Homeಅಂಕಣಗಳುಅಪ್ಪನ ವಿದಾಯ ಮತ್ತು ವೈಚಾರಿಕತೆ

ಅಪ್ಪನ ವಿದಾಯ ಮತ್ತು ವೈಚಾರಿಕತೆ

- Advertisement -
- Advertisement -

| ಗೌರಿ ಲಂಕೇಶ್ |
ಜುಲೈ 29, 2009 (ಸಂಪಾದಕೀಯದಿಂದ)

ಅವತ್ತು ದೆಹಲಿಯಿಂದ ಬಂದು ಅಪ್ಪನನ್ನು ನೋಡಿದಾಗ ಅವರು ಟಾಟಾ ಹೇಳುತ್ತಿರುವಂತೆ ಒಂದು ಕೈ ಮೇಲಕ್ಕೆ ಚಾಚಿತ್ತು. ಅವರು ತಮ್ಮ ಫೇವರೇಟ್ ಆದ ನೀಲಿ ಬಣ್ಣದ ಸ್ವೆಟರ್ ಧರಿಸಿದ್ದರು. ಕಣ್ಣೀರು ತುಂಬಿದ್ದ ನನ್ನ ಕಣ್ಣುಗಳಿಗೆ ಏನೋ ಸರಿ ಇಲ್ಲ ಅನಿಸುತ್ತಿತ್ತು. ಮರುಕ್ಷಣವೇ ಅದೇನೆಂದು ಗೊತ್ತಾಯಿತು. ಅದೇ ಕ್ಷಣ ನನ್ನ ತಂಗಿ ಬೇಬಿ ಕೂಡ “ವಿಭೂತಿಯನ್ನು ಅಳಿಸು ಗೌರು” ಅಂದಳು. ಅವತ್ತು ನಮ್ಮ ಮನೆಗೆ ಬಂದಿದ್ದ ಅದ್ಯಾರೋ ಅಪ್ಪನ ಹಣೆಗೆ ವಿಭೂತಿ ಬಳಿದಿದ್ದರು. ತಣ್ಣಗಾಗಿದ್ದ ಅಪ್ಪನನ್ನು ಮುಟ್ಟಲಾಗದೇ ಬೇಬಿ ನನಗಾಗಿ ಕಾದಿದ್ದು ನಾನು ಬಂದಕೂಡಲೇ ಹಾಗೆ ಹೇಳಿದ್ದಳು. ದುಃಖದ ಜೊತೆಗೆ ಕೋಪವೂ ಬಂತು. ನನ್ನಪ್ಪ ಎಂದೂ ವಿಭೂತಿ(ಚಿಕ್ಕವರಿದ್ದಾಗ ಹೊರತುಪಡಿಸಿ) ಧರಿಸಿದವರಲ್ಲ, ಪೂಜೆ ಮಾಡಿದವರಲ್ಲ, ಲಿಂಗ ಕಟ್ಟಕೊಂಡವರಲ್ಲ, ಅಂತಹ ನನ್ನ ಅಪ್ಪ ಅಸಹಾಯಕರಾಗಿದ್ದಾಗ, ಪ್ರತಿಭಟಿಸದಂತಾಗಿದ್ದಾಗ ಅವರ ಹಣೆಗೆ ವಿಭೂತಿ ಹಚ್ಚಿದರು. ಅದನ್ನು ಕೂಡಲೇ ಒರೆಸಿದ ನಾನು “ನನ್ನಪ್ಪನನ್ನು ಯಾರೂ ಮುಟ್ಟಬೇಡಿ, ಇಂತಹದ್ದನ್ನೆಲ್ಲ ಮಾಡಬೇಡಿ” ಎಂದು ಆರ್ಭಟಿಸಿದ್ದೆ.

ಆದರೂ ಅದೆಲ್ಲ ಅಲ್ಲಿಗೇ ನಿಲ್ಲಲಿಲ್ಲ. ಮರುದಿನ ಆಗಮಿಸಿದ ಅಪ್ಪನ ಅಣ್ಣ ಶಿವರುದ್ರಪ್ಪ ಮತ್ತು ಇತರೆ ಸಂಬಂಧಿಗಳು ಅಪ್ಪನಿಗೆ ಅವಮಾನ ಮಾಡದಂತೆ ತಡೆಯುವುದೇ ಒಂದು ಕೆಲಸವಾಗಿ ಹೋಯಿತು. ಅವರ್ಯಾರೂ ಅಪ್ಪನಿಗೆ ಪೂಜೆ ಮಾಡದಂತೆ, ಕುಂಕುಮ ವಿಭೂತಿ ಹಚ್ಚದಂತೆ ನಾವೆಲ್ಲರೂ ಕಟ್ಟೆಚ್ಚರ ವಹಿಸಿದೆವು. ಅಪ್ಪನನ್ನು ತೋಟಕ್ಕೆ ಕರೆದುಕೊಂಡು ಹೋದಾಗ ನೋಡುತ್ತೇವೆ, ಅಲ್ಲಿ ಯಾರೋ ಆಗಲೇ ಚಟ್ಟವನ್ನು ಕಟ್ಟಿದ್ದರು. ವಾಹನದಿಂದ ಅಪ್ಪನನ್ನು ಇಳಿಸಿ ಆ ಚಟ್ಟದಲ್ಲಿ ಎತ್ತಿಕೊಂಡು ಹೋಗುವ ಉದ್ದೇಶ ಅವರದ್ದಾಗಿತ್ತು. ಕೂಡಲೇ ಆ ಚಟ್ಟವನ್ನು ನನ್ನ ಅಪ್ಪನ ಹತ್ತಿರ ತರಕೂಡದು ಎಂದು ನಾನು ಮತ್ತು ಬೇಬಿ ಹೇಳಿದೆವು.

ಆದರೆ ನಾನು ಹೇಳಿದಷ್ಟು ಅವತ್ತಿನ ಪರಿಸ್ಥಿತಿ ಸರಳವಾಗಿರಲಿಲ್ಲ. ನನ್ನ ದೊಡ್ಡಪ್ಪ ಮತ್ತು ಅವರ ಮಗ ನಾಗರಾಜು “ ಇದೇನಿದು, ಲಿಂಗಾಯತರು ತೋಡುವಂತೆ ಗುಂಡಿಯನ್ನು ತೋಡಿಲ್ಲ” ಎಂದು ತಕರಾರು ಎತ್ತಿದರು. ಅದೆಲ್ಲ ಬೇಡ ಅಂದರೆ ಅವರು ಸಿದ್ಧರಾಗಿರಲಿಲ್ಲ. ಅದರಲ್ಲೂ ದೊಡ್ಡಪ್ಪ ಇದ್ದವರು ಇನ್ನೊಂದು ವಿಚಾರ ಕೈಗೆತ್ತಿಕೊಂಡರು. “ ಹೀಗೆ ಅಂಗಾತ ಮಲಗಿಸುವುದು ಸರಿಯಲ್ಲ ಕಾಲುಗಳನ್ನು ಮಡಚಿ ನಮ್ಮ ಸಂಪ್ರದಾಯದಂತೆ ಕೂರಿಸಿರಬೇಕು” ಎಂದರು. ಅಷ್ಟೊತ್ತಿಗಾಗಲೇ ಅಪ್ಪ ಹೋಗಿ 36 ಗಂಟೆಗಳಾಗಿದ್ದವು. ಆದ್ದರಿಂದ ಏನು? ಅಪ್ಪನ ಕೈಕಾಲು ಮುರಿತೀರಾ? ಅಂತ ನಾನು ಕೇಳಿದರೆ ದೊಡ್ಡಪ್ಪ ಏನಂದಿದ್ದರು ಗೊತ್ತಾ “ಮುರುದ್ರೆ ನೋವಾಗಲ್ಲ”. ಅದನ್ನು ಕೇಳಿ ನನಗೆ ಅಳಬೇಕೋ, ಕೋಪಗೊಳ್ಳಬೇಕೋ, ಗೊತ್ತಾಗಲಿಲ್ಲ. ‘ಅದೆಲ್ಲ ಗೊತ್ತಿಲ್ಲ. ಅಪ್ಪನ ನಂಬಿಕೆಗೆ ವಿದುದ್ಧವಾಗಿ ಯಾರೂ ಏನನ್ನು ಮಾಡುವಂತಿಲ್ಲ. ಆ ಜಾಗಕ್ಕೆ ನೀವೆಲ್ಲ ಪೂಜೆ ಮಾಡಿಸಲು ಬಿಟ್ಟಿದೇ ಹೆಚ್ಚು” ಎಂದು ಹೇಳಿ ಕೊನೆಗೂ ಅವರ ಬಾಯಿ ಮುಚ್ಚಿಸಿದ್ದೆ.

ಇನ್ನೇನು ಎಲ್ಲ ಮುಗಿಯಿತು. ಗುಂಡಿಗೆ ಮಣ್ಣು ಹಾಕಬೇಕು. ಆಗ ಗುಂಡಿಯಲ್ಲಿ ಅಪ್ಪನ ಪಕ್ಕ ನಿಂತಿದ್ದ ಒಬ್ಬ ಅದೆಲ್ಲಿಂದಲೋ ಲಿಂಗವೊಂದನ್ನು ಅಪ್ಪನ ಕತ್ತಿಗೆ ಕಟ್ಟಿದ. ಅದನ್ನು ನೋಡಿ ನನಗೆ ರೇಗಿತು. “ಅದನ್ನು ಬಿಚ್ಟು ಈಗಲೇ ಬಿಚ್ಚು’ ಎಂದು ಅರಚಿದೆ. ಅದೇ ಹೊತ್ತಿಗೆ ದೊಡ್ಡಪ್ಪ ಕರೆದುಕೊಂಡು ಬಂದಿದ್ದ ತಮಟೆಯವರು ಜೋರಾಗಿ ಬಾರಿಸಲಾರಂಭಿಸಿದರು. ಸುತ್ತಮುತ್ತಲಿದ್ದವರೆಲ್ಲಾ ಜೋರಾಗಿ ಅಳುತ್ತಿದ್ದರು. ಆ ಗದ್ದಲದಲ್ಲಿ ನನ್ನ ಮಾತು ಕೇಳಿಸುವಂತಿರಲಿಲ್ಲ ಬೇಬಿಗೆ ರೇಗಿ ಹೋಯಿತು. “ತಮಟೆಯವರಿಗೆ ನಿಲ್ಲಿಸಲು ಹೇಳಿ” ಎಂದು ಚೀರಿದಳು. ಅವಳೊಂದಿಗೆ ಪ್ರಕಾಶ್ ರೈ ಕೂಡ ದನಿಗೂಡಿಸಿದ್ದರಿಂದ ತಕ್ಷಣವೇ ಅವರು ತಮ್ಮ ಅಬ್ಬರವನ್ನು ನಿಲ್ಲಿಸಿದರು. ಗುಂಡಿಯಲ್ಲಿದ್ದವ ಅಪ್ಪನಿಗೆ ತೊಡಿಸಿದ್ದ ಲಿಂಗವನ್ನು ತೆಗೆಯಲು ಮತ್ತೆ ಹೇಳಿದಾಗ ಆತನಿಗೆ ಕೇಳಿಸಿತು. ಬೇರೆ ದಾರಿ ಇಲ್ಲದೆ ಅದನ್ನವನು ಬಿಚ್ಚಿದ. ಜಾತಿ ಸಂಪ್ರದಾಯದ ಮಾತು ಬದಿಗಿರಲಿ, ಅಪ್ಪನ ಸಂಪ್ರದಾಯವನ್ನಂತು ನಾವು ಪಾಲಿಸಿದೆವು. ಅದು ಹೇಗೆಂದರೆ ಅಪ್ಪನ ಸಂಪ್ರದಾಯದಲ್ಲಿ ಅತ್ಯಗತ್ಯವಾಗಿದ್ದ ಪೇಪರ್ ಮತ್ತು ಪೆನ್, ಸಿಗರೇಟ್ ಪ್ಯಾಕ್ ಮತ್ತು ಬೆಂಕಿಪೊಟ್ಟಣ , ಒಂದು ಬ್ಲಾಕ್ ಲೇಬಲ್ ವಿಸ್ಕಿ ಬಾಟಲ್ ,ಕುದುರೆ ರೇಸ್ ಪುಸ್ತಕ, ಇಸ್ಪೀಟು ಕಾರ್ಡ್‍ಗಳು, ಕಾದಂಬರಿ ಇತ್ಯಾದಿಗಳನ್ನೆಲ್ಲ ಅವರೊಂದಿಗೆ ಬೀಳ್ಕೊಟ್ಟೆವು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...