Homeಕರ್ನಾಟಕಗೌಡರ ಕುಟುಂಬ ರಾಜಕಾರಣವೇ ಇದಕ್ಕೆಲ್ಲ ಕಾರಣವೇ? ಈ ವಾದದಲ್ಲಿ ಹುರುಳೆಷ್ಟು.....

ಗೌಡರ ಕುಟುಂಬ ರಾಜಕಾರಣವೇ ಇದಕ್ಕೆಲ್ಲ ಕಾರಣವೇ? ಈ ವಾದದಲ್ಲಿ ಹುರುಳೆಷ್ಟು…..

- Advertisement -
- Advertisement -

| ಗೌರಿ ಡೆಸ್ಕ್ |

ಉಳಿದಿದ್ದೆಲ್ಲಾ ನಿಜವಿರಬಹುದು ಸಾರ್. ಆದರೆ, ಗೌಡರ ಕುಟುಂಬವನ್ನು ಸಹಿಸಿಕೊಳ್ಳುವುದು ಸುಲಭವಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಒಬ್ಬ ಸಚಿವರ ಪ್ರಕಾರ ‘ಸಚಿವ ಸಂಪುಟದಲ್ಲಿ ರೇವಣ್ಣರ ಆರ್ಭಟ ಮತ್ತು ಎಲ್ಲದಕ್ಕೂ ಮೂಗು ತೂರಿಸುವುದು ನೋಡಿದರೆ ನಮಗೇ ಅಸಹ್ಯವಾಗುತ್ತದೆ. ಒಂಥರಾ ಮಾನ-ಮರ್ಯಾದೆ ಇಲ್ಲದಂತೆ ನಾವೆಲ್ಲರೂ ಅದರಲ್ಲಿದ್ದೇವೆ ಅಷ್ಟೇ. ಡಿಕೆಶಿ ಮತ್ತು ಪರಮೇಶ್ವರ ನಮ್ಮ ಪಕ್ಷದ ನಾಯಕರೋ ಅಥವಾ ಜೆಡಿಎಸ್ ಸೇರಿಬಿಟ್ಟಿದ್ದಾರೋ ಎಂದು ಸಂದೇಹವಾಗುತ್ತದೆ. ಹೀಗಾಗಿ ತೀರಾ ಕೆಲವರು ಬಿಟ್ಟರೆ ಮಿಕ್ಕೆಲ್ಲರಿಗೂ ಸಿದ್ದರಾಮಯ್ಯನವರ ಅಸಮಾಧಾನಿತ ಬಣವೇ ಅಪ್ಯಾಯಮಾನವಾಗಿತ್ತು’.

ಕಾಂಗ್ರೆಸ್ಸು ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದರಲ್ಲಿ ಕಾಂಗ್ರೆಸ್ಸಿನ ದೌರ್ಬಲ್ಯವೇ ಹೆಚ್ಚಿತ್ತು ಎಂಬುದೇನೋ ವಾಸ್ತವ. ಆದರೆ, ಜೆಡಿಎಸ್ ಅತ್ಯುತ್ತಮ ಪರಿಸ್ಥಿತಿಯಲ್ಲೇನೂ ಇರಲಿಲ್ಲ. ದಕ್ಷಿಣ ಕರ್ನಾಟಕದ 8 ಜಿಲ್ಲೆಗಳಲ್ಲೂ ಎರಡು ಜಿಲ್ಲೆಗಳಲ್ಲಿ ಪ್ರಭಾವ ತಗ್ಗುತ್ತಿತ್ತು. ಅಕಸ್ಮಾತ್ತಾಗಿ ಉತ್ತರದಲ್ಲಿ ಕೆಲವು ಸೀಟುಗಳನ್ನು ಗೆದ್ದಿತ್ತು. ಕುಟುಂಬದೊಳಗಿನ ಆಂತರಿಕ ಸಮಸ್ಯೆಗಳೂ ಹೆಚ್ಚಾಗುತ್ತಿದ್ದವು. ಕುಮಾರಸ್ವಾಮಿಯವರ ಆರೋಗ್ಯ ಚೆನ್ನಾಗಿರಲಿಲ್ಲ. ಹೀಗಿದ್ದಾಗ ತಮ್ಮ ಪಾಲಿಗೆ ಬಂದ ಅಧಿಕಾರವನ್ನು ಜನಪರವಾಗಿ ಬಳಸಿ, ಅದರ ಆಧಾರದ ಮೇಲೆ ವಿಸ್ತರಿಸಿಕೊಳ್ಳುವ ಪ್ರಯತ್ನ ಅವರದ್ದಾಗಿರಲಿಲ್ಲ.

ಈ ಸಾರಿಯೂ ತಮ್ಮ ತಮ್ಮ ಕ್ಷೇತ್ರಗಳಿಗೆ ಅಥವಾ ಹಾಸನ ಜಿಲ್ಲೆಗೆ ಅನುದಾನದ ಹೆಚ್ಚಿನ ಭಾಗವನ್ನು ಕೊಂಡೊಯ್ಯುವ ಕೆಲಸ ಬಿಡಲಿಲ್ಲ. ನಾಲ್ಕು ಫಲವತ್ತಾದ ಖಾತೆಗಳಲ್ಲಿ (ಬೆಂಗಳೂರು ಅಭಿವೃದ್ಧಿ, ಲೋಕೋಪಯೋಗಿ, ಇಂಧನ ಮತ್ತು ಬೃಹತ್ ನೀರಾವರಿ) ತಲಾ ಎರಡನ್ನು ಎರಡೂ ಪಕ್ಷಗಳು ಹಂಚಿಕೊಂಡಿದ್ದವು. ಇವುಗಳಲ್ಲಿ ಎರಡನ್ನು (ಮುಖ್ಯಮಂತ್ರಿ, ಹಣಕಾಸು, ಅಬಕಾರಿಯಲ್ಲದೇ) ತಮ್ಮ ಕುಟುಂಬಕ್ಕೇ ಇಟ್ಟುಕೊಂಡರು. ಮಂಡ್ಯದ ಇಬ್ಬರು ಸಚಿವರಲ್ಲಿ (ಕಾಂಗ್ರೆಸ್, ಬಿಜೆಪಿಗಳೆರಡರಲ್ಲೂ ಇದ್ದು ಜೆಡಿಎಸ್‍ಗೆ ಬಂದ) ಬೀಗರಾದ ತಮ್ಮಣ್ಣರಿಗೆ ಸಾರಿಗೆ ಕೊಟ್ಟರೆ, ಜಿಲ್ಲೆಯ ಪ್ರಭಾವಿ ಹಾಗೂ ನಿಷ್ಠಾವಂತರಾದ ಪುಟ್ಟರಾಜುರಿಗೆ ಸಣ್ಣ ನೀರಾವರಿ ಕೊಟ್ಟರು. ತನಗೆ ಇದು ಬೇಡ ಎಂದು ಕೇಳಿದರೂ ಬಿಡದೇ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಕೊಟ್ಟರು. ಅಲ್ಲಿಯೂ ಬೀಗ ಕೆ.ಎಸ್.ರಂಗಪ್ಪರನ್ನು ಜಿಟಿಡಿ ತಲೆ ಮೇಲೆ ಕೂಡಿಸುವ ಇರಾದೆ ಕುಟುಂಬಕ್ಕಿತ್ತು. ಇನ್ನಿತರ ಇಲಾಖೆಗಳಲ್ಲೂ ಗೌಡರ ಕುಟುಂಬ ತಲೆ ಹಾಕುತ್ತದೆ ಎಂಬ ಕಿರಿಕಿರಿ ಹಲವು ಸಚಿವರಿಗಿತ್ತು. ಕುಟುಂಬವೊಂದರ ಈ ಪ್ರಮಾಣದ ಮಧ್ಯಪ್ರವೇಶವನ್ನು ಜೆಡಿಎಸ್ ಮಾತ್ರವಲ್ಲದೇ, ಕಾಂಗ್ರೆಸ್ ಸಹಾ ಒಪ್ಪಿಕೊಳ್ಳಬೇಕು ಎಂದರೆ ಸರ್ಕಾರ ಹೇಗೆ ಉಳಿಯಬೇಕು?

ವೃತ್ತಿಪರ ಬಿಸಿನೆಸ್‍ಮೆನ್ ಆಗಿದ್ದ ಎಚ್‍ಡಿಕೆ ಡೀಲ್‍ಗಳನ್ನು ಕುದುರಿಸುವುದರಲ್ಲಿ ಎತ್ತಿದ ಕೈ. ಹಾಗಾಗಿಯೇ ಭಿನ್ನಮತೀಯ ಕಾಂಗ್ರೆಸ್ಸಿಗರನ್ನೂ ಭೇಟಿಯಾಗಿ ಸಂತೃಪ್ತಿ ಪಡಿಸುತ್ತೇನೆಂಬ ವಿಶ್ವಾಸವೂ ಅವರಿಗಿತ್ತು. ಆದರೆ, ತಮ್ಮ ಜೊತೆ ಚೆನ್ನಾಗಿಲ್ಲದ ಶಾಸಕರಿಗೆ ಅಂತಹುದೇನನ್ನೂ ಅವರು ಮಾಡಲಿಲ್ಲ. ಹಣ ಮಾಡಿಕೊಳ್ಳಲು ಅವಕಾಶ ಕೊಡದಿದ್ದರೆ ಹಿಡಿತದಲ್ಲಿರುತ್ತಾರೆ ಎಂಬ ಅವರ ಲೆಕ್ಕಾಚಾರ ತಿರುಗೇಟು ನೀಡಿತು.

ರಾಜೀನಾಮೆ ಸಲ್ಲಿಸಿದ ಒಂದು ಡಜನ್‍ಗೂ ಹೆಚ್ಚು ಶಾಸಕರಲ್ಲಿ ಕೆಲವರು ಕೊಟ್ಟ ಕಾರಣಗಳು ಕುತೂಹಲಕರವಾಗಿವೆ. ಕಾಂಗ್ರೆಸ್ ಸದಸ್ಯ ಪಿ.ಮುನಿರತ್ನ ಮಾತನಾಡುತ್ತಾ ತಮ್ಮ ಅಸಮಾಧಾನಕ್ಕೆ ಎಚ್.ಡಿ.ರೇವಣ್ಣ ಕಾರಣ ಎಂದಿದ್ದಾರೆ. ಲೋಕೋಪಯೋಗಿ ಸಚಿವರಾದ ಅವರು ಬೆಂಗಳೂರು ಅಭಿವೃದ್ಧಿ ಬಗ್ಗೆ ಒಮ್ಮೆಯೂ ನಗರದ ಶಾಸಕರ ಸಭೆ ಕರೆಯಲಿಲ್ಲ. ಎಲ್ಲಾ ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರ ದೂರು. ಹಾಗೆಯೇ ಭೀಮಾನಾಯ್ಕ ರಾಜೀನಾಮೆ ಕೊಟ್ಟಿಲ್ಲವಾದರು ಕೂಡಾ ರೇವಣ್ಣ ವಿರುದ್ಧ ಕಿಡಿ ಕಾರಿದ್ದಾರೆ. ಮೈತ್ರಿ ಒಪ್ಪಂದದಂತೆ ತನ್ನ ಪಾಲಿಗೆ ಬರಬೇಕಿದ್ದ ಕೆಎಂಎಫ್ ಅಧ್ಯಕ್ಷ ಗಾದಿಗೂ ರೇವಣ್ಣ ಕರ್ಚೀಫು ಹಾಕಿ ಕೂತಿರೋದು ಅವರ ಸಿಟ್ಟಿನ ಸಹಜ ಕಾರಣ. ಜೆಡಿಎಸ್‍ನ ಶಾಸಕ ಕೆ.ಸಿ.ನಾರಾಯಣ ಗೌಡರೂ ದೇವೇಗೌಡರ ಪುತ್ರಿಯ ಅತಿಯಾದ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಅತ್ತ ಬಿಜೆಪಿಯಿಂದ ಬರುತ್ತಿರುವ ಆಮಿಷಗಳ ಜೊತೆ ಕೆಲವು ರಾಜೀನಾಮೆಗಳ ಮೇಲೆ ಪ್ರಭಾವ ಬೀರುವಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ಬೇಸರವೂ ಇದೆ ಎಂಬುದು ಸತ್ಯ. ಕೆಲವರು ಮಂತ್ರಿಪಟ್ಟ ಸಿಗಲಿಲ್ಲವೆಂದು ಸಿಟ್ಟಾಗಿದ್ದಾರೆ ನಿಜ. ಆದರೆ ಮಂತ್ರಿಸ್ಥಾನದ ನಿರೀಕ್ಷೆ ಇಲ್ಲದವರೂ ಹೊರಗೆ ಹೆಜ್ಜೆ ಇಡಲು ರೇವಣ್ಣ ಕಾರಣ. ಅವರು ತಮ್ಮ ಇಲಾಖೆಯಲ್ಲದೆ ಇತರರ ಖಾತೆಗೂ ಮೂಗು ತೂರಿಸುವುದಷ್ಟೇ ಅಲ್ಲ, ತಾವೇ ಹೋಗಿ ಕೂರುವ ಅಭ್ಯಾಸ. ಅದೇ ಕಾರಣಕ್ಕೆ ಹಾಸನದಲ್ಲಿ ತಮ್ಮ ಹೊರತಾಗಿ ಬೇರಾರಿಗೂ ಮಂತ್ರಿ ಸ್ಥಾನ ದೊರಕದಂತೆ ನೋಡಿಕೊಂಡರು. ಏಳರಲ್ಲಿ ಆರು ಸ್ಥಾನಗಳನ್ನು ತಮ್ಮ ಪಕ್ಷ ಗೆದ್ದುಕೊಂಡರೂ ಮತ್ತಾರಿಗೂ ಮಂತ್ರಿಸ್ಥಾನದ ಅವಕಾಶ ಸಿಗಲಿಲ್ಲ. ಪಕ್ಷದ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಮೂರು ಜನ ಮಂತ್ರಿಗಳಿದ್ದಾರೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಕೆ.ಕುಮಾರಸ್ವಾಮಿ ಮಂತ್ರಿಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಅವರೂ ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಆಗಲಿಲ್ಲ. ಕೊನೆಗೆ ಮೊನ್ನೆ ಮೊನ್ನೆಯಷ್ಟೇ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯ್ತು.

ಇಡೀ ರಾಜಕೀಯ ಈ ಪ್ರಮಾಣಕ್ಕೆ ಹೊಲಸೆದ್ದಿದ್ದು, ಅಧಿಕಾರ ದಾಹ ಮತ್ತು ಹಣ ಬಾಚಿಕೊಳ್ಳುವುದೇ ದಂಧೆಯಾಗಿದೆ. ಹೀಗಿರುವಾಗ ಅದರ ಪ್ರಧಾನ ಪಾಲು ತಮ್ಮ ಕುಟುಂಬಕ್ಕೆ ಮಾತ್ರ ಎನ್ನುವ ಗೌಡರ ಕುಟುಂಬದ ಧೋರಣೆ ಬಿಕ್ಕಟ್ಟಿಗೆ ಕಾರಣವಾಗಿದೆ ಎಂಬುದು ಹಲವು ಜೆಡಿಎಸ್-ಕಾಂಗ್ರೆಸ್ ಸಚಿವರು ಮತ್ತು ಶಾಸಕರ ಅನಿಸಿಕೆಯಾಗಿದೆ.

ಇದನ್ನು ಓದಿರಿ: ಈ ಅವಾಂತರದ ಕೇಂದ್ರ ಪಾತ್ರಧಾರಿ ಸಿದ್ದು!!??

ಶುರುವಾಯ್ತಾ ನಿಖಿಲ್ ವರ್ಸಸ್ ಪ್ರಜ್ವಲ್ ಕೆಮಿಸ್ಟ್ರಿ

ಬಿಐಟಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗಿನಿಂದಲೇ ಹಾಸನ ಜಿಲ್ಲೆಯ ಕಡೆಗೆ ಕಣ್ಣಿಟ್ಟಿದ್ದ ಪ್ರಜ್ವಲ್, ಆ ನಂತರ ರಾಜಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು. ನಿಖಿಲ್‍ಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಪ್ರಜ್ವಲ್ ಪ್ರಕಾರ ತಾನು ಹಾಸನಕ್ಕೆ ಸಹಜ ಆಯ್ಕೆ. ಆದರೆ, ರಾಜ್ಯಾಧ್ಯಕ್ಷರಾಗಿದ್ದ ಕುಮಾರಸ್ವಾಮಿ ತನ್ನನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆಂಬ ಅಸಮಾಧಾನ ಪ್ರಜ್ವಲ್ ಮತ್ತು ಅವರ ತಾಯಿ ಭವಾನಿಯವರಿಗೆ ಮೊದಲಿಂದ ಇತ್ತು. ಕೆ.ಆರ್.ನಗರ, ಹುಣಸೂರು ಅಥವಾ ರಾಜರಾಜೇಶ್ವರಿನಗರಕ್ಕೆ ಹೋದರೆ ಹಾಸನದಿಂದಲೂ ಹೊರಗೆ ಪ್ರಭಾವ ಬೆಳೆಸಿಕೊಳ್ಳಬಹುದು ಎಂಬ ಇರಾದೆ ಅವರದ್ದಾಗಿತ್ತು. ಆದರೆ, ಅದಕ್ಕೆ ಕುಮಾರಸ್ವಾಮಿ ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ‘ನಮ್ಮ ಪಕ್ಷದಲ್ಲಿ ಸೂಟ್‍ಕೇಸ್ ಸಂಸ್ಕøತಿ ಇದೆ’ ಎಂದು ಪ್ರಜ್ವಲ್ ಬಹಿರಂಗ ಹೇಳಿಕೆ ನೀಡಿದ್ದರು.

ಮಂಡ್ಯದಲ್ಲಿ ಸೋತ ನಿಖಿಲ್‍ರನ್ನು ಇತ್ತೀಚೆಗೆ ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ನೇಮಿಸಿದರು. ಅದೇ ದಿನ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪರನ್ನೂ ನೇಮಿಸಲಾಗಿತ್ತು. ದೆಹಲಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಉಳಿದವರಿಗೆ ಅಭಿನಂದಿಸಿದ್ದ ಪ್ರಜ್ವಲ್, ನಿಖಿಲ್‍ರನ್ನು ಮಾತ್ರ ಅಭಿನಂದಿಸಲಿಲ್ಲ. ಪ್ರಶ್ನೆ ಕೇಳಿದ ಪತ್ರಕರ್ತರಿಗೆ ‘ಹೌದಾ, ನಿಖಿಲ್ ಆಯ್ಕೆಯಾಗಿರುವುದು ತನಗೆ ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದರು.
ಇಂತಹ ಕುಟುಂಬಕಾರಣವೂ ಇರುವ ಗೌಡರ ಕುಟುಂಬ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡಲಿ ಎಂಬ ನಿರೀಕ್ಷೆ ಬಹುಶಃ ಬಹಳ ದುಬಾರಿಯಾದುದೇನೋ?

ಇದನ್ನು ಓದಿರಿ: ಮಾನಗೇಡಿ ಶಾಸಕರೂ, ಹೊಣೆಗೇಡಿ ನಾಯಕರೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...