Homeಕರ್ನಾಟಕಗೌಡರ ಕುಟುಂಬ ರಾಜಕಾರಣವೇ ಇದಕ್ಕೆಲ್ಲ ಕಾರಣವೇ? ಈ ವಾದದಲ್ಲಿ ಹುರುಳೆಷ್ಟು.....

ಗೌಡರ ಕುಟುಂಬ ರಾಜಕಾರಣವೇ ಇದಕ್ಕೆಲ್ಲ ಕಾರಣವೇ? ಈ ವಾದದಲ್ಲಿ ಹುರುಳೆಷ್ಟು…..

- Advertisement -
- Advertisement -

| ಗೌರಿ ಡೆಸ್ಕ್ |

ಉಳಿದಿದ್ದೆಲ್ಲಾ ನಿಜವಿರಬಹುದು ಸಾರ್. ಆದರೆ, ಗೌಡರ ಕುಟುಂಬವನ್ನು ಸಹಿಸಿಕೊಳ್ಳುವುದು ಸುಲಭವಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಒಬ್ಬ ಸಚಿವರ ಪ್ರಕಾರ ‘ಸಚಿವ ಸಂಪುಟದಲ್ಲಿ ರೇವಣ್ಣರ ಆರ್ಭಟ ಮತ್ತು ಎಲ್ಲದಕ್ಕೂ ಮೂಗು ತೂರಿಸುವುದು ನೋಡಿದರೆ ನಮಗೇ ಅಸಹ್ಯವಾಗುತ್ತದೆ. ಒಂಥರಾ ಮಾನ-ಮರ್ಯಾದೆ ಇಲ್ಲದಂತೆ ನಾವೆಲ್ಲರೂ ಅದರಲ್ಲಿದ್ದೇವೆ ಅಷ್ಟೇ. ಡಿಕೆಶಿ ಮತ್ತು ಪರಮೇಶ್ವರ ನಮ್ಮ ಪಕ್ಷದ ನಾಯಕರೋ ಅಥವಾ ಜೆಡಿಎಸ್ ಸೇರಿಬಿಟ್ಟಿದ್ದಾರೋ ಎಂದು ಸಂದೇಹವಾಗುತ್ತದೆ. ಹೀಗಾಗಿ ತೀರಾ ಕೆಲವರು ಬಿಟ್ಟರೆ ಮಿಕ್ಕೆಲ್ಲರಿಗೂ ಸಿದ್ದರಾಮಯ್ಯನವರ ಅಸಮಾಧಾನಿತ ಬಣವೇ ಅಪ್ಯಾಯಮಾನವಾಗಿತ್ತು’.

ಕಾಂಗ್ರೆಸ್ಸು ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದರಲ್ಲಿ ಕಾಂಗ್ರೆಸ್ಸಿನ ದೌರ್ಬಲ್ಯವೇ ಹೆಚ್ಚಿತ್ತು ಎಂಬುದೇನೋ ವಾಸ್ತವ. ಆದರೆ, ಜೆಡಿಎಸ್ ಅತ್ಯುತ್ತಮ ಪರಿಸ್ಥಿತಿಯಲ್ಲೇನೂ ಇರಲಿಲ್ಲ. ದಕ್ಷಿಣ ಕರ್ನಾಟಕದ 8 ಜಿಲ್ಲೆಗಳಲ್ಲೂ ಎರಡು ಜಿಲ್ಲೆಗಳಲ್ಲಿ ಪ್ರಭಾವ ತಗ್ಗುತ್ತಿತ್ತು. ಅಕಸ್ಮಾತ್ತಾಗಿ ಉತ್ತರದಲ್ಲಿ ಕೆಲವು ಸೀಟುಗಳನ್ನು ಗೆದ್ದಿತ್ತು. ಕುಟುಂಬದೊಳಗಿನ ಆಂತರಿಕ ಸಮಸ್ಯೆಗಳೂ ಹೆಚ್ಚಾಗುತ್ತಿದ್ದವು. ಕುಮಾರಸ್ವಾಮಿಯವರ ಆರೋಗ್ಯ ಚೆನ್ನಾಗಿರಲಿಲ್ಲ. ಹೀಗಿದ್ದಾಗ ತಮ್ಮ ಪಾಲಿಗೆ ಬಂದ ಅಧಿಕಾರವನ್ನು ಜನಪರವಾಗಿ ಬಳಸಿ, ಅದರ ಆಧಾರದ ಮೇಲೆ ವಿಸ್ತರಿಸಿಕೊಳ್ಳುವ ಪ್ರಯತ್ನ ಅವರದ್ದಾಗಿರಲಿಲ್ಲ.

ಈ ಸಾರಿಯೂ ತಮ್ಮ ತಮ್ಮ ಕ್ಷೇತ್ರಗಳಿಗೆ ಅಥವಾ ಹಾಸನ ಜಿಲ್ಲೆಗೆ ಅನುದಾನದ ಹೆಚ್ಚಿನ ಭಾಗವನ್ನು ಕೊಂಡೊಯ್ಯುವ ಕೆಲಸ ಬಿಡಲಿಲ್ಲ. ನಾಲ್ಕು ಫಲವತ್ತಾದ ಖಾತೆಗಳಲ್ಲಿ (ಬೆಂಗಳೂರು ಅಭಿವೃದ್ಧಿ, ಲೋಕೋಪಯೋಗಿ, ಇಂಧನ ಮತ್ತು ಬೃಹತ್ ನೀರಾವರಿ) ತಲಾ ಎರಡನ್ನು ಎರಡೂ ಪಕ್ಷಗಳು ಹಂಚಿಕೊಂಡಿದ್ದವು. ಇವುಗಳಲ್ಲಿ ಎರಡನ್ನು (ಮುಖ್ಯಮಂತ್ರಿ, ಹಣಕಾಸು, ಅಬಕಾರಿಯಲ್ಲದೇ) ತಮ್ಮ ಕುಟುಂಬಕ್ಕೇ ಇಟ್ಟುಕೊಂಡರು. ಮಂಡ್ಯದ ಇಬ್ಬರು ಸಚಿವರಲ್ಲಿ (ಕಾಂಗ್ರೆಸ್, ಬಿಜೆಪಿಗಳೆರಡರಲ್ಲೂ ಇದ್ದು ಜೆಡಿಎಸ್‍ಗೆ ಬಂದ) ಬೀಗರಾದ ತಮ್ಮಣ್ಣರಿಗೆ ಸಾರಿಗೆ ಕೊಟ್ಟರೆ, ಜಿಲ್ಲೆಯ ಪ್ರಭಾವಿ ಹಾಗೂ ನಿಷ್ಠಾವಂತರಾದ ಪುಟ್ಟರಾಜುರಿಗೆ ಸಣ್ಣ ನೀರಾವರಿ ಕೊಟ್ಟರು. ತನಗೆ ಇದು ಬೇಡ ಎಂದು ಕೇಳಿದರೂ ಬಿಡದೇ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಕೊಟ್ಟರು. ಅಲ್ಲಿಯೂ ಬೀಗ ಕೆ.ಎಸ್.ರಂಗಪ್ಪರನ್ನು ಜಿಟಿಡಿ ತಲೆ ಮೇಲೆ ಕೂಡಿಸುವ ಇರಾದೆ ಕುಟುಂಬಕ್ಕಿತ್ತು. ಇನ್ನಿತರ ಇಲಾಖೆಗಳಲ್ಲೂ ಗೌಡರ ಕುಟುಂಬ ತಲೆ ಹಾಕುತ್ತದೆ ಎಂಬ ಕಿರಿಕಿರಿ ಹಲವು ಸಚಿವರಿಗಿತ್ತು. ಕುಟುಂಬವೊಂದರ ಈ ಪ್ರಮಾಣದ ಮಧ್ಯಪ್ರವೇಶವನ್ನು ಜೆಡಿಎಸ್ ಮಾತ್ರವಲ್ಲದೇ, ಕಾಂಗ್ರೆಸ್ ಸಹಾ ಒಪ್ಪಿಕೊಳ್ಳಬೇಕು ಎಂದರೆ ಸರ್ಕಾರ ಹೇಗೆ ಉಳಿಯಬೇಕು?

ವೃತ್ತಿಪರ ಬಿಸಿನೆಸ್‍ಮೆನ್ ಆಗಿದ್ದ ಎಚ್‍ಡಿಕೆ ಡೀಲ್‍ಗಳನ್ನು ಕುದುರಿಸುವುದರಲ್ಲಿ ಎತ್ತಿದ ಕೈ. ಹಾಗಾಗಿಯೇ ಭಿನ್ನಮತೀಯ ಕಾಂಗ್ರೆಸ್ಸಿಗರನ್ನೂ ಭೇಟಿಯಾಗಿ ಸಂತೃಪ್ತಿ ಪಡಿಸುತ್ತೇನೆಂಬ ವಿಶ್ವಾಸವೂ ಅವರಿಗಿತ್ತು. ಆದರೆ, ತಮ್ಮ ಜೊತೆ ಚೆನ್ನಾಗಿಲ್ಲದ ಶಾಸಕರಿಗೆ ಅಂತಹುದೇನನ್ನೂ ಅವರು ಮಾಡಲಿಲ್ಲ. ಹಣ ಮಾಡಿಕೊಳ್ಳಲು ಅವಕಾಶ ಕೊಡದಿದ್ದರೆ ಹಿಡಿತದಲ್ಲಿರುತ್ತಾರೆ ಎಂಬ ಅವರ ಲೆಕ್ಕಾಚಾರ ತಿರುಗೇಟು ನೀಡಿತು.

ರಾಜೀನಾಮೆ ಸಲ್ಲಿಸಿದ ಒಂದು ಡಜನ್‍ಗೂ ಹೆಚ್ಚು ಶಾಸಕರಲ್ಲಿ ಕೆಲವರು ಕೊಟ್ಟ ಕಾರಣಗಳು ಕುತೂಹಲಕರವಾಗಿವೆ. ಕಾಂಗ್ರೆಸ್ ಸದಸ್ಯ ಪಿ.ಮುನಿರತ್ನ ಮಾತನಾಡುತ್ತಾ ತಮ್ಮ ಅಸಮಾಧಾನಕ್ಕೆ ಎಚ್.ಡಿ.ರೇವಣ್ಣ ಕಾರಣ ಎಂದಿದ್ದಾರೆ. ಲೋಕೋಪಯೋಗಿ ಸಚಿವರಾದ ಅವರು ಬೆಂಗಳೂರು ಅಭಿವೃದ್ಧಿ ಬಗ್ಗೆ ಒಮ್ಮೆಯೂ ನಗರದ ಶಾಸಕರ ಸಭೆ ಕರೆಯಲಿಲ್ಲ. ಎಲ್ಲಾ ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರ ದೂರು. ಹಾಗೆಯೇ ಭೀಮಾನಾಯ್ಕ ರಾಜೀನಾಮೆ ಕೊಟ್ಟಿಲ್ಲವಾದರು ಕೂಡಾ ರೇವಣ್ಣ ವಿರುದ್ಧ ಕಿಡಿ ಕಾರಿದ್ದಾರೆ. ಮೈತ್ರಿ ಒಪ್ಪಂದದಂತೆ ತನ್ನ ಪಾಲಿಗೆ ಬರಬೇಕಿದ್ದ ಕೆಎಂಎಫ್ ಅಧ್ಯಕ್ಷ ಗಾದಿಗೂ ರೇವಣ್ಣ ಕರ್ಚೀಫು ಹಾಕಿ ಕೂತಿರೋದು ಅವರ ಸಿಟ್ಟಿನ ಸಹಜ ಕಾರಣ. ಜೆಡಿಎಸ್‍ನ ಶಾಸಕ ಕೆ.ಸಿ.ನಾರಾಯಣ ಗೌಡರೂ ದೇವೇಗೌಡರ ಪುತ್ರಿಯ ಅತಿಯಾದ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಅತ್ತ ಬಿಜೆಪಿಯಿಂದ ಬರುತ್ತಿರುವ ಆಮಿಷಗಳ ಜೊತೆ ಕೆಲವು ರಾಜೀನಾಮೆಗಳ ಮೇಲೆ ಪ್ರಭಾವ ಬೀರುವಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ಬೇಸರವೂ ಇದೆ ಎಂಬುದು ಸತ್ಯ. ಕೆಲವರು ಮಂತ್ರಿಪಟ್ಟ ಸಿಗಲಿಲ್ಲವೆಂದು ಸಿಟ್ಟಾಗಿದ್ದಾರೆ ನಿಜ. ಆದರೆ ಮಂತ್ರಿಸ್ಥಾನದ ನಿರೀಕ್ಷೆ ಇಲ್ಲದವರೂ ಹೊರಗೆ ಹೆಜ್ಜೆ ಇಡಲು ರೇವಣ್ಣ ಕಾರಣ. ಅವರು ತಮ್ಮ ಇಲಾಖೆಯಲ್ಲದೆ ಇತರರ ಖಾತೆಗೂ ಮೂಗು ತೂರಿಸುವುದಷ್ಟೇ ಅಲ್ಲ, ತಾವೇ ಹೋಗಿ ಕೂರುವ ಅಭ್ಯಾಸ. ಅದೇ ಕಾರಣಕ್ಕೆ ಹಾಸನದಲ್ಲಿ ತಮ್ಮ ಹೊರತಾಗಿ ಬೇರಾರಿಗೂ ಮಂತ್ರಿ ಸ್ಥಾನ ದೊರಕದಂತೆ ನೋಡಿಕೊಂಡರು. ಏಳರಲ್ಲಿ ಆರು ಸ್ಥಾನಗಳನ್ನು ತಮ್ಮ ಪಕ್ಷ ಗೆದ್ದುಕೊಂಡರೂ ಮತ್ತಾರಿಗೂ ಮಂತ್ರಿಸ್ಥಾನದ ಅವಕಾಶ ಸಿಗಲಿಲ್ಲ. ಪಕ್ಷದ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಮೂರು ಜನ ಮಂತ್ರಿಗಳಿದ್ದಾರೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಕೆ.ಕುಮಾರಸ್ವಾಮಿ ಮಂತ್ರಿಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಅವರೂ ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಆಗಲಿಲ್ಲ. ಕೊನೆಗೆ ಮೊನ್ನೆ ಮೊನ್ನೆಯಷ್ಟೇ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯ್ತು.

ಇಡೀ ರಾಜಕೀಯ ಈ ಪ್ರಮಾಣಕ್ಕೆ ಹೊಲಸೆದ್ದಿದ್ದು, ಅಧಿಕಾರ ದಾಹ ಮತ್ತು ಹಣ ಬಾಚಿಕೊಳ್ಳುವುದೇ ದಂಧೆಯಾಗಿದೆ. ಹೀಗಿರುವಾಗ ಅದರ ಪ್ರಧಾನ ಪಾಲು ತಮ್ಮ ಕುಟುಂಬಕ್ಕೆ ಮಾತ್ರ ಎನ್ನುವ ಗೌಡರ ಕುಟುಂಬದ ಧೋರಣೆ ಬಿಕ್ಕಟ್ಟಿಗೆ ಕಾರಣವಾಗಿದೆ ಎಂಬುದು ಹಲವು ಜೆಡಿಎಸ್-ಕಾಂಗ್ರೆಸ್ ಸಚಿವರು ಮತ್ತು ಶಾಸಕರ ಅನಿಸಿಕೆಯಾಗಿದೆ.

ಇದನ್ನು ಓದಿರಿ: ಈ ಅವಾಂತರದ ಕೇಂದ್ರ ಪಾತ್ರಧಾರಿ ಸಿದ್ದು!!??

ಶುರುವಾಯ್ತಾ ನಿಖಿಲ್ ವರ್ಸಸ್ ಪ್ರಜ್ವಲ್ ಕೆಮಿಸ್ಟ್ರಿ

ಬಿಐಟಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗಿನಿಂದಲೇ ಹಾಸನ ಜಿಲ್ಲೆಯ ಕಡೆಗೆ ಕಣ್ಣಿಟ್ಟಿದ್ದ ಪ್ರಜ್ವಲ್, ಆ ನಂತರ ರಾಜಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು. ನಿಖಿಲ್‍ಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಪ್ರಜ್ವಲ್ ಪ್ರಕಾರ ತಾನು ಹಾಸನಕ್ಕೆ ಸಹಜ ಆಯ್ಕೆ. ಆದರೆ, ರಾಜ್ಯಾಧ್ಯಕ್ಷರಾಗಿದ್ದ ಕುಮಾರಸ್ವಾಮಿ ತನ್ನನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆಂಬ ಅಸಮಾಧಾನ ಪ್ರಜ್ವಲ್ ಮತ್ತು ಅವರ ತಾಯಿ ಭವಾನಿಯವರಿಗೆ ಮೊದಲಿಂದ ಇತ್ತು. ಕೆ.ಆರ್.ನಗರ, ಹುಣಸೂರು ಅಥವಾ ರಾಜರಾಜೇಶ್ವರಿನಗರಕ್ಕೆ ಹೋದರೆ ಹಾಸನದಿಂದಲೂ ಹೊರಗೆ ಪ್ರಭಾವ ಬೆಳೆಸಿಕೊಳ್ಳಬಹುದು ಎಂಬ ಇರಾದೆ ಅವರದ್ದಾಗಿತ್ತು. ಆದರೆ, ಅದಕ್ಕೆ ಕುಮಾರಸ್ವಾಮಿ ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ‘ನಮ್ಮ ಪಕ್ಷದಲ್ಲಿ ಸೂಟ್‍ಕೇಸ್ ಸಂಸ್ಕøತಿ ಇದೆ’ ಎಂದು ಪ್ರಜ್ವಲ್ ಬಹಿರಂಗ ಹೇಳಿಕೆ ನೀಡಿದ್ದರು.

ಮಂಡ್ಯದಲ್ಲಿ ಸೋತ ನಿಖಿಲ್‍ರನ್ನು ಇತ್ತೀಚೆಗೆ ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ನೇಮಿಸಿದರು. ಅದೇ ದಿನ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪರನ್ನೂ ನೇಮಿಸಲಾಗಿತ್ತು. ದೆಹಲಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಉಳಿದವರಿಗೆ ಅಭಿನಂದಿಸಿದ್ದ ಪ್ರಜ್ವಲ್, ನಿಖಿಲ್‍ರನ್ನು ಮಾತ್ರ ಅಭಿನಂದಿಸಲಿಲ್ಲ. ಪ್ರಶ್ನೆ ಕೇಳಿದ ಪತ್ರಕರ್ತರಿಗೆ ‘ಹೌದಾ, ನಿಖಿಲ್ ಆಯ್ಕೆಯಾಗಿರುವುದು ತನಗೆ ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದರು.
ಇಂತಹ ಕುಟುಂಬಕಾರಣವೂ ಇರುವ ಗೌಡರ ಕುಟುಂಬ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡಲಿ ಎಂಬ ನಿರೀಕ್ಷೆ ಬಹುಶಃ ಬಹಳ ದುಬಾರಿಯಾದುದೇನೋ?

ಇದನ್ನು ಓದಿರಿ: ಮಾನಗೇಡಿ ಶಾಸಕರೂ, ಹೊಣೆಗೇಡಿ ನಾಯಕರೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...