Homeಅಂಕಣಗಳುಇವರು ನಮ್ಮ ಪ್ರತಿನಿಧಿಗಳು ಮತ್ತು ನಾವು ಇಂತವರಿಗೆ ಪ್ರಭುಗಳು!

ಇವರು ನಮ್ಮ ಪ್ರತಿನಿಧಿಗಳು ಮತ್ತು ನಾವು ಇಂತವರಿಗೆ ಪ್ರಭುಗಳು!

- Advertisement -
- Advertisement -

ಅಂದು ಒಂದು ಬಿಸಿಗಾಳಿ ತುಂಬಿದ ಬಲೂನ್ ಕೆಳಗೆ ನಿಂತಿರುವ ಜನ ಕತ್ತೆತ್ತಿ ಅದರ ಹಾರಾಟವನ್ನು ನೋಡುತ್ತಿದ್ದರೆ. ಇಲ್ಲಿ ಅವರ ಜೇಬುಗಳಿಗೆ ಕತ್ತರಿ ಬೀಳುತ್ತಿರುತ್ತೆ. ಆ ಬಲೂನು ಐದು ವರ್ಷಗಳಿಗೊಮ್ಮೆ ಕೆಳಗಿಳಿದು ಬಂದು ಯಾರಾದರೂ ಒಳಕ್ಕೆ ಬರಬಹುದೆಂದು ಆಹ್ವಾನಿಸುತ್ತದೆ. ಆದರೆ ನಮ್ಮ ಜನರ್ಯಾರಿಗೂ ಆ ಸಾಮಥ್ರ್ಯವಿಲ್ಲದಿರುವುದರಿಂದ ಮತ್ತೆ ಹಳಬರನ್ನೇ ಹತ್ತಿಸಿಕೊಂಡು ಮೇಲಕ್ಕೆ ಹಾರುತ್ತದೆ. (ನಮ್ಮ ಜನರ ಜೇಬುಗಳಿಗೆ ಕತ್ತರಿ ಬೀಳುವುದಂತೂ ಮುಂದುವರೆಯುತ್ತದೆ)
ಇಲ್ಲಿ ಮಾತನಾಡುತ್ತಿರುವುದದು ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಎನ್ನುವುದು ಯಾರಿಗಾದರೂ ಅರ್ಥವಾಗುವಂತದ್ದು. ಈ ಮಾತುಗಳನ್ನು ಆಡಿರುವುದು ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿದ್ದ ಪ್ರಮುಖ ಇಂಗ್ಲೀಷ್ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ. 1930ರಲ್ಲಿ ಪ್ರಕಟವಾದ ತನ್ನ ‘ದಿ ಆಪಲ್ ಲಾಟ್’ ಎನ್ನುವ ವಿಡಂಬನಾ ನಾಟಕಕ್ಕೆ ತಾನೇ ಬರೆದ ಸುದೀರ್ಘ ಮುನ್ನುಡಿಯಲ್ಲಿ ಬ್ರಿಟಿಷ್ ಸಂಸದೀಯ ವ್ಯವಸ್ಥೆಯನ್ನು ಕುರಿತು ಆಡಿದ ಮಾತುಗಳಿವು.

ಜಾರ್ಜ್ ಬರ್ನಾರ್ಡ್ ಷಾ

ಇಪ್ಪತ್ತೊಂದನೆ ಶತಮಾನದ ಈ ದಿನಗಳಿಗೂ ಈ ಮಾತುಗಳು ಹೇಗೆ ಅನ್ವಯಿಸುತ್ತದೆ ಎನ್ನುವುದೇ ಸೋಜಿಗ. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪಕ್ಷ ಸಿಕ್ಕ ಅಧಿಕಾರವನ್ನು ಹೇಗಾದರೂ ಮಾಡಿ ದಕ್ಕಿಸಿಕೊಳ್ಳಬೇಕೆಂದು ಉತ್ತರದಲ್ಲಿ ರಾಮನನ್ನು, ದಕ್ಷಿಣದಲ್ಲಿ ಅಯ್ಯಪ್ಪನನ್ನು ಬಳಸಿಕೊಳ್ಳುತ್ತಲೇ ಸಾಮಾನ್ಯ ಜನತೆಗೆ ತನ್ನ ದೇಶಪ್ರೇಮದ ಬಗ್ಗೆ ಮಂಕು ಬೂದಿ ಎರಚುತ್ತ ಚುನಾವಣೆಗಳ ಸಿದ್ದತೆಯಲ್ಲಿದೆ. ಜನರು ಇಂಥಾ ರಾಜಕಾರಣದ ಪ್ರಹಸನದ ಅಂಕಗಳನ್ನು ವೀಕ್ಷಿಸುತ್ತ ಮನರಂಜನೆ ಪಡೆಯುತ್ತಿದ್ದಾರೆ.
ಆ ನಾಯಕರು ತಾವು ಮಾತ್ರ ದೇಶಭಕ್ತರು ತಮ್ಮನು ವಿರೋಧಿಸುವವರು ದೇಶದ್ರೋಹಿಗಳು ಎಂದು ಬಿಂಬಿಸುತ್ತಾ ಆಗಾಗ ವೀರಾವೇಶದ ಮಾತುಗಳನ್ನೂ, ಆ ಮಾತುಗಳನ್ನಾಡುವ ಭರದಲ್ಲಿ ಹಾಸ್ಯಸ್ಪದ ಸುಳ್ಳುಗಳನ್ನೂ ಜನರಿಗೆ ಮೊಗೆಮೊಗೆದು ಹಂಚುತ್ತಿದ್ದಾರೆ. ಇದುವರೆಗು ಒಬ್ಬರ ವಿರುದ್ಧ ಒಬ್ಬರು ಕತ್ತಿಮಸೆಯುತ್ತಿದ್ದ ಆ ಪಕ್ಷದ ರಾಜಕೀಯ ವಿರೋಧಿಗಳು ಈಗ ಒಟ್ಟಾಗಿ ಕೈಕೈ ಜೋಡಿಸಿ ಮುಂದಿನ ಚುನಾವಣೆಗಳಲ್ಲಿ ಈ ಅಧಿಕಾರಸ್ಥರು ಧೂಳೀಪಟವಾಗುವುದರಲ್ಲಿ ಅನುಮಾನವಿಲ್ಲವೆಂದು ಡಂಗೂರ ಸಾರುತ್ತಿದ್ದಾರೆ.
ಇನ್ನ ರಾಜ್ಯ ಮಟ್ಟದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಕ್ರುದ್ಧರಾದ ದೇಶಭಕ್ತ(!) ನಾಯಕರುಗಳು ಸರ್ಕಾರವನ್ನು ಹೇಗಾದರೂ ಬೀಳಿಸಿ ಗದ್ದುಗೆ ಏರಬೇಕೆಂದು ಹವಣಿಸಿ ಪ್ರಜಾಪ್ರಭುತ್ವವೇ ತಲೆತಗ್ಗಿಸುವಂತೆ ಆಡಬಾರದ ಆಟ ಆಡುತ್ತಿದ್ದಾರೆ. ಅದಕ್ಕಾಗಿ ಸಾಮ, ದಾನ, ಭೇದ, ದಂಡೋಪಾಯಗಳೆಲ್ಲವನ್ನು ಪ್ರಯೋಗಿಸುತ್ತಿದ್ದರೂ ಆ ಪ್ರಯತ್ನಗಳು ಕೈಗೂಡದೆ ಹತಾಶರಾಗಿದ್ದಾರೆ. ಇಂಥ ನಾಟಕದ ದೃಶ್ಯಗಳಲ್ಲಿ ಇದುವರಿಗೂ ರಾಜಕೀಯ ರಂಗದಿಂದಲೇ ಮಾಯವಾಗಿದ್ದ ಮಾಜಿ ಮುಖ್ಯಮಂತ್ರಿಗಳು, ಒಂದು ರಿಪಬ್ಲಿಕ್‍ನ ಧಣಿಗಳು ಮರು ಪ್ರವೇಶ ಮಾಡಲು ಹಾತೊರೆಯುತ್ತಿದ್ದಾರೆ. ಆಳುವ ಪಕ್ಷದ ಕೆಲವರು ತಾವು ಹುಟ್ಟಿರುವುದೇ ಮಂತ್ರಿಯಾಗಬೇಕೆಂದು ಅದಾಗದಿದ್ದರೆ ತಮಗೆ ಅಸ್ತಿತ್ವವಿಲ್ಲವೇನೋ ಎಂಬುವಂತೆ ನರಳಾಡುತ್ತಿದ್ದಾರೆ. ಮಂತ್ರಿಗಿರಿಗಾಗಿ ಎಲ್ಲ ರೀತಿಯ ತಿಪ್ಪರಲಾಗಗಳನ್ನೂ ಹಾಕುತ್ತಿದ್ದಾರೆ.
ಈ ನಾಟಕಗಳ ನಡುವೆ ಇವರನ್ನು ಆರಿಸಿದ ಜನ ಏನು ಮಾಡುತ್ತಿದ್ದಾರೆ? ಈ ಪ್ರಹಸನಗಳಲ್ಲಿ ಮೂಕಪ್ರೇಕ್ಷಕರಾಗಿರುವುದು ಬಿಟ್ಟರೆ ಬೇರೇನೂ ಪಾತ್ರವಿಲ್ಲ ಅವರಿಗೆ.
ಉತ್ತರ ಕರ್ನಾಟಕದ ಜನ ಕೆಲಸವನ್ನರಸಿ ಕಿಕ್ಕಿರಿದ ಬಸ್ಸು, ರೈಲು, ಟೆಂಪೋಗಳಲ್ಲಿ ದೂರದ ಊರುಗಳಿಗೆ ಹೊರಟರೆ ಅವರ ಪ್ರತಿನಿಧಿಗಳು ಐಷಾರಾಮಿ ಬಸ್ಸುಗಳಲ್ಲಿ ಪಂಚಾತಾರಾ ಹೊಟೇಲುಗಳು, ರೆಸಾರ್ಟುಗಳ ಕಡೆಗೆ ನುಗ್ಗುತ್ತಿದ್ದಾರೆ. ಸಾಮಾನ್ಯ ಜನರ ಜೇಬುಗಳಿಗೆ ಮಾತ್ರವಲ್ಲ ಅವರ ಜೀವಗಳಿಗೇ ಕತ್ತರಿ ಪೆಟ್ಟುಗಳು ಬೀಳುತ್ತಿದ್ದರೂ ನಮ್ಮದು ಮಹಾನ್ ಪ್ರಜಾಪ್ರಭುತ್ವವೆಂದು ಪರಾಕು ಹೇಳುವವರಿಗೇನು ಕಡಿಮೆ ಇಲ್ಲ.
ಇಂಥ ಪ್ರಭೃತಿಗಳ ಸಂಖ್ಯೆಯೇ ಹೆಚ್ಚಾಗಿರುವುದನ್ನು ನೋಡಿ ಮುನಿಸಿಕೊಂಡು ಮತದಾನವೇ ಮಾಡುವುದಿಲ್ಲ ಎನ್ನುವವರನ್ನು ಈ ಪರಾಕು ವೀರರು ನಾಲಾಯಕ್ಕುಗಳು ಎಂದು ಮೂದಲಿಸುತ್ತಾರೆ. ಹೌದು, ಮತದಾನ ನಮ್ಮೆಲ್ಲರ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು. ಸಮರ್ಥರನ್ನು ಆರಿಸಲು ಅದು ಅಸ್ತ್ರವೂ ಹೌದು. ಆದರೆ ಪ್ರಶ್ನೆಯೇನೆಂದರೆ ಯಾವ ಸಮರ್ಥರಿಗೆ ಯಾವ ರಾಜಕೀಯ ಪಕ್ಷಗಳು ಅವಕಾಶ ನೀಡುತ್ತಿವೆ. ಟಿಕೇಟು ವಿತರಣೆ ಎನ್ನುವುದೇ ದೊಡ್ಡ ದಂಧೆಯಾಗಿ ಹೋಗಿದೆ. ಸರಿ, ಆ ಅಸ್ತ್ರವನ್ನು ಬಳಸಿಕೊಂಡು ಮತದಾನ ಮಾಡಿದ್ದರಿಂದಲೇ ಅಲ್ಲವೇ ಈಗಿನ ಜನಪ್ರತಿನಿಧಿಗಳು ಆಯ್ಕೆಯಾಗಿರೋದು. ಹಾಗೆ ಆಯ್ಕೆಯಾದವರು ಮಾಡುತ್ತಿರುವುದೇನು? ಅದೇ ರೆಸಾರ್ಟ್ ರಾಜಕಾರಣ, ಅದೇ ಅಧಿಕಾರ ಹಪಾಹಪಿ, ಅದೇ ಕಾಲೆಳೆದಾಟ, ಅದೇ ಕೋಮುವಿಧ್ವಂಸ!
ಪ್ರಜೆಯೇ ಪ್ರಭು ಎನ್ನುತ್ತದೆ ನಮ್ಮ ಪ್ರಜಾಪ್ರಭುತ್ವ. ಆದರೆ ಯಾವತ್ತಾದರು ಪ್ರಜೆ ಪ್ರಭುವಾಗಿ ಹಕ್ಕು ಚಲಾಯಿಸುವ ಅವಕಾಶ ಕೂಡಿಬಂದಿದೆಯಾ? ಎಲೆಕ್ಷನ್ ಸಮಯದಲ್ಲೂ ಆತ ಹಣ, ಹೆಂಡದ ಋಣಕ್ಕೆ ವರ್ತಿಸಬೇಕಾದ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಚುನಾವಣೆ ಅನ್ನುವುದೇನಿದ್ದರು ನಮ್ಮದಲ್ಲ, ಅದು ಆ ರಾಜಕಾರಣಿಗೂ ಈ ರಾಜಕಾರಣಿಗೂ ನಡುವೆ ನಡೆಯುವ ಭರ್ಜರಿ ಪೈಪೋಟಿ. ನಮ್ಮದೇನಿದ್ದರು ಆ ಪೈಪೋಟಿಯಲ್ಲಿ ಒಂದಷ್ಟು ಫಾಯಿದೆ ಮಾಡಿಕೊಂಡರೆ ಮುಗಿಯಿತು ಎನ್ನುವ ಮನಸ್ಥಿತಿಗಳಿಗೆ `ಮತದಾನ ನಮ್ಮ ಹಕ್ಕು’ ಎನ್ನುವ ಉಪದೇಶವೂ ನೋಟಿನ ರೂಪದಲ್ಲಿಯೇ ಕಾಣಿಸಿದರೂ ಅಚ್ಚರಿಯಿಲ್ಲ.
ಪ್ರಜಾಪ್ರಭುತ್ವ ಮತ್ತು ಮತದಾನದ ಸುತ್ತ ಇಂಥಾ ಚರ್ಚೆಗಳು ಶುರುವಾಗುತ್ತಿರೋದನ್ನು ಮತ್ತು ಅದು ಈಗಿರುವ ಭ್ರಷ್ಟ ರಾಜಕಾರಣ ವ್ಯವಸ್ಥೆಗೆ ಮಾರಕವಾಗಬಲ್ಲಷ್ಟು ಶಕ್ತವಾಗಿರುವುದನ್ನು ಸುಮ್ಮನಾಗಿಸಲು `ನೋಟಾ’ ಎನ್ನುವ ಲಾಲಿಪಪ್ಪನ್ನು ಜನರ ಕೈಗಿಡಲಾಗಿದೆ. ಅದು ಲಾಲಿಪಪ್ ಅಲ್ಲದೆ ಮತ್ತೇನೂ ಅಲ್ಲ. ಮತದಾನದ ವಿರುದ್ಧ ಮುನಿಸಿಕೊಂಡವರನ್ನು ತೆಪ್ಪಗಾಗಿಸುವ ತಂತ್ರದಂತೆ ಅದು ಬಳಕೆಯಾಗುತ್ತಿದೆ. ದೇಶದ ಇತಿಹಾಸದಲ್ಲೇ ಆ `ನೋಟಾ’ ರಾಜಕಾರಣಿಗಳ ಅಬ್ಬರದ ನಡುವೆ ಪ್ರಜೆಗಳನ್ನು ಹೀರೋ ಆಗಿಸಿದ ಒಂದೇಒಂದು ನಿದರ್ಶನವಿಲ್ಲ. ಆ ಕುರಿತು ಸ್ಪಷ್ಟ ಮಾರ್ಗಸೂಚಿಗಳು ಸರ್ಕಾರಗಳ ಬಳಿ ಇಲ್ಲ, ಜರನಲ್ಲಿ ಅವು ಜಾಗೃತಿಯನ್ನೂ ಮೂಡಿಸುತ್ತಿಲ್ಲ. `ಮತದಾನ ನಮ್ಮ ಹಕ್ಕು’ ಎನ್ನುವ ಮೂಲಕ ಪ್ರಸ್ತುತ ಚುನಾವಣಾ ವ್ಯವಸ್ಥೆಯ ವಿರುದ್ಧ ಜನರೊಳಗಿನ ಬಂಡಾಯ ಪ್ರಜ್ಞೆಯನ್ನು ಹತ್ತಿಕ್ಕುವ ಪ್ರಯತ್ನ ಒಂದು ಹುನ್ನಾರಕ್ಕಿಂತ ಕಡಿಮೆಯೇನಿಲ್ಲ ಅನಿಸುತ್ತದೆ.
ಅಪರೂಪಕ್ಕೆ ಯಾರಾದರೂ ಪ್ರಾಮಾಣಿಕರು ಸ್ವರ್ಧಿಸಿದರೆ ಅವರಿಗೆ ನೂರೋ, ಇನ್ನೂರೊ, ಹೆಚ್ಚೆಂದರೆ ಕೆಲವು ಸಾವಿರವೋ ಮತಗಳು ಮಾತ್ರ ಬೀಳುತ್ತವೆ. ಎಷ್ಟೋ ಕಡೆ ಈ ಪ್ರಾಮಾಣಿಕರಿಗಿಂತ `ನೋಟಾ’ ಮತಗಳೇ ಹೆಚ್ಚಿರುತ್ತವೆ. ಹಾಗಾದರೆ ಈ `ನೋಟಾ’ ಏನನ್ನು ಸಾಧಿಸಹೊರಟಿದೆ? ಅನ್ನೋ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ಇದು ಕೇವಲ ಚುನಾವಣೆಯ ಸಂಗತಿ ಅಷ್ಟೇ. ಜನರನ್ನು ಹೀಗೆ `ನೈತಿಕ’ ನೆಪಗಳ ಮೂಲಕವೇ ಧ್ವಂಸ ಮಾಡಲು ಈ ರಾಜಕಾರಣಿಗಳು ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ.
ಅದೇ ಕಾರಣಕ್ಕೆ `ಪ್ರಜಾಪ್ರಭುತ್ವ ಲೊಳಲೊಟ್ಟೆ’ ಎನ್ನುವ ಮಾತು ಈಗಾಗಲೇ ಜನರ ನಡುವೆ ಪ್ರಚಲಿತವಾಗಿದೆ. ಅಪ್ಪಿತಪ್ಪಿ ಈ ಮಾತು ನಿಜವಾಗಿಬಿಟ್ಟರೆ ದೇಶ ಹಲವು ಶತಮಾನಗಳ ಆಳಕ್ಕೆ ಕುಸಿಯುವುದರಲ್ಲಿ ಸಂಶಯವಿಲ್ಲ. ಹಾಗಾಗಿ ‘ನಾವು ದೇಶಕ್ಕಾಗಿ’ ಎದ್ದು ನಿಂತು ಸುಳ್ಳುರನ್ನೂ ಭ್ರಷ್ಟರನ್ನೂ ಮೂಲೆಗೆ ತಳ್ಳಿ ನಿಜವಾದ ಪ್ರಜಾತಂತ್ರದ ಸ್ಥಾಪನೆಗೆ ಕೈ ಹಾಕಬೇಕಿದೆ. ಆ ದಿಕ್ಕಿನಲ್ಲಿ ಯುವಜನರ ಪಾತ್ರ ದೊಡ್ಡದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೇಮಕಾತಿ ಅಕ್ರಮ ಖಂಡಿಸಿ ಜಾರ್ಖಂಡ್‌ನಲ್ಲಿ ಧರಣಿ: ವಿದ್ಯಾರ್ಥಿಗಳ ಹೋರಾಟಕ್ಕೆ ತಲೆಬಾಗಿದ ಸಿಎಂ ಹೇಮಂತ್ ಸೊರೇನ್, ‘ನ್ಯಾಯದ ಭರವಸೆ’

ಜಾರ್ಖಂಡ್‌ನ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಹಾಗೂ ಯುವಜನತೆ ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿಗಿಳಿದು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು...

ಪ.ಬಂಗಾಳ : ಮಮತಾ ಬ್ಯಾನರ್ಜಿ ಕಾರಿನ ಮೇಲೆ ದಾಳಿ; ಕಲ್ಲು, ಚಪ್ಪಲಿ ತೂರಿದ ಗುಂಪು

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ...

SIR ನೆಪದಲ್ಲಿ 1 ಕೋಟಿ ಮತ ಡಿಲೀಟ್ ಮಾಡೋ ಸಂಚು: ಎಚ್ಚೆತ್ತುಕೊಳ್ಳುವಂತೆ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ

SIR ನೆಪದಲ್ಲಿ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತಗಳನ್ನು ಅಳಿಸುವ ಸಂಚು ನಡೆಯುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯ...

‘ಮೋದಿ ದೇಶದ ಯುವಕರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದ್ದಾರೆ ’: ‘ಜೆನ್ ಝೀ’ಗಳನ್ನು ‘ಬಾಹ್ಯ ಶಕ್ತಿಗಳು ದಾರಿ ತಪ್ಪಿಸುತ್ತಿವೆ’: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ

ಭುವನೇಶ್ವರ: ಜಾಗತಿಕ ವೇದಿಕೆಯಲ್ಲಿ "ತಮ್ಮನ್ನು ದಾರಿ ತಪ್ಪಿಸಲು ಮತ್ತು ಭಾರತವನ್ನು ದುರ್ಬಲಗೊಳಿಸಲು" ನಿರಂತರವಾಗಿ ಪ್ರಯತ್ನಿಸುತ್ತಿರುವ "ಬಾಹ್ಯ ಶಕ್ತಿಗಳಿಗೆ" ಬಲಿಯಾಗಬೇಡಿ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ಜೆನ್ ಝೀ (GEN-Z)...

ಪದವಿ ಪ್ರದಾನ ಸಮಾರಂಭಕ್ಕೆ CJI ಆಹ್ವಾನಿಸಲು ಹೈದರಾಬಾದ್ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧ

ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಾರದು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ...

3ನೇ ಹಂತದ ‘SIR’ ಕರಡು ಮತದಾರರ ಪಟ್ಟಿ ಬಿಡುಗಡೆ: 12 ರಾಜ್ಯಗಳಲ್ಲಿ 1.58 ಕೋಟಿ ಮತದಾರರ ಹೆಸರು ಕೈಬಿಟ್ಟ ಆಯೋಗ, ಇನ್ನು ಕರ್ನಾಟಕ ಬಾಕಿ

3ನೇ ಹಂತದದಲ್ಲಿ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈನಿಂದ ನಡೆಸಲಾದ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಬಳಿಕ ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಹೆಸರುಗಳು...

ದಾರುಲ್ ಉಲೂಮ್ ದಿಯೋಬಂದ್ ಆವರಣದಲ್ಲಿ ಶಿವಲಿಂಗವಿದೆ ಎಂದ ಹಿಂದುತ್ವ ಸಂಘಟನೆ : ಆ.11ರಂದು ಗಂಗಾಜಲ ಅರ್ಪಿಸುವುದಾಗಿ ಘೋಷಣೆ

ಉತ್ತರ ಪ್ರದೇಶದ ದಿಯೋಬಂದ್‌ನಲ್ಲಿರುವ ಪ್ರಸಿದ್ದ ಮುಸ್ಲಿಂ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ಆವರಣದಲ್ಲಿ ಶಿವಲಿಂಗವಿದೆ ಎಂದು ಪ್ರತಿಪಾದಿಸಿರುವ ಹಿಂದೂ ರಕ್ಷಾ ದಳ ಸಂಘಟನೆ, ಆಗಸ್ಟ್ 11 ರಂದು ಸಂಸ್ಥೆಗೆ ಭೇಟಿ ನೀಡಿ ಗಂಗಾಜಲ...

‘ಮೋದಿ ನಮ್ಮನ್ನು ಗುಂಡಿಕ್ಕಿ ಕೊಂದರೂ ಈ ಜೀವಿತಾವಧಿಯಲ್ಲಿ ವಂದೇ ಮಾತರಂ ಪೂರ್ಣ ಆವೃತ್ತಿ ಹಾಡುವುದಿಲ್ಲ’: ಕೇರಳ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತ್ತಾನ್

ಕಾಸರಗೋಡು (ಕೇರಳ): ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ 'ಹರ್ ಘರ್ ತಿರಂಗಾ' ಅಭಿಯಾನದ ಸಮಯದಲ್ಲಿ ರಾಷ್ಟ್ರಗೀತೆ 'ವಂದೇ ಮಾತರಂ'ನ ಸಂಪೂರ್ಣ ವಾಗ್ವಾದ/ಆವೃತ್ತಿಯನ್ನು ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸಂವಹನದ ಸುತ್ತ ಭಾರಿ ವಿವಾದ...

ಮೊಜ್ತಬಾ ಖಾಮಿನೈ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದ ಇಸ್ರೇಲ್ ಮಾಧ್ಯಮಗಳು : ವಿಡಿಯೋ ಬಿಡುಗಡೆ ಮಾಡಿ ಕೌಂಟರ್ ಕೊಟ್ಟ ಇರಾನ್

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಅವರ ಆರೋಗ್ಯ ಸ್ಥಿತಿ 'ಅತ್ಯಂತ ಗಂಭೀರವಾಗಿದೆ' ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ, ಅವರು ಉತ್ತಮ ಆರೋಗ್ಯದಿಂದ ಇರುವಂತೆ ಕಾಣಿಸುವ ದಿನಾಂಕವಿಲ್ಲದ ವಿಡಿಯೋ ಒಂದನ್ನು...

‘ಬ್ರಿಟಿಷರಿಂದ ಕಠಿಣ ಶಿಕ್ಷೆ ಅನುಭವಿಸಿದವರು ಸಾವರ್ಕರ್’ ಎಂಬ ಕೇರಳ ಶಾಲೆಯೊಂದರ ಕ್ವಿಜ್‌ ಪ್ರಶ್ನೆ ತಂದಿಟ್ಟ ವಿವಾದ

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರಂ ಮತ್ತು ಕುಂಬಳೆ ಉಪಜಿಲ್ಲೆಗಳ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕ್ವಿಜ್‌ನಲ್ಲಿ ವಿ ವಿನಾಯಕ ದಾಮೋದರ ಸಾವರ್ಕರ್ ಕುರಿತಾದ ಪ್ರಶ್ನೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ....