Homeರಾಜಕೀಯಆಧಾರ ಕಳೆದುಕೊಂಡ ಟ್ರಾಯ್ ಅಧ್ಯಕ್ಷ

ಆಧಾರ ಕಳೆದುಕೊಂಡ ಟ್ರಾಯ್ ಅಧ್ಯಕ್ಷ

- Advertisement -
- Advertisement -

ನಮ್ಮ ಪ್ರಧಾನ ಸೇವಕ ನರೇಂದ್ರ ಮೋದಿ ಸೇರಿದಂತೆ ಸಿನಿಮಾ ಸ್ಟಾರ್‍ಗಳು, ಆಟಗಾರರು ಫಿಟ್ನೆಸ್ ಚಾಲೆಂಜ್ ಮಾಡ್ಕಂಡು ಒಂದಷ್ಟು ದಿನ ಆಟ ಆಡಿದ್ರು, ಅಲ್ಲದೆ ಒಂದು ವಾರದಿಂದ ಕಿಕಿ ಚಾಲೆಂಜ್ ಅಂತ ಹೊಸದೊಂದು ಚಾಲೆಂಜ್ ಟ್ರೆಂಡ್ ಶುರು ಮಾಡ್ಕೊಂಡು ಜನ ಬಿಸಿಯಾಗಿದ್ದಾರೆ. ಇದನ್ನ ನೋಡಿ ಸುಮ್ಮನಿರಲಾರದ ಟ್ರಾಯ್ ಅಧ್ಯಕ್ಷ ಕಂ ಯುಐಡಿಎಐ(ವಿಶಿಷ್ಟ ಗುರುತು ಪ್ರಾಧಿಕಾರ)ನ ಮಾಜಿ ಸಿಇಓ ಆರ್.ಎಸ್.ಶರ್ಮ ಇರಲಾರದೋರು ಇರುವೆ ಬಿಡ್ಕಂಡ್ರು ಅನ್ನೋ ಹಾಗೆ ಹೊಸ ಚಾಲೆಂಜ್ ಶುರು ಮಾಡೋಕೋಗಿ ನಮ್ ಜನರ ಮುಂದೆ ಕಾಮೆಡಿ ಪೀಸಾಗಿದ್ದಾರೆ.
ಅಂತದ್ದೇನಪ್ಪಾ ಮಾಡಿದ್ರು ನಮ್ ಟ್ರಾಯ್ ಅಧ್ಯಕ್ಷರು ಅಂದ್ರೆ, ಆಧಾರ್ ಸಂಖ್ಯೆ ಸೇಫಾಗಿಲ್ಲ ಅನ್ನೋರಿಗೆ ಅಧಾರ್ ಎಷ್ಟು ಸೇಫ್ ಅಂತ ತೋರಿಸ್ತೀನಿ ಅಂತ ಕೆಲವು ದಿನಗಳ ಹಿಂದೆ ತಮ್ಮ ಆಧಾರ್ ನಂಬರ್‍ನ ಟ್ವಿಟರ್‍ನಲ್ಲಿ ಹಂಚಿಕೊಂಡ ಶರ್ಮಾ ಯಾರಿಗಾದ್ರು ಸಾಧ್ಯವಾದ್ರೆ ನನ್ನ ಆಧಾರ್ ನಂಬರ್‍ನ ಬಳಸಿಕೊಂಡು ಹ್ಯಾಕ್ ಮಾಡಿ ಅಂತ ಸವಾಲ್ ಹಾಕಿದ್ರು. ಇದನ್ನ ನೋಡಿದ ಹ್ಯಾಕಿಂಗ್ ಪ್ರವೀಣರು ಸಂಪತ್ತಿಗೆ ಸವಾಲ್ ಅನ್ನೋ ಹಾಗೆ ಮಾಜಿ ಸಿಇಓ ಶರ್ಮಾರವರ ಆಧಾರಗಳನ್ನೆಲ್ಲ ಹೊರತೆಗೆದೇ ಬಿಟ್ಟಿದ್ದಾರೆ. ಶರ್ಮಾರ ಡೀಟೇಲ್ಸ್‍ಗಳನ್ನ ಕದ್ದಿರುವ ಹ್ಯಾಕ್ ಪ್ರವೀಣರು ಅವರ ಪರ್ಸನಲ್ ಡೀಟೆಲ್‍ಗಳನ್ನ ಒಂದೊಂದಾಗಿ ಕಳಿಸಿದ್ದಾರೆ, ಇದು ಆಧಾರ್‍ಸಂಖ್ಯೆ ಗಟ್ಟಿ ಆಧಾರವನ್ನು ಹೊಂದಿಲ್ಲ ಅನ್ನೋದನ್ನ ಖಾತ್ರಿ ಮಾಡಿದೆ.
ಇಷ್ಟಕ್ಕ ಸುಮ್ಮನಾಗದ ಹ್ಯಾಕರ್ಸ್ ಟ್ರಾಯ್ ಅಧ್ಯಕ್ಷರ ಫೋನ್ ನಂಬರ್, ಇ-ಮೇಲ್ ಅಡ್ರೆಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ನಂಬರ್, ಹುಟ್ಟಿದ ದಿನಾಂಕ ಎಲ್ಲವನ್ನೂ ಪಡೆದುಕೊಂಢು ಒಂದೊಂದಾಗಿ ಶರ್ಮಾರಿಗೆ ಕಳಿಸಿದ್ದಾರೆ. ಇಷ್ಟಾದರೂ ಎಚ್ಚೆತ್ತುಕೊಂಡು ಸುಮ್ಮನಿರದ ಶರ್ಮಾ ಸಾಹೇಬರು ನಾನು ಹೇಳಿದ್ದು ನನಗೆ ತೊಂದರೆ ಆಗುವಂತದ್ದನ್ನ ಮಾಡಿ ಎಂದು, ಡೀಟೆಲ್ಸ್ ಕೊಡಿ ಎಂದಲ್ಲ ಎಂದು ಮತ್ತೊಂದು ಟ್ವಿಟ್ ಮಾಡಿದ್ದಾರೆ. ಇದನ್ನ ನೋಡಿ ರೊಚ್ಚಿಗೆದ್ದ ಹ್ಯಾಕರ್ಸ್ ಅವರ ಖಾತೆಯಿಂದ ಹಣ ಪಡೆದರೆ ಅದನ್ನ ಮತ್ತೆ ಪಾಪಸ್ ಪಡೆಯಬಹುದು ಎಂದು ತಿಳಿದಿದ್ದವರು ಹಣ ತೆಗೆದುಕೊಳ್ಳದೆ ಶರ್ಮಾರ ಪಿಎನ್‍ಬಿ ಅಕೌಂಟಿಗೆ ಒಂದು ರೂಪಾಯಿ ಜಮಾ ಮಾಡಿ ಶರ್ಮಾರನ್ನು ಕೀಟಲೆ ಮಾಡಿದ್ದಾರೆ.
ಶರ್ಮಾರ ಇ-ಮೇಲ್ ಖಾತೆಯಿಂದಲೇ ಅವರ ಪುತ್ರಿಗೆ ಮೇಲ್ ಮಾಡಿರುವ ಖತರ್ನಾಕ್ ಪ್ರವೀಣರು ಸಾಮಾಜಿಕ ಮಾಧ್ಯಮದಲ್ಲಿ ಸವಾಲೆಸೆದು ದೇಶಕ್ಕೆ ಮುಜುಗರ ಉಂಟುಮಾಡಿರುವ ನಿಮ್ಮ ತಂದೆ ಹ್ಯಾಕರ್‍ಗಳಿಗೆ ಭರ್ಜರಿ ಬಹುಮಾನ ನೀಡಿದ್ದಾರೆಂದು ಸಂದೇಶ ಕಳಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ಬ್ಯಾಂಕ್ ಖಾತೆಯು ಶೀಘ್ರದಲ್ಲೇ ಹ್ಯಾಕ್ ಆಗಲಿದೆ, ಒಂದು ವೇಳೆ ಅವರು ತನ್ನ ಖಾತೆಯನ್ನು ಅಳಿಸಿ ಹಾಕದಿದ್ದರೆ ಸೂಕ್ಷ್ಮ ದಾಖಲೆಗಳನ್ನೂ ಬಹಿರಂಗ ಪಡಿಸಲಾಗುವುದು ಎಂದೂ, ಈ ಸೂಚನೆಯನ್ನು ಪಾಲಿಸದಿದ್ದರೆ ಮಾಲ್‍ವೇರ್(ಮಾಹಿತಿ ಕದಿಯುವ ಸಾಫ್ಟ್‍ವೇರ್)ಅನ್ನು ಶರ್ಮಾರ ಮೊಬೈಲ್‍ಗೆ ಇನ್‍ಸ್ಟಾಲ್ ಮಾಡಿ ಅವರ ಸಂವಾದವನ್ನು ಕದಿಯಲಾಗುವುದೆಂದು ಎಚ್ಚರಿಕೆ ಸಂದೇಶವನ್ನೂ ಟ್ರಾಯ್ ಅಧ್ಯಕ್ಷರ ಪುತ್ರಿಗೆ ಕಳಿಸಿದ್ದಾರೆ.
ಇಷ್ಟಾದರೂ ಬುದ್ದಿಕಲಿಯದ ಶರ್ಮಾ ಸಾಹೇಬರು ಡಿಜಿಜಲ್ ಯುಗದಲ್ಲಿ ಖಾಸಗೀ ಡಾಟಾವನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾದ ವಿಚಾರ, ಅಂತಹ ಡಾಟಾಗಳನ್ನು ಆಧಾರ್ ಲೀಕ್ ಮಾಡಲಾರದು, ನಾನು ಅದರ ಜತೆಗಿದ್ದೇನೆ ಎಂದು ಮತ್ತೆ ಟ್ವಿಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಆಧಾರ್‍ಗೆ ಯಾವ ಆಧಾರವೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಧಾನ ಸೇವಕ ಮೋದಿ ಸರ್ಕಾರದ ಗೊಡ್ಡು ಆಶ್ವಾಸನೆಗಳಿಂದ ಎಲ್ಲಾ ಖಾಸಗೀ ಡೇಟಾಗಳಿಗೂ ಆಧಾರ್ ಲಿಂಕ್ ಕೊಟ್ಟಿರುವ ಜನರು ತಮ್ಮ ಡೇಟಾಗಳನ್ನು ರಕ್ಷಿಸಿಕೊಳ್ಳಲು ಪೇಚಾಡಬೇಕಾದ ಪರಿಸ್ಥಿತಿಯನ್ನು ಚಾಲೆಂಜಿಂಗ್ ಸ್ಟಾರ್ ಶರ್ಮಾರ ಅವಾಂತರ ಎದುರುಗೊಳಿಸಿದೆ.

– ಸೋಮಶೇಖರ್ ಚಲ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...