Homeಅಂಕಣಗಳುಚಾನೆಲ್‌ಗಳನ್ನು ಹೊಕ್ಕ ಕಾಗೆಗಳು ಕಾವ್ ಕಾವ್ ಎನ್ನುವ ಆ್ಯಂಕರ್ಸ್‌ಗಳು

ಚಾನೆಲ್‌ಗಳನ್ನು ಹೊಕ್ಕ ಕಾಗೆಗಳು ಕಾವ್ ಕಾವ್ ಎನ್ನುವ ಆ್ಯಂಕರ್ಸ್‌ಗಳು

- Advertisement -
- Advertisement -

ಮಲ್ಲಿ |
ಕನ್ನಡದ ಬಹುಪಾಲು ನ್ಯೂಸ್ ಚಾನೆಲ್‌ಗಳಿಗೆ ಕಾಗೆ ಎಂದರೆ ಬಲುಪ್ರೀತಿ. ಅದರಲ್ಲೂ ಬಿಜೆಪಿಗೆ ಅನುಕೂಲ ಆಗುವುದಾದರೆ ಅವು ಇಡೀ ದಿನ ಕಾಗೆಯ ಸುತ್ತವೇ ಸುದ್ದಿ ಮಾಡಲು ರೆಡಿ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಎಷ್ಟೇ ಮೂದಲಿಕೆ, ವ್ಯಂಗ್ಯ ಬಂದರೂ ಅವು ಕಾಗೆಯ ಪರೀತಿಯಿಂದ ದೂರ ಉಳಿಯುತ್ತಲೇ ಆಗುತ್ತಿಲ್ಲ.

ಫೆಬ್ರುವರಿ ಎಂಟರಂದು ಬಜೆಟ್ ಮಂಡನೆ ಇತ್ತಲ್ಲ? ಅವತ್ತು ಬಜೆಟ್ ಮಂಡನೆಯೇ ಆಗುವುದಿಲ್ಲ, ಸರ್ಕಾರ ಬೀಳುತ್ತದೆ ಎಂದು ಬಹುಪಾಲು ನ್ಯೂಸ್ ಚಾನೆಲ್‌ಗಳು ಮುಂಜಾನೆಯಿಂದಲೇ ಅರಚುತ್ತಿದ್ದವು. ಆಗ ಬಿಟಿವಿ ಒಂದು ಬಿಗ್ ಬ್ರೇಕಿಂಗ್ ಕೊಡ್ತಾನೇ ಇತ್ತು. ಅದು ಕೂಡ ಸರ್ಕಾರ ಬೀಳುವುದರ ಕುರಿತೇ ಆಗಿತ್ತು! ಆದರೆ ಅದಕ್ಕೆ ಅವರು ನೀಡುತ್ತಿದ್ದ, ತೋರಿಸುತ್ತಿದ್ದ ಎಕ್ಸಕ್ಲೂಸಿವ್ ಕಾರಣವೇ ಬೇರೆ ಇತ್ತು!
ಅದು ಕಾಗೆ! ವಿಧಾನಸೌಧದದ ಪಶ್ಚಿಮ ದ್ವಾರದಲ್ಲಿ ಕಾಗೆ ಬಂದು ಸುಮಾರು ಹೊತ್ತಿನಿಂದ ಕೂತಿದೆ, ಇದು ಅಪಶಕುನ, ಸರ್ಕಾರ ಬಿದ್ದೇ ಹೋಯ್ತು ಎಂದೆಲ್ಲ ಬ್ರೇಕಿಂಗ್ ನ್ಯೂಸ್ ಕೊಡಲಾಗುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ‘ಬಿಗ್ ಬ್ರೇಕಿಂಗ್’ ಸದ್ಯದಲ್ಲೇ ಎಂಬ ಸುದ್ದಿ ಬಿಟ್ಟರು. ಆನ ಇದೇನಪ್ಪಾ ಅಂತಾ ಕಾಯ್ದರು. ಬಂದೇ ಬಿಟ್ಟಿತು ಬಿಗ್ ಬ್ರೇಕಿಂಗ್, “ಕಾಗೆ ಈಗ ವಿಧಾನಸೌಧ ಪ್ರವೇಶಿಸಲಿದೆ”….. ಛೇ, ಛೇ ರಿಯಲಿ ಬಿಗ್ ಬ್ರೇಕಿಂಗ್, ಆ ಕಾಗೆಗೆ!

ಆ ಕಾಗೆ ಹಿಂದ ಬಿದ್ದ ಕ್ಯಾಮೆರಾಮನ್ ಮತ್ತು ವರದಿಗಾರ ಬಜೆಟ್ ಬಗ್ಗೆ ತಲೆಕೆಡಿಸಿಕೊಂಡಿರಲೇ ಇಲ್ಲ. ದನ ಕಾಯುವವರಂತೆ ವಿಧಾನಸೌಧದ ಅಂಗಳದಲ್ಲೆಲ್ಲ ಓಡೋಡಿ ಶೂಟ್ ಮಾಡುತ್ತಿದ್ದ ಈ ಮನೆಹಾಳರನ್ನು ನೋಡಿ ಸೆಕ್ಯುರಿಟಿಯವರು, ಕುದುರೆ ವ್ಯಾಪಾರದ ಬಗ್ಗೆ ವರದಿ ಮಾಡ್ರೋ ಅಂದರೆ ಈ ಕತ್ತೆಗಳು ಕಾಗೆ ಹಿಂದೆ ಬಿದ್ದಿವೆಯಲ್ಲ ಎಂದು ನಗಾಡುತ್ತಿದ್ದರು. ಬಜೆಟ್ ಸುಸೂತ್ರವಾಗಿ ಮಂಡನೆಯಾಗಿತು. ಬಜೆಟ್‌ಗೂ ಮೊದಲು ಕುಮಾರಸ್ವಾಮಿ ಬಿಟ್ಟ ಆಡಿಯೋ ಬಾಂಬಿಗೆ ಬಿಜೆಪಿಯೂ ಥಂಡಾ ಹೊಡೆಯಿತು. ಪಾಪ, ಆಮೇಲೆ ಕಾಗೆಯೂ ಇಲ್ಲ, ಕಾಗೆ ಹಿಂದೆ ಬಿದ್ದಿದ್ದ ಕತ್ತೆಗಳೂ ಇಲ್ಲ!

ಪಬ್ಲಿಕ್‌ನ ಸೆಲ್ ವೀಕ್!

ಕಾಗೆ ಅಪಶಕುನ ಎಂಬ ಮೂಢನಂಬಿಕೆ ಇರುವಂತೆ, ನಿಂತ ಅಂದರೆ ಓಡದ ಗಡಿಯಾರವೂ ಮನೆಯಲ್ಲಿ ಇದ್ದರೆ ಡೇಂಜರ್ ಎಂಬ ಮುಠ್ಠಾಳ ನಂಬಿಕೆಯನ್ನೂ ವೈದಿಕರು ನಮ್ಮ ಜನರ ತಲೆಯಲ್ಲಿ ತುಂಬಿದ್ದಾರೆ. ಇದನ್ನೇ ಎನ್‌ಕ್ಯಾಷ್ ಮಾಡಿಕೊಂಡ ಪಬ್ಲಿಕ್ ಟಿವಿಯವರು ಮತ್ತೊಂದು ಬ್ರೇಕಿಂಗ್ ಹೊಡೆದೇ ಬಿಟ್ಟರು. ಕುಮಾರಸ್ವಾಮಿ ಮನೆಯ ಗಡಿಯಾರ ಕೆಟ್ಟು ಹೋಗಿದೆ ಅಂತಾ ಒಂದು ಬ್ರೇಕಿಂಗು, ಕೆಲಸದವರು ಹೊಸ ಸೆಲ್ ಹಾಕಿ ಸರಿಪಡಿಸಿದರು ಅಂತಾ ಇನ್ನೊಂದು ಬ್ರೇಕಿಂಗು.
ಕಾಗೆ ಕೂತಿದ್ದು, ಗಡಿಯಾರ ನಿಂತಿದ್ದು-ಇಂತದ್ದನ್ನೆಲ್ಲ ನೋಡಿ ಯಡಿಯೂರಪ್ಪ ಖೂಷಿ ಪಡುವ ಹೊತ್ತಿನಲ್ಲೇ ದೇವದುರ್ಗದ ಐಬಿಯಲ್ಲಿ ನಡೆಸಲು ಯತ್ನಿಸಿದ ಆಪರೇಷನ್ನಿನ ಆಡಿಯೋ ಹೊರಬಿದ್ದಿತ್ತು!

ಕಾರ್ ಕಾರ್, ಕಾರ್ ಮೇಲೆ ಕಾಗೆ ದರ್ಬಾರ್!

ಹಿಂದೆಯೂ ನಮ್ಮ ಕನ್ನಡ ಚಾನೆಲ್‌ಗಳು ಕಾಗೆಯ ಹಿಂದೆ ಬಿದ್ದು ಸರ್ಕಾರ ಬೀಳುತ್ತದೆ, ಸಿಎಂ ಬದಲಾಗುತ್ತಾರೆ ಎಂದೆಲ್ಲ ‘ವಿಶಲ್ಲೇಷಣೆ’ ಮಾಡುವ ಮಟ್ಟಕ್ಕೆ ಇಳಿದಿದ್ದವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಕಾರ್ ಮೇಲೆ ಕಾಗೆ ಕೂತಿದ್ದ ‘ಎಕ್ಸ್ಕ್ಲೂಸಿವ್’ ವಿಜುವಲ್ ಕ್ಯಾಚ್ ಮಾಡಿದ್ದ ಚಾನೆಲ್‌ಗಳು, ಸಿದ್ದರಾಮಯ್ಯ ಕಾರು ಬದಲಿಸಿದಾಗ, ಕಾಗೆಗೆ ಹೆದರಿ ಕಾರು ಬದಲಿಸಿದ ಸಮಾಜವಾದಿ ಎಂದೆಲ್ಲ ಲೇವಡಿ ಮಾಡಿದ್ದವು. ಮೂಢ ನಂಬಿಕೆಗಳನ್ನು ಪುಟ್ಟಾಪೂರಾ ವಿರೋಧಿಸುವ ಸಿದ್ದರಾಮಯ್ಯ ಆಡಳಿತಾತ್ಮಕ ಕಾರಣದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಕಾರು ಬದಲಾಯಿಸಿದ್ದರು. ಆದರೆ ಗೂಬೆಗಳಿಗೆ ಕಣ್ಣಿಗೆ ಕಾಗೆ ಮಾತ್ರ ಕಂಡಿತ್ತು.
ನಂತರವೂ ಶಕ್ತಿಸೌಧದಲ್ಲಿ ಕಾಗೆ, ಸಿದ್ದರಾಮಯ್ಯ ಕುರ್ಚಿಗೆ ಆಪತ್ತು ಎಂದೆಲ್ಲ ಕಾವ್ ಕಾವ್ ಮಾಡಲಾಗಿತ್ತು. ಪುಣ್ಯಕ್ಕೆ, ಸಿದ್ದರಾಮಯ್ಯ ಕಾರ್ ಮೇಲೆ ಕೂತಿದ್ದ ಕಾಗೆಯೇ ಮೊನ್ನೆ ಬಜೆಟ್ ದಿನ ವಿಧಾನಸೌಧದಲ್ಲಿ ಅಲೆದಾಡುತ್ತಿತ್ತು ಎಂಬ ಬ್ರೇಕಿಂಗನ್ನು ಹೊಡೆದಿಲ್ಲ. ಈಗ ಅದನ್ನು ಮಾಡುತ್ತಾರೆ, ನೋಡ್ತಾ ಇರಿ!

ರಾಧಿಕಮ್ಮನ ಕಾಗೆಗೆ ಒಂದು ಬಲಿ

4 ವರ್ಷಗಳ ಕೆಳಗೆ ಟಿವಿ ಒಂಭತ್ತರಲ್ಲಿ ರಾಧಿಕಾ ಭಾರದ್ವಾಜರು ಮಟಮಟ ಮಧ್ಯಾಹ್ನ ಕಾಗೆಯ ಸುತ್ತಲೇ ಅರ್ಧ ತಾಸಿನ ಎಪಿಸೋಡು ಮಾಡಿ ಧನ್ಯರಾಗಿದ್ದರು. ಮೂವರು ಜ್ಯೋತಿಷಿಗಳನ್ನು ಕೂಡಿಸಿಕೊಂಡಿದ್ದ ರಾಧಿಕಮ್ಮ ಕಾಗೆ ಮುಟ್ಟಿದರೆ ಮನುಷ್ಯ ಸತ್ತಂತೆ, ಮನೆ ಹಾಳಾದಂತೆ ಎಂದೆಲ್ಲ ಭೋಂಗು ಬಿಟ್ಟರು. ಯಾವುದೇ ವ್ಯಕ್ತಿಯ ಮೇಲೆ ಕಾಗೆ ಕುಳಿತರೆ ಆತನ/ಆಕೆಯ ತಾಯಿಗೆ ಮರಣ ಇಲ್ಲವೇ ಆತ/ಆಕೆಯೇ ಸಾವಿಗೆ ಈಡಾಗುತ್ತಾರೆ ಎಂದೆಲ್ಲ ಕಾವ್ ಕಾವ್ ಎಂದು ಅರಚಲಾಗಿತ್ತು.

ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಅಪ್ರೆಂಟಿಸ್ ಮಾಡುತ್ತಿದ್ದ ಲಕ್ಷ್ಮೇಶ್ವರದ ಯುವಕ ತನ್ನ ತಲೆ ಮೇಲೆ ಕಾಗೆ ಕೂತಿದ್ದಕ್ಕೆ ಚಿಂತಕ್ರಾಂತನಾಗಿ, ತನ್ನ ತಾಯಿಗೆ ಏನೂ ಆಗಬಾರದೆಂದು ಆತ್ಮಹತ್ಯೆ ಮಾಡಿಕೊಡಿದ್ದ. ಪೊಲೀಸರು ಸರಿಯಾದ ತನಿಖೆ ಮಾಡಿದ್ದರೆ ರಾಧಿಕಮ್ಮ ಮತ್ತು ಜೊತೆಗಿದ್ದ ಜ್ಯೋತಿಷಿ ಕಾಗೆಗಳೆಲ್ಲ ಜೈಲೂಟ ತನ್ನಬೇಕಾಗುತ್ತಿತ್ತೇನೋ?

ಆನರಲ್ಲಿ ವೈಜ್ಞಾನಿಕ ಮನೋಭಾವ ತುಂಬ ಬೇಕಾದ ಚಾನೆಲ್‌ಗಳು ಮುಂಜಾನೆ ಎದ್ದ ಕೂಡಲೇ ಜ್ಯೋತಿಷಿಗಳಿಗೆ ಚಾನೆಲ್ ಅನ್ನೇ ಮಾರಿಕೊಳ್ಳುವುದು ಅಸಹ್ಯಕರ. ಇದರ ಜೊತೆಗೆ ಕಾಗೆ, ಗಡಿಯಾರದ ಬ್ರೇಕಿಂಗುಗಳು ಬೇರೆ. ಟಿಆರ್‌ಪಿಗಾಗಿ ಕಾಗೆಯನ್ನೇ ಸಾಕಿ, ಅದನ್ನು ಎಲ್ಲಿ ಬೇಕಲ್ಲಿ ಕೂಡಿಸಿ ಬ್ರೇಕಿಂಗು ಕೊಡಲೂ ಹೇಸಲಾರವು ಈ ನ್ಯೂಸ್ ಚಾನೆಲ್‌ಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...