Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತರಾಜ್ಯ ಎಲ್ಡು ಭಾಗ ಆಗ್ಲಿ, ಒಂದು ಭಾಗದ ಖಾತೆಪಾಣಿ ನನ್ನಪ್ಪನ ಹೆಸರಿನ್ಯಾಗೆ ಐತೆ....

ರಾಜ್ಯ ಎಲ್ಡು ಭಾಗ ಆಗ್ಲಿ, ಒಂದು ಭಾಗದ ಖಾತೆಪಾಣಿ ನನ್ನಪ್ಪನ ಹೆಸರಿನ್ಯಾಗೆ ಐತೆ….

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಕಟ್ಟುಮಸ್ತಾದ ದೇಹದವರು ಕಂಡರೆ ಕಿಯ್ಯೋ ಕಿಯ್ಯೋ ಎಂದು ಕಿರುಚಾಡಿಕೊಂಡು ಓಡಿಹೋಗುವ ಬ್ಲೂಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಅಖಿಲಭಾರತ ಉಂಡಾಡಿಗುಂಡರ ಪರಿಷತ್ತಿನ ಪುಕ್ಕಲರ ರಣಹೇಡಿ ಕೃತ್ಯವೊಂದು ಬಯಲಾಗಿದೆ. ಜಾರ್ಖಂಡ್‍ನಲ್ಲಿ ಭಾಷಣವೊಂದನ್ನು ಮುಗಿಸಿ ಬರುತ್ತಿದ್ದ ಸ್ವಾಮಿ ಅಗ್ನಿವೇಶ್ ಎಂಬ 80 ವರ್ಷದ ಇಳಿವೃದ್ಧ ಹೋರಾಟಗಾರರ ಮೇಲೆ ಬ್ಲೂಜೆಪಿಯ ಸಣಕಲುತೊಡೆಯ ಕೋಡಂಗಿಗಳು ಮುಗಿಬಿದ್ದು ಹಲ್ಲೆ ನಡೆಸಿವೆ. ವೃದ್ಧರು, ಮಹಿಳೆಯರನ್ನು ಕಂಡರೆ ಇದ್ದಕ್ಕಿದ್ದಂತೆ ಗಂಡಸರಾಗುವ ಈ ಕ್ರಿಮಿಗಳು ಮತ್ತು ಹುಳಹುಪ್ಪಟೆಗಳ ಪಡೆಯು ಹೊಡೆಯುವುದು ಬಡಿಯುವುದು ಮಾಡುವುದು ಈ ದೇಶದಲ್ಲಿ ಸಾಮಾನ್ಯವಾಗಿ ಹೋಗಿದೆ. ಈ ಲಂಪಟಕ್ರಿಮಿಗಳ ಅನಧಿಕೃತ ಪಿತಾಶ್ರೀ ಬ್ಲೂಜೆಪಿಯ ಪಿಶಾಚಿ ನಾಯಕರು ಮತ್ತವರ ಪುಕ್ಕಲು ಮುದುಕ ಮಾತ್ರ ಈ ಬಗ್ಗೆ ಕ್ಯಾರೆ ಕೆತ್ತ ಎನ್ನದೆ ಗಂಟಲಿಗೆ ಸೋರೆಕಾಯಿ ಸಿಗಿಸಿಕೊಂಡು ನಸುಗುನ್ನಿಗಳಂತೆ ಸುಮ್ಮನಿರುವುದು ಮೂರೂಬಿಟ್ಟವರಿಗಿಂತ ಕಡೆಯಾಗಿ ಕಾಣುತ್ತಿರುವುದು ಈ ದೇಶದ ವಾಸ್ತವ.
*****
ಬಾಯಿ ಬಿಟ್ಟರೆ ಸುಳ್ಳುಗಳ ಚರಂಡಿಯನ್ನೇ ಹರಿಸುವ ಅರಳುಮರುಳು ಲೂಸು ಗಿರಾಕಿ ಫಕೀರಪ್ಪನ ಸುಳ್ಳಿನ ಹೊಡೆತ ತಾಳಲಾಗದೆ ಅವನು ಭಾಷಣ ಮಾಡುತ್ತಿದ್ದ ಪೆಂಡಾಲೇ ಸಭಿಕರ ತಲೆಯ ಮೇಲೆ ಧುಡುಮ್ಮನೆ ಕುಸಿದು ಬಿದ್ದಿರುವ ಘಟನೆ ವರದಿಯಾಗಿದೆ. ಪೆಂಡಾಲ್ ಕುಸಿದ ಮೇಲೂ ತನ್ನ ಕೊಳಕುಬಾಯಿಯ ದರಿದ್ರ ಭಾಷಣವನ್ನು ನಿಲ್ಲಿಸದ ಲೂಸ್ ಗಿರಾಕಿ ಫಕೀರಪ್ಪನು ಯಾರ್ ಸತ್ರೆ ನಂಗೇನು ಎಂದು ಕಯೋ ಕಯೋ ಕಯ್ಯಯ್ಯೋ ಅಂತ ಸುಳ್ಳು ಬೊಗಳುತ್ತಲೇ ಇದ್ದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
*****
ಇದೀಗ ಬಂದ ಸುದ್ದಿ, ತಲೆಕೆಟ್ಟ ಬೀದಿ ಭಿಕಾರಿಯಂತೆ ಐದೂವರೆ ಅಡಿ ಗಡ್ಡ ಬೆಳೆಸಿಕೊಂಡು ಪೋಲಿ ತಿರುಗುವ ‘ಅಂದ್ರುಗಿನ ಸ್ತ್ರೀ ರಾಮುಲು’ ಈಗ ಹೊಸದಾಗಿ ಇನ್ನೊಂದು ಕಲ್ ಚಪ್ಪಡಿ ತಗೊಂಡು ಹೊಟ್ಟೆ ಮೇಲೆ ಎತ್ತಾಕಿಕೊಂಡಿದ್ದಾನೆ. ಕರ್ನಾಟಕ ನಮ್ಮಪ್ಪನ ಮನೆ ಆಸ್ತಿ, ಅದರ ಮೇಲೆ ನಾನು ಖಾತೆಪಾಣಿ ಮಾಡಿಸ್ಕೊಂಡಿದೀನಿ, ಆದ್ರಿಂದ ರಾಜ್ಯ ಎರಡು ಭಾಗ ಆಗಬೇಕು, ಒಂದು ಭಾಗದಲ್ಲಿ ಯಾರಾದ್ರೂ ಇದ್ಕೊಳ್ಳಿ, ಇನ್ನೊಂದು ಭಾಗವನ್ನ ನಾನು ‘ಟೋಫನ್ ತಲೆ ರೆಡ್ಡಿ’ ಇಬ್ರೂ ಹಂಚಿಕೊಂಡು ಉಪ್ಪಿನಕಾಯ್ ಹಾಕ್ಕೊಂಡು ನೆಕ್ಕೋತೀವಿ ಅಂತ ‘ಸ್ತ್ರೀ ರಾಮುಲು’ ಬೊಗಳಿದೆ. ಮಾತೆತ್ತಿದರೆ ನಮ್ದು ಅಖಂಡ ಭಾರತ, ಜಗತ್ತಲ್ಲಿರೋ ಎಲ್ಲ ದೇಶಗಳೂ ಭಾರತಕ್ಕೇ ಸೇರಬೇಕು ಅಂತ ಗಂಟಲು ಹರಿದುಕೊಳ್ಳೋ ಬ್ಲೂಜೆಪಿ ಪಕ್ಷದಲ್ಲಿದ್ದು, ಇಂತಹ ರಾಜ್ಯ ಒಡೆಯುವ ನಮಕ್ ಹರಾಮ್ ಕೆಲಸಕ್ಕೆ ಸಪೋರ್ಟ್ ಮಾಡ್ತೀನಿ ಅಂದ ರಾಮುಲುಗೆ ಈಗ ಜೀವಭಯ ಎದುರಾಗಿ ಹಾರ್ಟು ‘ಚುಟು ಚುಟು, ಚುಮು ಚುಮು’ ಅಂತಾ ಇದೆಯಂತೆ. ಚಳ್ಳಕೆರೆ ಕಡೆಯ ಕನ್ನಡಪರ ಹೋರಾಟಗಾರರು “ರಾಮುಲು ಎಲ್ಲೇ ಕಂಡರೂ ಅವನ ಮುಖವೇ ಹೂತುಹೋಗಿರೋ ಗಡ್ಡಕ್ಕೆ ಸೀಮೆಣ್ಣೆ ಎರಚಿ ಬೆಂಕಿ ಹಚ್ಚಿ, ಸುಟ್ಟ ಗಡ್ಡದ ಬೂದಿಯನ್ನ ಅವನಿಗೇ ತಿನ್ನಿಸ್ತೀವಿ ಅಂತ “ ಇನ್ನೂ ಬೆದರಿಕೆ ಹಾಕಿಲ್ಲವೆಂದು ತಿಳಿದು ಬಂದಿದೆ.
*****
ಸಾವಿರಾರು ವರ್ಷಗಳಿಂದ ಮೈಬಗ್ಗಿಸಿ ದುಡಿದು ತಿಂದು ಗೊತ್ತೇ ಇರದ ಸನಾತನಿ ಶನಿಗಳು, ಕಳೆದ 30 ವರ್ಷಗಳಿಂದ ಶ್ರೀರಾಮನಿಗೆ ಗುಡಿ ಕಟ್ಟುವ ಟಪಾಸ್ ಅಡ್ವೆಂಚರ್ ಮಾಡುತ್ತ ತಿರುಗುತ್ತಿರುವುದು ನಿಮಗೆ ಗೊತ್ತೇ ಇದೆ. ಈ ಅಡ್ವೆಂಚರ್‍ನಲ್ಲಿ ಮಂಚೂಣಿಯಲ್ಲಿದ್ದ ಸಂಘಟನೆಗಳಲ್ಲಿ ಒಂದಾದ ‘ನಿರ್ಮೋಹಿ ಮಂಚ್’ ಸಂಘಟನೆಯು ರಾಮನಗುಡಿ ಕಟ್ತೇವೆಂದು ಸಾವಿರಾರು ಕೋಟಿ ಚಂದಾ ಎತ್ತಿದ ವಿ.ಹೆಚ್.ಪಿಯು ಆ ಹಣದಲ್ಲಿ ಒಂದು ಇಟ್ಟಿಗೆಯನ್ನೂ ಖರೀದಿಸದೆ ಇಡೀ ಚಂದಾಹಣವನ್ನು ಮುಂಡಾ ಮೋಚಿದೆಯೆಂದು ಆಕ್ರೋಶ ವ್ಯಕ್ತಪಡಿಸಿದೆ. ಇದು ಒಂದು ಕಡೆಯಿರುವಾಗ ಇನ್ನೊಂದು ಕಡೆಯಲ್ಲಿ 2019ರ ಎಲೆಕ್ಷನ್ನಿಗೆ ಮುಂಚೆ ರಾಮನಗುಡಿ ಕಟ್ತೀವಿ ಅಂತ ಹೇಳಿಕೆ ಕೊಟ್ಟ ಗುಜರಾತಿನ ಹಳೇ ಕ್ರಿಮಿನಲ್ ಪಂಟರ್ ‘ಹಮಿತ್ ಶಾ’ ಗಂಟಲಿಗೆ ಬ್ಲೂಜೆಪಿ ಪಕ್ಷ ತನ್ನ ಬಲಗಾಲನ್ನು ತುರುಕಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದೆ. ಈ ಬೋಡಗುಂಡನ ಮಾತು ನಂಬಬೇಡಿ, ರಾತ್ರಿ ಹೊಡೆದ ಬಿಟ್ಟಿ ಎಣ್ಣೆ ಏಟಲ್ಲಿ ಹಿಂಗೆಲ್ಲ ವದರವ್ನೆ, ಇವನ ಮಾನಸಿಕ ಸ್ಥಿತಿ ಡೋಲಾಯಮಾನವಾಗಿದೆಯೆಂದು ಸ್ಪಷ್ಟನೆ ಕೊಟ್ಟಿದೆ. ಅಂದಹಾಗೆ, ಇವರ ರಾಮನಗುಡಿ ಅಡ್ವೆಂಚರ್ ಮುಂದಿನ 500 ವರ್ಷಕ್ಕೂ ಮುಂದುವರೆಯಲಿದೆ ಎಂಬುದು ಜನತೆಗೆ ಸ್ಪಷ್ಟವಾಗಿದೆ.
*****
ದೇಶದ ರಕ್ಷಣಾ ಢಾಕಿಣಿ, ಅಲ್ಲಲ್ಲ ಮಂತ್ರಿಣಿಯಾದ ‘ನಿರ್ಮಲಾ ರಾಮಸೀತನ್’ ಎಂಬ ಮಧ್ಯವಯಸ್ಕ ಮಹಿಳೆಯು.. ಲೋಕಸಭೆ ಚುನಾವಣೆಗಿಂತ ಮುಂಚೆ ಕಾಂಗ್ರೆಸ್ ದೇಶದಲ್ಲಿ ಕೋಮು ಗಲಭೆಗಳನ್ನು ಹುಟ್ಟು ಹಾಕುವ ಸಂಚು ಮಾಡುತ್ತಿದೆಯೆಂದು ಹಾಸ್ಯಾಸ್ಪದ ಹೇಳಿಕೆಯೊಂದನ್ನು ಕೊಟ್ಟಿದೆ. ಕೋಮುಗಲಭೆಗಳನ್ನು ದೇಶದ ತುಂಬೆಲ್ಲ ಎರಚಾಡಿ, ಸತ್ತವರ ಹೆಣದ ಮೇಲೆ ತಟ್ಟೆಯಿಟ್ಟುಕೊಂಡು ಅಧಿಕಾರ ಸವಿಯುತ್ತಿರೋ ಪೆಕರು ಪಡಪೋಶಿಗಳ ಪಕ್ಷದಲ್ಲಿದ್ದು, ತನ್ನ ತಟ್ಟೆಯಲ್ಲಿ ಕುದುರೆ ಸತ್ತುಬಿದ್ದಿದ್ದರೂ ಕಂಡವರ ತಟ್ಟೆಯಲ್ಲಿ ಅಮೀಬಾ ಹುಡುಕುವ ಈ ಮತಿಗೇಡಿ ಮಹಿಳೆಗೆ ತಲೆ ಎಂಬುದು ಇದೆಯೇ ಇಲ್ಲವೇ ಎಂಬುದು ಈಗ ಚರ್ಚಾಸ್ಪದ ಸಂಗತಿಯಾಗಿದೆ. ಅತ್ತ ಚೀನಾದೇಶವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಾಜಾರೋಷವಾಗಿ ಬಂಕರ್‍ಗಳನ್ನು ಕಟ್ಟಿಕೊಂಡು ಪಾಕ್ ಜೊತೆ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದರೆ, ಆ ಅಪಾಯದ ಬಗ್ಗೆ ಕಿಂಚಿತ್ ಗ್ಯಾನವಿಲ್ಲದ ಈ ಮೂರ್ಖಮ್ಮನಿಗೆ ‘ಬಾಯಿಗೆ ಬಂದಂಗೆ ಮಾತಾಡಿಕೊಂಡು ಎಲ್ಲರಿಂದ ಉಗಿಸಿಕೊಳ್ಳುವುದೇ’ ಪ್ರಿಯವಾಗಿರುವುದು ದುರಂತ.

*****

ತರೀಕೆರೆಯ ರೈತರು ತಮ್ಮ ಹೊಲಗದ್ದೆಗಳಿಗೆ ಕಂಟಕಪ್ರಾಯವಾಗಿದ್ದ ಕಾಡುಪ್ರಾಣಿಗಳನ್ನು ಓಡಿಸಲು ಬ್ಲೂಜೆಪಿ ಪಕ್ಷದ ನ್ಯಾಷನಲ್ ಲೀಡರುಗಳ ಕಟೌಟ್‍ಗಳನ್ನು ಹೊಲದಲ್ಲಿ ನೆಟ್ಟು ಪ್ರಾಣಿಕಾಟದಿಂದ ಮುಕ್ತರಾಗಿದ್ದಾರೆ. ಸತ್ತು ಕೊಳೆತ ಘೇಂಡಾಮೃಗದಂತೆ ಕಾಣುವ ‘ಹಮಿತ್ ಶಾ’, ವಯಸ್ಸಾದ ಓತಿಕ್ಯಾತಕ್ಕೆ ಬಿಳಿ ಗಡ್ಡಮೀಸೆ ಬಂದಂತೆ ಕಾಣುವ ಪಕೋಡತಾತ, ಅಡುಗೂಲಜ್ಜಿ ಮುದುಕಿಗೆ ಬಿಳಿ ಪ್ಯಾಂಟು ಶರ್ಟು ಹಾಕಿದಂತೆ ಕಾಡುವ ‘ ಧಡಿಯೂರಪ್ಲ’ನ ಕಟೌಟುಗಳ ಮುಸುಡಿಗಳನ್ನು ಕಂಡು ಹೆದರಿದ ಹೊಲ ಮೇಯಲು ಬರುವ ಕಾಡುಹಂದಿ, ಸಿಂಗಳೀಕ, ಮುಸಿಯ, ಕಾಡೆಮ್ಮೆಗಳು ಉಚ್ಚೆ ಹೊಯ್ದುಕೊಂಡು ವಾಪಸ್ ಕಾಡೊಳಗೆ ಓಡಿ ಹೋಗುತ್ತಿರುವುದು ರೈತರ ಸಂತೋಷಕ್ಕೆ ಕಾರಣವಾಗಿದೆ. ಜನರಿಗಂತೂ ಈ ಕಟೌಟ್ ಮುಷಂಡಿಗಳಿಂದ ಮೂರುಕಾಸಿನ ಪ್ರಯೋಜನ ಇಲ್ಲ, ಕೊನೇಪಕ್ಷ ಕಾಡುಪ್ರಾಣಿಗಳಿಗೆ ಉಚ್ಚೆ ಹುಯ್ಯಿಸಲಾದರೂ ಈ ಕ್ರಿಮಿಗಳು ಬಳಕೆಯಾದವಲ್ಲ ಎಂದು ಗಬ್ಲಿಕ್ ಟಿವಿ ರಂಗಣ್ಣ ಗೊಳೋ ಎಂದು ಅಳುತ್ತ ಕುಳಿತಿದ್ದಾರಂತೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ
ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...