Homeಅಂಕಣಗಳುಎನಿತು ಓದಿದಡೇನೋ ಗಿಳಿಯೋದಿದಂತೆ

ಎನಿತು ಓದಿದಡೇನೋ ಗಿಳಿಯೋದಿದಂತೆ

- Advertisement -
- Advertisement -
  • ಡಾ. ವಿನಯಾ ಒಕ್ಕುಂದ |

ನಾವೆಲ್ಲ ನೋಡುತ್ತಿರುವ ಬಿಜೆಪಿ ಪಕ್ಷದ ಚುನಾವಣಾ ಜಾಹೀರಾತೊಂದು ಹೀಗಿದೆ.- ಬಡ ರೈತನ ಮನೆ, ಕರೆಂಟ್ ಹೋಗಿದೆ. ದೀಪ ಹಚ್ಚುವ ಗೃಹಿಣಿ ಮೂಲೆಯಲ್ಲಿ ಕುಳಿತ ಮುದುಕಿ, ಅದೇ ಆಗ ಸಿಡಿಮಿಡಿಯಿಂದಲೇ ಒಳಗೆ ಬಂದ ಅಪ್ಪ, ಎಲ್ಲರಿಗೂ ಅಸಮಾಧಾನವಿದೆ. ಓದುತ್ತಿರುವ ಹರೆಯದ ಹುಡುಗಿ ಮೋದಿಗೆ ಮತ ಹಾಕುವುದರಿಂದ ಸಮಸ್ಯೆಗಳಿಗೆ ಪರಿಹಾರ ಒದಗುತ್ತದೆಂದು ಸೂಚಿಸುತ್ತಾಳೆ. ಹಿರಿಯರೆಲ್ಲರೂ ಸಂತಸದಿಂದ ಸಮ್ಮತಿಸುತ್ತಾರೆ. ಇಂತಹದೊಂದು ಜಾಹೀರಾತು ನಿರ್ಮಾಣ ಸುಮ್ಮನೆ ಅಲ್ಲ. ದೊಡ್ಡ ಸಂಖ್ಯೆಯಲ್ಲಿ ಹೊಸ ಮತದಾರರಾಗಿ ಸೇರ್ಪಡೆಗೊಳ್ಳುತ್ತಿರುವ ಯುವ ಸಮುದಾಯದ ನಿರ್ಣಯಾತ್ಮಕ ಶಕ್ತಿಯನ್ನು ತಮ್ಮೆಡೆಗೆ ಹೊರಳಿಸಿಕೊಳ್ಳುವ ಯೋಜನೆಯನ್ನು ಇದು ಹೊಂದಿದೆ. ಈ ಹೊಸ ಮತದಾರರ ಸಂಖ್ಯೆ ಭಾರತದ ಪ್ರಜಾಸತ್ತೀಯ ಬದುಕಿನಲ್ಲಿ ಯಾವತ್ತಿಗಿಂತ ಹೆಚ್ಚಿದೆ. ಕರ್ನಾಟಕದಲ್ಲಿ 2013 ರಲ್ಲಿ 7,18,000 ಇದ್ದ 18 ರಿಂದ 20 ವರ್ಷದೊಳಗಿನ ಮತದಾರರ ಸಂಖ್ಯೆ 2018 ರಲ್ಲಿ 15,42,000 ಆಗಿದೆ. ಈ ಮತದಾರರು ಈಗಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಬಲ್ಲವರು ಮಾತ್ರವಲ್ಲ ಮುಂದಿನ ಅರ್ಧ ಶತಮಾನಕ್ಕೂ ಹೆಚ್ಚುಕಾಲ ಭಾರತದ ಪ್ರಜಾತಾಂತ್ರಿಕತೆಯನ್ನು ಸಂಗೋಪನೆ ಮಾಡುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡವರು. ಅವರ ಮನಸ್ಸಿನಲ್ಲಿ ಬೀಜಾರೋಪಣಗೊಳ್ಳುವ ವಿಚಾರಗಳು ಉಳಿದು ಬೆಳೆಯುತ್ತವೆಯೇ ವಿನಃ ದಿಢೀರನೆ ಬದಲಾಗುವುದಿಲ್ಲ.

ಈ ಬಾರಿಯ ವಿಧಾನಸಭೆಯನ್ನು ಆಯ್ಕೆ ಮಾಡುವ ಉಮೇದಿಯಲ್ಲಿರುವ ಹೊಸ ಮತದಾರರಲ್ಲಿ ಮತದಾನ ಜಾಗೃತಿಯಿದೆ. ರ್ಯಾಲಿ ಪ್ರಮಾಣವಚನ ಜಾಹೀರಾತು ವಿಚಾರಗೋಷ್ಠಿಗಳನ್ನು ನಡೆಸಿ ಜಾಗೃತಿಯನ್ನು ಮೂಡಿಸುವಲ್ಲಿ ಆಡಳಿತ ವ್ಯವಸ್ಥೆ ಯಶಸ್ವಿಯಾಗಿದೆ. ಆದರೆ ಮತವನ್ನು ಯಾರಿಗೆ ಮತ್ತು ಯಾಕೆ ಚಲಾಯಿಸಬೇಕು? ಎಂಬ ವಿವೇಚನೆ ಯುವಸಮುದಾಯಕ್ಕಿದೆಯೇ? ಎಂಬುದು ಪ್ರಶ್ನೆ. ಈ ತಲೆಮಾರು ದೊಡ್ಡ ಸಂಖ್ಯೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪಡೆದವರು. ಮನೆ ಮಾತಿನ, ಪರಿಸರದ ಮಾತಿನ ವಿವೇಕದಿಂದ ವಂಚಿತರಾದವರು. ಬಾಯಿಪಾಠ ಮಾಡುವ, ಪಾಠವನ್ನು ಕೇಳುವ, ಕೇಳಿದ್ದನ್ನು ಅಪ್ರಶ್ನಾರ್ಹವಾಗಿ ನಂಬುವ ವರ್ಗವಾಗಿ ಬೆಳೆದವರು. ಓದುತ್ತಿರುವ ಪಠ್ಯಕ್ಕೂ ವರ್ತಮಾನಕ್ಕೂ ಇರುವ ಸಂಬಂಧದ ಬಗ್ಗೆ ಯೋಚಿಸದವರು. ದೇಶದ ಸ್ವಾತಂತ್ರ್ಯ ಚಳುವಳಿಯ ಜನಚರಿತ್ರೆಯನ್ನು ಪಠ್ಯವಾಗಿ ಓದದವರು. ಜನರ ಕಥನವಾಗಿ ತಿಳಿಯುವ ಅವಕಾಶವನ್ನು ಮನರಂಜನಾ ಮಾಧ್ಯಮಗಳ ಗದ್ದಲದಿಂದ ಕಳೆದುಕೊಂಡವರು. ಚರಿತ್ರೆಯ ಸ್ಮøತಿಕೋಶದಿಂದ ವಂಚಿತವಾಗುವುದೆಂದರೆ ಬದುಕಿನೊಂದಿಗಿನ ಸಾವಯವ ಸಂಬಂಧವನ್ನೇ ಕಳಚಿಕೊಳ್ಳುವುದು. ನಿಜ, ಪರಂಪರೆಯಲ್ಲಿದ್ದುದೆಲ್ಲ ಚಿನ್ನದದಿರುಗಳಲ್ಲ. ತಂತ್ರಜ್ಞಾನ ಮನರಂಜನೆಯನ್ನು ಬಹುಲಾಭದ ಉದ್ಯಮವಾಗಿಸಿತು. ನಗುವ ನಗಿಸುವ ಸರಂಜಾಮುಗಳನ್ನು ಉತ್ಪಾದಿಸಲಾಯಿತು. ಹಾಸ್ಯವು ಚಿತ್ತಶುಧ್ಧಿಯ ಆಯಾಮವೆಂಬ ತಿಳಿವು ಮರೆಯಾಯಿತು. ಪ್ಲೇಟೋ ಗ್ರೀಕ್ ಅವನತಿಯ ಬಗ್ಗೆ ಹೇಳುತ್ತ, ರುದ್ರನಾಟಕಗಳು ಹುಟ್ಟಬೇಕಿದ್ದ ಸಮಾಜದಲ್ಲಿ ಅದರ ಜಾಳಾದ ಅನುಕರಣೆ ಮತ್ತು ಹಾಸ್ಯನಾಟಕಗಳು ಹುಟ್ಟತೊಡಗಿದವು ಎನ್ನುತ್ತಾನೆ. ಅದಕ್ಕಿಂತಲೂ ಕಷ್ಟದ ಮತ್ತು ಕೆಟ್ಟದಾದ ಕಾಲ ಇದು.

ಬಂಡವಾಳೋದ್ಯಮದ ಆಕ್ರಮಣ ಮಕ್ಕಳನ್ನು ಸಂವೇದನಾಶೂನ್ಯರನ್ನಾಗಿಸಿದೆ. ತುಂಬಾ ಸಹಜವಾಗಿ ಪಡೆಯಬೇಕಿದ್ದ ವ್ಯಕ್ತಿತ್ವಕ್ಕೀಗ ಪ್ರತ್ಯೇಕ ಜಿಮ್‍ಗಳು ಕೋರ್ಸ್‍ಗಳು ಫೀಗಳು ಬಂದು ಎಲ್ಲವೂ ಕಲಿಕೆ ಎಂಬ ಬೇಸೂರುತನ ಪ್ರಾರಂಭವಾಗಿದೆ. ಸೃಜನಶೀಲತೆಯ ಸಾತತ್ಯವನ್ನು ಕಳೆದುಕೊಂಡಿದ್ದರಿಂದ ಸ್ವತಂತ್ರ ವಿಚಾರಶಕ್ತಿಯಿಲ್ಲದೇ ಮಕ್ಕಳು ಅನಿಮಿಕ್ ಆಗುವಂತಾಗಿದೆ. ಎನಿತು ಓದಿದಡೇನೋ ಗಿಳಿಯೋದಿದಂತೆ – ಎಂಬ ಬಸವಣ್ಣನ ಮಾತು ಉಸಿರುಸಿರಿಗು ನೆನಪಾಗುವಂತಾಗಿದೆ. ನೋಡುತ್ತಿದ್ದೇವೆ, ಮಕ್ಕಳು ಯಂತ್ರಮಾನವರಂತಾಡುತ್ತಾರೆ. ಸರಿ ತಪ್ಪುಗಳ ಗೊಡವೆಗೇ ಹೋಗದ ದುಡುಕರಾಗುತ್ತಿದ್ದಾರೆ. ಆಕ್ರಮಿತ ಮಾತು ನಡೆಗಳನ್ನೇ ಆಕರ್ಷಣೆಯೆಂದು ಆರಾಧಿಸುತ್ತಿದ್ದಾರೆ. ಸಿನಿಮಾದ ನಾಯಕನ ನಟನೆಯನ್ನು ಆರಾಧಿಸುವಾಗ ನಿಜದ ಬದುಕು ಮುಖ್ಯವಾಗಲಿಲ್ಲ. ಅದೇ ಪ್ರವೃತ್ತಿ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿಕೊಳ್ಳುತ್ತಿದೆಯೇ? ರಾಜಕಾರಣಿಗಳ ಈಷ್ರ್ಯೆಯ ದ್ವೇಷದ ವ್ಯಂಗ್ಯಮಾತುಗಳನ್ನು ಸುಮ್ಮನೇ ಕೇಳಿಸಿಕೊಳ್ಳಲಾಗುತ್ತಿದೆ. ನಾಡುನುಡಿಯ ಬಗ್ಗೆ, ದೇಶದ ಅಭಿವೃದ್ಧಿಯ ಬಗ್ಗೆ ಬಲುಸುಂದರವಾದ ವ್ಯಾಖ್ಯಾನಗಳನ್ನು ಉರುಳಿಸುತಿದ್ದರೆ …… ಮಾತಿಗೂ ಕೃತಿಗೂ ಸಂಬಂಧವೇ ಬೇಡದವರಂತೆ ಬೆಳ್ಳಿಪರದೆಯ ಮೇಲಿನ ಡೈಲಾಗ್ ಕೇಳಿದವರಂತೆ ಜೋಷ್‍ನಲ್ಲಿ ಶಿಳ್ಳೆ ಹಾಕಲಾಗುತ್ತಿದೆ. ತಮ್ಮ ಬೇಜವಾಬ್ದಾರಿತನ ಅಕಾರಣ ಹಿಂಸೆಯನ್ನು ಬೆಳೆಯಿಸುತ್ತದೆಂಬ ಅರಿವಿಲ್ಲವಾಗಿದೆ. ನಾನಿದನ್ನು ಆರೋಪದ ಧಾಟಿಯಲ್ಲಿ ಹೇಳುತ್ತಿಲ್ಲ. ದಿನಬೆಳಗಾದರೆ ಎಳೆಯ ತಲೆಮಾರಿನೊಂದಿಗೆ ಒಡನಾಡುವ ನನಗೆ, ನಮ್ಮ ಮಕ್ಕಳೇಕೆ ಲೋಕದ ಹಂಗು ಹರಿದುಕೊಂಡವರಂತೆ ಇದ್ದಾರೆ? ಎಂಬ ಆತಂಕ ಕಾಡಿದೆ. ಕುವೆಂಪು, ಮಕ್ಕಳಿಗೆ ವೈಚಾರಿಕ ಪ್ರಜ್ಞೆಯನ್ನು ಕಲಿಸದಿದ್ದರೆ ಅವರು ಪುರಾಣಗಳ ಹುಸಿ ಆರಾಧಕರಾಗಿ ದ್ವೇಷ ಮನಸ್ಥಿತಿಯನ್ನು ಬೆಳೆಸಿಕೊಳ್ಳುವವರಾಗುತ್ತಾರೆ ಎಂಬ ಬಗ್ಗೆ ಹೇಳುತಿದ್ದರು.

ಈ ನಾಡಿನಲ್ಲಿ ಚಿಂತಕರ ಹತ್ಯೆಯಾದಾಗ ಹತ್ಯೆ ಮಾಡಿದವರು ಸಂಭ್ರಮಿಸಿದಾಗ ದೇಶದಾದ್ಯಂತ ಅತ್ಯಾಚಾರಗಳು ನಡೆದಾಗ, ಅತ್ಯಾಚಾರಿಗಳು ತಮ್ಮದೇ ವಯಸ್ಸಿನವರೆಂದು ತಿಳಿದಾಗ, ದಿನದಿಂದ ದಿನಕ್ಕೆ ಅಸಮಾನತೆ ಹೆಚ್ಚುತ್ತಿರುವಾಗ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ – ಇವುಗಳ ಕಾರಣವನ್ನು ಶೋಧಿಸಿಕೊಳ್ಳುವ ಎಚ್ಚರ ಯುವಜನಾಂಗಕ್ಕೆ ಕಂಡುಬರಲಿಲ್ಲವೇ? ಸಂವಿಧಾನವನ್ನು ಪ್ರಮಾಣೀಕರಿಸಿ ಸಂಸದರಾದವರು, ಸಂವಿಧಾನ ವಿರೋಧಿಯಾದ ಅಸಹ್ಯ ಮಾತುಗಳನ್ನಾಡುವಾಗ, ಒಂದು ಧರ್ಮದವರನ್ನು ‘ ನೀವು ನನಗೆ ಓಟು ಮಾಡಬೇಡಿ. ನನಗದರ ಅಗತ್ಯವಿಲ್ಲ.’ ಎಂದು ಆರ್ಭಟಿಸುವಾಗ, ದಲಿತರನ್ನು ಹಂದಿನಾಯಿಗಳಿಗೆ ಹೋಲಿಸುವಾಗ, ದೇಶದ ಕೌಶಲ್ಯಾಭಿವೃದ್ಧಿಯ ಬಗ್ಗೆ ಮಾತನಾಡುತ್ತ, ‘ಮುಸ್ಲಿಮರಿಗೆ ವಿವಾಹ ನಂತರದ ಕೌಶಲ್ಯ ಮಾತ್ರ ಇರುವುದು’ ಎಂದು ಅಶ್ಲೀಲವಾಗಿ ಹೇಳುವಾಗ ಸಂವಿಧಾನವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ಇದು ತಪ್ಪು ಅನ್ನಿಸಲಿಲ್ಲವೇ? ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ತಮಗೆ ಸ್ನೇಹ-ಪ್ರೀತಿಯ ಹಕ್ಕುಗಳಿಲ್ಲವೇ? ಸಂಸ್ಕøತಿ ಮೌಲ್ಯಗಳ ಹೆಸರಿನಲ್ಲಿ ಮರ್ಯಾದಾ ಹತ್ಯೆಗಳು ನಡೆಯುವಾಗ, ನೈತಿಕ ಪೊಲೀಸ್‍ಗಿರಿ ಮೆರೆಯುವಾಗ ಬದುಕಿನ ಹಕ್ಕು ಕಳೆದುಕೊಳ್ಳುತ್ತಿದ್ದೇವೆಂಬ ವಿಷಾದ ಕಾಡಲಿಲ್ಲವೇ? ಇಂತಹ ದುರಂತಗಳಿಗೆ ನಿಜವಾದ ಕಾರಣಕರ್ತರು ಯಾರೆಂಬುದನ್ನು ತಿಳಿದುಕೊಳ್ಳುವ ಕುತೂಹಲವೂ ಹುಟ್ಟಲಿಲ್ಲವೇ? ಈ ಸಲದ ಕರ್ನಾಟಕದ ಚುನಾವಣೆ ಉದ್ರಿಕ್ತ ಹಂತವನ್ನು ತಲುಪಿದೆ. ಮಾತು ಗೌರವವನ್ನು ಕಳೆದುಕೊಂಡಿದೆ. ಸುಳ್ಳು ವಿಜೃಂಭಿಸುತ್ತಿದೆ. ಭಯ ಹುಟ್ಟಿಸುತ್ತಿದೆ. ಆರೋಪ ಸಾಬೀತಾಗದಿದ್ದರೂ ಮುಲಾಜಿಲ್ಲದೇ ಪ್ರಚಾರ ಮಾಡಲಾಗುತ್ತಿದೆ. ಮಾಧ್ಯಮಗಳು ತಮಗೊಂದು ವೃತ್ತಿಧರ್ಮವಿದೆ ಎಂಬುದನ್ನೇ ಮರೆತಿವೆ. ಬಂಡವಾಳವಾದಿಗಳ ಕೈವಸ್ತ್ರವಾಗಿರುವ ಮಾಧ್ಯಮಗಳ ನೈತಿಕ ಲಜ್ಜೆಯನ್ನು ಪ್ರಶ್ನಿಸುವುದೂ ಸಾಧ್ಯವಿಲ್ಲವಾಗಿದೆ. ಈ ವಿಷದ ಹಲ್ಲುಗಳು ಊರಿದ ಪರಿಣಾಮ ಭಾರತೀಯ ಸಮಾಜದ ಸೌಹಾರ್ದ ಪರಂಪರೆ ಘಾಸಿಗೊಂಡಿದೆ.

ಜಾಹೀರಾತಿನ ಹುಡುಗಿಯನ್ನು ಒಂದು ರೂಪಕವಾಗಿಸಿಕೊಂಡರೆ- ನಾವೀಗ ಮತ ಚಲಾಯಿಸಬೇಕಿರುವುದು ರಾಜಕೀಯ ಪಕ್ಷಕ್ಕೋ ಯಾವುದೋ ಒಬ್ಬ ನಾಯಕನಿಗೋ ಎಂಬುದೇ ತಿಳಿದಿಲ್ಲ. ವ್ಯಕ್ತಿಯನ್ನು ಆರಾಧಿಸುವ ಅತಿರೇಕದ ಪರಿಣಾಮವಾಗಿ ಏನೆಲ್ಲ ದುರಂತಗಳು ನಡೆದಿವೆ ಎಂಬ ಚರಿತ್ರೆಯ ನೆನಪುಗಳಿಲ್ಲ. ಇಷ್ಟಕ್ಕೂ ಆರಾಧಿಸುತ್ತಿರುವ ವ್ಯಕ್ತಿಗೆ ನಿಜಕ್ಕೂ ಅಂತಹ ವ್ಯಕ್ತಿತ್ವದ ಯೋಗ್ಯತೆಯಿದೆಯೇ ಎಂದು ಶೋಧಿಸಿಕೊಳ್ಳುತ್ತಿಲ್ಲ. ಅಭಿವೃದ್ಧಿಯ ಮಾತನ್ನು ಸಾರಾಸಗಟಾಗಿ ಬಳಸಲಾಗುತ್ತಿದೆ. ಹಾಗಾದರೆ ಅಭಿವೃದ್ಧಿ ಎಂದರೇನು? ಎಂಬ ಪ್ರಶ್ನೆಯನ್ನು ವ್ಯವಧಾನದಿಂದ ಕೇಳಿಕೊಳ್ಳಲಾಗಿದೆಯೇ? ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ದೇಶಕ್ಕೆ ಕೊಟ್ಟ ಅಭಿವೃದ್ಧಿಯ ಯೋಜನೆಗಳು ಯಾವವು? ಅವುಗಳಿಂದ ಜನರಿಗಾದ ಲಾಭಗಳೇನು? ಬಡವ-ಶ್ರೀಮಂತರ ಮಧ್ಯೆ ಅಮಾನವೀಯ ವ್ಯತ್ಯಾಸದ ಕಾಲದಲ್ಲಿ ಜನಪರ ಯೋಜನೆಗಳು ಎಂದರೇನು? ನೋಟ್‍ಬ್ಯಾನ್‍ನಿಂದ ಕಪ್ಪುಹಣ ತಡೆ ಸಾಧ್ಯವಾಗಿದ್ದರೆ, ಬಂಡವಾಳಶಾಹಿಗಳಿಗೆ ಹೊಡೆತ ಬಿದ್ದಿದ್ದರೆ – ಮತ್ತೂ ಕೆಲವೇ ಕೆಲವರು ಶ್ರೀಮಂತಿಕೆಯ ದರದಲ್ಲಿ ಮೇಲಕ್ಕೇರುತ್ತಲೇ ಇರಲು ಹೇಗೆ ಸಾಧ್ಯವಾಯಿತು? ಪ್ರಧಾನಿಯವರಿಗೆ ಆತ್ಮೀಯರಾದವರು ಇಂತಹ ಶ್ರೀಮಂತಿಕೆಯ ಪಟ್ಟಿಯಲ್ಲಿ ಹೊಸ ಸೇರ್ಪಡೆಗಳು ಹೇಗಾದರು? ಇಂತಹ ಪ್ರಶ್ನೆಗಳು ನಮ್ಮ ಮಕ್ಕಳ ಪಠ್ಯಪುಸ್ತಕಗಳಲ್ಲಿರುವುದಿಲ್ಲ. ಮಾರಿಕೊಂಡ ಮಾಧ್ಯಮಗಳಿಗೆ ಬೇಕಿರುವುದಿಲ್ಲ. ಸಾರಾಸಾರಾ ವಿವೇಚಿಸಬಲ್ಲ ಜನರ ಪ್ರಜ್ಞೆಯನ್ನು ಮುರುಟಿಸಿ ಅದಕ್ಕೆ ಧರ್ಮದ್ವೇಷದ ಬಿಸಿ ಡಾಂಬರನ್ನು ಹಾಕಿ ದಫನು ಮಾಡಲಾಗಿದೆ. ಆಕ್ರಮಣ ಆಕರ್ಷಕ ವ್ಯಕ್ತಿತ್ವವಾಗಿ ಕಾಣತೊಡಗುತ್ತಿದೆ. ಇದೇ ಈಗ ರಾಜಕೀಯಪ್ರಜ್ಞೆಯ ಹೊಸ್ತಿಲಲ್ಲಿರುವ ಎಳೆಯರನ್ನು ಮಾತ್ರ ಅಪರಾಧಿಗಳು ಎನ್ನಲಾದೀತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...