Homeಅಂಕಣಗಳುಮಾದೇಗೌಡರ ಮಾನ ಮೂರು ಕಾಸಿಗೆ ಹೋಯ್ತಂತಲ್ಲಾ

ಮಾದೇಗೌಡರ ಮಾನ ಮೂರು ಕಾಸಿಗೆ ಹೋಯ್ತಂತಲ್ಲಾ

- Advertisement -
 ಯಾಹೂ |
ನೇರ ನಡೆ ನುಡಿಗೆ ಹೆಸರಾಗಿದ್ದ ಜಿ. ಮಾದೇಗೌಡರು, ಜೆಡಿಎಸ್ ಕಡೆಯಿಂದ ಹಣ ಬರುತ್ತದೆಂದು ಮಂಡ್ಯದ ಗಾಂಧಿಭವನದ ಎದುರು ಕುಳಿತು ಕಾದು ಸಾಕಾಗಿ, ಕಡೆಗೆ ಪುಟ್ಟರಾಜನಿಗೆ ಫೋನು ಮಾಡಿ ‘ಎಲ್ಲೊದುಡ್ಡು’ ಎಂದರಂತಲ್ಲಾ, ಪುಟ್ಟರಾಜನಿಗೆ ಮಾದೇಗೌಡರಿಂದ ಸಾಲ ಪಡೆದು ಬಡ್ಡಿಯನ್ನು ಕೊಡದೆ ಕುಂತವನ ದನಿಯಲ್ಲಿ, “ಅಪ್ಪಾಜಿಆರೇಂಜ್ ಮಾಡ್ತಿನಿ” ಎಂದುಗೋಗರೆದಂತರಲ್ಲಾ.ಮಾದೇಗೌಡರು, ಮಂಡ್ಯದ ಸೊಗಡಿಗೆ ಹೆಸರಾದವರು, ಗಾಂಧಿಮಾರ್ಗಿ ಬೇರೆ, ಅದಕ್ಕಾಗಿ ಗಾಂಧಿ ಭವನ ನಿರ್ಮಿಸಿ ಇಳಿ ಹೊತ್ತಿನಲ್ಲಿ ಅದರ ಮುಂದೆ ಕುಳಿತು ಈ ನಾಡಿನ ಬಗ್ಗೆ ಚಿಂತಿಸದವರು. ಆದರೆ ಸ್ವಂತದ ಬಗ್ಗೆ ತುಂಬಾ ಯೋಚಿಸಿ ದವರು. ಈ ಹಿಂದೆ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಎಂದು ದೂರಿ ಕಾಂಗ್ರೆಸ್ ತೊರೆದು ಬಿ.ಜೆ.ಪಿ ಅವರಿಗೆ ಒಗ್ಗಲಿಲ್ಲ. ಮತ್ತೆ ಕಾಂಗ್ರೆಸ್‍ಗೆ ಮರಳಿ ಮಗನ ಕೈಲಿ ಹಣ ಕಳಿದು. ಇಲ್ಲ ಯಾರು ಕೊಡ್ತಾರೊ ಅವುರೆಸರೇಳು ನಾವೇ ವಸೂಲು ಮಾಡ್ತಿವಿ” ಎಂದಿರೋದು .ವಯಸ್ಸಾದಂತೆ ತಲೆಯೊಳಗಿನ ಸಿದ್ಧಾಂತಗಳು ಸಾಯುತ್ತ, ಕುಟುಂಬದ ವ್ಯಾಮೋಹ ಅಮರಿಕೊಳ್ಳುವುದು, ಈ ಮಾದೇಗೌಡನನ್ನ ಬಿಡಲಿಲ್ಲವಲ್ಲಾ. ಅದೇನಾದರಾಗಲಿ. ಕಡೇಗಳಿಗೆಯಲ್ಲಿ ಚಿಲ್ಲರೆ ಕಾಸಿಗೆ ಪುಟ್ಟರಾಜನನ್ನ ಕೇಳಿ ಮಾದೇಗೌಡನ ಮಾನ ಮೂರು ಕಾಸಿಗೆ ಹರಾಜಾಯ್ತಲ್ಲಾ ಥೂತ್ತೆರಿ.
ಮಂಡ್ಯ ಚುನಾವಣೆಯ ರಂಗು ತಾರಕಕ್ಕೇರಿರುವುದರ ದ್ಯೋತಕವಾಗಿ, ಎನ್.ಡಿ.ಟಿ.ವಿ.ಯ ಮಾಯಾ ಶರ್ಮಾ ಸುಮಲತಾರ ಹಿಂದೆತಿರುಗುತ್ತಿರುವುದು ಗೊತ್ತಾಗಿ, ಮಾಯಾಗೆ ಫೋನ್ ಮಾಡಿದರೆ ಅವರು ಫೋನ್ ತೆಗೆಯಲಿಲ್ಲ. ಎನ್.ಡಿ ಟಿವಿ ಮಾಯಾ ಇವರಿಗಿಂತಲೂ ನಮ್ಮ ವಾಟಿಸ್ಸೆ ಸರಿಯಾಗಿ ಸುದ್ದಿ ನೀಡಲು ಸೂಕ್ತ ವ್ಯಕ್ತಿಯೆಂದು ಫೋನ್ ಮಾಡಲಾಗಿರಿಂಗಾಯ್ತು, ರಿಂಗ್‍ಟೂನ್ “ಬಲೆ ಚಾನ್ಸಿದೆ, ಲಕ್ಕಿ ಚಾನ್ಸಿದೆ, ಬಲೆ ಚಾನ್ಸಿದು’ ‘ಗುಡ್‍ಯುವುನಿಂಗ್ ಸಾರ್’
“ಎಲ್ಲಿದ್ದಿ ವಾಟಿಸ್ಸೆ”
“ಬಿಂಡಿಗನವಿಲೆ ಹೆಸರು ಕೇಳಿದ್ದಿರ ಸಾರ್.”
“ಗೊತ್ತು ಗರುಡಾಚಾರ್ರೂರು”
“ಅಷ್ಟೆ ಅಲ್ಲ ಸಾರ್. ಅಣು ವಿಜ್ಞಾನಿ, ರಾಜಾರಾಮಣ್ಣನ ಊರು. ಸಿನಿಮಾ ಡೈರೆಕ್ಟರು, ಬಿ.ಎಸ್.ರಂಗನ್‍ಊರಿದು”
“ಹೌದಾ”
“ಇಂತ ಪ್ರತಿಭಾವಂತ್ರೆ ಒಂದು ಡಜನ್ ಇರೊ ಊರಿದು”
“ಅಷ್ಟೊಂದು ಪ್ರತಿಭಾವಂತ್ರಿದ್ದರ”
“ನಾವಲ್ಲ ಸಾ ಅವುರ್ಯಲ್ಲ ಅಯ್ಯಂಗಾರ್ರು”
“ಸರಿ ಬುಡು”
“ಈ ಊರಿಗೆ ನಿಖಿಲ್ ಬತ್ತನೆಅಂತ ಭಾರಿಜನ ಸೇರ್ಯವುರೆ”
“ಅಷ್ಟೊಂದು ಜನ ಬಂದವುರಾ”
“ಪರೆಡ್‍ಗೆ ತವುಜೆಂಡಿಂದ ತ್ರೀ ಅಂಡ್ರೆಡ್‍ವರಿಗೂ ಬಟಾವಡೆ ಆಗ್ಯದೆ ಸಾ”
“ಇನ್ನ ಓಟಿಗೆಷ್ಟು ಕೊಡ್ತಾರಪ್ಪ”
“ಅದ ಹೇಳಕ್ಕೆ ಬರದಿಲ್ಲ ಸಾರ್. ಪ್ರತಿಎಮ್ಮೆಲ್ಲೆಗೂ 25 ಕೋಟಿ ಟಾರ್ಗೆಟ್ ಕೊಟ್ಟವುನಂತೆ ಕುಮಾರಣ್ಣ”
“ಅಂದ್ರೆ ಅವುರು ಕೈಯಿಂದ ಖರ್ಚು ಮಾಡಬೇಕಾ”
“ಪುಟ್ಟರಾಜ ತಮ್ಮಣ್ಣ ನಾವೇ ಹಾಯ್ಕಂಡು ಖರ್ಚು ಮಾಡ್ತಿವಿ ಅಂದಿದ್ದರಂತೆ”
“ಅನ್ನಲೇಬೇಕು ಬುಡು. ಇದೇ ತಮ್ಮಣ್ಣನ ಆಸ್ತಿ ವಿಷಯದಲ್ಲಿ ಮಾದೇಗೌಡ್ರು ಹಿಂದೆನೆ ಹೋರಾಡಿದ್ರು”
“ಮಾದೇಗೌಡ ಬುಡಿ ಸಾ. ಅವುನು ಮಾತಾಡಿದ್ರೆ ಅಂಬರೀಶು “ಲೇ ಮುದುಕ ಸುಮ್ಮನಿರು ಇಲ್ಲ ಅಂದ್ರೆ ನಿನ್ನ  ಕತ್ತಿಸಗತಿನಿ ಅಂತಿದ್ನಂತೆ”
“ತಮಾಸಿಗೆ ಅಂಗಂತಿದ್ರು”
“ತಮಾಸಿನೆ ಆದ್ರು ಈ ಮುದುಕ ಹಾಳಾದನಲ್ಲ ಸಾ”
“ಏನು ಹಾಳಾಗಿಲ್ಲ. ಚುನಾವಣೆ ಕರ್ಚಿಗೆ ದುಡ್ಡು ಕೇಳ್ಯವುರೆ ಅಷ್ಟೆ”
“ಮಾದೇಗೌಡ ಪುಟ್ಟರಾಜನ್ನ ಕೇಳಿದಕ್ಕಿಂತ, ಕುಮಾರಣ್ಣನ್ನ ಕೇಳಬೇಕಾಗಿತ್ತು ಸಾ”
“ಕುಮಾರಣ್ಣ ಯಮ್ಮೆಲ್ಲೆಗಳಿಗೆ ವಯಿಸಿಬುಟ್ಟವುನೆ”
“ಮಗನ್ನ ಗೆಲ್ಲಿಸಿಕೊಂಡು ಬರೊ ಜವಾಬ್ದಾರಿಯ ಎಮ್ಮೆಲ್ಲೆಗಳೇ ವಯಿಸಿಕೊಂಡವಂತಲ್ಲ ಸಾ. ಪಾಪ ಆ ಹುಡುಗನಿಗೆ ಬಾಸಣ ಬರವಿಲ್ಲ”
“ವ ಪರವಾಗಿಲ್ಲ ಮಾತಾಡ್ತನೆ”
“ಏನು ಮಾತಾಡ್ತನೆ ಸಾ. ನಾನು ಕುಮಾರಸ್ವಾಮಿ ಹೊಟ್ಟೆಲುಟ್ಟಕ್ಕೆ ಪುಣ್ಯ ಮಾಡಿದ್ದೆಅಂತದೆ.ನಮ್ಮಪ್ಪ ಮಂಡ್ಯಕೆಎಂಟು ಸಾವುರ ಕೋಟಿ ಕೊಟ್ಟವುನೆ ಅಂತದೆ. ನಮ್ಮ ಪಾರ್ಟಿ ಕಾರ್ಯಕರ್ತರಿಗೆ ಯಾರಾದ್ರು ಮೈ ಮುಟ್ಟಿದ್ರೆ ಹುಶಾರು ಅಂದರೆ. ಎಲ್ಲಿತ್ತು ಈ ಕರ್ಮ”
“ಇನ್ನು ಮುಂದೈತೆ ನಿಮಗ್ಯಲ್ಲ”
“ಯಾಕೊ ಅಂಗೆ ಕಾಣ್ತದೆ ಸಾ. ಈ ದ್ಯಾವೇಗೌಡ ಮಕ್ಕಳು ಮರಿನ್ಯಲ್ಲ ರಾಜಕಾರಣಕ್ಕೆ ತರದೇ ಆಗಿದ್ರೆ, ಅವುಕೆ ಒಳ್ಳೆ ಮಾತು, ನಡವಳಿಕೆ, ವಿದ್ಯೆ, ಬುದ್ಧಿ, ಕಲಿಸಿ ಕಳಿಸಬೇಕಾಗಿತ್ತು ಸಾ”
“ದ್ಯಾವೇಗೌಡ್ರೆ ಅಂಗಿದ್ದ ಮೇಲೆ ಅವುಕೆಲ್ಲಿ ಕಲಿಸ್ಯಾರು”
“ಅದು ಸರಿನೆ ಬುಡಿ, ಗೌಡ್ರು ಪಾರ್ಟಿ ಸಿದ್ಧಾಂತಕ್ಕೆ ಒಗ್ಗಿಕಳೊ ಬದ್ಲು ಪಾರ್ಟಿನೆತನಿಗೆ ಬೇಕಾದಂತೆ ಬಗ್ಗಿಸಿಗಂಡ್ರು”
“ಪರವಾಗಿಲ್ಲ ಗೌಡ್ರು ಬಗ್ಗೆ ತಿಳಿಕಂಡಿದ್ದಿ”
“ಯಾವುದಾದ್ರು ಯೂನಿವರ್ಸಿಟಿ ಪರಮಿಷನ್ ಕೊಟ್ರೆ ಡಾಕ್ಟರೇಟ್ ಮಾಡನ ಅಂತ ಇದ್ದಿನಿ ಸಾ”
“ಹಂಪೆ ಯೂನಿವರ್ಸಿಟಿಲಿ ನೊಂದಾಯಿಸಿ ಮಾಡು”
“ಹಂಪೆ ಅಂದೇಟಿಗೆ ಗೆಪ್ತಿಗೆ ಬತ್ತು ಸಾ. ಅಲ್ಲೊಬ್ಬಳು ಮಲ್ಲಿಕಾಗಂಟಿ ಅಂತ ಇದ್ಲು ಈಗ್ಲು ಇದ್ದಳಾ”
“ಇಲ್ಲ ಹೋದ್ಲು. ವಿಶಭಟ್ಟಗೊತ್ತ ನಿಂಗೆ”
“ಗೊತ್ತು ಸಾ. ಇಲ್ಲೆ ನಮ್ಮ ನಾಗ್ತಳ್ಳಿ ಚಂದ್ರನ ಬಗ್ಗೆ ಮಾತಾಡಕ್ಕೆರ ಬಂದಿದ್ದ. ಹುಟ್ಟ ಕಳ್ಳಿದ್ದಂಗಿದ್ದ”
“ಅವುನ್ನ ಈ ನಿಮ್ಮಗಂಟೆ ಸಮಾರಂಭಕ್ಕೆ ಕರೆದಿದ್ಲು”
“ಕರಿಬಾರ್ದ”
“ಕಳ್ಳನಂಗಿದ್ದ ಅಂತಿ ಕರಿಬಾರ್ದ ಅಂತಿ ಯಲ್ಲಯಾ. ಆ ಹುಟ್ಟು ಸುಳ್ಳಪ್ಪ ಕ್ಯಟ್ಟಚೆಡ್ಡಿ”
“ಚೆಡ್ಡಿಲಿ ವಳ್ಳೆ ಚೆಡ್ಡಿನೂ ಇದ್ದವಾ”
“ಅವೆ ಆದ್ರೆ ಇವುನು ಮಾತ್ರ ವಿಶಪಾತಕ .ಇಂಥೊನ್ನ ಆ ಗಂಟಿ ಸಮಾರಂಬಕ್ಕೆ ಕರಿಸಿಗಂಡು ಸರಿಯಾಗಿ ಉಗಿಸಿಗಂಡ್ಳು”
“ನಾವು ಯಾರ ಪರನೂ ಮಾತಾಡಂಗಿಲ್ಲ ಸಾ. ಯಾರು ಯಾವಟೈಮಲ್ಲಿ ಬದ್ಲಾಯ್ತಾರೊ ಏನೊ”
“ಬದಲಾವಣೆ ಕಾಲದ ನಿಯಮ”
“ಅದು ಮನುಸುನ ಮನಸಿಗೂ ಅನ್ವಯಿಸ್ತದಾ”
“ಊ ಮತ್ತೆ ಕರ್ನಾಟಕದಲ್ಲಿ ಈಗ ಯಂತ ಬದಲಾವಣೆ ಆಗ್ಯದೆಗೊತ್ತ”
“ಗೊತ್ತು ಸಾ. ಈ ಡಿಕೆಶಿ, ಕುಮಾರಸ್ವಾಮಿ ಹೊಡದಾಡಿಕಂಡೆ ಸತ್ತೊಯ್ತರೆ ಅನಕಂಡಿದ್ದೆ. ಈಗ ನೋಡಿದ್ರೆ ದ್ಯಾವೇಗೌಡನ ಹಣೆಗೆ ಅಕ್ಷತೆ ಆಗ್ಯವುರೆ”
“ಅಕ್ಷತೆನೆ”
“ಊ ಸಾ. ಡಿಕೆಶಿ ಹರಸಣ ಅಕ್ಕಿ ಸೇರಿದ್ರೆ ಅಕ್ಷತೆ ಅಂದ. ಅದ ಯಾರಿಗಿಡಬೇಕು ದ್ಯಾವೇಗೌಡನಿಗೆ ತಾನೆ”
“ನಿಜಕಣಯ್ಯ”
“ಇನ್ನ ಅಹಿಂದ ಸಭೆಲಿ ಈ ಸಿದ್ದರಾಮಯ್ಯ ದ್ಯಾವೇಗೌಡರನ್ನ ಬೋದಿದ್ದ ನೋಡಿದ್ರೆ, ಇನ್ನ ಮುಗಿತು. ಈ ಜಲುಮದಲ್ಲಿ ಇವುರು ಹಿಂಗೇ ಸತ್ತೋಯ್ತರೆ ಅನ್ನಕಂಡಿದ್ದೆ. ತೀರ ಇತ್ತೀಚಿಗೆ, ಈ ಸಿದ್ದರಾಮಯ್ಯನಂತ ನೀಚ ಮುಕ್ಯಮಂತ್ರಿನ ನೋಡೇ ಇಲ್ಲ ಅಂದ ದ್ಯಾವೇಗೌಡ, ಈಗ ನೋಡಿದ್ರೆ ಜಾತ್ರೆಗೆ ರೆಡಿಯಾಗಿರೋ ಜೋಡೆತ್ತಿನಂಗೆ ಜ್ವತೆಲೆ ನಿಂತವುರೆ ಇದಕೇನೇಳ್ತಿರಿ”
“ಒಳ್ಳೆ ಬದಲಾವಣೆ”
“ಯಾಕೆ ಸಾರ್’
“ಮೋದಿ ಟೀಮಂಗೆ ಯಲ್ಲ ಒಂದಾಗಬೇಕಾಗಿದೆ”
“ಅದೇನೂ ನಿಜಸಾ. ಈ ಹಾಳು ಚೆಡ್ಡಿಗಳು ಈಗ ಏನೇಳ್ತ ಅವುರೆಗೊತ್ತೆ, ಮೋದಿ ಏನಾರ ಸೋತ್ರೆ ಆ ಪಾಕೀಸ್ತಾನದೋರು ನಮ್ಮ ಮ್ಯಾಲೆ ಬಿದ್ದು ಇಚಿಡಿ ಯಾದೇಸನೆಗೆದ್ದ ಕತ್ತರಂತೆ”
“ವಳ್ಳೆದಾಯ್ತಲ್ಲಯ್ಯ”
“ಇದೇನ್ ಸಾ ಹಿಂಗೇಳ್ತಿರಿ”
“ಪಾಕಿಸ್ತಾನ ದೂರು ಇಂಡಿಯಾಗೆದ್ದು ಕೂಡ್ಳೆ ಅದೂ ಇಂಡಿಯಾ ಆಯ್ತದಲ್ಲಯ್ಯ”
“ಅಂಗಾದ್ರೆ ಗೆದ್ಕಳ್ಳಿ ಬುಡಿ ಸಾ”
“ಥೂತ್ತೆರಿ”
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...