Homeಅಂಕಣಗಳುಇಲಿ ಇಕ್ಕಳದಲ್ಲಿ ಇಡಬಾರದನ್ನ ಇಟ್ಟೋರು

ಇಲಿ ಇಕ್ಕಳದಲ್ಲಿ ಇಡಬಾರದನ್ನ ಇಟ್ಟೋರು

- Advertisement -
- Advertisement -

ಆಘಾತವಾಣಿ |

ನಮಸ್ಕಾರ ಆಘಾತವಾಣಿಗೆ ಸ್ವಾಗತ, ವಾರ್ತೆಗಳು ಓದುತ್ತಿರುವವರು ಅಟ್ಯಾಕ್ ಹನ್ಮಂತ.
ಕರ್ನಾಟಕಕ್ಕೆ ಬಂದಿದ್ದ ಸುಳ್ ಫ್ಯಾಕ್ಟರಿ ಪಕೋಡೇಂದ್ರನು ಉಡುಪಿಯಲ್ಲಿ ಭಾಷಣ ಜಡಿದು ಉಡುಪಿ ಕೃಷ್ಣಮಠಕ್ಕೆ ಹೋಗದೆ ಇದ್ದುದರ ಬಗ್ಗೆ ನಾನಾರೀತಿಯ ಊಹಾಪೋಹಗಳು ಹರಿದಾಡುತ್ತಿವೆ. ಇವೆಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದಿರುವ ಶ್ರೀಮತಿ ಶೋಭಕ್ಕನವರು “ಕೃಷ್ಣಮಠದೊಳಗೆ ಪಕೋಡೇಂದ್ರನಿಗೆ ಜೀವಭಯ ಇದ್ದುದರಿಂದ ಅವರು ಮಠಕ್ಕೆ ಎಡಗಾಲನ್ನೂ ಇಡದೆ ಹಂಗೇ ವಾಪಸ್ ಹೋಗಿದ್ದಾರೆಂದು’’ ತಿಳಿಸಿದ್ದಾರೆ. ಈ ಸುದ್ದಿ ಕೇಳಿದ ಕೃಷ್ಣಮಠದ ಪಿಂಚಣಿಸ್ವಾಮಿಗಳಾದ ‘ತೇಜಾವರ ಶ್ರಿ’ಗಳು “ತನ್ನಂಥ ಕುಪೋಷಣೆ ಪೀಡಿತ ಬಡಕಲು ದೇಹಿಯನ್ನು ಪಕೋಡೇಂದ್ರ ಅವರು ಟೆರರಿಸ್ಟ್ ಎಂದು ಭಯಬಿದ್ದಿರುವುದು ತನಗೆ ಅತ್ಯಂತ ಖೇದವುಂಟಾಗಿದೆ, ಈ ಖೇದವನ್ನು ಹೋಗಲಾಡಿಸಲು ನಾನು ಮುತಾಲಿಕನ ಅರೆಬರೆ ಮೀಸೆಯನ್ನು ತುಟಿಯಿಂದ ಕಿತ್ತು ಯಜ್ಞಕುಂಡಕ್ಕೆ ಹವಿಸ್ಸಾಗಿ ಹಾಕುವ ಮೂಲಕ ದೇವರಿಗೆ ವಿನಂತಿ ಮಾಡುತ್ತೇನೆ ಎಂದು ಇನ್ನೂ ಹೇಳಿಲ್ಲವೆಂದು ವರದಿಯಾಗಿದೆ.
< < < <
ಬಿಜೆಪಿ ಪಕ್ಷದಲ್ಲಿ ನೆಪಕ್ಕೊಂದು ಅಧ್ಯಕ್ಷನಿರಲಿ ಎಂದು ಇಟ್ಟುಕೊಳ್ಳದ ‘ಧಡಿಯೂರಪ್ಪ’ನನ್ನು ನಂಬಿಕೊಂಡರೆ ತಮ್ಮ ಕೈಗೆ ಮಟನ್ ಬಿರಿಯಾನಿ ಬೇಯಿಸುವ ಹಂಡೆ ಮಾತ್ರ ಸಿಗಲು ಸಾಧ್ಯ ಎಂದು ಚಿಂತೆಗೊಳಗಾಗಿರುವ ‘ಹಮೀದ್ ಷಾ’ ಇದಕ್ಕೊಂದು ಹೊಸ ಪ್ಲಾನು ರೆಡಿ ಮಾಡಿದ್ದಾರೆಂದು ಗೊತ್ತಾಗಿದೆ. ಎಲ್ಲೇ ಬಿಜೆಪಿ ಪಕ್ಷದ ಪ್ರಚಾರವಿರಲಿ ಅಲ್ಲಿ ಈ ಬುಡ್ಡಾಗಿರಾಕಿಯನ್ನು ಶೋಕೇಸ್ ಪೀಸಿನಂತೆ ಬಳಸಿಕೊಂಡು ಆಕಾಶ ಪಾತಾಳವಾಗಿ, ಪಾತಾಳ ಆಕಾಶವೇನಾದರೂ ಆಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ‘ಹಾರೆಸ್ಸೆಸ್’ ವಯೋವೃದ್ಧರ ಕೊಂಪೆಯಿಂದ ‘ಚಂತೋಷ್ ಜೀ’ಯನ್ನು ದರದರನೆ ಕರೆತಂದು ಸಿಎಂ ಮಾಡುವುದಾಗಿ ‘ಹಮೀದ್ ಷಾ’ ಅವರು ನಿದ್ದೆಗಣ್ಣಿನಲ್ಲಿ ಕನವರಿಸಿಕೊಳ್ಳುತ್ತಿದ್ದರು ಎಂಬ ಸುದ್ದಿ ಬಹಿರಂಗವಾಗಿದೆ.
< < < <
ಕಾಂಗ್ರೆಸ್ ಪಕ್ಷದ ‘ಲಾಹುಲ್ ಗಾಂಧಿ’ ಬಸವಣ್ಣನವರ ವಚನವನ್ನು ಉಚ್ಚರಿಸಲು ಹೋಗಿ ಇವನರ್ವ, ಇವನರ್ವ ಎಂದು ತೆದ್ದೊದ್ದೊ ಬೊದ್ದೊದ್ದೊ ಮಾಡಿದ ಮೇಲೆ ಕಾಂಗ್ರೆಸ್ಸಿಗರನ್ನು ಬಿಜೆಪಿಗರು ಹುರಿದು ಉಪ್ಪಾಕಿಕೊಂಡು ನುಂಗಿ ನೆಕ್ಕಿದ್ದ ವಿಷಯ ತಮಗೆ ತಿಳಿದಿರಬಹುದು. ಅದೇ ಬಗೆಯಲ್ಲಿ ಉತ್ತರದ ಹಿಂದಿಗರ ಮನೆಯ ಜೀತದಾಳಾದ ‘ಪಕೋಡೇಂದ್ರ’ನು ತಾನೇನೋ ಕನ್ನಡ ಪಂಡಿತನೆಂಬಂತೆ ಪೋಸು ಕೊಡಲು ಹೋಗಿ ‘ಇಲಿ ಇಕ್ಕಳದೊಳಗೆ ಇಡಬಾರದ್ದನ್ನು ಇಟ್ಟಂತೆ’ ಕೊಯಯೊ ಪಯಯೋ ಎಂದು ವದರಿಬಿಟ್ಟಿದ್ದಾನೆ. ‘ಭಗವಾನ್ ಮಂತೆಸಾಮಿ, ದೇವಿ ಮಾರವಬ್ಯಾ, ಮಲ ಮೇವದೇಶ್ವರ್, ಬಿಲ್ಲಿಗಿರಿ ರಂಗ, ಚಾಮರಾಜೇಶ್ವರ್, ಹಿಮ್ಮದ್ ಗೋಪಾಲ್ ಸಾಮಿ’ ಅಂತೆಲ್ಲ ದೇವರುಗಳ ಹೆಸರು ಹೇಳಿದ್ದನ್ನು ಕೇಳಿದ ಜನ.. ಇವನೇನು ದೇವರ ಹೆಸರು ಹೇಳುತ್ತಿದ್ದಾನೋ, ಈಗಾಗಲೇ ಪರಲೋಕಕ್ಕೆ ಪಾರ್ಸೆಲ್ ಆಗಿರೋ ಇವನ ಚಿಕ್ಕಪ್ಪ-ದೊಡ್ಡಪ್ಪಂದಿರ ಹೆಸರು ಹೇಳುತ್ತಿದ್ದಾರೆ ಎಂದು ಗಾಬರಿಯಾಗಿರುವ ಸುದ್ದಿ ಇದೀಗ ತಾನೇ ಬಂದಿದೆ.
< < < <
ಕರ್ನಾಟಕದ ಚುನಾವಣೆಯ ಖರ್ಚಿಗೆ ಕಾಸು ಪೀಕಲೆಂದು ಗಣಿರೆಡ್ಡಿಗಳನ್ನೆಲ್ಲ ಸಿಬಿಐ ಕೋರ್ಟಿನ ನೇಣಿನ ಕುಣಿಕೆಯಿಂದ ಬಿಡಿಸಿ ಕರೆತಂದು ಪ್ರಚಾರ ಕಾರ್ಯದಲ್ಲಿ ತೊಡಗಿಸಿರುವ ‘ಭಾರತೀಯ ಜನಾರ್ದನರೆಡ್ಡಿ ಪಾರ್ಟಿಯು’ ಮಿನಿಮಂ ಲೆವೆಲ್ ನಾಚಿಕೆ ಮಾನಮರ್ಯಾದೆಯಿಲ್ಲದೆ ಬಳ್ಳಾರಿ ಅದಿರಿನ ಭೂದರೋಡೆಯ ದುಡ್ಡಿನಲ್ಲಿ ಮಜಾ ಉಡಾಯಿಸುತ್ತಿದೆ ಎಂದು ತಿಳಿದುಬಂದಿದೆ. ಪಕ್ಷದ ಅಧ್ಯಕ್ಷರೂ ಸೇರಿದಂತೆ ಜನಾರ್ದನ ರೆಡ್ಡಿ ಪಕ್ಷದ ಶಾಸಕರೆಲ್ಲರಿಗೂ ಗಣಿರೆಡ್ಡಿಗಳು ಶರ್ಟುಪ್ಯಾಂಟು ಅಂದ್ರುವೇರು ಹೊಲಿಸಿಕೊಟ್ಟು ಅವರ ಪತ್ನಿಯರಿಗೆ ಲಂಗಜಾಕೀಟನ್ನೂ ಹೊಲಿಸಿಕೊಟ್ಟಿದ್ದಾರೆಂದು ಇನ್ನೂ ವರದಿಯಾಗಿಲ್ಲ. ಈ ಸುದ್ದಿ ತಿಳಿದ ಬ್ಲೂಜೆಪಿ ಶಾಸಕರ ಪತ್ನಿಯರು ತಮ್ಮ ಮನೆಯ ಬಟ್ಟೆ ಬೀರುವಿನ ಕದ ತೆರೆದು ಅಯ್ಯೋ ನನ್ನತ್ರ ಒಂದು ಸೀರೇನೂ ಇಲ್ಲ ಎಂದು ಗೋಳಾಡುತ್ತಿಲ್ಲವೆಂದು ಬಲ್ಲ ಮೂಲಗಳು ತಿಳಿಸಿವೆ.
< < < <
ದಲಿತರ ಮನೆಗಳಿಗೆ ಹೋಗಿ ಎಮ್ಮೆ ಮೇದಂತೆ ಮೇಯ್ದು ಬರುವುದನ್ನು ರೂಢಿ ಮಾಡಿಕೊಂಡಿರುವ ‘ಭಾರತೀಯ ಜಲ್ಸಾ ಪಾರ್ಟಿ’ಯ ಉತ್ತರ ಪ್ರದೇಶ ಸರ್ಕಾರದಿಂದ ಹೊಸ ನ್ಯೂಸೊಂದು ಓಡೋಡಿ ಬಂದಿದೆ. ಬ್ಲೂಜೆಪಿ ಪಕ್ಷದ ಶಾಸಕರು ದಲಿತರ ಮನೆಗಳಿಗೆ ಶ್ರೀರಾಮಚಂದ್ರನಂತೆ ಹೋಗಿ ಅಲ್ಲೇ ಕೂಳುಬಾಕರಂತೆ ಗಡದ್ದಾಗಿ ಉಂಡು, ದಲಿತರಿಗೆ ಆಶೀರ್ವಾದ ಮಾಡಿ ಬರುತ್ತಿದ್ದಾರೆ ಎಂದಿದ್ದಾನೆ ಶಾಸಕ. ಈ ಸುದ್ದಿ ಕೇಳಿದ ಉತ್ತರಪ್ರದೇಶದ ದಲಿತರು, ಇನ್ನೊಂದ್ಸಲ ಯಾವೋನಾದ್ರೂ ‘ಉಣ್ಣಕ್ಕೆ ಏನಾರ ಐತಾ’ ಅಂತ ‘ಉಣ್ಣಲು’ ಬಂದರೆ ಬರ್ರಿ ಊಟ ಮಾಡ್ರಿ ಅಂತ ಒಳಗೆ ಕರೆದು ಅಗುಣಿ ಹಾಕಿ ಆ ಬ್ಲೂಜೆಪಿ ಶಾಸಕರನ್ನು ಕಚಪಚ ಪಚಪಚ ಎಂದು ತುಳಿದು ಕಾಲು ಹಿಡಿದು ತಿಪ್ಪೆಗೆಸೆಯಬೇಕೆಂದು ಇನ್ನೂ ಪ್ರತಿಜ್ಞೆ ಮಾಡಿಲ್ಲವೆಂದು ವರದಿಯಾಗಿದೆ.
< < < <
ಹೋದಲ್ಲಿ ಬಂದಲ್ಲಿ ಹಾರೆಕೋಲು ಹಿಡಿದುಕೊಂಡು ಓಡಾಡುತ್ತ ಬ್ಲೂಜೆಪಿ ಪಕ್ಷದವರ ಪೃಷ್ಟಕ್ಕೆ ಹೆಟ್ಟಿಕೊಂಡು ಓಡಾಡುತ್ತಿರುವ ಪ್ರಕಾಶ್ ರೈ ಅವರು ಪಕ್ಷಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದ್ದಾರೆಂದು ಬ್ಲೂಜೆಪಿ ಮೂಲಗಳು ತಿಳಿಸಿವೆ. ರೈ ಅವರ ಮೇಲೆ ಪಕ್ಷವು ಸಾಕಿಕೊಂಡಿರುವ ಅಲ್ಸೇಷಿಯನ್ ನಾಯಿ ಪ್ರುತಾಪ್ ತಿಮ್ಮನನ್ನು ಛೂ ಬಿಟ್ಟರೂ ರೈ ಪ್ರುತಾಪನಿಗೇ ಹಾರೆಕೋಲು ಹೆಟ್ಟಿ ಎಸೆದಿರುವುದು ಆಘಾತಕಾರಿಯೆಂದು ಧಡಿಯೂರಪ್ಪನವರು ತಮ್ಮ ಮನೆದೇವರು ‘ಬಂದಿದೆಲ್ಲ ಬಳ್ಕೊಳೇ ಬಂಡಿಭಾಗ್ಯಮ್ಮ’ನ ಬಳಿ ಕಷ್ಟ ತೋಡಿಕೊಂಡಿದ್ದಾರೆ. ಈ ಬಗ್ಗೆ ತುರ್ತಾಗಿ ಗಮನ ಹರಿಸಿ ತಮ್ಮದೇ ಪಾರ್ಟಿಯ ಪ್ರೊಡ್ಯೂಸರ್ ಒಬ್ಬನ ಕೈಲಿ ಹಾಲಿವುಡ್ ಚಿತ್ರವನ್ನು ಬೇರೆ ದೇಶದಲ್ಲಿ ಪ್ರೊಡ್ಯೂಸ್ ಮಾಡಲು ಹೇಳಿ ಪ್ರಕಾಶ್ ರೈಗೆ ಶೂಟಿಂಗ್ ನೆಪದಲ್ಲಾದರೂ ಬೇರೆ ದೇಶಕ್ಕೆ ರವಾನೆ ಮಾಡಿದರೆ ತಾನು ನೆಮ್ಮದಿಯಾಗಿ ಜಶೋಧಹೆನ್ ಸವಿನೆನಪಿನಲ್ಲಿ ಮಲಗುತ್ತೇನೆಂದು ಪಕೋಡೇಂದ್ರನು ಧಡಿಯೂರಪ್ಪನಿಗೆ ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆಂದು ಖಚಿತ ಮಾಹಿತಿಗಳು ತಿಳಿಸಿವೆ.
< < < <
ಕತ್ತೆ-ಎಮ್ಮೆಗಳಿಗೆ ಹೂನಾರ ಹಾಕಿ ಮೆರವಣಿಗೆ ಮಾಡುವುದೇ ರಾಜಕೀಯ ಎಂದು ನಂಬಿಕೊಂಡಿರುವ ‘ಪಾಟಾಳ್ ನಾಗರಾಜ್’ ಅವರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಜನರ ಗ್ರಾಚಾರ ಕೆಟ್ಟು ತಮ್ ಪಕ್ಷ ಏನಾದ್ರೂ ಅಪ್ಪಿತಪ್ಪಿ ಅಧಿಕಾರಕ್ಕೆ ಬಂದರೆ ಉಚಿತವಾಗಿ ಕಟಿಂಗ್ ಶೇವಿಂಗ್ ಮಾಡಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಪಾಟಾಳ್ ನಾಗರಾಜ್. ಈ ಸುದ್ದಿಯನ್ನು ಸಂಜೆಪತ್ರಿಕೆಯಲ್ಲಿ ಓದಿದ ಧಡಿಯೂರಪ್ಪನವರು ಮುಖವೇ ಕಾಣದಂತೆ ಗಡ್ಡ ಬೆಳೆಸಿಕೊಂಡು ಕಾಡುಮನುಷ್ಯನಂತೆ ಅಂಡಲೆಯುತ್ತಿರುವ ಸ್ತ್ರೀರಾಮುಲುಗೆ ಫೋನ್ ಮಾಡಿ “ನಿನ್ನ ಟಾರ್ಜನ್ ಮುಸುಡಿ ನೋಡಿಯೇ ಪಾಟಾಳ್ ನಾಗರಾಜ್ ಈ ಉಚಿತ ಕಟಿಂಗ್ ಶೇವಿಂಗ್ ಚುನಾವಣಾ ಭರವಸೆ ಕೊಟ್ಟಿದ್ದಾನೆ, ಮೊದಲು ನುಣ್ಣಗೆ ಶೇವಿಂಗ್ ಮಾಡಿಸಿಕೊಂಡು ನಂತರ ಬಂದು ನಿನ್ನ ಮುಖ ಮಾತ್ರ ತೋರಿಸು ಇನ್ನೇನೂ ತೋರಿಸಬೇಡ ಎಂದು ಗದರಿಕೊಂಡಿದ್ದಾರೆ. ಶೇವಿಂಗ್ ಮಾಡಿಸಿಕೊಂಡರೆ ನನ್ನ ಹೆಂಡತಿಯೇ ನನ್ನ ಮುಖ ನೋಡಿ ಕಿಟಾರನೆ ಕಿರುಚುತ್ತಾಳೆಂದು ಸ್ತ್ರೀರಾಮುಲು ಎಷ್ಟು ಸಮಜಾಯಿಷಿ ಕೊಟ್ಟರೂ ಧಡಿಯೂರಪ್ಪನವರು ತಾವು ಕೈಲಿ ಹಿಡಕೊಂಡಿದ್ದ ಧಡಿಯನ್ನು ಕೆಳಗೇ ಇಳಿಸಲಿಲ್ಲವೆಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಇದೇ ಜಾಗದಲ್ಲಿ ಇದೇ ವಾರದಲ್ಲಿ. ಇಲ್ಲೇ ಡ್ರಾ, ಇಲ್ಲೇ ಬಹುಮಾನ. ಮೇಯಕ್ಕೆ ಹೋಗಿರೋ ದನಗಳು ಹಟ್ಟಿ ಸೇರ್ಕಳೋ ಹೊತ್ತಾತು, ನಾನಿನ್ನ ಬತ್ತಿನಿ. ಬಾಯ್ ಬಾಯ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...