Homeಕರ್ನಾಟಕಜೆಡಿಎಸ್ ಹೊಸ ಅಧ್ಯಕ್ಷರದ್ದೂ ಡಮ್ಮಿ ಕಾಯಕವಾ?

ಜೆಡಿಎಸ್ ಹೊಸ ಅಧ್ಯಕ್ಷರದ್ದೂ ಡಮ್ಮಿ ಕಾಯಕವಾ?

- Advertisement -
- Advertisement -

| ಆಕಾಶ್ ಕೆರೆಕಟ್ಟೆ |

ಈ ಸರ್ಕಾರ ಇರುತ್ತಾ ಅಥವಾ ಉರುಳುತ್ತಾ? ರಾಜೀನಾಮೆಗಳು ಸ್ವೀಕಾರ ಆಗ್ತಾವಾ ಅಥವಾ ಶಾಸಕರೇ ಅನರ್ಹರಾಗ್ತಾರಾ? ಅನ್ನೋ ಹೈಡ್ರಾಮಾಗಳ ನಡುವೆ ಗಮನಿಸಲೇಬೇಕಾದ ಇನ್ನೊಂದು ರಾಜಕೀಯ ವಿದ್ಯಮಾನ ನಡೆದಿದೆ. ಅದು ಜೆಡಿಎಸ್‍ಗೆ ನೂತನ ರಾಜ್ಯಾಧ್ಯಕ್ಷರ ಆಯ್ಕೆ. ವಿಶೇಷ ಅಂದ್ರೆ ಜೆಡಿಎಸ್ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ದಲಿತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದೊಂದನ್ನು ಹೊರತುಪಡಿಸಿದರೆ ಈ ಆಯ್ಕೆಯಲ್ಲಿ ಇನ್ನ್ಯಾವ ವಿಶೇಷವೂ ಇಲ್ಲ. ಯಾಕೆಂದರೆ ದೇವೇಗೌಡರ ಕುಟುಂಬದ ಹೊರತಾಗಿ ಜೆಡಿಎಸ್‍ಗೆ ಯಾರೇ ಅಧ್ಯಕ್ಷರಾದರು ಅವರು ಡಮ್ಮಿಯಾಗಿರಬೇಕಾಗುತ್ತೆ ಅನ್ನೋದನ್ನು ನಿರ್ಗಮಿತ `ಬಾಂಬೆಹಕ್ಕಿ’ ಎಚ್.ವಿಶ್ವನಾಥ್ ಸಾಬೀತು ಮಾಡಿಹೋಗಿದ್ದಾರೆ.

ಸಿದ್ರಾಮಯ್ಯನವರ ಹೊರತಾಗಿ ಅಧ್ಯಕ್ಷರಾದ ಗೌಡರ ಕುಟುಂಬೇತರ ವ್ಯಕ್ತಿಗಳಾದ ತಿಪ್ಪಣ್ಣ, ಮಿರಾಜುದ್ದೀನ್ ಪಟೇಲ್, ಕೃಷ್ಣಪ್ಪ ಇವರೆಲ್ಲ ಹೆಸರಿಗಷ್ಟೇ ಅಧ್ಯಕ್ಷರಾಗಿದ್ದರೆ ವಿನಾಃ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಯಾವ ಸ್ವತಂತ್ರವೂ ಅವರಿಗಿರಲಿಲ್ಲ. ರಾಜೀನಾಮೆ ಗೀಚಿ ಬಾಂಬೆ ಹೊಟೇಲ್ ಸೇರಿಕೊಂಡಿರುವ ಎಚ್.ವಿಶ್ವನಾಥ್ ಕೆ.ಆರ್.ನಗರದ ಪುರಸಭೆ ಎಲೆಕ್ಷನ್‍ಗೆ ತನಗೆ ಬೇಕಾದವರಿಗೆ ಟಿಕೇಟು ಕೊಡಿಸುವುದಕ್ಕೂ ಸಾಧ್ಯವಾಗಿರಲಿಲ್ಲ ಅಂದಮೇಲೆ `ಜೆಡಿಎಸ್ ಅಧ್ಯಕ್ಷ’ ಹುದ್ದೆ ಅದಿನ್ನೆಷ್ಟು ಗಟ್ಟಿಯದ್ದಾಗಿರಬೇಡ!

ಅಂಥಾ ಸ್ಥಾನಕ್ಕೆ ಈಗ ಎಚ್.ಕೆ.ಕುಮಾರಸ್ವಾಮಿಯನ್ನು ತಂದು ಕೂರಿಸಲಾಗಿದೆ. ನೋ ಡೌಟ್, ಇಂದಿನ ನಿದರ್ಶನಗಳಂತೆ ಅವರೂ ಡಮ್ಮಿ ಅಧ್ಯಕ್ಷರಾಗೇ ಕಾಲ ತಳ್ಳಬೇಕಾಗುತ್ತೆ. ಯಾಕೆಂದರೆ ಬರೋಬ್ಬರಿ ಐದು ಬಾರಿ ಶಾಸಕರಾಗಿರುವ ಸದ್ರಿ ಕುಮಾರಸ್ವಾಮಿ ಈ ಮೈತ್ರಿ ಸರ್ಕಾರದಲ್ಲಿ ತನಗೊಂದು ಮಂತ್ರಿ ಸ್ಥಾನ ಕೊಡಿ ಎಂದು ಕೇಳಿ ಗಿಟ್ಟಿಸಿಕೊಳ್ಳಲಾಗದಷ್ಟು ಮೆತ್ತೆ ಮನುಷ್ಯ. ಇಂಥಾ ವ್ಯಕ್ತಿ ಜೆಡಿಎಸ್ ಅಧ್ಯಕ್ಷಗಿರಿಗಿರುವ ಹಳೇ ಸಂಪ್ರದಾಯ ಮುರಿಯುವ ಯಾವ ಸಾಧ್ಯತೆಯೂ ಇಲ್ಲ. ರಾಜ್ಯ ರಾಜಕಾರಣದ ಮಾತು ಒತ್ತಟ್ಟಿಗಿರಲಿ ತವರು ಜಿಲ್ಲೆ ಹಾಸನದಲ್ಲೇ ಅವರ ಮಾತು ನಡೆಯೋದಿಲ್ಲ ಅನ್ನೋದನ್ನು ಜೆಡಿಎಸ್ ಕಾರ್ಯಕರ್ತರೇ ಮಾತಾಡಿ ಕೊಳ್ಳುತ್ತಿದ್ದಾರೆ. ಯಾಕೆಂದರೆ ಹಾಸನದ ಇಡೀ ರಾಜಕಾರಣವನ್ನು ಮುಷ್ಠಿಯಲ್ಲಿ ಹಿಡಿದು ಕೂತಿರೋದು ಎಚ್.ಡಿ.ರೇವಣ್ಣ. ಅವರ ಮುಂದೆ ಎಚ್.ಕೆ.ಕುಮಾರಸ್ವಾಮಿ ಗಟ್ಟಿಯಾಗಿ ದನಿಬಿಚ್ಚುವ ಧೈರ್ಯ ತೋರುವುದೇ ಡೌಟು.

ಹಾಸನದಲ್ಲಿ ತನ್ನ ಬಿಟ್ಟರೆ ಮತ್ತ್ಯಾವ ಶಕ್ತಿಕೇಂದ್ರಗಳೂ ಸೃಷ್ಟಿ ಆಗಬಾರದೆನ್ನುವ ಕಾರಣಕ್ಕೇ ರೇವಣ್ಣ, ಎಚ್‍ಕೆ ಕುಮಾರಸ್ವಾಮಿ ಮಂತ್ರಿಯಾಗುವುದಕ್ಕೆ ಅಡ್ಡಗಾಲು ಹಾಕಿದ್ದು ಎನ್ನಲಾಗುತ್ತಿದೆ. ಆರಂಭದಲ್ಲಿ ಕುಮಾರಸ್ವಾಮಿ ಹೆಸರು ಮಂತ್ರಿಯಾಗುವವರ ಯಾದಿಯಲ್ಲಿ ಕೇಳಿಬಂದದ್ದು ಸುಳ್ಳಲ್ಲ. ದಲಿತ ವ್ಯಕ್ತಿಗೆ ಮಂತ್ರಿಯಾಗುವ ಅವಕಾಶ ತಪ್ಪಿಸಿ, ಈಗ ಅದೇ ವ್ಯಕ್ತಿಗೆ ಅಧ್ಯಕ್ಷ ಪಟ್ಟ ಕಟ್ಟಿ ದಲಿತರ ಮೂಗಿಗೆ ತುಪ್ಪ ಸವರುವ ಯತ್ನವೂ ಇದರ ಹಿಂದಿದೆ. ಆದರೆ ಗೌಡರ ಹಟ್ಟಿಯ ಪಾರ್ಟಿಯ ಅಧ್ಯಕ್ಷಗಿರಿಯ ವಜನ್ನು ಎಂತದ್ದು ಎಂಬುದು ಗೊತ್ತಿರುವ ಸತ್ಯವಾಗಿರೋದ್ರಿಂದ ದಲಿತರ್ಯಾರು ಈ ಆಯ್ಕೆಯಿಂದ ಹಿಗ್ಗಿಲ್ಲ ಅನ್ನೋದು ವಾಸ್ತವ.

ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷರಾಗಿದ್ದರಿಂದ ಆದ ಒಂದೇ ಲಾಭ ಅಂದ್ರೆ, ಜೆಡಿಎಸ್ ಶಾಸಕರು ತಾಜ್‍ವೆಸ್ಟ್‍ಎಂಡ್‍ನಿಂದ ದೇವನಹಳ್ಳಿ ರೆಸಾರ್ಟ್‍ಗೆ ಹೊರಡುವಾಗ ಮಾಧ್ಯಮಗಳ ಫೋಟೋಗ್ರಾಫರ್‍ಗಳಿಗೆ ಪ್ರಮುಖವಾಗಿ ಕಾಣಲೆಂದು ಅವರಿಗೆ ಬಸ್‍ನಲ್ಲಿ ಮುಂದಿನ ಸೀಟ್ ಸಿಕ್ಕಿದ್ದಷ್ಟೇ!

ಈ ಆಯ್ಕೆಯಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಪಕ್ಷದ ಯುವ ಘಟಕದ ಅಧ್ಯಕ್ಷರನ್ನಾಗಿ ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡಿರೋದು. ಅಂತೂ ದೇವೇಗೌಡರು ಕುಟುಂಬ ರಾಜಕಾರಣದ ಹಳಿ ಬಿಟ್ಟು ಪಕ್ಕಕ್ಕೆ ಸರಿಯಲಾರರು ಎಂಬುದು ಇದರಿಂದ ಸಾಬೀತಾಗಿದೆ. ಜೊತೆಗೆ ರೇವಣ್ಣನವರ ಮಗ ಪ್ರಜ್ವಲ್ ಗೆದ್ದು ಸಂಸದನಾದ ನಂತರ ಕುಟುಂಬದೊಳಗೆ ಹುಟ್ಟಿಕೊಂಡಿದ್ದ ದಾಯಾದಿ ಅಸಮಾಧಾನವನ್ನು ಈ ರೀತಿ ಸರಿದೂಗಿಸಲಾಗಿದೆ. ಆದ್ರೆ ಒಂದಂತೂ ಸತ್ಯ, ಹಾಲಿ ಜೆಡಿಎಸ್ ಅಧ್ಯಕ್ಷ ಎಚ್ಕೆ ಕುಮಾರಸ್ವಾಮಿ ದೊಡ್ಡ ಗೌಡರು, ರೇವಣ್ಣ, ಕುಮಾರಣ್ಣನ ಎದುರು ಗಟ್ಟಿ ದನಿಯಾಗುವ ಮಾತಂತಿರಲಿ, ನಿಖಿಲ್ ಎದುರೂ ಗಡುಸಾಗಿ ಮಾತಾಡುವುದಕ್ಕೆ ಸಾಧ್ಯವಿಲ್ಲ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...