Homeಅಂಕಣಗಳುಮಾದೇಗೌಡರ ಮಾನ ಮೂರು ಕಾಸಿಗೆ ಹೋಯ್ತಂತಲ್ಲಾ

ಮಾದೇಗೌಡರ ಮಾನ ಮೂರು ಕಾಸಿಗೆ ಹೋಯ್ತಂತಲ್ಲಾ

- Advertisement -
 ಯಾಹೂ |
ನೇರ ನಡೆ ನುಡಿಗೆ ಹೆಸರಾಗಿದ್ದ ಜಿ. ಮಾದೇಗೌಡರು, ಜೆಡಿಎಸ್ ಕಡೆಯಿಂದ ಹಣ ಬರುತ್ತದೆಂದು ಮಂಡ್ಯದ ಗಾಂಧಿಭವನದ ಎದುರು ಕುಳಿತು ಕಾದು ಸಾಕಾಗಿ, ಕಡೆಗೆ ಪುಟ್ಟರಾಜನಿಗೆ ಫೋನು ಮಾಡಿ ‘ಎಲ್ಲೊದುಡ್ಡು’ ಎಂದರಂತಲ್ಲಾ, ಪುಟ್ಟರಾಜನಿಗೆ ಮಾದೇಗೌಡರಿಂದ ಸಾಲ ಪಡೆದು ಬಡ್ಡಿಯನ್ನು ಕೊಡದೆ ಕುಂತವನ ದನಿಯಲ್ಲಿ, “ಅಪ್ಪಾಜಿಆರೇಂಜ್ ಮಾಡ್ತಿನಿ” ಎಂದುಗೋಗರೆದಂತರಲ್ಲಾ.ಮಾದೇಗೌಡರು, ಮಂಡ್ಯದ ಸೊಗಡಿಗೆ ಹೆಸರಾದವರು, ಗಾಂಧಿಮಾರ್ಗಿ ಬೇರೆ, ಅದಕ್ಕಾಗಿ ಗಾಂಧಿ ಭವನ ನಿರ್ಮಿಸಿ ಇಳಿ ಹೊತ್ತಿನಲ್ಲಿ ಅದರ ಮುಂದೆ ಕುಳಿತು ಈ ನಾಡಿನ ಬಗ್ಗೆ ಚಿಂತಿಸದವರು. ಆದರೆ ಸ್ವಂತದ ಬಗ್ಗೆ ತುಂಬಾ ಯೋಚಿಸಿ ದವರು. ಈ ಹಿಂದೆ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಎಂದು ದೂರಿ ಕಾಂಗ್ರೆಸ್ ತೊರೆದು ಬಿ.ಜೆ.ಪಿ ಅವರಿಗೆ ಒಗ್ಗಲಿಲ್ಲ. ಮತ್ತೆ ಕಾಂಗ್ರೆಸ್‍ಗೆ ಮರಳಿ ಮಗನ ಕೈಲಿ ಹಣ ಕಳಿದು. ಇಲ್ಲ ಯಾರು ಕೊಡ್ತಾರೊ ಅವುರೆಸರೇಳು ನಾವೇ ವಸೂಲು ಮಾಡ್ತಿವಿ” ಎಂದಿರೋದು .ವಯಸ್ಸಾದಂತೆ ತಲೆಯೊಳಗಿನ ಸಿದ್ಧಾಂತಗಳು ಸಾಯುತ್ತ, ಕುಟುಂಬದ ವ್ಯಾಮೋಹ ಅಮರಿಕೊಳ್ಳುವುದು, ಈ ಮಾದೇಗೌಡನನ್ನ ಬಿಡಲಿಲ್ಲವಲ್ಲಾ. ಅದೇನಾದರಾಗಲಿ. ಕಡೇಗಳಿಗೆಯಲ್ಲಿ ಚಿಲ್ಲರೆ ಕಾಸಿಗೆ ಪುಟ್ಟರಾಜನನ್ನ ಕೇಳಿ ಮಾದೇಗೌಡನ ಮಾನ ಮೂರು ಕಾಸಿಗೆ ಹರಾಜಾಯ್ತಲ್ಲಾ ಥೂತ್ತೆರಿ.
ಮಂಡ್ಯ ಚುನಾವಣೆಯ ರಂಗು ತಾರಕಕ್ಕೇರಿರುವುದರ ದ್ಯೋತಕವಾಗಿ, ಎನ್.ಡಿ.ಟಿ.ವಿ.ಯ ಮಾಯಾ ಶರ್ಮಾ ಸುಮಲತಾರ ಹಿಂದೆತಿರುಗುತ್ತಿರುವುದು ಗೊತ್ತಾಗಿ, ಮಾಯಾಗೆ ಫೋನ್ ಮಾಡಿದರೆ ಅವರು ಫೋನ್ ತೆಗೆಯಲಿಲ್ಲ. ಎನ್.ಡಿ ಟಿವಿ ಮಾಯಾ ಇವರಿಗಿಂತಲೂ ನಮ್ಮ ವಾಟಿಸ್ಸೆ ಸರಿಯಾಗಿ ಸುದ್ದಿ ನೀಡಲು ಸೂಕ್ತ ವ್ಯಕ್ತಿಯೆಂದು ಫೋನ್ ಮಾಡಲಾಗಿರಿಂಗಾಯ್ತು, ರಿಂಗ್‍ಟೂನ್ “ಬಲೆ ಚಾನ್ಸಿದೆ, ಲಕ್ಕಿ ಚಾನ್ಸಿದೆ, ಬಲೆ ಚಾನ್ಸಿದು’ ‘ಗುಡ್‍ಯುವುನಿಂಗ್ ಸಾರ್’
“ಎಲ್ಲಿದ್ದಿ ವಾಟಿಸ್ಸೆ”
“ಬಿಂಡಿಗನವಿಲೆ ಹೆಸರು ಕೇಳಿದ್ದಿರ ಸಾರ್.”
“ಗೊತ್ತು ಗರುಡಾಚಾರ್ರೂರು”
“ಅಷ್ಟೆ ಅಲ್ಲ ಸಾರ್. ಅಣು ವಿಜ್ಞಾನಿ, ರಾಜಾರಾಮಣ್ಣನ ಊರು. ಸಿನಿಮಾ ಡೈರೆಕ್ಟರು, ಬಿ.ಎಸ್.ರಂಗನ್‍ಊರಿದು”
“ಹೌದಾ”
“ಇಂತ ಪ್ರತಿಭಾವಂತ್ರೆ ಒಂದು ಡಜನ್ ಇರೊ ಊರಿದು”
“ಅಷ್ಟೊಂದು ಪ್ರತಿಭಾವಂತ್ರಿದ್ದರ”
“ನಾವಲ್ಲ ಸಾ ಅವುರ್ಯಲ್ಲ ಅಯ್ಯಂಗಾರ್ರು”
“ಸರಿ ಬುಡು”
“ಈ ಊರಿಗೆ ನಿಖಿಲ್ ಬತ್ತನೆಅಂತ ಭಾರಿಜನ ಸೇರ್ಯವುರೆ”
“ಅಷ್ಟೊಂದು ಜನ ಬಂದವುರಾ”
“ಪರೆಡ್‍ಗೆ ತವುಜೆಂಡಿಂದ ತ್ರೀ ಅಂಡ್ರೆಡ್‍ವರಿಗೂ ಬಟಾವಡೆ ಆಗ್ಯದೆ ಸಾ”
“ಇನ್ನ ಓಟಿಗೆಷ್ಟು ಕೊಡ್ತಾರಪ್ಪ”
“ಅದ ಹೇಳಕ್ಕೆ ಬರದಿಲ್ಲ ಸಾರ್. ಪ್ರತಿಎಮ್ಮೆಲ್ಲೆಗೂ 25 ಕೋಟಿ ಟಾರ್ಗೆಟ್ ಕೊಟ್ಟವುನಂತೆ ಕುಮಾರಣ್ಣ”
“ಅಂದ್ರೆ ಅವುರು ಕೈಯಿಂದ ಖರ್ಚು ಮಾಡಬೇಕಾ”
“ಪುಟ್ಟರಾಜ ತಮ್ಮಣ್ಣ ನಾವೇ ಹಾಯ್ಕಂಡು ಖರ್ಚು ಮಾಡ್ತಿವಿ ಅಂದಿದ್ದರಂತೆ”
“ಅನ್ನಲೇಬೇಕು ಬುಡು. ಇದೇ ತಮ್ಮಣ್ಣನ ಆಸ್ತಿ ವಿಷಯದಲ್ಲಿ ಮಾದೇಗೌಡ್ರು ಹಿಂದೆನೆ ಹೋರಾಡಿದ್ರು”
“ಮಾದೇಗೌಡ ಬುಡಿ ಸಾ. ಅವುನು ಮಾತಾಡಿದ್ರೆ ಅಂಬರೀಶು “ಲೇ ಮುದುಕ ಸುಮ್ಮನಿರು ಇಲ್ಲ ಅಂದ್ರೆ ನಿನ್ನ  ಕತ್ತಿಸಗತಿನಿ ಅಂತಿದ್ನಂತೆ”
“ತಮಾಸಿಗೆ ಅಂಗಂತಿದ್ರು”
“ತಮಾಸಿನೆ ಆದ್ರು ಈ ಮುದುಕ ಹಾಳಾದನಲ್ಲ ಸಾ”
“ಏನು ಹಾಳಾಗಿಲ್ಲ. ಚುನಾವಣೆ ಕರ್ಚಿಗೆ ದುಡ್ಡು ಕೇಳ್ಯವುರೆ ಅಷ್ಟೆ”
“ಮಾದೇಗೌಡ ಪುಟ್ಟರಾಜನ್ನ ಕೇಳಿದಕ್ಕಿಂತ, ಕುಮಾರಣ್ಣನ್ನ ಕೇಳಬೇಕಾಗಿತ್ತು ಸಾ”
“ಕುಮಾರಣ್ಣ ಯಮ್ಮೆಲ್ಲೆಗಳಿಗೆ ವಯಿಸಿಬುಟ್ಟವುನೆ”
“ಮಗನ್ನ ಗೆಲ್ಲಿಸಿಕೊಂಡು ಬರೊ ಜವಾಬ್ದಾರಿಯ ಎಮ್ಮೆಲ್ಲೆಗಳೇ ವಯಿಸಿಕೊಂಡವಂತಲ್ಲ ಸಾ. ಪಾಪ ಆ ಹುಡುಗನಿಗೆ ಬಾಸಣ ಬರವಿಲ್ಲ”
“ವ ಪರವಾಗಿಲ್ಲ ಮಾತಾಡ್ತನೆ”
“ಏನು ಮಾತಾಡ್ತನೆ ಸಾ. ನಾನು ಕುಮಾರಸ್ವಾಮಿ ಹೊಟ್ಟೆಲುಟ್ಟಕ್ಕೆ ಪುಣ್ಯ ಮಾಡಿದ್ದೆಅಂತದೆ.ನಮ್ಮಪ್ಪ ಮಂಡ್ಯಕೆಎಂಟು ಸಾವುರ ಕೋಟಿ ಕೊಟ್ಟವುನೆ ಅಂತದೆ. ನಮ್ಮ ಪಾರ್ಟಿ ಕಾರ್ಯಕರ್ತರಿಗೆ ಯಾರಾದ್ರು ಮೈ ಮುಟ್ಟಿದ್ರೆ ಹುಶಾರು ಅಂದರೆ. ಎಲ್ಲಿತ್ತು ಈ ಕರ್ಮ”
“ಇನ್ನು ಮುಂದೈತೆ ನಿಮಗ್ಯಲ್ಲ”
“ಯಾಕೊ ಅಂಗೆ ಕಾಣ್ತದೆ ಸಾ. ಈ ದ್ಯಾವೇಗೌಡ ಮಕ್ಕಳು ಮರಿನ್ಯಲ್ಲ ರಾಜಕಾರಣಕ್ಕೆ ತರದೇ ಆಗಿದ್ರೆ, ಅವುಕೆ ಒಳ್ಳೆ ಮಾತು, ನಡವಳಿಕೆ, ವಿದ್ಯೆ, ಬುದ್ಧಿ, ಕಲಿಸಿ ಕಳಿಸಬೇಕಾಗಿತ್ತು ಸಾ”
“ದ್ಯಾವೇಗೌಡ್ರೆ ಅಂಗಿದ್ದ ಮೇಲೆ ಅವುಕೆಲ್ಲಿ ಕಲಿಸ್ಯಾರು”
“ಅದು ಸರಿನೆ ಬುಡಿ, ಗೌಡ್ರು ಪಾರ್ಟಿ ಸಿದ್ಧಾಂತಕ್ಕೆ ಒಗ್ಗಿಕಳೊ ಬದ್ಲು ಪಾರ್ಟಿನೆತನಿಗೆ ಬೇಕಾದಂತೆ ಬಗ್ಗಿಸಿಗಂಡ್ರು”
“ಪರವಾಗಿಲ್ಲ ಗೌಡ್ರು ಬಗ್ಗೆ ತಿಳಿಕಂಡಿದ್ದಿ”
“ಯಾವುದಾದ್ರು ಯೂನಿವರ್ಸಿಟಿ ಪರಮಿಷನ್ ಕೊಟ್ರೆ ಡಾಕ್ಟರೇಟ್ ಮಾಡನ ಅಂತ ಇದ್ದಿನಿ ಸಾ”
“ಹಂಪೆ ಯೂನಿವರ್ಸಿಟಿಲಿ ನೊಂದಾಯಿಸಿ ಮಾಡು”
“ಹಂಪೆ ಅಂದೇಟಿಗೆ ಗೆಪ್ತಿಗೆ ಬತ್ತು ಸಾ. ಅಲ್ಲೊಬ್ಬಳು ಮಲ್ಲಿಕಾಗಂಟಿ ಅಂತ ಇದ್ಲು ಈಗ್ಲು ಇದ್ದಳಾ”
“ಇಲ್ಲ ಹೋದ್ಲು. ವಿಶಭಟ್ಟಗೊತ್ತ ನಿಂಗೆ”
“ಗೊತ್ತು ಸಾ. ಇಲ್ಲೆ ನಮ್ಮ ನಾಗ್ತಳ್ಳಿ ಚಂದ್ರನ ಬಗ್ಗೆ ಮಾತಾಡಕ್ಕೆರ ಬಂದಿದ್ದ. ಹುಟ್ಟ ಕಳ್ಳಿದ್ದಂಗಿದ್ದ”
“ಅವುನ್ನ ಈ ನಿಮ್ಮಗಂಟೆ ಸಮಾರಂಭಕ್ಕೆ ಕರೆದಿದ್ಲು”
“ಕರಿಬಾರ್ದ”
“ಕಳ್ಳನಂಗಿದ್ದ ಅಂತಿ ಕರಿಬಾರ್ದ ಅಂತಿ ಯಲ್ಲಯಾ. ಆ ಹುಟ್ಟು ಸುಳ್ಳಪ್ಪ ಕ್ಯಟ್ಟಚೆಡ್ಡಿ”
“ಚೆಡ್ಡಿಲಿ ವಳ್ಳೆ ಚೆಡ್ಡಿನೂ ಇದ್ದವಾ”
“ಅವೆ ಆದ್ರೆ ಇವುನು ಮಾತ್ರ ವಿಶಪಾತಕ .ಇಂಥೊನ್ನ ಆ ಗಂಟಿ ಸಮಾರಂಬಕ್ಕೆ ಕರಿಸಿಗಂಡು ಸರಿಯಾಗಿ ಉಗಿಸಿಗಂಡ್ಳು”
“ನಾವು ಯಾರ ಪರನೂ ಮಾತಾಡಂಗಿಲ್ಲ ಸಾ. ಯಾರು ಯಾವಟೈಮಲ್ಲಿ ಬದ್ಲಾಯ್ತಾರೊ ಏನೊ”
“ಬದಲಾವಣೆ ಕಾಲದ ನಿಯಮ”
“ಅದು ಮನುಸುನ ಮನಸಿಗೂ ಅನ್ವಯಿಸ್ತದಾ”
“ಊ ಮತ್ತೆ ಕರ್ನಾಟಕದಲ್ಲಿ ಈಗ ಯಂತ ಬದಲಾವಣೆ ಆಗ್ಯದೆಗೊತ್ತ”
“ಗೊತ್ತು ಸಾ. ಈ ಡಿಕೆಶಿ, ಕುಮಾರಸ್ವಾಮಿ ಹೊಡದಾಡಿಕಂಡೆ ಸತ್ತೊಯ್ತರೆ ಅನಕಂಡಿದ್ದೆ. ಈಗ ನೋಡಿದ್ರೆ ದ್ಯಾವೇಗೌಡನ ಹಣೆಗೆ ಅಕ್ಷತೆ ಆಗ್ಯವುರೆ”
“ಅಕ್ಷತೆನೆ”
“ಊ ಸಾ. ಡಿಕೆಶಿ ಹರಸಣ ಅಕ್ಕಿ ಸೇರಿದ್ರೆ ಅಕ್ಷತೆ ಅಂದ. ಅದ ಯಾರಿಗಿಡಬೇಕು ದ್ಯಾವೇಗೌಡನಿಗೆ ತಾನೆ”
“ನಿಜಕಣಯ್ಯ”
“ಇನ್ನ ಅಹಿಂದ ಸಭೆಲಿ ಈ ಸಿದ್ದರಾಮಯ್ಯ ದ್ಯಾವೇಗೌಡರನ್ನ ಬೋದಿದ್ದ ನೋಡಿದ್ರೆ, ಇನ್ನ ಮುಗಿತು. ಈ ಜಲುಮದಲ್ಲಿ ಇವುರು ಹಿಂಗೇ ಸತ್ತೋಯ್ತರೆ ಅನ್ನಕಂಡಿದ್ದೆ. ತೀರ ಇತ್ತೀಚಿಗೆ, ಈ ಸಿದ್ದರಾಮಯ್ಯನಂತ ನೀಚ ಮುಕ್ಯಮಂತ್ರಿನ ನೋಡೇ ಇಲ್ಲ ಅಂದ ದ್ಯಾವೇಗೌಡ, ಈಗ ನೋಡಿದ್ರೆ ಜಾತ್ರೆಗೆ ರೆಡಿಯಾಗಿರೋ ಜೋಡೆತ್ತಿನಂಗೆ ಜ್ವತೆಲೆ ನಿಂತವುರೆ ಇದಕೇನೇಳ್ತಿರಿ”
“ಒಳ್ಳೆ ಬದಲಾವಣೆ”
“ಯಾಕೆ ಸಾರ್’
“ಮೋದಿ ಟೀಮಂಗೆ ಯಲ್ಲ ಒಂದಾಗಬೇಕಾಗಿದೆ”
“ಅದೇನೂ ನಿಜಸಾ. ಈ ಹಾಳು ಚೆಡ್ಡಿಗಳು ಈಗ ಏನೇಳ್ತ ಅವುರೆಗೊತ್ತೆ, ಮೋದಿ ಏನಾರ ಸೋತ್ರೆ ಆ ಪಾಕೀಸ್ತಾನದೋರು ನಮ್ಮ ಮ್ಯಾಲೆ ಬಿದ್ದು ಇಚಿಡಿ ಯಾದೇಸನೆಗೆದ್ದ ಕತ್ತರಂತೆ”
“ವಳ್ಳೆದಾಯ್ತಲ್ಲಯ್ಯ”
“ಇದೇನ್ ಸಾ ಹಿಂಗೇಳ್ತಿರಿ”
“ಪಾಕಿಸ್ತಾನ ದೂರು ಇಂಡಿಯಾಗೆದ್ದು ಕೂಡ್ಳೆ ಅದೂ ಇಂಡಿಯಾ ಆಯ್ತದಲ್ಲಯ್ಯ”
“ಅಂಗಾದ್ರೆ ಗೆದ್ಕಳ್ಳಿ ಬುಡಿ ಸಾ”
“ಥೂತ್ತೆರಿ”
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...