆಹಾರ ಖಾತೆಯಲ್ಲಿಯೂ, ಎಂ.ಬಿ. ಪಾಟೀಲರು ನೀರಾವರಿಯಲ್ಲಿ ಒಳ್ಳೆಯ ಕೆಲಸ ಮಾಡಿದರೆಂಬ ವರದಿಗಳಿವೆ. ಕಾರುಚಾಲಕ ಹಿನ್ನೆಲೆಯಿಂದ ಬಂದ ಜಾಫರ್ ಶರೀಫ್ ಉನ್ನತ ಶಿಕ್ಷಣ ಪಡೆದ ಎಷ್ಟೊ ಮಂತ್ರಿಗಳಿಗೆ ಹೋಲಿಸಿದರೆ, ರೈಲ್ವೆಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದರೆನ್ನಲಾಗುತ್ತದೆ. ಭಾರತದ ಅನೇಕ ಕ್ರಿಯಾಶೀಲ ರಾಜಕಾರಣಿಗಳಿಗೆ ಶೈಕ್ಷಣಿಕವಾಗಿ ದೊಡ್ಡ ಪದವಿಗಳಿರಲಿಲ್ಲ. ಅದು ಅವರು ತಮ್ಮ ಖಾತೆ ನಿಭಾಯಿಸುತ್ತ ಪಡೆದ ಗಳಿಸಿದ ಯಶಸ್ಸು-ಸೋಲುಗಳಿಗೂ ತಾರ್ಕಿಕ ಕಾರಣವಾಗಲಿಲ್ಲ.
ಹಿಂದೆ ರಾಜಕಾರಣಕ್ಕೆ ಭೂಮಾಲೀಕ ಮತ್ತು ವಕೀಲಿ ಹಿನ್ನೆಲೆಯವರು ಹೆಚ್ಚು ಬರುತ್ತಿದ್ದರು. ಈಗ ಉದ್ಯಮಿಗಳು ಸಿನಿಮಾನಟರು ಭೂಗತಲೋಕದವರು ಅಧ್ಯಾಪಕರು ವ್ಯಾಪಾರಿಗಳು ಗಣಿಮಾಲಿಕರು ಚಳವಳಿಗಾರರು-ಅದೊಂದು ನೂರಾರು ಹೊಳೆ ಕೂಡುವ ಕಡಲು. ಹೀಗಾಗಿ ಶಾಸಕರ-ಸಂಸದರ ಅನುಭವದ ಹಿನ್ನೆಲೆಗೂ ಅವರ ಖಾತೆಗೂ ಸಮೀಕರಣ ಸಾಧಿಸುವುದು ಅಸಾಧ್ಯ. ಆದರೂ ಲೋಕೋಪಯೋಗಿ ಖಾತೆಗಿಲ್ಲದ ಅರ್ಹತೆಯ ಪ್ರಶ್ನೆ, ಉನ್ನತ ಶಿಕ್ಷಣ, ತಂತ್ರಜ್ಞಾನದಂತಹ ವಿಶೇಷ ಪರಿಣತಿಯ ಕ್ಷೇತ್ರವನ್ನು ಮುನ್ನಡೆಸುವವರಿಗೆ ಕೇಳಲಾಗುತ್ತದೆ. ಈ ಅಪೇಕ್ಷೆ ತಪ್ಪಲ್ಲ. ವೈರುಧ್ಯವೆಂದರೆ ಈ ಹಿಂದೆ ಉದ್ಯಮ ವೈದ್ಯಕೀಯ ವ್ಯಾಪಾರಿ ಹಿನ್ನೆಲೆಯವರೆಲ್ಲ ಶಿಕ್ಷಣ ಮಂತ್ರಿಯಾದಾಗ ನಾವು ಈ ಪ್ರಶ್ನೆಯನ್ನು ಎತ್ತೇಯಿಲ್ಲ. ಬೌದ್ಧಿಕ ಹಿನ್ನೆಲೆಯ ರಾಯರೆಡ್ಡಿಯವರು ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನೇ ಮೊಟಕು ಮಾಡುವ ವಿಧೇಯಕ ತಂದಾಗಲೂ ಪ್ರಶ್ನೆ ಎತ್ತಲಿಲ್ಲ.
ಭಾರತದ ಅಕ್ಷರಸ್ಥ ವರ್ಗಗಳಲ್ಲಿ ವಿದ್ಯೆ-ಶಿಕ್ಷಣ ಕುರಿತು ಕೆಲವು ಮೂಢನಂಬಿಕೆಯಿವೆ. ಅಕ್ಷರಕ್ಕೂ ವಿದ್ಯೆಗೂ ಯಾಂತ್ರಿಕ ಸಂಬಂಧ ಏರ್ಪಟ್ಟಿದ್ದ ಸಮಾಜದಲ್ಲಿ ಅಕ್ಷರದಾಚೆ ಇರುವ ಲೋಕೋಪಯೋಗಿ ವಿದ್ಯೆಗಳನ್ನು ಮಾನ್ಯ ಮಾಡುವ ಮನೋಭಾವ ಇರುವುದಿಲ್ಲ. ಅಲ್ಲಿ ಅನಕ್ಷರಸ್ಥರನ್ನು ಗೇಲಿಮಾಡುವ ಕತೆಗಳೂ ನುಡಿಗಟ್ಟುಗಳೂ ಹುಟ್ಟಿಕೊಳ್ಳುತ್ತವೆ. ಅನಕ್ಷರಸ್ಥನೊಬ್ಬ ಒಳ್ಳೇಕವಿಯಾದರೆ ದೇವತೆ ವರಪ್ರಸಾದವೆಂಬ ಮಿತ್ ಸಿದ್ಧವಾಗುತ್ತದೆ. ಇವು ಅಕ್ಷರವಿದ್ಯೆಯನ್ನು ದೈಹಿಕ ದುಡಿಮೆ ಮತ್ತು ಸೃಜನಶೀಲ ಪ್ರತಿಭೆಯ ಜತೆ ಸಾವಯವ ಸಂಬಂಧ ಕತ್ತರಿಸಿಕೊಂಡು ಹುಟ್ಟಿದ ನಂಬಿಕೆಗಳು. ತನ್ನಪ್ಪ ಅಮ್ಮ ಅವಿದ್ಯಾವಂತರು ಎಂದು ಹೆಮ್ಮೆಯಿಂದಲೂ ಅಳುಕಿನಿಂದಲೊ ಹೇಳಿಕೊಳ್ಳುವ ಪದವೀಧರ ಮಕ್ಕಳಿಗೆ ಅವರು ಅನಕ್ಷರಸ್ಥ ನಿಜ. ಆದರೆ ಅವರಲ್ಲಿ ಬೇಸಾಯ ಬಡಗಿತನ ಕಮ್ಮಾರಿಕೆ ನೇಕಾರಿಯಂತಹ ಅಮೂಲ್ಯ ವಿದ್ಯೆಯಿತ್ತು ಎಂಬುದರ ಖಬರಿರುವುದಿಲ್ಲ. ಇದಕ್ಕೆ ಪೂರಕವಾಗಿ ಅಕ್ಷರಸ್ಥ ಸಂಸ್ಕøತಿಯಿಂದ ಬಂದವರಂತೂ ತಮ್ಮನ್ನು ದೇವತೆಗಳೆಂದೇ ಭಾವಿಸಿರುತ್ತಾರೆ. ಈ ಗರ್ವಕ್ಕೆ ಶಿಕ್ಷಣದಲ್ಲಿರುವ `ಉನ್ನತ’ ಶಬ್ದವೂ ಇಂಬಾಗಿದೆ. ವಿಶ್ವವಿದ್ಯಾಲಯದ ಔಪಚಾರಿಕ ಪದವಿ ಶಿಕ್ಷಣವು ಸಾಮಾಜಿಕ ಅಂತಸ್ತಾಗಿರುವ ಸಮಾಜದಲ್ಲಿ, ನಮ್ಮ ಸುತ್ತ ಯಾಕಾಗಿ ಅನಕ್ಷರತೆ ಇದೆ, ಅಕ್ಷರವಿದ್ಯೆ ಕೆಲವರಿಗೇ ಸೀಮಿತವಾಗಿದೆ ಎಂಬ ಬಗ್ಗೆ ಚಿಂತನೆ ಮಾಡದ ವರ್ಗವಿರುತ್ತದೆ. ಇದು ಇಂಗ್ಲಿಷ್ ಭಾಷೆಯನ್ನೇ ಜ್ಞಾನವೆಂದು ಭಾವಿಸಿರುತ್ತದೆ. ಅಕ್ಷರೀವಿದ್ಯೆ, ವಿವಿ ಪದವಿ ಹಾಗೂ ಇಂಗ್ಲಿಷು ಇಲ್ಲದವರನ್ನು ತುಚ್ಛವಾಗಿ ನೋಡುತ್ತದೆ. ತನ್ನ ಮಾತುಕತೆಯಲ್ಲೇ ಅನಕ್ಷರಸ್ಥ ಅಥವಾ ಪದವಿರಹಿತ ಜನರಲ್ಲಿ ಕೀಳರಿಮೆ ಸೃಷ್ಟಿಸುತ್ತದೆ. ಆದರೆ ಈ ವರ್ಗ ಮರೆಯುವ ಅಥವಾ ಮರೆಮಾಚುವ ಸಂಗತಿಯೆಂದರೆ; ಉನ್ನತಶಿಕ್ಷಣ ಕೊಡುತ್ತಿರುವ ವಿಶ್ವವಿದ್ಯಾಲಯಗಳಲ್ಲಿ ದಡ್ಡರೂ ಸೋಮಾರಿಗಳೂ ಸಹ ತುಂಬಿರಬಹುದು; ರಾಜಕೀಯ ಪ್ರಭುಗಳಿಗೆ ತಮ್ಮ ಪದವಿಯ ತಮ್ಮ ವಿಶ್ವವಿದ್ಯಾಲಯದ ಘನತೆಯನ್ನು ಅಡವಿಟ್ಟು ಬಾಗುವ ಕುಲಪತಿಗಳಿರಬಹುದು; ಹೆಚ್ಚು ಬುದ್ಧಿವಂತರು ದೊಡ್ಡ ಪದವಿ ಪಡೆದವರಲ್ಲಿ ಜಾತಿವಾದಿಗಳು ಮತೀಯವಾದಿಗಳು ಭ್ರಷ್ಟರು ಜನರ ಬಗ್ಗೆ ಪ್ರೀತಿಯಿಲ್ಲದವರು ಇರಬಹುದು ಎಂಬುದನ್ನು. ವೈದ್ಯ ವಕೀಲ ಪತ್ರಕರ್ತ ಇಂಜಿನಿಯರ್ ಮುಂತಾದವರಿಗೆ ಅವರ ವೃತ್ತಿಗೆ ಬೇಕಾದ ಶೈಕ್ಷಣಿಕ ಅರ್ಹತೆಯಿರಬೇಕು ಎನ್ನುವುದು ಸರಿ. ಆದರೆ ಈ ಅರ್ಹತೆಗೆ ಬೇಕಾದ ಪ್ರಾಮಾಣಿಕತೆ ಮಾನವೀಯತೆ ಶೈಕ್ಷಣಿಕ ಪ್ರೀತಿ, ನಿಷ್ಪಕ್ಷಪಾತಗಳು ಇವೆಯಾ ಎಂದು ಕೇಳದಿರುವುದು ಹಿಪಾಕ್ರಸಿ. ಇಂತಹ ಹಿಪಾಕ್ರಟಿಕ್ ವರ್ಗಕ್ಕೆ, ರಾಜಕಾರಣಿಯ ಶೈಕ್ಷಣಿಕ ಹಿನ್ನೆಲೆ ಕೇಳುವುದಕ್ಕೆ ನೈತಿಕತೆ ಉಳಿದಿರುತ್ತದೆಯೇ? ದೇವೇಗೌಡರ ಶೈಕ್ಷಣಿಕ ಅರ್ಹತೆ ಮೇಲೆ ಜೋಕು ಕಟ್ಟಿದವರಲ್ಲಿ ಹೆಚ್ಚಿನವರು ಅಂತರ್ಜಾಲದಲ್ಲಿ ಈಜಾಡುವವರು; ಇಂಗ್ಲೀಶನ್ನು ಬಳಸುವವರು. ಮೇಲ್ಜಾತಿಯವರು; ತಂತ್ರಜ್ಞಾನ ಪತ್ರಿಕೋದ್ಯಮ ಕ್ಷೇತ್ರದವರು; ತಮ್ಮ ಜಾತಿ ಮತ್ತು ಕುಟುಂಬದ ಹಿನ್ನೆಲೆಯಲ್ಲಿ ಅಕ್ಷರವನ್ನು ಸಾಂಸ್ಕøತಿಕ ಬಂಡವಾಳವನ್ನಾಗಿ ಪಡೆದವರು; ಅನಕ್ಷರತೆ ಶೂದ್ರತ್ವ ದಲಿತತ್ವ ಮುಸ್ಲಿಮರು ಬುಡಕಟ್ಟುಗಳ ಬಗ್ಗೆ ತಿರಸ್ಕಾರವುಳ್ಳವರು; ಮೀಸಲಾತಿ ಪ್ರತಿಭೆಗೆ ವಿರೋಧಿ ಎಂದು ನಂಬಿದವರು; ಅಮೆರಿಕದಲ್ಲಿ ತಮ್ಮ ಪ್ರತಿಭೆಯನ್ನು ತೊಡಗಿಸಲು ಅವಕಾಶಕ್ಕಾಗಿ ಹಾತೊರೆವವರು; ಸಂಗೀತ ಸಾಹಿತ್ಯ ಕ್ಷೇತ್ರ್ರಗಳಲ್ಲಿ ತಳಸ್ತರದ ಜನ ಪ್ರವೇಶಿಸುವ ಬಗ್ಗೆ ಸಹನೆಯಿಲ್ಲದವರು; ದಲಿತರ ಮೇಲೆ ಹಲ್ಲೆಗೆ ಮತೀಯವಾದಕ್ಕೆ ಮೌನಸಮ್ಮತಿ ನೀಡುವವರು; ಶಿಕ್ಷಣ ವ್ಯವಸ್ಥೆಯಲ್ಲಿ ಮತೀಯವಾದವನ್ನೊ ವ್ಯಾಪಾರಿ ಹಿತಾಸಕ್ತಿಗಳನ್ನೊ ಸಂಸ್ಕøತಿ ಹೆಸರಲ್ಲಿ ಕಂದಾಚಾರವನ್ನೊ ತುರುಕುವಾಗ ತಲ್ಲಣಿಸದವರು; ಲೇಖಕರ ಮೇಲೆ ಹಲ್ಲೆ ಕೊಲೆಯಾದಾಗ ಗುಪ್ತವಾಗಿ ಸಂಭ್ರಮಿಸಿದವರು. ಈ ಮನೋಭಾವ ಅನಕ್ಷರತೆ ಮಾಡದ ಅನಾಹುತ ಮಾಡಬಲ್ಲುದು.
ಬಲಪಂಥೀಯ ಸರ್ಕಾರಗಳು ಅಧಿಕಾರ ಕೈಗೆ ತೆಗೆದುಕೊಂಡಾಗೆÉಲ್ಲ ವಿಶ್ವವಿದ್ಯಾಲಯಗಳನ್ನು ಅಲ್ಲಿ ನಮ್ಮ ಸಿದ್ಧಾಂತ ವಿರೋಧಿಸುವ ವಿಚಾರವಾದಿಗಳು ತುಂಬಿಕೊಂಡಿದ್ದಾರೆ ಎಂದು ಹಗೆಗಣ್ಣಲ್ಲೇ ನೋಡುತ್ತವೆ. ನಟನೆಯ ಲೋಕದಿಂದ ಬಂದ ಸ್ಮøತಿಇರಾನಿ ಅವರಿಗೆ ಮಾನವ ಸಂಪನ್ಮೂಲ ಖಾತೆಯನ್ನು, ವಿಶ್ವವಿದ್ಯಾಲಯಗಳಲ್ಲಿರುವ ಚಿಂತಕರು ವಿಜ್ಞಾನಿಗಳು ಬುದ್ಧಿಜೀವಿಗಳಿಗೆ ಮುಜುಗರ ಮಾಡಲೆಂದೇ ಕೊಡಲಾಗಿದೆ; ಶಿಕ್ಷಣದ ಬಗ್ಗೆ ಗೊತ್ತಿಲ್ಲದ ಮಂತ್ರಿಯಿದ್ದರೆ ಸಂಘಪರಿವಾರಕ್ಕೆ ತನ್ನ ಅಜೆಂಡಾಗಳನ್ನು ಹೇರುವುದು ಸುಲಭ ಎಂಬ ವ್ಯಾಖ್ಯಾನ ಮಾಡಲಾಯಿತು. ಸ್ಮøತಿಯವರ ಕಾಲದಲ್ಲಿಯೇ ಕನ್ಹಯ್ಯ ಸೆರೆಮನೆಗೆ ಹೋಗಿದ್ದು: ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು. ಸಾರ್ವಜನಿಕ ಟೀಕೆ ಎದುರಿಸಿದ ಬಳಿಕ ಸ್ಮøತಿಯವರ ಬದಲಿಗೆ ಪದವೀಧರರಾದ ಆರೆಸ್ಸೆಸ್ ಹಿನ್ನೆಲೆಯ ಮೇಲ್ಜಾತಿಯ ಜಾವಡೇಕರ್ ಬಂದಿದ್ದಾರೆ. ಹಾರ್ವರ್ಡ್ ಪದವಿಯುಳ್ಳ ಸುಬ್ರಹ್ಮಣ್ಯಸ್ವಾಮಿಯವರ ಬುದ್ಧಿವಂತಿಕೆ, ತರ್ಕಶೀಲತೆ, ವಾಗ್ಮಿತೆ, ಇಂಗ್ಲೀಷಿನ ಮೇಲಿನ ಪ್ರಭುತ್ವದ ಬಗ್ಗೆ ದಂತಕತೆಗಳಿವೆ. ಆದರೆ ಅವರ ಸಾಮಾಜಿಕ ಗ್ರಹಿಕೆ ಸಂಕುಚಿತ. ಸದ್ಯ ಭಾರತದ ಸಂಸ್ಕøತಿ ಮಂತ್ರಿಯಾಗಿರುವರು ಕಲಬುರ್ಗಿ ಕೊಲೆಯಾದ ಬಂದ ಪ್ರತಿಭಟನೆಗೆ, ಲೇಖಕರಿಗೆ ಉಸಿರುಗಟ್ಟುವ ವಾತಾವರಣ ಇದ್ದರೆ ಅವರು ಬರೆಯುವುದನ್ನು ನಿಲ್ಲಿಸಲಿ ಎಂದು ಅಪ್ಪಣೆ ಕೊಟ್ಟರು. ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು?
ಈ ಚರ್ಚೆಯ ಉದ್ದೇಶ ದೇವೇಗೌಡರು ಶಿಕ್ಷಣ ಖಾತೆ ನಿಭಾಯಿಸಲು ಸಮರ್ಥರು ಅಥವಾ ಅಸಮರ್ಥರು ಎಂದು ಪ್ರತಿಪಾದಿಸುವುದಲ್ಲ. ರಾಜಕಾರಣಿಯ ದಕ್ಷತೆ-ಅದಕ್ಷತೆಗಳಿಗೆ ಶೈಕ್ಷಣಿಕ ಹಿನ್ನೆಲೆ ಆತ್ಯಂತಿಕ ಮಾನದಂಡವಾಗಬೇಕಿಲ್ಲ ಎಂದು ಸೂಚಿಸುವುದು. ವಾಸ್ತವದಲ್ಲಿ ದೇವೇಗೌಡರಿಗೆ ಶಿಕ್ಷಣ ಖಾತೆ ಇಷ್ಟವಿಲ್ಲ. ಶಿಕÀ್ಷಣವು ಲೋಕೋಪಯೋಗಿ ಸಾರಿಗೆ ಇಂಧನದ ಹಾಗೆ ಶಕ್ತಖಾತೆಯಲ್ಲ ಎಂಬುದೂ ಕಾರಣವೂ ಇದ್ದೀತು. ಬಿಜೆಪಿಯೇತರ ಪಕ್ಷದ ಸರ್ಕಾರಗಳಲ್ಲಿ ಸಾಮಾನ್ಯವಾಗಿ ಹಣಕಾಸು ಗೃಹ ಇಂಧನದಂತಹ ಪ್ರಭಾವೀ ಖಾತೆಗಳಿಗೆ ಸ್ಪರ್ಧೆ; ಶಿಕ್ಷಣವನ್ನು ಕೇಳುವವರಿರುವುದಿಲ್ಲ. ಹಿಂದೆ ದೇಶಪಾಂಡೆಯವರಿಗೆ ಈ ಖಾತೆಕೊಟ್ಟಾಗ ಅವರು ಉಸಿರುಗಟ್ಟಿಹೋದರು. ಉದ್ಯಮಿಯಾಗಿ ಅವರಿಗೆ ಭಾರೀ ಕೈಗಾರಿಕೆಯ ಖಾತೆ ಬೇಕಾಗಿತ್ತು. ಅದನ್ನು ಮುಂದೆ ಪಡೆದರು ಕೂಡ. ಆದರೆ ಸೈದ್ಧಾಂತಿಕ ಹಿನ್ನೆಲೆಯ ಎಡ ಮತ್ತು ಬಲಪಂಥೀಯ ಸರ್ಕಾರಗಳಿಗೆ ಶಿಕ್ಷಣಖಾತೆ ಬಹಳ ಮಹತ್ವದ್ದು. ಅದನ್ನು ಅವರಲ್ಲೇ ಹೆಚ್ಚು ಬುದ್ಧಿವಂತರಾದ ಸೈದ್ಧಾಂತಿಕ ಸ್ಪಷ್ಟತೆಯುಳ್ಳವರಿಗೆ ಕೊಡುತ್ತಾರೆ. ಶಿಕ್ಷಣ ವ್ಯವಸ್ಥೆ ಮೂಲಕ ಸಮಾಜದ ಆಲೋಚನಾಕ್ರಮ ಬದಲಿಸಬಹುದು ಎಂಬುದು ಅವಕ್ಕೆ ಗೊತ್ತು.
ಮುಖ್ಯ ಸಂಗತಿ ರಾಜಕಾರಣಿಗೆ/ಮಂತ್ರಿಗೆ ಶೈಕ್ಷಣಿಕ ಪದವಿಯಿರುವುದು-ಇಲ್ಲದಿರುವುದಲ್ಲ. ಅವರಿಗೆ ಆ ಖಾತೆಯಲ್ಲಿ ಆಸಕ್ತಿ ಪ್ರೀತಿ ಇದೆಯೊ ಇಲ್ಲವೊ ಎನ್ನುವುದು. ಇದ್ದರೆ ಅವರ ನಿಲುವು ಯಾವುದು ಮತ್ತು ಅದರ ಪರಿಣಾಮಗಳೇನು ಎನ್ನುವುದು. ಅವರ ಆಡಳಿತ ದಕ್ಷತೆ ಎಂತಹದ್ದೆನ್ನುವುದು. ಸೈನಿಕ ಹಿನ್ನೆಲೆಯಿಂದ ಬಂದ ಹೈದರಾಲಿಗೆ ಓದುಬರಹ ನಾಸ್ತಿಯಾಗಿತ್ತು. ಆದರೆ ಅವನಿಗೆ ಪ್ರಚಂಡವಾದ ರಾಜಕೀಯ ಪ್ರತಿಭೆಯಿತ್ತು. ಮೈಸೂರು ಅರಸರ, ಪಾಳೆಗಾರರ, ಬ್ರಿಟಿಷರ ಫ್ರೆಂಚರ ಅವನು ರಾಜಕೀಯ ಬಿಕ್ಕಟ್ಟು ನಿಭಾಯಿಸಿದ ಬಗೆ ಅಪೂರ್ವ. ಇದಕ್ಕಾಗಿ ಪೂರ್ಣಯ್ಯನ ಜಾಣ್ಮೆಯೂ ಅವನಿಗೆ ನೆರವಾಗಿರಬಹುದು. ಎಷ್ಟೊ ಸಲ ಸೂಕ್ಷ್ಮತೆ ಜನಪರತೆ ಪ್ರಾಮಾಣಿಕತೆ ಇರುವ ಅಧಿಕಾರಿಗಳು ಸಲಹೆಗಾರರು ಇದ್ದರೆ ದೊರೆ/ಮಂತ್ರಿ ಒಳ್ಳೆಯ ಕೆಲಸ ಮಾಡಬಹುದು. ವೈಯಕ್ತಿಕವಾಗಿ ದೊಡ್ಡಪದವಿ, ಒಳ್ಳೇತÀನ, ಉದಾರತೆ, ಪ್ರಾಮಾಣಿಕತೆಗಳಿದ್ದೂ ದುಷ್ಟ ಅಧಿಕಾರಿಗಳ ಕೈಗೊಂಬೆಯಾದರೆ ಒಳ್ಳೆಯ ಕೆಲಸ ಮಾಡಲಾಗದೇ ಹೋಗಬಹುದು.

– ರಹಮತ್ ತರೀಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...