Homeಅಂಕಣಗಳುಅಪ್ಪನ ವಿದಾಯ ಮತ್ತು ವೈಚಾರಿಕತೆ

ಅಪ್ಪನ ವಿದಾಯ ಮತ್ತು ವೈಚಾರಿಕತೆ

- Advertisement -
- Advertisement -

| ಗೌರಿ ಲಂಕೇಶ್ |
ಜುಲೈ 29, 2009 (ಸಂಪಾದಕೀಯದಿಂದ)

ಅವತ್ತು ದೆಹಲಿಯಿಂದ ಬಂದು ಅಪ್ಪನನ್ನು ನೋಡಿದಾಗ ಅವರು ಟಾಟಾ ಹೇಳುತ್ತಿರುವಂತೆ ಒಂದು ಕೈ ಮೇಲಕ್ಕೆ ಚಾಚಿತ್ತು. ಅವರು ತಮ್ಮ ಫೇವರೇಟ್ ಆದ ನೀಲಿ ಬಣ್ಣದ ಸ್ವೆಟರ್ ಧರಿಸಿದ್ದರು. ಕಣ್ಣೀರು ತುಂಬಿದ್ದ ನನ್ನ ಕಣ್ಣುಗಳಿಗೆ ಏನೋ ಸರಿ ಇಲ್ಲ ಅನಿಸುತ್ತಿತ್ತು. ಮರುಕ್ಷಣವೇ ಅದೇನೆಂದು ಗೊತ್ತಾಯಿತು. ಅದೇ ಕ್ಷಣ ನನ್ನ ತಂಗಿ ಬೇಬಿ ಕೂಡ “ವಿಭೂತಿಯನ್ನು ಅಳಿಸು ಗೌರು” ಅಂದಳು. ಅವತ್ತು ನಮ್ಮ ಮನೆಗೆ ಬಂದಿದ್ದ ಅದ್ಯಾರೋ ಅಪ್ಪನ ಹಣೆಗೆ ವಿಭೂತಿ ಬಳಿದಿದ್ದರು. ತಣ್ಣಗಾಗಿದ್ದ ಅಪ್ಪನನ್ನು ಮುಟ್ಟಲಾಗದೇ ಬೇಬಿ ನನಗಾಗಿ ಕಾದಿದ್ದು ನಾನು ಬಂದಕೂಡಲೇ ಹಾಗೆ ಹೇಳಿದ್ದಳು. ದುಃಖದ ಜೊತೆಗೆ ಕೋಪವೂ ಬಂತು. ನನ್ನಪ್ಪ ಎಂದೂ ವಿಭೂತಿ(ಚಿಕ್ಕವರಿದ್ದಾಗ ಹೊರತುಪಡಿಸಿ) ಧರಿಸಿದವರಲ್ಲ, ಪೂಜೆ ಮಾಡಿದವರಲ್ಲ, ಲಿಂಗ ಕಟ್ಟಕೊಂಡವರಲ್ಲ, ಅಂತಹ ನನ್ನ ಅಪ್ಪ ಅಸಹಾಯಕರಾಗಿದ್ದಾಗ, ಪ್ರತಿಭಟಿಸದಂತಾಗಿದ್ದಾಗ ಅವರ ಹಣೆಗೆ ವಿಭೂತಿ ಹಚ್ಚಿದರು. ಅದನ್ನು ಕೂಡಲೇ ಒರೆಸಿದ ನಾನು “ನನ್ನಪ್ಪನನ್ನು ಯಾರೂ ಮುಟ್ಟಬೇಡಿ, ಇಂತಹದ್ದನ್ನೆಲ್ಲ ಮಾಡಬೇಡಿ” ಎಂದು ಆರ್ಭಟಿಸಿದ್ದೆ.

ಆದರೂ ಅದೆಲ್ಲ ಅಲ್ಲಿಗೇ ನಿಲ್ಲಲಿಲ್ಲ. ಮರುದಿನ ಆಗಮಿಸಿದ ಅಪ್ಪನ ಅಣ್ಣ ಶಿವರುದ್ರಪ್ಪ ಮತ್ತು ಇತರೆ ಸಂಬಂಧಿಗಳು ಅಪ್ಪನಿಗೆ ಅವಮಾನ ಮಾಡದಂತೆ ತಡೆಯುವುದೇ ಒಂದು ಕೆಲಸವಾಗಿ ಹೋಯಿತು. ಅವರ್ಯಾರೂ ಅಪ್ಪನಿಗೆ ಪೂಜೆ ಮಾಡದಂತೆ, ಕುಂಕುಮ ವಿಭೂತಿ ಹಚ್ಚದಂತೆ ನಾವೆಲ್ಲರೂ ಕಟ್ಟೆಚ್ಚರ ವಹಿಸಿದೆವು. ಅಪ್ಪನನ್ನು ತೋಟಕ್ಕೆ ಕರೆದುಕೊಂಡು ಹೋದಾಗ ನೋಡುತ್ತೇವೆ, ಅಲ್ಲಿ ಯಾರೋ ಆಗಲೇ ಚಟ್ಟವನ್ನು ಕಟ್ಟಿದ್ದರು. ವಾಹನದಿಂದ ಅಪ್ಪನನ್ನು ಇಳಿಸಿ ಆ ಚಟ್ಟದಲ್ಲಿ ಎತ್ತಿಕೊಂಡು ಹೋಗುವ ಉದ್ದೇಶ ಅವರದ್ದಾಗಿತ್ತು. ಕೂಡಲೇ ಆ ಚಟ್ಟವನ್ನು ನನ್ನ ಅಪ್ಪನ ಹತ್ತಿರ ತರಕೂಡದು ಎಂದು ನಾನು ಮತ್ತು ಬೇಬಿ ಹೇಳಿದೆವು.

ಆದರೆ ನಾನು ಹೇಳಿದಷ್ಟು ಅವತ್ತಿನ ಪರಿಸ್ಥಿತಿ ಸರಳವಾಗಿರಲಿಲ್ಲ. ನನ್ನ ದೊಡ್ಡಪ್ಪ ಮತ್ತು ಅವರ ಮಗ ನಾಗರಾಜು “ ಇದೇನಿದು, ಲಿಂಗಾಯತರು ತೋಡುವಂತೆ ಗುಂಡಿಯನ್ನು ತೋಡಿಲ್ಲ” ಎಂದು ತಕರಾರು ಎತ್ತಿದರು. ಅದೆಲ್ಲ ಬೇಡ ಅಂದರೆ ಅವರು ಸಿದ್ಧರಾಗಿರಲಿಲ್ಲ. ಅದರಲ್ಲೂ ದೊಡ್ಡಪ್ಪ ಇದ್ದವರು ಇನ್ನೊಂದು ವಿಚಾರ ಕೈಗೆತ್ತಿಕೊಂಡರು. “ ಹೀಗೆ ಅಂಗಾತ ಮಲಗಿಸುವುದು ಸರಿಯಲ್ಲ ಕಾಲುಗಳನ್ನು ಮಡಚಿ ನಮ್ಮ ಸಂಪ್ರದಾಯದಂತೆ ಕೂರಿಸಿರಬೇಕು” ಎಂದರು. ಅಷ್ಟೊತ್ತಿಗಾಗಲೇ ಅಪ್ಪ ಹೋಗಿ 36 ಗಂಟೆಗಳಾಗಿದ್ದವು. ಆದ್ದರಿಂದ ಏನು? ಅಪ್ಪನ ಕೈಕಾಲು ಮುರಿತೀರಾ? ಅಂತ ನಾನು ಕೇಳಿದರೆ ದೊಡ್ಡಪ್ಪ ಏನಂದಿದ್ದರು ಗೊತ್ತಾ “ಮುರುದ್ರೆ ನೋವಾಗಲ್ಲ”. ಅದನ್ನು ಕೇಳಿ ನನಗೆ ಅಳಬೇಕೋ, ಕೋಪಗೊಳ್ಳಬೇಕೋ, ಗೊತ್ತಾಗಲಿಲ್ಲ. ‘ಅದೆಲ್ಲ ಗೊತ್ತಿಲ್ಲ. ಅಪ್ಪನ ನಂಬಿಕೆಗೆ ವಿದುದ್ಧವಾಗಿ ಯಾರೂ ಏನನ್ನು ಮಾಡುವಂತಿಲ್ಲ. ಆ ಜಾಗಕ್ಕೆ ನೀವೆಲ್ಲ ಪೂಜೆ ಮಾಡಿಸಲು ಬಿಟ್ಟಿದೇ ಹೆಚ್ಚು” ಎಂದು ಹೇಳಿ ಕೊನೆಗೂ ಅವರ ಬಾಯಿ ಮುಚ್ಚಿಸಿದ್ದೆ.

ಇನ್ನೇನು ಎಲ್ಲ ಮುಗಿಯಿತು. ಗುಂಡಿಗೆ ಮಣ್ಣು ಹಾಕಬೇಕು. ಆಗ ಗುಂಡಿಯಲ್ಲಿ ಅಪ್ಪನ ಪಕ್ಕ ನಿಂತಿದ್ದ ಒಬ್ಬ ಅದೆಲ್ಲಿಂದಲೋ ಲಿಂಗವೊಂದನ್ನು ಅಪ್ಪನ ಕತ್ತಿಗೆ ಕಟ್ಟಿದ. ಅದನ್ನು ನೋಡಿ ನನಗೆ ರೇಗಿತು. “ಅದನ್ನು ಬಿಚ್ಟು ಈಗಲೇ ಬಿಚ್ಚು’ ಎಂದು ಅರಚಿದೆ. ಅದೇ ಹೊತ್ತಿಗೆ ದೊಡ್ಡಪ್ಪ ಕರೆದುಕೊಂಡು ಬಂದಿದ್ದ ತಮಟೆಯವರು ಜೋರಾಗಿ ಬಾರಿಸಲಾರಂಭಿಸಿದರು. ಸುತ್ತಮುತ್ತಲಿದ್ದವರೆಲ್ಲಾ ಜೋರಾಗಿ ಅಳುತ್ತಿದ್ದರು. ಆ ಗದ್ದಲದಲ್ಲಿ ನನ್ನ ಮಾತು ಕೇಳಿಸುವಂತಿರಲಿಲ್ಲ ಬೇಬಿಗೆ ರೇಗಿ ಹೋಯಿತು. “ತಮಟೆಯವರಿಗೆ ನಿಲ್ಲಿಸಲು ಹೇಳಿ” ಎಂದು ಚೀರಿದಳು. ಅವಳೊಂದಿಗೆ ಪ್ರಕಾಶ್ ರೈ ಕೂಡ ದನಿಗೂಡಿಸಿದ್ದರಿಂದ ತಕ್ಷಣವೇ ಅವರು ತಮ್ಮ ಅಬ್ಬರವನ್ನು ನಿಲ್ಲಿಸಿದರು. ಗುಂಡಿಯಲ್ಲಿದ್ದವ ಅಪ್ಪನಿಗೆ ತೊಡಿಸಿದ್ದ ಲಿಂಗವನ್ನು ತೆಗೆಯಲು ಮತ್ತೆ ಹೇಳಿದಾಗ ಆತನಿಗೆ ಕೇಳಿಸಿತು. ಬೇರೆ ದಾರಿ ಇಲ್ಲದೆ ಅದನ್ನವನು ಬಿಚ್ಚಿದ. ಜಾತಿ ಸಂಪ್ರದಾಯದ ಮಾತು ಬದಿಗಿರಲಿ, ಅಪ್ಪನ ಸಂಪ್ರದಾಯವನ್ನಂತು ನಾವು ಪಾಲಿಸಿದೆವು. ಅದು ಹೇಗೆಂದರೆ ಅಪ್ಪನ ಸಂಪ್ರದಾಯದಲ್ಲಿ ಅತ್ಯಗತ್ಯವಾಗಿದ್ದ ಪೇಪರ್ ಮತ್ತು ಪೆನ್, ಸಿಗರೇಟ್ ಪ್ಯಾಕ್ ಮತ್ತು ಬೆಂಕಿಪೊಟ್ಟಣ , ಒಂದು ಬ್ಲಾಕ್ ಲೇಬಲ್ ವಿಸ್ಕಿ ಬಾಟಲ್ ,ಕುದುರೆ ರೇಸ್ ಪುಸ್ತಕ, ಇಸ್ಪೀಟು ಕಾರ್ಡ್‍ಗಳು, ಕಾದಂಬರಿ ಇತ್ಯಾದಿಗಳನ್ನೆಲ್ಲ ಅವರೊಂದಿಗೆ ಬೀಳ್ಕೊಟ್ಟೆವು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....