Homeಅಂಕಣಗಳುಶೋಷಿತ ಸಮುದಾಯಗಳ ಪರ ರಾಜಕೀಯ ಕಥನಕ್ಕೆ ತಿಲಾಂಜಲಿ?

ಶೋಷಿತ ಸಮುದಾಯಗಳ ಪರ ರಾಜಕೀಯ ಕಥನಕ್ಕೆ ತಿಲಾಂಜಲಿ?

- Advertisement -
- Advertisement -

ಐದು ರಾಜ್ಯಗಳ ಪೈಕಿ, ಮೂರರಲ್ಲಿ ಗೆಲುವನ್ನು ಸಾಧಿಸಿದ ನಂತರ ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್‍ಗಾಂಧಿಯವರು ಪತ್ರಕರ್ತರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಗಮನಿಸಬಹುದಾದ ಕೆಲವು ಅಂಶಗಳಿದ್ದವು. ಅದರಲ್ಲಿ ಒಂದು ಅಂಶವನ್ನು ಈ ಸದ್ಯ ದೇಶಾದ್ಯಂತ ಗಟ್ಟಿಗೊಳ್ಳುತ್ತಿರುವ ಕಥನವೊಂದರ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅದೇನೆಂದರೆ, ಸುಮಾರು 28 ನಿಮಿಷಗಳ ಆ ಪತ್ರಿಕಾಗೋಷ್ಠಿಯಲ್ಲಿ ಒಮ್ಮೆಯೂ ರಾಹುಲ್ ಶೋಷಿತ ಸಮುದಾಯಗಳನ್ನು ಉಲ್ಲೇಖಿಸಲೇ ಇಲ್ಲ. ದೇಶದಲ್ಲಿ ಬಿಕ್ಕಟ್ಟಿನಲ್ಲಿರುವ ರೈತರು ಮತ್ತು ನಿರುದ್ಯೋಗಿ ಯುವಜನರ ಪರವಾಗಿ ಅವರು ವ್ಯಕ್ತಪಡಿಸಿದ ಕಾಳಜಿ ಸರಿಯಾಗಿಯೇ ಇತ್ತು. ಆದರೆ, ವಿವಿಧ ರೀತಿಯ ದಾಳಿಗಳಿಗೆ ಗುರಿಯಾಗಿರುವ ಮುಸ್ಲಿಂ ಸಮುದಾಯವನ್ನಾಗಲೀ, ದಲಿತ ಸಮುದಾಯವನ್ನಾಗಲೀ ಅವರು ಹೆಸರಿಸಲಿಲ್ಲ. ಕನಿಷ್ಠ, ತಮ್ಮ ಪಕ್ಷವು ಜಾತ್ಯಾತೀತತೆಗೆ ಹಾಗೂ ದಮನಿತ ಸಮುದಾಯಗಳ ಏಳಿಗೆಗೆ ಬದ್ಧವಾಗಿರುತ್ತದೆಂಬ ಮಾತುಗಳನ್ನು ಅವರು ತೇಲಿಸಿದಂತೆಯೂ ಆಡಲಿಲ್ಲ.
ಇದು ಈ ನಿರ್ದಿಷ್ಟ ಪತ್ರಿಕಾಗೋಷ್ಠಿಯಲ್ಲಿ ಮಾತ್ರ ನಡೆದ ಒಂದು ಪ್ರತ್ಯೇಕಿತ ಬೆಳವಣಿಗೆಯಾಗಿದ್ದರೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ, ಕರ್ನಾಟಕದ ಚುನಾವಣೆಯ ಹೊತ್ತಿಗೆ ಶುರುವಾದ ಭಿನ್ನ ಕಥನದ ಸ್ವರೂಪವು ಈ ಐದು ರಾಜ್ಯಗಳ ಚುನಾವಣೆಯ ಹೊತ್ತಿಗೆ ಗಟ್ಟಿಕೊಂಡಿತ್ತು. ಕರ್ನಾಟಕದಲ್ಲಾದರೂ, ಸಿದ್ದರಾಮಯ್ಯನವರು ಅಹಿಂದ ಸಮುದಾಯಗಳಿಗೆ ಒಳಿತನ್ನು ಮಾಡಲು ಪ್ರಯತ್ನಿಸಿದ ಧುರೀಣರಾಗಿ ರಾಹುಲ್ ಜೊತೆಯಲ್ಲಿಯೇ ಇದ್ದರು. ಆದರೆ ಉಳಿದ ರಾಜ್ಯಗಳಲ್ಲಿ ಬಲಾಢ್ಯ ಜಾತಿಗಳಿಗೆ ಸೇರಿದವರೇ ಹೆಚ್ಚು ಮುಂಚೂಣಿಯಲ್ಲಿದ್ದ ಪ್ರಚಾರದಲ್ಲಿ ಮತ್ತೆ ಮತ್ತೆ ಕೇಳಿಬಂದದ್ದು ರೈತರು ಮತ್ತು ಯುವಜನರು. ರಾಫೇಲ್ ಹಗರಣವನ್ನು ವಿವರಿಸಬೇಕಾದಾಗಲೂ ರಾಹುಲ್ ಗಾಂಧಿ ಹೇಳುತ್ತಿರುವುದೇನೆಂದರೆ, ಅದೆಷ್ಟೋ ಸಾವಿರ ಕೋಟಿ ಸಾಲದಲ್ಲಿರುವ ಒಬ್ಬ ವ್ಯಕ್ತಿಗೆ ನೀವು ಇನ್ನೆಷ್ಟೋ ಸಾವಿರ ಕೋಟಿಗಳ ಡೀಲ್‍ಅನ್ನು ಉಡುಗೊರೆಯಾಗಿ ನೀಡಿದ್ದೀರಿ. ಅದೇ ಹಣವನ್ನು ನೀವು ರೈತರ ಸಾಲಮನ್ನಾಕ್ಕೆ ಬಳಸಬಹುದಿತ್ತಲ್ಲವೇ? ಎಂದು.
ರೈತರು ಮತ್ತು ಯುವಜನರು ಎಂದಾಗ ಸೀಮಿತ ಐಡೆಂಟಿಟಿಗಳಾಚೆ ಜನರನ್ನು ಒಗ್ಗೂಡಿಸುವ ಸಾಮುದಾಯಿಕ ಪರಿಭಾಷೆಯೆಂದು ನಾವು ಸಕಾರಾತ್ಮಕವಾಗಿಯೂ ನೋಡಬಹುದು; ಬಹುತೇಕ ಭೂಮಿ ಹೊಂದಿದ ಬಲಾಢ್ಯ ಸಮುದಾಯಗಳನ್ನಷ್ಟೇ ‘ರೈತರು’ ಎಂಬ ಪದ ಸಾಮಾನ್ಯವಾಗಿ ಬಿಂಬಿಸುತ್ತದೆಂದೂ ಭಾವಿಸಬಹುದು. ದೆಹಲಿಯಲ್ಲಿ ಬೃಹತ್ ರೈತ ಪ್ರತಿಭಟನೆ ಆಯೋಜಿಸಿದ್ದ ‘ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ’ಯು ಸ್ಪಷ್ಟವಾಗಿ ‘ನಾವು ರೈತರು ಎಂದಾಗ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭೂಮಿಯನ್ನು, ಕೃಷಿಯನ್ನು ನಂಬಿ ಬದುಕುತ್ತಿರುವ ಎಲ್ಲಾ ಗ್ರಾಮೀಣ ಸಮುದಾಯ’ ಎಂದೇ ವ್ಯಾಖ್ಯಾನಿಸುತ್ತೇವೆಂದು ಹೇಳಿದೆ. ಜೊತೆಗೆ ಎರಡು ಖಾಸಗಿ ಮಸೂದೆಗಳನ್ನು ತಯಾರಿಸುವಾಗಲೂ, ಈ ಎಲ್ಲಾ ಸಮುದಾಯಗಳಿಗೂ ಅನುಕೂಲವಾಗುವಂತೆಯೇ ರೂಪಿಸಿದೆ. ಆದರೂ ಇಂದು ಹೊಸ ಸರ್ಕಾರಗಳು ಸಾಲಮನ್ನಾ ಘೋಷಣೆಯನ್ನು ಮಾಡುವಾಗ, ಅದು ಭೂಮಿಯುಳ್ಳ ರೈತರ ಸಾಲಮನ್ನಾ ಮಾತ್ರ ಆಗುತ್ತಿದೆ. ಹಲವು ಸಾರಿ ದೊಡ್ಡ ಭೂಮಾಲೀಕರಿಗೆ ಮಾತ್ರ ಈ ಸಾಲಮನ್ನಾ ಅನುಕೂಲ ಮಾಡಿಕೊಡುವ ಸಾಧ್ಯತೆಯೇ ಹೆಚ್ಚು.
ಅಂದರೆ, ಮೇಲ್ಜಾತಿಗಳ ಧ್ರುವೀಕರಣಕ್ಕೆ ಕಾರಣವಾಗಿರುವ ಮತ್ತು ಬಹುಸಂಖ್ಯಾತ ಮತೋನ್ಮಾದವನ್ನು ಹೆಚ್ಚಿಸಿ ಧ್ರುವೀಕರಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಹಾಗೂ ಅದರ ಪರಿವಾರಕ್ಕೆದುರು, ಶೋಷಿತ ಸಮುದಾಯಗಳೆಲ್ಲದರ ಧ್ರುವೀಕರಿಸುವ ಮತ್ತು ಮೇಲ್ಜಾತಿಗಳಲ್ಲೂ ಒಂದಷ್ಟು ಭಾಗವನ್ನು ಸೆಳೆಯುವ ಸಾಧ್ಯತೆ ಇಲ್ಲವೆಂದು ಕಾಂಗ್ರೆಸ್ ಭಾವಿಸಿದಂತಿದೆ. ಇಂದು ಬಿಜೆಪಿಯನ್ನು ಸೋಲಿಸಲು ಹೀಗೆ ಮಾಡಿದರೇ ಸರಿ ಎಂದು ರಾಹುಲ್‍ಗಾಂಧಿ ಮುಂದಿಡುತ್ತಿರುವ ಕಥನವನ್ನು ರೂಪಿಸುತ್ತಿರುವ ತಂಡವು ನಿಶ್ಚಯಿಸಿದಂತಿದೆ. ಇದೇ ರೀತಿ ರಾಹುಲ್‍ಗಾಂಧಿಯ ಹಿಂದೂ ದೈವ ಭಕ್ತಿ ಮತ್ತು ಬ್ರಾಹ್ಮಣ ಐಡೆಂಟಿಟಿಯನ್ನೂ ಮುನ್ನೆಲೆಗೆ ತರುವ ಕೆಲಸ ಪ್ರಜ್ಞಾಪೂರ್ವಕವಾಗಿಯೇ ನಡೆಯುತ್ತಿದೆ.
ರಾಹುಲ್‍ಗಾಂಧಿ ಸರಿಯಾಗಿಯೇ ಮಾಡುತ್ತಿದ್ದಾರೆಂದು ಪ್ರತಿಪಾದಿಸುವ ನಿಲುವನ್ನು ಕ್ವಿಂಟ್ ಮತ್ತು ಪ್ರಿಂಟ್ ವೆಬ್‍ಪೋರ್ಟಲ್ ಸಂಪಾದಕರು ತೆಗೆದುಕೊಂಡಿದ್ದರೆ, ವೈರ್ ವೆಬ್‍ಪೋರ್ಟಲ್‍ನಲ್ಲೂ ಈ ನಿಲುವನ್ನು ಮುಂದಿಡುವ ಲೇಖನವು (Why Rahul Gandhi Is Right to Pit Hinduism Against Hindutva) ಪ್ರಕಟವಾಗಿದೆ. ಅಂದರೆ, ಈ ರೀತಿ ಭಾವಿಸುವ ದೊಡ್ಡ ಗುಂಪೇ ಇದೆಯೆಂದಾಯಿತು. ಇಂದಿನ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಸೋಲಿಸುವುದು ಅತ್ಯಂತ ಪ್ರಮುಖವಾದ ರಾಷ್ಟ್ರೀಯ ಒಳಿತಿನ ಕೆಲಸವಾಗಿರುವುದರಿಂದ, ಇದೆಲ್ಲವನ್ನೂ ಸಹಜ, ಅನಿವಾರ್ಯ ಎಂದು ತಳ್ಳಿ ಹಾಕಲೂಬಹುದು. ಬಿಜೆಪಿ ಸೋತಾಗ ಹೇಗೂ ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯ ಇಂದಿನ ಮಟ್ಟಕ್ಕೆ ಸಂಕಷ್ಟಕ್ಕೀಡಾಗದಿರರು. ಹಾಗಾಗಿ ಬಿಜೆಪಿ ಸೋಲುವುದರಲ್ಲೇ ಅವರ ಹಿತವೂ ಅಡಗಿದೆ ಎಂದೂ ಹೇಳಿಬಿಡಬಹುದು.
ಆದರೆ, ಇದು ಅಷ್ಟು ಸರಳ ಸಂಗತಿಯಲ್ಲ. ಸಾರ್ವಜನಿಕ ಡಿಸ್‍ಕೋರ್ಸ್‍ನಿಂದಲೇ ದೇಶದ ಬಹುಸಂಖ್ಯಾತ ಶೋಷಿತ ಜನಸಮುದಾಯಗಳ ಪರವಾದ ಕಥನವು ಮರೆಯಾಗುವುದು ದೀರ್ಘಕಾಲಿಕ ನಕಾರಾತ್ಮಕ ಪರಿಣಾಮವನ್ನೇ ಉಂಟು ಮಾಡುತ್ತದೆ. ತಾನೇ ಕಟ್ಟಿಕೊಂಡು ಬಂದ ಕಥನವನ್ನು ತೃಪ್ತಿಪಡಿಸುವ ಕ್ರಮಗಳನ್ನೇ ಆಯ್ಕೆಯಾಗಿ ಬಂದ ಸರ್ಕಾರವು ತೆಗೆದುಕೊಳ್ಳುತ್ತದೆ. ಶೋಷಿತ ಸಮುದಾಯಗಳ ಸುಖ-ದುಃಖಗಳು ಅಪ್ರಸ್ತುತವಾಗುತ್ತಾ ಹೋಗುತ್ತವೆ. ಈಗಾಗಲೇ ಮುಸ್ಲಿಂ ಸಮುದಾಯವು ಹಕ್ಕನ್ನು ಕೇಳುವುದಕ್ಕಿಂತ ಹೆಚ್ಚು ಶಾಂತಿಯನ್ನು ಮಾತ್ರ ಬಯಸುವ ಕಡೆಗೆ ತಳ್ಳಲ್ಪಟ್ಟಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳನ್ನು ಕೇಳಲು ಶ್ರಮಹಾಕುವ ಗೋಜಿಗೇ ‘ಜಾತ್ಯಾತೀತ ಕೂಟ’ದ ನಾಯಕರು ಹೋಗಲಿಲ್ಲ. ಕನಿಷ್ಠ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆಯಾದರೂ ಅಲ್ಪಸಂಖ್ಯಾತರ ಓಟಿನ ಲಾಭಕ್ಕಾಗಿ ಪ್ರಯತ್ನಿಸುವ, ಅಗತ್ಯವೂ ಇಲ್ಲದಂತೆ ಹೊಸ ಮೈತ್ರಿಯು ನೋಡಿಕೊಂಡಿತು.
ಹೇಗೂ ಈ ಸಮುದಾಯಗಳಿಗೆ ನಮಗೆ ಮತ ಹಾಕುವುದಲ್ಲದೇ ಬೇರೆ ದಿಕ್ಕಿಲ್ಲ ಎಂಬ ಅಭಿಪ್ರಾಯವು ಬಲವಾಗಿರುವುದರಿಂದಲೇ ಇಂತಹ ಬೆಳವಣಿಗೆಗಳು ನಡೆಯುತ್ತವೆ. ಮೊದಲು ಎನ್‍ಡಿದಲ್ಲಿದ್ದ ಮಮತಾ ಬ್ಯಾನರ್ಜಿ ಹೆಚ್ಚೆಚ್ಚು ಮೋದಿ ವಿರೋಧಿ ಆಗುತ್ತಾ ಬಂದಿದ್ದು ಮುಸ್ಲಿಂ ಮತಗಳ ಕಾರಣಕ್ಕೇ ಎಂಬುದರಲ್ಲಿ ಸಂಶಯವೇನೂ ಇಲ್ಲ. ಈಗೊಂದು ವೇಳೆ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳ ನಡುವೆ ಮಹಾಘಟಬಂಧನ್ ಏರ್ಪಟ್ಟರೆ, ಉಳಿಯುವ ಪೈಪೋಟಿ ‘ಹಿಂದೂ ಮತ’ಗಳನ್ನು ಪಡೆಯುವುದಕ್ಕೆ ಮಾತ್ರವಾಗಿರುತ್ತದೆ.
ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸುವವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಯಾವುದೇ ಕ್ಷೇತ್ರದಲ್ಲೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಬಹುಸಂಖ್ಯಾತರಾಗಿರದಿರುವುದರಿಂದ, ಹೆಚ್ಚಿನ ಪೈಪೋಟಿ ಮೇಲ್ಜಾತಿಗಳನ್ನು ತೃಪ್ತಿಪಡಿಸುವುದಕ್ಕೇ ಆಗಿರುತ್ತದೆ. ಹೆಚ್ಚು ಕಡಿಮೆ ಇದೇ ಪರಿಸ್ಥಿತಿ, ‘ಅನಿವಾರ್ಯ ಓಟ್‍ಬ್ಯಾಂಕ್’ ಆಗಿ ಸೃಷ್ಟಿಯಾದ ಸಮುದಾಯಗಳದ್ದು ಆಗುತ್ತಿದೆ.
ಇದಕ್ಕೆ ಕೇವಲ ರಾಹುಲ್‍ಗಾಂಧಿ ಅಥವಾ ಕಾಂಗ್ರೆಸ್ ಪಕ್ಷವನ್ನು ದೂರುವ ಹಾಗಿಲ್ಲ. ಬಹುಸಂಖ್ಯಾತರಾಗಿದ್ದರೂ, ರಾಜಕೀಯ ಧ್ರುವೀಕರಣವನ್ನು ಸಾಧಿಸಿಕೊಳ್ಳಲಾಗದ ಅಹಿಂದ ಸಮಷ್ಟಿಯೂ ತನ್ನೊಳಗೆ ಆಲೋಚಿಸಿಕೊಳ್ಳಬೇಕಾಗುತ್ತದೆ. ಅಂತಹದೊಂದು ಧ್ರುವೀಕರಣ ಸಾಧ್ಯವಾಗದಂತೆ ಅತ್ಯಂತ ಶೋಷಿತ ಸಮುದಾಯಗಳನ್ನು ಒಡೆಯಲು ನಡೆಯುವ ಪ್ರಯತ್ನಗಳಿಗೆ ಇಂಬುಕೊಡುವ ಈ ಸಮುದಾಯಗಳ ‘ಪ್ರಜ್ಞಾವಂತ’ರೂ ಉತ್ತರ ಕೊಡಬೇಕಾಗುತ್ತದೆ. ಅದೇನೇ ಇದ್ದರೂ, ಹೆಚ್ಚೆಚ್ಚು ಜಾತಿ, ಧರ್ಮಗಳ ಅಸ್ಮಿತೆಗಳನ್ನು ಆಧರಿಸಿ ಮಾಡುವ ರಾಜಕಾರಣವು ಇಂತಹ ಅಪಾಯಗಳಿಗೆ ಎದುರಾಗುವ ಸಾಧ್ಯತೆ ಇದ್ದೇ ಇರುತ್ತದೆ. ಅಂತಹ ಅಪಾಯಗಳನ್ನು ಎದುರಿಸುವ ಮತ್ತು ಶೋಷಿತ ಸಮುದಾಯಗಳ ಹಿತವನ್ನೂ ಕಾಪಾಡುವ ರಾಜಕೀಯ ಸಮೀಕರಣವನ್ನು ಇನ್ನೂ ಫೈಸಲ್ ಮಾಡಿಕೊಳ್ಳಲಾಗದ ಸಮಸ್ಯೆಯೂ ಒಂದು ಕಾರಣವಾಗಿದೆ.
ಆ ಜವಾಬ್ದಾರಿ ರಾಹುಲ್‍ಗಾಂಧಿಯದ್ದೇ ಎಂದು ಯಾರಾದರೂ ಭಾವಿಸಿದರೆ ಅದಕ್ಕಿಂತ ಮೂರ್ಖರಿರಲು ಸಾಧ್ಯವಿಲ್ಲ. ಈ ನಿರ್ದಿಷ್ಟ ಸಂದರ್ಭದಲ್ಲಿ ಮೋದಿಗೆದುರಾಗಿ ಆತ ಪರವಾಗಿಲ್ಲ ಎಂದು ಕಾಣುತ್ತಿರಬಹುದು. ಆದರೆ, ಭಾರತದ ಸಂಸದೀಯ ರಾಜಕಾರಣದಲ್ಲಿ, ನಮ್ಮ ರಾಜಕೀಯಾರ್ಥಿಕತೆ ಹಾಗೂ ಚಳವಳಿಗಳು ರೂಪಿಸಿದ ಶೋಷಿತ ಸಮುದಾಯಗಳ ವೋಟ್‍ಬ್ಯಾಂಕ್‍ಅನ್ನು ಅಡ್ರೆಸ್ ಮಾಡಲು ರಾಜಕೀಯ ಪಕ್ಷಗಳು ಜನಪರವಾಗಿದೆಯೇ ಹೊರತು ತಮ್ಮಂತೆ ತಾವೇ ಜನಮುಖಿಯಾಗಿರುವುದು ಸಾಧ್ಯವಿಲ್ಲ. ಹಾಗಾಗಿ ಸಮಾಜದಲ್ಲಿ ರೂಪಿತಗೊಳ್ಳಬೇಕಾದ ಶೋಷಿತ ಸಮುದಾಯಗಳ ರಾಜಕೀಯ ಒತ್ತಾಸೆಯು, ರಾಜಕೀಯ ಪಕ್ಷಗಳಿಂದ ಪೂರಕವಾದ ರಾಜಕೀಯ ಕಥನವನ್ನು ರೂಪಿಸುತ್ತದೆಯೇ ಹೊರತು ಅದರ ವಿರುದ್ಧ ದಿಕ್ಕಿನಲ್ಲಿ ಅಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...