Homeಅಂಕಣಗಳುಎನಿತು ಓದಿದಡೇನೋ ಗಿಳಿಯೋದಿದಂತೆ

ಎನಿತು ಓದಿದಡೇನೋ ಗಿಳಿಯೋದಿದಂತೆ

- Advertisement -
- Advertisement -
  • ಡಾ. ವಿನಯಾ ಒಕ್ಕುಂದ |

ನಾವೆಲ್ಲ ನೋಡುತ್ತಿರುವ ಬಿಜೆಪಿ ಪಕ್ಷದ ಚುನಾವಣಾ ಜಾಹೀರಾತೊಂದು ಹೀಗಿದೆ.- ಬಡ ರೈತನ ಮನೆ, ಕರೆಂಟ್ ಹೋಗಿದೆ. ದೀಪ ಹಚ್ಚುವ ಗೃಹಿಣಿ ಮೂಲೆಯಲ್ಲಿ ಕುಳಿತ ಮುದುಕಿ, ಅದೇ ಆಗ ಸಿಡಿಮಿಡಿಯಿಂದಲೇ ಒಳಗೆ ಬಂದ ಅಪ್ಪ, ಎಲ್ಲರಿಗೂ ಅಸಮಾಧಾನವಿದೆ. ಓದುತ್ತಿರುವ ಹರೆಯದ ಹುಡುಗಿ ಮೋದಿಗೆ ಮತ ಹಾಕುವುದರಿಂದ ಸಮಸ್ಯೆಗಳಿಗೆ ಪರಿಹಾರ ಒದಗುತ್ತದೆಂದು ಸೂಚಿಸುತ್ತಾಳೆ. ಹಿರಿಯರೆಲ್ಲರೂ ಸಂತಸದಿಂದ ಸಮ್ಮತಿಸುತ್ತಾರೆ. ಇಂತಹದೊಂದು ಜಾಹೀರಾತು ನಿರ್ಮಾಣ ಸುಮ್ಮನೆ ಅಲ್ಲ. ದೊಡ್ಡ ಸಂಖ್ಯೆಯಲ್ಲಿ ಹೊಸ ಮತದಾರರಾಗಿ ಸೇರ್ಪಡೆಗೊಳ್ಳುತ್ತಿರುವ ಯುವ ಸಮುದಾಯದ ನಿರ್ಣಯಾತ್ಮಕ ಶಕ್ತಿಯನ್ನು ತಮ್ಮೆಡೆಗೆ ಹೊರಳಿಸಿಕೊಳ್ಳುವ ಯೋಜನೆಯನ್ನು ಇದು ಹೊಂದಿದೆ. ಈ ಹೊಸ ಮತದಾರರ ಸಂಖ್ಯೆ ಭಾರತದ ಪ್ರಜಾಸತ್ತೀಯ ಬದುಕಿನಲ್ಲಿ ಯಾವತ್ತಿಗಿಂತ ಹೆಚ್ಚಿದೆ. ಕರ್ನಾಟಕದಲ್ಲಿ 2013 ರಲ್ಲಿ 7,18,000 ಇದ್ದ 18 ರಿಂದ 20 ವರ್ಷದೊಳಗಿನ ಮತದಾರರ ಸಂಖ್ಯೆ 2018 ರಲ್ಲಿ 15,42,000 ಆಗಿದೆ. ಈ ಮತದಾರರು ಈಗಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಬಲ್ಲವರು ಮಾತ್ರವಲ್ಲ ಮುಂದಿನ ಅರ್ಧ ಶತಮಾನಕ್ಕೂ ಹೆಚ್ಚುಕಾಲ ಭಾರತದ ಪ್ರಜಾತಾಂತ್ರಿಕತೆಯನ್ನು ಸಂಗೋಪನೆ ಮಾಡುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡವರು. ಅವರ ಮನಸ್ಸಿನಲ್ಲಿ ಬೀಜಾರೋಪಣಗೊಳ್ಳುವ ವಿಚಾರಗಳು ಉಳಿದು ಬೆಳೆಯುತ್ತವೆಯೇ ವಿನಃ ದಿಢೀರನೆ ಬದಲಾಗುವುದಿಲ್ಲ.

ಈ ಬಾರಿಯ ವಿಧಾನಸಭೆಯನ್ನು ಆಯ್ಕೆ ಮಾಡುವ ಉಮೇದಿಯಲ್ಲಿರುವ ಹೊಸ ಮತದಾರರಲ್ಲಿ ಮತದಾನ ಜಾಗೃತಿಯಿದೆ. ರ್ಯಾಲಿ ಪ್ರಮಾಣವಚನ ಜಾಹೀರಾತು ವಿಚಾರಗೋಷ್ಠಿಗಳನ್ನು ನಡೆಸಿ ಜಾಗೃತಿಯನ್ನು ಮೂಡಿಸುವಲ್ಲಿ ಆಡಳಿತ ವ್ಯವಸ್ಥೆ ಯಶಸ್ವಿಯಾಗಿದೆ. ಆದರೆ ಮತವನ್ನು ಯಾರಿಗೆ ಮತ್ತು ಯಾಕೆ ಚಲಾಯಿಸಬೇಕು? ಎಂಬ ವಿವೇಚನೆ ಯುವಸಮುದಾಯಕ್ಕಿದೆಯೇ? ಎಂಬುದು ಪ್ರಶ್ನೆ. ಈ ತಲೆಮಾರು ದೊಡ್ಡ ಸಂಖ್ಯೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪಡೆದವರು. ಮನೆ ಮಾತಿನ, ಪರಿಸರದ ಮಾತಿನ ವಿವೇಕದಿಂದ ವಂಚಿತರಾದವರು. ಬಾಯಿಪಾಠ ಮಾಡುವ, ಪಾಠವನ್ನು ಕೇಳುವ, ಕೇಳಿದ್ದನ್ನು ಅಪ್ರಶ್ನಾರ್ಹವಾಗಿ ನಂಬುವ ವರ್ಗವಾಗಿ ಬೆಳೆದವರು. ಓದುತ್ತಿರುವ ಪಠ್ಯಕ್ಕೂ ವರ್ತಮಾನಕ್ಕೂ ಇರುವ ಸಂಬಂಧದ ಬಗ್ಗೆ ಯೋಚಿಸದವರು. ದೇಶದ ಸ್ವಾತಂತ್ರ್ಯ ಚಳುವಳಿಯ ಜನಚರಿತ್ರೆಯನ್ನು ಪಠ್ಯವಾಗಿ ಓದದವರು. ಜನರ ಕಥನವಾಗಿ ತಿಳಿಯುವ ಅವಕಾಶವನ್ನು ಮನರಂಜನಾ ಮಾಧ್ಯಮಗಳ ಗದ್ದಲದಿಂದ ಕಳೆದುಕೊಂಡವರು. ಚರಿತ್ರೆಯ ಸ್ಮøತಿಕೋಶದಿಂದ ವಂಚಿತವಾಗುವುದೆಂದರೆ ಬದುಕಿನೊಂದಿಗಿನ ಸಾವಯವ ಸಂಬಂಧವನ್ನೇ ಕಳಚಿಕೊಳ್ಳುವುದು. ನಿಜ, ಪರಂಪರೆಯಲ್ಲಿದ್ದುದೆಲ್ಲ ಚಿನ್ನದದಿರುಗಳಲ್ಲ. ತಂತ್ರಜ್ಞಾನ ಮನರಂಜನೆಯನ್ನು ಬಹುಲಾಭದ ಉದ್ಯಮವಾಗಿಸಿತು. ನಗುವ ನಗಿಸುವ ಸರಂಜಾಮುಗಳನ್ನು ಉತ್ಪಾದಿಸಲಾಯಿತು. ಹಾಸ್ಯವು ಚಿತ್ತಶುಧ್ಧಿಯ ಆಯಾಮವೆಂಬ ತಿಳಿವು ಮರೆಯಾಯಿತು. ಪ್ಲೇಟೋ ಗ್ರೀಕ್ ಅವನತಿಯ ಬಗ್ಗೆ ಹೇಳುತ್ತ, ರುದ್ರನಾಟಕಗಳು ಹುಟ್ಟಬೇಕಿದ್ದ ಸಮಾಜದಲ್ಲಿ ಅದರ ಜಾಳಾದ ಅನುಕರಣೆ ಮತ್ತು ಹಾಸ್ಯನಾಟಕಗಳು ಹುಟ್ಟತೊಡಗಿದವು ಎನ್ನುತ್ತಾನೆ. ಅದಕ್ಕಿಂತಲೂ ಕಷ್ಟದ ಮತ್ತು ಕೆಟ್ಟದಾದ ಕಾಲ ಇದು.

ಬಂಡವಾಳೋದ್ಯಮದ ಆಕ್ರಮಣ ಮಕ್ಕಳನ್ನು ಸಂವೇದನಾಶೂನ್ಯರನ್ನಾಗಿಸಿದೆ. ತುಂಬಾ ಸಹಜವಾಗಿ ಪಡೆಯಬೇಕಿದ್ದ ವ್ಯಕ್ತಿತ್ವಕ್ಕೀಗ ಪ್ರತ್ಯೇಕ ಜಿಮ್‍ಗಳು ಕೋರ್ಸ್‍ಗಳು ಫೀಗಳು ಬಂದು ಎಲ್ಲವೂ ಕಲಿಕೆ ಎಂಬ ಬೇಸೂರುತನ ಪ್ರಾರಂಭವಾಗಿದೆ. ಸೃಜನಶೀಲತೆಯ ಸಾತತ್ಯವನ್ನು ಕಳೆದುಕೊಂಡಿದ್ದರಿಂದ ಸ್ವತಂತ್ರ ವಿಚಾರಶಕ್ತಿಯಿಲ್ಲದೇ ಮಕ್ಕಳು ಅನಿಮಿಕ್ ಆಗುವಂತಾಗಿದೆ. ಎನಿತು ಓದಿದಡೇನೋ ಗಿಳಿಯೋದಿದಂತೆ – ಎಂಬ ಬಸವಣ್ಣನ ಮಾತು ಉಸಿರುಸಿರಿಗು ನೆನಪಾಗುವಂತಾಗಿದೆ. ನೋಡುತ್ತಿದ್ದೇವೆ, ಮಕ್ಕಳು ಯಂತ್ರಮಾನವರಂತಾಡುತ್ತಾರೆ. ಸರಿ ತಪ್ಪುಗಳ ಗೊಡವೆಗೇ ಹೋಗದ ದುಡುಕರಾಗುತ್ತಿದ್ದಾರೆ. ಆಕ್ರಮಿತ ಮಾತು ನಡೆಗಳನ್ನೇ ಆಕರ್ಷಣೆಯೆಂದು ಆರಾಧಿಸುತ್ತಿದ್ದಾರೆ. ಸಿನಿಮಾದ ನಾಯಕನ ನಟನೆಯನ್ನು ಆರಾಧಿಸುವಾಗ ನಿಜದ ಬದುಕು ಮುಖ್ಯವಾಗಲಿಲ್ಲ. ಅದೇ ಪ್ರವೃತ್ತಿ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿಕೊಳ್ಳುತ್ತಿದೆಯೇ? ರಾಜಕಾರಣಿಗಳ ಈಷ್ರ್ಯೆಯ ದ್ವೇಷದ ವ್ಯಂಗ್ಯಮಾತುಗಳನ್ನು ಸುಮ್ಮನೇ ಕೇಳಿಸಿಕೊಳ್ಳಲಾಗುತ್ತಿದೆ. ನಾಡುನುಡಿಯ ಬಗ್ಗೆ, ದೇಶದ ಅಭಿವೃದ್ಧಿಯ ಬಗ್ಗೆ ಬಲುಸುಂದರವಾದ ವ್ಯಾಖ್ಯಾನಗಳನ್ನು ಉರುಳಿಸುತಿದ್ದರೆ …… ಮಾತಿಗೂ ಕೃತಿಗೂ ಸಂಬಂಧವೇ ಬೇಡದವರಂತೆ ಬೆಳ್ಳಿಪರದೆಯ ಮೇಲಿನ ಡೈಲಾಗ್ ಕೇಳಿದವರಂತೆ ಜೋಷ್‍ನಲ್ಲಿ ಶಿಳ್ಳೆ ಹಾಕಲಾಗುತ್ತಿದೆ. ತಮ್ಮ ಬೇಜವಾಬ್ದಾರಿತನ ಅಕಾರಣ ಹಿಂಸೆಯನ್ನು ಬೆಳೆಯಿಸುತ್ತದೆಂಬ ಅರಿವಿಲ್ಲವಾಗಿದೆ. ನಾನಿದನ್ನು ಆರೋಪದ ಧಾಟಿಯಲ್ಲಿ ಹೇಳುತ್ತಿಲ್ಲ. ದಿನಬೆಳಗಾದರೆ ಎಳೆಯ ತಲೆಮಾರಿನೊಂದಿಗೆ ಒಡನಾಡುವ ನನಗೆ, ನಮ್ಮ ಮಕ್ಕಳೇಕೆ ಲೋಕದ ಹಂಗು ಹರಿದುಕೊಂಡವರಂತೆ ಇದ್ದಾರೆ? ಎಂಬ ಆತಂಕ ಕಾಡಿದೆ. ಕುವೆಂಪು, ಮಕ್ಕಳಿಗೆ ವೈಚಾರಿಕ ಪ್ರಜ್ಞೆಯನ್ನು ಕಲಿಸದಿದ್ದರೆ ಅವರು ಪುರಾಣಗಳ ಹುಸಿ ಆರಾಧಕರಾಗಿ ದ್ವೇಷ ಮನಸ್ಥಿತಿಯನ್ನು ಬೆಳೆಸಿಕೊಳ್ಳುವವರಾಗುತ್ತಾರೆ ಎಂಬ ಬಗ್ಗೆ ಹೇಳುತಿದ್ದರು.

ಈ ನಾಡಿನಲ್ಲಿ ಚಿಂತಕರ ಹತ್ಯೆಯಾದಾಗ ಹತ್ಯೆ ಮಾಡಿದವರು ಸಂಭ್ರಮಿಸಿದಾಗ ದೇಶದಾದ್ಯಂತ ಅತ್ಯಾಚಾರಗಳು ನಡೆದಾಗ, ಅತ್ಯಾಚಾರಿಗಳು ತಮ್ಮದೇ ವಯಸ್ಸಿನವರೆಂದು ತಿಳಿದಾಗ, ದಿನದಿಂದ ದಿನಕ್ಕೆ ಅಸಮಾನತೆ ಹೆಚ್ಚುತ್ತಿರುವಾಗ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ – ಇವುಗಳ ಕಾರಣವನ್ನು ಶೋಧಿಸಿಕೊಳ್ಳುವ ಎಚ್ಚರ ಯುವಜನಾಂಗಕ್ಕೆ ಕಂಡುಬರಲಿಲ್ಲವೇ? ಸಂವಿಧಾನವನ್ನು ಪ್ರಮಾಣೀಕರಿಸಿ ಸಂಸದರಾದವರು, ಸಂವಿಧಾನ ವಿರೋಧಿಯಾದ ಅಸಹ್ಯ ಮಾತುಗಳನ್ನಾಡುವಾಗ, ಒಂದು ಧರ್ಮದವರನ್ನು ‘ ನೀವು ನನಗೆ ಓಟು ಮಾಡಬೇಡಿ. ನನಗದರ ಅಗತ್ಯವಿಲ್ಲ.’ ಎಂದು ಆರ್ಭಟಿಸುವಾಗ, ದಲಿತರನ್ನು ಹಂದಿನಾಯಿಗಳಿಗೆ ಹೋಲಿಸುವಾಗ, ದೇಶದ ಕೌಶಲ್ಯಾಭಿವೃದ್ಧಿಯ ಬಗ್ಗೆ ಮಾತನಾಡುತ್ತ, ‘ಮುಸ್ಲಿಮರಿಗೆ ವಿವಾಹ ನಂತರದ ಕೌಶಲ್ಯ ಮಾತ್ರ ಇರುವುದು’ ಎಂದು ಅಶ್ಲೀಲವಾಗಿ ಹೇಳುವಾಗ ಸಂವಿಧಾನವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ಇದು ತಪ್ಪು ಅನ್ನಿಸಲಿಲ್ಲವೇ? ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ತಮಗೆ ಸ್ನೇಹ-ಪ್ರೀತಿಯ ಹಕ್ಕುಗಳಿಲ್ಲವೇ? ಸಂಸ್ಕøತಿ ಮೌಲ್ಯಗಳ ಹೆಸರಿನಲ್ಲಿ ಮರ್ಯಾದಾ ಹತ್ಯೆಗಳು ನಡೆಯುವಾಗ, ನೈತಿಕ ಪೊಲೀಸ್‍ಗಿರಿ ಮೆರೆಯುವಾಗ ಬದುಕಿನ ಹಕ್ಕು ಕಳೆದುಕೊಳ್ಳುತ್ತಿದ್ದೇವೆಂಬ ವಿಷಾದ ಕಾಡಲಿಲ್ಲವೇ? ಇಂತಹ ದುರಂತಗಳಿಗೆ ನಿಜವಾದ ಕಾರಣಕರ್ತರು ಯಾರೆಂಬುದನ್ನು ತಿಳಿದುಕೊಳ್ಳುವ ಕುತೂಹಲವೂ ಹುಟ್ಟಲಿಲ್ಲವೇ? ಈ ಸಲದ ಕರ್ನಾಟಕದ ಚುನಾವಣೆ ಉದ್ರಿಕ್ತ ಹಂತವನ್ನು ತಲುಪಿದೆ. ಮಾತು ಗೌರವವನ್ನು ಕಳೆದುಕೊಂಡಿದೆ. ಸುಳ್ಳು ವಿಜೃಂಭಿಸುತ್ತಿದೆ. ಭಯ ಹುಟ್ಟಿಸುತ್ತಿದೆ. ಆರೋಪ ಸಾಬೀತಾಗದಿದ್ದರೂ ಮುಲಾಜಿಲ್ಲದೇ ಪ್ರಚಾರ ಮಾಡಲಾಗುತ್ತಿದೆ. ಮಾಧ್ಯಮಗಳು ತಮಗೊಂದು ವೃತ್ತಿಧರ್ಮವಿದೆ ಎಂಬುದನ್ನೇ ಮರೆತಿವೆ. ಬಂಡವಾಳವಾದಿಗಳ ಕೈವಸ್ತ್ರವಾಗಿರುವ ಮಾಧ್ಯಮಗಳ ನೈತಿಕ ಲಜ್ಜೆಯನ್ನು ಪ್ರಶ್ನಿಸುವುದೂ ಸಾಧ್ಯವಿಲ್ಲವಾಗಿದೆ. ಈ ವಿಷದ ಹಲ್ಲುಗಳು ಊರಿದ ಪರಿಣಾಮ ಭಾರತೀಯ ಸಮಾಜದ ಸೌಹಾರ್ದ ಪರಂಪರೆ ಘಾಸಿಗೊಂಡಿದೆ.

ಜಾಹೀರಾತಿನ ಹುಡುಗಿಯನ್ನು ಒಂದು ರೂಪಕವಾಗಿಸಿಕೊಂಡರೆ- ನಾವೀಗ ಮತ ಚಲಾಯಿಸಬೇಕಿರುವುದು ರಾಜಕೀಯ ಪಕ್ಷಕ್ಕೋ ಯಾವುದೋ ಒಬ್ಬ ನಾಯಕನಿಗೋ ಎಂಬುದೇ ತಿಳಿದಿಲ್ಲ. ವ್ಯಕ್ತಿಯನ್ನು ಆರಾಧಿಸುವ ಅತಿರೇಕದ ಪರಿಣಾಮವಾಗಿ ಏನೆಲ್ಲ ದುರಂತಗಳು ನಡೆದಿವೆ ಎಂಬ ಚರಿತ್ರೆಯ ನೆನಪುಗಳಿಲ್ಲ. ಇಷ್ಟಕ್ಕೂ ಆರಾಧಿಸುತ್ತಿರುವ ವ್ಯಕ್ತಿಗೆ ನಿಜಕ್ಕೂ ಅಂತಹ ವ್ಯಕ್ತಿತ್ವದ ಯೋಗ್ಯತೆಯಿದೆಯೇ ಎಂದು ಶೋಧಿಸಿಕೊಳ್ಳುತ್ತಿಲ್ಲ. ಅಭಿವೃದ್ಧಿಯ ಮಾತನ್ನು ಸಾರಾಸಗಟಾಗಿ ಬಳಸಲಾಗುತ್ತಿದೆ. ಹಾಗಾದರೆ ಅಭಿವೃದ್ಧಿ ಎಂದರೇನು? ಎಂಬ ಪ್ರಶ್ನೆಯನ್ನು ವ್ಯವಧಾನದಿಂದ ಕೇಳಿಕೊಳ್ಳಲಾಗಿದೆಯೇ? ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ದೇಶಕ್ಕೆ ಕೊಟ್ಟ ಅಭಿವೃದ್ಧಿಯ ಯೋಜನೆಗಳು ಯಾವವು? ಅವುಗಳಿಂದ ಜನರಿಗಾದ ಲಾಭಗಳೇನು? ಬಡವ-ಶ್ರೀಮಂತರ ಮಧ್ಯೆ ಅಮಾನವೀಯ ವ್ಯತ್ಯಾಸದ ಕಾಲದಲ್ಲಿ ಜನಪರ ಯೋಜನೆಗಳು ಎಂದರೇನು? ನೋಟ್‍ಬ್ಯಾನ್‍ನಿಂದ ಕಪ್ಪುಹಣ ತಡೆ ಸಾಧ್ಯವಾಗಿದ್ದರೆ, ಬಂಡವಾಳಶಾಹಿಗಳಿಗೆ ಹೊಡೆತ ಬಿದ್ದಿದ್ದರೆ – ಮತ್ತೂ ಕೆಲವೇ ಕೆಲವರು ಶ್ರೀಮಂತಿಕೆಯ ದರದಲ್ಲಿ ಮೇಲಕ್ಕೇರುತ್ತಲೇ ಇರಲು ಹೇಗೆ ಸಾಧ್ಯವಾಯಿತು? ಪ್ರಧಾನಿಯವರಿಗೆ ಆತ್ಮೀಯರಾದವರು ಇಂತಹ ಶ್ರೀಮಂತಿಕೆಯ ಪಟ್ಟಿಯಲ್ಲಿ ಹೊಸ ಸೇರ್ಪಡೆಗಳು ಹೇಗಾದರು? ಇಂತಹ ಪ್ರಶ್ನೆಗಳು ನಮ್ಮ ಮಕ್ಕಳ ಪಠ್ಯಪುಸ್ತಕಗಳಲ್ಲಿರುವುದಿಲ್ಲ. ಮಾರಿಕೊಂಡ ಮಾಧ್ಯಮಗಳಿಗೆ ಬೇಕಿರುವುದಿಲ್ಲ. ಸಾರಾಸಾರಾ ವಿವೇಚಿಸಬಲ್ಲ ಜನರ ಪ್ರಜ್ಞೆಯನ್ನು ಮುರುಟಿಸಿ ಅದಕ್ಕೆ ಧರ್ಮದ್ವೇಷದ ಬಿಸಿ ಡಾಂಬರನ್ನು ಹಾಕಿ ದಫನು ಮಾಡಲಾಗಿದೆ. ಆಕ್ರಮಣ ಆಕರ್ಷಕ ವ್ಯಕ್ತಿತ್ವವಾಗಿ ಕಾಣತೊಡಗುತ್ತಿದೆ. ಇದೇ ಈಗ ರಾಜಕೀಯಪ್ರಜ್ಞೆಯ ಹೊಸ್ತಿಲಲ್ಲಿರುವ ಎಳೆಯರನ್ನು ಮಾತ್ರ ಅಪರಾಧಿಗಳು ಎನ್ನಲಾದೀತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...