Homeಅಂಕಣಗಳುಇದು ಜಯಮಾಲಾ ಮತ್ತು ಹೆಬ್ಬಾಳ್ಕರ್ ನಡುವಿನ ಜಗಳ ಅಲ್ಲ......!!

ಇದು ಜಯಮಾಲಾ ಮತ್ತು ಹೆಬ್ಬಾಳ್ಕರ್ ನಡುವಿನ ಜಗಳ ಅಲ್ಲ……!!

- Advertisement -
- Advertisement -

ಬಹಳ ಹಿಂದೆ ನಟಿಯಾಗಿ ಮಾಧ್ಯಮಗಳಿಗೆ ಸುದ್ದಿಯಾಗುತ್ತಿದ್ದ ಜಯಮಾಲಾ ಈ ಬಾರಿ ಹೊಸ ಸರ್ಕಾರದ ರಚನೆಯಾದ ನಂತರ ಬಹಳ ಕಾಲದ ಮೇಲೆ ಮತ್ತೊಮ್ಮೆ ಸುದ್ದಿಯಾದರು. ಒಂದೇ ಪಕ್ಷದ ಇಬ್ಬರು ಮಹಿಳಾಮಣಿಗಳ ನಡುವಿನ ವಾಗ್ವಾದದ ರೂಪದಲ್ಲಿ ಮಾಧ್ಯಮಗಳು ಆ ವಿಚಾರವನ್ನು ಹೇಳಿದವು. ಹಿಂದಿನ ಅವಧಿಯಲ್ಲಿ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆಯಾಗಿದ್ದ ಈಗ ಬೆಳಗಾವಿಯಿಂದ ಶಾಸಕಿಯಾಗಿ ಗೆದ್ದಿರುವ ಲಕ್ಷ್ಮಿ ಹೆಬ್ಬಾಳ್ಕರ್, ಜಯಮಾಲಾ ಅವರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆಯಾಗಿ ಸಿಕ್ಕ ಉನ್ನತ ಪದವಿಯ ಬಗ್ಗೆ ಪ್ರತಿಕ್ರಿಯಿಸುತ್ತಾ “ಬಹುಶಃ ಅವರ ಸೇವೆ ಪಕ್ಷದ ವರಿಷ್ಠರಿಗೆ ಇಷ್ಟವಾಗಿರಬೇಕು. ಅದಕ್ಕಾಗಿ ಕೊಡುಗೆಯ ರೂಪದಲ್ಲಿ ಅವರಿಗೆ ಈ ಸ್ಥಾನ ದಕ್ಕಿರಬೇಕು” ಎಂದು ಬಹಳ ನಿಚ್ಚಳವಾಗಿಯೇ ಲಿಂಗಾಧಾರಿತ ಎಂದು ಕರೆಯಬಹುದಾದ ಹಾನಿಕಾರಕ ಹೇಳಿಕೆ ನೀಡಿದರು. ಇದಕ್ಕೆ ಉತ್ತರವಾಗಿ ಜಯಮಾಲಾ ಅವರೂ ಕೂಡಾ (ಚಾರಿತ್ರ್ಯದ ಪ್ರಶ್ನೆಯನ್ನು ಮಧ್ಯೆ ತರದೇ) “ಹೊಟ್ಟೆಕಿಚ್ಚಿಗೆ ಮದ್ದಿಲ್ಲ” ಎಂದು ಗಾದೆಯನ್ನು ಉಲ್ಲೇಖಿಸುತ್ತಾ ಸಾಕಷ್ಟು ಕಟುವಾಗಿಯೇ ಮಾತನಾಡಿದರು. ಇದು ಇನ್ನೂ ಒಂದಷ್ಟು ವಾದ ಪ್ರತಿವಾದಗಳಿಗೆ ದಾರಿಮಾಡಿತು. ಸಮಾಧಾನದ ಸಂಗತಿಯೆಂದರೆ ಇದೀಗ ಇಬ್ಬರೂ ಒಬ್ಬರನ್ನೊಬ್ಬರು ಸಮಾಧಾನಿಸುತ್ತಾ, ತಾವು ಪರಸ್ಪರರನ್ನು ಹೇಗೆ ಗೌರವಿಸುತ್ತೇವೆ ಎಂದು ಹೇಳಿರುವ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ಆದರೆ ಜಯಮಾಲಾ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಇಂತಹ ವಾಗ್ಯುದ್ಧ ಏಕೆ ನಡೆಯಿತು? ಇದು ಕೇವಲ ಹೊಟ್ಟೆಕಿಚ್ಚಿನ ಪ್ರಶ್ನೆ ಮಾತ್ರವೆ? ಲಕ್ಷ್ಮಿಯವರ ಆಪಾದನೆಯಿಂದ ಹುಟ್ಟಿದೀ ವಿವಾದವನ್ನು ಕೊನೆಗೊಳಿಸುತ್ತಾ ಜಯಮಾಲಾ ಅವರು ಹೇಳಿರುವ “ಎಲ್ಲ ಮಹಿಳಾ ಜನಪ್ರತಿನಿಧಿಗಳಿಗೂ ಮುಖ್ಯವಾದ ಖಾತೆಗಳು ಸಿಗಬೇಕು” ಎಂಬ ಆಶಯವನ್ನು ವಿಸ್ತರಿಸಿದರೆ ನಮಗೆ ಸಿಗುವ ಉತ್ತರಗಳೇನು? ಇಂತಹ ದೊಡ್ಡ ಪ್ರಶ್ನೆಗಳು ಈ ಸಣ್ಣ ವಿವಾದದ ಹಿಂದೆ ಅಡಗಿವೆ. ಆದರೆ, ಇವರಿಬ್ಬರಾಗಲೀ, ಇನ್ನಿತರ ಶಾಸಕಿಯರಾಗಲೀ ಅಥವಾ ಇತರೆ ಸಂದರ್ಭಗಳಲ್ಲಿ ತಮ್ಮ ವಾಚಾಳಿತನಕ್ಕೆ ಹೆಸರಾದ ಶೋಭಾ ಕರಂÀದ್ಲಾಜೆಯವರಂತಹ ಮಹಿಳಾ ರಾಜಕಾರಣಿಗಳಾಗಲೀ ಈ ಸಂದರ್ಭದಲ್ಲಿ ಎತ್ತಲೇಬೇಕಿದ್ದ ಬಹಳ ಮುಖ್ಯವಾಗಿದ್ದ ಸಂಗತಿಗಳನ್ನು ಎಲ್ಲಿಯೂ ಮಾತನಾಡುವುದಿಲ್ಲ. ಹಿಂದೆಯೂ ಮಾತನಾಡಿರಲಿಲ್ಲ!
ಹಾಗೆ ನೋಡಿದರೆ ಚುನಾವಣೆಗಳಲ್ಲಿ ಮಹಿಳಾ ಪ್ರಾತಿನಿಧ್ಯವು, ನಮ್ಮ ದೇಶದಲ್ಲಿ ಬಹಳ ಕಾಲದಿಂದ ಭಾಷಣ ಬರವಣಿಗೆಗಳಲ್ಲಿ ಚರ್ಚೆಗೆ ಬಂದಿರುವ, ಯಾವ ರಾಜಕೀಯ ಪಕ್ಷವೂ ಕೈಗೆತ್ತಿಕೊಳ್ಳಲು ಬಯಸದ, ಚಳುವಳಿಯಾಗಿ ಸಾಂಕೇತಿಕವಾಗಿ ಕಂಡರೂ ಈವರೆಗೆ ಎಂದೂ ಹರಳುಗಟ್ಟದೇ ಹೋದ ಒಂದು ಬಹುಮುಖ್ಯವಾದ ವಿಚಾರ!
ಭಾರತ ಮತ್ತು ಮಹಿಳಾ ರಾಜಕಾರಣಿಗಳು: ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ವಿಚಾರದಲ್ಲಿ ಭಾರತವು ಪ್ರಪಂಚದ 193 ದೇಶಗಳ ಪೈಕಿ 148ನೇ ಸ್ಥಾನದಲ್ಲಿದೆ ಎಂದು ಅಧ್ಯಯನಗಳು ಹೇಳುತ್ತವೆ. ಇರಾಕ್, ಸೊಮಾಲಿಯಾ, ಸೌದಿ ಅರೇಬಿಯಾದಂತಹ ಬಡ ಮತ್ತು ಅಶಾಂತ ಪ್ರದೇಶಗಳಲ್ಲಿರುವ ದೇಶಗಳಲ್ಲೂ ಮಹಿಳಾ ಪ್ರಾತಿನಿಧ್ಯ ಭಾರತಕ್ಕಿಂತ ಉತ್ತಮವಾಗಿದೆ. ಮಹಿಳಾ ಸಂಸತ್‍ಪಟುಗಳ ಸರಾಸರಿ ಜಾಗತಿಕ ಮಟ್ಟದಲ್ಲಿ 22 ಇದ್ದರೆ ಭಾರತದಲ್ಲಿ ಕಳೆದ ಚುನಾವಣೆಯಲ್ಲಿ ಇದು 11.8% ಇತ್ತು; ರಾಜ್ಯಸಭೆಯಲ್ಲಿ 11.1. ಅಂದರೆ ಭಾರತದ ಲೋಕಸಭೆಯಲ್ಲಿರುವ ಒಟ್ಟು 542 ಸ್ಥಾನಗಳಲ್ಲಿ (2014ರ ಅಂಕಿಸಂಖ್ಯೆಯ ಪ್ರಕಾರ) ಒಟ್ಟು ಮಹಿಳಾ ಸಂಸತ್‍ಸದಸ್ಯರ ಸಂಖ್ಯೆ ಕೇವಲ 64! (ನಂತರ ನಡೆದ ಉಪಚುನಾವಣೆಗಳ ಫಲಿತಾಂಶವನ್ನು ಸೇರಿಸಿಲ್ಲ).
ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ಅಷ್ಟೆಲ್ಲ ದೊಡ್ಡ ಘೋಷಣೆ ಯೋಜನೆಗಳನ್ನು ಹೊರಡಿಸುವ ಯಾವ ಪಕ್ಷವೂ ಚುನಾವಣೆಗಳ ಸಂದರ್ಭದಲ್ಲಿ ಮಹಿಳೆಯರನ್ನು ನಂಬುವುದಿಲ್ಲ; ಅಂದರೆ ಅವರು ಗೆಲ್ಲಬಲ್ಲ ಅಭ್ಯರ್ಥಿಗಳೆಂದು ರಾಜಕೀಯ ಪಕ್ಷಗಳು ಎಂದೂ ಭಾವಿಸಿಲ್ಲ. ಹಾಗಾಗಿ ಭಾರತದ ಅತಿ ಹಳೆಯ ಮತ್ತು ಈ ದೇಶದ ಮೊದಲ ಮಹಿಳಾ ಪ್ರಧಾನಿಯನ್ನು ನೀಡಿದ, ದೀರ್ಘಕಾಲ ಮಹಿಳೆಯರ ನಾಯಕತ್ವದಡಿಯಲ್ಲಿದ್ದ ಪಕ್ಷವಾದ ಕಾಂಗ್ರೆಸ್ ಕೇವಲ 60 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಿದರೆ, ಹಲವು ಬಗೆಯಲ್ಲಿ ‘ಮಾತಾ ರಾಜಕಾರಣ’ ಮಾಡುವ (ಗೋಮಾತೆಯಿಂದ ಹಿಡಿದು ಗಂಗಾಮಾತೆ, ಭಾರತಮಾತೆಯವರೆಗೆ) ದೊಡ್ಡ ಪಕ್ಷ ಬಿಜೆಪಿ ಕೇವಲ 38 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಇತರ ರಾಷ್ಟ್ರೀಯ ಪಕ್ಷಗಳಾದ ಬಿಎಸ್‍ಪಿ 21, ಭಾರತೀಯ ಕಮ್ಯುನಿಸ್ಟ್ ಪಕ್ಷ 6, ಮಾಕ್ರ್ಸ್‍ವಾದಿ ಕಮ್ಯುನಿಸ್ಟ್ ಪಕ್ಷ 11 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ.
ಮಹಿಳೆಯರೇ ಅತ್ಯುನ್ನತ ನಾಯಕಿಯರಾಗಿರುವ ಪಕ್ಷಗಳಲ್ಲೂ ಮಹಿಳಾ ಪ್ರಾತಿನಿಧ್ಯವೇನೂ ಅತ್ಯುನ್ನತ ಸ್ಥಿತಿಯಲ್ಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಒಟ್ಟು 293 ಸೀಟುಗಳಲ್ಲಿ 43, ಬಹುಜನ ಸಮಾಜ ಪಕ್ಷವು ಒಟ್ಟು 403 ಸೀಟುಗಳಲ್ಲಿ 21, ತಮಿಳುನಾಡಿನ ಎಐಎಡಿಎಂಕೆ ಪಕ್ಷವು ಒಟ್ಟು 234 ಸೀಟುಗಳಲ್ಲಿ 29 ಮಹಿಳಾ ಅಭ್ಯರ್ಥಿಗಳಿಗೆ ಮಾತ್ರವೇ ಟಿಕೆಟ್ ನೀಡಿವೆ.
ಇದೆಲ್ಲದರ ಒಟ್ಟರ್ಥವೇನು? ಪಕ್ಷದ ಘೋಷಣೆ ಏನೇ ಆಗಿರಲಿ, ಪಕ್ಷದ ನಾಯಕರು ಯಾರೇ ಆಗಿರಲಿ ಮಹಿಳೆಯರಿಗೆ ದಕ್ಕುವುದು ಮಾತ್ರ ಹಿಡಿಯಷ್ಟು ಸ್ಥಾನವಷ್ಟೇ ಎಂದೇ ತಾನೆ? ಆ ಸ್ಥಾನವನ್ನೂ ದಕ್ಕಿಸಿಕೊಳ್ಳುವವರು ಯಾರು? ಅವರಿಗೆ ಕುಟುಂಬ ರಾಜಕಾರಣದ ಇತಿಹಾಸ ಇರಬೇಕು; ಜೊತೆಗೆ ಸಾಕಷ್ಟು ಮುಖ್ಯವಾಹಿನಿ ರಾಜಕಾರಣಿಗಳ ಶೈಲಿಯಲ್ಲಿ ದುಡ್ಡು ಚೆಲ್ಲುವ ಸಾಮಥ್ರ್ಯ ಇರಬೇಕು; ಅಥವಾ ಹಾಗೆ ದುಡ್ಡು ಚೆಲ್ಲಬಲ್ಲ ಮತ್ತು ಲಾಬಿ ಮಾಡಬಲ್ಲ ‘ಗಾಡ್‍ಫಾದರ್’ಗಳಿರಬೇಕು.
ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯ-ಸ್ವಾತಂತ್ರ್ಯಪೂರ್ವದ ಕನಸು
ಜನಪ್ರತಿನಿಧಿಗಳಾಗಿ ತಾವೂ ಕೂಡಾ ಇರಬೇಕೆಂಬ ಹಕ್ಕೊತ್ತಾಯವನ್ನು ಭಾರತದಲ್ಲಿ ಮೊದಮೊದಲು ಮುಂದಿಟ್ಟಿದ್ದು 1920ರ ಸುಮಾರಿಗೆ. ಸ್ವಾತಂತ್ರ್ಯ ಚಳವಳಿಯ ಮೂಲಕ ಸಾಮಾಜಿಕ ವಲಯಕ್ಕೆ ಪ್ರವೇಶ ಪಡೆದಿದ್ದ ಮಹಿಳೆಯರು (ಬಹುಪಾಲು ಮೇಲ್ಜಾತಿ ಮೇಲ್ವರ್ಗಗಳ, ಒಂದಷ್ಟು ಶಿಕ್ಷಣವನ್ನೂ ಪಡೆದಿದ್ದ ಮಹಿಳೆಯರು), ದೇಶೀಯ ಪಕ್ಷ/ಸಂಘಟನೆಗಳು ಭಾರತೀಯ ಪ್ರತಿನಿಧಿತ್ವದ ಪ್ರಶ್ನೆಯನ್ನು ಎತ್ತಿದ ತಕ್ಷಣವೇ ಮಹಿಳಾ ಪ್ರತಿನಿಧಿತ್ವದ ಪ್ರಶ್ನೆಯನ್ನೂ ಎತ್ತಿದ್ದರು. ಕಮಲಾ ನೆಹರೂ, ಸರೋಜಿನಿ ನಾಯ್ಡು, ಮುತ್ತುಲಕ್ಷ್ಮಿ ರೆಡ್ಡಿ ಮೊದಲಾದ ಅನೇಕ ಮಹಿಳಾ ನಾಯಕಿಯರು ಇದಕ್ಕಾಗಿ ಆಂದೋಲನಗಳನ್ನು ನಡೆಸಿ ಬ್ರಿಟಿಷ್ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದರು. ಬ್ರಿಟೀಷ್ ಸರ್ಕಾರ ಈ ಬೇಡಿಕೆಯನ್ನು ಪರಿಶೀಲಿಸುವ ಭರವಸೆ ನೀಡಿತು. ವಿಪರ್ಯಾಸವೆಂದರೆ ರಾಷ್ಟ್ರೀಯ ಚಳವಳಿಯ ಭಾರತೀಯ ನಾಯಕರೇ ಇದನ್ನು ತೀವ್ರವಾಗಿ ವಿರೋಧಿಸಿದರು. ಸ್ವತಃ ಗಾಂಧೀಜಿ, ಈ ಎಲ್ಲ ಮಹಿಳೆಯರನ್ನು ಕರೆದು, ‘ಭಾರತದ ಒಳಿತು ಮತ್ತು ಸ್ವಾತಂತ್ರ್ಯ ಚಳವಳಿಯ ಐಕ್ಯತೆಯ’ ದೃಷ್ಟಿಯಿಂದ ಈ ಬೇಡಿಕೆಯಿಂದ ಹಿಂದೆ ಸರಿಯುವಂತೆ ಅವರ ಮನವೊಲಿಸಲು ನೋಡಿದರು. (‘ಆಧುನಿಕ ಭಾರತದಲ್ಲಿ ಮಹಿಳೆ’, ಲೇಖಕರು: ಜೆರಾಲ್ಡಿನ್ ಫೊಬ್ರ್ಸ್). ಆ ತಕ್ಷಣದಲ್ಲಿ ಈ ಬೇಡಿಕೆ ಸ್ವಲ್ಪ ಹಿನ್ನೆಲೆಗೆ ಸರಿದರೂ, ಆಗಾಗ ತೆರೆಸರಿಸಿ ಹೊರಬರುತ್ತಲೇ ಇತ್ತು. ಕೊನೆಗೆ ಮದ್ರಾಸ್ ಪ್ರಾಂತ್ಯ 1921ರಲ್ಲಿ ಮೊದಲ ಹಂತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕಲ್ಪಿಸಿತು. (ಮತದಾನಕ್ಕೆ ಆಗ ಇದ್ದ ಷರತ್ತುಗಳಾದ ಪದವೀಧರರಾಗಿರುವುದು ಅಥವಾ ಆಸ್ತಿಯ ಒಡೆತನ ಹೊಂದಿರುವುದನ್ನು ಮಹಿಳೆಯರಿಗೂ ಅನ್ವಯಿಸಿತ್ತು).
ಆದರೆ, ಭಾರತದಲ್ಲಿ ಬೇರೂರಿರುವ ಆಳವಾದ ಬ್ರಾಹ್ಮಣೀಯ ಪಿತೃಪ್ರಧಾನತೆಯು ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಕಲ್ಲುಮುಳ್ಳಿನ ಹಾದಿಯನ್ನಾಗಿ ಪರಿವರ್ತಿಸಿದೆ!! ಆದ್ದರಿಂದಲೇ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಇಲ್ಲಿಯವರೆಗೆ ಹೆಚ್ಚಬೇಕಿದ್ದ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಲೋಕಸಭೆಯಲ್ಲಿ ಕುಗ್ಗುತ್ತಿದೆ. ರಾಜ್ಯಗಳಲ್ಲೂ ಅಷ್ಟೇ; ಕರ್ನಾಟಕವನ್ನೇ ತೆಗೆದುಕೊಂಡರೂ ಈ ನೋಟ ನಿಚ್ಚಳವಾಗಿ ಕಾಣುತ್ತದೆ!
ಈ ಬಾರಿಯ ಕರ್ನಾಟಕದ ಚುನಾವಣಾ ರಾಜಕಾರಣದ ನಕ್ಷೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ವಿಶ್ಲೇಷಿಸಬೇಕು. ಈ ಬಾರಿ ಕರ್ನಾಟಕದ ಚುನಾವಣಾ ಕಣದಲ್ಲಿ ಒಟ್ಟು 219 ಮಹಿಳಾ ಸ್ಫರ್ಧಿಗಳಿದ್ದರು. ಇದರಲ್ಲಿ ಪ್ರಮುಖ ಪಕ್ಷಗಳ ಪಾಲು ಈ ರೀತಿ ಇದೆ. ಬಿಜೆಪಿ ತನ್ನ ಒಟ್ಟು 213 ಅಭ್ಯರ್ಥಿಗಳಲ್ಲಿ 6 ಮಂದಿ ಮಹಿಳೆಯರಿಗೆ ಅವಕಾಶ ನೀಡಿತ್ತು, ಕಾಂಗ್ರೆಸ್ ಒಟ್ಟು 218ರಲ್ಲಿ 16 ಮಂದಿಗೆ ಅವಕಾಶ ನೀಡಿದ್ದರೆ, ಜೆಡಿಎಸ್ 4 ಮಂದಿ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಉಳಿದ ಎಲ್ಲರೂ ಸ್ವತಂತ್ರವಾಗೋ ಇನ್ನಿತರ ಸಣ್ಣ ಪಕ್ಷಗಳಿಂದಲೋ ಸ್ಫರ್ಧಿಸಿದ್ದರು. ಇದರಲ್ಲಿ ಅಂತಿಮವಾಗಿ ಗೆದ್ದು ಶಾಸನ ಸಭೆಯ ಒಳಗೆ ಪ್ರವೇಶಿಸಿದವರ ಸಂಖ್ಯೆ ಕೇವಲ 7. ಕಾಂಗ್ರೆಸ್‍ನಿಂದ ಲಕ್ಷ್ಮಿ ಹೆಬ್ಬಾಳ್ಕರ್, ರೂಪಕಲಾ ಎಂ, ಕನೀಜ್ ಫಾತಿಮಾ ಹಾಗೂ ಡಾ.ಅಂಜಲಿ ನಿಂಬಾಳ್ಕರ್, ಸೌಮ್ಯರೆಡ್ಡಿ-ಈ ಐದು ಮಂದಿ ಗೆದ್ದರೆ, ಬಿಜೆಪಿಯಿಂದ ಗೆದ್ದರುವ ಶಶಿಕಲಾ ಜೊಲ್ಲೆ, ಪೂರ್ಣಿಮಾ ಕೆ ಹಾಗೂ ರೂಪಾಲಿ ಸಂತೋಷ್ ನಾಯ್ಕ್ ಸೇರಿದಂತೆ ಕೇವಲ 7 ಮಂದಿ ಮಾತ್ರ ಈ ಸವಾಲಿನ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. 4 ಕ್ಷೇತ್ರಗಳಲ್ಲಿ ಮಹಿಳಾ ಸ್ಫರ್ಧಿಗಳು ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 175 ಮಂದಿ ಮಹಿಳೆಯರು ಸ್ಫರ್ಧಿಸಿದ್ದರು ಮತ್ತು ಅವರಲ್ಲಿ ಗೆದ್ದವರು ಕೇವಲ 6 ಮಾತ್ರ.
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮಹಿಳಾ ಶಾಸಕರು ಆಯ್ಕೆಯಾಗಿದ್ದು 1962ರಲ್ಲಿ. 18 ಮಂದಿ ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ಆದರೆ ಅಲ್ಲಿಂದ ಮುಂದೆ ಈ ಸಂಖ್ಯೆಯಲ್ಲಿ ಹೆಚ್ಚಳವಾಗುವ ಬದಲು ನಿರಂತರವಾಗಿ ಇಳಿಕೆಯೇ ಆಗುತ್ತಾ ಬಂದಿರುವುದು ದುರಂತ.
ರಾಜಕೀಯ ಪಕ್ಷಗಳ ಮಹಿಳಾಪರ (ಅಥವಾ ಇನ್ನಿತರ) ಘೋಷಣೆಗಳ ಖೆಡ್ಡಾಗೆ ಬಿದ್ದು ತಮ್ಮದೇ ಹಿತಾಸಕ್ತಿಗೆ ವಿರುದ್ಧವಾದರೂ ಸರಿಯೇ, ಕುರುಡಾಗಿ ಮತಚಲಾಯಿಸುವ ಮತಬ್ಯಾಂಕುಗಳಾಗಿ ಮಹಿಳೆಯರು ಬೇಕು; ಅಧಿಕಾರವನ್ನು ಹಂಚಿಕೊಳ್ಳುವ ರಾಜಕಾರಣಿಗಳಾಗಿ ಬೇಡ!!! ಆದ್ದರಿಂದಲೇ, ಸಾಮಾನ್ಯ ಸಂದರ್ಭಗಳಲ್ಲಿ ಸ್ನೇಹದಿಂದಲೇ ಇದ್ದಿರಬಹುದಾದ ಜಯಮಾಲಾ ಮತ್ತು ಲಕ್ಷ್ಮಿಯವರಂತಹ ಮಹಿಳಾ ರಾಜಕಾರಣಿಗಳು ಸಿಕ್ಕ ಒಂದು ಅಪರೂಪದ ಅವಕಾಶಕ್ಕಾಗಿ ಸಾರ್ವಜನಿಕವಾಗಿ ಹಾನಿಕರ ಟೀಕೆಗಳಿಗಿಳಿಯಬೇಕಾಗುತ್ತದೆ; ಅದಕ್ಕಿಂತಲೂ ದುರಂತವೆಂದರೆ, ಅಧಿಕಾರಕ್ಕಾಗಿ ನಡೆಯುವ ಪೈಪೋಟಿಗಳಲ್ಲಿ ಪುರುಷ ರಾಜಕಾರಣಿಗಳ ಇಂತಹ ಚೇಷ್ಟೆಗಳು ‘ರಾಜಕೀಯ ಮುತ್ಸದ್ದಿತನ’ವೆಂಬ ವ್ಯಾಖ್ಯಾನಕ್ಕೊಳಪಟ್ಟರೆ, ಮಹಿಳಾ ರಾಜಕಾರಣಿಗಳು ಕಂಡವರ ಬಾಯಿಗೆ ಅಗಿಯುವ ಅಡಿಕೆಯಾಗುತ್ತಾರೆ. ಕರ್ನಾಟಕದ ಖ್ಯಾತ ಚಿಂತಕರೊಬ್ಬರು ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ತಾವು ಸೈದ್ಧಾಂತಿಕವಾಗಿ ವಿರೋಧಿಸುವ ಪಕ್ಷದ ಮಹಿಳಾ ರಾಜಕಾರಣಿಯೊಬ್ಬರನ್ನು ಬಹಳ ವ್ಯಂಗ್ಯವಾಗಿ ‘………….ಅವರ ಮುದ್ದಿನ ಗಿಣಿ’ ಎಂದೇ ಉಲ್ಲೇಖಿಸುತ್ತಾರೆ ಮತ್ತು ಸಭೆಯಲ್ಲಿ ನೆರೆದಿರುವ ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಾರೆ!! ಉಳಿದ ವಿಚಾರಗಳು ಬಂದಾಗ ಬಹಳ ಸಂವೇದನಾಶೀಲರಾಗಿ ವರ್ತಿಸುವ ಪ್ರಗತಿಪರರು ಸಹಾ ಮಹಿಳೆಯರ ವಿಚಾರ ಬಂದಾಗ ಹೀಗೆ ವರ್ತಿಸುವುದು ಹೊಸದೇನಲ್ಲ. ಆದರೆ ದುರಂತವಂತೂ ಹೌದು.

– ಮಲ್ಲಿಗೆ ಸಿರಿಮನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಕಾರ್ಯಕರ್ತನ ಬಳಿಕ 3,400ಕ್ಕೂ ಹೆಚ್ಚು SIR ಎನ್ಯುಮರೇಷನ್‌ ಫಾರಂಗಳು ಪತ್ತೆ!-ವರದಿ

ಮತದಾರರ ವಿವರಗಳಿರುವ 3,400ಕ್ಕೂ ಹೆಚ್ಚು ಎಸ್‌ಐಆರ್ ಎನ್ಯುಮರೇಷನ್ ಫಾರಂಗಳು ಸ್ಥಳೀಯ ಬಿಜೆಪಿ ಕಾರ್ಯಕರ್ತನ ಬಳಿ ಪತ್ತೆಯಾದ ಬಳಿಕ, ನವಿ ಮುಂಬೈನಲ್ಲಿ ಐವರು ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಗುರುವಾರ (ಆ.27)...

ಹಾವೇರಿ| ಆಹಾರ ಸಂಸ್ಕರಣಾ ಘಟಕಗಳ ಮೇಲೆ ಅಧಿಕಾರಿಗಳ ದಾಳಿ; 1,033 ಕೆಜಿ ಕಲುಷಿತ ಆಹಾರ ಪದಾರ್ಥ ವಶಕ್ಕೆ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಹಶೀಲ್ದಾರ್ ನೇತೃತ್ವದ ತಂಡ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ರಾಣೆಬೆನ್ನೂರು ತಾಲೂಕಿನ ವಿವಿಧ ಆಹಾರ ಸಂಸ್ಕರಣಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿ, 1,033 ಕೆಜಿ ಕಲುಷಿತ ಆಹಾರ...

ಹಾಸನ: ಎಡಪಂಥೀಯರು ಮೋಸ್ಟ್ ಡೇಂಜರಸ್, ಕಳ್ಳರು! ನಿಶ್ಚಲಾನಂದನಾಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಗೆ CPI(M) ಖಂಡನೆ

ಹಾಸನ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನ ಜಿಲ್ಲಾ ಶಾಖೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಅರ್ಥಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 'ವಿಶ್ವ...

ನೇಪಾಳ ಪ್ರವಾಹ : 620 ದಾಟಿದ ಮೃತರ ಸಂಖ್ಯೆ; 3 ಸಾವಿರದಷ್ಟು ಜನರು ಇನ್ನೂ ನಾಪತ್ತೆ-ವರದಿ

ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಕನಿಷ್ಠ 616 ಜನರು ಸಾವನ್ನಪ್ಪಿದ್ದಾರೆ ಎಂದು ನೇಪಾಳ ಪೊಲೀಸರು ಶನಿವಾರ (ಆ.29) ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಶುಕ್ರವಾರ (ಆ.28) ಪೊಲೀಸರು...

ನಾಗೇಂದ್ರ ರಾಜೀನಾಮೆ: ಬಡಿಗೆ ಕೊಟ್ಟು ಹೊಡೆಸಿಕೊಂಡಂತಾಯ್ತು ಕಾಂಗ್ರೆಸ್ ಪರಿಸ್ಥಿತಿ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದಕ್ಕಿದ 136 ಸ್ಥಾನಗಳ ಅಭೂತಪೂರ್ವ ಬಹುಮತಕ್ಕೆ ಪ್ರಮುಖ ಕಾರಣ '40% ಸರ್ಕಾರ' ಮತ್ತು 'ಪೇ ಸಿಎಂ' ಅಭಿಯಾನಗಳು. ಬಿಜೆಪಿಯ ಭ್ರಷ್ಟಾಚಾರವನ್ನು ಅಸ್ತ್ರವಾಗಿಸಿಕೊಂಡು ಆಡಳಿತ ಹಿಡಿದ ಕಾಂಗ್ರೆಸ್‌ಗೆ,...

SIR ಕುತಂತ್ರ: 43.81 ಲಕ್ಷ ಜನರ ಮನೆ ಬಾಗಿಲಿಗೆ ನೋಟಿಸ್‌ ಬಿಸಿ, ಪೌರತ್ವ ಸಾಬೀತುಪಡಿಸಲು ನಾಗರಿಕರು ಅಲೆಯಬೇಕೇ ?

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಇದೀಗ ಲಕ್ಷಾಂತರ ನಾಗರಿಕರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ.ಚುನಾವಣಾ ಆಯೋಗವು ರಾಜ್ಯದಲ್ಲಿದ್ದ ಒಟ್ಟು 5.54 ಕೋಟಿ ಮತದಾರರ ಪೈಕಿ ಸುಮಾರು 1.08...

ದಿಮಾಗಿ ನಕ್ಸಲ್: ರೈತ, ವಿದ್ಯಾರ್ಥಿ ಹೋರಾಟಗಳೂ ದೇಶದ್ರೋಹವೇ? RSS ಪತ್ರಿಕೆಯ ವಿವಾದಾತ್ಮಕ ಪ್ರತಿಪಾದನೆ

ಶಿಕ್ಷಣ, ಆರೋಗ್ಯ ಮತ್ತು ಒಟ್ಟಾರೆ ಅಭಿವೃದ್ಧಿ ಮಾದರಿಗೆ ತೀವ್ರ ಸ್ವರೂಪದ ಸುಧಾರಣೆಗಳ ಅಗತ್ಯವಿದೆ. ಆದರೆ ಈ ಸಮಸ್ಯೆಗಳು ಕಳೆದ ಹನ್ನೆರಡು ವರ್ಷಗಳಲ್ಲಿ ಹುಟ್ಟಿಕೊಂಡಿದ್ದಲ್ಲ ಅಥವಾ ಬಿಜೆಪಿ ಆಡಳಿತವಿರುವ ರಾಜ್ಯಗಳಿಗಷ್ಟೇ ಸೀಮಿತವಾಗಿಲ್ಲ. ಹಿಂದುತ್ವವನ್ನು ದಮನಕಾರಿ...

ಅಹಮದಾಬಾದ್‌ನಲ್ಲಿ ಪುಸ್ತಕ ಓದುಗರ ಮೇಲೆ ಭಜರಂಗದಳ ದೌರ್ಜನ್ಯ: ಮಲಾಲಾ, ಆನ್ ಫ್ರಾಂಕ್ ಕೃತಿಗಳಿಗೆ ವಿರೋಧಿಸಿ ಬೆದರಿಕೆ!

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಾಹಿತ್ಯಾಭಿಮಾನಿಗಳ ಮೇಲೆ ಭಜರಂಗದಳ ಕಾರ್ಯಕರ್ತರು ಭೀಕರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ನಗರದ ಸಾರ್ವಜನಿಕ ಉದ್ಯಾನವನವೊಂದರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ಜೈ ಹಾಗೂ ವಿಶ್ವಪ್ರಸಿದ್ಧ ಲೇಖಕಿ ಆನ್...

ಉಮರ್ ಖಾಲಿದ್ – ಶಾರ್ಜೀಲ್ ಇಮಾಮ್ ಜಾಮೀನಿಗೆ ದೆಹಲಿ ಪೊಲೀಸರ ವಿರೋಧ

2020ರ ಈಶಾನ್ಯ ದೆಹಲಿ ಕೋಮು ಗಲಭೆಯ ಹಿಂದಿನ ಪ್ರಮುಖ ಸಂಚುಕೋರರು ಎಂದು ಆರೋಪಿಸಿರುವ ದೆಹಲಿ ಪೊಲೀಸರು, ಕಾರಾಗೃಹದಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ದೆಹಲಿ...

‘ಆರ್‌ಎಸ್‌ಎಸ್-ಬಿಜೆಪಿಯ ರಕ್ತನಾಳಗಳಲ್ಲಿ ತಾರತಮ್ಯ ಹರಿಯುತ್ತಿದೆ’: ಖರ್ಗೆ ರ್ಯಾಲಿ ಸ್ಥಳದ ‘ಶುದ್ಧೀಕರಣ’ ಸಮರ್ಥಿಸಿಕೊಂಡ ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷನ ವಿರುದ್ಧ ಕಾಂಗ್ರೆಸ್ ಕಿಡಿ

ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಯ ನಂತರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಸ್ಥಳೀಯ ‘ಶುದ್ಧೀಕರಣ’ ಸಮಾರಂಭದ ಸುತ್ತಲಿನ ರಾಜಕೀಯ ವಿವಾದವು ತೀವ್ರ ಸ್ವರೂಪ...