Homeಅಂಕಣಗಳುಚಾನೆಲ್‌ಗಳನ್ನು ಹೊಕ್ಕ ಕಾಗೆಗಳು ಕಾವ್ ಕಾವ್ ಎನ್ನುವ ಆ್ಯಂಕರ್ಸ್‌ಗಳು

ಚಾನೆಲ್‌ಗಳನ್ನು ಹೊಕ್ಕ ಕಾಗೆಗಳು ಕಾವ್ ಕಾವ್ ಎನ್ನುವ ಆ್ಯಂಕರ್ಸ್‌ಗಳು

- Advertisement -
- Advertisement -

ಮಲ್ಲಿ |
ಕನ್ನಡದ ಬಹುಪಾಲು ನ್ಯೂಸ್ ಚಾನೆಲ್‌ಗಳಿಗೆ ಕಾಗೆ ಎಂದರೆ ಬಲುಪ್ರೀತಿ. ಅದರಲ್ಲೂ ಬಿಜೆಪಿಗೆ ಅನುಕೂಲ ಆಗುವುದಾದರೆ ಅವು ಇಡೀ ದಿನ ಕಾಗೆಯ ಸುತ್ತವೇ ಸುದ್ದಿ ಮಾಡಲು ರೆಡಿ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಎಷ್ಟೇ ಮೂದಲಿಕೆ, ವ್ಯಂಗ್ಯ ಬಂದರೂ ಅವು ಕಾಗೆಯ ಪರೀತಿಯಿಂದ ದೂರ ಉಳಿಯುತ್ತಲೇ ಆಗುತ್ತಿಲ್ಲ.

ಫೆಬ್ರುವರಿ ಎಂಟರಂದು ಬಜೆಟ್ ಮಂಡನೆ ಇತ್ತಲ್ಲ? ಅವತ್ತು ಬಜೆಟ್ ಮಂಡನೆಯೇ ಆಗುವುದಿಲ್ಲ, ಸರ್ಕಾರ ಬೀಳುತ್ತದೆ ಎಂದು ಬಹುಪಾಲು ನ್ಯೂಸ್ ಚಾನೆಲ್‌ಗಳು ಮುಂಜಾನೆಯಿಂದಲೇ ಅರಚುತ್ತಿದ್ದವು. ಆಗ ಬಿಟಿವಿ ಒಂದು ಬಿಗ್ ಬ್ರೇಕಿಂಗ್ ಕೊಡ್ತಾನೇ ಇತ್ತು. ಅದು ಕೂಡ ಸರ್ಕಾರ ಬೀಳುವುದರ ಕುರಿತೇ ಆಗಿತ್ತು! ಆದರೆ ಅದಕ್ಕೆ ಅವರು ನೀಡುತ್ತಿದ್ದ, ತೋರಿಸುತ್ತಿದ್ದ ಎಕ್ಸಕ್ಲೂಸಿವ್ ಕಾರಣವೇ ಬೇರೆ ಇತ್ತು!
ಅದು ಕಾಗೆ! ವಿಧಾನಸೌಧದದ ಪಶ್ಚಿಮ ದ್ವಾರದಲ್ಲಿ ಕಾಗೆ ಬಂದು ಸುಮಾರು ಹೊತ್ತಿನಿಂದ ಕೂತಿದೆ, ಇದು ಅಪಶಕುನ, ಸರ್ಕಾರ ಬಿದ್ದೇ ಹೋಯ್ತು ಎಂದೆಲ್ಲ ಬ್ರೇಕಿಂಗ್ ನ್ಯೂಸ್ ಕೊಡಲಾಗುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ‘ಬಿಗ್ ಬ್ರೇಕಿಂಗ್’ ಸದ್ಯದಲ್ಲೇ ಎಂಬ ಸುದ್ದಿ ಬಿಟ್ಟರು. ಆನ ಇದೇನಪ್ಪಾ ಅಂತಾ ಕಾಯ್ದರು. ಬಂದೇ ಬಿಟ್ಟಿತು ಬಿಗ್ ಬ್ರೇಕಿಂಗ್, “ಕಾಗೆ ಈಗ ವಿಧಾನಸೌಧ ಪ್ರವೇಶಿಸಲಿದೆ”….. ಛೇ, ಛೇ ರಿಯಲಿ ಬಿಗ್ ಬ್ರೇಕಿಂಗ್, ಆ ಕಾಗೆಗೆ!

ಆ ಕಾಗೆ ಹಿಂದ ಬಿದ್ದ ಕ್ಯಾಮೆರಾಮನ್ ಮತ್ತು ವರದಿಗಾರ ಬಜೆಟ್ ಬಗ್ಗೆ ತಲೆಕೆಡಿಸಿಕೊಂಡಿರಲೇ ಇಲ್ಲ. ದನ ಕಾಯುವವರಂತೆ ವಿಧಾನಸೌಧದ ಅಂಗಳದಲ್ಲೆಲ್ಲ ಓಡೋಡಿ ಶೂಟ್ ಮಾಡುತ್ತಿದ್ದ ಈ ಮನೆಹಾಳರನ್ನು ನೋಡಿ ಸೆಕ್ಯುರಿಟಿಯವರು, ಕುದುರೆ ವ್ಯಾಪಾರದ ಬಗ್ಗೆ ವರದಿ ಮಾಡ್ರೋ ಅಂದರೆ ಈ ಕತ್ತೆಗಳು ಕಾಗೆ ಹಿಂದೆ ಬಿದ್ದಿವೆಯಲ್ಲ ಎಂದು ನಗಾಡುತ್ತಿದ್ದರು. ಬಜೆಟ್ ಸುಸೂತ್ರವಾಗಿ ಮಂಡನೆಯಾಗಿತು. ಬಜೆಟ್‌ಗೂ ಮೊದಲು ಕುಮಾರಸ್ವಾಮಿ ಬಿಟ್ಟ ಆಡಿಯೋ ಬಾಂಬಿಗೆ ಬಿಜೆಪಿಯೂ ಥಂಡಾ ಹೊಡೆಯಿತು. ಪಾಪ, ಆಮೇಲೆ ಕಾಗೆಯೂ ಇಲ್ಲ, ಕಾಗೆ ಹಿಂದೆ ಬಿದ್ದಿದ್ದ ಕತ್ತೆಗಳೂ ಇಲ್ಲ!

ಪಬ್ಲಿಕ್‌ನ ಸೆಲ್ ವೀಕ್!

ಕಾಗೆ ಅಪಶಕುನ ಎಂಬ ಮೂಢನಂಬಿಕೆ ಇರುವಂತೆ, ನಿಂತ ಅಂದರೆ ಓಡದ ಗಡಿಯಾರವೂ ಮನೆಯಲ್ಲಿ ಇದ್ದರೆ ಡೇಂಜರ್ ಎಂಬ ಮುಠ್ಠಾಳ ನಂಬಿಕೆಯನ್ನೂ ವೈದಿಕರು ನಮ್ಮ ಜನರ ತಲೆಯಲ್ಲಿ ತುಂಬಿದ್ದಾರೆ. ಇದನ್ನೇ ಎನ್‌ಕ್ಯಾಷ್ ಮಾಡಿಕೊಂಡ ಪಬ್ಲಿಕ್ ಟಿವಿಯವರು ಮತ್ತೊಂದು ಬ್ರೇಕಿಂಗ್ ಹೊಡೆದೇ ಬಿಟ್ಟರು. ಕುಮಾರಸ್ವಾಮಿ ಮನೆಯ ಗಡಿಯಾರ ಕೆಟ್ಟು ಹೋಗಿದೆ ಅಂತಾ ಒಂದು ಬ್ರೇಕಿಂಗು, ಕೆಲಸದವರು ಹೊಸ ಸೆಲ್ ಹಾಕಿ ಸರಿಪಡಿಸಿದರು ಅಂತಾ ಇನ್ನೊಂದು ಬ್ರೇಕಿಂಗು.
ಕಾಗೆ ಕೂತಿದ್ದು, ಗಡಿಯಾರ ನಿಂತಿದ್ದು-ಇಂತದ್ದನ್ನೆಲ್ಲ ನೋಡಿ ಯಡಿಯೂರಪ್ಪ ಖೂಷಿ ಪಡುವ ಹೊತ್ತಿನಲ್ಲೇ ದೇವದುರ್ಗದ ಐಬಿಯಲ್ಲಿ ನಡೆಸಲು ಯತ್ನಿಸಿದ ಆಪರೇಷನ್ನಿನ ಆಡಿಯೋ ಹೊರಬಿದ್ದಿತ್ತು!

ಕಾರ್ ಕಾರ್, ಕಾರ್ ಮೇಲೆ ಕಾಗೆ ದರ್ಬಾರ್!

ಹಿಂದೆಯೂ ನಮ್ಮ ಕನ್ನಡ ಚಾನೆಲ್‌ಗಳು ಕಾಗೆಯ ಹಿಂದೆ ಬಿದ್ದು ಸರ್ಕಾರ ಬೀಳುತ್ತದೆ, ಸಿಎಂ ಬದಲಾಗುತ್ತಾರೆ ಎಂದೆಲ್ಲ ‘ವಿಶಲ್ಲೇಷಣೆ’ ಮಾಡುವ ಮಟ್ಟಕ್ಕೆ ಇಳಿದಿದ್ದವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಕಾರ್ ಮೇಲೆ ಕಾಗೆ ಕೂತಿದ್ದ ‘ಎಕ್ಸ್ಕ್ಲೂಸಿವ್’ ವಿಜುವಲ್ ಕ್ಯಾಚ್ ಮಾಡಿದ್ದ ಚಾನೆಲ್‌ಗಳು, ಸಿದ್ದರಾಮಯ್ಯ ಕಾರು ಬದಲಿಸಿದಾಗ, ಕಾಗೆಗೆ ಹೆದರಿ ಕಾರು ಬದಲಿಸಿದ ಸಮಾಜವಾದಿ ಎಂದೆಲ್ಲ ಲೇವಡಿ ಮಾಡಿದ್ದವು. ಮೂಢ ನಂಬಿಕೆಗಳನ್ನು ಪುಟ್ಟಾಪೂರಾ ವಿರೋಧಿಸುವ ಸಿದ್ದರಾಮಯ್ಯ ಆಡಳಿತಾತ್ಮಕ ಕಾರಣದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಕಾರು ಬದಲಾಯಿಸಿದ್ದರು. ಆದರೆ ಗೂಬೆಗಳಿಗೆ ಕಣ್ಣಿಗೆ ಕಾಗೆ ಮಾತ್ರ ಕಂಡಿತ್ತು.
ನಂತರವೂ ಶಕ್ತಿಸೌಧದಲ್ಲಿ ಕಾಗೆ, ಸಿದ್ದರಾಮಯ್ಯ ಕುರ್ಚಿಗೆ ಆಪತ್ತು ಎಂದೆಲ್ಲ ಕಾವ್ ಕಾವ್ ಮಾಡಲಾಗಿತ್ತು. ಪುಣ್ಯಕ್ಕೆ, ಸಿದ್ದರಾಮಯ್ಯ ಕಾರ್ ಮೇಲೆ ಕೂತಿದ್ದ ಕಾಗೆಯೇ ಮೊನ್ನೆ ಬಜೆಟ್ ದಿನ ವಿಧಾನಸೌಧದಲ್ಲಿ ಅಲೆದಾಡುತ್ತಿತ್ತು ಎಂಬ ಬ್ರೇಕಿಂಗನ್ನು ಹೊಡೆದಿಲ್ಲ. ಈಗ ಅದನ್ನು ಮಾಡುತ್ತಾರೆ, ನೋಡ್ತಾ ಇರಿ!

ರಾಧಿಕಮ್ಮನ ಕಾಗೆಗೆ ಒಂದು ಬಲಿ

4 ವರ್ಷಗಳ ಕೆಳಗೆ ಟಿವಿ ಒಂಭತ್ತರಲ್ಲಿ ರಾಧಿಕಾ ಭಾರದ್ವಾಜರು ಮಟಮಟ ಮಧ್ಯಾಹ್ನ ಕಾಗೆಯ ಸುತ್ತಲೇ ಅರ್ಧ ತಾಸಿನ ಎಪಿಸೋಡು ಮಾಡಿ ಧನ್ಯರಾಗಿದ್ದರು. ಮೂವರು ಜ್ಯೋತಿಷಿಗಳನ್ನು ಕೂಡಿಸಿಕೊಂಡಿದ್ದ ರಾಧಿಕಮ್ಮ ಕಾಗೆ ಮುಟ್ಟಿದರೆ ಮನುಷ್ಯ ಸತ್ತಂತೆ, ಮನೆ ಹಾಳಾದಂತೆ ಎಂದೆಲ್ಲ ಭೋಂಗು ಬಿಟ್ಟರು. ಯಾವುದೇ ವ್ಯಕ್ತಿಯ ಮೇಲೆ ಕಾಗೆ ಕುಳಿತರೆ ಆತನ/ಆಕೆಯ ತಾಯಿಗೆ ಮರಣ ಇಲ್ಲವೇ ಆತ/ಆಕೆಯೇ ಸಾವಿಗೆ ಈಡಾಗುತ್ತಾರೆ ಎಂದೆಲ್ಲ ಕಾವ್ ಕಾವ್ ಎಂದು ಅರಚಲಾಗಿತ್ತು.

ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಅಪ್ರೆಂಟಿಸ್ ಮಾಡುತ್ತಿದ್ದ ಲಕ್ಷ್ಮೇಶ್ವರದ ಯುವಕ ತನ್ನ ತಲೆ ಮೇಲೆ ಕಾಗೆ ಕೂತಿದ್ದಕ್ಕೆ ಚಿಂತಕ್ರಾಂತನಾಗಿ, ತನ್ನ ತಾಯಿಗೆ ಏನೂ ಆಗಬಾರದೆಂದು ಆತ್ಮಹತ್ಯೆ ಮಾಡಿಕೊಡಿದ್ದ. ಪೊಲೀಸರು ಸರಿಯಾದ ತನಿಖೆ ಮಾಡಿದ್ದರೆ ರಾಧಿಕಮ್ಮ ಮತ್ತು ಜೊತೆಗಿದ್ದ ಜ್ಯೋತಿಷಿ ಕಾಗೆಗಳೆಲ್ಲ ಜೈಲೂಟ ತನ್ನಬೇಕಾಗುತ್ತಿತ್ತೇನೋ?

ಆನರಲ್ಲಿ ವೈಜ್ಞಾನಿಕ ಮನೋಭಾವ ತುಂಬ ಬೇಕಾದ ಚಾನೆಲ್‌ಗಳು ಮುಂಜಾನೆ ಎದ್ದ ಕೂಡಲೇ ಜ್ಯೋತಿಷಿಗಳಿಗೆ ಚಾನೆಲ್ ಅನ್ನೇ ಮಾರಿಕೊಳ್ಳುವುದು ಅಸಹ್ಯಕರ. ಇದರ ಜೊತೆಗೆ ಕಾಗೆ, ಗಡಿಯಾರದ ಬ್ರೇಕಿಂಗುಗಳು ಬೇರೆ. ಟಿಆರ್‌ಪಿಗಾಗಿ ಕಾಗೆಯನ್ನೇ ಸಾಕಿ, ಅದನ್ನು ಎಲ್ಲಿ ಬೇಕಲ್ಲಿ ಕೂಡಿಸಿ ಬ್ರೇಕಿಂಗು ಕೊಡಲೂ ಹೇಸಲಾರವು ಈ ನ್ಯೂಸ್ ಚಾನೆಲ್‌ಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...