Homeಕರ್ನಾಟಕಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಬೂಸಿ ಬಿಟ್ಟ ಸುವರ್ಣ...

ಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಬೂಸಿ ಬಿಟ್ಟ ಸುವರ್ಣ ಟಿವಿ!

- Advertisement -
| ನಾನುಗೌರಿ ಡೆಸ್ಕ್ |
ಕಳೆದ ನಾಲ್ಕೈದು ವರ್ಷಗಳಿಂದ ಮಾಧ್ಯಮಗಳು ಬಿಜೆಪಿ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿರುವುದು ಸರ್ವೇಸಾಮಾನ್ಯವಾಗೊ ಜಗಜ್ಜಾಹೀರಾಗಿರುವ ಸಂಗತಿ. ಅದರಲ್ಲೂ ಕನ್ನಡ ಮಾಧ್ಯಮಗಳಂತೂ ತಮಗೆ ಸರಿಸಾಟಿ ಯಾರು ಇಲ್ಲವೆಂಬಂತೆ ಮೋದಿಯ ಗುಣಗಾನ ಮಾಡುವುದಕ್ಕೆ ಪೈಪೋಟಿಗೆ ಬಿದ್ದಿವೆ. ಬೆಳಗ್ಗೆಯ ಸಮಯದಲ್ಲಿ ಸುಪ್ರಭಾತ, ಭಕ್ತಿದೇಗುಲಗಳಂತ ಮೌಢ್ಯತುಂಬುವ ಕಾರ್ಯಕ್ರಮ ಕೊಡುತ್ತಿದ್ದ ಮಾಧ್ಯಮಗಳು ಈಗ ಮೋದಿಯ ಮೌಢ್ಯವನ್ನು ತುಂಬಲು ಶುರುವಿಟ್ಟಿವೆ. ಇದರಲ್ಲಿ ಸುವರ್ಣ ಟಿವಿಯಂತೂ ಮೋದಿಯ ಹೆಸರನೇ ಜಪಿಸುವುದರಲ್ಲಿ ತಲ್ಲೀನವಾಗಿವೆ.
ಅಂದಹಾಗೆ ಮೊನ್ನೆ ಸುವರ್ಣ ನ್ಯೂಸ್‍ನಲ್ಲಿ ರಾತ್ರಿಯ ಸುವರ್ಣ ಫೋಕಸ್ ಕಾರ್ಯಕ್ರಮದ ಬಗ್ಗೆ ಬೆಳಗ್ಗೆ ಇಂದಲೇ ಜಾಹೀರಾತು ನೀಡಲು ಆರಂಭಿಸಿದ್ದರು. ಅಂತದ್ದೇನಿದೆ ಎಂದು ನೋಡಿದ್ರೆ ಅದರ ಟೈಟಲ್ ‘ಬಾಹುಬಲಿ ಮೋದಿ’ ಎಂದಿತ್ತು.
ಅಬ್ಬಾ… ನಮ್ ಪ್ರಧಾನಿ ಮೋದಿ ಏನಾದ್ರು ಬಾಹುಬಲಿ 3 ಸಿನಿಮಾ ಏನಾದ್ರು ಮಾಡಿದ್ದಾರ ಅಥವಾ ಬಂಡೆ ಮೇಲೆ ಮಲಗಿ ಯೋಗ ಮಾಡ್ತಿದ್ದೋರು ಆ ಬಂಡೆನೇನಾದ್ರು ಎತ್ತಿ ಹೆಗಲ ಮೇಲೆ ಇಟ್ಕೊಬಿಟ್ರಾ ಅಂತ ರಾತ್ರಿವರೆಗೆ ಕಾದು ನೋಡಿದ್ವಿ. ಅಲ್ಲಿ ನೋಡಿದ್ರ ಆ ವಿಷ್ಯಕ್ಕೂ ಮೋದಿಗೂ ಸಂಬಂಧನೇ ಇರಲಿಲ್ಲ. ಆದ್ರು ಮೋದಿ ಕಾರ್ಯಕ್ರಮದ ಹೀರೋ ಆಗಿದ್ದು ಸೋಜಿಗ.
ಆ ಕಾರ್ಯಕ್ರಮದ ವಿಷಯ ಬಾಹ್ಯಾಕಾಶ ಸಮರದ ಬಗ್ಗೆ ಇತ್ತು. ಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ. ಸೂಪರ್ ಸುಪ್ರಿಂ ರಾಷ್ಟ್ರಗಳಿಗೆ ಮೋದಿ ಹಾಕ್ತಿದ್ದಾರೆ ಚಾಲೆಂಜ್ ಎಂದೆಲ್ಲಾ ಬಿಲ್ಡಪ್ ಕೊಡಲಾಗುತ್ತಿತ್ತು. ನೋಡುಗರಲ್ಲಿ ಅದೆಂತಾ ಬಟನ್ ಇರಬಹುದು ಅದು, ಮೋದಿ ಏನಾದ್ರು ಕಂಡುಹಿಡಿದ್ರಾ ಎಂಬ ಕುತೂಹಲ ಕೆರಳಿಸಿತ್ತು.
ಮೊದಲನೆಯದಾಗಿ ಇಂದು ಎಲ್ಲಾ ದೇಶಗಳು ಯುದ್ಧ ಸಾಮಗ್ರಿಗಳಿಗೆ ಹೆಚ್ಚು ಹಣವನ್ನು ವ್ಯಯಿಸುತ್ತಿರುವುದು ಗೊತ್ತೇ ಇದೆ. ಅದರಲ್ಲಿ ಭಾರತವೂ ಒಂದು. ಭಾರತವು ಪ್ರಾನ್ಸ್, ರಷ್ಯಾದಂತಹ ದೇಶಗಳಿಂದ ಯುದ್ಧ ವಿಮಾನಗಳು, ತಂತ್ರಜ್ಞಾನಗಳನ್ನು ಪಡೆದುಕೊಳ್ಳುತ್ತಿದೆ. ಅಂತದ್ದೇ ವಿಮಾನ ಖರೀದಿಯ ಡೀಲ್‍ನಲ್ಲಿ ಮೋದಿ ಸಾಹೇಬರ ಪಾತ್ರ ಎಂತದ್ದು ಅಂತ ಇಡೀ ಜಗತ್ತೇ ನೋಡಿದೆ.
ಇತ್ತೀಚೆಗೆ ಯುದ್ದ ತಂತ್ರಜ್ಞಾನಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದು ಸಾವಿರಾರು ಕಿಲೋ ಮೀಟರ್ ದೂರದ ಸ್ಥಳಗಳಿಗೆ ತಾವಿರುವ ಜಾಗದಿಂದಲೇ ಬಾಂಬ್ ಉಡಾಯಿಸುವ ತಂತ್ರಜ್ಞಾನ ಬಂದು ವರ್ಷಗಳೇ ಕಳೆದಿವೆ. ಅಂತಹ ತಂತ್ರಜ್ಞಾನವನ್ನು ಭಾರತ ಕೂಡ ಪಡೆದುಕೊಂಡಿದೆ. ಇದರಲ್ಲಿ ಅಂತಹ ತಂತ್ರಜ್ಞಾನವನ್ನು ಕಂಡುಹಿಡಿದವರಿಗೆ ಅದರ ಕ್ರೆಡಿಟ್ ಕೊಡುವುದು ಸಾಮಾನ್ಯ. ಆದರೆ ಒಂದು ಬಟನ್ ಒತ್ತಿದ್ರೆ ಸಾಕು ಅಂತ ಹೇಳುವಾಗ ಅಲ್ಲಿ ಮೋದಿಯ ಪಾತ್ರವೇನೂ ಇಲ್ಲ. ಅದರ ಕ್ರೆಡಿಟ್ ಅಂತಹ ತಂತ್ರ ಸಂಶೋಧಿಸಿದವರಿಗೆ ಸೇರಿದ್ದು.
ಇನ್ನು ಸುಪ್ರಿಂ ರಾಷ್ಟ್ರಗಳಿಗೆ ಚಾಲೆಂಜ್ ಹಾಕ್ತಿದ್ದಾರೆ ಮೋದಿ ಎಂದು ಬೇರೆ ಹೇಳಲಾಗಿತ್ತು. ಇಂದಿಗೂ ನೆರೆ ರಾಷ್ಟ್ರಗಳಿಂದ ಯುದ್ದ ಅಸ್ತ್ರಗಳನ್ನ ಕೊಂಡುಕೊಳ್ಳುತ್ತಿರುವಾಗ, ಇಡೀ ವಿಶ್ವಕ್ಕೆ ಯುದ್ದಾಸ್ತ್ರಗಳನ್ನ ಸಪ್ಲೇ ಮಾಡುತ್ತಿರುವ ರಾಷ್ಟ್ರಗಳಲ್ಲಿ ಅಂತಹ ಅಸ್ತ್ರಗಳು ಅದೆಷ್ಟಿರಬಹುದು ಎಂಬ ಅರಿವೂ ಈ ಸುವರ್ಣ ಚಾನೆಲ್‍ನವರಿಗೆ ಇದ್ದಂತಿಲ್ಲ.
ಯುದ್ದ ವಿಚಾರ ನೋಡುವುದಾದರೆ ಅದರಲ್ಲಿ ಸೈನ್ಯದ ಪಾತ್ರದ ಮಹತ್ವದ್ದು, ಯುದ್ದ ಮಾಡಿ ಎಂದು ಹೇಳುವಷ್ಟು ಸುಲಭವಾಗಿ ಯುದ್ದ ಮಾಡಲು ಸಾಧ್ಯವಿಲ್ಲ. ಆದರೆ ಅಂತಹ ಯುದ್ದವನ್ನು ಗೆಲ್ಲುವ ಸೈನಿಕರಿಗೆ ಆ ಕಾರ್ಯಕ್ರಮದಲ್ಲಿ ಯಾವ ಕ್ರೆಡಿಟ್ಟೂ ಇರಲಿಲ್ಲ.
ಇಷ್ಟೆಲ್ಲಾ ಇದ್ದರೂ ಕೂಡ ಸುವರ್ಣ ಚಾನೆಲ್ ಮೋದಿಯೇ ಯುದ್ಧಭೂಮಿಯಲ್ಲಿ ನಿಂತು ಯುದ್ಧ ಮಾಡಿ ಗೆದ್ದಿರುವಂತೆ, ಮೋದಿಯೇ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಂತೆ ಮೋದಿಯ ಬಗ್ಗೆ ಬಿಲ್ಡಪ್ ಕೊಡುತ್ತಿರುವುದು ಸೈನ್ಯಕ್ಕೆ ಮಾಡುವ ಅವಮಾನವೂ ಹೌದು. ವಿಶ್ಲೇಷಣೆ, ಮೌಲ್ಯಮಾಪನ, ಪ್ರತಿಕಾ ನೀತಿಗಳನ್ನೇ ಮರೆತಿರುವ ಇಂತಹ ನ್ಯೂಸ್ ಚಾನೆಲ್‍ಗಳು ಇನ್ನೆಂಥಾ ಸುದ್ದಿಯನ್ನು ಬಿತ್ತರಿಸಲು ಸಾಧ್ಯ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Super news from Nanu gouri it is an excellent news paper and it should cover all district of karnataka because other papers baise papers and TV channels…..

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...