Homeಅಂಕಣಗಳುಅಂಬೇಡ್ಕರ್, ಸಂಸ್ಕøತ ಮತ್ತು ಮನುವಾದಿಗಳು

ಅಂಬೇಡ್ಕರ್, ಸಂಸ್ಕøತ ಮತ್ತು ಮನುವಾದಿಗಳು

- Advertisement -
- Advertisement -

ಗೌರಿ ಲಂಕೇಶ್
25 ಏಪ್ರಿಲ್ , 2007 (`ಕಂಡಹಾಗೆ’ ಸಂಪಾದಕೀಯದಿಂದ)|

ಮೊನ್ನೆ ಬೆಂಗಳೂರಿನಲ್ಲಿ ಕುತೂಹಲಕಾರಿ ಕಾರ್ಯಕ್ರಮವೊಂದು ನಡೆಯಿತು. ಸಂಘ ಪರಿವಾರದವರು ಏರ್ಪಡಿಸಿದ್ದ “ಅಂಬೇಡ್ಕರ್ ಸಂಸ್ಕøತಿ ಶೋಭಾಯಾತ್ರೆ” ಎಂಬ ಆ ಕಾರ್ಯಕ್ರಮದಲ್ಲಿ ಒಂದು ಕರಪತ್ರವನ್ನೂ ಹಂಚಿದ್ದರು. ಯಾರಿಗೂ ಬಾರದ ಸಂಸ್ಕøತ ಭಾಷೆಯಲ್ಲೇ ಬರೆಯಲಾಗಿದ್ದ ಆ ಕರಪತ್ರದಲ್ಲಿ ಒಂದೇ ಒಂದು ಸಾಲು ಕನ್ನಡದಲ್ಲಿದ್ದು, ಅದು ಹೀಗಿತ್ತು. “1949ರ ಸೆಪ್ಟೆಂಬರ್ 10ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್‍ರವರು ಸಂಸ್ಕøತವೇ ರಾಷ್ಟ್ರಭಾಷೆ ಆಗಬೇಕೆಂದಿದ್ದರಲ್ಲದೆ, ತಮ್ಮ ಈ ಅಭಿಪ್ರಾಯವನ್ನು ಸಂಸ್ಕøತದಲ್ಲೇ ಮಂಡಿಸಿದ್ದರು.”
ಅಂಬೇಡ್ಕರ್ ಸಂಸ್ಕøತ ಭಾಷೆಯನ್ನು ಚೆನ್ನಾಗಿ ಕಲಿತಿದ್ದರು ಅನ್ನೋದು ಗೊತ್ತಿತ್ತು. ಅವರು ಅದನ್ನು ಕಲಿತದ್ದು ಸ್ವ-ಇಚ್ಛೆ ಮತ್ತು ಶ್ರದ್ಧೆಯಿಂದ. ಅಂಬೇಡ್ಕರ್ ದಲಿತರಾಗಿದ್ದರಿಂದ ಅವರಿಗೆ ಶಾಲೆಯಲ್ಲಿ ಸಂಸ್ಕøತ ಹೇಳಿಕೊಡುವುದಿಲ್ಲ ಎಂದು ಮಾಸ್ತರರು ಹೇಳಿದ್ದರು. ಜನರ ಶೋಷಣೆಯ ಭಾಷೆಯೇ ಆಗಿದ್ದ ಸಂಸ್ಕøತದಲ್ಲಿ ಮತ್ತು ಸಂಸ್ಕøತದಲ್ಲೇ ರಚಿಸಿದ್ದ ಪುಸ್ತಕಗಳಲ್ಲಿ ಏನಿರಬಹುದು ಎಂದು ಅರಿಯಲಿಕ್ಕೇ ಅವರು ಆ ಭಾಷೆಯನ್ನು ಕಲಿತಿದ್ದರು. ಅಂದಮಾತ್ರಕ್ಕೆ ಅವರು ಸಂಸ್ಕøತವೇ ರಾಷ್ಟ್ರಭಾಷೆಯಾಗಲಿ ಎಂದು ಸಂಸ್ಕøತದಲ್ಲೇ ವಾದ ಮಂಡಿಸಿದ್ದರೆ?
ಇಂಟರ್‍ನೆಟ್‍ನಲ್ಲಿ ಹುಡುಕಾಡಿದಾಗ 1949ರ ಸೆಪ್ಟೆಂಬರ್ 10ರಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆಯು “ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್‍ರವರು ಈ ಪ್ರಸ್ತಾವನೆಯನ್ನು ಮಂಡಿಸಿದರು” ಎಂದು ತಳಬುಡವಿಲ್ಲದ ವರದಿ ಸಿಕ್ಕಿತೇ ವಿನಾಃ ನಿಖರ ಮಾಹಿತಿ ಸಿಗಲಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಈ ರೀತಿ ಅಪಪ್ರಚಾರ ಮಾಡುತ್ತಿರೋದು ಖಾತ್ರಿಯಾಯ್ತು.
ಯಾವುದಕ್ಕೂ ಇರಲಿ ಎಂದು ನಮ್ಮ ಬಳಗದ, ತುಂಬಾ ಜಾಣೆ ರಾಜಲಕ್ಷ್ಮಿ ಅಂಕಲಗಿ ಎಂಬ ಯುವ ವಕೀಲೆಗೆ ಫೋನ್ ಮಾಡಿ ವಿಷಯ ತಿಳಿಸಿದೆ. “ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಕುರಿತ ಐದು ಪುಸ್ತಕಗಳೂ ನಮ್ಮ ಆಫೀಸಿನಲ್ಲಿವೆ. ಅವನ್ನು ನೋಡಿ ನಿಮಗೆ ತಿಳಿಸುತ್ತೇನೆ” ಎಂದಳು ಆಕೆ. ಅರ್ಧ ಗಂಟೆಯ ನಂತರ ಆಕೆ ನೀಡಿದ ಮಾಹಿತಿ ಹೀಗಿತ್ತು:
“1949ರ ಸೆಪ್ಟೆಂಬರ್ ಎಂಟನೇ ಮತ್ತು ಒಂಬತ್ತನೇ ತಾರೀಖು ನಡೆದ ಸಂವಿಧಾನ ರಚನಾ ಸಭೆಯಲ್ಲಿ ತೆರಿಗೆ ಕುರಿತ ಚರ್ಚೆಗಳು ಶುರುವಾಗಿ 10ನೇ ತಾರೀಖಿನವರೆಗೂ ಸಾಗಿದವು. 10ನೇ ತಾರೀಖು ಆಸ್ತಿ ಹೊಂದುವ ನೀತಿಗಳನ್ನು ಕುರಿತಂತೆ ಆರ್ಟಿಕಲ್ 24ರ ಬಗ್ಗೆ ಚರ್ಚೆಗಳಾದವು. ಅಂದು ಶನಿವಾರವಾದ್ದರಿಂದ ಸಭೆ ಮಧ್ಯಾಹ್ನ ನಿಂತಿತು. 11ನೇ ತಾರೀಖು ಭಾನುವಾರವಾದ್ದರಿಂದ ಸಭೆ ಮತ್ತೆ 12ನೇ ತಾರೀಖಿನಂದು ಸೇರುತ್ತದೆ. ಅವತ್ತೂ ಸಂಜೆ ನಾಲ್ಕು ಗಂಟೆಯ ತನಕ ಆಸ್ತಿ ಕುರಿತಂತೆ ಚರ್ಚೆ ನಡೆಯುತ್ತದೆ. ಆನಂತರ ಪ್ರಾದೇಶಿಕ ಭಾಷೆಗಳನ್ನು ಕುರಿತ ಚರ್ಚೆ ಆರಂಭವಾಗಿ ಅದು 13 ಮತ್ತು 14ನೇ ತಾರೀಖಿನವರೆಗೂ ನಡೆಯುತ್ತದೆ. ಆಗಲೂ ಹೇಗೆ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ಕೊಡಬೇಕು ಮತ್ತು ಹಿಂದಿಯನ್ನು ಯಾಕೆ ಹೇರಬಾರದು ಎಂಬುದರ ಬಗ್ಗೆಯೇ ಚರ್ಚೆ ನಡೆಯುತ್ತದೆ. 8ರಿಂದ 14ನೇ ತಾರೀಖಿನವರೆಗೂ ನಡೆದ ಚರ್ಚೆಗಳಲ್ಲಿ ಎರಡು ಮುಖ್ಯ ಅಂಶಗಳು ಇವೆ: ಮೊದಲನೆಯದಾಗಿ. ಸಂಸ್ಕøತ ಭಾಷೆಯಲ್ಲಿ ಮಾತನಾಡಿದವರು ಬಿಹಾರದ ಗುಪ್ತನಾಥ ಸಿಂಗ್ ಎಂಬುವವರು. ಆಸ್ತಿ ಹೊಂದುವ ವಿಚಾರ ಕುರಿತಂತೆ ಸಮಾಜವಾದಿ ಸಂವಿಧಾನವನ್ನು ನಿರೂಪಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿರುವಾಗ ಅವರು ಮನುಶಾಸ್ತ್ರದಲ್ಲಿ ಹೇಗೆ ಬಂಡವಾಳಶಾಹಿ ಪರ ಸಿದ್ಧಾಂತಗಳು ಅಡಗಿವೆ ಎಂದು ವಿವರಿಸುತ್ತಾರೆ. ಎರಡನೆಯದು: ಅಂಬೇಡ್ಕರ್‍ರವರು ಸಂಸ್ಕøತದ ಪರವಾಗಿ ಸಂಸ್ಕøತದಲ್ಲಿ ಮಾತನಾಡುವುದಿರಲಿ, ಪ್ರಾದೇಶಿಕ ಭಾಷೆಗಳನ್ನು ಕುರಿತ ಚರ್ಚಾಸಭೆಗಳಲ್ಲಿ ಅವರು ಭಾಗವಹಿಸಿಯೇ ಇಲ್ಲ!!”
ಇದು ಅಧಿಕೃತವಾಗಿ ದಾಖಲಾಗಿರುವ ಸತ್ಯ! ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿತ್ತೆನ್ನಲಾದ ತಲೆ-ಬುಡವಿಲ್ಲದ ಊಹಾಪೋಹವಲ್ಲ! ಆದರೆ ಚಡ್ಡಿಗಳು ಎಂತಹ ಕುತಂತ್ರಿಗಳು ನೋಡಿ. ಒಂದೆಡೆ ಮನುಸ್ಮøತಿಯೇ ನಮ್ಮ ಸಂವಿಧಾನವಾಗಬೇಕಿತ್ತು ಎಂದು ವಾದಿಸಿದ್ದ ಗೋಲ್ವಾಲ್ಕರ್ ಎಂಬ ದ್ವೇಷದ ಗುರುವಿನ ನೂರನೇ ಜನ್ಮೋತ್ಸವವನ್ನು ‘ಹಿಂದೂ ಸಮಾವೇಶ’ ಎಂದು ಆಚರಿಸುತ್ತಾರೆ. ಇನ್ನೊಂದೆಡೆ ದಲಿತರ ನಾಯಕ ಮತ್ತು ಆತ್ಮಪ್ರಜ್ಞೆಯಾಗಿದ್ದ ಅಂಬೇಡ್ಕರ್ ಅವರೇ ಸ್ವತಃ ಸಂಸ್ಕøತದ ಪರವಾಗಿದ್ದರು ಎಂದು ಕಲ್ಪಿಸಿಕೊಂಡು ಸಭೆ ಏರ್ಪಡಿಸುತ್ತಾರೆ. ಇದನ್ನೆಲ್ಲ ಶೂದ್ರರು, ದಲಿತರು ನಂಬುತ್ತಾರೆ. ಗೋಲ್ವಾಲ್ಕರ್‍ನ ಸಭೆಗಳಲ್ಲಿ ಶೂದ್ರರು ಭಾಗವಹಿಸಿದರೆ, ಚೆಡ್ಡಿಗಳ ಅಂಬೇಡ್ಕರ್ ಕಾರ್ಯಕ್ರಮಗಳಲ್ಲಿ ದಲಿತರು ಪಾಲ್ಗೊಳ್ಳುತ್ತಾರೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಎಎಸ್‌ ಅಧಿಕಾರಿ ಫೌಝಿಯಾ ತರನ್ನುಮ್‌ ಅವರನ್ನು ಪಾಕಿಸ್ತಾನಿ ಎಂದ ಪ್ರಕರಣ : ಬಿಜೆಪಿ ಎಂಎಲ್‌ಸಿ ರವಿಕುಮಾರ್‌ಗೆ ಹೈಕೋರ್ಟ್‌ ತರಾಟೆ

ಕಲಬುರಗಿಯಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಐಎಎಸ್‌ ಅಧಿಕಾರಿ ಫೌಝಿಯಾ ತರನ್ನುಮ್‌ ಅವರನ್ನು ಭಾರತೀಯರೋ ಅಥವಾ ಪಾಕಿಸ್ತಾನಿಯೋ ಎಂದಿದ್ದ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ ವಿರುದ್ಧ ಶುಕ್ರವಾರ (ಆ.7) ಕರ್ನಾಟಕ ಹೈಕೋರ್ಟ್‌...

ಸಿಲಿಕಾನ್ ಸಿಟಿಯ ಐಷಾರಾಮಿ ಹೋಟೆಲ್‌ಗಳ ಮೇಲೆ ದಾಳಿ: ಅಡುಗೆ ಮನೆಯಲ್ಲಿ ಸಿಕ್ತು 250.KG ಕೊಳೆತ ಮಾಂಸ ಮತ್ತು ತರಕಾರಿ

ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟದ ವಿರುದ್ಧ ಸಮರ ಸಾರಿದ್ದ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ (FSDA) ಇಲಾಖೆ, ಶುಕ್ರವಾರ ಬೆಂಗಳೂರಿನ ಫೈವ್-ಸ್ಟಾರ್ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ...

‘ರಷ್ಯಾ ನಿರ್ಬಂಧ ಮಸೂದೆ’ ಅಂಗೀಕರಿಸಿದ ಅಮೆರಿಕ ಸೆನೆಟ್: ಭಾರತದ ಮೇಲೆ ಶೇ. 100ರಷ್ಟು ಸುಂಕ ವಿಧಿಸುವ ಎಚ್ಚರಿಕೆ

ಉಕ್ರೇನ್ ವಿರುದ್ಧದ ಯುದ್ಧಕ್ಕೆ ಆರ್ಥಿಕ ನೆರವು ಸಿಗದಂತೆ ಮಾಡಲು, ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸುವ ಭಾರತ ಮತ್ತು ಚೀನಾದಂತಹ ಪ್ರಮುಖ ದೇಶಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಸೆನೆಟ್‌ ಬೃಹತ್‌ ಬೆಂಬಲದೊಂದಿಗೆ ಹೊಸ ಮಸೂದೆಯನ್ನು...

ಆರ್‌ಎಸ್‌ಎಸ್‌ ಗೂಂಡಾಗಳಿಗೆ ಶಾಯಿ ಇರುವುದು ಬರೆಯಲು, ಎರಚಲು ಅಲ್ಲ ಎಂಬುವುದು ಗೊತ್ತಿಲ್ಲ, ನಮ್ಮ ಸಂಕಲ್ಪಕ್ಕೆ ಮಿತಿಯಿಲ್ಲ : ನೇಹಾ ಬೋರಾ

ಜಾರ್ಖಂಡ್ ವಿದ್ಯಾರ್ಥಿ ಹೋರಾಟವನ್ನು ಬೆಂಬಲಿಸಲು ಹೋಗಿದ್ದ ವೇಳೆ ತನ್ನ ಮೇಲೆ ಶಾಯಿ ಎರಚಿರುವುದಕ್ಕೆ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ...

ಮನೆಗೆ ಬರುವ ಸಂದರ್ಶಕರೊಂದಿಗೆ ಪಿಎಸ್‌ಐ ‘ಅಸಭ್ಯ’ ವರ್ತನೆ; ಆಕ್ರೋಶ ವ್ಯಕ್ತಪಡಿಸಿದ ಅಭಿಜೀತ್ ದಿಪ್ಕೆ

ಛತ್ರಪತಿ ಸಂಭಾಜಿನಗರದಲ್ಲಿರುವ ತಮ್ಮ ಮನೆಯಲ್ಲಿ ಭದ್ರತಾ ಪಡೆಯ ಭಾಗವಾಗಿ ನಿಯೋಜಿಸಲಾದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಅವರು, ಜನರು ನಮ್ಮನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದಿಪ್ಕೆ...

ಮೋಹನ್ ಭಾಗವತ್‌ ದೇಶಪ್ರವೇಶ ನಿಷೇಧಿಸುವಂತೆ ಕೆನಡಾದ 40ಕ್ಕೂ ಹೆಚ್ಚು ಸಂಘಟನೆಗಳಿಂದ ಸರ್ಕಾರಕ್ಕೆ ಒತ್ತಾಯ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್‌ ದೇಶದೊಳಗೆ ಪ್ರವೇಶಿಸುವುದನ್ನು ತಡೆಯುವಂತೆ ಕೆನಡಾದ 40ಕ್ಕೂ ಹೆಚ್ಚು ನಾಗರಿಕ, ಮಾನವ ಹಕ್ಕುಗಳು, ಕಾರ್ಮಿಕ ಮತ್ತು ಧಾರ್ಮಿಕ ಸಂಘಟನೆಗಳು ಅಲ್ಲಿನ ಸಾರ್ವಜನಿಕ ಸುರಕ್ಷತಾ ಸಚಿವರಿಗೆ...

SIR: BLO ಮನೆ-ಮನೆ ಭೇಟಿ ಗಡುವು ಆಗಸ್ಟ್‌ 17ರವರೆಗೆ ವಿಸ್ತರಣೆ!

ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ECI) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮನೆ-ಮನೆ ಗಣತಿ ಪ್ರಕ್ರಿಯೆಯ ಗಡುವನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದ್ದು,...

ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲ್ಲ: ತಮಿಳುನಾಡು ಸಿಎಂ ವಿಜಯ್

ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ವಿಚಾರವಾಗಿ ತಮಿಳುನಾಡಿನಲ್ಲಿ ರಾಜಕೀಯ ಕಾವು ಏರುತ್ತಿರುವ ಬೆನ್ನಲ್ಲೇ, ಈ ಕುರಿತು ತಕ್ಷಣವೇ ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಯಾವುದೇ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ....

ಬೆಂಗಳೂರಿನ ಜಕ್ಕೂರಿನಲ್ಲಿ 22-23 ವರ್ಷದ ಇಬ್ಬರು ನೇಪಾಳಿ ಯುವತಿಯರ ಶವಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಜಕ್ಕೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಸೀರೆಯಿಂದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಮೃತರನ್ನು ನೇಪಾಳ...

NEET Paper Leak: ಒಂದೇ ಒಂದು CCTV ಇರಲಿಲ್ಲ, ಚೆಕಿಂಗ್ ಇರಲಿಲ್ಲ! ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಹೇಗೆ? CBI ವರದಿ ಇಲ್ಲಿದೆ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA)...