Homeಕರ್ನಾಟಕಎಸ್‍ಬಿಎಂ ಮತ್ತು ಎಟಿಎಂಗಳು, ಗಣಿಧೂಳು ಕಾಣದಂತೆ ಪೌಡರ್ ಮೆತ್ತಿರುವ ಆನಂದ್‍ಸಿಂಗ್‍ಗಳೂ….

ಎಸ್‍ಬಿಎಂ ಮತ್ತು ಎಟಿಎಂಗಳು, ಗಣಿಧೂಳು ಕಾಣದಂತೆ ಪೌಡರ್ ಮೆತ್ತಿರುವ ಆನಂದ್‍ಸಿಂಗ್‍ಗಳೂ….

‘ಮೊಟ್ಟೆ ಮೊದಲೋ, ಕೋಳಿ ಮೊದಲೋ ಅನ್ನೋ ಥರ ಆಗಿದೆ. ರಾಜೀನಾಮೆ ಮೊದಲೋ, ಅನರ್ಹತೆ ಮೊದಲೋ ಅನ್ನಂಗಿಲ್ಲ.. ಎರಡೂ ಒಟ್ಟಿಗೆ ಸಂಬಂಧ ಹೊಂದಿವೆ...’

- Advertisement -
- Advertisement -

‘ಶಾಸಕರು (ಮುಂಬೈನಲ್ಲಿರುವವರು) ರಾಜೀನಾಮೆ ನೀಡುವುದನ್ನು ಅಂಗೀಕರಿಸದಿರುವುದು ಅವರ ಬದುಕುವ ಹಕ್ಕನ್ನು ಕಿತ್ತುಕೊಂಡಂತೆ. ಅವರು ರಾಜೀನಾಮೆ ನೀಡಿ ಬೇರೆ ವೃತ್ತಿಗೆ ಹೋಗಬಹುದು….’

ಅರೆ ಇವ್ನಾ, ಅಂದರೆ ಈಗ ರಿಯಲ್ (ಎ)ಸ್ಟೇಟ್‍ಗಾಗಿ ಫೈಟ್ ಮಾಡ್ತಿರೋ ಎಸ್‍ಬಿಎಂ (ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ), ಎಂಟಿಬಿ ನಾಗರಾಜ್, ವರ್ಷದಿಂದ ಕುಮಟಳ್ಳಿ ಎಳಕೊಂಡು ಜಾರುತ್ತಲೇ ಇದ್ದರೂ ಡೆಸ್ಟಿನೇಷನ್ ತಲುಪಲು ತಿಣುಕಾಡ್ತಿರೋ ಜಾರಕಿಹೊಳಿ, ಗಣಿಧೂಳು ಕಾಣದಂತೆ ಪೌಡರ್ ಮೆತ್ತಿಕೊಂಡಿರೋ ಆನಂದಸಿಂಗ್, ಫೇಸ್‍ಬುಕ್‍ನಲ್ಲೇ ಕ್ಷೇತ್ರದ ಜನರ ಸೇವೆ ಮಾಡ್ತೀರೋ ಶಿವರಾಮ್ ಹೆಬ್ಬಾರ್, ಮುಂಬೈ ದಂಧೆ ಮೂಲಕವೇ ಇಲ್ಲಿ ಶಾಸಕರಾಗಿ ಮತ್ತೆ ಮುಂಬೈ ತಲುಪಿರೋ ನಾರಾಯಣಗೌಡ, ನಾಯಕರಿಗೆ ‘ಸಕಲ’ ವ್ಯವಸ್ಥೆ ಮಾಡಬಲ್ಲ ಚತುರ ಸುಧಾಕರ್, ಸಚಿವಗಿರಿ ಸಿಕ್ಕರೂ ಓಡಿ ಹೋಗಿರುವ ಶಂಕರ್, ನಾಗೇಶ್…….ಅಬ್ಬಬ್ಬಾ, ರಾಜೀನಾಮೆ ಸ್ವೀಕರಿಸದೇ ಇದ್ದರೆ ಇವರ ಬದುಕುವ ಹಕ್ಕಿನ ಉಲ್ಲಂಘನೆ ಆಗುತ್ತಾ?

ಅಯ್ಯೋ ಶಿವನೇ, ಇವರೆಲ್ಲ ರಾಜೀನಾಮೆ ನೀಡಿ ಬೇರೆ ವೃತ್ತಿಗೆ ಹೋಗಬಹುದಂತೆ! ‘ಬೇರೆ’ ಅಂದರೆ ಏನರ್ಥ? ಈಗಿರುವ ಶಾಸಕ ‘ವೃತ್ತಿ’ಯಿಂದ ಇನ್ನೊಂದು ದಂಧೆಗೆ ಅಲ್ಲವೇ? ಹಂಗಂದ್ರ, ಶಾಸಕನಾಗಿರುವುದೂ ಒಂದು ವೃತ್ತಿ ಅಂತೀರಾ ರೋಹ್ಟಗಿ ಸಾಹೇಬರೇ? ಇವರ್ಯಾರು ಈಗ ಬೇರೆ ವ್ಯವಹಾರವನ್ನೇ ಮಾಡ್ತಿಲ್ಲವೇ? ಈ ಪುಣ್ಯಾತ್ಮರು ಕ್ಷೇತ್ರವನ್ನೇ ಮರೆತು ಎಲ್ಲೋ ಓಡಿ ಹೋಗಿದ್ದಾರಲ್ಲ, ಅದು ನಮ್ಮ ಅಂದರೆ ಮತದಾರರ ಹಕ್ಕಿನ ಉಲ್ಲಂಘನೆ ಅಲ್ಲವೇ? ನಮಗಂತೂ ಗೊತ್ತಾಗ್ತಿಲ್ಲ. ಬಿಡ್ರಿ, ಅಲ್ಲಿ ಕುಳಿತ ಮೂರ್ಮಂದಿನೇ ತಲೆ ಕೆರೆದುಕೊಂಡು ನಾಳೆವರೆಗೆ ಏನ್ ಹೇಳಕ್ಕಾಗಲ್ಲ ಅಂದವ್ರೆ, ನಮ್ಮಂಥವರಿಗೇನು ಗೊತ್ತಾಗುತ್ತೆ…..

‘ಮೊಟ್ಟೆ ಮೊದಲೋ, ಕೋಳಿ ಮೊದಲೋ ಅನ್ನೋ ಥರ ಆಗಿದೆ. ರಾಜೀನಾಮೆ ಮೊದಲೋ, ಅನರ್ಹತೆ ಮೊದಲೋ ಅನ್ನಂಗಿಲ್ಲ.. ಎರಡೂ ಒಟ್ಟಿಗೆ ಸಂಬಂಧ ಹೊಂದಿವೆ…’

ಕರೆಕ್ಟು ವಕೀಲರೇ, ಫೆಬ್ರುವರಿ 11ಕ್ಕೆ ಮೊಟ್ಟೆಯೇ (ಜಾರಕಿ, ಕುಮಟಳ್ಳಿ ಅನರ್ಹತೆ) ಕೈಗೇ ಸಿಕ್ಕಿತ್ತಲ್ಲ್ಲ? ಇಲ್ಲಿವರೆಗೆ ಅದನ್ನ ಕೋಳಿ ಮಾಡೋಕೆ ಹೊರಟಿದ್ದರಾ? ಹುಂಜಗಳ ಸಹವಾಸದಲ್ಲಿ ಮೈಮರೆತು ಬಿಟ್ಟರಾ ನಿಮ್ಮ ಸಾಹೇಬರು…?

‘ಜುಲೈ 5ರಿಂದ 11ರವರೆಗೆ ಸ್ಪೀಕರ್ ಏನ್ ಮಾಡ್ತಿದ್ದರು?  ರಾಜೀನಾಮೆ ಅಂಗೀಕಾರ ಮಾಡೋಕೆ ಅಷಟೊಂದು ಟೈಮ್ ಬೇಕಿತ್ತಾ?’

ಪಟ್ಟಂತ ಡಿಸೈಡ್ ಮಾಡಬಹುದಿತ್ತು. ಆದರೆ ಸ್ಟಡಿ ಮಾಡಬೇಕು, ವಿಚಾರಣೆ ಮಾಡಬೇಕು ಅಲ್ಲವಾ? ಹಂಗೆಲ್ಲ ಏಕಾಏಕಿ ನಿರ್ಧಾರ ತಗೊಳ್ಳಕ್ಕೆ ಸಾಧ್ಯವಾ? ಈಗ ನೋಡಿ ಮುಂಬೈವಾಲಾಗಳು ದೆಹಲಿಗೆ ಅರ್ಜಿ ಸಲ್ಲಿಸಿ ಎಷ್ಟು ದಿನಾ ಆಯ್ತು? ನಿರ್ಧಾರ ತಗೊಳ್ಳಕ್ಕೆ ಆಯ್ತಾ? ತಲೆಕೆಟ್ಟು ಕೆರ ಹಿಡಿದು, ನೀವೇ ಒಂದ್ ಸಲ ಮುಂದಕ್ಕೆ ಹಾಕಿದ್ರಿ. ಇವತ್ ನೋಡಿದ್ರೆ 4 ತಾಸು ವಿಚಾರಣೆ ನಡೆಸಿದರೂ ಮೂರ್ಮಂದಿಗೆ ನಿರ್ಣಯ ತಗಳಕ್ಕೆ ಆಗ್ಲಿಲ್ಲ. ಅಂಥದ್ದರಲ್ಲಿ ಒಬ್ಬರೇ ಸ್ಪೀಕರ್ ಪಟ್ಟಂತ ನಿರ್ಣಯ ಕೈಗೊಳಬೇಕಿತ್ತು ಅನ್ನಾದು ನ್ಯಾಯವೇ ಸ್ವಾಮಿ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...