Homeಸಿನಿಮಾಲವ್ ಪೀಳಿಗೆಯನ್ನು ಎಚ್ಚರಿಸುವ ಸಿನಿಮಾ

ಲವ್ ಪೀಳಿಗೆಯನ್ನು ಎಚ್ಚರಿಸುವ ಸಿನಿಮಾ

- Advertisement -
- Advertisement -

ಸೋಮಶೇಖರ್ ಚಲ್ಯ ||

ನಡುವೆ ಅಂತರವಿರಲಿ. ಎಲ್ಲಾ ವಾಹನಗಳ ಹಿಂದೆಯೂ ಈ ಸಾಲು ಇದ್ದೇ ಇರುತ್ತದೆ. ಇದನ್ನ ಸಿನಿಮಾದ ಆರಂಭದಲ್ಲಿಯೂ ಮೆನ್ಷನ್ ಮಾಡಿದ್ದಾರೆ. ಹಾಗೆಯೇ ಈ ಅಂತರ ಪ್ರೀತಿಯಲ್ಲಿಯೂ ಇರಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದ್ದೇ ಇರುತ್ತದೆ.
ಪ್ರೀತಿ ಎಂಬುದು ಸುಂದರವಾದ ಅನುಬಂಧ, ಎರಡು ಮನಸುಗಳ ಸುಮಧುರ ಸಮ್ಮಿಲನ. ಪ್ರೀತಿ ಕಣ್ಣಾಮಚ್ಚಾಲೆಯ ಆಟವಲ್ಲ. ಆದರೆ ಇಂದು ಕಾಮದ ಸೆಳೆತದ ಮುಸುಕಿನಲ್ಲಿ ಕಮರಿಹೋಗುತ್ತಿದೆ. ಮನಸ್ಸುಗಳನ್ನು ಭಾವನೆಗಳನ್ನು ಬೆಸೆಯುವ ಮಾನದಂಡವಾಗಿದ್ದ ಪ್ರೀತಿಯನ್ನು ದೈಹಿಕ ಆಕರ್ಷಣೆಯೊಳಗೆ ಎಳೆದು ನಿಲ್ಲಿಸುವುದರ ಅಪಾಯವನ್ನು ಬಿಚ್ಚಿಡುವ ಪ್ರಯತ್ನವನ್ನು ನಡುವೆ ಅಂತರವಿರಲಿ ಚಿತ್ರತಂಡ ಮಾಡಿದೆ.
ಮದುವೆ ಎಂಬುದು ಹೇಗೆ ಬದುಕಿನ ಟರ್ನಿಂಗ್ ಪಾಯಿಂಟ್ ಎಂದು ಕರೆಯುತ್ತೇವೋ ಅದು ಈಗ ಪ್ರೀತಿಯೆಡೆಗೆ ವಾಲಿದೆ. ಪ್ರೀತಿ ಗಟ್ಟಿಯಾಗಿ ಬೇರೂರಿದಾಗಲೇ ಬದುಕು ಮುಂದೆ ಸಾಗಲು ಸಾಧ್ಯ. ಪರಿಚಯದ ಮುಂದುವರಿದ ಭಾಗವಾಗಿ ಪ್ರೀತಿ ಬೆಳೆಯುತ್ತದೆ. ಪರಸ್ಪರ ಅಭಿರುಚಿ, ಆಲೋಚನೆ, ಅಭಿವ್ಯಕ್ತಿಗಳಲ್ಲಿ ಸಾಮತ್ಯ ಇದ್ದಾಗ ಪರಿಚಯ ಗಟ್ಟಿಯಾಗುತ್ತಾ ಸಾಗುತ್ತದೆ. ಈ ಹಾದಿಯಲ್ಲಿ ಅದು ಸ್ನೇಹವೋ, ಪ್ರೀತಿಯೋ ಎಂದು ಗುರುತಿಸಲ್ಪಡುತ್ತದೆ. ಗಟ್ಟಿಯಾದ ಸ್ನೇಹ ಪ್ರೀತಿಯಾಗಿ ಬದಲಾಗಲು ಸಾಧ್ಯವಿಲ್ಲ. ಅಂತೆಯೇ ಪ್ರೀತಿ ಸ್ನೇಹವಾಗಲೂ ಆಗುವುದಿಲ್ಲ. ಮನಸ್ಸಿನ ಭಾವನೆಗಳ ಸಮ್ಮಿಲನದಿಂದ ಹುಟ್ಟುವ ಪ್ರೀತಿಗೆ ಕಾಮದ ಆತುರತೆಯ ಹಂಗಿರುವುದಿಲ್ಲ. ಸ್ನೇಹದಲ್ಲೂ ಪ್ರೀತಿ ಇರುತ್ತದೆ, ಪ್ರೀತಿಯಲ್ಲೂ ಪ್ರೀತಿ ಇರುತ್ತದೆ. ಆದರೆ ಅವೆರೆಡರ ಮಧ್ಯೆ ಕೆಲವು ವ್ಯತ್ಯಾಸಗಳಿರುತ್ತವೆ. ಹೆಣ್ಣು ಗಂಡಿನ ನಡುವಿನ ಗಟ್ಟಿಯಾದ ಸ್ನೇಹವನ್ನು ಅರ್ಥೈಸಿಕೊಳ್ಳುವಲ್ಲಿ ಎಲ್ಲರೂ ಎಡವುತ್ತಾರೆ. ಸ್ನೇಹವನ್ನು ಪ್ರೀತಿಯೆಂದು ಭಾವಿಸಿ ಪ್ರೀತಿಯ ಅಲೆಯಲ್ಲಿ ಜಾರುತ್ತಾ ಸ್ನೇಹ-ಪ್ರೀತಿ ಎರಡೂ ಒಂದೇ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಒಡನಾಟದಲ್ಲಿ ಒಮ್ಮೆ ಮನಸ್ಸಿನಲ್ಲಿ ಮೂಡಿದ ಭಾವನೆ ತನ್ನಿಷ್ಟಕ್ಕೆ ತಕ್ಕಂತೆ ಬದಲಾಗಲಾರದು. ಒಡನಾಟದಿಂದ ಹುಟ್ಟುವ ಪ್ರೀತಿ ಇಂದು ‘ಲವ್ ಅಟ್ ಫಸ್ಟ್ ಸೈಟ್’ ಪ್ರೀತಿಯಾಗಿ ಬದಲಾಗಿದೆ. ಇಂತಹ ಪ್ರೀತಿಗೆ ನೆಲೆಯಿಲ್ಲ. ಅಕ್ಚುಯಲಿ ನೋಡಿದ ಕ್ಷಣದಲ್ಲಿ ಹುಟ್ಟುವುದು ಪ್ರೀತಿಯೇ ಅಲ್ಲ ಅದು ದೈಹಿಕ ಸೆಳೆತವಷ್ಟೇ. ಇಂತಹ ಸೆಳೆತದಿಂದ ಹುಟ್ಟುವ ಪ್ರೀತಿಯ ಒಳ-ಹೊರಗು ಈ ಚಿತ್ರದ ಕಥೆಯಾಗಿದೆ.
ನೋಡಿದ ತಕ್ಷಣ ಹುಟ್ಟುವ ಪ್ರೀತಿಯೇ ಆಗಿರಲಿ ಅಥವಾ ಒಡನಾಟದಲ್ಲಿ ಹುಟ್ಟಿದ ಪ್ರೀತಿಯೇ ಆಗಿರಲಿ ಆ ಪ್ರೀತಿಯಲ್ಲಿ ಕಣ್ಣಾ ಮುಚ್ಚಾಲೆಯ ಆಟ ಇರಬಾರದು. ಆದರೆ ಇಂದಿನ ಪ್ರೇಮಿಗಳ ಪ್ರೀತಿಯೆಂದರೆ ಅದು ಕಣ್ಣಾ ಮುಚ್ಚಾಲೆಯ ಆಟವಾಗಿ, ಪ್ರೀತಿ ತನ್ನ ಅರ್ಥವನ್ನೇ ಕಳೆದುಕೊಂಡಿದೆ. ಪ್ರೀತಿಯೆಂದರೆ ಆತಂಕ ಪಡುವ ಸನ್ನಿವೇಶ ಎದುರಾಗುತ್ತಿವೆ. ಪ್ರೀತಿಯಲ್ಲಿ ಜಾರುವ ಮುನ್ನ ಸ್ನೇಹಿತ ಗುಂಪಿನಲ್ಲಿರುತ್ತಿದ್ದ ಗೆಳೆಯ/ತಿ ಗುಂಪಿನಿಂದ ಮಾಯವಾಗುತ್ತಾರೆ. ಏಕಾಂತದ ಹೆಸರಲ್ಲಿ ಪ್ರೀತಿಯ ಸುತ್ತಾ ಗಿರಕಿ ಹೊಡೆಯುತ್ತಾ, ಬದುಕಿನ ಇನ್ನೆಲ್ಲವನ್ನೂ ಮರೆತು ಪ್ರೀತಿಯೇ ಬದುಕೆಂಬಂತೆ ಮುಳುಗಿ, ಸುಳ್ಳಿನ ಸರಮಾಲೆಯನ್ನೇ ತಮ್ಮ ಸುತ್ತಾ ಹೆಣೆದುಕೊಳ್ಳುತ್ತಾರೆ. ಅದಷ್ಟೇ ಅಲ್ಲ, ಎಂದಾದರೂ ಹೊರಬರಲೇ ಬೇಕಾದ ಪ್ರೀತಿಯೂ ಗೌಪ್ಯವಾಗಿರುತ್ತದೆ. ಪ್ರೀತಿ ಬಚ್ಚಿಟ್ಟುಕೊಂಡು ಆಡುವ ಆಟವಲ್ಲ. ಅದು ಬದುಕಿನ ಭಾಗ, ಎಂದಾದರೊಮ್ಮೆ ಹೊರ ಬರಲೇಬೇಕು. ಹೀಗಿರುವಾಗ ಪ್ರೀತಿಯನ್ನು ಮುಚ್ಚಿಡುವುದರಿಂದ ಪ್ರಯೋಜನವಿಲ್ಲ. ಇಂತಹ ಮುಚ್ಚಾಟದಿಂದ ಕೂಡಿದ ಪ್ರೀತಿ ಎಂದಿಗೂ ಟ್ರೂ ಲವ್ ಎನಿಸಿಕೊಳ್ಳಲಾರದು. ಹೆತ್ತವರನ್ನು ಫೇಸ್ ಮಾಡಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲಾಗದವರ ಮುಚ್ಚಿಟ್ಟ ಪ್ರೀತಿಯ ಅಂತ್ಯ ಬಹಳ ಕ್ರೂರವಾಗಿರುತ್ತದೆ. ಪ್ರೀತಿ ಚಿಗುರೊಡೆಯುವ ಸಮಯದಲ್ಲೇ ಅದು ಹೆತ್ತವರ ಮುಂದೆ ತೆರೆದಿರಬೇಕೇ ವಿನಹ ಸುಳ್ಳಿನ ಪರದೆಯಲ್ಲಿ ಮಾಸಬಾರದು.
ಆಕರ್ಷಣೆಯಿಂದ ಹುಟ್ಟುವ ಪ್ರೀತಿಯೂ ಕೆಲವೊಮ್ಮೆ ಆಲೋಚನೆಗಳ ಹೊಂದಾಣಿಕೆಯಿಂದ ಯಶಸ್ವಿಯಾಗುತ್ತವೆ. ಆದರೆ ಬಹುತೇಕ ಹೊಂದಾಣಿಕೆಯಿಲ್ಲದೆ ಅರ್ಧಕ್ಕೆ ಮುರಿದು ಬೀಳುತ್ತವೆ. ಇಂತಹ ಆಕರ್ಷಣೆಯ ಪ್ರೀತಿ ಆರಂಭದಲ್ಲೇ ರೊಮ್ಯಾನ್ಸ್ ಎಡೆಗೆ ತಿರುಗಿ ಅದೇ ಪ್ರೀತಿ ಎಂಬಂತೆ ಬಿಂಬಿತವಾಗುತ್ತದೆ. ಈ ಪ್ರೀತಿ ವiನಸ್ಸಿನ ಹೊಂದಾಣಿಕೆಯ ಮೊದಲ ಹಂತ ದಾಟುವ ಮೊದಲೆ ಪ್ರೇಮಿಗಳೆಂದುಕೊಂಡ ಜೋಡಿ ತಮ್ಮ ಎಲ್ಲೆಯನ್ನು ಮೀರಿ ದೈಹಿಕ ಹೊಂದಾಣಿಕೆಗೆ ಶರಣಾಗುತ್ತಾರೆ. ಇಷ್ಟೆಲ್ಲಾ ಅಂತರವನ್ನು ಮೀರಿದ ಪ್ರೀತಿಯನ್ನು ಉಳಿಸಿಕೊಳ್ಳಲೂ ಆಗದೆ, ಬಿಡಲೂ ಆಗದೆ ಒದ್ದಾಡುತ್ತಾ ಕೊನೆಗೆ ಕಮರಿ ಹೋಗುತ್ತದೆ. ಇದೆಲ್ಲದರೊಳಗೆ ಒಂದು ಜೀವ ಸೃಷ್ಟಿಯಾಗಿ ಆ ಜೀವದ ಭವಿಷ್ಯ ಆರಂಭದಲ್ಲೇ ಬದುಕಿದ್ದೂ ಹೇಗೆ ಅಂತ್ಯವಾಗುತ್ತದೆ ಎಂಬುದನ್ನು ನಿರ್ದೇಶಕ ರವೀಣ್ ಕುಮಾರ್ ಚಿತ್ರಿಸಿದ್ದಾರೆ.
ತನ್ನಂತೆಯೇ ತನ್ನ ಸ್ನೇಹಿತೆ ಆಕರ್ಷಣೆಯ ಪ್ರೀತಿಗೆ ತುತ್ತಾಗಬಾರದೆಂದು ಕಾಳಜಿ ತೋರುವ ಪ್ರೀತಿಯಿಂದ ಮೋಸವಾದ ಗೆಳತಿ. ಆ ಗೆಳತಿಗೆ ತಿಳಿಯದಂತೆ ಕದ್ದುಮುಚ್ಚಿ ಪ್ರೀತಿಸುವ ನಿತ್ಯ, ಇವರ ಪ್ರೀತಿಯ ವಿಷಯ ತಿಳಿದ ಗೆಳತಿ ನಿತ್ಯಳ ಅಮ್ಮ-ಅಪ್ಪರಿಗೆ ವಿಷಯ ತಿಳಿಸಿದಾಗ. ತನ್ನ ಸ್ನೇಹಿತೆಯ ನಡತೆಯೇ ಸರಿಯಿಲ್ಲ ಎಂದು ವಾದಿಸಿ ನುಣುಚಿಕೊಂಡ ನಿತ್ಯ. ತಂದೆತಾಯಿ ಅವಳ ಮೇಲಿಟ್ಟಿದ್ದ ಅಪಾರ ನಂಬಿಕೆಯನ್ನ ಅಳಿಸಿ ಹಾಕುವಂತೆ ಕಣ್ಣಾಮುಚ್ಚಾಲೆಯ ಪ್ರೀತಿ. ತಪ್ಪು ಮಾಡುವ ವಯಸ್ಸಿನಲ್ಲಿ ತಪ್ಪು ಮಾಡಿದರೆ ಅದು ತಪ್ಪೇ ಅಲ್ಲವೆಂದು ತಮ್ಮ ನಡುವಿನ ಅಂತರವನ್ನು ಮೀರಿ ಮುಂದುವರೆದು ದೈಹಿಕ ತೃಷೆಗೆ ಒಳಗಾಗಿ ತನ್ನ ಹೊಟ್ಟೆಯಲ್ಲಿ ಮತ್ತೊಂದು ಜೀವ ಚಿಗುರೊಡೆದ ಮೇಲೆ ಮತ್ತದೆ ಗೆಳತಿಯ ಅಂಗಲಾಚುತ್ತಾಳೆ. ತನ್ನ ಮಗಳು ಮದುವೆಗೂ ಮುಂಚೆಯೇ ತಾಯಿಯಾಗಿದ್ದಾಳೆಂದು ತಿಳಿದರೂ ನೋವನ್ನು ಸಹಿಸಿಕೊಂಡು ಶಾಕ್‍ನಿಂದ ಹೊರಬರಲಾರದೆ ಮಗಳಿಗೆ ಮದುವೆ ಮಾಡಲು ಮಗಳ ಲವರ್ ಸಂಜಯ್ ಮನೆಯಲ್ಲಿ ಅಂಗಲಾಚುವ ಪೋಷಕರು. ಆದರೆ ನಿತ್ಯ – ಸಂಜಯ್ ನಡುವಿನ ಈಗೋಗಳಿಂದ ಕೊನೆಗೂ ಅವರಿಬ್ಬರ ಮದುವೆ ಆಗುವುದೇ ಇಲ್ಲ. ನಿತ್ಯ ಮಗುವಿಗೆ ಜನ್ಮ ನೀಡುತ್ತಾಳೆ. ಹುಟ್ಟಿದ ಮಗುವನ್ನು ಅನಾಥ ಆಶ್ರಮದಲ್ಲಿ ಬಿಟ್ಟು ಮತ್ತೊಂದು ಮದುವೆಯಾಗುತ್ತಾರೆ. ಇಂತಹ ದೈಹಿಕ ಆಕರ್ಷಣೆಯ ಪ್ರೀತಿಗೆ ಬಲಿಯಾಗುವುದು ಏನು ಅರಿಯದ ಮಗುವೆಂದು ಸಿನಿಮಾದಲ್ಲಿ ಕಥೆ ಎಣೆದಿದ್ದರೂ. ಇಂತಹ ಲವ್ ಸ್ಟೋರಿಗಳಿಗೆ ಬಲಿಯಾಗುವುದು ಹೆಣ್ಣು ಮಕ್ಕಳೇ. ಗಂಡು ತಪ್ಪು ಮಾಡುತ್ತಾನೆ, ಅವನೊಂದಿಗೆ ಮಲಗುವಾಗ ನಿಮ್ಮ ಮಗಳ ಬುದ್ಧಿ ಎಲ್ಲಿ ಹೋಗಿತ್ತು ಎಂಬ ಮಾತು ಈ ಸಮಾಜ ಎಲ್ಲಾ ತಪ್ಪುಗಳನ್ನು ಹೆಣ್ಣಿನ ಮೇಲೆ ಏರುವುದನ್ನು ಬಿಂಬಿಸುತ್ತದೆ. ಗಂಡು ರಸಿಕನಾದರೆ, ಹೆಣ್ಣು ನಡತೆಗೆಟ್ಟವಳಾಗುತ್ತಾಳೆ.
ತಮ್ಮ ಮಕ್ಕಳು ತಮ್ಮ ನಡುವಿನ ಅಂತರವನ್ನು ಮೀರಿ ಮುಂದುವರೆದಿದ್ದಾರೆಂದು ತಿಳಿದರೂ ಜಾತಿ ಪ್ರತಿಷ್ಠೆಗಾಗಿ ಅವರಿಬ್ಬರನ್ನು ದೂರ ಮಾಡುವ ಸಂಚು ಹಾಕುವ ಸಂಜಯ್ ಪೋಷಕರು, ಇಂದಿನ ಮರ್ಯಾದಾ ಹತ್ಯೆಗಳನ್ನು ಪ್ರತಿನಿಧಿಸುತ್ತಾರೆ. ಜಾತಿ-ವರ್ಗಗಳ ತಾರತಮ್ಯದ ಗಡಿಗಳನ್ನು ಮೀರಿ ಪ್ರೀತಿ ಬೆಳೆಯಬೇಕು. ಆದರೆ ಆ ಪ್ರೀತಿ ತನ್ನನ್ನು ಉಳಿಸಿಕೊಳ್ಳುವುದರೊಳಗೆ ಅದು ಮತ್ತೊಂದು ತಪ್ಪಿಗೆ ಅವಕಾಶ ನೀಡಬಾರದು. ಪ್ರೇಮಿಗಳು ಬಾಳ ಸಂಗಾತಿಗಳಾಗುವವರೆಗೆ ಅಂತಹ ತಪ್ಪುಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರೀತಿ ಬದುಕಿನ ಒಂದು ಭಾಗವಾಗಿರಬೇಕೆ ಹೊರತು ಪ್ರೀತಿಯೇ ಬದುಕಾಗಬಾರದು. ಸ್ನೇಹವನ್ನೇ ಮರೆತು ಪ್ರೀತಿಯಲ್ಲಿ ಬಿದ್ದು ಅದರೊಳಗೆ ಈಜುತ್ತಾ ಬಾವಿಯೊಳಗಿನ ಕಪ್ಪೆಯಾಗಬಾರದು. ಪ್ರೀತಿಯ ಜೊತೆಗೆ ಸ್ನೇಹವೂ ಇರಬೇಕು. ಪ್ರೀತಿಯ ಬಗೆಗೆ ಹಾಗೂ ಅದರಾಚೆಗೂ ಸ್ನೇಹಿತರು, ಪೋಷಕರ ಸಲಹೆಗಳನ್ನು ಪ್ರೀತಿಯ ಗುಂಗಿನಿಂದ ನೆಗ್ಲೆಟ್ ಮಾಡಬಾರದು ಹಾಗಂತ ಎಲ್ಲವನ್ನೂ ಕೇಳಲೇಬೇಕೆಂದಲ್ಲ ಅವುಗಳ ಬಗೆಗೆ ಯೋಚಿಸಿ ತೀರ್ಮಾನ ಮಾಡುವಂತಾದರೂ ಇರಬೇಕು. ಪ್ರೀತಿ ಮುಚ್ಚಿಡುವ ವಿಷಯವಲ್ಲ, ಪ್ರೀತಿಯಲ್ಲಿ ಯಾವುದು ಇರಬಾರದು, ಯಾವುದು ಇರಬೇಕು ಎಂಬುದನ್ನು ಚಿತ್ರ ಪರದೆಯ ಮೇಲೆ ತೋರಿಸಿದೆ.
ಇಂದಿನ ಲವ್ ಸ್ಟೋರಿಗಳಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಮನೆಯಿಂದ ಓಡಿಹೋಗುವ, ಕೈ ಕತ್ತರಿಸಿಕೊಳ್ಳುವ, ಪ್ರೀತಿಯಲ್ಲಿ ಏನೇ ಮಾಡಿದರೂ ಸರಿ ಎಂದು ತೋರಿಸುವ ಸಿನಿಮಾಗಳ ಮಧ್ಯೆ ಪ್ರೀತಿಯಲ್ಲೂ ಆಗುವ ತಪ್ಪುಗಳು, ಪ್ರೀತಿಸುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳನ್ನು ನಡುವೆ ಅಂತರವಿರಲಿ ಚಿತ್ರತಂಡ ಯುವಜನರ ಮನಸ್ಸಿನಲ್ಲಿ ಹೊಸ ಆಲೋಚನೆಗಳು, ಎಚ್ಚರಿಕೆಗಳನ್ನು ಹುಟ್ಟುಹಾಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...