Homeರಾಜಕೀಯಇದು ಮೊದಲೇ ಹೊಳೀಲಿಲ್ಲ ಬ್ರದರ್!

ಇದು ಮೊದಲೇ ಹೊಳೀಲಿಲ್ಲ ಬ್ರದರ್!

- Advertisement -
- Advertisement -

ಸದ್ಯದ ಕರ್ನಾಟಕದಲ್ಲಿ ಎಲ್ಲಿ ನೋಡಿದರೂ ಅಳುಮೋರೆ ಕಾಣುತ್ತಿವೆ. ಸರಳ ಬಹುಮತ ಪಡೆವ ಸಂತೋಷದಲ್ಲಿದ್ದ ಸಿದ್ದು ಮುಖ ನೋಡಲಾಗುತ್ತಿಲ್ಲ. ಗೆದ್ದು ಬಹುಮತ ಪಡೆದು 24 ಗಂಟೆಯಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಪಡೆವ ತಯಾರಿ ನಡೆಸಿದ್ದ ಯಡ್ಡಿ ಮುಖ ಕಾದ ಹೆಂಚಿನಂತೆ ರವಗುಡುತ್ತಿದೆ. ಇನ್ನು ಗೆದ್ದ 24 ಗಂಟೆಯಲ್ಲಿ ರೈತರ ಸಾಲ ಫೈಸಲ್ ಎಂದಿದ್ದ ಕುಮಾರಣ್ಣ ಪೈಲ್ಸ್ ವ್ಯಾಧಿಯ ಮುಖಭಾವದಲ್ಲಿ ಅವುಡು ನುರಿಯುತ್ತಿದ್ದಾರೆ. ಹಾಗೂ ತಡೆದುಕೊಳ್ಳಲಾರದವರಂತೆ ಎಮ್ಮೆಕರುವಿನಂತೆ ಅತ್ತೇಬಿಟ್ಟಿದ್ದಾರೆ. ಇದರ ನಿಗೂಢ ಕಾರಣ ತಿಳಿಯಲು ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್ ಟೋನ್: ನಿನಗ್ಯಾರಿದ್ದರೇನೂ ಸುಖವಿಲ್ಲ ಪ್ರಭುವೇ, ದಾರಿ ಸುಖವಿಲ್ಲ, ಬಾಯಾರಿತು ಎಂದು ಕಾಂಗೈ ಬಾಗಿಲಿಗೋದೆ, ಬಾಗಿಲ ತೆಗೆಯದೆ ಗದರಿದರಲ್ಲೋ………. ‘ಹಲೋ ಯಾರು’
“ನಾನು ಸಾರ್ ಯಾಹೂ”
“ಒಂದು ನಿಮಿಷ ಬ್ರದರ್ ನಂತರ ಕಾಲ್ ಮಾಡ್ತೀನಿ”
“ನನಿಗೂ ಒಂದೇ ನಿಮಿಷ ಸಾರ್ ಡೆಡ್‍ಲೈನು”
“ಅದೇನು ಕೇಳಿ”
“ಯಾಕ್ ಸಾರ್ ಸೊರಗರಿಯೋ ಶಬ್ದ, ಅಳತಾಯಿರಂಗಿದೆ”
“ಇನ್ನೇನು ಮಾಡ್ಲಿ ಬ್ರದರ್, ಈಚೆಗೆ ಯಾಕೋ ತುಂಬಾ ಅಳು ಬರ್ತಾಯಿದೆ”
“ಅದು ಹೇರ್ಡಿಟಿ ಸಾರ್ ತಡಕೋಬೇಕು”
“ಹೇರ್ಡಿಟಿನಾ”
“ಹೌದು ಸಾರ್ ದೇವೇಗೌಡ್ರು ತುಂಬ ಅಳತಿದ್ರು”
“ತಂದೆಯವರ ಅಳು ಯಾಕೆ ಅಂದ್ರೇ, ಅದಕ್ಕೆ ಒಂದು ಉನ್ನತ ಮಟ್ಟದ ಕಾರಣ ಇರತಿತ್ತು”
“ನಿಮಗೆ ಕಾರಣ ಇಲ್ದೇ ಅಳು ಬರುತ್ತ”
“ಹೌದು ಬ್ರದರ್”
“ಸಾರ್, ಯಾವುದ್ಕೂ ಮನೋ ವೈದ್ಯರ ಕೇಳಿಬಿಡಿ, ಯಾಕಂದ್ರೆ ಮುಖ್ಯಮಂತ್ರಿ ಸಾರ್ವಜನಿಕವಾಗಿ ಅಳುಬಾರ್ದು. ನೋಡಿ ಈಗಾಗ್ಲೆ ಮಂಡ್ಯದ ಕಡೆ ಕೆಲುವು ತಿಕ್ಕಲಗಳು, ತಾವು ಅಳು ಸುರು ಮಾಡಿಕೊಂಡಿರದಲ್ದೇ, ಕಾಂಗ್ರೆಸ್‍ನವುರ ಬೈತಾ ಅವೆ. ಯಂಗೆ ಅಂದ್ರೆ, ಕಿವಿಕೊಟ್ಟು ಕೇಳಕ್ಕಾಗಲ್ಲ. ಇನ್ನೂ ಕೆಲುವು, ಆ ಸಿದ್ದರಾಮಯ್ಯನೇ ಕಾರಣ ಅಂತ, ಜಾತಿ ಹೆಸರಿಡದೇ ಬೈತಾ ಕುಂತವೇ. ಆದ್ರಿಂದ ನಿಮಗೆ ಅಳು ಬಂದಾಗ ಒಂದು ರೂಮಿಗೆ ಹೋಗಿ ಅತ್ತು ಬುಡಿ, ಸಾರ್ವಜನಿಕವಾಗಿ ಅಳುಬೇಡಿ”
“ನೋಡಿ ಬ್ರದರ್, ಸಡನ್ನಂತ ಅಳು ಬಂದಾಗ ರೂಮು ಹುಡುಕಿಕೊಂಡು ಓಡಕ್ಕಾಗಲ್ಲ, ಒಂದ ಮಾಡ್ತಕ್ಕಂತ ಅಥವಾ ಕಕ್ಕಸ್ ಮಾಡೋ ಸಂದರ್ಭ ಸೃಷ್ಟಿಯಾದಾಗ ಆ ತರದಲ್ಲಿ ಒಂದು ತೀರ್ಮಾನ ತಗೊಳೋ ಬಗ್ಗೆ ಯೋಚಿಸಬವುದು. ಸಡನ್ನಂತ ಅಳು ಬಂದ್ರೆ ಅಳಬೇಕಾಗುತ್ತೆ”
“ಅಳು ಬಂದಾಗ ನಿಮ್ಮ ವೈರಿಗಳ ನೆನೆಸಿಕೊಳ್ಳಿ ನಿಂತೋಯ್ತದೆ”
“ಈಗ್ಯಾರು ವೈರಿಗಳಿಲ್ಲ ಬ್ರದರ್”
“ನಿಜ ಸಾರ್, ವೈರಿಗಳನ್ನೆಲ್ಲಾ ಕರದು ಒಂದೇ ಟೇಬಲಿನಲ್ಲಿ ಊಟ ಹಾಕಿರೋದ್ರಿಂದ ಅವುರೂ ಇಲ್ಲ. ನನಗನ್ನಿಸುತ್ತೆ ಸಾರ್ ನಿಮ್ಮ ಅಳುವಿಗೆ ಖಾಸಗಿ ಕಾರಣ ಇರಬುವುದು”
“ಖಾಸಗಿ ಕಾರಣ ಯಾವುದೂ ನಮ್ಮ ಬಾವುನೆಗೆ ಬರ್ತಾಯಿಲ್ಲ”
“ಅದು ನಿಮಗೆ ಗೊತ್ತಾಗಲ್ಲ ಸಾರ್, ಸಿದ್ದರಾಮಯ್ಯ ಒಂದು ಸತಿ ಅತೃ. ಯಾಕಂದ್ರೆ ಮಗ ತೀರೋಗಿದ್ದ. ಎಡೂರಪ್ಪ ಒಂದು ಸತಿ ಬಿಕ್ಕಡಿಸಿಕಂಡು ಅತೃ ಯಾಕೇಳಿ?”
“ನೀವೆ ಹೇಳಿ”
“ಶೋಭಕ್ಕನ್ನ ಸಂಪುಟದಿಂದ ತೆಗೀರಿ ಅಂತ ರೆಡ್ಡಿಗಳು ಗುಡ್ಡ ಹಗಿಯದ್ನೆ ನಿಲ್ಲಿಸಿದ್ರು. ಆಗ ಎಡೂರಪ್ಪ ಯಮ್ಮೆ ಕಳಕಂಡ ಕೋಣನ ತರ ಅತ್ತಿದ್ರು. ಹಾಗೆ ನಿಮ್ಮದು ಯಾವುದೋ ಖಾಸಗಿ ಕಾರಣ ಇರಬವುದು ಹುಡುಕಿ”
“ಇಲ್ಲ ಬ್ರದರ್”
“ಒಂದು ಕೆಲಸ ಮಾಡಿ ಸಾರ್, ರಾಧಕ್ಕನ ಮನೆಗೋಗಿ ಇದ್ದು, ಶಮಿಕನ್ನ ಮುದ್ದಾಡಿ ಬಂದ್ರೆ ಅಳು ನಿಲ್ಲಬವುದು ನೋಡಿ”
“ಅದ್ಯಲ್ಲ ಈಗ ಸಾಧ್ಯಯಿಲ್ಲ”
“ಅದೇ ಅಳುವಿನ ಮೂಲ ಇರಬವುದು ಸಾರ್”
“ಇಲ್ಲ ಬ್ರದರ್, ನನ್ನ ಅಳುಗೆ ಒಂದೇ ಕಾರಣ ಇಲ್ಲ ಅಂತ ನನ್ನ ಮನಸು ಹೇಳ್ತಾಯಿದೆ”
“ಇರಬವುದು ಸಾರ್, ದಡ್ಡತನಗಳಿಂದ ಮಾಡಿಕೊಂಡ ಅನಾಹುತಗಳೂ ಕಾರಣ ಆಗಿರಬವುದು”
“ದಡ್ಡತನ ನಾನು ಯಾವತ್ತೂ ಮಾಡಿಲ್ಲ ಬ್ರದರ್, ಯಲ್ಲಾ ಸನ್ನಿವೇಶಗಳನ್ನ ತುಂಬಾ ಬುದ್ದಿವಂತಿಕೆಯಿಂದ್ಲೆ ಸರಿಪಡಿಸತಕ್ಕಂತ ಕಾರ್ಯವನ್ನೆ ಪ್ಳಾನ್ ಮಾಡಿದ್ದೀನಿ”
“ನೋಡಿ ಸಾರ್, ನಿಮ್ಮ ಇವತ್ತಿನ ಸ್ಥಿತಿ ಊಹೆ ಮಾಡಿದ್ರೋ ಇಲ್ಲವೋ. ಮುಖ್ಯಮಂತ್ರಿಯಾದ 25 ಗಂಟೇಲಿ ರೈತರ ಸಾಲ ಮನ್ನಾ ಅಂದ್ರಿ, ರೈತರಿಗೆ ನೀವು ನನ್ನ ಉಳಿಸಿದ್ರೆ ನಾನು ನಿಮ್ಮನ್ನ ಉಳುಸ್ತೀನಿ ಅಂದ್ರಿ, ಇನ್ನ ನಿಮ್ಮ ಪ್ರಣಾಳಿಕೇಲಿದ್ದ ಅಶ್ವಾಸನೆ ನೋಡಿದ್ರೆ ಯಂಥಾ ಸರಕಾರ ಬಂದ್ರೂ ಈಡೇರಸಕ್ಕೆ ಸಾಧ್ಯವೇಯಿಲ್ಲ, ಅಂಗಿದ್ದೋ. ನಿಮಗೇನಾರ ತಲೆ ಇದ್ರೆ ನನ್ನ ಅಧಿಕಾರದ ಅವಧೀಲಿ ರೈತರ ಸಾಲ ಪೂರ್ಣ ಮನ್ನಾ ಮಾಡ್ತೀನಿ ಅನ್ನಬವುದಿತ್ತು. ಆಗ 5 ವರ್ಷ ಅವಕಾಶ ಸಿಗುತ್ತಿತ್ತು. ಈಗ ನೋಡಿ ಯಾರೋ ಕೆಲವೇ ಕೆಲವು ರೈತರ ಸಾಲ ಮನ್ನಾ ಕಾರಣಕ್ಕೆ ಇಡೀ ಕರ್ನಾಟಕದ ಜನ ತೆರಿಗೆ ತೆರಬೇಕಾಗ್ಯದೆ. ನಾನು ಅಧ್ಯಯನ ಮಾಡಿದ ಕೆಲವು ಜನ ರೈತರು, ಯಾಕೆ ಲಕ್ಷಲಕ್ಷ ಸಾಲ ಮಾಡ್ಯವುರೆ ಗೊತ್ತಾ”
“ಗೊತ್ತಿಲ್ಲ ಹೇಳಿ ಬ್ರದರ್”
“ವರದಕ್ಷಿಣೆ, ಕಲ್ಯಾಣ ಮಂಟಪ, ಬೀಗರೂಟ, ಇಂತ ಅಂದಾದುಂದಿ ಜನ ಲಕ್ಷಲಕ್ಷ ಸಾಲ ಮಾಡಿದ್ರು. ಆದ್ರೆ ನಿಜವಾದ ರೈತರು ಸಣ್ಣ ಸಾಲ ಮಾಡಿದ್ರು. ಅದು ಗೊತ್ತಿದ್ದ ಸಿದ್ದರಾಮಯ್ಯ ಐವತ್ತು ಸಾವುರದವರೆಗೂ ಮನ್ನಾ ಮಾಡಿದ್ರು ಅದು ಸರಿಯಾಗಿತ್ತು”
“ಬ್ರದರ್ ನಿಮ್ಮ ಮಾತಿನ ಭಾವುನೆಗಳಿಂದ ನೀವು ರೈತರ ವಿರೋಧಿಗಳು ಅಂಬತಕ್ಕಂತ ತೀರ್ಮಾನಕ್ಕೆ ಬರಬೇಕಾಯ್ತದೆ. ರೈತರು ಸಾಲ ಮಾಡಿ ಮದುವೆ ಮಾಡಿದಾರೆ ಅನ್ನತಕ್ಕಂತ ಮಾತನ್ನ ನಾನು ಒಪ್ಪಲ್ಲ”
“ಆಯ್ತು ಸಾರ್, ತೀರಸಕಾಗದೇಯಿದ್ರು ಲಕ್ಷಾಂತೃಪಾಯಿ ಸಾಲ ಯಾಕ್ ಮಾಡ್ತಾರೆ ಅನ್ನದನ್ನಾರೆ ಪತ್ತೆಹಚ್ಚಿ, ಒಂದುವೇಳೆ ಮದುವೆ ಕಾರಣಕ್ಕೆ ಸಾಲ ಮಾಡದಾದ್ರೆ, ಕುವೆಂಪುರವರ ಮಂತ್ರಮಾಂಗಲ್ಯ ಮದುವೆ ಜಾರಿಗೆ ತನ್ನಿ. ಇಲ್ಲ ಅಂದ್ರೆ ನೀವು ರಾಧಿಕನ್ನ ಮದುವೆ ಆದ್ರಲ್ಲ ಆತರ ಆಗದಕ್ಕೆ ಪ್ರೋತ್ಸಾಹ ಕೊಡಿ. ರೈತರು ಉಳಕತ್ತರೆ. ಇಲ್ಲ ಅಂದ್ರೆ ಅವರು ಸಾಲ ಮಾಡದು, ನೀವು ತೀರಸದು, ಅನ್ನದಾದ್ರೆ ಕರ್ನಾಟಕದ ಸಾಮಾನ್ಯ ಜನಗಳ ಪಾಡೇನು ಸಾರ್”
“ನೀವು ಹೇಳತಕ್ಕಂತ ವಿಷಯದಲ್ಲಿ ಯೋಚನೆ ಮಾಡ್ತಕ್ಕಂತ ಭಾವುನೆಗಳೇನಿವೆ, ಅವುಗಳನ್ನ ಚಿಂತನೆ ಮಾಡ್ತೀನಿ. ಆದ್ರೆ ರೈತರ ಸಾಲದ ವಿಷಯದಲ್ಲಿ ನಾನು ತಗಂಡ ತೀರ್ಮಾನ ಸರಿ ಬ್ರದರ್”
“ನೀವು ಅಧಿಕಾರಕ್ಕೆ ತಂದ್ರೆ ನಾನು ಸಾಲಮನ್ನಾ ಮಾಡ್ತೀನಿ ಅಂದಿದ್ರಿ, ಆದ್ರೆ ಜನ 38 ಸೀಟು ಕೊಟ್ರು. ಆದ್ರಿಂದ ಪ್ರತಿಯೊಬ್ಬ ರೈತನ 38 ಸಾವಿರ ಸಾಲ ಮಾತ್ರ ಮನ್ನಾ ಅನ್ನಬೇಕಾಗಿತ್ತು”
“ಇದು ಮೊದಲೆ ಹೊಳಿಲಿಲ್ಲವಲ್ಲ ಬ್ರದರ್”
“ಥೂತ್ತೇರಿ”,

– ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...