Homeರಾಜಕೀಯಇದು ಮೊದಲೇ ಹೊಳೀಲಿಲ್ಲ ಬ್ರದರ್!

ಇದು ಮೊದಲೇ ಹೊಳೀಲಿಲ್ಲ ಬ್ರದರ್!

- Advertisement -
- Advertisement -

ಸದ್ಯದ ಕರ್ನಾಟಕದಲ್ಲಿ ಎಲ್ಲಿ ನೋಡಿದರೂ ಅಳುಮೋರೆ ಕಾಣುತ್ತಿವೆ. ಸರಳ ಬಹುಮತ ಪಡೆವ ಸಂತೋಷದಲ್ಲಿದ್ದ ಸಿದ್ದು ಮುಖ ನೋಡಲಾಗುತ್ತಿಲ್ಲ. ಗೆದ್ದು ಬಹುಮತ ಪಡೆದು 24 ಗಂಟೆಯಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಪಡೆವ ತಯಾರಿ ನಡೆಸಿದ್ದ ಯಡ್ಡಿ ಮುಖ ಕಾದ ಹೆಂಚಿನಂತೆ ರವಗುಡುತ್ತಿದೆ. ಇನ್ನು ಗೆದ್ದ 24 ಗಂಟೆಯಲ್ಲಿ ರೈತರ ಸಾಲ ಫೈಸಲ್ ಎಂದಿದ್ದ ಕುಮಾರಣ್ಣ ಪೈಲ್ಸ್ ವ್ಯಾಧಿಯ ಮುಖಭಾವದಲ್ಲಿ ಅವುಡು ನುರಿಯುತ್ತಿದ್ದಾರೆ. ಹಾಗೂ ತಡೆದುಕೊಳ್ಳಲಾರದವರಂತೆ ಎಮ್ಮೆಕರುವಿನಂತೆ ಅತ್ತೇಬಿಟ್ಟಿದ್ದಾರೆ. ಇದರ ನಿಗೂಢ ಕಾರಣ ತಿಳಿಯಲು ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್ ಟೋನ್: ನಿನಗ್ಯಾರಿದ್ದರೇನೂ ಸುಖವಿಲ್ಲ ಪ್ರಭುವೇ, ದಾರಿ ಸುಖವಿಲ್ಲ, ಬಾಯಾರಿತು ಎಂದು ಕಾಂಗೈ ಬಾಗಿಲಿಗೋದೆ, ಬಾಗಿಲ ತೆಗೆಯದೆ ಗದರಿದರಲ್ಲೋ………. ‘ಹಲೋ ಯಾರು’
“ನಾನು ಸಾರ್ ಯಾಹೂ”
“ಒಂದು ನಿಮಿಷ ಬ್ರದರ್ ನಂತರ ಕಾಲ್ ಮಾಡ್ತೀನಿ”
“ನನಿಗೂ ಒಂದೇ ನಿಮಿಷ ಸಾರ್ ಡೆಡ್‍ಲೈನು”
“ಅದೇನು ಕೇಳಿ”
“ಯಾಕ್ ಸಾರ್ ಸೊರಗರಿಯೋ ಶಬ್ದ, ಅಳತಾಯಿರಂಗಿದೆ”
“ಇನ್ನೇನು ಮಾಡ್ಲಿ ಬ್ರದರ್, ಈಚೆಗೆ ಯಾಕೋ ತುಂಬಾ ಅಳು ಬರ್ತಾಯಿದೆ”
“ಅದು ಹೇರ್ಡಿಟಿ ಸಾರ್ ತಡಕೋಬೇಕು”
“ಹೇರ್ಡಿಟಿನಾ”
“ಹೌದು ಸಾರ್ ದೇವೇಗೌಡ್ರು ತುಂಬ ಅಳತಿದ್ರು”
“ತಂದೆಯವರ ಅಳು ಯಾಕೆ ಅಂದ್ರೇ, ಅದಕ್ಕೆ ಒಂದು ಉನ್ನತ ಮಟ್ಟದ ಕಾರಣ ಇರತಿತ್ತು”
“ನಿಮಗೆ ಕಾರಣ ಇಲ್ದೇ ಅಳು ಬರುತ್ತ”
“ಹೌದು ಬ್ರದರ್”
“ಸಾರ್, ಯಾವುದ್ಕೂ ಮನೋ ವೈದ್ಯರ ಕೇಳಿಬಿಡಿ, ಯಾಕಂದ್ರೆ ಮುಖ್ಯಮಂತ್ರಿ ಸಾರ್ವಜನಿಕವಾಗಿ ಅಳುಬಾರ್ದು. ನೋಡಿ ಈಗಾಗ್ಲೆ ಮಂಡ್ಯದ ಕಡೆ ಕೆಲುವು ತಿಕ್ಕಲಗಳು, ತಾವು ಅಳು ಸುರು ಮಾಡಿಕೊಂಡಿರದಲ್ದೇ, ಕಾಂಗ್ರೆಸ್‍ನವುರ ಬೈತಾ ಅವೆ. ಯಂಗೆ ಅಂದ್ರೆ, ಕಿವಿಕೊಟ್ಟು ಕೇಳಕ್ಕಾಗಲ್ಲ. ಇನ್ನೂ ಕೆಲುವು, ಆ ಸಿದ್ದರಾಮಯ್ಯನೇ ಕಾರಣ ಅಂತ, ಜಾತಿ ಹೆಸರಿಡದೇ ಬೈತಾ ಕುಂತವೇ. ಆದ್ರಿಂದ ನಿಮಗೆ ಅಳು ಬಂದಾಗ ಒಂದು ರೂಮಿಗೆ ಹೋಗಿ ಅತ್ತು ಬುಡಿ, ಸಾರ್ವಜನಿಕವಾಗಿ ಅಳುಬೇಡಿ”
“ನೋಡಿ ಬ್ರದರ್, ಸಡನ್ನಂತ ಅಳು ಬಂದಾಗ ರೂಮು ಹುಡುಕಿಕೊಂಡು ಓಡಕ್ಕಾಗಲ್ಲ, ಒಂದ ಮಾಡ್ತಕ್ಕಂತ ಅಥವಾ ಕಕ್ಕಸ್ ಮಾಡೋ ಸಂದರ್ಭ ಸೃಷ್ಟಿಯಾದಾಗ ಆ ತರದಲ್ಲಿ ಒಂದು ತೀರ್ಮಾನ ತಗೊಳೋ ಬಗ್ಗೆ ಯೋಚಿಸಬವುದು. ಸಡನ್ನಂತ ಅಳು ಬಂದ್ರೆ ಅಳಬೇಕಾಗುತ್ತೆ”
“ಅಳು ಬಂದಾಗ ನಿಮ್ಮ ವೈರಿಗಳ ನೆನೆಸಿಕೊಳ್ಳಿ ನಿಂತೋಯ್ತದೆ”
“ಈಗ್ಯಾರು ವೈರಿಗಳಿಲ್ಲ ಬ್ರದರ್”
“ನಿಜ ಸಾರ್, ವೈರಿಗಳನ್ನೆಲ್ಲಾ ಕರದು ಒಂದೇ ಟೇಬಲಿನಲ್ಲಿ ಊಟ ಹಾಕಿರೋದ್ರಿಂದ ಅವುರೂ ಇಲ್ಲ. ನನಗನ್ನಿಸುತ್ತೆ ಸಾರ್ ನಿಮ್ಮ ಅಳುವಿಗೆ ಖಾಸಗಿ ಕಾರಣ ಇರಬುವುದು”
“ಖಾಸಗಿ ಕಾರಣ ಯಾವುದೂ ನಮ್ಮ ಬಾವುನೆಗೆ ಬರ್ತಾಯಿಲ್ಲ”
“ಅದು ನಿಮಗೆ ಗೊತ್ತಾಗಲ್ಲ ಸಾರ್, ಸಿದ್ದರಾಮಯ್ಯ ಒಂದು ಸತಿ ಅತೃ. ಯಾಕಂದ್ರೆ ಮಗ ತೀರೋಗಿದ್ದ. ಎಡೂರಪ್ಪ ಒಂದು ಸತಿ ಬಿಕ್ಕಡಿಸಿಕಂಡು ಅತೃ ಯಾಕೇಳಿ?”
“ನೀವೆ ಹೇಳಿ”
“ಶೋಭಕ್ಕನ್ನ ಸಂಪುಟದಿಂದ ತೆಗೀರಿ ಅಂತ ರೆಡ್ಡಿಗಳು ಗುಡ್ಡ ಹಗಿಯದ್ನೆ ನಿಲ್ಲಿಸಿದ್ರು. ಆಗ ಎಡೂರಪ್ಪ ಯಮ್ಮೆ ಕಳಕಂಡ ಕೋಣನ ತರ ಅತ್ತಿದ್ರು. ಹಾಗೆ ನಿಮ್ಮದು ಯಾವುದೋ ಖಾಸಗಿ ಕಾರಣ ಇರಬವುದು ಹುಡುಕಿ”
“ಇಲ್ಲ ಬ್ರದರ್”
“ಒಂದು ಕೆಲಸ ಮಾಡಿ ಸಾರ್, ರಾಧಕ್ಕನ ಮನೆಗೋಗಿ ಇದ್ದು, ಶಮಿಕನ್ನ ಮುದ್ದಾಡಿ ಬಂದ್ರೆ ಅಳು ನಿಲ್ಲಬವುದು ನೋಡಿ”
“ಅದ್ಯಲ್ಲ ಈಗ ಸಾಧ್ಯಯಿಲ್ಲ”
“ಅದೇ ಅಳುವಿನ ಮೂಲ ಇರಬವುದು ಸಾರ್”
“ಇಲ್ಲ ಬ್ರದರ್, ನನ್ನ ಅಳುಗೆ ಒಂದೇ ಕಾರಣ ಇಲ್ಲ ಅಂತ ನನ್ನ ಮನಸು ಹೇಳ್ತಾಯಿದೆ”
“ಇರಬವುದು ಸಾರ್, ದಡ್ಡತನಗಳಿಂದ ಮಾಡಿಕೊಂಡ ಅನಾಹುತಗಳೂ ಕಾರಣ ಆಗಿರಬವುದು”
“ದಡ್ಡತನ ನಾನು ಯಾವತ್ತೂ ಮಾಡಿಲ್ಲ ಬ್ರದರ್, ಯಲ್ಲಾ ಸನ್ನಿವೇಶಗಳನ್ನ ತುಂಬಾ ಬುದ್ದಿವಂತಿಕೆಯಿಂದ್ಲೆ ಸರಿಪಡಿಸತಕ್ಕಂತ ಕಾರ್ಯವನ್ನೆ ಪ್ಳಾನ್ ಮಾಡಿದ್ದೀನಿ”
“ನೋಡಿ ಸಾರ್, ನಿಮ್ಮ ಇವತ್ತಿನ ಸ್ಥಿತಿ ಊಹೆ ಮಾಡಿದ್ರೋ ಇಲ್ಲವೋ. ಮುಖ್ಯಮಂತ್ರಿಯಾದ 25 ಗಂಟೇಲಿ ರೈತರ ಸಾಲ ಮನ್ನಾ ಅಂದ್ರಿ, ರೈತರಿಗೆ ನೀವು ನನ್ನ ಉಳಿಸಿದ್ರೆ ನಾನು ನಿಮ್ಮನ್ನ ಉಳುಸ್ತೀನಿ ಅಂದ್ರಿ, ಇನ್ನ ನಿಮ್ಮ ಪ್ರಣಾಳಿಕೇಲಿದ್ದ ಅಶ್ವಾಸನೆ ನೋಡಿದ್ರೆ ಯಂಥಾ ಸರಕಾರ ಬಂದ್ರೂ ಈಡೇರಸಕ್ಕೆ ಸಾಧ್ಯವೇಯಿಲ್ಲ, ಅಂಗಿದ್ದೋ. ನಿಮಗೇನಾರ ತಲೆ ಇದ್ರೆ ನನ್ನ ಅಧಿಕಾರದ ಅವಧೀಲಿ ರೈತರ ಸಾಲ ಪೂರ್ಣ ಮನ್ನಾ ಮಾಡ್ತೀನಿ ಅನ್ನಬವುದಿತ್ತು. ಆಗ 5 ವರ್ಷ ಅವಕಾಶ ಸಿಗುತ್ತಿತ್ತು. ಈಗ ನೋಡಿ ಯಾರೋ ಕೆಲವೇ ಕೆಲವು ರೈತರ ಸಾಲ ಮನ್ನಾ ಕಾರಣಕ್ಕೆ ಇಡೀ ಕರ್ನಾಟಕದ ಜನ ತೆರಿಗೆ ತೆರಬೇಕಾಗ್ಯದೆ. ನಾನು ಅಧ್ಯಯನ ಮಾಡಿದ ಕೆಲವು ಜನ ರೈತರು, ಯಾಕೆ ಲಕ್ಷಲಕ್ಷ ಸಾಲ ಮಾಡ್ಯವುರೆ ಗೊತ್ತಾ”
“ಗೊತ್ತಿಲ್ಲ ಹೇಳಿ ಬ್ರದರ್”
“ವರದಕ್ಷಿಣೆ, ಕಲ್ಯಾಣ ಮಂಟಪ, ಬೀಗರೂಟ, ಇಂತ ಅಂದಾದುಂದಿ ಜನ ಲಕ್ಷಲಕ್ಷ ಸಾಲ ಮಾಡಿದ್ರು. ಆದ್ರೆ ನಿಜವಾದ ರೈತರು ಸಣ್ಣ ಸಾಲ ಮಾಡಿದ್ರು. ಅದು ಗೊತ್ತಿದ್ದ ಸಿದ್ದರಾಮಯ್ಯ ಐವತ್ತು ಸಾವುರದವರೆಗೂ ಮನ್ನಾ ಮಾಡಿದ್ರು ಅದು ಸರಿಯಾಗಿತ್ತು”
“ಬ್ರದರ್ ನಿಮ್ಮ ಮಾತಿನ ಭಾವುನೆಗಳಿಂದ ನೀವು ರೈತರ ವಿರೋಧಿಗಳು ಅಂಬತಕ್ಕಂತ ತೀರ್ಮಾನಕ್ಕೆ ಬರಬೇಕಾಯ್ತದೆ. ರೈತರು ಸಾಲ ಮಾಡಿ ಮದುವೆ ಮಾಡಿದಾರೆ ಅನ್ನತಕ್ಕಂತ ಮಾತನ್ನ ನಾನು ಒಪ್ಪಲ್ಲ”
“ಆಯ್ತು ಸಾರ್, ತೀರಸಕಾಗದೇಯಿದ್ರು ಲಕ್ಷಾಂತೃಪಾಯಿ ಸಾಲ ಯಾಕ್ ಮಾಡ್ತಾರೆ ಅನ್ನದನ್ನಾರೆ ಪತ್ತೆಹಚ್ಚಿ, ಒಂದುವೇಳೆ ಮದುವೆ ಕಾರಣಕ್ಕೆ ಸಾಲ ಮಾಡದಾದ್ರೆ, ಕುವೆಂಪುರವರ ಮಂತ್ರಮಾಂಗಲ್ಯ ಮದುವೆ ಜಾರಿಗೆ ತನ್ನಿ. ಇಲ್ಲ ಅಂದ್ರೆ ನೀವು ರಾಧಿಕನ್ನ ಮದುವೆ ಆದ್ರಲ್ಲ ಆತರ ಆಗದಕ್ಕೆ ಪ್ರೋತ್ಸಾಹ ಕೊಡಿ. ರೈತರು ಉಳಕತ್ತರೆ. ಇಲ್ಲ ಅಂದ್ರೆ ಅವರು ಸಾಲ ಮಾಡದು, ನೀವು ತೀರಸದು, ಅನ್ನದಾದ್ರೆ ಕರ್ನಾಟಕದ ಸಾಮಾನ್ಯ ಜನಗಳ ಪಾಡೇನು ಸಾರ್”
“ನೀವು ಹೇಳತಕ್ಕಂತ ವಿಷಯದಲ್ಲಿ ಯೋಚನೆ ಮಾಡ್ತಕ್ಕಂತ ಭಾವುನೆಗಳೇನಿವೆ, ಅವುಗಳನ್ನ ಚಿಂತನೆ ಮಾಡ್ತೀನಿ. ಆದ್ರೆ ರೈತರ ಸಾಲದ ವಿಷಯದಲ್ಲಿ ನಾನು ತಗಂಡ ತೀರ್ಮಾನ ಸರಿ ಬ್ರದರ್”
“ನೀವು ಅಧಿಕಾರಕ್ಕೆ ತಂದ್ರೆ ನಾನು ಸಾಲಮನ್ನಾ ಮಾಡ್ತೀನಿ ಅಂದಿದ್ರಿ, ಆದ್ರೆ ಜನ 38 ಸೀಟು ಕೊಟ್ರು. ಆದ್ರಿಂದ ಪ್ರತಿಯೊಬ್ಬ ರೈತನ 38 ಸಾವಿರ ಸಾಲ ಮಾತ್ರ ಮನ್ನಾ ಅನ್ನಬೇಕಾಗಿತ್ತು”
“ಇದು ಮೊದಲೆ ಹೊಳಿಲಿಲ್ಲವಲ್ಲ ಬ್ರದರ್”
“ಥೂತ್ತೇರಿ”,

– ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...