Homeಅಂಕಣಗಳುಅಪ್ಪನ ವಿದಾಯ ಮತ್ತು ವೈಚಾರಿಕತೆ

ಅಪ್ಪನ ವಿದಾಯ ಮತ್ತು ವೈಚಾರಿಕತೆ

- Advertisement -
- Advertisement -

| ಗೌರಿ ಲಂಕೇಶ್ |
ಜುಲೈ 29, 2009 (ಸಂಪಾದಕೀಯದಿಂದ)

ಅವತ್ತು ದೆಹಲಿಯಿಂದ ಬಂದು ಅಪ್ಪನನ್ನು ನೋಡಿದಾಗ ಅವರು ಟಾಟಾ ಹೇಳುತ್ತಿರುವಂತೆ ಒಂದು ಕೈ ಮೇಲಕ್ಕೆ ಚಾಚಿತ್ತು. ಅವರು ತಮ್ಮ ಫೇವರೇಟ್ ಆದ ನೀಲಿ ಬಣ್ಣದ ಸ್ವೆಟರ್ ಧರಿಸಿದ್ದರು. ಕಣ್ಣೀರು ತುಂಬಿದ್ದ ನನ್ನ ಕಣ್ಣುಗಳಿಗೆ ಏನೋ ಸರಿ ಇಲ್ಲ ಅನಿಸುತ್ತಿತ್ತು. ಮರುಕ್ಷಣವೇ ಅದೇನೆಂದು ಗೊತ್ತಾಯಿತು. ಅದೇ ಕ್ಷಣ ನನ್ನ ತಂಗಿ ಬೇಬಿ ಕೂಡ “ವಿಭೂತಿಯನ್ನು ಅಳಿಸು ಗೌರು” ಅಂದಳು. ಅವತ್ತು ನಮ್ಮ ಮನೆಗೆ ಬಂದಿದ್ದ ಅದ್ಯಾರೋ ಅಪ್ಪನ ಹಣೆಗೆ ವಿಭೂತಿ ಬಳಿದಿದ್ದರು. ತಣ್ಣಗಾಗಿದ್ದ ಅಪ್ಪನನ್ನು ಮುಟ್ಟಲಾಗದೇ ಬೇಬಿ ನನಗಾಗಿ ಕಾದಿದ್ದು ನಾನು ಬಂದಕೂಡಲೇ ಹಾಗೆ ಹೇಳಿದ್ದಳು. ದುಃಖದ ಜೊತೆಗೆ ಕೋಪವೂ ಬಂತು. ನನ್ನಪ್ಪ ಎಂದೂ ವಿಭೂತಿ(ಚಿಕ್ಕವರಿದ್ದಾಗ ಹೊರತುಪಡಿಸಿ) ಧರಿಸಿದವರಲ್ಲ, ಪೂಜೆ ಮಾಡಿದವರಲ್ಲ, ಲಿಂಗ ಕಟ್ಟಕೊಂಡವರಲ್ಲ, ಅಂತಹ ನನ್ನ ಅಪ್ಪ ಅಸಹಾಯಕರಾಗಿದ್ದಾಗ, ಪ್ರತಿಭಟಿಸದಂತಾಗಿದ್ದಾಗ ಅವರ ಹಣೆಗೆ ವಿಭೂತಿ ಹಚ್ಚಿದರು. ಅದನ್ನು ಕೂಡಲೇ ಒರೆಸಿದ ನಾನು “ನನ್ನಪ್ಪನನ್ನು ಯಾರೂ ಮುಟ್ಟಬೇಡಿ, ಇಂತಹದ್ದನ್ನೆಲ್ಲ ಮಾಡಬೇಡಿ” ಎಂದು ಆರ್ಭಟಿಸಿದ್ದೆ.

ಆದರೂ ಅದೆಲ್ಲ ಅಲ್ಲಿಗೇ ನಿಲ್ಲಲಿಲ್ಲ. ಮರುದಿನ ಆಗಮಿಸಿದ ಅಪ್ಪನ ಅಣ್ಣ ಶಿವರುದ್ರಪ್ಪ ಮತ್ತು ಇತರೆ ಸಂಬಂಧಿಗಳು ಅಪ್ಪನಿಗೆ ಅವಮಾನ ಮಾಡದಂತೆ ತಡೆಯುವುದೇ ಒಂದು ಕೆಲಸವಾಗಿ ಹೋಯಿತು. ಅವರ್ಯಾರೂ ಅಪ್ಪನಿಗೆ ಪೂಜೆ ಮಾಡದಂತೆ, ಕುಂಕುಮ ವಿಭೂತಿ ಹಚ್ಚದಂತೆ ನಾವೆಲ್ಲರೂ ಕಟ್ಟೆಚ್ಚರ ವಹಿಸಿದೆವು. ಅಪ್ಪನನ್ನು ತೋಟಕ್ಕೆ ಕರೆದುಕೊಂಡು ಹೋದಾಗ ನೋಡುತ್ತೇವೆ, ಅಲ್ಲಿ ಯಾರೋ ಆಗಲೇ ಚಟ್ಟವನ್ನು ಕಟ್ಟಿದ್ದರು. ವಾಹನದಿಂದ ಅಪ್ಪನನ್ನು ಇಳಿಸಿ ಆ ಚಟ್ಟದಲ್ಲಿ ಎತ್ತಿಕೊಂಡು ಹೋಗುವ ಉದ್ದೇಶ ಅವರದ್ದಾಗಿತ್ತು. ಕೂಡಲೇ ಆ ಚಟ್ಟವನ್ನು ನನ್ನ ಅಪ್ಪನ ಹತ್ತಿರ ತರಕೂಡದು ಎಂದು ನಾನು ಮತ್ತು ಬೇಬಿ ಹೇಳಿದೆವು.

ಆದರೆ ನಾನು ಹೇಳಿದಷ್ಟು ಅವತ್ತಿನ ಪರಿಸ್ಥಿತಿ ಸರಳವಾಗಿರಲಿಲ್ಲ. ನನ್ನ ದೊಡ್ಡಪ್ಪ ಮತ್ತು ಅವರ ಮಗ ನಾಗರಾಜು “ ಇದೇನಿದು, ಲಿಂಗಾಯತರು ತೋಡುವಂತೆ ಗುಂಡಿಯನ್ನು ತೋಡಿಲ್ಲ” ಎಂದು ತಕರಾರು ಎತ್ತಿದರು. ಅದೆಲ್ಲ ಬೇಡ ಅಂದರೆ ಅವರು ಸಿದ್ಧರಾಗಿರಲಿಲ್ಲ. ಅದರಲ್ಲೂ ದೊಡ್ಡಪ್ಪ ಇದ್ದವರು ಇನ್ನೊಂದು ವಿಚಾರ ಕೈಗೆತ್ತಿಕೊಂಡರು. “ ಹೀಗೆ ಅಂಗಾತ ಮಲಗಿಸುವುದು ಸರಿಯಲ್ಲ ಕಾಲುಗಳನ್ನು ಮಡಚಿ ನಮ್ಮ ಸಂಪ್ರದಾಯದಂತೆ ಕೂರಿಸಿರಬೇಕು” ಎಂದರು. ಅಷ್ಟೊತ್ತಿಗಾಗಲೇ ಅಪ್ಪ ಹೋಗಿ 36 ಗಂಟೆಗಳಾಗಿದ್ದವು. ಆದ್ದರಿಂದ ಏನು? ಅಪ್ಪನ ಕೈಕಾಲು ಮುರಿತೀರಾ? ಅಂತ ನಾನು ಕೇಳಿದರೆ ದೊಡ್ಡಪ್ಪ ಏನಂದಿದ್ದರು ಗೊತ್ತಾ “ಮುರುದ್ರೆ ನೋವಾಗಲ್ಲ”. ಅದನ್ನು ಕೇಳಿ ನನಗೆ ಅಳಬೇಕೋ, ಕೋಪಗೊಳ್ಳಬೇಕೋ, ಗೊತ್ತಾಗಲಿಲ್ಲ. ‘ಅದೆಲ್ಲ ಗೊತ್ತಿಲ್ಲ. ಅಪ್ಪನ ನಂಬಿಕೆಗೆ ವಿದುದ್ಧವಾಗಿ ಯಾರೂ ಏನನ್ನು ಮಾಡುವಂತಿಲ್ಲ. ಆ ಜಾಗಕ್ಕೆ ನೀವೆಲ್ಲ ಪೂಜೆ ಮಾಡಿಸಲು ಬಿಟ್ಟಿದೇ ಹೆಚ್ಚು” ಎಂದು ಹೇಳಿ ಕೊನೆಗೂ ಅವರ ಬಾಯಿ ಮುಚ್ಚಿಸಿದ್ದೆ.

ಇನ್ನೇನು ಎಲ್ಲ ಮುಗಿಯಿತು. ಗುಂಡಿಗೆ ಮಣ್ಣು ಹಾಕಬೇಕು. ಆಗ ಗುಂಡಿಯಲ್ಲಿ ಅಪ್ಪನ ಪಕ್ಕ ನಿಂತಿದ್ದ ಒಬ್ಬ ಅದೆಲ್ಲಿಂದಲೋ ಲಿಂಗವೊಂದನ್ನು ಅಪ್ಪನ ಕತ್ತಿಗೆ ಕಟ್ಟಿದ. ಅದನ್ನು ನೋಡಿ ನನಗೆ ರೇಗಿತು. “ಅದನ್ನು ಬಿಚ್ಟು ಈಗಲೇ ಬಿಚ್ಚು’ ಎಂದು ಅರಚಿದೆ. ಅದೇ ಹೊತ್ತಿಗೆ ದೊಡ್ಡಪ್ಪ ಕರೆದುಕೊಂಡು ಬಂದಿದ್ದ ತಮಟೆಯವರು ಜೋರಾಗಿ ಬಾರಿಸಲಾರಂಭಿಸಿದರು. ಸುತ್ತಮುತ್ತಲಿದ್ದವರೆಲ್ಲಾ ಜೋರಾಗಿ ಅಳುತ್ತಿದ್ದರು. ಆ ಗದ್ದಲದಲ್ಲಿ ನನ್ನ ಮಾತು ಕೇಳಿಸುವಂತಿರಲಿಲ್ಲ ಬೇಬಿಗೆ ರೇಗಿ ಹೋಯಿತು. “ತಮಟೆಯವರಿಗೆ ನಿಲ್ಲಿಸಲು ಹೇಳಿ” ಎಂದು ಚೀರಿದಳು. ಅವಳೊಂದಿಗೆ ಪ್ರಕಾಶ್ ರೈ ಕೂಡ ದನಿಗೂಡಿಸಿದ್ದರಿಂದ ತಕ್ಷಣವೇ ಅವರು ತಮ್ಮ ಅಬ್ಬರವನ್ನು ನಿಲ್ಲಿಸಿದರು. ಗುಂಡಿಯಲ್ಲಿದ್ದವ ಅಪ್ಪನಿಗೆ ತೊಡಿಸಿದ್ದ ಲಿಂಗವನ್ನು ತೆಗೆಯಲು ಮತ್ತೆ ಹೇಳಿದಾಗ ಆತನಿಗೆ ಕೇಳಿಸಿತು. ಬೇರೆ ದಾರಿ ಇಲ್ಲದೆ ಅದನ್ನವನು ಬಿಚ್ಚಿದ. ಜಾತಿ ಸಂಪ್ರದಾಯದ ಮಾತು ಬದಿಗಿರಲಿ, ಅಪ್ಪನ ಸಂಪ್ರದಾಯವನ್ನಂತು ನಾವು ಪಾಲಿಸಿದೆವು. ಅದು ಹೇಗೆಂದರೆ ಅಪ್ಪನ ಸಂಪ್ರದಾಯದಲ್ಲಿ ಅತ್ಯಗತ್ಯವಾಗಿದ್ದ ಪೇಪರ್ ಮತ್ತು ಪೆನ್, ಸಿಗರೇಟ್ ಪ್ಯಾಕ್ ಮತ್ತು ಬೆಂಕಿಪೊಟ್ಟಣ , ಒಂದು ಬ್ಲಾಕ್ ಲೇಬಲ್ ವಿಸ್ಕಿ ಬಾಟಲ್ ,ಕುದುರೆ ರೇಸ್ ಪುಸ್ತಕ, ಇಸ್ಪೀಟು ಕಾರ್ಡ್‍ಗಳು, ಕಾದಂಬರಿ ಇತ್ಯಾದಿಗಳನ್ನೆಲ್ಲ ಅವರೊಂದಿಗೆ ಬೀಳ್ಕೊಟ್ಟೆವು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...