Homeಅಂಕಣಗಳುಬಿಜೆಪಿಯದ್ದು ಯಾವ ಜಾತಿ?

ಬಿಜೆಪಿಯದ್ದು ಯಾವ ಜಾತಿ?

- Advertisement -
- Advertisement -

ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ನೇತೃತ್ವದ ದಿ ಪ್ರಿಂಟ್ ವೆಬ್ ಪತ್ರಿಕೆಯ ತಂಡವು ಬಹಳ ಮಹತ್ವದ ಅಧ್ಯಯನ ನಡೆಸಿ ವರದಿಯೊಂದನ್ನು ಮಾಡಿದೆ. ಎಲ್ಲರಿಗೂ ಗೊತ್ತಿರುವ ಸತ್ಯವನ್ನು ಹೇಳಲು ಇಷ್ಟೆಲ್ಲಾ ಅಧ್ಯಯನ ಬೇಕೇ ಎಂದು ಕೇಳಬಹುದು. ಹೌದು, ಸತ್ಯವನ್ನು ಪುರಾವೆ ಸಮೇತ ಹೇಳಿದರೂ ಸುಳ್ಳನ್ನು ಸುಳ್ಳು ಮಾಡೋಕೆ ಆಗದ ಪರಿಸ್ಥಿತಿ ಇದೆ. 2018ರ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಲು ನಿರ್ಧರಿಸಿದ ಕೆಲವೇ ದಿನಗಳಲ್ಲಿ ಒಂದು ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿತು. ಅದರಲ್ಲಿ ಒಂದು ಸುಳ್ಳನ್ನು ಹೆಣೆದು, ಸತ್ಯದ ತಲೆ ಮೇಲೆ ಒಡೆಯಲಾಗಿತ್ತು. ‘ದೇವೇಗೌಡರು ಮೂಲತಃ ಕುರುಬರು. ಅವರ ತಂದೆ ದೊಡ್ಡೇಗೌಡರು ಕುರುಬರಾಗಿದ್ದರೂ, ತಾಯಿ ಒಕ್ಕಲಿಗರಾಗಿದ್ದರು. ನಮ್ಮ ಸಂಸ್ಕøತಿಯ ಪ್ರಕಾರ ತಂದೆಯ ಜಾತಿ ಅವರದ್ದಾಗಿರಬೇಕಿದ್ದರೂ, ದೇವೇಗೌಡರು ಒಕ್ಕಲಿಗರೆಂದೇ ಹೇಳಿಕೊಳ್ಳುತ್ತಾ ಬಂದಿದ್ದಾರೆ’.
‘ಎಂಥಾ ಸುಳ್ಳು ಹೇಳ್ತಾರಪ್ಪಾ?’ ಎಂದು ನಾವು ಅಂದುಕೊಳ್ಳಬಹುದಾದರೂ, ಇದರ ಮೂಲಕ ಎರಡು ಅಜೆಂಡಾ ಸಾಧನೆಯಾಗುತ್ತದೆ. ಒಂದು, ಮೇಲ್ಜಾತಿಗಳೆಲ್ಲರೂ ಬಿಜೆಪಿಯ ಜೊತೆಗೆ ಇರುತ್ತಾರೆ. ಅಲ್ಲದವರು ಮೇಲ್ಜಾತಿಗಳೇ ಅಲ್ಲ ಎಂದು ಸಾಧಿಸುವುದು. ಎರಡು, ಆ ಕಾರಣಕ್ಕೇ ಕಾಂಗ್ರೆಸ್ ಪಕ್ಷದ ಜೊತೆಗೆ ಒಕ್ಕಲಿಗರು ಕೈ ಜೋಡಿಸಲಾರರು. ಅವರು ಕುರುಬರಾಗಿದ್ದರಿಂದಲೇ ಕೈ ಜೋಡಿಸಿದರು ಎಂಬ ಭಾವನೆ ಬಿತ್ತುವುದು. ಭಾರತದಂಥಹ ಕೆಟ್ಟ ಜಾತಿಗ್ರಸ್ತ ಸಮಾಜದಲ್ಲಿ ಇದು ಅಸಾಧ್ಯವಲ್ಲ. ನೆಹರೂ ಕುಟುಂಬದ ಜಾತಿ/ಧರ್ಮ ಮೂಲದ ಕುರಿತು ಹರಡಿರುವ ಸುಳ್ಳುಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಇನ್ನೊಂದಷ್ಟು ಕಾಲದ ನಂತರ ದೇವೇಗೌಡರ ಜಾತಿ ಮೂಲದ ಬಗ್ಗೆಯೂ ಇದೇ ನಿಜವೆಂದು ಜನರು ನಂಬಬಹುದು.
ಈ ರೀತಿಯಾಗಿ ತಾನು ಒಂದು ಮೇಲ್ಜಾತಿ ಪಕ್ಷವೆಂದು, ಅದರಲ್ಲೂ ಬ್ರಾಹ್ಮಣರ ಮೇಲರಿಮೆಯನ್ನು ಒಪ್ಪಿಕೊಂಡ ಪಕ್ಷವೆಂದು ಬಿಜೆಪಿಯು ಸ್ಪಷ್ಟವಾಗಿಯೇ ಬಿಂಬಿಸಿಕೊಂಡಿದೆ. ಗುಲಾಮಗಿರಿ ಮನಸ್ಥಿತಿಯಿಂದ, ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲಿ ತನಗೆ ಸೂಕ್ತ ಸ್ಥಾನ ಸಿಗಲಿಲ್ಲವೆಂದು ಹೇಳಿ ಅಥವಾ ಬಿಜೆಪಿಗೆ ಅಗತ್ಯವಿರುವ ಮುಖವಾಡವಾಗಿ ಸೇವೆ ಸಲ್ಲಿಸಿದರೆ ಒಳ್ಳೆಯ ಲಾಭವಿದೆಯೆಂದು ಹಲವು ಶೂದ್ರ ಮತ್ತು ದಲಿತ ನಾಯಕರು ಮತ್ತು ಸಾಮಾನ್ಯ ಜನರೂ ಸಹಾ ಅವಕಾಶವಾದದಿಂದ ಬಿಜೆಪಿ ಸೇರುತ್ತಾರೆ. ಈ ರೀತಿ ಸೇರುವವರು ಬಿಜೆಪಿಯು ಎಲ್ಲಾ ಜಾತಿಗಳಿಗೂ ಪ್ರಾಧಾನ್ಯತೆ ಕೊಡುತ್ತದೆ ಎಂದು ಹೇಳಿಕೊಳ್ಳಲು ಬಳಕೆಯಾಗುತ್ತಾರೆ. ಅದೇ ಕಾರಣಕ್ಕಾಗಿಯೇ ಬಂಗಾರು ಲಕ್ಷ್ಮಣ್ ಎಂಬ ದಲಿತ ಸಮುದಾಯದ ವ್ಯಕ್ತಿಯನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿಸಿದ್ದು ಮತ್ತು ಶೋಷಿತ ಸಮುದಾಯದ ರಾಮನಾಥ ಕೋವಿಂದರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಿದ್ದು.
ಕರ್ನಾಟಕದಲ್ಲೇ ನೋಡುವುದಾದರೆ, ಜನತಾದಳದಲ್ಲಿ ಈ ಹಿಂದೆ ಸಿದ್ದರಾಮಯ್ಯನವರು ಸೇರಿದಂತೆ ಕೆಲವು ಹಿಂದುಳಿದ ವರ್ಗಗಳಿಗೆ ಸೇರಿದ ಕೆಲವು ವ್ಯಕ್ತಿಗಳ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿತ್ತು. ಈಗ ಜೆಡಿಎಸ್ ಬಹುತೇಕ ಒಕ್ಕಲಿಗರ ಪಕ್ಷವಾಗಿ ಹೋಗಿದೆ. ಕಾಂಗ್ರೆಸ್ಸಿನಲ್ಲಿ ಈಗಾಗಲೇ ನಾಲ್ಕು ಜನ ಹಿಂದುಳಿದ ವರ್ಗಗಳಿಗೆ ಸೇರಿದ ಮುಖ್ಯಮಂತ್ರಿಗಳು ಆಳ್ವಿಕೆ ಮಾಡಿದ್ದಾರೆ. ಬಿಜೆಪಿಯಲ್ಲಿ ಕ್ಯೂನಲ್ಲಿ ಇರುವವರಲ್ಲಿ ಮೇಲ್ಜಾತಿಗಳನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ. ಈಶ್ವರಪ್ಪನವರ ಹೆಸರು ಹೇಳಬಹುದಾದರೂ, ಅವರು ತಮ್ಮ ಟಿಕೆಟ್ ಖಾತ್ರಿ ಪಡಿಸಿಕೊಳ್ಳಲಿಕ್ಕೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಬೇಕಾಯಿತು ಎಂಬುದನ್ನು ಮರೆಯಲಾಗದು.
ಇದು ಒಂದು ರಾಜ್ಯದ ಸ್ಥಿತಿಯಲ್ಲ. ಪ್ರಿಂಟ್ ಮಾಡಿರುವ ಅಧ್ಯಯನದ ಪ್ರಕಾರ ಬಿಜೆಪಿಯ ಅಖಿಲ ಭಾರತ ಮಟ್ಟದ ಪದಾಧಿಕಾರಿಗಳಲ್ಲಿ ಶೇ.75ರಷ್ಟು ಜನ ಮೇಲ್ಜಾತಿಗಳಿಗೆ ಸೇರಿದವರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಶೇ.60ರಷ್ಟು ಜನರು ‘ಜನರಲ್ ಕ್ಯಾಟಗರಿ’ಗೆ ಬರುವವರು. ಈ ಜನರಲ್ ಕ್ಯಾಟಗರಿಯವರೇ ಶೇ.65ರಷ್ಟು ರಾಜ್ಯಘಟಕಗಳ ಅಧ್ಯಕ್ಷರುಗಳಾಗಿದ್ದಾರೆ. ಇನ್ನೂ ಕೆಳಗೆ ಬಂದರೂ ಬಿಜೆಪಿಯ ಜಿಲ್ಲಾಧ್ಯಕ್ಷರುಗಳಲ್ಲೂ ಶೇ.65ರಷ್ಟು ಜನರು ಮೇಲ್ಜಾತಿಗಳಿಗೆ ಸೇರಿದವರಿದ್ದಾರೆ. ಇಡೀ ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಇಬ್ಬರು ಮಾತ್ರ ದಲಿತ, ಆದಿವಾಸಿ, ಮುಸ್ಲಿಮರಿದ್ದಾರೆ. ಈ ಜಾತಿಗಳಿಗೆ ಸೇರಿದ ಒಬ್ಬ ರಾಜ್ಯಾಧ್ಯಕ್ಷನೂ ಇಲ್ಲ.
ಇದಕ್ಕಾಗಿ ಪ್ರಿಂಟ್, 50 ರಾಷ್ಟ್ರೀಯ ಪದಾಧಿಕಾರಿಗಳು, 97 ರಾಷ್ಟ್ರೀಯ ಕಾರ್ಯಕಾರಿಣಿಯವರು, 36 ರಾಜ್ಯ ಅಧ್ಯಕ್ಷರುಗಳು (ರಾಜ್ಯ & ಕೇಂದ್ರಾಡಳಿತ ಪ್ರದೇಶಗಳು), 752 ಜಿಲ್ಲಾಧ್ಯಕ್ಷರುಗಳು (ಸಂಘಟನೆಯ ಅನುಕೂಲಕ್ಕಾಗಿ ಕೆಲವು ದೊಡ್ಡ ಜಿಲ್ಲೆಗಳನ್ನು ಎರಡು ಜಿಲ್ಲೆ ಮಾಡಿಕೊಂಡಿದ್ದಾರೆ).
ಇಷ್ಟೇ ಹೇಳಿದರೆ ಸಾಕಾಗುವುದಿಲ್ಲ. ಬಿಜೆಪಿಯ 50 ಜನ ರಾಷ್ಟ್ರೀಯ ಪದಾಧಿಕಾರಿಗಳ ಪೈಕಿ 17 ಜನ ಬ್ರಾಹ್ಮಣರಾಗಿದ್ದರೆ, 21 ಜನ ಇತರ ಮೇಲ್ಜಾತಿಗಳಾಗಿದ್ದಾರೆ. 3 ಜನ ಎಸ್‍ಸಿ, ಇಬ್ಬರು ಎಸ್‍ಟಿ ಮತ್ತು ಇಬ್ಬರು ಮುಸ್ಲಿಮರಿದ್ದಾರಾದರೂ, ಅವರಲ್ಲಿ ತಲಾ ಒಬ್ಬರು ಆಯಾ ಮೋರ್ಚಾಗಳ ರಾಷ್ಟ್ರಾಧ್ಯಕ್ಷರುಗಳಾಗಿರುವ ಕಾರಣದಿಂದ ಸಮಿತಿಯಲ್ಲಿದ್ದಾರೆ ಅಷ್ಟೇ.
97 ಜನರ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ 29 ಜನರು ಬ್ರಾಹ್ಮಣರಾಗಿದ್ದಾರೆ, 37 ಜನರ ಮೇಲ್ಜಾತಿಗಳಾಗಿದ್ದಾರೆ. ಮೇಲ್ಜಾತಿಗಳಲ್ಲೂ ಶೂದ್ರ ಸಮುದಾಯಗಳಿಗಿಂತ ಹೆಚ್ಚು ಸಿಂಧಿ, ಜೈನ, ಮಾರ್ವಾಡಿ, ಕ್ಷತ್ರಿಯದಂತಹ ಜಾತಿಗಳವರೇ ಮೇಲುಗೈ ಹೊಂದಿದ್ದಾರೆ.
ಮೇಲುಮೇಲೆ ಹೋದಂತೆಲ್ಲಾ ಮೇಲ್ಜಾತಿಯವರಿದ್ದಾರೆ, ಏನು ಮಾಡೋದು? ಮೊದಲಿಂದ ಇದ್ದವರು, ಸೀನಿಯರ್‍ಗಳು ಇತ್ಯಾದಿ ಸಮಜಾಯಿಷಿಗಳನ್ನು ಬಿಜೆಪಿಯವರು ಕೊಡುವುದೂ ಸಾಧ್ಯವಿಲ್ಲ. ಏಕೆಂದರೆ, ಜಿಲ್ಲಾ ಮಟ್ಟದಲ್ಲೂ 65% ಮೇಲ್ಜಾತಿಯವರಿದ್ದು ಅವರಲ್ಲಿ ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚು ಬ್ರಾಹ್ಮಣರಿದ್ದಾರೆ. ಎಲ್ಲಾ ಬಗೆಯ ಹಿಂದುಳಿದ ವರ್ಗಗಳವರು 25% ಇದ್ದರೆ, ಎಸ್‍ಸಿ 4% ಮತ್ತು 1%ಕ್ಕಿಂತ ಕಡಿಮೆ ಅಲ್ಪಸಂಖ್ಯಾತರಿದ್ದಾರೆ. ದೇಶದಲ್ಲಿ ದಲಿತ ಸಮುದಾಯಕ್ಕೆ ಸೇರಿದವರು 16.6%, ಎಸ್‍ಟಿ 8.6%, ಮುಸ್ಲಿಮರು 14% ಇದ್ದರೆ ಓಬಿಸಿ 41% ಇದ್ದಾರೆ. ಇದು ಬಿಜೆಪಿಯ ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್‍ನ ಸ್ವರೂಪ.
ಇಂತಹ ಬಿಜೆಪಿಯು ತನ್ನ ಪರಮೋಚ್ಛ ನಾಯಕ, ಪ್ರಧಾನಮಂತ್ರಿ ಮೋದಿಯೇ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಹೇಳಿಕೊಂಡು ಪ್ರಚಾರ ಗಿಟ್ಟಿಸಬಹುದಲ್ಲವೇ? ಮೋದಿ ತನ್ನ ಪಕ್ಷದ ನೀತಿಗನುಗುಣವಾಗಿ ಬ್ರಾಹ್ಮಣ-ಬನಿಯಾ ಮೌಲ್ಯಗಳು ಮತ್ತು ಆ ಜಾತಿಗಳ ಪರವಾಗಿ ಕೆಲಸ ಮಾಡುತ್ತಿದ್ದರೂ, ಜನ್ಮತಃ ಹಿಂದುಳಿದ ವರ್ಗಕ್ಕೆ ಸೇರಿದವರು. ತಾವು ಜಾತಿ ನೋಡುವುದಿಲ್ಲವಾದ್ದರಿಂದ ಅದನ್ನು ಬಳಸಿಕೊಳ್ಳುತ್ತಿಲ್ಲವೆಂದು ಹೇಳಬಹುದು. ಅದನ್ನು ಹೇಳದೇ ಇರುವುದಕ್ಕೆ ಕಾರಣವೆಂದರೆ, ತನ್ನ ಗಟ್ಟಿ ಸಾಮಾಜಿಕ ನೆಲೆಯಾಗಿ ಮೇಲ್ಜಾತಿಗಳನ್ನೇ ಹೊಂದಬಯಸುತ್ತದೆ. ಇದಕ್ಕೆ ಒಂದು ಉದಾಹರಣೆಯನ್ನೂ ಕೊಡಬಹುದು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಒಂದು ಸುದ್ದಿ ಹೊರಬಂದಿತು. ಸರ್ಕಾರದ ಕಡೆಯಿಂದ ಕೆಲವು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಿತ್ತುಕೊಳ್ಳಲಾಗಿದೆ ಎಂಬುದೇ ಆ ಸುದ್ದಿ. ವಾಸ್ತವದಲ್ಲಿ ಅಂತಹದೊಂದು ಆದೇಶವನ್ನು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗಲೇ ಹೊರಡಿಸಲಾಗಿತ್ತು. ಆದರೂ ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ ಇದನ್ನು ಪ್ರಚಾರಕ್ಕೆ ತರಲಾಯಿತು; ಆ ರೀತಿ ತಂದವರು ಸ್ವತಃ ಬಿಜೆಪಿಯವರೇ. ಏಕೆಂದರೆ ಉಳಿದವರು ಇದನ್ನೊಂದು ನೆಗೆಟಿವ್ ಸಂಗತಿ ಎಂದುಕೊಂಡರೆ, ಬಿಜೆಪಿಯು ತಾನು ಹಿಂದುಳಿದ ಮತ್ತು ದಲಿತ ಸಮುದಾಯಗಳನ್ನು ‘ಹದ್ದುಬಸ್ತಿನಲ್ಲಿಡುವ’ ಪಕ್ಷವೆಂದೇ ಬಿಂಬಿಸಿಕೊಳ್ಳಬಯಸುತ್ತದೆ. ಮುಂದೊಂದು ದಿನ ಸೋಲುವ ಭೀತಿ ಕಾಣಿಸಿಕೊಂಡ ದಿನ ನರೇಂದ್ರ ಮೋದಿಯವರನ್ನು ಹಿಂದುಳಿದ ವರ್ಗಗಳ ನೇತಾರನೆಂದು ಬಿಂಬಿಸುವ ಕೆಲಸವನ್ನು ಮಾಡುವುದಿಲ್ಲವೆಂದು ಹೇಳಲಾಗದು. ಏಕೆಂದರೆ, ಮೋದಿ-ಷಾ-ಆರೆಸ್ಸೆಸ್ ತ್ರಿವಳಿಯು ಇದುವರೆಗೆ ಮಾಡಿಕೊಂಡು ಬಂದ ಎಲ್ಲಾ ಹುನ್ನಾರಗಳನ್ನು ಮುಂದುವರೆಸಿದಾಗ್ಯೂ ಜನರು ಬಿಜೆಪಿಯನ್ನು ತಿರಸ್ಕರಿಸುವ ಸಂದರ್ಭ ಬಂದರೆ ಅದನ್ನೂ ಮಾಡುತ್ತಾರೆ. ಆದರೆ, ಈ ಸದ್ಯ ಅದನ್ನು ಮಾಡದೇ ಇರುವ ಪ್ರಮಾಣಕ್ಕೆ ಬಿಜೆಪಿಯು ಮೇಲ್ಜಾತಿಗಳ ತೆಕ್ಕೆಯಲ್ಲಿಯೇ ಇದ್ದು, ಮೇಲ್ಜಾತಿಗಳ ಪರವಾಗಿಯೇ ಕೆಲಸ ಮಾಡಬಯಸುತ್ತದೆ.
ಬಿಜೆಪಿಯು ಕೇವಲ ಬ್ರಾಹ್ಮಣರ ನೇತೃತ್ವದ (ಬ್ರಾಹ್ಮಣ ಎಂದಾಗ ಬ್ರಾಹ್ಮಣ ಜಾತಿಯ ಜೊತೆಗೆ ಬನಿಯಾ, ಸಿಂಧಿ, ಮಾರ್ವಾಡಿಗಳನ್ನೂ ಸೇರಿಸಿಕೊಂಡು ಹೇಳಲಾಗಿದೆ) ಮೇಲ್ಜಾತಿಗಳ ಪಕ್ಷವೆಂದು ತನ್ನನ್ನು ಪರಿಗಣಿಸಿದೆ. ಯಾರ ಪಕ್ಷ, ಆದರೆ ಯಾರ ನೇತೃತ್ವ ಎಂಬ ಎರಡು ಅಂಶಗಳಲ್ಲೂ ಅದು ಸ್ಪಷ್ಟವಾಗಿದೆ. ಹಾಗಾಗಿಯೇ ಬಸವಣ್ಣನವರ ತತ್ವವನ್ನು ಒಪ್ಪುವ ಲಿಂಗಾಯಿತರು ಅಥವಾ ಆ ಧರ್ಮ ಎಂಬುದು ಮಾನ್ಯತೆಯನ್ನು ಪಡೆದುಕೊಳ್ಳಬಾರದು ಎಂದು ಅದು ಬಯಸುತ್ತದೆ. ವೈದಿಕ ತತ್ವವನ್ನು ಅನುಸರಿಸುವ ಒಕ್ಕಲಿಗರು ಬೇಕೇ ಹೊರತು, ಕರ್ನಾಟಕದಲ್ಲಿ ಬ್ರಾಹ್ಮಣ್ಯ ವಿರೋಧದ ಮೂಲಕ ಅಸ್ಮಿತೆಯನ್ನು ಕಂಡುಕೊಂಡ ಶ್ರಮಿಕ ಒಕ್ಕಲಿಗ ಪರಂಪರೆಯನ್ನಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರ ಥರದವರು ರೂಪಿಸುವ ಹುನ್ನಾರಗಳಿಗಾಗಿ ಬೀದಿಗಳಲ್ಲಿ ಹೊಡೆದಾಡಿ ಜೈಲಿಗೆ ಸೇರುವ ಬಿಲ್ಲವರು, ನಾಯಕರು, ಮರಾಠ, ಒಕ್ಕಲಿಗ ಹುಡುಗರು ಬೇಕೇ ಹೊರತು, ಸಮಾನತೆಯನ್ನು ಕೇಳುವ ಶೂದ್ರ ಸಮುದಾಯದ ವ್ಯಕ್ತಿಗಳಲ್ಲ.
ದಿ ಪ್ರಿಂಟ್ ಸ್ಪಷ್ಟವಾದ ಸಂಗತಿಗಳನ್ನು ನಮ್ಮ ಮುಂದಿಟ್ಟಿದೆ. ಈ ಅಂಕಿ-ಅಂಶಗಳನ್ನು ನೀವು ಮುಂದಿಟ್ಟರೆ ಬಿಜೆಪಿಯ ವಾದ ಸಿದ್ಧವಾಗಿರುತ್ತದೆ. ದೇಶವನ್ನು ಜಾತಿಯ ಹೆಸರಿನಲ್ಲೇಕೆ ಒಡೆಯುತ್ತೀರಿ? ಅವರನ್ನು ಕೇವಲ ಬಿಜೆಪಿ ಎಂದು ನೋಡಿ, ಭಾರತೀಯರೆಂದು ನೋಡಿ. ಹೌದೌದು ಬಿಜೆಪಿಯ ಭಾರತದಲ್ಲಿ ಬ್ರಾಹ್ಮಣರ ನೇತೃತ್ವದಲ್ಲಿ ಮೇಲ್ಜಾತಿಗಳಿಗಷ್ಟೇ ಜಾಗವಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...