Homeರಾಜಕೀಯಥರ್ಡ್ ಪ್ಲೇಸ್ ಈಶ್ವರಪ್ಪ ಫಸ್ಟ್ ಕ್ಲಾಸ್ ಗೆದ್ದಿದ್ದು ಹೇಗೆ?

ಥರ್ಡ್ ಪ್ಲೇಸ್ ಈಶ್ವರಪ್ಪ ಫಸ್ಟ್ ಕ್ಲಾಸ್ ಗೆದ್ದಿದ್ದು ಹೇಗೆ?

- Advertisement -
- Advertisement -

ಮಾಚಯ್ಯ |

ಅಂತೂಇಂತೂ ಬ್ರಿಗೇಡ್ ಈಶ್ವರಪ್ಪ ಶಿವಮೊಗ್ಗ ಸಿಟಿಯಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದ್ದಾರೆ. ಎತ್ತಿಂದೆತ್ತ ಲೆಕ್ಕ ಹಾಕಿದರೂ ಕಳೆದ ಸಲದ ಮೂರನೇ ಸ್ಥಾನ ಬಿಟ್ಟು ಮೇಲಕ್ಕೇಳುವ ಲಕ್ಷಣಗಳೇ ಈ ಚುನಾವಣೆಯ ಕೊನೆಯ ಕ್ಷಣದವರೆಗೆ ಈಶ್ವರಪ್ಪ ಮೊಗದಲ್ಲಿ ಕಾಣಿಸುತ್ತಿರಲಿಲ್ಲ. ತಾನು ಪಕ್ಷ ಬಿಟ್ಟು ಹೋಗಲು ಕಾರಣವಾಗಿದ್ದ, ವಾಪಾಸು ಬಂದಾಗಲೂ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ವಿಪರೀತ ಕಾಟ ಕೊಟ್ಟಿದ್ದ ಈಶ್ವರಪ್ಪರನ್ನು ಸೋಲಿಸಿ, ಅವರ ರಾಜಕೀಯ ಬದುಕಿಗೆ ಇತಿಶ್ರೀ ಹಾಡಲು ಸ್ವತಃ ಯಡ್ಯೂರಪ್ಪನವರೇ ಸಕಲ ಸನ್ನದ್ಧರಾಗಿದ್ದು ವಾಸ್ತವ. ಹಾಗೆ ನೋಡಿದರೆ ಈಶ್ವರಪ್ಪನಿಗೆ ಟಿಕೇಟು ಕೊಡೋದೇ ಯಡ್ಯೂರಪ್ಪನವರಿಗೆ ಇಷ್ಟವಿರಲಿಲ್ಲ. ಅದಕ್ಕೆಂದೇ ಕಳೆದ ಸಲದ ಕೆಜೆಪಿ ಹುರಿಯಾಳು ರುದ್ರೇಗೌಡರನ್ನು ಜಿಲ್ಲಾಧ್ಯಕ್ಷ ಮಾಡಿ, ಚುನಾವಣಾ ಮುಂಚೂಣಿಗೆ ತರುವ ಪ್ರಯತ್ನ ಮಾಡಿದ್ದೂ ಉಂಟು.

ಹೈಕಮಾಂಡ್ ಒತ್ತಡಕ್ಕೆ ಮಣಿದು ಟಿಕೇಟ್ ಕನ್ಫರ್ಮ್ ಮಾಡಿದ ಮೇಲೂ ಈಶ್ವರಪ್ಪರಿಗೆ ಸೋಲಿನ ರುಚಿ ತೋರಿಸಲು ಮಾಡಬೇಕಾದ ಮಸಲತ್ತುಗಳನ್ನೆಲ್ಲ ಯಡ್ಯೂರಪ್ಪ ಅಣಿ ಮಾಡಿಟ್ಟಿದ್ದರು. ಕೊನೇ ಕ್ಷಣದವರೆಗೆ ಕ್ಷೇತ್ರದೊಳಗೆ ಕಾಲಿಟ್ಟ ಎಂತವರಿಗೇ ಆದರೂ ಈಶ್ವರಪ್ಪನ ಮೂರನೇ ಸ್ಥಾನದ ದುರಂತ ಭವಿಷ್ಯ ಮುಖಕ್ಕೆ ರಾಚುತ್ತಿತ್ತು. ಅಂತದ್ದರಲ್ಲಿ ಬ್ರಾಹ್ಮಣ ಮತಗಳು ಗಣನೀಯ ಸಂಖ್ಯೆಯಲ್ಲಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅದೇ ಬ್ರಾಹ್ಮಣ ಸಮುದಾಯದ ಕೆ.ಬಿ.ಪ್ರಸನ್ನ ಕುಮಾರ್‍ರನ್ನು ಹಿಂದಿಕ್ಕಿ ಬರೋಬ್ಬರಿ ಐವತ್ತು ಸಾವಿರ ಲೀಡ್‍ನಲ್ಲಿ ಈಶ್ವರಪ್ಪ ಗೆಲುವಿನ ಪತಾಕೆ ಹಾರಿಸುತ್ತಾರೆಂದರೆ ಹೇಗೆ ಸಾಧ್ಯ ಅನ್ನೋದು ಜನರನ್ನು ಕಾಡುತ್ತಿದೆ.

ಒನ್ಸ್ ಎಗೇನ್, ಈಶ್ವರಪ್ಪನವರ ಈ ಗೆಲುವಿನ ಹಿಂದೆ ಕೆಲಸ ಮಾಡಿರೋದು ಅದೇ ಹೈಕಮಾಂಡ್! ಶತಾಯಗತಾಯ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರ ಇಡಬೇಕೆಂದು ನಿರ್ಧರಿಸಿಕೊಂಡಿದ್ದ ಬಿಜೆಪಿ ಹೈಕಮಾಂಡ್‍ಗೆ ಒಂದೊಂದು ಸೀಟೂ ಮುಖ್ಯವೆನ್ನುವುದು ಮನದಟ್ಟಾಗಿ ಹೋಗಿತ್ತು. ಅದಕ್ಕೋಸ್ಕರ ಆಂತರಿಕ ಕಚ್ಚಾಟದಿಂದ ಕೈತಪ್ಪಿ ಹೋಗಬಹುದಾಗಿರುವ ಕ್ಷೇತ್ರಗಳನ್ನು ಪಟ್ಟಿ ಮಾಡಿ ಸಂಬಂಧಪಟ್ಟವರ ತಲೆಮೇಲೆ ಮೊಟಕುವ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾದಾಗ ಆ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಂಡಿದ್ದೇ ಈಶ್ವರಪ್ಪನವರ ತವರುಮನೆ. ಸ್ವತಃ ಯಡ್ಯೂರಪ್ಪನವರೇ ಈಶ್ವರಪ್ಪನನ್ನು ಮಣಿಸಲು ರಹಸ್ಯ ಸಿದ್ಧತೆ ಮಾಡಿಕೊಂಡಿರೋದನ್ನು ಖಾತ್ರಿಪಡಿಸಿಕೊಂಡ ಅಮಿತ್ ಶಾ, ಯಡ್ಯೂರಪ್ಪನನ್ನು ಕರೆದು `ನಿಮ್ಮ ಸಿಎಂ ಆಗೋ ಕನಸು ನನಸಾಗಬೇಕು ಅಂದ್ರೆ, ನೀವು ಈಶ್ವರಪ್ಪನನ್ನು ಗೆಲ್ಲಿಸಿಕೊಳ್ಳಲೇಬೇಕು. ಅಕಸ್ಮಾತ್ ಆಯಪ್ಪ ಸೋತರೆ, ಅದಕ್ಕೆ ನೀವೇ ಜವಾಬ್ಧಾರರಾಗ್ತೀರಿ. ಆಮೇಲಿನ ಬೆಳವಣಿಗೆಗಳಿಗೆ ನಾವು ಹೊಣೆಯಲ್ಲ’ ಅನ್ನೋ ಸಾಫ್ಟ್ ಎಚ್ಚರಿಕೆ ರವಾನಿಸಿದ್ದರು. ಆನಂತರವೇ ಯಡ್ಯೂರಪ್ಪ ತನ್ನೆಲ್ಲಾ ರಣತಂತ್ರಗಳನ್ನು ರಿವರ್ಸ್ ಮಾಡಿ, ಈಶ್ವರಪ್ಪನನ್ನು ಗೆಲ್ಲಿಸಿಕೊಳ್ಳಲು ದಾಳ ಉರುಳಿಸಿದ್ದು. ಲಿಂಗಾಯತ ಮತಗಳು ಸಾಲಿಡ್ಡಾಗಿ ಈಶ್ವರಪ್ಪನಿಗೆ ಒಲಿದು ಬರುವಂತೆ ಫರ್ಮಾನು ಹೊರಡಿಸಿದ್ದಲ್ಲದೇ, ಸ್ಥಳೀಯ ಆರೆಸ್ಸೆಸ್ ನಾಯಕರನ್ನು ಬಳಸಿಕೊಂಡು ಈ ಸಲ ಬಿಜೆಪಿ ಅಧಿಕಾರಕ್ಕೆ ಬಂದ್ರೇನೆ ಬ್ರಾಹ್ಮಣ ಸಮುದಾಯಕ್ಕೆ ಅನುಕೂಲ, ಹಾಗಾಗಿ ಜಾತ್ಯಸ್ಥ ಅಂತ ಪ್ರಸನ್ನ ಕುಮಾರ್‍ಗೆ ಓಟ್ ಹಾಕುವ ಬದಲು ಕಮಲದ ಚಿಹ್ನೆಗೆ ಮತ ಹಾಕುವಂತೆ ಅಂಡರ್ ಕರೆಂಟ್ ಹರಿಸಿದ್ದರು. ಅದು ಈಶ್ವರಪ್ಪನವರನ್ನು ಅನಾಮತ್ತು ಮೂರನೇ ಸ್ಥಾನದಿಂದ ಮೇಲಕ್ಕೇರಿಸಿ, ಐವತ್ತು ಸಾವಿರ ಲೀಡ್‍ಗಳಲ್ಲಿ ಗೆಲ್ಲಿಸಿದೆ.

ಅಂದಹಾಗೆ, ಗೆದ್ದರೂ ಪಕ್ಷದೊಳಗೆ ಈಶ್ವರಪ್ಪರನ್ನು ಈ ಋಣಭಾರ ಭರ್ಜರಿಯಾಗೇ ಮೆತ್ತಗಾಗಿಸಲಿದೆ. ಅಂತದ್ದೊಂದು ಸಣ್ಣ ಸ್ಯಾಂಪಲ್ ಕೂಡಾ ಈಗಾಗಲೇ ಘಟಿಸಿದೆ. ಫಲಿತಾಂಶ ಹೊರಬಿದ್ದು ಅಧಿಕಾರದ ಹೊಸ್ತಿಲಿಗೆ ಬಂದು ಅಂಡು ಸುಟ್ಟ ಬೆಕ್ಕಿನಂತಾಗಿದ್ದ ಬಿಜೆಪಿಯು ಪಕ್ಷೇತರರು, ಕಾಂಗ್ರೆಸ್-ಜೆಡಿಎಸ್ ಅತೃಪ್ತರಿಗೆ ಗಾಳ ಹಾಕುವ ಪ್ರಯತ್ನದಲ್ಲಿತ್ತು. ಆಗ ರಾಣೇಬೆನ್ನೂರಿನಿಂದ ಕೋಳಿವಾಡರನ್ನು ಮುಕ್ಕಿಸಿ ಬಂದ ಕೆಪಿಜೆಪಿಯ ಆರ್.ಶಂಕರ್‍ನನ್ನು ಬಿಜೆಪಿ ಸಂಪರ್ಕಿಸಿ ಕುದುರಿಸಿಕೊಂಡಿದ್ದುಂಟು. ಆತ ಜಾತಿಯಲ್ಲಿ ಕುರುಬನಾದ್ದರಿಂದ ಮತ್ತು ಈಶ್ವರಪ್ಪನ ಕಳ್ಳುಬಳ್ಳಿ ಸಂಬಂಧಿಕನೂ ಆದ್ದರಿಂದ ಆತನನ್ನು ನಿಭಾಯಿಸುವ ಹೊಣೆಯನ್ನು ಈಶ್ವರಪ್ಪನಿಗೇ ಹೈಕಮಾಂಡ್ ವಹಿಸಿತ್ತು. ಆದರೆ ಈಶ್ವರಪ್ಪ ಕೊಂಚ ಮೈಮರೆತಿದ್ದರಿಂದ ಬೆಳಿಗ್ಗೆ ಬಿಜೆಪಿ ಜೊತೆಗಿದ್ದ ಶಂಕರ್ ಸಂಜೆಯ ವೇಳೆಗಾಗಲೇ ಸಿದ್ದರಾಮಯ್ಯನವರ ಪಡಸಾಲೆಯಲ್ಲಿ ಮುಖ ತೋರಿಸಿ ಜೈ ಅಂದ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಹೈಕಮಾಂಡ್ ಪ್ರತಿನಿಧಿ ಪ್ರಕಾಶ್ ಜಾವ್ಡೇಕರ್, ಈಶ್ವರಪ್ಪನನ್ನು ಕರೆಸಿಕೊಂಡು `ಒಬ್ಬ ಎಮ್ಮೆಲ್ಲೆನ ನಿಮ್ಮ ಕೈಲಿ ನಿಭಾಯಿಸೋಕೆ ಆಗಲ್ವೇನ್ರೀ? ಇದಕ್ಕೋಸ್ಕರನೇನಾ ನಾವು ಯಡ್ಯೂರಪ್ಪಾಜಿಯ ಮನವೊಲಿಸಿ ನಿಮ್ಮನ್ನು ಗೆಲ್ಲಿಸಿಕೊಂಡದ್ದು. ನಿಮ್ಮ ಈ ಹೊಣೆಗೇಡಿತನದ ವಿರುದ್ಧ ಅಮಿತ್ ಶಾಜಿಗೆ ಕಂಪ್ಲೇಂಟ್ ಮಾಡ್ತೀನಿ’ ಅಂತ ಲೆಫ್ಟ್‍ರೈಟ್ ಕ್ಲಾಸ್ ತಗೊಂಡಿದ್ದರು. ಯಡ್ಯೂರಪ್ಪನವರ ಮರ್ಜಿಯಲ್ಲಿ ಗೆದ್ದಿರೋ ಈಶ್ವರಪ್ಪನೋರಿಗೆ ಭವಿಷ್ಯದಲ್ಲಿ ಇಂಥ ದೈನೇಸಿ ಬಹುಮಾನಗಳು ಸಾಕಷ್ಟು ಕಾದಿವೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...