Homeಅಂಕಣಗಳುಚಾನೆಲ್‌ಗಳನ್ನು ಹೊಕ್ಕ ಕಾಗೆಗಳು ಕಾವ್ ಕಾವ್ ಎನ್ನುವ ಆ್ಯಂಕರ್ಸ್‌ಗಳು

ಚಾನೆಲ್‌ಗಳನ್ನು ಹೊಕ್ಕ ಕಾಗೆಗಳು ಕಾವ್ ಕಾವ್ ಎನ್ನುವ ಆ್ಯಂಕರ್ಸ್‌ಗಳು

- Advertisement -
- Advertisement -

ಮಲ್ಲಿ |
ಕನ್ನಡದ ಬಹುಪಾಲು ನ್ಯೂಸ್ ಚಾನೆಲ್‌ಗಳಿಗೆ ಕಾಗೆ ಎಂದರೆ ಬಲುಪ್ರೀತಿ. ಅದರಲ್ಲೂ ಬಿಜೆಪಿಗೆ ಅನುಕೂಲ ಆಗುವುದಾದರೆ ಅವು ಇಡೀ ದಿನ ಕಾಗೆಯ ಸುತ್ತವೇ ಸುದ್ದಿ ಮಾಡಲು ರೆಡಿ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಎಷ್ಟೇ ಮೂದಲಿಕೆ, ವ್ಯಂಗ್ಯ ಬಂದರೂ ಅವು ಕಾಗೆಯ ಪರೀತಿಯಿಂದ ದೂರ ಉಳಿಯುತ್ತಲೇ ಆಗುತ್ತಿಲ್ಲ.

ಫೆಬ್ರುವರಿ ಎಂಟರಂದು ಬಜೆಟ್ ಮಂಡನೆ ಇತ್ತಲ್ಲ? ಅವತ್ತು ಬಜೆಟ್ ಮಂಡನೆಯೇ ಆಗುವುದಿಲ್ಲ, ಸರ್ಕಾರ ಬೀಳುತ್ತದೆ ಎಂದು ಬಹುಪಾಲು ನ್ಯೂಸ್ ಚಾನೆಲ್‌ಗಳು ಮುಂಜಾನೆಯಿಂದಲೇ ಅರಚುತ್ತಿದ್ದವು. ಆಗ ಬಿಟಿವಿ ಒಂದು ಬಿಗ್ ಬ್ರೇಕಿಂಗ್ ಕೊಡ್ತಾನೇ ಇತ್ತು. ಅದು ಕೂಡ ಸರ್ಕಾರ ಬೀಳುವುದರ ಕುರಿತೇ ಆಗಿತ್ತು! ಆದರೆ ಅದಕ್ಕೆ ಅವರು ನೀಡುತ್ತಿದ್ದ, ತೋರಿಸುತ್ತಿದ್ದ ಎಕ್ಸಕ್ಲೂಸಿವ್ ಕಾರಣವೇ ಬೇರೆ ಇತ್ತು!
ಅದು ಕಾಗೆ! ವಿಧಾನಸೌಧದದ ಪಶ್ಚಿಮ ದ್ವಾರದಲ್ಲಿ ಕಾಗೆ ಬಂದು ಸುಮಾರು ಹೊತ್ತಿನಿಂದ ಕೂತಿದೆ, ಇದು ಅಪಶಕುನ, ಸರ್ಕಾರ ಬಿದ್ದೇ ಹೋಯ್ತು ಎಂದೆಲ್ಲ ಬ್ರೇಕಿಂಗ್ ನ್ಯೂಸ್ ಕೊಡಲಾಗುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ‘ಬಿಗ್ ಬ್ರೇಕಿಂಗ್’ ಸದ್ಯದಲ್ಲೇ ಎಂಬ ಸುದ್ದಿ ಬಿಟ್ಟರು. ಆನ ಇದೇನಪ್ಪಾ ಅಂತಾ ಕಾಯ್ದರು. ಬಂದೇ ಬಿಟ್ಟಿತು ಬಿಗ್ ಬ್ರೇಕಿಂಗ್, “ಕಾಗೆ ಈಗ ವಿಧಾನಸೌಧ ಪ್ರವೇಶಿಸಲಿದೆ”….. ಛೇ, ಛೇ ರಿಯಲಿ ಬಿಗ್ ಬ್ರೇಕಿಂಗ್, ಆ ಕಾಗೆಗೆ!

ಆ ಕಾಗೆ ಹಿಂದ ಬಿದ್ದ ಕ್ಯಾಮೆರಾಮನ್ ಮತ್ತು ವರದಿಗಾರ ಬಜೆಟ್ ಬಗ್ಗೆ ತಲೆಕೆಡಿಸಿಕೊಂಡಿರಲೇ ಇಲ್ಲ. ದನ ಕಾಯುವವರಂತೆ ವಿಧಾನಸೌಧದ ಅಂಗಳದಲ್ಲೆಲ್ಲ ಓಡೋಡಿ ಶೂಟ್ ಮಾಡುತ್ತಿದ್ದ ಈ ಮನೆಹಾಳರನ್ನು ನೋಡಿ ಸೆಕ್ಯುರಿಟಿಯವರು, ಕುದುರೆ ವ್ಯಾಪಾರದ ಬಗ್ಗೆ ವರದಿ ಮಾಡ್ರೋ ಅಂದರೆ ಈ ಕತ್ತೆಗಳು ಕಾಗೆ ಹಿಂದೆ ಬಿದ್ದಿವೆಯಲ್ಲ ಎಂದು ನಗಾಡುತ್ತಿದ್ದರು. ಬಜೆಟ್ ಸುಸೂತ್ರವಾಗಿ ಮಂಡನೆಯಾಗಿತು. ಬಜೆಟ್‌ಗೂ ಮೊದಲು ಕುಮಾರಸ್ವಾಮಿ ಬಿಟ್ಟ ಆಡಿಯೋ ಬಾಂಬಿಗೆ ಬಿಜೆಪಿಯೂ ಥಂಡಾ ಹೊಡೆಯಿತು. ಪಾಪ, ಆಮೇಲೆ ಕಾಗೆಯೂ ಇಲ್ಲ, ಕಾಗೆ ಹಿಂದೆ ಬಿದ್ದಿದ್ದ ಕತ್ತೆಗಳೂ ಇಲ್ಲ!

ಪಬ್ಲಿಕ್‌ನ ಸೆಲ್ ವೀಕ್!

ಕಾಗೆ ಅಪಶಕುನ ಎಂಬ ಮೂಢನಂಬಿಕೆ ಇರುವಂತೆ, ನಿಂತ ಅಂದರೆ ಓಡದ ಗಡಿಯಾರವೂ ಮನೆಯಲ್ಲಿ ಇದ್ದರೆ ಡೇಂಜರ್ ಎಂಬ ಮುಠ್ಠಾಳ ನಂಬಿಕೆಯನ್ನೂ ವೈದಿಕರು ನಮ್ಮ ಜನರ ತಲೆಯಲ್ಲಿ ತುಂಬಿದ್ದಾರೆ. ಇದನ್ನೇ ಎನ್‌ಕ್ಯಾಷ್ ಮಾಡಿಕೊಂಡ ಪಬ್ಲಿಕ್ ಟಿವಿಯವರು ಮತ್ತೊಂದು ಬ್ರೇಕಿಂಗ್ ಹೊಡೆದೇ ಬಿಟ್ಟರು. ಕುಮಾರಸ್ವಾಮಿ ಮನೆಯ ಗಡಿಯಾರ ಕೆಟ್ಟು ಹೋಗಿದೆ ಅಂತಾ ಒಂದು ಬ್ರೇಕಿಂಗು, ಕೆಲಸದವರು ಹೊಸ ಸೆಲ್ ಹಾಕಿ ಸರಿಪಡಿಸಿದರು ಅಂತಾ ಇನ್ನೊಂದು ಬ್ರೇಕಿಂಗು.
ಕಾಗೆ ಕೂತಿದ್ದು, ಗಡಿಯಾರ ನಿಂತಿದ್ದು-ಇಂತದ್ದನ್ನೆಲ್ಲ ನೋಡಿ ಯಡಿಯೂರಪ್ಪ ಖೂಷಿ ಪಡುವ ಹೊತ್ತಿನಲ್ಲೇ ದೇವದುರ್ಗದ ಐಬಿಯಲ್ಲಿ ನಡೆಸಲು ಯತ್ನಿಸಿದ ಆಪರೇಷನ್ನಿನ ಆಡಿಯೋ ಹೊರಬಿದ್ದಿತ್ತು!

ಕಾರ್ ಕಾರ್, ಕಾರ್ ಮೇಲೆ ಕಾಗೆ ದರ್ಬಾರ್!

ಹಿಂದೆಯೂ ನಮ್ಮ ಕನ್ನಡ ಚಾನೆಲ್‌ಗಳು ಕಾಗೆಯ ಹಿಂದೆ ಬಿದ್ದು ಸರ್ಕಾರ ಬೀಳುತ್ತದೆ, ಸಿಎಂ ಬದಲಾಗುತ್ತಾರೆ ಎಂದೆಲ್ಲ ‘ವಿಶಲ್ಲೇಷಣೆ’ ಮಾಡುವ ಮಟ್ಟಕ್ಕೆ ಇಳಿದಿದ್ದವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಕಾರ್ ಮೇಲೆ ಕಾಗೆ ಕೂತಿದ್ದ ‘ಎಕ್ಸ್ಕ್ಲೂಸಿವ್’ ವಿಜುವಲ್ ಕ್ಯಾಚ್ ಮಾಡಿದ್ದ ಚಾನೆಲ್‌ಗಳು, ಸಿದ್ದರಾಮಯ್ಯ ಕಾರು ಬದಲಿಸಿದಾಗ, ಕಾಗೆಗೆ ಹೆದರಿ ಕಾರು ಬದಲಿಸಿದ ಸಮಾಜವಾದಿ ಎಂದೆಲ್ಲ ಲೇವಡಿ ಮಾಡಿದ್ದವು. ಮೂಢ ನಂಬಿಕೆಗಳನ್ನು ಪುಟ್ಟಾಪೂರಾ ವಿರೋಧಿಸುವ ಸಿದ್ದರಾಮಯ್ಯ ಆಡಳಿತಾತ್ಮಕ ಕಾರಣದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಕಾರು ಬದಲಾಯಿಸಿದ್ದರು. ಆದರೆ ಗೂಬೆಗಳಿಗೆ ಕಣ್ಣಿಗೆ ಕಾಗೆ ಮಾತ್ರ ಕಂಡಿತ್ತು.
ನಂತರವೂ ಶಕ್ತಿಸೌಧದಲ್ಲಿ ಕಾಗೆ, ಸಿದ್ದರಾಮಯ್ಯ ಕುರ್ಚಿಗೆ ಆಪತ್ತು ಎಂದೆಲ್ಲ ಕಾವ್ ಕಾವ್ ಮಾಡಲಾಗಿತ್ತು. ಪುಣ್ಯಕ್ಕೆ, ಸಿದ್ದರಾಮಯ್ಯ ಕಾರ್ ಮೇಲೆ ಕೂತಿದ್ದ ಕಾಗೆಯೇ ಮೊನ್ನೆ ಬಜೆಟ್ ದಿನ ವಿಧಾನಸೌಧದಲ್ಲಿ ಅಲೆದಾಡುತ್ತಿತ್ತು ಎಂಬ ಬ್ರೇಕಿಂಗನ್ನು ಹೊಡೆದಿಲ್ಲ. ಈಗ ಅದನ್ನು ಮಾಡುತ್ತಾರೆ, ನೋಡ್ತಾ ಇರಿ!

ರಾಧಿಕಮ್ಮನ ಕಾಗೆಗೆ ಒಂದು ಬಲಿ

4 ವರ್ಷಗಳ ಕೆಳಗೆ ಟಿವಿ ಒಂಭತ್ತರಲ್ಲಿ ರಾಧಿಕಾ ಭಾರದ್ವಾಜರು ಮಟಮಟ ಮಧ್ಯಾಹ್ನ ಕಾಗೆಯ ಸುತ್ತಲೇ ಅರ್ಧ ತಾಸಿನ ಎಪಿಸೋಡು ಮಾಡಿ ಧನ್ಯರಾಗಿದ್ದರು. ಮೂವರು ಜ್ಯೋತಿಷಿಗಳನ್ನು ಕೂಡಿಸಿಕೊಂಡಿದ್ದ ರಾಧಿಕಮ್ಮ ಕಾಗೆ ಮುಟ್ಟಿದರೆ ಮನುಷ್ಯ ಸತ್ತಂತೆ, ಮನೆ ಹಾಳಾದಂತೆ ಎಂದೆಲ್ಲ ಭೋಂಗು ಬಿಟ್ಟರು. ಯಾವುದೇ ವ್ಯಕ್ತಿಯ ಮೇಲೆ ಕಾಗೆ ಕುಳಿತರೆ ಆತನ/ಆಕೆಯ ತಾಯಿಗೆ ಮರಣ ಇಲ್ಲವೇ ಆತ/ಆಕೆಯೇ ಸಾವಿಗೆ ಈಡಾಗುತ್ತಾರೆ ಎಂದೆಲ್ಲ ಕಾವ್ ಕಾವ್ ಎಂದು ಅರಚಲಾಗಿತ್ತು.

ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಅಪ್ರೆಂಟಿಸ್ ಮಾಡುತ್ತಿದ್ದ ಲಕ್ಷ್ಮೇಶ್ವರದ ಯುವಕ ತನ್ನ ತಲೆ ಮೇಲೆ ಕಾಗೆ ಕೂತಿದ್ದಕ್ಕೆ ಚಿಂತಕ್ರಾಂತನಾಗಿ, ತನ್ನ ತಾಯಿಗೆ ಏನೂ ಆಗಬಾರದೆಂದು ಆತ್ಮಹತ್ಯೆ ಮಾಡಿಕೊಡಿದ್ದ. ಪೊಲೀಸರು ಸರಿಯಾದ ತನಿಖೆ ಮಾಡಿದ್ದರೆ ರಾಧಿಕಮ್ಮ ಮತ್ತು ಜೊತೆಗಿದ್ದ ಜ್ಯೋತಿಷಿ ಕಾಗೆಗಳೆಲ್ಲ ಜೈಲೂಟ ತನ್ನಬೇಕಾಗುತ್ತಿತ್ತೇನೋ?

ಆನರಲ್ಲಿ ವೈಜ್ಞಾನಿಕ ಮನೋಭಾವ ತುಂಬ ಬೇಕಾದ ಚಾನೆಲ್‌ಗಳು ಮುಂಜಾನೆ ಎದ್ದ ಕೂಡಲೇ ಜ್ಯೋತಿಷಿಗಳಿಗೆ ಚಾನೆಲ್ ಅನ್ನೇ ಮಾರಿಕೊಳ್ಳುವುದು ಅಸಹ್ಯಕರ. ಇದರ ಜೊತೆಗೆ ಕಾಗೆ, ಗಡಿಯಾರದ ಬ್ರೇಕಿಂಗುಗಳು ಬೇರೆ. ಟಿಆರ್‌ಪಿಗಾಗಿ ಕಾಗೆಯನ್ನೇ ಸಾಕಿ, ಅದನ್ನು ಎಲ್ಲಿ ಬೇಕಲ್ಲಿ ಕೂಡಿಸಿ ಬ್ರೇಕಿಂಗು ಕೊಡಲೂ ಹೇಸಲಾರವು ಈ ನ್ಯೂಸ್ ಚಾನೆಲ್‌ಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...