Homeಅಂತರಾಷ್ಟ್ರೀಯಇರಾನ್ ಮೇಲೆ ಅಮೆರಿಕದ ಹದ್ದಿನ ಕಣ್ಣು

ಇರಾನ್ ಮೇಲೆ ಅಮೆರಿಕದ ಹದ್ದಿನ ಕಣ್ಣು

- Advertisement -
- Advertisement -

| ಭರತ್ ಹೆಬ್ಬಾಳ |

ದಶಕಗಳಿಂದ ಮಧ್ಯಪ್ರಾಚ್ಯ ಏಶಿಯಾವನ್ನು ಯುದ್ದ ನಕ್ಷೆಯಂತೆ ಉಪಯೋಗಿಸುತ್ತಿರುವ ಪಾಶ್ಚಾತ್ಯ ಶಕ್ತಿಗಳು ಈಗ ಇರಾನ್ ಮೇಲೆ ಕಣ್ಣಿಟ್ಟಿದೆ. ಪುರಾತನ ಕಾಲದಿಂದಲೂ ದೀರ್ಘ ಮತ್ತು ಮಹತ್ತರ ಇತಿಹಾಸ ಹೊಂದಿರುವ ಇರಾನ್, ಪ್ರಪಂಚದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪಗಳು ಮತ್ತು ಪ್ರಪಂಚದ ಎರಡನೇ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರ.

ಅಮೆರಿಕದ ಕಾರ್ಯದರ್ಶಿ ಕೋಲಿನ್ ಪೊವೆಲ್ 2003, ಫೆಬ್ರುವರೀ 5ನೇ ತಾರೀಕು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎದುರು ಒಂದು ವರದಿಯನ್ನು ನೀಡಿ ಮಾಡಿದ ಭಾಷಣ ಇರಾಕ್ ವಿರುದ್ದದ ಯುದ್ದಕ್ಕೆ ದಾರಿಮಾಡಿಕೊಟ್ಟಿತ್ತು. ಈ ಭಾಷಣದಲ್ಲಿ ಪೊವೆಲ್ ಅವರು ಸದ್ದಾಂ ಹುಸೇನ್ ಮತ್ತವರ ಆಡಳಿತವು ಉಗ್ರವಾದ ಪ್ರತಿಪಾದಿಸುವ ಅಲ್‍ಖೈದಾ ಅಂಗ ಸಂಘಟನೆಯ ಸಹಯೋಗದೊಂದಿಗೆ ರಾಸಾಯನಿಕ ಆಯುಧಗಳು ಮತ್ತು ಇನ್ನಷ್ಟು ವಿಧ್ವಂಸಕಾರಿ ಆಯುಧಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಮತ್ತದರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಪ್ರತಿಪಾದಿಸಿದ್ದರು. ತಾವು ಮಂಡಿಸಿದ ವರದಿಯಲ್ಲಿ ಬ್ರಿಟನ್ ಗೂಢಾಚಾರಿ ಸಂಸ್ಥೆ, ಉಪಗ್ರಹ ಚಿತ್ರಗಳು, ಆಡಿಯೋ ರೆಕಾರ್ಡಿಂಗ್ಸ್ ಮತ್ತು ಇನ್ನೂ ಇತರೆ ನಿರಾಕರಿಸಲಾಗದಂಥ ಪುರಾವೆಗಳೊಂದಿಗೆ ಇದೆ ಎಂದು ಒತ್ತು ಮಾಡಿ ಹೇಳಿದ್ದರು. ಈ ಘಟನೆಯ ಒಂದು ತಿಂಗಳ ನಂತರ ಅಮೆರಿಕ ಮತ್ತು ಹಿಂಬಾಲಕ ಪಡೆಗಳು ಇರಾಕ್ ಅನ್ನು ಬಾಂಬ್ಗಳ ಸುರಿಮಳೆಗೈದು ಧ್ವಂಸಗೊಳಿಸಿ ಇಲ್ಲಿಯವರೆಗೂ ಹತ್ತು ಲಕ್ಷಕ್ಕೂ ಮೇಲ್ಪಟ್ಟ ಜನ ಪ್ರಾಣ ಕಳೆದುಕೊಂಡಿದ್ದಾರೆ, ಅಷ್ಟೇ ಮಂದಿ ಆಂತರಿಕ ಹಾಗೂ ಅಂತರ್ರಾಷ್ಟ್ರೀಯ ನಿರಾಶ್ರಿತರಾಗಿದ್ದಾರೆ ಮತ್ತು ಇದಕ್ಕಾಗಿ ಅಮೆರಿಕ 1.06 ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ. ಇರಾಕಿನಲ್ಲಿ ತಾನು ಹುಟ್ಟು ಹಾಕಿದ್ದ ಕ್ರೌರ್ಯದಿಂದ ಐಸಿಸ್ ಹುಟ್ಟಲು ಕಾರಣವಾಯಿತು.

ಆದರೆ ಬಹುತೇಕ ಮಾಧ್ಯಮಗಳು ಮರೆಮಾಚಿದ ಸಂಗತಿಯೆಂದರೆ ಕೋಲಿನ್ ಪೊವೆಲ್ ಮಂಡಿಸಿದ ಇರಾಕ್ ವಿರುದ್ದದ ವರದಿ ಒಂದು ಕೃತಿಚೌರ್ಯ ವರದಿಯಾಗಿದ್ದು ಅದನ್ನು ಕೇಂಬ್ರಿಡ್ಜ್ ಪ್ರೋಫೆಸರ್ ಗ್ಲೆನ್ ರಾಂಗ್ವಾಲ ಹೊರತಂದ ವಾಸ್ತವವನ್ನು ಕೆಲವೇ ಕೆಲವು ಮಾಧ್ಯಮಗಳು ಪ್ರಕಟಿಸಿದ್ದವು. ಆ ಹತ್ತೊಂಬತ್ತು ಪುಟಗಳ ವರದಿಯಲ್ಲಿ 6ರಿಂದ 16ರ ಪುಟಗಳು ಆಕ್ಸ್‍ಫರ್ಡ್ ಯೂನಿವರ್ಸಿಟಿ ವಿದ್ಯಾರ್ಥಿಯ ಥೀಸಿಸ್ ಇಂದ ನೇರ ಕಾಪೀ ಪೇಸ್ಟ್ ಮಾಡಿದ ವರದಿ. ಆಗಿನ ಬ್ರಿಟಿಷ್ ಅಧ್ಯಕ್ಷ ಟೋನೀ ಬ್ಲೇರ್ ಆಫೀಸಿನಿಂದ ಬಂದದ್ದು ಎಂದು ಹೇಳಲಾಗುತ್ತಿದ್ದ ವರದಿ ಒಂದು ದೊಡ್ಡ ಕೃತಿಚೌರ್ಯ ದಾಖಲೆ. ಈ ಸುಳ್ಳು ದಾಖಲೆಯಿಂದ ತಮ್ಮೆಲ್ಲವನ್ನು ಕಳೆದುಕೊಂಡ ಇರಾಕ್ ಜನತೆ ಅತಿ ಕೆಟ್ಟ ಪರಿಣಾಮವನ್ನು ಎದುರಿಸುತ್ತಿದೆ. ಅಮೆರಿಕ ಮತ್ತದರ ಮಿತ್ರಪಡೆಗಳು ಉಪಯೋಗಿಸಿದ ಡೆಪ್ಲೀಟೆಡ್ ಯುರೇನೀಯಮ್ ಬಾಂಬ್ನಿಂದಾಗಿ ಆ ಪ್ರದೇಶಗಳಲ್ಲಿ ಹುಟ್ಟುವ ಅರ್ಧದಷ್ಟು ಮಕ್ಕಳು ಬರ್ತ್ ಡೆಫೆಕ್ಟ್ಸ್‍ಗಳಿಂದ ಹುಟ್ಟುತ್ತಿವೆ. 45% ಮಕ್ಕಳು ಹುಟ್ಟುವ ಮುಂಚಿತವಾಗಿ ಗರ್ಭದಲ್ಲೇ ಅಸುನೀಗುತ್ತವೆ. ಈ ಸಂಖ್ಯೆ ಯುದ್ದಕ್ಕೂ ಮುಂಚೆ 10%ಗಿಂತಲೂ ಕಡಿಮೆ ಇತ್ತು. ಇರಾಕ್‍ನಲ್ಲಿರುವ ಕಚ್ಚಾ ತೈಲವನ್ನು ಲಪಟಾಯಿಸಲು ಅಮೆರಿಕ ಕೊಟ್ಟ ಸಬೂಬು “ಸದ್ದಾಂ ತೊಲಗಿಸಿ ಪ್ರಜಾತಂತ್ರ (“ವಾಸ್ತವವಾಗಿ ಪಾಶ್ಚಾತ್ಯ ಬಂಡವಾಳಶಾಹಿ ಪ್ರಜಾತಂತ್ರ”) ತೆರುತ್ತೇವೆ” ಎಂದು.

ಮಧ್ಯಪ್ರಾಚ್ಯ ಕಚ್ಚಾ ತೈಲದ ನಿಯಂತ್ರಣವನ್ನು ತಮ್ಮ ತಮ್ಮ ಬಹುರಾಷ್ಟ್ರೀಯ ಕಂಪನಿಗಳ ಒಡೆತನದಲ್ಲಿಯೇ ಇಟ್ಟುಕೊಳ್ಳಲು ಈಗ ಮತ್ತೆ ಅದೇ ಯುದ್ದ ರಾಗವನ್ನು ಇರಾನ್ ವಿರುದ್ಧ ಉಪಯೋಗಿಸುತ್ತಿದ್ದಾರೆ. ದಶಕಗಳಿಂದ ಮಧ್ಯಪ್ರಾಚ್ಯ ಏಶಿಯಾವನ್ನು ಯುದ್ದ ನಕ್ಷೆಯಂತೆ ಉಪಯೋಗಿಸುತ್ತಿರುವ ಪಾಶ್ಚಾತ್ಯ ಶಕ್ತಿಗಳು ಈಗ ಇರಾನ್ ಮೇಲೆ ಕಣ್ಣಿಟ್ಟಿದೆ. ಪುರಾತನ ಕಾಲದಿಂದಲೂ ದೀರ್ಘ ಮತ್ತು ಮಹತ್ತರ ಇತಿಹಾಸ ಹೊಂದಿರುವ ಇರಾನ್, ಪ್ರಪಂಚದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪಗಳು ಮತ್ತು ಪ್ರಪಂಚದ ಎರಡನೇ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರ. 1953ರಲ್ಲಿ ಅಮೆರಿಕ ಮತ್ತು ಬ್ರಿಟಿಷ್ ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ ಇರಾನ್ ದೇಶದ ಕಚ್ಚಾ ತೈಲ ನಿಕ್ಷೇಪಗಳ ರಾಷ್ಟ್ರೀಕರಣ ಮಾಡಲೆತ್ನಿಸಿದ ಮೊಹಮ್ಮೆದ್ ಮೊಸ್ಸಾದೇಘ್ನನ್ನು ಕಿತ್ತೊಗೆದು ತನ್ನ ಕೈಗೊಂಬೆ ಶಾಹ್ ರೆಜû ಪಲ್ಹಾವಿ ಯನ್ನು ಕೂರಿಸಿತು. ಶಾಹ್ ಆಡಳಿತ ಇರಾನಿನ ಜನರ ಮೇಲೆ ಅತ್ಯಂತ ಕ್ರೂರವಾಗಿತ್ತು. 1979 ಇಸ್ಲಾಮಿಕ್ ಕ್ರಾಂತಿಯ ಮೂಲಕ ಇರಾನಿನ ಜನತೆ ಶಾಹ್ ಮತ್ತು ತಮ್ಮ ದೇಶದಲ್ಲಿನ ಪಾಶ್ಚಾತ್ಯ ಹಸ್ತಕ್ಷೇಪವನ್ನು ತೊಲಗಿಸಿತು ಮತ್ತು ತನ್ನ ತೈಲ ಬಾವಿಗಳನ್ನು ಹಿಂಪಡೆಯಿತು. ಆಗಿನಿಂದಲೂ 40 ವರ್ಷಗಳ ಕಾಲ ಸರಕುಗಳು, ಔಷಧಿಗಳು, ಆರ್ಥಿಕ, ವೈಜ್ಞಾನಿಕ ನಿರ್ಬಂಧಗಳನ್ನು ಎದುರಿಸುತ್ತಾ ಬಂದಿದೆ.

ನಲವತ್ತು ವರುಷಗಳಿಂದ ಈ ನಿರ್ಬಂಧಗಳ ನಡುವೆಯೂ ಇರಾನ್ ಸಾಕಷ್ಟು ಸಾಧಿಸಿದೆ. ಪ್ರತಿರೋಧದ ಹೆಸರಿನಲ್ಲಿ ಇಸ್ಲಾಮಿಕ್ ಕ್ರಾಂತಿಯ ಆಶಯಗಳಿಗೆ ನಿಷ್ಠೆಯಿಂದ ದುಡಿಯುವ ಇರಾನಿಯನ್ ರೆವೊಲ್ಯೂಶನರೀ ಗಾರ್ಡ್ಸ್ ಸೇನೆ. ಕ್ಯೂಬ ನಂತರ ನಿರ್ಬಂಧಗಳ ಹೊರತಾಗಿಯೂ ಪ್ರಗತಿ ಸಾಧಿಸಿರುವುದೇ ಇರಾನಿನ ಬಹುದೊಡ್ಡ ಸಾಧನೆ. ಇರಾಕಿನ ದ್ವಂಸದ ನಂತರ ಅಲ್ಲಿನ ಸ್ಥಳೀಯ ನಾಯಕತ್ವವನ್ನು ಇರಾನ್ ಬೆಳೆಸಿದೆ. ಇಸ್ರೇಲ್ಗೆ ಸವಾಲೊಡ್ಡುವ ಲೆಬೆನನ್ ಹೆಜ್ ಬೊಲ್ಲ ಬೆಳೆಸಿದೆ, ಸೌದಿಗೆ ಸವಾಲೊಡ್ಡುವ ಹೌತಿ ಪ್ರತಿರೋಧವನ್ನು ಹುಟ್ಟು ಹಾಕಿದೆ ಇರಾನ್. ತನ್ನದೇ ಕ್ಷಿಪಣಿಗಳನ್ನು ತಯಾರಿಸುವುದೇ ಅಲ್ಲದೆ ಹೊರದೇಶಗಳ ವೈಜ್ಞಾನಿಕ ಸಹಾಯವಿಲ್ಲದೆ ಅಣು ವಿಜ್ಞಾನದಲ್ಲೂ ಬಹಳಷ್ಟು ಸಾಧಿಸಿದೆ. ಮುಖ್ಯವಾಗಿ ಇರಾನ್ ಏಳಿಗೆಯನ್ನು ಸಹಿಸಲಾಗದ ಸೌದಿ ಮತ್ತು ಇಸ್ರೇಲ್ ಅಮೆರಿಕದ ಯುದ್ದಕೋರ ಬಣವನ್ನು ಯುದ್ದಕ್ಕಾಗಿ ಪ್ರೇರೇಪಿಸುತ್ತಿದ್ದಾರೆ. ಇದರ ಸಲುವಾಗಿಯೇ ಒಬಾಮಾ ಆಡಳಿತ ಚೀನಾ, ರಶಿಯ, ಜರ್ಮನೀ, ಫ್ರಾನ್ಸ್, ಇರಾನ್ ಜೊತೆ ಮಾತುಕತೆ ನಡೆಸಿ Joint Comprehensive Plan of Action (JCPOA) ಒಪ್ಪಂದವನ್ನು 2015 ಜುಲೈ ತಿಂಗಳಲ್ಲಿ ಮಾಡಿಕೊಂಡಿತ್ತು. ಅದನ್ನು ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಏಕಪಕ್ಷೀಯವಾಗಿ ಮುರಿದು ಮತ್ತೆ ಯುದ್ದದ ಮಾತುಗಳನ್ನು ಆಡುತ್ತಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಣ ಈ ಬಿಕ್ಕಟ್ಟು 1979ರ ಬಿಕ್ಕಟ್ಟನ್ನು ನೆನಪಿಸುತ್ತಿದೆ.

ಹದಿನಾರು ವರ್ಷದ ಹಿಂದೆ ಕೋಲಿನ್ ಪೊವೆಲ್ ಹೇಗೆ ಸುಳ್ಳು ಹೇಳಿ ಇರಾಕ್ ವಿರುದ್ದದ ಯುದ್ದ ಶುರು ಮಾಡಿದ್ದಾರೋ ಹಾಗೆ ಇಸ್ರೇಲ್ನ ಬೆಂಜಮಿನ್ ನೆತನ್ಯಾಹು ಇರಾನ್ ಅಣು ಬಾಂಬ್‍ಗಳನ್ನು ತಯಾರಿಸುತ್ತಿದೆ ಎಂದು ವಿಶ್ವ ಸಂಸ್ಥೆಗೆ ಸುಳ್ಳು ಹೇಳಿ ಯುದ್ದಕ್ಕೆ ಸಜ್ಜಾಗುತ್ತಿದ್ದಾರೆ. ಜಾರ್ಜ್ ಬುಷ್ ಹೇಗೆ ಇರಾಕ್ ಅನ್ನು ಬೆದರಿಸಿ ದಾಳಿ ನೆಡೆಸಿದನೋ ಅದೇ ರೀತಿ ಟ್ರಂಪ್ ಇರಾನ್ ವಿರುದ್ದ ಬೆದರಿಕೆಗಳನ್ನು ಒಡ್ಡುತ್ತಿದ್ದಾನೆ. ಅಮೆರಿಕದ ಮಾಧ್ಯಮಗಳು ಕೂಡ (ಲಿಬರಲ್ ಪತ್ರಿಕೆಗಳು ಸೇರಿದಂತೆ) ಯುದ್ದವನ್ನು ಉತ್ತೇಜಿಸುವ ಪ್ರಚಾರವನ್ನೇ ಪತ್ರಿಕೋದ್ಯಮವನ್ನಾಗಿ ಮಾಡಿಕೊಂಡಿದೆ. ಈಗ ಅದು ಇರಾನಿನ ಮೇಲೆ ಕಡಿಮೆ ಇಳುವರಿ ಇರುವ ನಿರ್ದಿಷ್ಟ ಅಣು ಬಾಂಬ್ಗಳನ್ನು ಹಾಕಬೇಕು ಎಂಬ ಸಲಹೆಯನ್ನು ಟ್ರಂಪ್ ಆಡಳಿತಕ್ಕೆ ನೀಡುತ್ತಿದೆ. ಸೌದಿ, ಇಸ್ರೇಲ್, ಅಮೆರಿಕ ಒಂದು ಕಡೆಯಾದರೆ ಇರಾನ್, ರಶಿಯ, ಚೀನಾ, ಸಿರಿಯ, ಹಿeóïಬೊಲ್ಲ ಇನ್ನೊಂದು ಕಡೆ.

ಆದರೆ ಇರಾನ್ ಇವೆಲ್ಲದಕ್ಕೂ ಸಜ್ಜಾಗಿದೆ ಎಂದು ಸ್ಪಷ್ಟ ಸಂದೇಶ ಅಮೆರಿಕಗೆ ರವಾನಿಸಿದೆ. ತನ್ನ ಮೇಲೆ ದಾಳಿ ಆದಲ್ಲಿ ಅಮೆರಿಕ ಮಿಲಿಟರೀ ಬೇಸ್ ಇರುವ ತನ್ನ ಸುತ್ತಮುತ್ತಲಿನ ರಾಷ್ಟ್ರಗಳೆಲ್ಲವನ್ನು ಶತ್ರು ರಾಷ್ಟ್ರಗಳು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿಕೆ ಕೊಟ್ಟಿದೆ. ಕಾನೂನುಬಾಹಿರ ನಿರ್ಬಂಧಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಇರಾನ್ ಹೇಗೆ ಪುಟಿದೇಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಚೀನಾ ಮತ್ತು ರಶಿಯ ಕೂಡ ಬಲವಾಗಿ ಇರಾನ್ ಜೊತೆಗೆ ನಿಂತರೆ ಭಾರತ ಅಮೆರಿಕ ಮಾತುಗಳನ್ನು ಕೇಳಿ ಮೇ ತಿಂಗಳಿನಿಂದ ಇರಾನ್‍ನಿಂದ ತೈಲ ಆಮದು ನಿಲ್ಲಿಸಿದೆ. ಇರಾನ್ ವಿರುದ್ದ ಅಮೆರಿಕ ದಾಳಿ ಮಾಡಿದ್ದೆ ಆದಲ್ಲಿ ಅದರ ಪರಿಣಾಮ ಪ್ರಪಂಚದ ಎಲ್ಲ ದೇಶಗಳನ್ನು ತೀವ್ರ ಬಿಕ್ಕಟ್ಟಿಗೆ ತಳ್ಳುತ್ತದೆ. ತೈಲ ಬೆಲೆ ಗಗನಕ್ಕೇರುತ್ತವೆ. 1928 ರಲ್ಲಿ ಕಾಣಿಸಿಕೊಂಡಿದ್ದ ಆರ್ಥಿಕ ಕುಸಿತಕ್ಕಿಂತ ತೀವ್ರವಾಗಿರುತ್ತದೆ ಎಂದು ಆರ್ಥಿಕ ವಿಶ್ಲೇಷಕರು ಊಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...