Homeಅಂತರಾಷ್ಟ್ರೀಯಇರಾನ್ ಮೇಲೆ ಅಮೆರಿಕದ ಹದ್ದಿನ ಕಣ್ಣು

ಇರಾನ್ ಮೇಲೆ ಅಮೆರಿಕದ ಹದ್ದಿನ ಕಣ್ಣು

- Advertisement -
- Advertisement -

| ಭರತ್ ಹೆಬ್ಬಾಳ |

ದಶಕಗಳಿಂದ ಮಧ್ಯಪ್ರಾಚ್ಯ ಏಶಿಯಾವನ್ನು ಯುದ್ದ ನಕ್ಷೆಯಂತೆ ಉಪಯೋಗಿಸುತ್ತಿರುವ ಪಾಶ್ಚಾತ್ಯ ಶಕ್ತಿಗಳು ಈಗ ಇರಾನ್ ಮೇಲೆ ಕಣ್ಣಿಟ್ಟಿದೆ. ಪುರಾತನ ಕಾಲದಿಂದಲೂ ದೀರ್ಘ ಮತ್ತು ಮಹತ್ತರ ಇತಿಹಾಸ ಹೊಂದಿರುವ ಇರಾನ್, ಪ್ರಪಂಚದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪಗಳು ಮತ್ತು ಪ್ರಪಂಚದ ಎರಡನೇ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರ.

ಅಮೆರಿಕದ ಕಾರ್ಯದರ್ಶಿ ಕೋಲಿನ್ ಪೊವೆಲ್ 2003, ಫೆಬ್ರುವರೀ 5ನೇ ತಾರೀಕು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎದುರು ಒಂದು ವರದಿಯನ್ನು ನೀಡಿ ಮಾಡಿದ ಭಾಷಣ ಇರಾಕ್ ವಿರುದ್ದದ ಯುದ್ದಕ್ಕೆ ದಾರಿಮಾಡಿಕೊಟ್ಟಿತ್ತು. ಈ ಭಾಷಣದಲ್ಲಿ ಪೊವೆಲ್ ಅವರು ಸದ್ದಾಂ ಹುಸೇನ್ ಮತ್ತವರ ಆಡಳಿತವು ಉಗ್ರವಾದ ಪ್ರತಿಪಾದಿಸುವ ಅಲ್‍ಖೈದಾ ಅಂಗ ಸಂಘಟನೆಯ ಸಹಯೋಗದೊಂದಿಗೆ ರಾಸಾಯನಿಕ ಆಯುಧಗಳು ಮತ್ತು ಇನ್ನಷ್ಟು ವಿಧ್ವಂಸಕಾರಿ ಆಯುಧಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಮತ್ತದರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಪ್ರತಿಪಾದಿಸಿದ್ದರು. ತಾವು ಮಂಡಿಸಿದ ವರದಿಯಲ್ಲಿ ಬ್ರಿಟನ್ ಗೂಢಾಚಾರಿ ಸಂಸ್ಥೆ, ಉಪಗ್ರಹ ಚಿತ್ರಗಳು, ಆಡಿಯೋ ರೆಕಾರ್ಡಿಂಗ್ಸ್ ಮತ್ತು ಇನ್ನೂ ಇತರೆ ನಿರಾಕರಿಸಲಾಗದಂಥ ಪುರಾವೆಗಳೊಂದಿಗೆ ಇದೆ ಎಂದು ಒತ್ತು ಮಾಡಿ ಹೇಳಿದ್ದರು. ಈ ಘಟನೆಯ ಒಂದು ತಿಂಗಳ ನಂತರ ಅಮೆರಿಕ ಮತ್ತು ಹಿಂಬಾಲಕ ಪಡೆಗಳು ಇರಾಕ್ ಅನ್ನು ಬಾಂಬ್ಗಳ ಸುರಿಮಳೆಗೈದು ಧ್ವಂಸಗೊಳಿಸಿ ಇಲ್ಲಿಯವರೆಗೂ ಹತ್ತು ಲಕ್ಷಕ್ಕೂ ಮೇಲ್ಪಟ್ಟ ಜನ ಪ್ರಾಣ ಕಳೆದುಕೊಂಡಿದ್ದಾರೆ, ಅಷ್ಟೇ ಮಂದಿ ಆಂತರಿಕ ಹಾಗೂ ಅಂತರ್ರಾಷ್ಟ್ರೀಯ ನಿರಾಶ್ರಿತರಾಗಿದ್ದಾರೆ ಮತ್ತು ಇದಕ್ಕಾಗಿ ಅಮೆರಿಕ 1.06 ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ. ಇರಾಕಿನಲ್ಲಿ ತಾನು ಹುಟ್ಟು ಹಾಕಿದ್ದ ಕ್ರೌರ್ಯದಿಂದ ಐಸಿಸ್ ಹುಟ್ಟಲು ಕಾರಣವಾಯಿತು.

ಆದರೆ ಬಹುತೇಕ ಮಾಧ್ಯಮಗಳು ಮರೆಮಾಚಿದ ಸಂಗತಿಯೆಂದರೆ ಕೋಲಿನ್ ಪೊವೆಲ್ ಮಂಡಿಸಿದ ಇರಾಕ್ ವಿರುದ್ದದ ವರದಿ ಒಂದು ಕೃತಿಚೌರ್ಯ ವರದಿಯಾಗಿದ್ದು ಅದನ್ನು ಕೇಂಬ್ರಿಡ್ಜ್ ಪ್ರೋಫೆಸರ್ ಗ್ಲೆನ್ ರಾಂಗ್ವಾಲ ಹೊರತಂದ ವಾಸ್ತವವನ್ನು ಕೆಲವೇ ಕೆಲವು ಮಾಧ್ಯಮಗಳು ಪ್ರಕಟಿಸಿದ್ದವು. ಆ ಹತ್ತೊಂಬತ್ತು ಪುಟಗಳ ವರದಿಯಲ್ಲಿ 6ರಿಂದ 16ರ ಪುಟಗಳು ಆಕ್ಸ್‍ಫರ್ಡ್ ಯೂನಿವರ್ಸಿಟಿ ವಿದ್ಯಾರ್ಥಿಯ ಥೀಸಿಸ್ ಇಂದ ನೇರ ಕಾಪೀ ಪೇಸ್ಟ್ ಮಾಡಿದ ವರದಿ. ಆಗಿನ ಬ್ರಿಟಿಷ್ ಅಧ್ಯಕ್ಷ ಟೋನೀ ಬ್ಲೇರ್ ಆಫೀಸಿನಿಂದ ಬಂದದ್ದು ಎಂದು ಹೇಳಲಾಗುತ್ತಿದ್ದ ವರದಿ ಒಂದು ದೊಡ್ಡ ಕೃತಿಚೌರ್ಯ ದಾಖಲೆ. ಈ ಸುಳ್ಳು ದಾಖಲೆಯಿಂದ ತಮ್ಮೆಲ್ಲವನ್ನು ಕಳೆದುಕೊಂಡ ಇರಾಕ್ ಜನತೆ ಅತಿ ಕೆಟ್ಟ ಪರಿಣಾಮವನ್ನು ಎದುರಿಸುತ್ತಿದೆ. ಅಮೆರಿಕ ಮತ್ತದರ ಮಿತ್ರಪಡೆಗಳು ಉಪಯೋಗಿಸಿದ ಡೆಪ್ಲೀಟೆಡ್ ಯುರೇನೀಯಮ್ ಬಾಂಬ್ನಿಂದಾಗಿ ಆ ಪ್ರದೇಶಗಳಲ್ಲಿ ಹುಟ್ಟುವ ಅರ್ಧದಷ್ಟು ಮಕ್ಕಳು ಬರ್ತ್ ಡೆಫೆಕ್ಟ್ಸ್‍ಗಳಿಂದ ಹುಟ್ಟುತ್ತಿವೆ. 45% ಮಕ್ಕಳು ಹುಟ್ಟುವ ಮುಂಚಿತವಾಗಿ ಗರ್ಭದಲ್ಲೇ ಅಸುನೀಗುತ್ತವೆ. ಈ ಸಂಖ್ಯೆ ಯುದ್ದಕ್ಕೂ ಮುಂಚೆ 10%ಗಿಂತಲೂ ಕಡಿಮೆ ಇತ್ತು. ಇರಾಕ್‍ನಲ್ಲಿರುವ ಕಚ್ಚಾ ತೈಲವನ್ನು ಲಪಟಾಯಿಸಲು ಅಮೆರಿಕ ಕೊಟ್ಟ ಸಬೂಬು “ಸದ್ದಾಂ ತೊಲಗಿಸಿ ಪ್ರಜಾತಂತ್ರ (“ವಾಸ್ತವವಾಗಿ ಪಾಶ್ಚಾತ್ಯ ಬಂಡವಾಳಶಾಹಿ ಪ್ರಜಾತಂತ್ರ”) ತೆರುತ್ತೇವೆ” ಎಂದು.

ಮಧ್ಯಪ್ರಾಚ್ಯ ಕಚ್ಚಾ ತೈಲದ ನಿಯಂತ್ರಣವನ್ನು ತಮ್ಮ ತಮ್ಮ ಬಹುರಾಷ್ಟ್ರೀಯ ಕಂಪನಿಗಳ ಒಡೆತನದಲ್ಲಿಯೇ ಇಟ್ಟುಕೊಳ್ಳಲು ಈಗ ಮತ್ತೆ ಅದೇ ಯುದ್ದ ರಾಗವನ್ನು ಇರಾನ್ ವಿರುದ್ಧ ಉಪಯೋಗಿಸುತ್ತಿದ್ದಾರೆ. ದಶಕಗಳಿಂದ ಮಧ್ಯಪ್ರಾಚ್ಯ ಏಶಿಯಾವನ್ನು ಯುದ್ದ ನಕ್ಷೆಯಂತೆ ಉಪಯೋಗಿಸುತ್ತಿರುವ ಪಾಶ್ಚಾತ್ಯ ಶಕ್ತಿಗಳು ಈಗ ಇರಾನ್ ಮೇಲೆ ಕಣ್ಣಿಟ್ಟಿದೆ. ಪುರಾತನ ಕಾಲದಿಂದಲೂ ದೀರ್ಘ ಮತ್ತು ಮಹತ್ತರ ಇತಿಹಾಸ ಹೊಂದಿರುವ ಇರಾನ್, ಪ್ರಪಂಚದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪಗಳು ಮತ್ತು ಪ್ರಪಂಚದ ಎರಡನೇ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರ. 1953ರಲ್ಲಿ ಅಮೆರಿಕ ಮತ್ತು ಬ್ರಿಟಿಷ್ ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ ಇರಾನ್ ದೇಶದ ಕಚ್ಚಾ ತೈಲ ನಿಕ್ಷೇಪಗಳ ರಾಷ್ಟ್ರೀಕರಣ ಮಾಡಲೆತ್ನಿಸಿದ ಮೊಹಮ್ಮೆದ್ ಮೊಸ್ಸಾದೇಘ್ನನ್ನು ಕಿತ್ತೊಗೆದು ತನ್ನ ಕೈಗೊಂಬೆ ಶಾಹ್ ರೆಜû ಪಲ್ಹಾವಿ ಯನ್ನು ಕೂರಿಸಿತು. ಶಾಹ್ ಆಡಳಿತ ಇರಾನಿನ ಜನರ ಮೇಲೆ ಅತ್ಯಂತ ಕ್ರೂರವಾಗಿತ್ತು. 1979 ಇಸ್ಲಾಮಿಕ್ ಕ್ರಾಂತಿಯ ಮೂಲಕ ಇರಾನಿನ ಜನತೆ ಶಾಹ್ ಮತ್ತು ತಮ್ಮ ದೇಶದಲ್ಲಿನ ಪಾಶ್ಚಾತ್ಯ ಹಸ್ತಕ್ಷೇಪವನ್ನು ತೊಲಗಿಸಿತು ಮತ್ತು ತನ್ನ ತೈಲ ಬಾವಿಗಳನ್ನು ಹಿಂಪಡೆಯಿತು. ಆಗಿನಿಂದಲೂ 40 ವರ್ಷಗಳ ಕಾಲ ಸರಕುಗಳು, ಔಷಧಿಗಳು, ಆರ್ಥಿಕ, ವೈಜ್ಞಾನಿಕ ನಿರ್ಬಂಧಗಳನ್ನು ಎದುರಿಸುತ್ತಾ ಬಂದಿದೆ.

ನಲವತ್ತು ವರುಷಗಳಿಂದ ಈ ನಿರ್ಬಂಧಗಳ ನಡುವೆಯೂ ಇರಾನ್ ಸಾಕಷ್ಟು ಸಾಧಿಸಿದೆ. ಪ್ರತಿರೋಧದ ಹೆಸರಿನಲ್ಲಿ ಇಸ್ಲಾಮಿಕ್ ಕ್ರಾಂತಿಯ ಆಶಯಗಳಿಗೆ ನಿಷ್ಠೆಯಿಂದ ದುಡಿಯುವ ಇರಾನಿಯನ್ ರೆವೊಲ್ಯೂಶನರೀ ಗಾರ್ಡ್ಸ್ ಸೇನೆ. ಕ್ಯೂಬ ನಂತರ ನಿರ್ಬಂಧಗಳ ಹೊರತಾಗಿಯೂ ಪ್ರಗತಿ ಸಾಧಿಸಿರುವುದೇ ಇರಾನಿನ ಬಹುದೊಡ್ಡ ಸಾಧನೆ. ಇರಾಕಿನ ದ್ವಂಸದ ನಂತರ ಅಲ್ಲಿನ ಸ್ಥಳೀಯ ನಾಯಕತ್ವವನ್ನು ಇರಾನ್ ಬೆಳೆಸಿದೆ. ಇಸ್ರೇಲ್ಗೆ ಸವಾಲೊಡ್ಡುವ ಲೆಬೆನನ್ ಹೆಜ್ ಬೊಲ್ಲ ಬೆಳೆಸಿದೆ, ಸೌದಿಗೆ ಸವಾಲೊಡ್ಡುವ ಹೌತಿ ಪ್ರತಿರೋಧವನ್ನು ಹುಟ್ಟು ಹಾಕಿದೆ ಇರಾನ್. ತನ್ನದೇ ಕ್ಷಿಪಣಿಗಳನ್ನು ತಯಾರಿಸುವುದೇ ಅಲ್ಲದೆ ಹೊರದೇಶಗಳ ವೈಜ್ಞಾನಿಕ ಸಹಾಯವಿಲ್ಲದೆ ಅಣು ವಿಜ್ಞಾನದಲ್ಲೂ ಬಹಳಷ್ಟು ಸಾಧಿಸಿದೆ. ಮುಖ್ಯವಾಗಿ ಇರಾನ್ ಏಳಿಗೆಯನ್ನು ಸಹಿಸಲಾಗದ ಸೌದಿ ಮತ್ತು ಇಸ್ರೇಲ್ ಅಮೆರಿಕದ ಯುದ್ದಕೋರ ಬಣವನ್ನು ಯುದ್ದಕ್ಕಾಗಿ ಪ್ರೇರೇಪಿಸುತ್ತಿದ್ದಾರೆ. ಇದರ ಸಲುವಾಗಿಯೇ ಒಬಾಮಾ ಆಡಳಿತ ಚೀನಾ, ರಶಿಯ, ಜರ್ಮನೀ, ಫ್ರಾನ್ಸ್, ಇರಾನ್ ಜೊತೆ ಮಾತುಕತೆ ನಡೆಸಿ Joint Comprehensive Plan of Action (JCPOA) ಒಪ್ಪಂದವನ್ನು 2015 ಜುಲೈ ತಿಂಗಳಲ್ಲಿ ಮಾಡಿಕೊಂಡಿತ್ತು. ಅದನ್ನು ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಏಕಪಕ್ಷೀಯವಾಗಿ ಮುರಿದು ಮತ್ತೆ ಯುದ್ದದ ಮಾತುಗಳನ್ನು ಆಡುತ್ತಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಣ ಈ ಬಿಕ್ಕಟ್ಟು 1979ರ ಬಿಕ್ಕಟ್ಟನ್ನು ನೆನಪಿಸುತ್ತಿದೆ.

ಹದಿನಾರು ವರ್ಷದ ಹಿಂದೆ ಕೋಲಿನ್ ಪೊವೆಲ್ ಹೇಗೆ ಸುಳ್ಳು ಹೇಳಿ ಇರಾಕ್ ವಿರುದ್ದದ ಯುದ್ದ ಶುರು ಮಾಡಿದ್ದಾರೋ ಹಾಗೆ ಇಸ್ರೇಲ್ನ ಬೆಂಜಮಿನ್ ನೆತನ್ಯಾಹು ಇರಾನ್ ಅಣು ಬಾಂಬ್‍ಗಳನ್ನು ತಯಾರಿಸುತ್ತಿದೆ ಎಂದು ವಿಶ್ವ ಸಂಸ್ಥೆಗೆ ಸುಳ್ಳು ಹೇಳಿ ಯುದ್ದಕ್ಕೆ ಸಜ್ಜಾಗುತ್ತಿದ್ದಾರೆ. ಜಾರ್ಜ್ ಬುಷ್ ಹೇಗೆ ಇರಾಕ್ ಅನ್ನು ಬೆದರಿಸಿ ದಾಳಿ ನೆಡೆಸಿದನೋ ಅದೇ ರೀತಿ ಟ್ರಂಪ್ ಇರಾನ್ ವಿರುದ್ದ ಬೆದರಿಕೆಗಳನ್ನು ಒಡ್ಡುತ್ತಿದ್ದಾನೆ. ಅಮೆರಿಕದ ಮಾಧ್ಯಮಗಳು ಕೂಡ (ಲಿಬರಲ್ ಪತ್ರಿಕೆಗಳು ಸೇರಿದಂತೆ) ಯುದ್ದವನ್ನು ಉತ್ತೇಜಿಸುವ ಪ್ರಚಾರವನ್ನೇ ಪತ್ರಿಕೋದ್ಯಮವನ್ನಾಗಿ ಮಾಡಿಕೊಂಡಿದೆ. ಈಗ ಅದು ಇರಾನಿನ ಮೇಲೆ ಕಡಿಮೆ ಇಳುವರಿ ಇರುವ ನಿರ್ದಿಷ್ಟ ಅಣು ಬಾಂಬ್ಗಳನ್ನು ಹಾಕಬೇಕು ಎಂಬ ಸಲಹೆಯನ್ನು ಟ್ರಂಪ್ ಆಡಳಿತಕ್ಕೆ ನೀಡುತ್ತಿದೆ. ಸೌದಿ, ಇಸ್ರೇಲ್, ಅಮೆರಿಕ ಒಂದು ಕಡೆಯಾದರೆ ಇರಾನ್, ರಶಿಯ, ಚೀನಾ, ಸಿರಿಯ, ಹಿeóïಬೊಲ್ಲ ಇನ್ನೊಂದು ಕಡೆ.

ಆದರೆ ಇರಾನ್ ಇವೆಲ್ಲದಕ್ಕೂ ಸಜ್ಜಾಗಿದೆ ಎಂದು ಸ್ಪಷ್ಟ ಸಂದೇಶ ಅಮೆರಿಕಗೆ ರವಾನಿಸಿದೆ. ತನ್ನ ಮೇಲೆ ದಾಳಿ ಆದಲ್ಲಿ ಅಮೆರಿಕ ಮಿಲಿಟರೀ ಬೇಸ್ ಇರುವ ತನ್ನ ಸುತ್ತಮುತ್ತಲಿನ ರಾಷ್ಟ್ರಗಳೆಲ್ಲವನ್ನು ಶತ್ರು ರಾಷ್ಟ್ರಗಳು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿಕೆ ಕೊಟ್ಟಿದೆ. ಕಾನೂನುಬಾಹಿರ ನಿರ್ಬಂಧಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಇರಾನ್ ಹೇಗೆ ಪುಟಿದೇಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಚೀನಾ ಮತ್ತು ರಶಿಯ ಕೂಡ ಬಲವಾಗಿ ಇರಾನ್ ಜೊತೆಗೆ ನಿಂತರೆ ಭಾರತ ಅಮೆರಿಕ ಮಾತುಗಳನ್ನು ಕೇಳಿ ಮೇ ತಿಂಗಳಿನಿಂದ ಇರಾನ್‍ನಿಂದ ತೈಲ ಆಮದು ನಿಲ್ಲಿಸಿದೆ. ಇರಾನ್ ವಿರುದ್ದ ಅಮೆರಿಕ ದಾಳಿ ಮಾಡಿದ್ದೆ ಆದಲ್ಲಿ ಅದರ ಪರಿಣಾಮ ಪ್ರಪಂಚದ ಎಲ್ಲ ದೇಶಗಳನ್ನು ತೀವ್ರ ಬಿಕ್ಕಟ್ಟಿಗೆ ತಳ್ಳುತ್ತದೆ. ತೈಲ ಬೆಲೆ ಗಗನಕ್ಕೇರುತ್ತವೆ. 1928 ರಲ್ಲಿ ಕಾಣಿಸಿಕೊಂಡಿದ್ದ ಆರ್ಥಿಕ ಕುಸಿತಕ್ಕಿಂತ ತೀವ್ರವಾಗಿರುತ್ತದೆ ಎಂದು ಆರ್ಥಿಕ ವಿಶ್ಲೇಷಕರು ಊಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...