Homeಕರ್ನಾಟಕಗೌಡರ ಕುಟುಂಬ ರಾಜಕಾರಣವೇ ಇದಕ್ಕೆಲ್ಲ ಕಾರಣವೇ? ಈ ವಾದದಲ್ಲಿ ಹುರುಳೆಷ್ಟು.....

ಗೌಡರ ಕುಟುಂಬ ರಾಜಕಾರಣವೇ ಇದಕ್ಕೆಲ್ಲ ಕಾರಣವೇ? ಈ ವಾದದಲ್ಲಿ ಹುರುಳೆಷ್ಟು…..

- Advertisement -
- Advertisement -

| ಗೌರಿ ಡೆಸ್ಕ್ |

ಉಳಿದಿದ್ದೆಲ್ಲಾ ನಿಜವಿರಬಹುದು ಸಾರ್. ಆದರೆ, ಗೌಡರ ಕುಟುಂಬವನ್ನು ಸಹಿಸಿಕೊಳ್ಳುವುದು ಸುಲಭವಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಒಬ್ಬ ಸಚಿವರ ಪ್ರಕಾರ ‘ಸಚಿವ ಸಂಪುಟದಲ್ಲಿ ರೇವಣ್ಣರ ಆರ್ಭಟ ಮತ್ತು ಎಲ್ಲದಕ್ಕೂ ಮೂಗು ತೂರಿಸುವುದು ನೋಡಿದರೆ ನಮಗೇ ಅಸಹ್ಯವಾಗುತ್ತದೆ. ಒಂಥರಾ ಮಾನ-ಮರ್ಯಾದೆ ಇಲ್ಲದಂತೆ ನಾವೆಲ್ಲರೂ ಅದರಲ್ಲಿದ್ದೇವೆ ಅಷ್ಟೇ. ಡಿಕೆಶಿ ಮತ್ತು ಪರಮೇಶ್ವರ ನಮ್ಮ ಪಕ್ಷದ ನಾಯಕರೋ ಅಥವಾ ಜೆಡಿಎಸ್ ಸೇರಿಬಿಟ್ಟಿದ್ದಾರೋ ಎಂದು ಸಂದೇಹವಾಗುತ್ತದೆ. ಹೀಗಾಗಿ ತೀರಾ ಕೆಲವರು ಬಿಟ್ಟರೆ ಮಿಕ್ಕೆಲ್ಲರಿಗೂ ಸಿದ್ದರಾಮಯ್ಯನವರ ಅಸಮಾಧಾನಿತ ಬಣವೇ ಅಪ್ಯಾಯಮಾನವಾಗಿತ್ತು’.

ಕಾಂಗ್ರೆಸ್ಸು ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದರಲ್ಲಿ ಕಾಂಗ್ರೆಸ್ಸಿನ ದೌರ್ಬಲ್ಯವೇ ಹೆಚ್ಚಿತ್ತು ಎಂಬುದೇನೋ ವಾಸ್ತವ. ಆದರೆ, ಜೆಡಿಎಸ್ ಅತ್ಯುತ್ತಮ ಪರಿಸ್ಥಿತಿಯಲ್ಲೇನೂ ಇರಲಿಲ್ಲ. ದಕ್ಷಿಣ ಕರ್ನಾಟಕದ 8 ಜಿಲ್ಲೆಗಳಲ್ಲೂ ಎರಡು ಜಿಲ್ಲೆಗಳಲ್ಲಿ ಪ್ರಭಾವ ತಗ್ಗುತ್ತಿತ್ತು. ಅಕಸ್ಮಾತ್ತಾಗಿ ಉತ್ತರದಲ್ಲಿ ಕೆಲವು ಸೀಟುಗಳನ್ನು ಗೆದ್ದಿತ್ತು. ಕುಟುಂಬದೊಳಗಿನ ಆಂತರಿಕ ಸಮಸ್ಯೆಗಳೂ ಹೆಚ್ಚಾಗುತ್ತಿದ್ದವು. ಕುಮಾರಸ್ವಾಮಿಯವರ ಆರೋಗ್ಯ ಚೆನ್ನಾಗಿರಲಿಲ್ಲ. ಹೀಗಿದ್ದಾಗ ತಮ್ಮ ಪಾಲಿಗೆ ಬಂದ ಅಧಿಕಾರವನ್ನು ಜನಪರವಾಗಿ ಬಳಸಿ, ಅದರ ಆಧಾರದ ಮೇಲೆ ವಿಸ್ತರಿಸಿಕೊಳ್ಳುವ ಪ್ರಯತ್ನ ಅವರದ್ದಾಗಿರಲಿಲ್ಲ.

ಈ ಸಾರಿಯೂ ತಮ್ಮ ತಮ್ಮ ಕ್ಷೇತ್ರಗಳಿಗೆ ಅಥವಾ ಹಾಸನ ಜಿಲ್ಲೆಗೆ ಅನುದಾನದ ಹೆಚ್ಚಿನ ಭಾಗವನ್ನು ಕೊಂಡೊಯ್ಯುವ ಕೆಲಸ ಬಿಡಲಿಲ್ಲ. ನಾಲ್ಕು ಫಲವತ್ತಾದ ಖಾತೆಗಳಲ್ಲಿ (ಬೆಂಗಳೂರು ಅಭಿವೃದ್ಧಿ, ಲೋಕೋಪಯೋಗಿ, ಇಂಧನ ಮತ್ತು ಬೃಹತ್ ನೀರಾವರಿ) ತಲಾ ಎರಡನ್ನು ಎರಡೂ ಪಕ್ಷಗಳು ಹಂಚಿಕೊಂಡಿದ್ದವು. ಇವುಗಳಲ್ಲಿ ಎರಡನ್ನು (ಮುಖ್ಯಮಂತ್ರಿ, ಹಣಕಾಸು, ಅಬಕಾರಿಯಲ್ಲದೇ) ತಮ್ಮ ಕುಟುಂಬಕ್ಕೇ ಇಟ್ಟುಕೊಂಡರು. ಮಂಡ್ಯದ ಇಬ್ಬರು ಸಚಿವರಲ್ಲಿ (ಕಾಂಗ್ರೆಸ್, ಬಿಜೆಪಿಗಳೆರಡರಲ್ಲೂ ಇದ್ದು ಜೆಡಿಎಸ್‍ಗೆ ಬಂದ) ಬೀಗರಾದ ತಮ್ಮಣ್ಣರಿಗೆ ಸಾರಿಗೆ ಕೊಟ್ಟರೆ, ಜಿಲ್ಲೆಯ ಪ್ರಭಾವಿ ಹಾಗೂ ನಿಷ್ಠಾವಂತರಾದ ಪುಟ್ಟರಾಜುರಿಗೆ ಸಣ್ಣ ನೀರಾವರಿ ಕೊಟ್ಟರು. ತನಗೆ ಇದು ಬೇಡ ಎಂದು ಕೇಳಿದರೂ ಬಿಡದೇ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಕೊಟ್ಟರು. ಅಲ್ಲಿಯೂ ಬೀಗ ಕೆ.ಎಸ್.ರಂಗಪ್ಪರನ್ನು ಜಿಟಿಡಿ ತಲೆ ಮೇಲೆ ಕೂಡಿಸುವ ಇರಾದೆ ಕುಟುಂಬಕ್ಕಿತ್ತು. ಇನ್ನಿತರ ಇಲಾಖೆಗಳಲ್ಲೂ ಗೌಡರ ಕುಟುಂಬ ತಲೆ ಹಾಕುತ್ತದೆ ಎಂಬ ಕಿರಿಕಿರಿ ಹಲವು ಸಚಿವರಿಗಿತ್ತು. ಕುಟುಂಬವೊಂದರ ಈ ಪ್ರಮಾಣದ ಮಧ್ಯಪ್ರವೇಶವನ್ನು ಜೆಡಿಎಸ್ ಮಾತ್ರವಲ್ಲದೇ, ಕಾಂಗ್ರೆಸ್ ಸಹಾ ಒಪ್ಪಿಕೊಳ್ಳಬೇಕು ಎಂದರೆ ಸರ್ಕಾರ ಹೇಗೆ ಉಳಿಯಬೇಕು?

ವೃತ್ತಿಪರ ಬಿಸಿನೆಸ್‍ಮೆನ್ ಆಗಿದ್ದ ಎಚ್‍ಡಿಕೆ ಡೀಲ್‍ಗಳನ್ನು ಕುದುರಿಸುವುದರಲ್ಲಿ ಎತ್ತಿದ ಕೈ. ಹಾಗಾಗಿಯೇ ಭಿನ್ನಮತೀಯ ಕಾಂಗ್ರೆಸ್ಸಿಗರನ್ನೂ ಭೇಟಿಯಾಗಿ ಸಂತೃಪ್ತಿ ಪಡಿಸುತ್ತೇನೆಂಬ ವಿಶ್ವಾಸವೂ ಅವರಿಗಿತ್ತು. ಆದರೆ, ತಮ್ಮ ಜೊತೆ ಚೆನ್ನಾಗಿಲ್ಲದ ಶಾಸಕರಿಗೆ ಅಂತಹುದೇನನ್ನೂ ಅವರು ಮಾಡಲಿಲ್ಲ. ಹಣ ಮಾಡಿಕೊಳ್ಳಲು ಅವಕಾಶ ಕೊಡದಿದ್ದರೆ ಹಿಡಿತದಲ್ಲಿರುತ್ತಾರೆ ಎಂಬ ಅವರ ಲೆಕ್ಕಾಚಾರ ತಿರುಗೇಟು ನೀಡಿತು.

ರಾಜೀನಾಮೆ ಸಲ್ಲಿಸಿದ ಒಂದು ಡಜನ್‍ಗೂ ಹೆಚ್ಚು ಶಾಸಕರಲ್ಲಿ ಕೆಲವರು ಕೊಟ್ಟ ಕಾರಣಗಳು ಕುತೂಹಲಕರವಾಗಿವೆ. ಕಾಂಗ್ರೆಸ್ ಸದಸ್ಯ ಪಿ.ಮುನಿರತ್ನ ಮಾತನಾಡುತ್ತಾ ತಮ್ಮ ಅಸಮಾಧಾನಕ್ಕೆ ಎಚ್.ಡಿ.ರೇವಣ್ಣ ಕಾರಣ ಎಂದಿದ್ದಾರೆ. ಲೋಕೋಪಯೋಗಿ ಸಚಿವರಾದ ಅವರು ಬೆಂಗಳೂರು ಅಭಿವೃದ್ಧಿ ಬಗ್ಗೆ ಒಮ್ಮೆಯೂ ನಗರದ ಶಾಸಕರ ಸಭೆ ಕರೆಯಲಿಲ್ಲ. ಎಲ್ಲಾ ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರ ದೂರು. ಹಾಗೆಯೇ ಭೀಮಾನಾಯ್ಕ ರಾಜೀನಾಮೆ ಕೊಟ್ಟಿಲ್ಲವಾದರು ಕೂಡಾ ರೇವಣ್ಣ ವಿರುದ್ಧ ಕಿಡಿ ಕಾರಿದ್ದಾರೆ. ಮೈತ್ರಿ ಒಪ್ಪಂದದಂತೆ ತನ್ನ ಪಾಲಿಗೆ ಬರಬೇಕಿದ್ದ ಕೆಎಂಎಫ್ ಅಧ್ಯಕ್ಷ ಗಾದಿಗೂ ರೇವಣ್ಣ ಕರ್ಚೀಫು ಹಾಕಿ ಕೂತಿರೋದು ಅವರ ಸಿಟ್ಟಿನ ಸಹಜ ಕಾರಣ. ಜೆಡಿಎಸ್‍ನ ಶಾಸಕ ಕೆ.ಸಿ.ನಾರಾಯಣ ಗೌಡರೂ ದೇವೇಗೌಡರ ಪುತ್ರಿಯ ಅತಿಯಾದ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಅತ್ತ ಬಿಜೆಪಿಯಿಂದ ಬರುತ್ತಿರುವ ಆಮಿಷಗಳ ಜೊತೆ ಕೆಲವು ರಾಜೀನಾಮೆಗಳ ಮೇಲೆ ಪ್ರಭಾವ ಬೀರುವಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ಬೇಸರವೂ ಇದೆ ಎಂಬುದು ಸತ್ಯ. ಕೆಲವರು ಮಂತ್ರಿಪಟ್ಟ ಸಿಗಲಿಲ್ಲವೆಂದು ಸಿಟ್ಟಾಗಿದ್ದಾರೆ ನಿಜ. ಆದರೆ ಮಂತ್ರಿಸ್ಥಾನದ ನಿರೀಕ್ಷೆ ಇಲ್ಲದವರೂ ಹೊರಗೆ ಹೆಜ್ಜೆ ಇಡಲು ರೇವಣ್ಣ ಕಾರಣ. ಅವರು ತಮ್ಮ ಇಲಾಖೆಯಲ್ಲದೆ ಇತರರ ಖಾತೆಗೂ ಮೂಗು ತೂರಿಸುವುದಷ್ಟೇ ಅಲ್ಲ, ತಾವೇ ಹೋಗಿ ಕೂರುವ ಅಭ್ಯಾಸ. ಅದೇ ಕಾರಣಕ್ಕೆ ಹಾಸನದಲ್ಲಿ ತಮ್ಮ ಹೊರತಾಗಿ ಬೇರಾರಿಗೂ ಮಂತ್ರಿ ಸ್ಥಾನ ದೊರಕದಂತೆ ನೋಡಿಕೊಂಡರು. ಏಳರಲ್ಲಿ ಆರು ಸ್ಥಾನಗಳನ್ನು ತಮ್ಮ ಪಕ್ಷ ಗೆದ್ದುಕೊಂಡರೂ ಮತ್ತಾರಿಗೂ ಮಂತ್ರಿಸ್ಥಾನದ ಅವಕಾಶ ಸಿಗಲಿಲ್ಲ. ಪಕ್ಷದ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಮೂರು ಜನ ಮಂತ್ರಿಗಳಿದ್ದಾರೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಕೆ.ಕುಮಾರಸ್ವಾಮಿ ಮಂತ್ರಿಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಅವರೂ ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಆಗಲಿಲ್ಲ. ಕೊನೆಗೆ ಮೊನ್ನೆ ಮೊನ್ನೆಯಷ್ಟೇ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯ್ತು.

ಇಡೀ ರಾಜಕೀಯ ಈ ಪ್ರಮಾಣಕ್ಕೆ ಹೊಲಸೆದ್ದಿದ್ದು, ಅಧಿಕಾರ ದಾಹ ಮತ್ತು ಹಣ ಬಾಚಿಕೊಳ್ಳುವುದೇ ದಂಧೆಯಾಗಿದೆ. ಹೀಗಿರುವಾಗ ಅದರ ಪ್ರಧಾನ ಪಾಲು ತಮ್ಮ ಕುಟುಂಬಕ್ಕೆ ಮಾತ್ರ ಎನ್ನುವ ಗೌಡರ ಕುಟುಂಬದ ಧೋರಣೆ ಬಿಕ್ಕಟ್ಟಿಗೆ ಕಾರಣವಾಗಿದೆ ಎಂಬುದು ಹಲವು ಜೆಡಿಎಸ್-ಕಾಂಗ್ರೆಸ್ ಸಚಿವರು ಮತ್ತು ಶಾಸಕರ ಅನಿಸಿಕೆಯಾಗಿದೆ.

ಇದನ್ನು ಓದಿರಿ: ಈ ಅವಾಂತರದ ಕೇಂದ್ರ ಪಾತ್ರಧಾರಿ ಸಿದ್ದು!!??

ಶುರುವಾಯ್ತಾ ನಿಖಿಲ್ ವರ್ಸಸ್ ಪ್ರಜ್ವಲ್ ಕೆಮಿಸ್ಟ್ರಿ

ಬಿಐಟಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗಿನಿಂದಲೇ ಹಾಸನ ಜಿಲ್ಲೆಯ ಕಡೆಗೆ ಕಣ್ಣಿಟ್ಟಿದ್ದ ಪ್ರಜ್ವಲ್, ಆ ನಂತರ ರಾಜಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು. ನಿಖಿಲ್‍ಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಪ್ರಜ್ವಲ್ ಪ್ರಕಾರ ತಾನು ಹಾಸನಕ್ಕೆ ಸಹಜ ಆಯ್ಕೆ. ಆದರೆ, ರಾಜ್ಯಾಧ್ಯಕ್ಷರಾಗಿದ್ದ ಕುಮಾರಸ್ವಾಮಿ ತನ್ನನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆಂಬ ಅಸಮಾಧಾನ ಪ್ರಜ್ವಲ್ ಮತ್ತು ಅವರ ತಾಯಿ ಭವಾನಿಯವರಿಗೆ ಮೊದಲಿಂದ ಇತ್ತು. ಕೆ.ಆರ್.ನಗರ, ಹುಣಸೂರು ಅಥವಾ ರಾಜರಾಜೇಶ್ವರಿನಗರಕ್ಕೆ ಹೋದರೆ ಹಾಸನದಿಂದಲೂ ಹೊರಗೆ ಪ್ರಭಾವ ಬೆಳೆಸಿಕೊಳ್ಳಬಹುದು ಎಂಬ ಇರಾದೆ ಅವರದ್ದಾಗಿತ್ತು. ಆದರೆ, ಅದಕ್ಕೆ ಕುಮಾರಸ್ವಾಮಿ ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ‘ನಮ್ಮ ಪಕ್ಷದಲ್ಲಿ ಸೂಟ್‍ಕೇಸ್ ಸಂಸ್ಕøತಿ ಇದೆ’ ಎಂದು ಪ್ರಜ್ವಲ್ ಬಹಿರಂಗ ಹೇಳಿಕೆ ನೀಡಿದ್ದರು.

ಮಂಡ್ಯದಲ್ಲಿ ಸೋತ ನಿಖಿಲ್‍ರನ್ನು ಇತ್ತೀಚೆಗೆ ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ನೇಮಿಸಿದರು. ಅದೇ ದಿನ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪರನ್ನೂ ನೇಮಿಸಲಾಗಿತ್ತು. ದೆಹಲಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಉಳಿದವರಿಗೆ ಅಭಿನಂದಿಸಿದ್ದ ಪ್ರಜ್ವಲ್, ನಿಖಿಲ್‍ರನ್ನು ಮಾತ್ರ ಅಭಿನಂದಿಸಲಿಲ್ಲ. ಪ್ರಶ್ನೆ ಕೇಳಿದ ಪತ್ರಕರ್ತರಿಗೆ ‘ಹೌದಾ, ನಿಖಿಲ್ ಆಯ್ಕೆಯಾಗಿರುವುದು ತನಗೆ ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದರು.
ಇಂತಹ ಕುಟುಂಬಕಾರಣವೂ ಇರುವ ಗೌಡರ ಕುಟುಂಬ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡಲಿ ಎಂಬ ನಿರೀಕ್ಷೆ ಬಹುಶಃ ಬಹಳ ದುಬಾರಿಯಾದುದೇನೋ?

ಇದನ್ನು ಓದಿರಿ: ಮಾನಗೇಡಿ ಶಾಸಕರೂ, ಹೊಣೆಗೇಡಿ ನಾಯಕರೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...