Homeಮುಖಪುಟಚುನಾವಣಾ ನೀತಿಸಂಹಿತೆಯನ್ನೇ ಧಿಕ್ಕರಿಸಿದ ‘ಮೋದಿ’ ಸಿನಿಮಾ ತಂಡದ ಬೆನ್ನಿಗೆ ಯಾರಿದ್ದಾರೆ?

ಚುನಾವಣಾ ನೀತಿಸಂಹಿತೆಯನ್ನೇ ಧಿಕ್ಕರಿಸಿದ ‘ಮೋದಿ’ ಸಿನಿಮಾ ತಂಡದ ಬೆನ್ನಿಗೆ ಯಾರಿದ್ದಾರೆ?

- Advertisement -
- Advertisement -

ಚುನಾವಣಾ ಆಯೋಗದ ಬಗ್ಗೆ ಬಿಜೆಪಿಗೆ ನಿಜಕ್ಕೂ ಗೌರವ ಇದೆಯಾ? ಮೋದಿಯವರ ಈ ಐದು ವರ್ಷದ ಆಳ್ವಿಕೆಯಲ್ಲಿ ಚುನಾವಣಾ ಆಯೋಗ ತನ್ನ ಸ್ವಾಯತ್ತೆಯನ್ನು ಉಳಿಸಿಕೊಂಡಿದೆಯಾ? ಮುಂಬರುವ ಲೋಕಸಭಾ ಚುನಾವಣೆಯನ್ನು ಆಯೋಗ ಪಾರದರ್ಶಕವಾಗಿ ನಡೆಸುತ್ತಾ?………

ಇಷ್ಟೆಲ್ಲ ಪ್ರಶ್ನೆಗಳು ಹುಟ್ಟಲು ಕಾರಣವಾಗಿರೋದು ಒಂದು ಸಿನಿಮಾ! ಅದು ಸಾಮಾನ್ಯ ಸಿನಿಮಾವಲ್ಲ ಪ್ರಧಾನಿ ಮೋದಿಯವರ ಜೀವನಚರಿತ್ರೆ ಆಧರಿಸಿದ ಸಿನಿಮಾ ‘ಪಿಎಂ ನರೇಂದ್ರ ಮೋದಿ’. ಈ ಸಿನಿಮಾವನ್ನು ಏಪ್ರಿಲ್ 12ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಇತ್ತೀಚೆಗೆ ಘೋಷಿಸಿದ ನಂತರ ಚುನಾವಣಾ ಆಯೋಗವನ್ನು ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ.

ಯಾಕೆಂದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಸದರಿ ಚುನಾವಣೆಯ ಪ್ರಮುಖ ರಾಜಕಾರಣಿಯೊಬ್ಬರ ಸಿನಿಮಾವನ್ನು ಬಿಡುಗಡೆ ಮಾಡುವುದು ಎಷ್ಟು ಸರಿ? ಇದಕ್ಕೆ ಆಯೋಗ ಸಮ್ಮತಿ ನೀಡುತ್ತದೆಯಾ? ಮೊದಲ ಹಂತದ ಮತದಾನ ಚುನಾವಣೆ ಮುಕ್ತಾಯಗೊಂಡ ಮಾರನೇ ದಿನವೆ, ಇನ್ನೂ ಆರು ಹಂತಗಳ ಮತದಾನ ಬಾಕಿ ಇರುವಾಗಲೇ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಘೋಷಿಸುತ್ತದೆಯೆಂದರೆ, ಆಯೋಗದ ಭಯ ಆ ತಂಡಕ್ಕಿಲ್ಲವೇ? ಅಥವಾ ಆ ಭಯವನ್ನೂ ಮೀರುವ ಅಭಯ ಆ ತಂಡಕ್ಕೆ ಲಭಿಸಿದೆಯೇ? ಈ ಎಲ್ಲಾ ಪ್ರಶ್ನೆಗಳು ಈಗ ದೊಡ್ಡ ಚರ್ಚೆಯಾಗಿ ಬೆಳೆಯುತ್ತಿವೆ.

ಪ್ರಜಾತಂತ್ರವನ್ನು ಗೌರವಿಸುವವರ ವಾದ ಇದಾದರೆ, ವ್ಯಕ್ತಿ ಪೂಜೆಯ ಮೋಹಕ್ಕೆ ಸಿಕ್ಕಿರುವ ಕೆಲವರು ಆ ಸಿನಿಮಾಕ್ಕೂ ಬಿಜೆಪಿ ಪಕ್ಷಕ್ಕೂ ಯಾವ ಸಂಬಂಧವೂ ಇಲ್ಲ, ಅಲ್ಲದೇ ಪ್ರಧಾನಿ ಮೋದಿಯವರೇನು ಅದರಲ್ಲಿ ನಟಿಸಿದ್ದಾರಾ? ಹಾಗಾಗಿ ಅದು ಬಿಡುಗಡೆಯಾಗುವುದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂಬ ವಾದ ಮುಂದಿಡುತ್ತಿದ್ದಾರೆ.

ನಿಜಕ್ಕೂ ಬಿಜೆಪಿ ಪಕ್ಷಕ್ಕೂ ಆ ಸಿನಿಮಾಗೂ ಯಾವ ನಂಟೂ ಇಲ್ಲವೇ? ಬನ್ನಿ ಒಂದೊಂದಾಗಿ ನೋಡೋಣ…..

ಮಹಾರಾಷ್ಟ್ರ ಸಿಎಂ ಫಡ್ನವೀಸ್ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು

ನಿರ್ಮಾಣದಿಂದಲೇ ಶುರು ಮಾಡೋಣ. ಆ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾದದ್ದು ಇದೇ ವರ್ಷದ ಜನವರಿ 7 ರಂದು, ಮುಂಬೈನಲ್ಲಿ. ಬಿಡುಗಡೆ ಮಾಡಿದ್ದು ಮಹಾರಾಷ್ಟ್ರದ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್! ಬಿಜೆಪಿ ನಂಟೇ ಇರದಿದ್ದರೆ ಬಿಜೆಪಿ ರಾಜಕಾರಣಿ ಯಾಕೆ ಬಿಡುಗಡೆ ಮಾಡುತ್ತಿದ್ದರು?

ಇನ್ನು ಸಿನಿಮಾದ ಶೂಟಿಂಗ್ ಶುರುವಾದದ್ದು ಜನವರಿ 28ರಂದು. ಅದಾಗಿ ಸರಿಯಾಗಿ ನಲವತ್ತೆರಡು ದಿನಗಳಿಗೆ ಚಿತ್ರತಂಡ ರಿಲೀಸಿಂಗ್ ದಿನಾಂಕವನ್ನೇ ಪ್ರಕಟಿಸುತ್ತೆ. ಅದ್ಯಾವಾಗ ಏಪ್ರಿಲ್ 12ಕ್ಕೆ. ಅಂದರೆ ಶೂಟಿಂಗ್ ಶುರುವಾಗಿ ಕೇವಲ ಎರಡೂವರೆ ತಿಂಗಳಿಗೆ ಪ್ರಿ-ಪ್ರೊಡಕ್ಷನ್, ಪೋಸ್ಟ್-ಪ್ರೊಡಕ್ಷನ್ ಎಲ್ಲವನ್ನೂ ಮುಗಿಸಿ ಸಿನಿಮಾ ಸಿದ್ಧವಾಗಿಬಿಡುತ್ತೆ! ಬಿಜೆಪಿ ಎದುರಿಸ ಹೊರಟಿರುವ ಚುನಾವಣೆಯೇ ಈ ಸಿನಿಮಾದ ಆತುರದ ಪ್ರೊಡಕ್ಷನ್ ಕೆಲಸಕ್ಕೆ ಕಾರಣವಾ?

ಇನ್ನು ಸಿನಿಮಾ ರಿಲೀಸ್ ಆಗುತ್ತಿರೋದು ಹಿಂದಿ ಭಾಷೆಯಲ್ಲಿ ಮಾತ್ರ ಎಂದು ತಿಳಿದು ಬಂದಿದೆ. ಆದರೆ ಪೋಸ್ಟರ್ ರಿಲೀಸ್ ಆಗಿರೋದು 23 ಭಾರತೀಯ ಭಾಷೆಗಳಲ್ಲಿ. ಸಿನಿಮಾವೇ ತಯಾರಾಗದ ಭಾಷೆಯಲ್ಲೂ ಪೋಸ್ಟರ್‌ಗಳ ಅಗತ್ಯವೇನಿತ್ತು? ಇದು ಪ್ರಚಾರ ತಂತ್ರದ ಭಾಗ ಎನಿಸುವುದಿಲ್ಲವೇ, ಸಿನಿಮಾ ಪ್ರಚಾರವಲ್ಲ, ರಾಜಕೀಯ ಪ್ರಚಾರ!

ಇನ್ನು ಈ ಸಿನಿಮಾ ತಯಾರಕರ ವಿಚಾರಕ್ಕೆ ಬರೋಣ. ಮೊದಲು ನಟನಿಂದಲೇ ಶುರು ಮಾಡೋಣ. ಇದರಲ್ಲಿ ಮೋದಿಯವರ ಪಾತ್ರ ಮಾಡುತ್ತಿರೋದು ಬಾಲಿವುಡ್ ನಟ ವಿವೇಕ್ ಒಬೆರಾಯ್. ಈತ ಬಿಜೆಪಿಯ ಅಧಿಕೃತ ಸದಸ್ಯನಲ್ಲದೇ ಹೋದರು, ಬಿಜೆಪಿಯ ರೆಗ್ಯುಲರ್ ಸ್ಟಾರ್ ಪ್ರಚಾರಕ. 2014ರಲ್ಲಿ ಈತ ಮೋದಿಯವರ ಬಿಜೆಪಿ ಪರವಾಗಿ ಮಹಾರಾಷ್ಟ್ರದ ನಕ್ಸಲ್‌ಪೀಡಿತ ಜಿಲ್ಲೆಯಾದ ಗಡ್ಚರೋಲಿಯಲ್ಲಿ ಮತ್ತು ಉತ್ತರಪ್ರದೇಶದ ಘಜಿಯಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳಿಗಾಗಿ ಮತ ಯಾಚಿಸಿದ್ದರು.

ಬಿಜೆಪಿ ಕಮಲ ಲಾಂಛನದೊಂದಿಗೆ ಪ್ರಮಾಣವಚನದಲ್ಲಿ

ಇನ್ನು ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೂ ಈತನಿಗೆ ಆತ್ಮೀಯ ಆಹ್ವಾನವಿತ್ತು. ಅವತ್ತಿನ ಸಮಾರಂಭದಲ್ಲಿ ವಿವೇಕ್ ಒಬೆರಾಯ್ ಅಲ್ಲದೆ ಬೇರೆ ಸಾಕಷ್ಟು ಸಿನಿಮಾ ನಟರು ಭಾಗವಹಿಸಿದ್ದರು ಎಂದು ತಳ್ಳಿಹಾಕಲಿಕ್ಕಾಗುವುದಿಲ್ಲ. ಯಾಕೆಂದರೆ ವಿವೇಕ್ ಅವತ್ತು ತನ್ನ ಎದೆಯ ಮೇಲೆ ಬಿಜೆಪಿ ಚಿಹ್ನೆಯಾದ ಕಮಲದ ಗುರುತನ್ನು ಧರಿಸಿ ಬಿಜೆಪಿ ಜೊತೆಗಿನ ತನ್ನ ನಿಕಟತೆಯನ್ನು ಪ್ರದರ್ಶಿಸಿದ್ದರು. ಅಂದಹಾಗೆ ವಿವೇಕ್ ಒಬೆರಾಯ್ 2013ರಲ್ಲೇ (ಅಂದರೆ ಮೋದಿಯವರು 2014ರ ಚುನಾವಣಾ ತಯಾರಿಯಲ್ಲಿದ್ದಾಗಲೇ) ಮೋದಿ ಕುರಿತ ಸಿನಿಮಾದಲ್ಲಿ ಮೋದಿ ಪಾತ್ರ ಮಾಡುತ್ತಿರುವುದಾಗಿ ಹೇಳಿದ್ದಾಗಿ ಔಟ್‌ಲುಕ್ ವರದಿ ಮಾಡಿತ್ತು. ಅಂದರೆ ವಿವೇಕ್‌ನ ಪ್ರಕಾರ ಮೋದಿ ಸಿನಿಮಾ ಚುನಾವಣಾ ಸಂದರ್ಭದಲ್ಲೇ ಕದಲಿಕೆ ಕಾಣುತ್ತದೆ ಎಂಬುದು ಇದರಿಂದ ಅರ್ಥವಾಗುತ್ತೆ.

ಈಗ ನಿರ್ಮಾಪಕರ ವಿಚಾರಕ್ಕೆ ಬಂದರೆ, ಈ ಸಿನಿಮಾದ ಇಬ್ಬರು ನಿರ್ಮಾಪಕರಲ್ಲಿ ಒಬ್ಬರು ಈ ವಿವೇಕ್‌ನ ತಂದೆ ಸುರೇಶ್ ಒಬೆರಾಯ್! ಈತ 2004ರಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಅಲ್ಲಿಂದ ಇಲ್ಲಿವರೆಗೂ ಸುರೇಶ್, ಬಿಜೆಪಿ ಸಕ್ರಿಯ ಸದಸ್ಯ ಮತ್ತು ಮಗನಂತೆ  ತಾನೂ ಬಿಜೆಪಿಯ ಸ್ಟಾರ್ ಪ್ರಚಾರಕ!

ಸುರೇಶ್ ಒಬೆರಾಯ್ 2004ರಲ್ಲಿ ಬಿಜೆಪಿ ಸೇರ್ಪಡೆ

ಇನ್ನು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿರೋದು ಓಮಂಗ್ ಕುಮಾರ್ ಎಂಬ ಪ್ರತಿಭಾವಂತ ನಿರ್ದೇಶಕ. ಜೀವನಚರಿತ್ರೆಗಳನ್ನು ಚಿತ್ರವಾಗಿಸುವುದರಲ್ಲಿ ನಿಸ್ಸೀಮ. ಈ ಹಿಂದೆ ‘ಸರಬ್ಜಿತ್’ ಮತ್ತು ‘ಮೇರಿ ಕೋಮ್’ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದವರು. ಇವರು ನಟ, ನಿರ್ಮಾಪಕನಷ್ಟು ಬಿಜೆಪಿ ಸಖ್ಯ ಹೊಂದಿಲ್ಲವಾದರು ಇವರ ‘ಸರಬ್ಜಿತ್’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದು ಬಿಜೆಪಿಯ ಅಮಿತ್ ಶಾ ಮತ್ತು ನಿತಿನ್ ಗಡ್ಕರಿ. ಅಷ್ಟಕ್ಕೇ ಆತನಿಗೆ ಬಿಜೆಪಿ ನಂಟು ಥಳುಕು ಹಾಕಲಾಗದು. ಆದರೂ ಮೋದಿಯವರ ಬಯೋಪಿಕ್ ತಯಾರಾದ ಸಂದರ್ಭ, ಧಾವಂತ, ರಾಜಕೀಯ ಲಿಂಕ್‌ಗಳನ್ನು ಗಮನಿಸಿದರೆ ಒಮಂಗ್‌ನ ಈ ಸಣ್ಣ ನಂಟನ್ನೂ ಅನುಮಾನದಿಂದಲೇ ನೋಡಬೇಕಾಗುತ್ತೆ. ಅಂದಹಾಗೆ, 2015ರಲ್ಲಿ ಈತನ ‘ಮೇರಿ ಕೋಮ್’ ಸಿನಿಮಾಗೆ ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಇವೆಲ್ಲವೂ ಕಾಕತಾಳೀಯ ಎನ್ನುವಂತೆ ಕಂಡರೂ, ನಂಬಲು ಹರಸಾಹಸ ಪಡುವಂಥ ವಾತಾವರಣ ಈಗ ದೇಶದಲ್ಲಿ ನಿರ್ಮಾಣವಾಗಿದೆ.

ಒಮಂಗ್ ಕುಮಾರ್ ಅಮಿತ ಶಾ, ಗಡ್ಕರಿ ಜೊತೆ

ಆದರ್ಶ ರಾಜಕಾರಣ ಮಾಡುವುದೇ ನಿಜವಾದರೆ ಮೋದಿಯವರ ಮೇಲೆ ಈಗ ದೊಡ್ಡ ಹೊರೆ ಇದೆ. ಅದು ಅವರದೇ ಸಿನಿಮಾ ಆಗಿರೋದ್ರಿಂದ ಅವರ ಅನುಮತಿ ಅತ್ಯಮೂಲ್ಯ, ಕಥೆಗೂ ಮತ್ತು ಬಿಡುಗಡೆಗೂ. ಅವರು ಈ ಕೂಡಲೇ ಸಿನಿಮಾ ತಂಡಕ್ಕೆ ‘ಚುನಾವಣಾ ನೀತಿ ಸಂಹಿತೆ ಮುಗಿಯವವರೆಗೆ ರಿಲೀಸ್ ಮಾಡಬೇಡಿ’ ಎಂದು ಹೇಳಬೇಕಿದೆ. ಅದನ್ನು ಬಿಟ್ಟು, ಇದು ಸಿನಿಮಾ ತಂಡಕ್ಕೂ ಚುನಾವಣಾ ಆಯೋಗಕ್ಕು ಸಂಬಂಧಿಸಿದ ವಿಷಯ ನಾನೇಗೆ ಮಧ್ಯಪ್ರವೇಶಿಸಲಿ ಎಂಬ ಕುಂಟು ನೆಪ ಹೇಳಿದರೆ, ಆ ಸಿನಿಮಾದಿಂದ ಲಾಭ ಪಡೆಯಲು ಅವರು ಯೋಚಿಸಿದ್ದಾರೆ ಎಂದು ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತಾಗುತ್ತೆ.

ಯಾಕೆಂದರೆ, ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ಉತ್ತರಾಖಂಡ್ ರಾಜ್ಯಗಳ ಚುನಾವಣಾ ಸೋಲುಗಳ ನಂತರ ತನ್ನ ವರ್ಚಸ್ಸು ವೃದ್ದಿಸಿಕೊಳ್ಳುವ ಯಾವ ಅವಕಾಶವನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ……

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...