Homeಕರ್ನಾಟಕಅನಂತ್ಮಾಣಿ v/s ಸೂಲಿಬೆಲೆ, ಇದು ಟಿಕೆಟ್ ಕೈತಪ್ಪಿದ ಕದನ

ಅನಂತ್ಮಾಣಿ v/s ಸೂಲಿಬೆಲೆ, ಇದು ಟಿಕೆಟ್ ಕೈತಪ್ಪಿದ ಕದನ

- Advertisement -
- Advertisement -

| ಶುದ್ಧೋದನ |

ಉತ್ತರಕನ್ನಡದ ಸೋಶಿಯಲ್ ಮೀಡಿಯಾದಲ್ಲೀಗ ಕೇಸರಿ ಕುಮಾರರಿಬ್ಬರ ಗುದಮುರಗಿ ಜೋರು ಸದ್ದು ಮಾಡುತ್ತಿದೆ. ಬಿಜೆಪಿ ಸಂಸದ ಅನಂತ್‍ಕುಮಾರ್ ಹೆಗ್ಡೆ ಮತ್ತು ಕೇಸರಿ ಭಾಷಣ`ಕೋರ’ ಚಕ್ರವರ್ತಿ ಸೂಲಿಬೆಲೆ ಒಬ್ಬರಿಗೊಬ್ಬರು ಕೆಸರು ಎರಚಿಕೊಳ್ಳುತ್ತಿರೋದು ರೋಚಕವಿದೆ. ಹಾಗೆ ನೋಡಿದರೆ ಮೊನ್ನೆ ಮುಗಿದ ಇಲೆಕ್ಷನ್ ಸಂದರ್ಭದಲ್ಲೇ ಮಾಣಿಗೆ ಟಿಕೆಟ್ ಕೊಡಬಾರದೆಂದು ದೊಡ್ಡ ಕೂಗೆದ್ದಿತ್ತು. ಆತನ ಬದಲಿಗೆ ನಮೋ ಬ್ರಿಗೇಡ್‍ನ ಪ್ರೊಪ್ರೇಟರ್ ಚಕ್ರವರ್ತಿ ಸೂಲಿಬೆಲೆ ಹೆಸರು ತೇಲಿ ಬಂದಿತ್ತು. ಸ್ಥಳೀಯ ಆರೆಸ್ಸೆಸ್-ಹಿಂಜಾವೇ ಪಡೆಯೇ ಮಾಣಿ ವಿರುದ್ಧ ಮುರಕೊಂಡು ಬಿದ್ದಿತ್ತು. ಮತದಾರರು ಮತ್ತು ಬಿಜೆಪಿ ಕಾರ್ಯಕರ್ತರ ತಿರಸ್ಕಾರ, ತಾತ್ಸಾರಕ್ಕೆ ತುತ್ತಾಗಿರುವ ಮಾಣಿಗೆ ಟಿಕೆಟ್ ಕೊಡಬಾರದೆಂದು ಉತ್ತರ ಕನ್ನಡದ ಆರೆಸ್ಸೆಸ್‍ನ ಒಂದು ತಂಡ ಪ್ರಬಲ ಹೋರಾಟ ಮಾಡಿತ್ತು. ಉತ್ತರ ಕನ್ನಡ ಸಂಘಪರಿವಾರದ ಕಲ್ಲಡ್ಕ, ಹನ್ಮಂತ ಶಾನಭಾಗ್ ಎರಡೂ ಕಡೆ “ಆಟ” ಆಡಿದ್ದರು.

ಅಂತಿಮವಾಗಿ ಮಾಣಿಗೇ ಟಿಕೆಟ್ ಸಿಕ್ಕಿತು. ಆತ ಗೆದ್ದೂ ಬಿಟ್ಟ. ಆದರೆ ಬಿಜೆಪಿ ಒಳಮನೆಯ ಬೇಗುದಿ ಕಮ್ಮಿ ಆಗಲಿಲ್ಲ. ಸೂಲಿಬೆಲೆ ಟೀಮಂತೂ ಮೋದಿ ಮತ ಭಿಕ್ಷೆಯಿಂದ ಗೆದ್ದಿರುವ ಮಾಣಿ ಧೀಮಾಕಿಂದ ಬೀಗುವುದು ಬೇಕಾಗಿಲ್ಲ ಎಂಬ ರಹಸ್ಯ ಅಭಿಯಾನವನ್ನೇ ಹುಟ್ಟುಹಾಕಿತು! ಮಾಣಿ ಮಾಡಿದ ಜನದ್ರೋಹದ ಪಾಪಕ್ಕೇ ಮಂತ್ರಿಯಾಗದೆ ಮೂಲೆ ಪಾಲಾಗಿದ್ದಾನೆಂದು ಆತನ ವಿರೋಧಿ ಬಳಗ ತಿವಿಯತೊಡಗಿತ್ತು. ಇದೆಲ್ಲದರಿಂದ ಮಾಣಿ ಕೊತಕೊತ ಕುದಿಯುತ್ತಲೇ ಇದ್ದ. ತನಗೆ ಅಡ್ಡಗಾಲು ಹಾಕಿದವರನ್ನೆಲ್ಲಾ ಒಬ್ಬೊಬ್ಬರಾಗಿ ಸಂಹರಿಸಲು ಆತ ಸ್ಕೆಚ್ ರೆಡಿಮಾಡಿಕೊಂಡಿದ್ದ. ಸಂಘಪರಿವಾರದಲ್ಲಿ ತನಗಿರುವ ಸಂಪರ್ಕ ಬಳಸಿಕೊಂಡು ಮಾಣಿ ಈಗ ಜಿಲ್ಲಾ ಚೆಡ್ಡಿ ಪಡೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುತ್ತಿದ್ದಾನೆ. ತನಗೆ ವಿರೋಧ ಮಾಡಿದ ಜಿಲ್ಲಾ ಆರೆಸ್ಸೆಸ್, ಹಿಂಜಾವೇ ಮುಖಂಡರನ್ನು ಸಂಘಟನೆಯ ಹುದ್ದೆಗಳಿಂದ ಕಿತ್ತುಹಾಕಿಸುತ್ತಿದ್ದಾನೆ. ಈಗಾಗಲೇ ಜಿಲ್ಲಾಮಟ್ಟದ ಒಬ್ಬ ಕಾರ್ಯವಾಹಕ ಮತ್ತು ಭಟ್ಕಳದ ಆರೆಸ್ಸೆಸ್ ಲೀಡರ್‍ಗೆ ಸ್ಥಾನ ಚ್ಯುತಿ ಮಾಡಲಾಗಿದೆ. ಎಲ್ಲಾ ತಾಲ್ಲೂಕಿನ ಬಿಜೆಪಿ-ಆರೆಸ್ಸೆಸ್‍ನಲ್ಲಿ ಮಾಣಿ ಮಾರಿಹಬ್ಬ ನಡೆಯಲಿದೆ!

ಇನ್ನೊಂದೆಡೆ ಮಾಣಿ ಬಂಡವಾಳ ಬಯಲು ಮಾಡುವ ಆನ್‍ಲೈನ್ ಕಸರತ್ತು ನಡೆಯಲಾರಂಭಿಸಿದೆ. ಚಕ್ರವರ್ತಿ ಸೂಲಿಬೆಲೆ, ಮಾಣಿ ಅಯೋಗ್ಯತೆಯನ್ನು ವ್ಯವಸ್ಥಿತವಾಗಿ ಜಗಜ್ಜಾಹೀರು ಮಾಡುತ್ತಿದ್ದಾನೆ. ಉತ್ತರ ಕನ್ನಡದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಯ ಸೋಷಿಯಲ್ ಮೀಡಿಯಾ ಅಭಿಯಾನ ತನ್ನ ತೇಜೋವಧೆ ಮಾಡುವ ಹಿಕಮತ್ತೆಂಬ ಭಾವನೆ ಮಾಣಿಯದು. ಆಸ್ಪತ್ರೆ ಆಗದಿರುವುದು ಸಂಸದನ ಅಸಾಮಥ್ರ್ಯ ಬಿಂಬಿಸುತ್ತಿದೆ ಎಂಬಂತೆ ಪ್ರಚಾರ ಮಾಡಲಾಗಿತ್ತು. ಇದರ ಹಿಂದೆ ತನ್ನ ಹಿತಶತೃ ಸೂಲಿಬೆಲೆ ಇದ್ದಾನೆಂಬ ಖಚಿತ ನಂಬಿಕೆ ಮಾಣಿಯದು. ಹಾಗಾಗಿ ಆತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಇಡುವವರನ್ನೇ ತನ್ನ ಟ್ವಿಟರ್ ಖಾತೆಗೆ ಪ್ರವೇಶಿಸದಂತೆ ನಿಷೇಧ ಹೇರಿದ್ದರು. ಅಷ್ಟೇ ಅಲ್ಲ, ಆಸ್ಪತ್ರೆಗಾಗಿ ಮನವಿ ಹಿಡಿದುಕೊಂಡು ಬಂದ ಹುಡುಗರಿಗೆ ರೇಗಿ ಸೋಷಿಯಲ್ ಮೀಡಿಯಾದವರಿಂದಲೇ ಆಸ್ಪತ್ರೆ ಮಾಡಿಸಿಕೊಳ್ಳಿ ಎಂದಬ್ಬರಿಸಿದ್ದ.

ಈ ಜಗಳ ಸೂಲಿಬೆಲೆ ಮತ್ತು ಅನಂತ್ಮಾಣಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಾಚಾಮಗೋಚರವಾಗಿ ಬೈದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಇವರ ಕಾಲೆಳೆದಾಟ ಫೇಸ್ಬುಕ್, ವಾಟ್ಸಾಪ್‍ನಲ್ಲಿ ಕದನ ಕುತೂಹಲ ಕೆರಳಿಸಿದೆ. ಗೆದ್ದವರ ಈ ಗದ್ದಲ ವಿರೋಧ ಪಕ್ಷಗಳಿಗೆ ಮಜಾ ನೀಡುತ್ತಿದ್ದರೆ, ಬಿಜೆಪಿಯಲ್ಲಿ ಮುಜುಗರ ಮೂಡಿಸಿದೆ.

ಇದೆಲ್ಲದರಿಂದ ಒಂದು ಹಂತದಲ್ಲಿ ತಬ್ಬಿಬ್ಬಾದ ಸೂಲಿಬೆಲೆ ಜಗಳ ಸಾಕು, ಕೆಲಸ ಮಾಡೋಣ ಎಂಬ ಟ್ವೀಟ್ ಮಾಡಿದರೂ ಆರೋಪ-ಪ್ರತ್ಯಾರೋಪದ ಬಯಲಾಟ ಮಾತ್ರ ನಿಂತಿಲ್ಲ. ಮೋದಿ ಮತ ಭಿಕ್ಷೆಯಿಂದ ಗೆದ್ದ ಸಂಸದರು ಧಿಮಾಕು ತೋರಿಸದೆ ಕೆಲಸ ಮಾಡಬೇಕು ಎಂದು ಸೂಲಿಬೆಲೆ ಟ್ವಿಟಿಸಿದ್ದೇ ಬಿಜೆಪಿಯಲ್ಲಿ ಕಂಪನ ಸೃಷ್ಠಿಯಾಗಲು ಮೂಲಕಾರಣ. ಸದಾನಂದ ಗೌಡ, ಶೋಭಾ ಕರಂದ್ಲಾಜೆಯಂಥ ದೊಡ್ಡವರೆ ಸೂಲಿಬೆಲೆ ಮಾತಿಂದ ಕೆರಳಿ ಕೆಂಡವಾದರು. ನಮಗೆ ಬುದ್ಧಿ ಹೇಳಲು ಚಕ್ರವರ್ತಿ ಯಾರು? ಎಂದು ಎಗರಾಡಿದರು.

ತನಗೆ ಟಿಕೆಟ್ ತಪ್ಪಲು ಕಾರಣವಾದ ನಾಯಕರನ್ನು ನಿರ್ದಿಷ್ಟವಾಗಿ ಗುರಿಮಾಡಿಕೊಂಡೇ ಸೂಲಿಬೆಲೆ ಸಂಸದರ ಬಣ್ಣ ಬಯಲಾಗಿಸುತ್ತಿದ್ದಾನೆ. ಇದು ಬಿಜೆಪಿಯ ಅಧಿಕಾರಸ್ಥರ ಚೇಲಾಗಳನ್ನು ಕೆರಳಿಸಿದೆ. ಜನಪ್ರತಿನಿಧಿಗಳು ಕೆಲಸ ಮಾಡಲಿ ಎಂದು ಹೇಳೋದು ತಪ್ಪೇನಲ್ಲ. ಆದರೆ ಹಾಗೆ ಹೇಳಿದ್ದು ಸೂಲಿಬೆಲೆಯಾದ್ದರಿಂದ ಬಿಜೆಪಿಯಲ್ಲಿ ಬೆಂಕಿಹೊತ್ತಿಕೊಂಡಿತು. ತನ್ನಿಂದಾಗಿಯೇ ಕರ್ನಾಟಕದಲ್ಲಿ ಬಿಜೆಪಿಯ 25 ಸಂಸದರು ಗೆದ್ದಿದ್ದಾರೆಂದು ಸೂಲಿಬೆಲೆ ಹೇಳಿದ್ದಾನೆಂದು ಕಿಡಿ ಹೊತ್ತಿಸಲಾಯಿತು. ಸೂಲಿಬೆಲೆ ಹಾಗೆ ಹೇಳಿಯೇ ಇಲ್ಲವೆಂದು ಆತನ ಬೆಂಬಲಿಗ ನೆಟ್ಟಿಗರ ವಾದ. ಅಸಲಿಗೆ ಆತ ಹಾಗೆ ಹೇಳಿಯೂ ಇರಲಿಲ್ಲ, ಅಂಥ ಸಂದೇಶವೂ ಲಭ್ಯವಿಲ್ಲ. ಆರು ಸಲ ಸಂಸದರಾದವರಿಗೆ, ಎಂಟು ಸಲ ಮಂತ್ರಿಯಾದವರಿಗೆ ಜನಸಾಮಾನ್ಯರ ಅಳಲಿಗೆ ಸ್ಪಂದಿಸಲಾಗದಾ? ಎಂದಾತ ಟ್ವಿಟಿಸಿದ್ದನಷ್ಟೇ. ಇದು ಮಾಣಿಗೆ ಚೆಡ್ಡಿಯೊಳಗೆ ಇರುವೆ ಕಡಿದಂತೆ ಚಡಪಡಿಕೆ ತಂದಿದೆ.

ಇದರ ಬೆನ್ನಿಗೇ ಕೊಡಗಿನಲ್ಲೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಅದಕ್ಕೆ ಅಲ್ಲಿಯ ಸಂಸದ ತಕ್ಷಣ ಸ್ಪಂದಿಸಿದ್ದಾರೆ. ಉ.ಕನ್ನಡದ ಎಂಪಿ ಒಣ ರುಬಾಬು ಮಾಡುತ್ತ ತಲೆ ತಪ್ಪಿಸಿಕೊಳ್ಳುತ್ತಿದ್ದ. ಈ ಹೊತ್ತಲ್ಲಿ ಸೂಲಿಬೆಲೆ ಮಾಡಿದ ಟ್ವೀಟ್ ಮಾಣಿ ಬೆಂಬಲಿಗರಲ್ಲಿ ಆಕ್ರೋಶ ಮೂಡಿಸಿದೆ. ಈಗ ಟ್ರೋಲ್‍ಗಳು ಬರಪೂರ ನಡೆಯುತ್ತಿದೆ. ಬಿಜೆಪಿಯೊಳಗಿನ ಬಡಿದಾಟ ದಿನಕ್ಕೊಂದು ಆಯಾಮ ಪಡೆಯುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...