Homeಅಂಕಣಗಳುಪೆರೋನಿಸಂ & ಮಿಲಿಟರಿ ಸರ್ವಾಧಿಕಾರ ಆಳುವ ವರ್ಗ ಮತ್ತು ಮಿಲಿಟರಿ

ಪೆರೋನಿಸಂ & ಮಿಲಿಟರಿ ಸರ್ವಾಧಿಕಾರ ಆಳುವ ವರ್ಗ ಮತ್ತು ಮಿಲಿಟರಿ

- Advertisement -
- Advertisement -

ಭರತ್ ಹೆಬ್ಬಾಳ್ |

1860ರಿಂದ 1910ರವರೆಗೂ ಉತ್ತರದ ದಿಕ್ಕಿನಲ್ಲಿರುವ ಪಂಪಾಸ್‍ನಲ್ಲಿ ಸ್ಥಳೀಯರ ಮಾರಣಹೋಮ ಮತ್ತು ಫಲವತ್ತಾದ ಭೂಮಿಯಲ್ಲಿ ಕೃಷಿ ವಿಸ್ತರಣೆಗಳಿಂದ ಅರ್ಜೆಂಟಿನಾದ ಆಧುನಿಕ ಆಳುವ ವರ್ಗಗಳು ಸೃಷ್ಟಿಯಾದವು. ಇದು ಯಾವ ರೀತಿ ಕ್ರೂರವಾಗಿತ್ತೆಂದರೆ ಪೆರುಗ್ವೆ ದೇಶದ 70% ಜನಸಂಖ್ಯೆಯನ್ನೇ ಅಳಿಸಿ ಹಾಕಿತ್ತು ಮತ್ತು ಇಂದಿನ ಅರ್ಜೆಂಟೀನದ ಗಡಿಗಳನ್ನು ಸ್ಥಾಪಿಸಿತ್ತು. 1970ರಿಂದ 1920ರವರೆಗೆ ಕೈಗಾರೀಕರಣಗೊಳ್ಳುತ್ತಿದ್ದ ಅಮೇರಿಕಕ್ಕೆ ಯುರೋಪಿನಿಂದ ಹೇಗೆ ಲಕ್ಷಾಂತರ ಜನ ವಲಸೆ ಬಂದರೋ ಹಾಗೆ ಅರ್ಜೆಂಟೀನಗೆ ಕೂಡ ಬಂದರು. 1870ರಲ್ಲಿ 18 ಲಕ್ಷವಿದ್ದ ಜನಸಂಖ್ಯೆ 45 ವರ್ಷಗಳಲ್ಲಿ ಯೂರೋಪಿನ ವಲಸೆಯಿಂದ 1914ರಲ್ಲಿ 78 ಲಕ್ಷಕ್ಕೆ ಏರಿತ್ತು. 1880ರಲ್ಲಿ 2500 ಕಿ.ಮೀ, ಇದ್ದ ರೈಲ್ವೆ ಲೈನ್ 1910ರಲ್ಲಿ 34000 ಕಿ.ಮೀ. ಆಗುವಷ್ಟು ರೈಲ್ವೆ ಮಾರ್ಗಗಳ ವಿಸ್ತಾರವಾಗಿತ್ತು. ವ್ಯವಸಾಯಕ್ಕೆ ಪೂರಕವಾದ ಸಣ್ಣ ಪುಟ್ಟ ಕಾರ್ಖಾನೆಗಳು ಮತ್ತು ಮಾಂಸ ಸಂಸ್ಕರಣಾ ಘಟಕಗಳು ಸ್ಥಾಪನೆಯಾದವು. ಬ್ರಿಟನ್ ಈ ಆರ್ಥಿಕ ಪ್ರಗತಿಯಲ್ಲಿ ಅತ್ಯಂತ ಹೆಚ್ಚು ಬಂಡವಾಳ ಹೂಡಿತ್ತು. ಯೂರೋಪಿನಿಂದ ಬಂದ ವಲಸಿಗರೇ ಹೆಚ್ಚಿದ್ದರು ಮತ್ತು ಆ ಸಮಯದ ಯೂರೋಪಿನಲ್ಲಿ ಭುಗಿಲೆದ್ದಿದ್ದ ದುರಭಿಮಾನಿ ರಾಷ್ಟ್ರೀಯ ರಾಜಕೀಯವು ಅದಕ್ಕೆ ತಕ್ಕುನಾದ ಸಂಸ್ಕೃತಿ ಮತ್ತು ಆರ್ಥಿಕತೆಯನ್ನು ರೂಪಿಸಿಕೊಂಡಿತ್ತು. ವಲಸೆ ಬಂದವರಿಂದಲೇ ರೂಪುಗೊಂಡಿದ್ದ ಅರ್ಜೆಂಟೀನದ ಭೂಮಾಲೀಕ ಆಳುವ ವರ್ಗದ ಸ್ಥಳೀಯ (ಅರ್ಜೆಂಟೀನ) ರಾಷ್ಟ್ರವಾದವು ಇಲ್ಲಿನ ಸಮಾಜದಲ್ಲಿ ಬಲವಾಗಿ ಬೇರೂರಿತ್ತು. ಮಿಲಿಟರೀ ಅಧಿಕಾರದ ಇತಿಹಾಸವಿದ್ದ ಅರ್ಜೆಂಟಿನಾಗೆ, ಒಂದು ಸ್ಥಾಪಿತ ಹಿತಾಸಕ್ತಿಗಳ ರಾಷ್ಟ್ರವಾದಿ ಆಳುವ ವರ್ಗ ಸೃಷ್ಟಿಯಾಗಿತ್ತು. 1929ರ ವಾಲ್ ಸ್ಟ್ರೀಟ್ ಕುಸಿತದ ನಂತರ ಮಾರುಕಟ್ಟೆ ಆರ್ಥಿಕತೆ ಒಂದು ದೊಡ್ಡ ಬಿಕ್ಕಟ್ಟನ್ನು ಎದುರಿಸಿತು. ಆಗ ವ್ಯವಸಾಯ ಕೇಂದ್ರಿತ ಆಳುವ ವರ್ಗ ಮಿಲಿಟರಿ ಮೂಲಕ ಅಸ್ತಿತ್ವದಲ್ಲಿದ್ದ ಸರ್ಕಾರವನ್ನು ಕಿತ್ತೊಗೆಯಿತು. ಮತ್ತು ದುಡಿಯುವ ವರ್ಗವು 1919ರ ದಂಗೆಯ ನಂತರ ಪಡೆದಿದ್ದ ಸವಲತ್ತುಗಳನ್ನು ಕಿತ್ತು ಹಾಕಿ ದಮನಕಾರಿ ಸರ್ವಾಧಿಕಾರವನ್ನು ಸ್ಥಾಪಿಸಿತ್ತು. ಇಟಲಿಯ ಮುಸೊಲೊನಿ ಮತ್ತು ಜರ್ಮನಿಯ ಹಿಟ್ಲರ್‍ನ ರಾಷ್ಟ್ರೀಯ ದುರಭಿಮಾನಿ ನಿಲುವೇ ಈ ಮಿಲಿಟರೀ ಸರ್ಕಾರ ನಿಲುವಾಗಿತ್ತು.
ಪೆರೋನಿಸಂ
ಮಿಲಿಟರೀ ಸರ್ಕಾರಗಳಿಂದಲೇ ನಡೆಯುತ್ತಿದ್ದ ಅರ್ಜೆಂಟೀನಾದಲ್ಲಿ ಆಧುನಿಕ ರಾಜಕೀಯ ಇತಿಹಾಸ ಶುರುವಾಗುವುದೇ ವಾನ್ ಡೊಮಿಂಗೊ ಪೆರೋನ್ ಎಂಬ ಮಾಜಿ ಮಿಲಿಟರೀ ಜನರಲ್‍ನಿಂದ. ಆತ 1930ರಿಂದ 1940ರವರೆಗೂ ಇಟಲಿಯಲ್ಲಿ ಮಿಲಿಟರೀ ಕಾರ್ಯತಂತ್ರಗಳ ಜೊತೆಗೆ ಇಟ್ಯಾಲಿಯನ್ ಫ್ಯಾಸಿಸಮ್, ಜರ್ಮನೀ ನಾಝೀ ಫ್ಯಾಸಿಸಮ್ ಕಲಿಯುತ್ತಾರೆ. 1943ರಲ್ಲಿ ಜನರಲ್ ಆರ್ಟುರೊ ರಾವನ್ ಜೊತೆಗೆ ಅಧ್ಯಕ್ಷ ರಾಮನ್ ಕ್ಯಾಸ್ಟಿಲ್ಲೊನನ್ನು ಅಧಿಕಾರದಿಂದ ಇಳಿಸಲು ಕ್ಷಿಪ್ರಕ್ರಾಂತಿ ನಡೆಸಿ ಗೆಲ್ಲುತ್ತಾರೆ. ಅವರಿಗೆ ಕಾರ್ಮಿಕ ಕಾರ್ಯದರ್ಶಿ ಸ್ಥಾನ ನೀಡಲಾಗುತ್ತದೆ, ನಂತರ ಅವರು ಕಾರ್ಮಿಕ ಇಲಾಖೆಯ ಮುಖ್ಯಸ್ಥರಾದರು ಮತ್ತು ಅಂತಿಮವಾಗಿ ಅವರು ಉಪಾಧ್ಯಕ್ಷರಾದರು. ಕಾರ್ಮಿಕರಿಗೆ ಸಂಬಳ, ಸವಲತ್ತುಗಳು, ಮತ್ತು ವಿರಾಮ ಸಮಯವನ್ನು ಹೆಚ್ಚಿಸಿದರು. ಅದೇ ಸಮಯದಲ್ಲಿ ಪರಿಚಯವಾದ ಏವ ಡ್ವಾರ್ಟೇ ಎಂಬ ರೇಡಿಯೋ ನಿರೂಪಕಿ ಪೆರೋನ್ ಯಶಸ್ಸಿನ ಹಿಂದಿನ ಶಕ್ತಿ ಎಂದು ಹೇಳಲಾಗುತ್ತದೆ. ತೀರಾ ಬಡತನದ ಹಿನ್ನೆಲೆಯಿಂದ ಬಂದಿದ್ದ ಏವ, ಪೆರೋನ್ ಮತ್ತು ಅರ್ಜೆಂಟೀನದ ಇತಿಹಾಸವನ್ನೇ ಬದಲಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. 1945ರಲ್ಲಿ ಇವರ ಜನಪ್ರಿಯತೆ ಎಷ್ಟಿತ್ತೆಂದರೆ ಇವರನ್ನು ಮಿಲಿಟರೀ ಆಡಳಿತವು ಸರ್ಕಾರದಿಂದ ಕಿತ್ತೊಗೆದಾಗ ನಗರದ ದುಡಿಯುವ ವರ್ಗ ಇವರ ಪರವಾಗಿ ಬೀದಿಗಿಳಿದು ದೊಡ್ಡ ಪ್ರತಿಭಟನೆ ಮಾಡಿತ್ತು ಮತ್ತು 1946ರಲ್ಲಿ ನಡೆದ ಚುನಾವಣೆಯಲ್ಲಿ ಪೇರೋನ್ ಅಧಿಕಾರ ಹಿಡಿದಾಗ ಆ ಯಶಸ್ಸಿನ ಹಿಂದಿನ ರೂವಾರಿಯಾಗಿದ್ದರು.
ಫಾಸಿವಾದದ ಹಿನ್ನೆಲೆ ಇದ್ದರೂ ಪೆರೋನ್‍ನ ನೀತಿಗಳು ಅರ್ಜೆಂಟೀನಾದ ದುಡಿಯುವ ಮತ್ತು ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಉಪಕಾರಿಯಾಗಿದ್ದವು. ಇದನ್ನು ಯೂರೋಪಿನ ಸೋಶಿಯಲ್ -ಡೆಮೊಕ್ರ್ಯಾಟ್ಸ್ ರಾಜಕೀಯ ನೀತಿಗಳಿಗೆ ಹೋಲಿಸಲಾಗುತ್ತದೆ. ಮೊದಲ ಬಾರಿಗೆ ದುಡಿಯುವ ಜನರ ಮಕ್ಕಳು ಕಾಲೇಜು ವಿಶ್ವವಿದ್ಯಾನಿಲಯಗಳ ಮೆಟ್ಟಿಲು ಏರುವಂತಾಯಿತು. ಶಿಕ್ಷಣ ಎಲ್ಲರಿಗೂ ಉಚಿತವಾಗಿ ದೊರೆಯುವಂತಾಯಿತು. ಬಡವರ ಪರವಾಗಿ ಏವ ಪೇರೋನ್ ರೂಪಿಸಿದ ನೀತಿಗಳನ್ನು ಅರ್ಜೆಂಟಿನಿಯನ್ನರು ಇನ್ನೂ ಸ್ಮರಿಸುತ್ತಾರೆ. ಪೇರೋನಿಸ್ಮ್‍ನ ಮುಖ್ಯ ಧ್ಯೇಯ ಕಮ್ಯೂನಿಸಮ್ ಮತ್ತು ಕ್ಯಾಪಿಟಲಿಸಮ್ ವಿರೋಧಿಸಿ ನ್ಯಾಯ ಮತ್ತು ಕಲ್ಯಾಣದ ಸವಲತ್ತುಗಳನ್ನು ಅರ್ಜೆಂಟೀನಾ ಪ್ರಭುತ್ವದ ಮೂಲಕ ಪಡೆಯಬಹುದಾದ ಮೂರನೇ ಪರ್ಯಾಯವನ್ನು ಕಂಡುಕೊಳ್ಳುವುದು. ಇವರ ಘೋಷಣೆಯೇ “ವರ್ಗ ಸಂಘರ್ಷವನ್ನು ಬಿಟ್ಟು, ದುಡಿಯುವ ಜನ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ” ಹೋಗಿ ಪ್ರಭುತ್ವದ ಸವಲತ್ತುಗಳನ್ನು ಪಡೆಯುವುದು. ಹಲವು ಆರ್ಥಿಕ ರಕ್ಷಣಾತ್ಮಕ ನೀತಿಗಳನ್ನು ಅನುಸರಿಸಿದ್ದ ಪೆರೋನ್ ಮುಂದೆ ಹೋಗುತ್ತಾ 1948ರಲ್ಲಿ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಕಸರತ್ತು ಮಾಡಿದರು. ವಿದೇಶಿ ಬಂಡವಾಳವನ್ನು ಆಕರ್ಷಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ಶಿಸ್ತುಬದ್ದ ದುಡಿಯುವ ವರ್ಗ ಬೇಕು. ಆದರೆ ಪೇರೋನ್ ಅವರಿಗೆ ಸವಲತ್ತುಗಳನ್ನು ಕೊಟ್ಟು ಕಾರ್ಮಿಕ ವರ್ಗವನ್ನು ಹಾಳು ಮಾಡುತ್ತಿದ್ದಾನೆ ಎಂದು ಆಳುವ ವರ್ಗ ಪೇರೋನ್ ವಿರುದ್ದ ತಿರುಗಿ ಬಿದ್ದರು. 1955ರಲ್ಲಿ ಮಿಲಿಟರೀ ನಡೆಸಿದ ಕ್ಷಿಪ್ರ ಕ್ರಾಂತಿಯಿಂದ ಪೇರೊನ್‍ಅನ್ನು ಸ್ಪೇನ್ ದೇಶಕ್ಕೆ ಉಚ್ಚಾಟಿಸಲಾಗಿತ್ತು. ನಂತರ ಬಂದ ಮಿಲಿಟರೀ ಸರ್ವಾಧಿಕಾರ ಒಂದು ರೀತಿಯಲ್ಲಿ ಸಂಘಟಿತರಾಗಿದ್ದ ಕಾರ್ಮಿಕ ವರ್ಗವನ್ನು ಒಡೆಯಲು ಪ್ರಯತ್ನಿಸಿತು. 60ರಿಂದ 80ರ ದಶದವರೆಗೂ ಅತಿ ಹೆಚ್ಚು ಕಾರ್ಮಿಕ ವರ್ಗವನ್ನು ಹೊಂದಿದ್ದ ದಕ್ಷಿಣ ಅಮೆರಿಕಾದ ಈ ದೇಶವು ಅವರಿಗೆ ಪ್ರತಿರೋಧಗಳನ್ನೂ ಒಡ್ಡುತ್ತಲಿತ್ತು.
ಮಿಲಿಟರಿ ಸರ್ವಾಧಿಕಾರ
1959ರಲ್ಲಿ ಫಿಡೆಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಚೆ ಗುವೇರ ಮತ್ತು ಸಂಗಡಿಗರು ಮಾಡಿದ ಕ್ಯೂಬ ಕ್ರಾಂತಿ ನಂತರದ ಬೆಳವಣಿಗೆಯಲ್ಲಿ ದಕ್ಷಿಣ ಅಮೆರಿಕಾದಲ್ಲಿ ಹಬ್ಬುತ್ತಿದ್ದ ಕಮ್ಯೂನಿಸಮ್ ತಡೆಯಲು ಮತ್ತು ಉಳ್ಳವರ ಪರವಾದ ನವ ಉದಾರೀಕರಣದ ಹೊಸ ರೀತಿಯ ಆರ್ಥಿಕ ವ್ಯವಸ್ಥೆಯನ್ನು ದೇಶಗಳ ಮೇಲೆ ಹೇರಲು ಜಾಗತಿಕ ಬಂಡವಾಳಶಾಹಿಗಳು ಬಳಸಿಕೊಂಡದ್ದೆ ಚಿಲಿ ಮತ್ತು ಅರ್ಜೆಂಟಿನವನ್ನು. 1955ರಿಂದ 1969ವರೆಗೂ ಈ ಸಂಘರ್ಷವೇ ಒಂದು ಸಾಮಾನ್ಯ ಸ್ಥಿತಿಯಾಗಿತ್ತು. ಬೆಳೆಯುತ್ತಿದ್ದ ಸಾಮಾಜಿಕ ಉದ್ವೇಗದ ನಡುವೆ 1966ರಲ್ಲಿ ವಿದ್ಯಾರ್ಥಿಗಳ ದೊಡ್ಡ ಹೋರಾಟ ಅರ್ಜೆಂಟಿನಾದ್ಯಂತ ಭುಗಿಲೆದ್ದಿತ್ತು. ಆರ್ಥಿಕ ಬಿಕ್ಕಟ್ಟು, ಏರುತ್ತಿರುವ ಬೆಲೆ, ಕ್ಷೀಣಿಸುತ್ತಿರುವ ಸಂಬಳ ಮತ್ತು ಸವಲತ್ತುಗಳು 60 ಮತ್ತು 80ರ ದಶಕದಲ್ಲಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿದ್ದ ದಕ್ಷಿಣ ಅಮೆರಿಕಾದ್ಯಂತ ತೀವ್ರ ಹೋರಾಟಗಳಿಗೆ, ಬಂಡಾಯಗಳಿಗೆ ದಾರಿ ಮಾಡಿಕೊಟ್ಟಿತ್ತು. 1973ರ ಹೊತ್ತಿಗೆ ಕಚ್ಚಾ ತೈಲ ಬೆಲೆ ಬಿಕ್ಕಟ್ಟಿನಿಂದ ತೈಲ ಬೆಲೆ ನಾಲ್ಕು ಪಟ್ಟು ಹೆಚ್ಚಾದಾಗ ಜಾಗತಿಕ ಬಂಡವಾಳಿಗರು ಹೊಸ ದಾರಿಯನ್ನು ಹುಡುಕಿಕೊಂಡರು. ಹೊಸದಾಗಿ ಸೃಷ್ಟಿಯಾಗಿದ್ದ ಪೆಟ್ರೋ ಡಾಲರ್ ಹಣವನ್ನು ಹೂಡಲು ಗಲ್ಫ್ ರಾಷ್ಟ್ರಗಳು ಅಮೆರಿಕ ಬ್ಯಾಂಕುಗಳನ್ನು ಬಳಸಿಕೊಂಡಿದ್ದರು. ಈ ಹಣವನ್ನು ಜಾಗತಿಕ ಬಂಡವಾಳಶಾಹಿಗಳು ಶಿಕಾಗೋ ಸ್ಕೂಲ್ ಆಫ್ ಎಕನಾಮಿಕ್ಸ್‍ನ ಮುಕ್ತ ಮಾರುಕಟ್ಟೆ ಪ್ರತಿಪಾದಕ ಮಿಲ್ಟನ್ ಫ್ರೀಡ್‍ಮೆನ್ ಮೂಲಕ ಹೊಸದಾದ ನವಉದಾರೀಕರಣದ ಆರ್ಥಿಕತೆಯನ್ನು ಪರಿಚಯಿಸಿದರು. ಅದಕ್ಕೆ ಅವರು ಮಿಲಿಟರೀ ಸರ್ವಾಧಿಕಾರದ ನೆರವು ಪಡೆದುಕೊಂಡಿದ್ದರು.
ಮೊದಲು ಚಿಲಿಯಲ್ಲಿ ಪ್ರಜಾತಾಂತ್ರಿಕ ಮಾರ್ಗದಲ್ಲಿ ಚುನಾಯಿತರಾಗಿದ್ದ ಸ್ಯಾಲ್ವಡಾರ್ ಅಲೆಂಡೆಯನ್ನು ಸೆಪ್ಟೆಂಬರ್ 11, 1973ರಂದು ಯುದ್ದ ವಿಮಾನಗಳಿಂದ ಬಾಂಬ್ ಹಾಕಿ ಕೊಂದರು ಮತ್ತು ಆಗುಸ್ತೋ ಪಿಣೋಚೆ ಎಂಬ ಮಿಲಿಟರೀ ಸರ್ವಾಧಿಕಾರಿಯನ್ನು ಅಧ್ಯಕ್ಷನನ್ನಾಗಿಸಲಾಯಿತು. ಕಲ್ಯಾಣ ರಾಜ್ಯದ ಸವಲತ್ತುಗಳನ್ನು ತೆಗೆದು ಹಾಕಿ, ಸಂಬಳವನ್ನು ಅರ್ಧ ಮಾಡಿ ಕಾರ್ಮಿಕ ಹೋರಾಟಗಳನ್ನು ನಿರ್ದಾಕ್ಷಿಣ್ಯವಾಗಿ ಧ್ವಂಸ ಮಾಡಲಾಯಿತು. ಏರುತ್ತಿರುವ ನಿರುದ್ಯೋಗ ಮತ್ತು ಸತತ ಕಾರ್ಮಿಕ ಬಂಡಾಯಗಳಿಂದ ಅತಂತ್ರ ರಾಜಕೀಯ ಸ್ಥಿತಿಯಲ್ಲಿದ್ದ ಅರ್ಜೆಂಟೀನಾ ಕೂಡ ಅದನ್ನೇ 1976ರಲ್ಲಿ ಅನುಸರಿಸಿತು. ಅದಕ್ಕೆ ಅವರು ಕೊಟ್ಟ ಕಾರಣ ಸಮಾಜದಲ್ಲಿ ತಲೆದೋರುತ್ತಿರುವ ಗೆರಿಲ್ಲಾ ದಂಗೆಗಳ ವಿರುದ್ಧ ನಿರ್ಣಾಯಕ ಹೋರಾಟ ಅಗತ್ಯವೆಂದು. ತನ್ನ ಅರೆಸೈನಿಕ ಗುಂಪುಗಳ ಸಹಯೋಗದೊಂದಿಗೆ ಮಿಲಿಟೆಂಟ್ ಕಾರ್ಮಿಕರ ಮತ್ತು ಯೂನಿಯನ್ ಮುಖಂಡರ ಬಂಧನ, ಚಿತ್ರಹಿಂಸೆ ಮತ್ತು ಕೊಲೆಗಳನ್ನು ನಿರಂತರವಾಗಿ ನಡೆಸಿದರು. ಒಂದು ಅಂದಾಜಿನ ಪ್ರಕಾರ 50 ಸಾವಿರ ಎಡಪಂಥೀಯ ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು, ಕಾರ್ಮಿಕ ಒಕ್ಕೂಟದ ನಾಯಕರುಗಳು ಕಾಣೆಯಾಗತೊಡಗಿದರು. ನಂತರ ಹೊರಬಂದ ಗೌಪ್ಯ ದಾಖಲೆಗಳ ಪ್ರಕಾರ ಅಮೆರಿಕ ಈ “ಕೊಳಕು ಯುದ್ಧದಲ್ಲಿ” ನೇರ ಭಾಗಿಯಾಗಿತ್ತಲ್ಲದೆ ಪೊಲೀಸ್ ಹಾಗೂ ಮಿಲಿಟರೀ ತರಬೇತಿ ಸಹಿತ ಸೇನೆ ಉಪಕರಣಗಳನ್ನು ಧಾರಾಳವಾಗಿ ಅರ್ಜೆಂಟೀನದ ಮಿಲಿಟರೀ ಸರ್ವಾಧಿಕಾರಕ್ಕೆ ನೀಡಿತ್ತು. ಇವೆಲ್ಲದರ ನಡುವೆಯೂ ಅರ್ಜೆಂಟೀನದ ಸಾಮಾನ್ಯ ಪ್ರಜೆಗಳು ಮತ್ತು ಕಾರ್ಮಿಕ ವರ್ಗವು ಸರ್ವಾಧಿಕಾರದ ವಿರುದ್ಧ ನಿರಂತರ ಪ್ರತಿರೋಧವನ್ನು ಒಡ್ಡಿತು.
ಪ್ರಭುತ್ವದ ಭಯೋತ್ಪಾದನೆ ಮತ್ತು ಕಣ್ಮರೆಯಾಗುತ್ತಿದ್ದ ಯುವಕ/ಯುವತಿಯರ ಅಮ್ಮಂದಿರು ಏಪ್ರಿಲ್ 30, 1977ರಲ್ಲಿ ಇತಿಹಾಸಿಕ “ಪ್ಲಾಜಾ ಡೆ ಮಾಯೊವಿನ ಅಮ್ಮಂದಿರು” ಪ್ರತಿಭಟನೆ ಮಾಡಿದರು ಮತ್ತು ಅದು ಈಗಲೂ ಜೀವಂತವಾಗಿದೆ. ಅರ್ಜೆಂಟೀನಾದ ಸವಾಧಿಕಾರಿ ಆಡಳಿತವು 1979ರ ಕಚ್ಚಾ ತೈಲ ಬಿಕ್ಕಟ್ಟಿನ ನಂತರ 1981ರಲ್ಲಿ ವಿದೇಶಿ ಸಾಲದ ಸುಳಿಯಲ್ಲಿ ಸಿಲುಕಿತು. 1982ರಲ್ಲಿ ಫಾಕ್‍ಲ್ಯಾಂಡ್ ದ್ವೀಪ ಅಥವಾ ಮ್ಯಾಲ್ವೀನೇಸ್ ಎಂದು ಕರೆಯಲ್ಪಡುವ ಬ್ರಿಟಿಷ್ ದ್ವೀಪವನ್ನು ಆಕ್ರಮಿಸಲು ಹೋಗಿ ಸೋತುಹೋಯಿತು. ಅದು ಸಾಮಾನ್ಯ ನಾಗರಿಕರ ಸಂಘಟಿತ ಪ್ರತಿರೋಧದ ಕಾರಣದಿಂದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಹಿಂದಿರುಗಲು ನಾಂದಿಯಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...