Homeಅಂಕಣಗಳುನಾವೆಂದೂ ಜಾತಿ ರಾಜಕಾರಣ ಮಾಡಿದವರಲ್ಲ

ನಾವೆಂದೂ ಜಾತಿ ರಾಜಕಾರಣ ಮಾಡಿದವರಲ್ಲ

- Advertisement -
- Advertisement -

| ಯಾಹೂ |

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರೇ ಬೆಳಗುತ್ತಿದೆ. ಆದರೆ ಈಗ ಬೆಳಕಷ್ಟೇ ಸಾಲದು, ಬೆಂಗಳೂರಿಗರಿಗೆ ಕುಡಿಯಲೋಸ್ಕರ ಲಿಂಗನಮಕ್ಕಿ ನೀರು ಕೊಡಲು ಮಂಗನಂತಹ ರಾಜಕಾರಣಿಗಳು ಯೋಜನೆ ರೂಪಿಸಿದ್ದಾರಂತಲ್ಲಾ. ಅತ್ತ ಲಿಂಗನಮಕ್ಕಿ ಕತೆಯೇನಾಗಿದೆಯೆಂದರೆ, ಒಂದು ಕಾಲದಲ್ಲಿ ವರ್ಷಪೂರ್ತಿ ಭೋರ್ಗರೆಯುತ್ತಿದ್ದ ಜೋಗ, ಡ್ಯಾಂ ಕಟ್ಟಿದ ಮೇಲೆ ನಿಂತು ಹೋಯ್ತು. ಗುಡ್ಡಗಳ ಜವುಗಿನಿಂದ ಅಳುತ್ತಿದ್ದ ಜೋಗ ಈಗ ಗಟ್ಟಿ ಮನಸ್ಸು ಮಾಡಿ ಅದನ್ನು ನಿಲ್ಲಿಸಿದೆ. ಆದರೆ ರಾಜಕಾರಣಿಗಳು ಬರುವ ಪ್ರವಾಸಿಗರಿಗಾಗಿ ಮಾರ್ಕೆಟ್ ನಿರ್ಮಿಸಿ ಬಾಡಿಗೆ ಕೊಟ್ಟಿದ್ದಾರೆ. ಐಶಾರಾಮಿ ಐಬಿ ಕಟ್ಟಿಸಿದ್ದಾರೆ. ಜೊತೆಗೆ ಮುನಿಸಿಕೊಂಡ ಶರಾವತಿಯನ್ನು ಬೆಂಗಳೂರಿನವರೆಗೂ ಎಳೆದು ತರಲು ಯೋಜಿಸಿದ್ದಾರೆ. ಈ ಮೂರ್ಖರ ದೆಸೆಯಿಂದ ಈಗಾಗಲೇ ಗಾಜನೂರು ಬಲದಂಡೆ ತೋಡಲಾಗಿದೆ. ಭದ್ರಾ ಮೇಲ್ದಂಡೆ ಪಾತಾಳದಲ್ಲಿ ಹರಿಯಬೇಕಿದೆ. ಎತ್ತಿನಹೊಳೆ ತಿರುಗಿಸಲಾಗಿದೆ. ಇದಲ್ಲದೆ ಮಳೆ ನೀರು ಸಂಗ್ರಹಕ್ಕಾಗಿ ಇಡೀ ಕರ್ನಾಟಕದಲ್ಲಿ ಕೃಷಿ ಹೊಂಡ ತೋಡಿದ್ದಾರೆ. ಈ ಕೃಷಿ ಹೊಂಡದಲ್ಲಿ ನೀರು ತುಂಬುವ ಬದಲು ಜನಗಳ ಜೇಬು ಎಷ್ಟು ತುಂಬಿದೆ ಎಂದರೆ, ಇವರ ಕಡೆಯವರು ಯಾವ ಕೋಳಿಗಳನ್ನೂ ಬಿಡುತ್ತಿಲ್ಲ, ಯಾವ ಬ್ರಾಂಡಿ ಶಾಪನ್ನೂ ಬಿಡುತ್ತಿಲ್ಲ. ಇಂತವೇ ಹೋಗಿ ವಿಧಾನಸೌಧದಲ್ಲಿ ಕುಳಿತಿರುವುದರಿಂದ ಶರಾವತಿಗೆ ಕಂಟಕ ಎದುರಾಗಿದೆ. ಆದರದು ಅಷ್ಟು ಸುಲಭವಲ್ಲವಂತಲ್ಲಾ ಥೂತ್ತೇರಿ.

ನಿಜಕ್ಕೂ ಈಗ ದೇಶ ಅವ್ಯಕ್ತ ಕ್ಷೋಭೆಯಿಂದ ಕೂಡಿದೆ. ಕ್ರಿಕೆಟ್ ಮ್ಯಾಚನ್ನ ಸಂಭ್ರಮಿಸಲಾಗುತ್ತಿಲ್ಲ. ಏಕೆಂದರೆ ಟಿವಿಯಲ್ಲಿರುವ ಮೂರ್ಖರು ಕ್ಯಾಪ್ಟನ್ ಕೊಯ್ಲಿ ಜೊತೆಗೆ ಮೋದಿ ಫೋಟೊವನ್ನ ಹಾಕುತ್ತಿದ್ದಾರೆ. ನಮ್ಮ ಕ್ರಿಕೆಟಿಗರಿಗೆ ಮೋದಿ ಕೋಚ್ ಎಂಬುದು ಗೊತ್ತೇ ಇರಲಿಲ್ಲ. ಆದಿರಲಿ ಕರ್ನಾಟಕದ ಮಟ್ಟಿಗೆ ಭೀಕರವಾದ ಬಿಕ್ಕಟ್ಟುಗಳಿವೆ. ಶರಾವತಿ, ಐಎಂಎ ದರೋಡೆ, ಜಿಂದಾಲ್ ಭೂಹಗರಣ ಇವೆಲ್ಲ ಸಮಸ್ಯೆಗಳು ತೊಡರಿಕೊಂಡಿರುವಾಗ, ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರು ಮಧ್ಯಂತರ ಚುನಾವಣೆಯ ಧಮಕಿ ಹಾಕಿ ರಾಜಕಾರಣಿಗಳನ್ನು ಬೆಚ್ಚಿಸಿದ್ದಾರಲ್ಲಾ. ಈ ಬಗ್ಗೆ ಅವರನ್ನೇ ಮಾತನಾಡಿಸಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್; “ಜಾಡಿಸಿ ಹೊದಿ, ಅವರನ್ನು ಥೂ ಎಂದು ಉಗಿ ಜಾಡಿಸಿ…..” ಹಲೋ…
“ನಮಸ್ಕಾರ ಸಾರ್ ನಾನು ಯಾಹೂ.”
“ಗೌರಿ ಸಿಸ್ಟರ್ ಪತ್ರಿಕೆ ಬರ್ತಾಯಿದೆಯಾ.”
“ಬರ್ತಾಯಿದೆ ಸಾರ್.”
“ಒಂದು ಕಳಿಸಿ ಕೊಡಿ.”
“ಆಯ್ತು ಸಾರ್, ಒಂದೆರಡು ಪ್ರಶ್ನೆ ಕೇಳಬೇಕು.”
“ಕೇಳಿ.”
“ಮಧ್ಯಂತರ ಚುನಾವಣೆ ಎದುರಿಸೋಣ ಅಂದಿದ್ದಿರಲ್ಲಾ ಸಾ.”
“ಈ ದೇವೇಗೌಡ ಯಾವತ್ತು ಚುನಾವಣೆಗೆದಿರಿಲ್ಲ.”
“ನೀವು ಹೆದರಲ್ಲ ಸಾರ್, ಆದ್ರೆ ಎಮ್ಮೆಲ್ಲೆಗಳು ಬೆಚ್ಚಿ ಬಿದ್ದವುರೆ.”
“ಈಚಿನ ಚುನಾವಣೆ ಅಂದ್ರೆ ಹುಡುಗಾಟದ ಮಾತಲ್ಲ ಕೋಟಿಗಳ ಮಾತು.”
“ಅಕಸ್ಮಾತ್ ನೀವು ಚುನಾವಣೆಗೋದ್ರೆ ನಿಮಿಗೆ ಇಪ್ಪತ್ತೈದು, ಕಾಂಗ್ರೆಸ್‍ಗೆ ಐವತ್ತು, ಬಿಜೆಪಿಗೆ ಮೆಜಾರಿಟಿ ಬರುತ್ತಲ್ಲವಾ ಸಾರ್.”
“ಅದನ್ನು ತಮ್ಮಿಂದ ಕೇಳಿ ತಿಳಕೊಬೇಕಾಗಿಲ್ಲ ನನಿಗೂ ಗೊತ್ತು.”
“ಸಾರಿ ಸಾರ್, ನಿಮ್ಮ ಅನುಭವ ಮತ್ತೆ ಆತ್ಮವಿಶ್ವಾಸ ಒಂದೊಂದು ಸಾರಿ ಕೈ ಕೊಟ್ಟಿದೆಯಲ್ಲವ ಸಾರ್.”
“ಯಾವಾಗ.”
“ಕುಮಾರಣ್ಣ ಇಪ್ಪತ್ತು ತಿಂಗಳು ಮುಗಿಸಿದ ಮೇಲೆ, ಎಡೂರಪ್ಪನಿಗೆ ಬೆಂಬಲ ಕೊಡದು ಬೇಡ ಅಂತ ಹಟ ಹಿಡಿದ್ರಿ.”
“ಅದು ನನ್ನ ಭಾಗದ ಸರಿಯಾದ ತೀರ್ಮಾನ.”
“ಆದ್ರೆ ಎಡೂರಪ್ಪ ನಿಮ್ಮ ಕೈಲಿ ಗೂಸಾ ತಿಂದೋರಂಗೆ ಇಡೀ ಕರ್ನಾಟಕದಲ್ಲಿ ಅಳತ ತಿರುಗಾಡಿದರು. ಬಹುಮತ ಪಡೆದ್ರು ನೀವು ಇಪ್ಪತ್ತೈದು ಸೀಟಿಗೆ ನಿಂತೋದ್ರಿ ಅಲ್ಲವ ಸಾರ್.”
“ಹೌದು, ನನಿಗೆ ಇಪ್ಪತ್ತೈದು ಸೀಟು ಬಂದಿದ್ಕೆ ಯಾವ ಬೇಸರನೂ ಇಲ್ಲ. ಆದ್ರೆ ಕುಮಾರ ಬಿಜೆಪಿಗೆ ಸಪೋರ್ಟ್ ಮಾಡಿದ್ರೆ ನಾನು ಮುಖ ಎತ್ತಿಕೊಂಡು ರಾಜಕಾರಣ ಮಾಡಕ್ಕಾಗ್ತಿತ್ತ.”
“ಯಾಕೆ ಸಾರ್.”
“ನೀನು ಬಿಜೆಪಿಗೋಗಿ ಮುಖ್ಯಮಂತ್ರಿ ಆಗೋದಾದ್ರೆ ನನ್ನ ಹೆಣ ನೋಡಬೇಕಾಗತ್ತೆ ಅಂತ ಕುಮಾರನಿಗೆ ಹೇಳಿದ್ದೆ. ಲೋಕಸಭೆಲಿ ನಿಂತು ನಾನಿಲ್ಲದಾಗ ನನ್ನ ಮಗನನ್ನ ಕರೆದುಕೊಂಡೋಗಿ ಬಿಜೆಪಿಯವರು ಅಧಿಕಾರ ಹಿಡಿದ್ರು ಅಂತ ಹೇಳಿದ್ದೆ. ಇಷ್ಟಾದ ಮೇಲೆ ನಾನು ಎಡೂರಪ್ಪನಿಗೆ ಸಪೋರ್ಟ್ ಮಾಡು ಅನ್ನಕ್ಕಾಗತ್ತ.”
“ಇಲ್ಲ ಸಾರ್, ರಾಜಕಾರಣದಲ್ಲಿ ನೈತಿಕತೆ ಅಂದ್ರೆ ಇದೆ ಅಲ್ಲವ ಸಾರ್.”
“ನಾನು ಯಾವತ್ತಿಗೂ ಬಿಜೆಪಿಯವರ ಜೊತೆ ಸರಸ ಆಡಿದವನಲ್ಲ.”
“ನಿಜ ಸಾರ್, ಅಷ್ಟೇ ಅಲ್ಲ ಮಾಜಿ ಪ್ರಧಾನಿಗಳಾಗಿದ್ದು ಆ ಮೋದಿ ಬಗ್ಗೆ ಮಾತಾಡಲಿಲ್ಲ. ರಫೇಲ್ ಹಗರಣ, ಹುಸಿ ಯುದ್ಧ ಮತ್ತೆ ಮೋದಿ ಸುಳ್ಳು ಬಗ್ಗೆನೂ ಚಕಾರ ಎತ್ತಲಿಲ್ಲ.”
“ನನ್ನ ರಾಜಕಾರಣ ಅದಲ್ಲ.”
“ಇನ್ನೊಂದು ವಿಷಯ ಸಾರ್, ಕಾಂಗ್ರೆಸ್‍ನವರು ನೀವು ಸರಕಾರ ಮಾಡಿ ಅಂತ ಹೇಳಿದಾಗ, ಖರ್ಗೆ ಮುಖ್ಯಮಂತ್ರಿ ಆಗಲಿ ಅಂದ್ರಂತೆ. ಈಗ ಚುನಾವಣೆಗೆ ಹೋಗೋದರ ಬದಲು ಖರ್ಗೆ ಮಾಡಿ ಕೈ ತೊಳಕೊಂಡ್ರೆಂಗೇ.”
“ಅದಷ್ಟು ಸುಲಭವಲ್ಲ ಕಾಂಗೈನಲ್ಲೇ ವಿರೋಧ ಇದೆ.”
“ನೀವು ಮನಸು ಮಾಡಿದ್ರೆ ಆಗತ್ತೆ ಸಾರ್. ಆಗ ಹಾಸನ ಜಿಲ್ಲಾ ಪಂಚಾಯ್ತಿಗೆ ಹರಿಜನರ ಹುಡುಗನ್ನ ಅಧ್ಯಕ್ಷನ್ನ ಮಾಡಿದ್ರಿ. ಈಗ ಅಂತ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ ಸಾರ್.”
“ಈ ಬಗ್ಗೆ ತೀರ್ಮಾನ ತಗೋಬೇಕಾದವರು ಕಾಂಗ್ರೆಸಿಗರು. ಮುಖ್ಯವಾಗಿ ನನ್ನನ್ನ ತುಮಕೂರಲ್ಲಿ ನಿಲ್ಲಿಸಿ ಸೋಲಿಸಿದಂತಹ ಮಹಾ ನಾಯಕರು ಈ ಬಗ್ಗೆ ಮನಸು ಮಾಡಬೇಕು.”
“ನಿಮ್ಮನ ತುಮಕೂರಲ್ಲಿ ನಿಲ್ಲಂಗೆ ಮಾಡಿದ ಮಹಾ ನಾಯಕರು ಮುಟ್ಟಿನೋಡಿಕಳಂಗಾಯ್ತು ಸಾರ್. ಮೈಸೂರು ಒಕ್ಕಲಿಗರು ಕಾಂಗ್ರೆಸ್‍ಗೆ ಓಟಾಕಲಿಲ್ಲ. ತುಮಕೂರು ಕುರುಬ್ರು ನಿಮಗೆ ಓಟು ಮಾಡಲಿಲ್ಲ ಅಲ್ಲವ ಸಾರ್.”
“ಹಾಗೇಳಕ್ಕೆ ಬರಲ್ಲ.”
“ಅಂಗಂದ್ರೆ ಮುದ್ದ ಹನುಮೇಗೌಡರನ್ನ ಮುದ್ದು ಮಾಡೋರು ನಿಮ್ಮನ್ನ ಮುಗಿಸಿದ್ರು ಅಂದಂಗಾಗತ್ತೆ.”
“ಸೋಲನ್ನ ನಾನು ಒಪ್ಪಿಕಂಡಿದ್ದಿನಿ.”
“ಒಪ್ಪದೆಯಿದ್ರೆ ಗೆಲವು ಅಂತ ಅನ್ನಕ್ಕಾಗಲ್ಲ ಸಾರ್. ಆದ್ರೆ ನಿಮ್ಮ ತೀರ್ಮಾನ ಸರಿಯಿರಲಿಲ್ಲ. ಆದ್ರು ನೀವು ಸಿದ್ದರಾಮಯ್ಯ ಈಗ ಒಂದಾಗಿರಬೇಕು ಸಾರ್.”
“ಅದರಗತ್ಯ ಇದಿಯಾ.”
“ಇದೆ ಸಾರ್, ನಿಮ್ಮಿಬ್ಬರ ರಾಜಕಾರಣದಿಂದ ಅಣ್ಣ ತಮ್ಮಂದಿರಂಗಿದ್ದ ಕುರುಬ್ರು ಒಕ್ಕಲಿಗರು ವೈರಿಗಳಾಗಿದ್ದಾದಾರೆ, ನೀವು ಒಂದಾದ್ರೆ ಲಿಂಗಾಯಿತರ ಹೆದರಿಸಬವುದು.”
“ಈ ತರದ ಜಾತಿ ಲೆಕ್ಕಾಚಾರದ ರಾಜಕಾರಣವನ್ನ ಈ ದೇವೇಗೌಡ ಎಂದೂ ಮಾಡಿಲ್ಲ.”
“ಮತ್ಯಾಕೆ ಸಾರ್, ಜಾತ್ಯಾತೀತವಾಗಿದ್ದ ಒಕ್ಕಲಿಗರು ಹಿಂಗಾದ್ರು.”
“ಹ್ಯಂಗಾಗಿದಾರೆ.”
“ಒಂದು ಕಾಲದಲ್ಲಿ ಸಿಂಧ್ಯನ ಎದುರಿಗೆ ನಿಮ್ಮನ್ನೇ ಸೋಲಸತಿದ್ರು. ದೇವರಾಜ ಅರಸು ಎದುರಿಗೆ ತಿಮ್ಮೇಗೌಡನ್ನ ಸೋಲಿಸತಿದ್ರು, ಚಿಗರಿಗೌಡನ ಎದುರಿಗೆ ಎಚ್.ಬಿ.ಕೃಷ್ಣಪ್ಪನ್ನ ಸೋಲಿಸಿದ್ರು. ಆದ್ರೀಗ ಅವುರೂ ಲಿಂಗಾಯತರಂಗೆ ಆಗ್ಯವುರೆ ಇದನ್ಯಲ್ಲ ನೋಡಿದ್ರೆ ಕಮ್ಯುನಿಟಿ ಲೀಡ್ರು ಹೊಣೆಗಾರಾಗಬೇಕಾಗತ್ತೆ ಸಾರ್.”
“ನೋಡಿ ಕಾಲ ಬದಲಾಗಿದೆ ಆದ್ರಿಂದ ರಾಜಕಾರಣ ತುಂಬ ವ್ಯಾಪಿಸಿಕೊಂಡಿದೆ. ಸರಕಾರಿ ಜನ ಕೂಡ ತಮ್ಮ ಜನಾಂಗದ ಲೀಡರನ್ನ ಆಶ್ರಯಿಸಿದಾರೆ, ಒಬ್ಬ ರಾಜಕಾರಣಿ ಎಲ್ಲ ಜನಾಂಗದವರ ಕೆಲಸಗಳನ್ನ ಮಾಡಿದ್ರೆ ಹೀಗಾಗತಿರಲಿಲ್ಲ. ನಾವು ಎಂದೂ ಜಾತಿ ರಾಜಕಾರಣ ಮಾಡಿದವರಲ್ಲ. ಕುಟುಂಬದ ರಾಜಕಾರಣವನ್ನೂ ಮಾಡಿದವರಲ್ಲ. ಭ್ರಷ್ಟ ಕೆಲಸ ಮಾಡಕ್ಕೆ ನಮ್ಮಿಂದ ಸಾಧ್ಯವಾಗಲೇಯಿಲ್ಲ. ಆದ್ರಿಂದ ಕಳೆದ ಅರವತ್ತು ವರ್ಷಗಳಿಂದ ರಾಜಕಾರಣದಲ್ಲಿದ್ದೀನಿ. ಇದು ಜನರ ಆಶೀರ್ವಾದಗಳಿಂದ ಮಾಡಿಕೊಂಡು ಬಂದ ರಾಜಕಾರಣವೇ ಪರಂತೂ. ಇನ್ಯಾರಿಂದ್ಲೂ ಅಲ್ಲ.”
“ಇನ್ನೊಂದು ಗುರುತರವಾದ ಆಪಾದನೆ ಸಾರ್, ನೀವು ಕುರುಬ ಜನಾಂಗದವರಂತೆ ನಿಜವ.”
“ಯಾವ ಬೋಸುಡಿ ಮಗ ಅಂಗಂದೋನು.”
“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...