Homeಅಂಕಣಗಳುಅಂಬೇಡ್ಕರ್, ಸಂಸ್ಕøತ ಮತ್ತು ಮನುವಾದಿಗಳು

ಅಂಬೇಡ್ಕರ್, ಸಂಸ್ಕøತ ಮತ್ತು ಮನುವಾದಿಗಳು

- Advertisement -
- Advertisement -

ಗೌರಿ ಲಂಕೇಶ್
25 ಏಪ್ರಿಲ್ , 2007 (`ಕಂಡಹಾಗೆ’ ಸಂಪಾದಕೀಯದಿಂದ)|

ಮೊನ್ನೆ ಬೆಂಗಳೂರಿನಲ್ಲಿ ಕುತೂಹಲಕಾರಿ ಕಾರ್ಯಕ್ರಮವೊಂದು ನಡೆಯಿತು. ಸಂಘ ಪರಿವಾರದವರು ಏರ್ಪಡಿಸಿದ್ದ “ಅಂಬೇಡ್ಕರ್ ಸಂಸ್ಕøತಿ ಶೋಭಾಯಾತ್ರೆ” ಎಂಬ ಆ ಕಾರ್ಯಕ್ರಮದಲ್ಲಿ ಒಂದು ಕರಪತ್ರವನ್ನೂ ಹಂಚಿದ್ದರು. ಯಾರಿಗೂ ಬಾರದ ಸಂಸ್ಕøತ ಭಾಷೆಯಲ್ಲೇ ಬರೆಯಲಾಗಿದ್ದ ಆ ಕರಪತ್ರದಲ್ಲಿ ಒಂದೇ ಒಂದು ಸಾಲು ಕನ್ನಡದಲ್ಲಿದ್ದು, ಅದು ಹೀಗಿತ್ತು. “1949ರ ಸೆಪ್ಟೆಂಬರ್ 10ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್‍ರವರು ಸಂಸ್ಕøತವೇ ರಾಷ್ಟ್ರಭಾಷೆ ಆಗಬೇಕೆಂದಿದ್ದರಲ್ಲದೆ, ತಮ್ಮ ಈ ಅಭಿಪ್ರಾಯವನ್ನು ಸಂಸ್ಕøತದಲ್ಲೇ ಮಂಡಿಸಿದ್ದರು.”
ಅಂಬೇಡ್ಕರ್ ಸಂಸ್ಕøತ ಭಾಷೆಯನ್ನು ಚೆನ್ನಾಗಿ ಕಲಿತಿದ್ದರು ಅನ್ನೋದು ಗೊತ್ತಿತ್ತು. ಅವರು ಅದನ್ನು ಕಲಿತದ್ದು ಸ್ವ-ಇಚ್ಛೆ ಮತ್ತು ಶ್ರದ್ಧೆಯಿಂದ. ಅಂಬೇಡ್ಕರ್ ದಲಿತರಾಗಿದ್ದರಿಂದ ಅವರಿಗೆ ಶಾಲೆಯಲ್ಲಿ ಸಂಸ್ಕøತ ಹೇಳಿಕೊಡುವುದಿಲ್ಲ ಎಂದು ಮಾಸ್ತರರು ಹೇಳಿದ್ದರು. ಜನರ ಶೋಷಣೆಯ ಭಾಷೆಯೇ ಆಗಿದ್ದ ಸಂಸ್ಕøತದಲ್ಲಿ ಮತ್ತು ಸಂಸ್ಕøತದಲ್ಲೇ ರಚಿಸಿದ್ದ ಪುಸ್ತಕಗಳಲ್ಲಿ ಏನಿರಬಹುದು ಎಂದು ಅರಿಯಲಿಕ್ಕೇ ಅವರು ಆ ಭಾಷೆಯನ್ನು ಕಲಿತಿದ್ದರು. ಅಂದಮಾತ್ರಕ್ಕೆ ಅವರು ಸಂಸ್ಕøತವೇ ರಾಷ್ಟ್ರಭಾಷೆಯಾಗಲಿ ಎಂದು ಸಂಸ್ಕøತದಲ್ಲೇ ವಾದ ಮಂಡಿಸಿದ್ದರೆ?
ಇಂಟರ್‍ನೆಟ್‍ನಲ್ಲಿ ಹುಡುಕಾಡಿದಾಗ 1949ರ ಸೆಪ್ಟೆಂಬರ್ 10ರಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆಯು “ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್‍ರವರು ಈ ಪ್ರಸ್ತಾವನೆಯನ್ನು ಮಂಡಿಸಿದರು” ಎಂದು ತಳಬುಡವಿಲ್ಲದ ವರದಿ ಸಿಕ್ಕಿತೇ ವಿನಾಃ ನಿಖರ ಮಾಹಿತಿ ಸಿಗಲಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಈ ರೀತಿ ಅಪಪ್ರಚಾರ ಮಾಡುತ್ತಿರೋದು ಖಾತ್ರಿಯಾಯ್ತು.
ಯಾವುದಕ್ಕೂ ಇರಲಿ ಎಂದು ನಮ್ಮ ಬಳಗದ, ತುಂಬಾ ಜಾಣೆ ರಾಜಲಕ್ಷ್ಮಿ ಅಂಕಲಗಿ ಎಂಬ ಯುವ ವಕೀಲೆಗೆ ಫೋನ್ ಮಾಡಿ ವಿಷಯ ತಿಳಿಸಿದೆ. “ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಕುರಿತ ಐದು ಪುಸ್ತಕಗಳೂ ನಮ್ಮ ಆಫೀಸಿನಲ್ಲಿವೆ. ಅವನ್ನು ನೋಡಿ ನಿಮಗೆ ತಿಳಿಸುತ್ತೇನೆ” ಎಂದಳು ಆಕೆ. ಅರ್ಧ ಗಂಟೆಯ ನಂತರ ಆಕೆ ನೀಡಿದ ಮಾಹಿತಿ ಹೀಗಿತ್ತು:
“1949ರ ಸೆಪ್ಟೆಂಬರ್ ಎಂಟನೇ ಮತ್ತು ಒಂಬತ್ತನೇ ತಾರೀಖು ನಡೆದ ಸಂವಿಧಾನ ರಚನಾ ಸಭೆಯಲ್ಲಿ ತೆರಿಗೆ ಕುರಿತ ಚರ್ಚೆಗಳು ಶುರುವಾಗಿ 10ನೇ ತಾರೀಖಿನವರೆಗೂ ಸಾಗಿದವು. 10ನೇ ತಾರೀಖು ಆಸ್ತಿ ಹೊಂದುವ ನೀತಿಗಳನ್ನು ಕುರಿತಂತೆ ಆರ್ಟಿಕಲ್ 24ರ ಬಗ್ಗೆ ಚರ್ಚೆಗಳಾದವು. ಅಂದು ಶನಿವಾರವಾದ್ದರಿಂದ ಸಭೆ ಮಧ್ಯಾಹ್ನ ನಿಂತಿತು. 11ನೇ ತಾರೀಖು ಭಾನುವಾರವಾದ್ದರಿಂದ ಸಭೆ ಮತ್ತೆ 12ನೇ ತಾರೀಖಿನಂದು ಸೇರುತ್ತದೆ. ಅವತ್ತೂ ಸಂಜೆ ನಾಲ್ಕು ಗಂಟೆಯ ತನಕ ಆಸ್ತಿ ಕುರಿತಂತೆ ಚರ್ಚೆ ನಡೆಯುತ್ತದೆ. ಆನಂತರ ಪ್ರಾದೇಶಿಕ ಭಾಷೆಗಳನ್ನು ಕುರಿತ ಚರ್ಚೆ ಆರಂಭವಾಗಿ ಅದು 13 ಮತ್ತು 14ನೇ ತಾರೀಖಿನವರೆಗೂ ನಡೆಯುತ್ತದೆ. ಆಗಲೂ ಹೇಗೆ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ಕೊಡಬೇಕು ಮತ್ತು ಹಿಂದಿಯನ್ನು ಯಾಕೆ ಹೇರಬಾರದು ಎಂಬುದರ ಬಗ್ಗೆಯೇ ಚರ್ಚೆ ನಡೆಯುತ್ತದೆ. 8ರಿಂದ 14ನೇ ತಾರೀಖಿನವರೆಗೂ ನಡೆದ ಚರ್ಚೆಗಳಲ್ಲಿ ಎರಡು ಮುಖ್ಯ ಅಂಶಗಳು ಇವೆ: ಮೊದಲನೆಯದಾಗಿ. ಸಂಸ್ಕøತ ಭಾಷೆಯಲ್ಲಿ ಮಾತನಾಡಿದವರು ಬಿಹಾರದ ಗುಪ್ತನಾಥ ಸಿಂಗ್ ಎಂಬುವವರು. ಆಸ್ತಿ ಹೊಂದುವ ವಿಚಾರ ಕುರಿತಂತೆ ಸಮಾಜವಾದಿ ಸಂವಿಧಾನವನ್ನು ನಿರೂಪಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿರುವಾಗ ಅವರು ಮನುಶಾಸ್ತ್ರದಲ್ಲಿ ಹೇಗೆ ಬಂಡವಾಳಶಾಹಿ ಪರ ಸಿದ್ಧಾಂತಗಳು ಅಡಗಿವೆ ಎಂದು ವಿವರಿಸುತ್ತಾರೆ. ಎರಡನೆಯದು: ಅಂಬೇಡ್ಕರ್‍ರವರು ಸಂಸ್ಕøತದ ಪರವಾಗಿ ಸಂಸ್ಕøತದಲ್ಲಿ ಮಾತನಾಡುವುದಿರಲಿ, ಪ್ರಾದೇಶಿಕ ಭಾಷೆಗಳನ್ನು ಕುರಿತ ಚರ್ಚಾಸಭೆಗಳಲ್ಲಿ ಅವರು ಭಾಗವಹಿಸಿಯೇ ಇಲ್ಲ!!”
ಇದು ಅಧಿಕೃತವಾಗಿ ದಾಖಲಾಗಿರುವ ಸತ್ಯ! ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿತ್ತೆನ್ನಲಾದ ತಲೆ-ಬುಡವಿಲ್ಲದ ಊಹಾಪೋಹವಲ್ಲ! ಆದರೆ ಚಡ್ಡಿಗಳು ಎಂತಹ ಕುತಂತ್ರಿಗಳು ನೋಡಿ. ಒಂದೆಡೆ ಮನುಸ್ಮøತಿಯೇ ನಮ್ಮ ಸಂವಿಧಾನವಾಗಬೇಕಿತ್ತು ಎಂದು ವಾದಿಸಿದ್ದ ಗೋಲ್ವಾಲ್ಕರ್ ಎಂಬ ದ್ವೇಷದ ಗುರುವಿನ ನೂರನೇ ಜನ್ಮೋತ್ಸವವನ್ನು ‘ಹಿಂದೂ ಸಮಾವೇಶ’ ಎಂದು ಆಚರಿಸುತ್ತಾರೆ. ಇನ್ನೊಂದೆಡೆ ದಲಿತರ ನಾಯಕ ಮತ್ತು ಆತ್ಮಪ್ರಜ್ಞೆಯಾಗಿದ್ದ ಅಂಬೇಡ್ಕರ್ ಅವರೇ ಸ್ವತಃ ಸಂಸ್ಕøತದ ಪರವಾಗಿದ್ದರು ಎಂದು ಕಲ್ಪಿಸಿಕೊಂಡು ಸಭೆ ಏರ್ಪಡಿಸುತ್ತಾರೆ. ಇದನ್ನೆಲ್ಲ ಶೂದ್ರರು, ದಲಿತರು ನಂಬುತ್ತಾರೆ. ಗೋಲ್ವಾಲ್ಕರ್‍ನ ಸಭೆಗಳಲ್ಲಿ ಶೂದ್ರರು ಭಾಗವಹಿಸಿದರೆ, ಚೆಡ್ಡಿಗಳ ಅಂಬೇಡ್ಕರ್ ಕಾರ್ಯಕ್ರಮಗಳಲ್ಲಿ ದಲಿತರು ಪಾಲ್ಗೊಳ್ಳುತ್ತಾರೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...