Homeಮುಖಪುಟಚುನಾವಣಾ ನೀತಿಸಂಹಿತೆಯನ್ನೇ ಧಿಕ್ಕರಿಸಿದ ‘ಮೋದಿ’ ಸಿನಿಮಾ ತಂಡದ ಬೆನ್ನಿಗೆ ಯಾರಿದ್ದಾರೆ?

ಚುನಾವಣಾ ನೀತಿಸಂಹಿತೆಯನ್ನೇ ಧಿಕ್ಕರಿಸಿದ ‘ಮೋದಿ’ ಸಿನಿಮಾ ತಂಡದ ಬೆನ್ನಿಗೆ ಯಾರಿದ್ದಾರೆ?

- Advertisement -
- Advertisement -

ಚುನಾವಣಾ ಆಯೋಗದ ಬಗ್ಗೆ ಬಿಜೆಪಿಗೆ ನಿಜಕ್ಕೂ ಗೌರವ ಇದೆಯಾ? ಮೋದಿಯವರ ಈ ಐದು ವರ್ಷದ ಆಳ್ವಿಕೆಯಲ್ಲಿ ಚುನಾವಣಾ ಆಯೋಗ ತನ್ನ ಸ್ವಾಯತ್ತೆಯನ್ನು ಉಳಿಸಿಕೊಂಡಿದೆಯಾ? ಮುಂಬರುವ ಲೋಕಸಭಾ ಚುನಾವಣೆಯನ್ನು ಆಯೋಗ ಪಾರದರ್ಶಕವಾಗಿ ನಡೆಸುತ್ತಾ?………

ಇಷ್ಟೆಲ್ಲ ಪ್ರಶ್ನೆಗಳು ಹುಟ್ಟಲು ಕಾರಣವಾಗಿರೋದು ಒಂದು ಸಿನಿಮಾ! ಅದು ಸಾಮಾನ್ಯ ಸಿನಿಮಾವಲ್ಲ ಪ್ರಧಾನಿ ಮೋದಿಯವರ ಜೀವನಚರಿತ್ರೆ ಆಧರಿಸಿದ ಸಿನಿಮಾ ‘ಪಿಎಂ ನರೇಂದ್ರ ಮೋದಿ’. ಈ ಸಿನಿಮಾವನ್ನು ಏಪ್ರಿಲ್ 12ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಇತ್ತೀಚೆಗೆ ಘೋಷಿಸಿದ ನಂತರ ಚುನಾವಣಾ ಆಯೋಗವನ್ನು ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ.

ಯಾಕೆಂದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಸದರಿ ಚುನಾವಣೆಯ ಪ್ರಮುಖ ರಾಜಕಾರಣಿಯೊಬ್ಬರ ಸಿನಿಮಾವನ್ನು ಬಿಡುಗಡೆ ಮಾಡುವುದು ಎಷ್ಟು ಸರಿ? ಇದಕ್ಕೆ ಆಯೋಗ ಸಮ್ಮತಿ ನೀಡುತ್ತದೆಯಾ? ಮೊದಲ ಹಂತದ ಮತದಾನ ಚುನಾವಣೆ ಮುಕ್ತಾಯಗೊಂಡ ಮಾರನೇ ದಿನವೆ, ಇನ್ನೂ ಆರು ಹಂತಗಳ ಮತದಾನ ಬಾಕಿ ಇರುವಾಗಲೇ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಘೋಷಿಸುತ್ತದೆಯೆಂದರೆ, ಆಯೋಗದ ಭಯ ಆ ತಂಡಕ್ಕಿಲ್ಲವೇ? ಅಥವಾ ಆ ಭಯವನ್ನೂ ಮೀರುವ ಅಭಯ ಆ ತಂಡಕ್ಕೆ ಲಭಿಸಿದೆಯೇ? ಈ ಎಲ್ಲಾ ಪ್ರಶ್ನೆಗಳು ಈಗ ದೊಡ್ಡ ಚರ್ಚೆಯಾಗಿ ಬೆಳೆಯುತ್ತಿವೆ.

ಪ್ರಜಾತಂತ್ರವನ್ನು ಗೌರವಿಸುವವರ ವಾದ ಇದಾದರೆ, ವ್ಯಕ್ತಿ ಪೂಜೆಯ ಮೋಹಕ್ಕೆ ಸಿಕ್ಕಿರುವ ಕೆಲವರು ಆ ಸಿನಿಮಾಕ್ಕೂ ಬಿಜೆಪಿ ಪಕ್ಷಕ್ಕೂ ಯಾವ ಸಂಬಂಧವೂ ಇಲ್ಲ, ಅಲ್ಲದೇ ಪ್ರಧಾನಿ ಮೋದಿಯವರೇನು ಅದರಲ್ಲಿ ನಟಿಸಿದ್ದಾರಾ? ಹಾಗಾಗಿ ಅದು ಬಿಡುಗಡೆಯಾಗುವುದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂಬ ವಾದ ಮುಂದಿಡುತ್ತಿದ್ದಾರೆ.

ನಿಜಕ್ಕೂ ಬಿಜೆಪಿ ಪಕ್ಷಕ್ಕೂ ಆ ಸಿನಿಮಾಗೂ ಯಾವ ನಂಟೂ ಇಲ್ಲವೇ? ಬನ್ನಿ ಒಂದೊಂದಾಗಿ ನೋಡೋಣ…..

ಮಹಾರಾಷ್ಟ್ರ ಸಿಎಂ ಫಡ್ನವೀಸ್ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು

ನಿರ್ಮಾಣದಿಂದಲೇ ಶುರು ಮಾಡೋಣ. ಆ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾದದ್ದು ಇದೇ ವರ್ಷದ ಜನವರಿ 7 ರಂದು, ಮುಂಬೈನಲ್ಲಿ. ಬಿಡುಗಡೆ ಮಾಡಿದ್ದು ಮಹಾರಾಷ್ಟ್ರದ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್! ಬಿಜೆಪಿ ನಂಟೇ ಇರದಿದ್ದರೆ ಬಿಜೆಪಿ ರಾಜಕಾರಣಿ ಯಾಕೆ ಬಿಡುಗಡೆ ಮಾಡುತ್ತಿದ್ದರು?

ಇನ್ನು ಸಿನಿಮಾದ ಶೂಟಿಂಗ್ ಶುರುವಾದದ್ದು ಜನವರಿ 28ರಂದು. ಅದಾಗಿ ಸರಿಯಾಗಿ ನಲವತ್ತೆರಡು ದಿನಗಳಿಗೆ ಚಿತ್ರತಂಡ ರಿಲೀಸಿಂಗ್ ದಿನಾಂಕವನ್ನೇ ಪ್ರಕಟಿಸುತ್ತೆ. ಅದ್ಯಾವಾಗ ಏಪ್ರಿಲ್ 12ಕ್ಕೆ. ಅಂದರೆ ಶೂಟಿಂಗ್ ಶುರುವಾಗಿ ಕೇವಲ ಎರಡೂವರೆ ತಿಂಗಳಿಗೆ ಪ್ರಿ-ಪ್ರೊಡಕ್ಷನ್, ಪೋಸ್ಟ್-ಪ್ರೊಡಕ್ಷನ್ ಎಲ್ಲವನ್ನೂ ಮುಗಿಸಿ ಸಿನಿಮಾ ಸಿದ್ಧವಾಗಿಬಿಡುತ್ತೆ! ಬಿಜೆಪಿ ಎದುರಿಸ ಹೊರಟಿರುವ ಚುನಾವಣೆಯೇ ಈ ಸಿನಿಮಾದ ಆತುರದ ಪ್ರೊಡಕ್ಷನ್ ಕೆಲಸಕ್ಕೆ ಕಾರಣವಾ?

ಇನ್ನು ಸಿನಿಮಾ ರಿಲೀಸ್ ಆಗುತ್ತಿರೋದು ಹಿಂದಿ ಭಾಷೆಯಲ್ಲಿ ಮಾತ್ರ ಎಂದು ತಿಳಿದು ಬಂದಿದೆ. ಆದರೆ ಪೋಸ್ಟರ್ ರಿಲೀಸ್ ಆಗಿರೋದು 23 ಭಾರತೀಯ ಭಾಷೆಗಳಲ್ಲಿ. ಸಿನಿಮಾವೇ ತಯಾರಾಗದ ಭಾಷೆಯಲ್ಲೂ ಪೋಸ್ಟರ್‌ಗಳ ಅಗತ್ಯವೇನಿತ್ತು? ಇದು ಪ್ರಚಾರ ತಂತ್ರದ ಭಾಗ ಎನಿಸುವುದಿಲ್ಲವೇ, ಸಿನಿಮಾ ಪ್ರಚಾರವಲ್ಲ, ರಾಜಕೀಯ ಪ್ರಚಾರ!

ಇನ್ನು ಈ ಸಿನಿಮಾ ತಯಾರಕರ ವಿಚಾರಕ್ಕೆ ಬರೋಣ. ಮೊದಲು ನಟನಿಂದಲೇ ಶುರು ಮಾಡೋಣ. ಇದರಲ್ಲಿ ಮೋದಿಯವರ ಪಾತ್ರ ಮಾಡುತ್ತಿರೋದು ಬಾಲಿವುಡ್ ನಟ ವಿವೇಕ್ ಒಬೆರಾಯ್. ಈತ ಬಿಜೆಪಿಯ ಅಧಿಕೃತ ಸದಸ್ಯನಲ್ಲದೇ ಹೋದರು, ಬಿಜೆಪಿಯ ರೆಗ್ಯುಲರ್ ಸ್ಟಾರ್ ಪ್ರಚಾರಕ. 2014ರಲ್ಲಿ ಈತ ಮೋದಿಯವರ ಬಿಜೆಪಿ ಪರವಾಗಿ ಮಹಾರಾಷ್ಟ್ರದ ನಕ್ಸಲ್‌ಪೀಡಿತ ಜಿಲ್ಲೆಯಾದ ಗಡ್ಚರೋಲಿಯಲ್ಲಿ ಮತ್ತು ಉತ್ತರಪ್ರದೇಶದ ಘಜಿಯಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳಿಗಾಗಿ ಮತ ಯಾಚಿಸಿದ್ದರು.

ಬಿಜೆಪಿ ಕಮಲ ಲಾಂಛನದೊಂದಿಗೆ ಪ್ರಮಾಣವಚನದಲ್ಲಿ

ಇನ್ನು ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೂ ಈತನಿಗೆ ಆತ್ಮೀಯ ಆಹ್ವಾನವಿತ್ತು. ಅವತ್ತಿನ ಸಮಾರಂಭದಲ್ಲಿ ವಿವೇಕ್ ಒಬೆರಾಯ್ ಅಲ್ಲದೆ ಬೇರೆ ಸಾಕಷ್ಟು ಸಿನಿಮಾ ನಟರು ಭಾಗವಹಿಸಿದ್ದರು ಎಂದು ತಳ್ಳಿಹಾಕಲಿಕ್ಕಾಗುವುದಿಲ್ಲ. ಯಾಕೆಂದರೆ ವಿವೇಕ್ ಅವತ್ತು ತನ್ನ ಎದೆಯ ಮೇಲೆ ಬಿಜೆಪಿ ಚಿಹ್ನೆಯಾದ ಕಮಲದ ಗುರುತನ್ನು ಧರಿಸಿ ಬಿಜೆಪಿ ಜೊತೆಗಿನ ತನ್ನ ನಿಕಟತೆಯನ್ನು ಪ್ರದರ್ಶಿಸಿದ್ದರು. ಅಂದಹಾಗೆ ವಿವೇಕ್ ಒಬೆರಾಯ್ 2013ರಲ್ಲೇ (ಅಂದರೆ ಮೋದಿಯವರು 2014ರ ಚುನಾವಣಾ ತಯಾರಿಯಲ್ಲಿದ್ದಾಗಲೇ) ಮೋದಿ ಕುರಿತ ಸಿನಿಮಾದಲ್ಲಿ ಮೋದಿ ಪಾತ್ರ ಮಾಡುತ್ತಿರುವುದಾಗಿ ಹೇಳಿದ್ದಾಗಿ ಔಟ್‌ಲುಕ್ ವರದಿ ಮಾಡಿತ್ತು. ಅಂದರೆ ವಿವೇಕ್‌ನ ಪ್ರಕಾರ ಮೋದಿ ಸಿನಿಮಾ ಚುನಾವಣಾ ಸಂದರ್ಭದಲ್ಲೇ ಕದಲಿಕೆ ಕಾಣುತ್ತದೆ ಎಂಬುದು ಇದರಿಂದ ಅರ್ಥವಾಗುತ್ತೆ.

ಈಗ ನಿರ್ಮಾಪಕರ ವಿಚಾರಕ್ಕೆ ಬಂದರೆ, ಈ ಸಿನಿಮಾದ ಇಬ್ಬರು ನಿರ್ಮಾಪಕರಲ್ಲಿ ಒಬ್ಬರು ಈ ವಿವೇಕ್‌ನ ತಂದೆ ಸುರೇಶ್ ಒಬೆರಾಯ್! ಈತ 2004ರಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಅಲ್ಲಿಂದ ಇಲ್ಲಿವರೆಗೂ ಸುರೇಶ್, ಬಿಜೆಪಿ ಸಕ್ರಿಯ ಸದಸ್ಯ ಮತ್ತು ಮಗನಂತೆ  ತಾನೂ ಬಿಜೆಪಿಯ ಸ್ಟಾರ್ ಪ್ರಚಾರಕ!

ಸುರೇಶ್ ಒಬೆರಾಯ್ 2004ರಲ್ಲಿ ಬಿಜೆಪಿ ಸೇರ್ಪಡೆ

ಇನ್ನು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿರೋದು ಓಮಂಗ್ ಕುಮಾರ್ ಎಂಬ ಪ್ರತಿಭಾವಂತ ನಿರ್ದೇಶಕ. ಜೀವನಚರಿತ್ರೆಗಳನ್ನು ಚಿತ್ರವಾಗಿಸುವುದರಲ್ಲಿ ನಿಸ್ಸೀಮ. ಈ ಹಿಂದೆ ‘ಸರಬ್ಜಿತ್’ ಮತ್ತು ‘ಮೇರಿ ಕೋಮ್’ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದವರು. ಇವರು ನಟ, ನಿರ್ಮಾಪಕನಷ್ಟು ಬಿಜೆಪಿ ಸಖ್ಯ ಹೊಂದಿಲ್ಲವಾದರು ಇವರ ‘ಸರಬ್ಜಿತ್’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದು ಬಿಜೆಪಿಯ ಅಮಿತ್ ಶಾ ಮತ್ತು ನಿತಿನ್ ಗಡ್ಕರಿ. ಅಷ್ಟಕ್ಕೇ ಆತನಿಗೆ ಬಿಜೆಪಿ ನಂಟು ಥಳುಕು ಹಾಕಲಾಗದು. ಆದರೂ ಮೋದಿಯವರ ಬಯೋಪಿಕ್ ತಯಾರಾದ ಸಂದರ್ಭ, ಧಾವಂತ, ರಾಜಕೀಯ ಲಿಂಕ್‌ಗಳನ್ನು ಗಮನಿಸಿದರೆ ಒಮಂಗ್‌ನ ಈ ಸಣ್ಣ ನಂಟನ್ನೂ ಅನುಮಾನದಿಂದಲೇ ನೋಡಬೇಕಾಗುತ್ತೆ. ಅಂದಹಾಗೆ, 2015ರಲ್ಲಿ ಈತನ ‘ಮೇರಿ ಕೋಮ್’ ಸಿನಿಮಾಗೆ ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಇವೆಲ್ಲವೂ ಕಾಕತಾಳೀಯ ಎನ್ನುವಂತೆ ಕಂಡರೂ, ನಂಬಲು ಹರಸಾಹಸ ಪಡುವಂಥ ವಾತಾವರಣ ಈಗ ದೇಶದಲ್ಲಿ ನಿರ್ಮಾಣವಾಗಿದೆ.

ಒಮಂಗ್ ಕುಮಾರ್ ಅಮಿತ ಶಾ, ಗಡ್ಕರಿ ಜೊತೆ

ಆದರ್ಶ ರಾಜಕಾರಣ ಮಾಡುವುದೇ ನಿಜವಾದರೆ ಮೋದಿಯವರ ಮೇಲೆ ಈಗ ದೊಡ್ಡ ಹೊರೆ ಇದೆ. ಅದು ಅವರದೇ ಸಿನಿಮಾ ಆಗಿರೋದ್ರಿಂದ ಅವರ ಅನುಮತಿ ಅತ್ಯಮೂಲ್ಯ, ಕಥೆಗೂ ಮತ್ತು ಬಿಡುಗಡೆಗೂ. ಅವರು ಈ ಕೂಡಲೇ ಸಿನಿಮಾ ತಂಡಕ್ಕೆ ‘ಚುನಾವಣಾ ನೀತಿ ಸಂಹಿತೆ ಮುಗಿಯವವರೆಗೆ ರಿಲೀಸ್ ಮಾಡಬೇಡಿ’ ಎಂದು ಹೇಳಬೇಕಿದೆ. ಅದನ್ನು ಬಿಟ್ಟು, ಇದು ಸಿನಿಮಾ ತಂಡಕ್ಕೂ ಚುನಾವಣಾ ಆಯೋಗಕ್ಕು ಸಂಬಂಧಿಸಿದ ವಿಷಯ ನಾನೇಗೆ ಮಧ್ಯಪ್ರವೇಶಿಸಲಿ ಎಂಬ ಕುಂಟು ನೆಪ ಹೇಳಿದರೆ, ಆ ಸಿನಿಮಾದಿಂದ ಲಾಭ ಪಡೆಯಲು ಅವರು ಯೋಚಿಸಿದ್ದಾರೆ ಎಂದು ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತಾಗುತ್ತೆ.

ಯಾಕೆಂದರೆ, ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ಉತ್ತರಾಖಂಡ್ ರಾಜ್ಯಗಳ ಚುನಾವಣಾ ಸೋಲುಗಳ ನಂತರ ತನ್ನ ವರ್ಚಸ್ಸು ವೃದ್ದಿಸಿಕೊಳ್ಳುವ ಯಾವ ಅವಕಾಶವನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ……

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...