Homeಅಂಕಣಗಳುಪೆರೋನಿಸಂ & ಮಿಲಿಟರಿ ಸರ್ವಾಧಿಕಾರ ಆಳುವ ವರ್ಗ ಮತ್ತು ಮಿಲಿಟರಿ

ಪೆರೋನಿಸಂ & ಮಿಲಿಟರಿ ಸರ್ವಾಧಿಕಾರ ಆಳುವ ವರ್ಗ ಮತ್ತು ಮಿಲಿಟರಿ

- Advertisement -
- Advertisement -

ಭರತ್ ಹೆಬ್ಬಾಳ್ |

1860ರಿಂದ 1910ರವರೆಗೂ ಉತ್ತರದ ದಿಕ್ಕಿನಲ್ಲಿರುವ ಪಂಪಾಸ್‍ನಲ್ಲಿ ಸ್ಥಳೀಯರ ಮಾರಣಹೋಮ ಮತ್ತು ಫಲವತ್ತಾದ ಭೂಮಿಯಲ್ಲಿ ಕೃಷಿ ವಿಸ್ತರಣೆಗಳಿಂದ ಅರ್ಜೆಂಟಿನಾದ ಆಧುನಿಕ ಆಳುವ ವರ್ಗಗಳು ಸೃಷ್ಟಿಯಾದವು. ಇದು ಯಾವ ರೀತಿ ಕ್ರೂರವಾಗಿತ್ತೆಂದರೆ ಪೆರುಗ್ವೆ ದೇಶದ 70% ಜನಸಂಖ್ಯೆಯನ್ನೇ ಅಳಿಸಿ ಹಾಕಿತ್ತು ಮತ್ತು ಇಂದಿನ ಅರ್ಜೆಂಟೀನದ ಗಡಿಗಳನ್ನು ಸ್ಥಾಪಿಸಿತ್ತು. 1970ರಿಂದ 1920ರವರೆಗೆ ಕೈಗಾರೀಕರಣಗೊಳ್ಳುತ್ತಿದ್ದ ಅಮೇರಿಕಕ್ಕೆ ಯುರೋಪಿನಿಂದ ಹೇಗೆ ಲಕ್ಷಾಂತರ ಜನ ವಲಸೆ ಬಂದರೋ ಹಾಗೆ ಅರ್ಜೆಂಟೀನಗೆ ಕೂಡ ಬಂದರು. 1870ರಲ್ಲಿ 18 ಲಕ್ಷವಿದ್ದ ಜನಸಂಖ್ಯೆ 45 ವರ್ಷಗಳಲ್ಲಿ ಯೂರೋಪಿನ ವಲಸೆಯಿಂದ 1914ರಲ್ಲಿ 78 ಲಕ್ಷಕ್ಕೆ ಏರಿತ್ತು. 1880ರಲ್ಲಿ 2500 ಕಿ.ಮೀ, ಇದ್ದ ರೈಲ್ವೆ ಲೈನ್ 1910ರಲ್ಲಿ 34000 ಕಿ.ಮೀ. ಆಗುವಷ್ಟು ರೈಲ್ವೆ ಮಾರ್ಗಗಳ ವಿಸ್ತಾರವಾಗಿತ್ತು. ವ್ಯವಸಾಯಕ್ಕೆ ಪೂರಕವಾದ ಸಣ್ಣ ಪುಟ್ಟ ಕಾರ್ಖಾನೆಗಳು ಮತ್ತು ಮಾಂಸ ಸಂಸ್ಕರಣಾ ಘಟಕಗಳು ಸ್ಥಾಪನೆಯಾದವು. ಬ್ರಿಟನ್ ಈ ಆರ್ಥಿಕ ಪ್ರಗತಿಯಲ್ಲಿ ಅತ್ಯಂತ ಹೆಚ್ಚು ಬಂಡವಾಳ ಹೂಡಿತ್ತು. ಯೂರೋಪಿನಿಂದ ಬಂದ ವಲಸಿಗರೇ ಹೆಚ್ಚಿದ್ದರು ಮತ್ತು ಆ ಸಮಯದ ಯೂರೋಪಿನಲ್ಲಿ ಭುಗಿಲೆದ್ದಿದ್ದ ದುರಭಿಮಾನಿ ರಾಷ್ಟ್ರೀಯ ರಾಜಕೀಯವು ಅದಕ್ಕೆ ತಕ್ಕುನಾದ ಸಂಸ್ಕೃತಿ ಮತ್ತು ಆರ್ಥಿಕತೆಯನ್ನು ರೂಪಿಸಿಕೊಂಡಿತ್ತು. ವಲಸೆ ಬಂದವರಿಂದಲೇ ರೂಪುಗೊಂಡಿದ್ದ ಅರ್ಜೆಂಟೀನದ ಭೂಮಾಲೀಕ ಆಳುವ ವರ್ಗದ ಸ್ಥಳೀಯ (ಅರ್ಜೆಂಟೀನ) ರಾಷ್ಟ್ರವಾದವು ಇಲ್ಲಿನ ಸಮಾಜದಲ್ಲಿ ಬಲವಾಗಿ ಬೇರೂರಿತ್ತು. ಮಿಲಿಟರೀ ಅಧಿಕಾರದ ಇತಿಹಾಸವಿದ್ದ ಅರ್ಜೆಂಟಿನಾಗೆ, ಒಂದು ಸ್ಥಾಪಿತ ಹಿತಾಸಕ್ತಿಗಳ ರಾಷ್ಟ್ರವಾದಿ ಆಳುವ ವರ್ಗ ಸೃಷ್ಟಿಯಾಗಿತ್ತು. 1929ರ ವಾಲ್ ಸ್ಟ್ರೀಟ್ ಕುಸಿತದ ನಂತರ ಮಾರುಕಟ್ಟೆ ಆರ್ಥಿಕತೆ ಒಂದು ದೊಡ್ಡ ಬಿಕ್ಕಟ್ಟನ್ನು ಎದುರಿಸಿತು. ಆಗ ವ್ಯವಸಾಯ ಕೇಂದ್ರಿತ ಆಳುವ ವರ್ಗ ಮಿಲಿಟರಿ ಮೂಲಕ ಅಸ್ತಿತ್ವದಲ್ಲಿದ್ದ ಸರ್ಕಾರವನ್ನು ಕಿತ್ತೊಗೆಯಿತು. ಮತ್ತು ದುಡಿಯುವ ವರ್ಗವು 1919ರ ದಂಗೆಯ ನಂತರ ಪಡೆದಿದ್ದ ಸವಲತ್ತುಗಳನ್ನು ಕಿತ್ತು ಹಾಕಿ ದಮನಕಾರಿ ಸರ್ವಾಧಿಕಾರವನ್ನು ಸ್ಥಾಪಿಸಿತ್ತು. ಇಟಲಿಯ ಮುಸೊಲೊನಿ ಮತ್ತು ಜರ್ಮನಿಯ ಹಿಟ್ಲರ್‍ನ ರಾಷ್ಟ್ರೀಯ ದುರಭಿಮಾನಿ ನಿಲುವೇ ಈ ಮಿಲಿಟರೀ ಸರ್ಕಾರ ನಿಲುವಾಗಿತ್ತು.
ಪೆರೋನಿಸಂ
ಮಿಲಿಟರೀ ಸರ್ಕಾರಗಳಿಂದಲೇ ನಡೆಯುತ್ತಿದ್ದ ಅರ್ಜೆಂಟೀನಾದಲ್ಲಿ ಆಧುನಿಕ ರಾಜಕೀಯ ಇತಿಹಾಸ ಶುರುವಾಗುವುದೇ ವಾನ್ ಡೊಮಿಂಗೊ ಪೆರೋನ್ ಎಂಬ ಮಾಜಿ ಮಿಲಿಟರೀ ಜನರಲ್‍ನಿಂದ. ಆತ 1930ರಿಂದ 1940ರವರೆಗೂ ಇಟಲಿಯಲ್ಲಿ ಮಿಲಿಟರೀ ಕಾರ್ಯತಂತ್ರಗಳ ಜೊತೆಗೆ ಇಟ್ಯಾಲಿಯನ್ ಫ್ಯಾಸಿಸಮ್, ಜರ್ಮನೀ ನಾಝೀ ಫ್ಯಾಸಿಸಮ್ ಕಲಿಯುತ್ತಾರೆ. 1943ರಲ್ಲಿ ಜನರಲ್ ಆರ್ಟುರೊ ರಾವನ್ ಜೊತೆಗೆ ಅಧ್ಯಕ್ಷ ರಾಮನ್ ಕ್ಯಾಸ್ಟಿಲ್ಲೊನನ್ನು ಅಧಿಕಾರದಿಂದ ಇಳಿಸಲು ಕ್ಷಿಪ್ರಕ್ರಾಂತಿ ನಡೆಸಿ ಗೆಲ್ಲುತ್ತಾರೆ. ಅವರಿಗೆ ಕಾರ್ಮಿಕ ಕಾರ್ಯದರ್ಶಿ ಸ್ಥಾನ ನೀಡಲಾಗುತ್ತದೆ, ನಂತರ ಅವರು ಕಾರ್ಮಿಕ ಇಲಾಖೆಯ ಮುಖ್ಯಸ್ಥರಾದರು ಮತ್ತು ಅಂತಿಮವಾಗಿ ಅವರು ಉಪಾಧ್ಯಕ್ಷರಾದರು. ಕಾರ್ಮಿಕರಿಗೆ ಸಂಬಳ, ಸವಲತ್ತುಗಳು, ಮತ್ತು ವಿರಾಮ ಸಮಯವನ್ನು ಹೆಚ್ಚಿಸಿದರು. ಅದೇ ಸಮಯದಲ್ಲಿ ಪರಿಚಯವಾದ ಏವ ಡ್ವಾರ್ಟೇ ಎಂಬ ರೇಡಿಯೋ ನಿರೂಪಕಿ ಪೆರೋನ್ ಯಶಸ್ಸಿನ ಹಿಂದಿನ ಶಕ್ತಿ ಎಂದು ಹೇಳಲಾಗುತ್ತದೆ. ತೀರಾ ಬಡತನದ ಹಿನ್ನೆಲೆಯಿಂದ ಬಂದಿದ್ದ ಏವ, ಪೆರೋನ್ ಮತ್ತು ಅರ್ಜೆಂಟೀನದ ಇತಿಹಾಸವನ್ನೇ ಬದಲಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. 1945ರಲ್ಲಿ ಇವರ ಜನಪ್ರಿಯತೆ ಎಷ್ಟಿತ್ತೆಂದರೆ ಇವರನ್ನು ಮಿಲಿಟರೀ ಆಡಳಿತವು ಸರ್ಕಾರದಿಂದ ಕಿತ್ತೊಗೆದಾಗ ನಗರದ ದುಡಿಯುವ ವರ್ಗ ಇವರ ಪರವಾಗಿ ಬೀದಿಗಿಳಿದು ದೊಡ್ಡ ಪ್ರತಿಭಟನೆ ಮಾಡಿತ್ತು ಮತ್ತು 1946ರಲ್ಲಿ ನಡೆದ ಚುನಾವಣೆಯಲ್ಲಿ ಪೇರೋನ್ ಅಧಿಕಾರ ಹಿಡಿದಾಗ ಆ ಯಶಸ್ಸಿನ ಹಿಂದಿನ ರೂವಾರಿಯಾಗಿದ್ದರು.
ಫಾಸಿವಾದದ ಹಿನ್ನೆಲೆ ಇದ್ದರೂ ಪೆರೋನ್‍ನ ನೀತಿಗಳು ಅರ್ಜೆಂಟೀನಾದ ದುಡಿಯುವ ಮತ್ತು ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಉಪಕಾರಿಯಾಗಿದ್ದವು. ಇದನ್ನು ಯೂರೋಪಿನ ಸೋಶಿಯಲ್ -ಡೆಮೊಕ್ರ್ಯಾಟ್ಸ್ ರಾಜಕೀಯ ನೀತಿಗಳಿಗೆ ಹೋಲಿಸಲಾಗುತ್ತದೆ. ಮೊದಲ ಬಾರಿಗೆ ದುಡಿಯುವ ಜನರ ಮಕ್ಕಳು ಕಾಲೇಜು ವಿಶ್ವವಿದ್ಯಾನಿಲಯಗಳ ಮೆಟ್ಟಿಲು ಏರುವಂತಾಯಿತು. ಶಿಕ್ಷಣ ಎಲ್ಲರಿಗೂ ಉಚಿತವಾಗಿ ದೊರೆಯುವಂತಾಯಿತು. ಬಡವರ ಪರವಾಗಿ ಏವ ಪೇರೋನ್ ರೂಪಿಸಿದ ನೀತಿಗಳನ್ನು ಅರ್ಜೆಂಟಿನಿಯನ್ನರು ಇನ್ನೂ ಸ್ಮರಿಸುತ್ತಾರೆ. ಪೇರೋನಿಸ್ಮ್‍ನ ಮುಖ್ಯ ಧ್ಯೇಯ ಕಮ್ಯೂನಿಸಮ್ ಮತ್ತು ಕ್ಯಾಪಿಟಲಿಸಮ್ ವಿರೋಧಿಸಿ ನ್ಯಾಯ ಮತ್ತು ಕಲ್ಯಾಣದ ಸವಲತ್ತುಗಳನ್ನು ಅರ್ಜೆಂಟೀನಾ ಪ್ರಭುತ್ವದ ಮೂಲಕ ಪಡೆಯಬಹುದಾದ ಮೂರನೇ ಪರ್ಯಾಯವನ್ನು ಕಂಡುಕೊಳ್ಳುವುದು. ಇವರ ಘೋಷಣೆಯೇ “ವರ್ಗ ಸಂಘರ್ಷವನ್ನು ಬಿಟ್ಟು, ದುಡಿಯುವ ಜನ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ” ಹೋಗಿ ಪ್ರಭುತ್ವದ ಸವಲತ್ತುಗಳನ್ನು ಪಡೆಯುವುದು. ಹಲವು ಆರ್ಥಿಕ ರಕ್ಷಣಾತ್ಮಕ ನೀತಿಗಳನ್ನು ಅನುಸರಿಸಿದ್ದ ಪೆರೋನ್ ಮುಂದೆ ಹೋಗುತ್ತಾ 1948ರಲ್ಲಿ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಕಸರತ್ತು ಮಾಡಿದರು. ವಿದೇಶಿ ಬಂಡವಾಳವನ್ನು ಆಕರ್ಷಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ಶಿಸ್ತುಬದ್ದ ದುಡಿಯುವ ವರ್ಗ ಬೇಕು. ಆದರೆ ಪೇರೋನ್ ಅವರಿಗೆ ಸವಲತ್ತುಗಳನ್ನು ಕೊಟ್ಟು ಕಾರ್ಮಿಕ ವರ್ಗವನ್ನು ಹಾಳು ಮಾಡುತ್ತಿದ್ದಾನೆ ಎಂದು ಆಳುವ ವರ್ಗ ಪೇರೋನ್ ವಿರುದ್ದ ತಿರುಗಿ ಬಿದ್ದರು. 1955ರಲ್ಲಿ ಮಿಲಿಟರೀ ನಡೆಸಿದ ಕ್ಷಿಪ್ರ ಕ್ರಾಂತಿಯಿಂದ ಪೇರೊನ್‍ಅನ್ನು ಸ್ಪೇನ್ ದೇಶಕ್ಕೆ ಉಚ್ಚಾಟಿಸಲಾಗಿತ್ತು. ನಂತರ ಬಂದ ಮಿಲಿಟರೀ ಸರ್ವಾಧಿಕಾರ ಒಂದು ರೀತಿಯಲ್ಲಿ ಸಂಘಟಿತರಾಗಿದ್ದ ಕಾರ್ಮಿಕ ವರ್ಗವನ್ನು ಒಡೆಯಲು ಪ್ರಯತ್ನಿಸಿತು. 60ರಿಂದ 80ರ ದಶದವರೆಗೂ ಅತಿ ಹೆಚ್ಚು ಕಾರ್ಮಿಕ ವರ್ಗವನ್ನು ಹೊಂದಿದ್ದ ದಕ್ಷಿಣ ಅಮೆರಿಕಾದ ಈ ದೇಶವು ಅವರಿಗೆ ಪ್ರತಿರೋಧಗಳನ್ನೂ ಒಡ್ಡುತ್ತಲಿತ್ತು.
ಮಿಲಿಟರಿ ಸರ್ವಾಧಿಕಾರ
1959ರಲ್ಲಿ ಫಿಡೆಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಚೆ ಗುವೇರ ಮತ್ತು ಸಂಗಡಿಗರು ಮಾಡಿದ ಕ್ಯೂಬ ಕ್ರಾಂತಿ ನಂತರದ ಬೆಳವಣಿಗೆಯಲ್ಲಿ ದಕ್ಷಿಣ ಅಮೆರಿಕಾದಲ್ಲಿ ಹಬ್ಬುತ್ತಿದ್ದ ಕಮ್ಯೂನಿಸಮ್ ತಡೆಯಲು ಮತ್ತು ಉಳ್ಳವರ ಪರವಾದ ನವ ಉದಾರೀಕರಣದ ಹೊಸ ರೀತಿಯ ಆರ್ಥಿಕ ವ್ಯವಸ್ಥೆಯನ್ನು ದೇಶಗಳ ಮೇಲೆ ಹೇರಲು ಜಾಗತಿಕ ಬಂಡವಾಳಶಾಹಿಗಳು ಬಳಸಿಕೊಂಡದ್ದೆ ಚಿಲಿ ಮತ್ತು ಅರ್ಜೆಂಟಿನವನ್ನು. 1955ರಿಂದ 1969ವರೆಗೂ ಈ ಸಂಘರ್ಷವೇ ಒಂದು ಸಾಮಾನ್ಯ ಸ್ಥಿತಿಯಾಗಿತ್ತು. ಬೆಳೆಯುತ್ತಿದ್ದ ಸಾಮಾಜಿಕ ಉದ್ವೇಗದ ನಡುವೆ 1966ರಲ್ಲಿ ವಿದ್ಯಾರ್ಥಿಗಳ ದೊಡ್ಡ ಹೋರಾಟ ಅರ್ಜೆಂಟಿನಾದ್ಯಂತ ಭುಗಿಲೆದ್ದಿತ್ತು. ಆರ್ಥಿಕ ಬಿಕ್ಕಟ್ಟು, ಏರುತ್ತಿರುವ ಬೆಲೆ, ಕ್ಷೀಣಿಸುತ್ತಿರುವ ಸಂಬಳ ಮತ್ತು ಸವಲತ್ತುಗಳು 60 ಮತ್ತು 80ರ ದಶಕದಲ್ಲಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿದ್ದ ದಕ್ಷಿಣ ಅಮೆರಿಕಾದ್ಯಂತ ತೀವ್ರ ಹೋರಾಟಗಳಿಗೆ, ಬಂಡಾಯಗಳಿಗೆ ದಾರಿ ಮಾಡಿಕೊಟ್ಟಿತ್ತು. 1973ರ ಹೊತ್ತಿಗೆ ಕಚ್ಚಾ ತೈಲ ಬೆಲೆ ಬಿಕ್ಕಟ್ಟಿನಿಂದ ತೈಲ ಬೆಲೆ ನಾಲ್ಕು ಪಟ್ಟು ಹೆಚ್ಚಾದಾಗ ಜಾಗತಿಕ ಬಂಡವಾಳಿಗರು ಹೊಸ ದಾರಿಯನ್ನು ಹುಡುಕಿಕೊಂಡರು. ಹೊಸದಾಗಿ ಸೃಷ್ಟಿಯಾಗಿದ್ದ ಪೆಟ್ರೋ ಡಾಲರ್ ಹಣವನ್ನು ಹೂಡಲು ಗಲ್ಫ್ ರಾಷ್ಟ್ರಗಳು ಅಮೆರಿಕ ಬ್ಯಾಂಕುಗಳನ್ನು ಬಳಸಿಕೊಂಡಿದ್ದರು. ಈ ಹಣವನ್ನು ಜಾಗತಿಕ ಬಂಡವಾಳಶಾಹಿಗಳು ಶಿಕಾಗೋ ಸ್ಕೂಲ್ ಆಫ್ ಎಕನಾಮಿಕ್ಸ್‍ನ ಮುಕ್ತ ಮಾರುಕಟ್ಟೆ ಪ್ರತಿಪಾದಕ ಮಿಲ್ಟನ್ ಫ್ರೀಡ್‍ಮೆನ್ ಮೂಲಕ ಹೊಸದಾದ ನವಉದಾರೀಕರಣದ ಆರ್ಥಿಕತೆಯನ್ನು ಪರಿಚಯಿಸಿದರು. ಅದಕ್ಕೆ ಅವರು ಮಿಲಿಟರೀ ಸರ್ವಾಧಿಕಾರದ ನೆರವು ಪಡೆದುಕೊಂಡಿದ್ದರು.
ಮೊದಲು ಚಿಲಿಯಲ್ಲಿ ಪ್ರಜಾತಾಂತ್ರಿಕ ಮಾರ್ಗದಲ್ಲಿ ಚುನಾಯಿತರಾಗಿದ್ದ ಸ್ಯಾಲ್ವಡಾರ್ ಅಲೆಂಡೆಯನ್ನು ಸೆಪ್ಟೆಂಬರ್ 11, 1973ರಂದು ಯುದ್ದ ವಿಮಾನಗಳಿಂದ ಬಾಂಬ್ ಹಾಕಿ ಕೊಂದರು ಮತ್ತು ಆಗುಸ್ತೋ ಪಿಣೋಚೆ ಎಂಬ ಮಿಲಿಟರೀ ಸರ್ವಾಧಿಕಾರಿಯನ್ನು ಅಧ್ಯಕ್ಷನನ್ನಾಗಿಸಲಾಯಿತು. ಕಲ್ಯಾಣ ರಾಜ್ಯದ ಸವಲತ್ತುಗಳನ್ನು ತೆಗೆದು ಹಾಕಿ, ಸಂಬಳವನ್ನು ಅರ್ಧ ಮಾಡಿ ಕಾರ್ಮಿಕ ಹೋರಾಟಗಳನ್ನು ನಿರ್ದಾಕ್ಷಿಣ್ಯವಾಗಿ ಧ್ವಂಸ ಮಾಡಲಾಯಿತು. ಏರುತ್ತಿರುವ ನಿರುದ್ಯೋಗ ಮತ್ತು ಸತತ ಕಾರ್ಮಿಕ ಬಂಡಾಯಗಳಿಂದ ಅತಂತ್ರ ರಾಜಕೀಯ ಸ್ಥಿತಿಯಲ್ಲಿದ್ದ ಅರ್ಜೆಂಟೀನಾ ಕೂಡ ಅದನ್ನೇ 1976ರಲ್ಲಿ ಅನುಸರಿಸಿತು. ಅದಕ್ಕೆ ಅವರು ಕೊಟ್ಟ ಕಾರಣ ಸಮಾಜದಲ್ಲಿ ತಲೆದೋರುತ್ತಿರುವ ಗೆರಿಲ್ಲಾ ದಂಗೆಗಳ ವಿರುದ್ಧ ನಿರ್ಣಾಯಕ ಹೋರಾಟ ಅಗತ್ಯವೆಂದು. ತನ್ನ ಅರೆಸೈನಿಕ ಗುಂಪುಗಳ ಸಹಯೋಗದೊಂದಿಗೆ ಮಿಲಿಟೆಂಟ್ ಕಾರ್ಮಿಕರ ಮತ್ತು ಯೂನಿಯನ್ ಮುಖಂಡರ ಬಂಧನ, ಚಿತ್ರಹಿಂಸೆ ಮತ್ತು ಕೊಲೆಗಳನ್ನು ನಿರಂತರವಾಗಿ ನಡೆಸಿದರು. ಒಂದು ಅಂದಾಜಿನ ಪ್ರಕಾರ 50 ಸಾವಿರ ಎಡಪಂಥೀಯ ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು, ಕಾರ್ಮಿಕ ಒಕ್ಕೂಟದ ನಾಯಕರುಗಳು ಕಾಣೆಯಾಗತೊಡಗಿದರು. ನಂತರ ಹೊರಬಂದ ಗೌಪ್ಯ ದಾಖಲೆಗಳ ಪ್ರಕಾರ ಅಮೆರಿಕ ಈ “ಕೊಳಕು ಯುದ್ಧದಲ್ಲಿ” ನೇರ ಭಾಗಿಯಾಗಿತ್ತಲ್ಲದೆ ಪೊಲೀಸ್ ಹಾಗೂ ಮಿಲಿಟರೀ ತರಬೇತಿ ಸಹಿತ ಸೇನೆ ಉಪಕರಣಗಳನ್ನು ಧಾರಾಳವಾಗಿ ಅರ್ಜೆಂಟೀನದ ಮಿಲಿಟರೀ ಸರ್ವಾಧಿಕಾರಕ್ಕೆ ನೀಡಿತ್ತು. ಇವೆಲ್ಲದರ ನಡುವೆಯೂ ಅರ್ಜೆಂಟೀನದ ಸಾಮಾನ್ಯ ಪ್ರಜೆಗಳು ಮತ್ತು ಕಾರ್ಮಿಕ ವರ್ಗವು ಸರ್ವಾಧಿಕಾರದ ವಿರುದ್ಧ ನಿರಂತರ ಪ್ರತಿರೋಧವನ್ನು ಒಡ್ಡಿತು.
ಪ್ರಭುತ್ವದ ಭಯೋತ್ಪಾದನೆ ಮತ್ತು ಕಣ್ಮರೆಯಾಗುತ್ತಿದ್ದ ಯುವಕ/ಯುವತಿಯರ ಅಮ್ಮಂದಿರು ಏಪ್ರಿಲ್ 30, 1977ರಲ್ಲಿ ಇತಿಹಾಸಿಕ “ಪ್ಲಾಜಾ ಡೆ ಮಾಯೊವಿನ ಅಮ್ಮಂದಿರು” ಪ್ರತಿಭಟನೆ ಮಾಡಿದರು ಮತ್ತು ಅದು ಈಗಲೂ ಜೀವಂತವಾಗಿದೆ. ಅರ್ಜೆಂಟೀನಾದ ಸವಾಧಿಕಾರಿ ಆಡಳಿತವು 1979ರ ಕಚ್ಚಾ ತೈಲ ಬಿಕ್ಕಟ್ಟಿನ ನಂತರ 1981ರಲ್ಲಿ ವಿದೇಶಿ ಸಾಲದ ಸುಳಿಯಲ್ಲಿ ಸಿಲುಕಿತು. 1982ರಲ್ಲಿ ಫಾಕ್‍ಲ್ಯಾಂಡ್ ದ್ವೀಪ ಅಥವಾ ಮ್ಯಾಲ್ವೀನೇಸ್ ಎಂದು ಕರೆಯಲ್ಪಡುವ ಬ್ರಿಟಿಷ್ ದ್ವೀಪವನ್ನು ಆಕ್ರಮಿಸಲು ಹೋಗಿ ಸೋತುಹೋಯಿತು. ಅದು ಸಾಮಾನ್ಯ ನಾಗರಿಕರ ಸಂಘಟಿತ ಪ್ರತಿರೋಧದ ಕಾರಣದಿಂದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಹಿಂದಿರುಗಲು ನಾಂದಿಯಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...