Homeರಾಜಕೀಯಯತ್ನಾಳನ ಹರಿದ ನಾಲಗೆಯ ಹಿಂದೆ...

ಯತ್ನಾಳನ ಹರಿದ ನಾಲಗೆಯ ಹಿಂದೆ…

- Advertisement -
- Advertisement -

ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳನ ನಾಲಗೆಗೆ ಮತ್ತೆ ಲಕ್ವಾ ಹೊಡೆದಿದೆ. ಇದರಲ್ಲಿ ಅಚ್ಚರಿಯೇನೂ ಇಲ್ಲ. ಅವನ ನಾಲಗೆ ಸ್ವಸ್ಥವಾಗಿ ಇದ್ದುದಕ್ಕಿಂತ ಸ್ವಾಧೀನ ತಪ್ಪಿದ್ದೇ ಹೆಚ್ಚು. ಈ ಸಲ ತನ್ನ ಹೊಲಸು ನಾಲಗೆಯನ್ನು ಬುದ್ದಿಜೀವಿಗಳತ್ತ ತಿರುಗಿಸಿರೋ ಪುಣ್ಯಾತ್ಮ `ತಾನು ಹೋಂ ಮಿನಿಸ್ಟ್ರು ಆಗಿದ್ದಿದ್ದ್ರೆ, ಸೋ ಕಾಲ್ಡ್ ಸೆಕ್ಯುಲರಿಸ್ಟುಗಳನ್ನು ಗುಂಡಿಟ್ಟು ಸಾಯಿಸುವಂತೆ ಆರ್ಡರ್ ಮಾಡುತ್ತಿದ್ದೆ’ ಅಂತ ಥೇಟು ಟೆರರಿಸ್ಟ್ ಶೈಲಿಯಲ್ಲಿ ಒದರಿಕೊಂಡಿದ್ದಾನೆ. ಡ್ಯಾಮೇಜಾಗಿರುವ ಆತನ ಅರ್ಧ ಬ್ರೈನು ಕೋಮಾ ತಲುಪಿ ಅದ್ಯಾವ ಕಾಲವೋ ಆಗಿಹೋಗಿದೆ. ಉಳಿದರ್ಧ ಭಾಗದಲ್ಲಿ ಇರೋದು ಕೋಮುಹಿಂಸೆಯ ಕಲರವ ಅಷ್ಟೇ. ಸಮಯ ಸಿಕ್ಕಾಗಲೆಲ್ಲ ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಗಲಾಟೆ ಹಚ್ಚಿ ರಾಜಕಾರಣ ಮಾಡುತ್ತಾ ಬಂದಿರುವ ಯತ್ನಾಳ್ ಮಧ್ಯ ವಯಸ್ಸಲ್ಲೇ ರಾಜಕೀಯ ವೃದ್ಧಾಪ್ಯಕ್ಕೆ ಈಡಾಗಿ ಡಿಪ್ರೆಶನ್‍ನ ನಿರಂತರ ಟ್ರೀಟ್‍ಮೆಂಟ್‍ನಲ್ಲಿದ್ದಾನೆ ಅನ್ನೋ ಸುದ್ದಿಯೂ ಇದೆ. ಅಸಲಿಗೆ ಸರ್ಕಾರ ಇಂತವನನ್ನು ಹುಚ್ಚಾಸ್ಪತ್ರೆಯಲ್ಲೊ, ಪರಪ್ಪನ ಅತಿಥಿ ಗೃಹದಲ್ಲೋ ಇಡಬೇಕಿತ್ತು. ಆದರೆ ಅಂತಹ ಯಾವ ಜವಾಬ್ಧಾರಿಯುತ ಸರ್ಕಾರವೂ ಇಂಡಿಯಾದಲ್ಲಿ ಅಸ್ತಿತ್ವಕ್ಕೆ ಬರದ ಕಾರಣ, ಬೀದಿಯಲ್ಲಿ ಅಲೆದುಕೊಂಡಿದ್ದಾನಷ್ಟೇ!
ಒಂದು ಕಾಲಕ್ಕೆ ಬಿಜೆಪಿಯಲ್ಲಿ ಯಡ್ಯೂರಪ್ಪಗೆ ಪರ್ಯಾಯ ಲಿಂಗಾಯತ ಲೀಡರ್ ಆಗಿ ಬೆಳೆದು ಬಡ್ತೀನಿ ಅಂತ ಏನೇನೊ ಸರ್ಕಸ್ ಮಾಡಲು ಹೋಗಿ ಯಡ್ಯೂರಪ್ಪರ ಶಾಶ್ವತ ಶತ್ರುಗಳ ಲಿಸ್ಟು ಸೇರಿಕೊಂಡಿರುವ ಬಸನಗೌಡ ಪಾಟೀಲ್ ಹೀಗೆಲ್ಲ ಒದರಾಡಲು ಒಂದು ಕಾರಣವಿದೆ. ಬಿಜೆಪಿಯೊಳಗೆ ಅಧಿಕಾರದ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವುದಿರಲಿ, ಚುನಾವಣೆಯ ಟಿಕೇಟ್ ದಕ್ಕಿಸಿಕೊಳ್ಳುವುದೇ ಆತನಿಗೆ ದುಸ್ಥರವಾಗಿತ್ತು. 2013ರಲ್ಲಿ ಯತ್ನಾಳನಿಗೆ ಟಿಕೇಟ್ ತಪ್ಪಿದ್ದು ಪಕ್ಷದೊಳಗೆ ಆತನಿಗಿರುವ ಕೆಟ್ಟ ಇಮೇಜಿನಿಂದಾಗಿಯೇ. ಆತನ ಪರಮ ವೈರಿ ಯಡ್ಯೂರಪ್ಪ ಪಕ್ಷ ತೊರೆದು ಕೆಜೆಪಿ ಕಟ್ಟಿಕೊಂಡು ಕಣದಲ್ಲಿದ್ದಾಗಲೂ ಈತ ಬಿಜೆಪಿ ಟಿಕೇಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ ಅಂತಂದರೆ ಈತನ ತಾಕತ್ತು ಎಂತದ್ದು ಅನ್ನೋದು ಅರ್ಥವಾಗುತ್ತದೆ. ಈಗ ಯಡ್ಯೂರಪ್ಪ ವಾಪಾಸಾದ ಮೇಲಂತೂ ಪಕ್ಷದೊಳಗೆ ಯತ್ನಾಳನ ಬಿಗಿತ ದಿನದಿಂದ ದಿನಕ್ಕೆ ಕುಗ್ಗುತ್ತಲೇ ಇದೆ. ಅದ್ಹೇಗೊ ಈ ಸಲ ಟಿಕೇಟ್ ಸಿಕ್ಕು, ಗೆದ್ದಿದ್ದಾನಾದರು ತನ್ನ ಹಳೆಯ ವೈರಿಯನ್ನು ಮಟ್ಟಹಾಕಲು ಯಡ್ಯೂರಪ್ಪ ಹಾತೊರೆಯುತ್ತಿರೋದರಿಂದ ಯತ್ನಾಳ್ ಸಾಹೇಬರಿಗೆ ರಾಜಕೀಯ ಅಸ್ತಿತ್ವದ ಪ್ರಶ್ನೆ ಕಾಡಲು ಶುರುವಾಗಿದೆ.
ಹೇಗಾದರು ಮಾಡಿ, ದಿಲ್ಲಿ ನಾಯಕರ ಗಮನ ತನ್ನತ್ತ ಸೆಳೆದು ಯಡ್ಯೂರಪ್ಪನ ಹಂಗೂ ಇಲ್ಲದೆ ವರ್ಚಸ್ಸು ಹೆಚ್ಚಿಸಿಕೊಳ್ಳಬೇಕೆಂಬ ಹಪಾಹಪಿಯೇ ಆತನನ್ನು ಬುದ್ದಿಜೀವಿಗಳ ವಿರುದ್ಧ ಮಾತಾಡುವಂತೆ ಮಾಡಿದೆ. ಇತ್ತೀಚೆಗೆ, ಅದರಲ್ಲೂ 2019ರ ಎಲೆಕ್ಷನ್ ಸನಿಹವಾದಂತೆಲ್ಲ ಬಾಯಿಗೆ ಬಂದಂತೆ ಕೋಮುದ್ವೇಷದ ಮಾತುಗಳನ್ನಾಡುವ ಬಾಯಿಬಡುಕರಿಗೆ ಬಿಜೆಪಿ ಹೈಕಮಾಂಡು ವಿಶೇಷ ಮಣೆ ಹಾಕುತ್ತಿದೆ. ಅನಂತ್ ಕುಮಾರ್ ಹೆಗಡೆಯಂತಹ ಸಡಿಲ ನಾಲಿಗೆಯ ರಾಜಕಾರಣಿಯನ್ನೂ ಕೇಂದ್ರ ಮಂತ್ರಿ ಮಾಡಿರೋದು ಯತ್ನಾಳ್‍ಗೆ ಸ್ಫೂರ್ತಿ ತುಂಬಿದಂತಿದೆ. ಸಾಲದ್ದಕ್ಕೆ ದೇಶಾದ್ಯಂತ ಜಾತ್ಯತೀತರ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ಮಾತನಾಡುವವರು ರಾತ್ರೋರಾತ್ರಿ ಪಕ್ಷದ ವೇದಿಕೆಯಲ್ಲಿ ಹೀರೋಗಳಾಗುತ್ತಿರೋದನ್ನು ಕಂಡ ಯತ್ನಾಳ್ ತಾನು ಯಾಕೆ ಅಂತದ್ದೊಂದು ಪ್ರಯತ್ನ ಮಾಡಿ ನೋಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ. ಹೇಗೂ ಅವನ ಹುಟ್ಟುಗುಣವೇ ಬಾಯಿಗೆ ಬಂದದ್ದನ್ನು ಒದರಾಡೋದು. ಅದನ್ನು ಇನ್ನಷ್ಟು ಅಧ್ವಾನದಲ್ಲಿ ತಿರುಗಾಡಿಸಿದರೆ ತನಗೂ ಒಳ್ಳೆ ಹುದ್ದೆ ಒದಗಿ ಬರಬಹುದೆನ್ನುವ ಅಂದಾಜು ಆತನದ್ದು.
ಈ ಹಿಂದೆಯೂ ಈತ ಜೆಡಿಎಸ್‍ಗೆ ವಲಸೆ ಹೋಗಿ ವಾಪಾಸ್ ಬಿಜೆಪಿಗೆ ಮರಳಿದಾಗ, ಪಕ್ಷದೊಳಗೆ ವರ್ಚಸ್ಸು ಹೆಚ್ಚಿಸಿಕೊಳ್ಳಲು ತಣ್ಣಗಿದ್ದ ವಿಜಯಪುರಕ್ಕೆ ಲೋಕಸಭಾ ವಿಜಯೋತ್ಸವದ ನೆಪದಲ್ಲಿ ಕೋಮುಬೆಂಕಿ ಹಚ್ಚಿ ಬಿಸಿ ಕಾಯಿಸಿಕೊಂಡಿದ್ದ. ತನ್ನ ಪಟಾಲಮ್ಮಿನ ಹುಡುಗರನ್ನು ಕರೆತಂದು ಮುಸ್ಲೀಮರೆ ಅಧಿಕವಾಗಿರುವ ಗಾಂಧಿಚೌಕದಲ್ಲಿ ದಾಂಧಲೆ ಎಬ್ಬಿಸಿದ್ದ. ಯತ್ನಾಳ್ ಎಂಥಾ ಪುಕ್ಕಲು ಆಸಾಮಿಯೆಂದರೆ, ಪೊಲೀಸರು ಅರೆಸ್ಟ್ ಮಾಡೋದು ಗೊತ್ತಾಗುತ್ತಿದ್ದಂತೆಯೇ ರಾತ್ರೋರಾತ್ರಿ ಊರು ಬಿಟ್ಟು ಪರಾರಿಯಾಗಿ ದೂರದ ಕೊಲ್ಲಾಪುರದ ಓರಿಯಂಟಲ್ ಕ್ರೌನ್ ಹೊಟೇಲ್‍ನಲ್ಲಿ ಬಚ್ಚಿಟ್ಟುಕೊಂಡಿದ್ದ; ಅದೂ ತನ್ನ ಡ್ರೈವರ್ ಹೆಸರಲ್ಲಿ ರೂಮ್ ಬುಕ್ ಮಾಡಿಸಿಕೊಂಡು! ಪೊಲೀಸರು ಬಂಧಿಸಿ ತಂದಮೇಲೂ ಎದೆನೋವಿನ ನೆಪಹೇಳಿ ತನ್ನದೇ ಪಕ್ಷಸ್ಥ ಪ್ರಭಾಕರ್ ಕೋರೆಯ ಕೆಎಲ್‍ಇ ಆಸ್ಪತ್ರೆಯಲ್ಲಿ ನರಳಾಡಿ, ಕೋರ್ಟಿಂದ ಜಾಮೀನು ಪಡೆದು ಬಚಾವಾಗಿದ್ದ. ಅಂಥಾ ಯತ್ನಾಳ್ ಇದೀಗ ಮತ್ತೆ ಅದೇ ಖಯಾಲಿ ಮುಂದುವರೆಸಿ ಮುಗಿದುಹೋಗುತ್ತಿರುವ ತನ್ನ ರಾಜಕೀಯ ಬದುಕನ್ನು ಮತ್ತೆ ಮೊನಚು ಮಾಡಿಕೊಳ್ಳುವ ಯತ್ನದಲ್ಲಿದ್ದಾನೆ.
ಇದಿಷ್ಟು ಯತ್ನಾಳನ ಪುರಾಣವಾದರೆ, ಅತ್ತ ಬಿಜೆಪಿ ಕೂಡಾ ಯತ್ನಾಳನಂತಹ ಬಾಯಿಬಡುಕರನ್ನು ದೇಶಾದ್ಯಂತ ಒದರಾಡಲು ಬಿಟ್ಟು 2019ರ ಎಲೆಕ್ಷನ್‍ಗೆ ಹತಾರಗಳನ್ನು ರೆಡಿ ಮಾಡಿಕೊಳ್ಳುತ್ತಿದೆ. ಸಂವಿಧಾನದ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ, ದಲಿತರ ವಿರುದ್ಧ, ಜಾತ್ಯತೀತರ ವಿರುದ್ಧ ಅಲ್ಲಲ್ಲಿ ಇಂತಹ ಸಡಿಲ ನಾಲಗೆಗಳನ್ನು ಮಾತಾಡಲು ಬಿಟ್ಟು, ಪ್ರತಿಕ್ರಿಯೆಯನ್ನು ನಾಜೂಕಾಗಿ ಗಮನಿಸುತ್ತಿದೆ. ಇಂಥಾ ಲೋ ಪ್ರೊಫೈಲ್ ಲೀಡರ್‍ಗಳು ಆಡುವ ಮಾತುಗಳು ವಿವಾದವಾದರೆ, ಅದು ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷಕ್ಕೂ ತಮಗೂ ಸಂಬಂಧವಿಲ್ಲ ಅಂತ ಕೈತೊಳೆದುಕೊಳ್ಳೋದು ಅದರ ಐಡಿಯಾ. ಬಲಿಯಾದರೆ ಯತ್ನಾಳನಂತಹ ಸ್ಯಾಂಪಲ್ ಪೀಸುಗಳು ಬಲಿಯಾಗುತ್ತವೆ, ಅದಕ್ಕೆ ಪ್ರತಿಯಾಗಿ ಜನರಲ್ಲಿ ಇಂತದ್ದೇ ಮಾತನ್ನು ಪದೇಪದೇ ಕೇಳುವುದರಿಂದ ಅವು ಸಹಜ ಎನ್ನಿಸುವಷ್ಟು ತಾಳಿಕೆ ಬಂದು, ತಮ್ಮ ಕೋಮುತಂತ್ರಗಳಿಗೆ ನೆಲ ಹದವಾಗುತ್ತೆ ಎಂಬ ಹುನ್ನಾರ ಬಿಜೆಪಿ ಮತ್ತು ಸಂಘ ಪರಿವಾರದ್ದಾಗಿರುವಂತಿದೆ. ಹಾಗಾಗಿ ಒಳಗಿಂದೊಳಗೇ ಈ ಬಗೆಯ ಬಾಯಾಸುರರಿಗೆ ಕುಮ್ಮಕ್ಕು ಸಿಕ್ಕುತ್ತಿದೆ. ಇದನ್ನು ಕಂಡೇ ಯತ್ನಾಳನಂತಹ ರಾಜಕೀಯ ಬಿಕ್ಕಟ್ಟಿನಲ್ಲಿರೋರು ಬಾಯಿಗೆ ಬಂದಂತೆ ಮಾತಾಡಿ, ತಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಯತ್ನಾಳ್ ಕೂಡಾ ಅಂತಹದ್ದೇ ಒಂದು ಟ್ರಯಲ್ ಅಂಡ್ ಎರರ್ ಪೀಸು! ದುರಂತವೆಂದರೆ, ಆತ ಅಷ್ಟು ರಾಜಾರೋಷವಾಗಿ ಹಿಂಸೆ-ದ್ವೇಷದ ಮಾತಾಡುತ್ತಿದ್ದರು ಕರ್ನಾಟಕದಲ್ಲಿ ಅಧಿಕಾರದಲ್ಲಿರೋ ಕಲಬೆರಕೆ ಸರಕಾರ ಕಮಕ್-ಕಿಮಕ್ ಎನ್ನದೆ ಕೂತಿದೆ.

– ಜೀಟಿ ಮಾಚಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...