Homeರಾಜಕೀಯಮೋದಿ ಸರ್ಕಾರದ ಮತ್ತೊಂದು ವಿದ್ರೋಹ

ಮೋದಿ ಸರ್ಕಾರದ ಮತ್ತೊಂದು ವಿದ್ರೋಹ

- Advertisement -
- Advertisement -

2014ರ ಚುನಾವಣೆಯಲ್ಲಿ ಯುಪಿಎ ಸರ್ಕಾರ ಮಕಾಡೆ ಮಲಗಿದ್ದು ತಾನು ಮಾಡಿಕೊಂಡಿದ್ದ ಬ್ರಹ್ಮಾಂಡ ಭ್ರಷ್ಟಾಚಾರಗಳಿಂದ. ಆ ಭ್ರಷ್ಟಾಚಾರಗಳು ಹೊರಬಂದದ್ದು, ಅದೇ ಯುಪಿಎ ತಂದಿದ್ದ ಆರ್‍ಟಿಐ ಕಾಯ್ದೆಯಿಂದ! ಯುಪಿಎದ ಲಫಡಾಗಳು ಅದೇನೆ ಇರಲಿ, ಆರ್‍ಟಿಐನಂತಹ ಕಾಯ್ದೆಯನ್ನು ಜಾರಿಗೆ ತಂದು ಭ್ರಷ್ಟಾಚಾರವನ್ನು ವಿರೋಧಿಸುವ ಭಾರತೀಯರ ಕೈಗೆ ಒಂದು ಮಹಾ ಅಸ್ತ್ರವನ್ನು ಕೊಟ್ಟುಹೋಗಿದೆ. ಸರ್ಕಾರಗಳನ್ನೆ ಬುಡಮೇಲು ಆಗಿಸುವಷ್ಟರ ಮಟ್ಟಿಗೆ ಪ್ರಬಲವಾದ ಕಾಯ್ದೆ ಆರ್‍ಟಿಐ. ಆದರೀಗ ಮೋದಿ ಸರ್ಕಾರ ಅಂತಹ ಜನಪರ ಕಾಯ್ದೆಯನ್ನೇ ರದ್ದು ಮಾಡುವ ಹುನ್ನಾರ ನಡೆಸುತ್ತಿದೆ. ದುರಂತವೆಂದರೆ, ಆರ್‍ಟಿಐ ಕಾಯ್ದೆ ರದ್ದು ಮಾಡಲು ಹೊರಟಿರುವ ಮೋದಿ ಅಧಿಕಾರಕ್ಕೇರಿದ್ದು, ತಾನು ಪ್ರಧಾನಿಯಾದರೆ ಭ್ರಷ್ಟಾಚಾರ ಮಟ್ಟ ಹಾಕುತ್ತೇನೆ, ಬ್ಲ್ಯಾಕ್ ಮನಿ ವಾಪಾಸ್ ತರುತ್ತೇನೆ, ಲಂಚಕೋರರ ಜನ್ಮ ಜಾಲಾಡುತ್ತೇನೆ ಎಂದೆಲ್ಲ ಬಲೂನು ಹಾರಿಸಿಯೇ!
ಆರ್‍ಟಿಐ, ನಿಜಕ್ಕೂ ಭ್ರಷ್ಟಾಚಾರಿಗಳನ್ನು ಕಾಡಿದ ಕಾಯ್ದೆ. ಆದರೆ ಭ್ರಷ್ಟಾಚಾರವನ್ನು ನಿಯಂತ್ರಿಸಲು ಕೇವಲ ಆರ್‍ಟಿಐ ಮಾತ್ರವೇ ಸಾಲದು, ಅದರ ಜೊತೆಗೆ ಲೋಕಪಾಲ್ ಬಿಲ್, ಪಿ ನೋಟ್ (ಪಾರ್ಟಿಸಿಪೇಟರಿ ನೋಟ್) ಪಾರದರ್ಶಕೀಕರಣದಂತಹ ಜಬರ್‍ದಸ್ತ್ ಕಾನೂನುಗಳೂ ಜಾರಿಯಾಗಬೇಕು ಅನ್ನೋದು ಭ್ರಷ್ಟಾಚಾರದ ವಿರುದ್ಧದ ಹೋರಾಡುತ್ತಿದ್ದವರ ಅಳಲಾಗಿತ್ತು. ಮೋದಿಯ ಆಶ್ವಾಸನೆಗಳನ್ನು ಕೇಳಿದ ಜನ, ಬಿಜೆಪಿ ಅಧಿಕಾರಕ್ಕೇರಿದರೆ ಇಂತಹ ಇನ್ನಷ್ಟು ಟಫ್ ಕಾನೂನುಗಳು ಜಾರಿಗೆ ಬಂದು ಭ್ರಷ್ಟರ ಹೆಡೆಮುರಿ ಕಟ್ಟಲಿವೆ ಎಂದು ನಂಬಿದ್ದರೇ ವಿನಾಃ ಇರೋ ಆರ್‍ಟಿಐ ಅಸ್ತ್ರವನ್ನೇ ಕಿತ್ತುಕೊಳ್ಳಲಿದ್ದಾರೆ ಅಂತ ಎಣಿಸಿರಲಿಲ್ಲ.
ವಾಸ್ತವದಲ್ಲಿ ಆರ್‍ಟಿಐ ಎಷ್ಟು ಪರಿಣಾಮಕಾರಿ ಅಸ್ತ್ರವಾಗಿತ್ತೆಂದರೆ, ಹಲವು ಆರ್‍ಟಿಐ ಕಾರ್ಯಕರ್ತರನ್ನು ಭ್ರಷ್ಟರು ಕೊಲೆಯನ್ನೇ ಮಾಡಿಸಿದ್ದಾರೆ. ಹೀಗಾಗಿ ‘ಭ್ರಷ್ಟಾಚಾರ ವಿರೋಧಿ ಹೋರಾಟಗಾರರನ್ನು ರಕ್ಷಿಸುವ ಕಾಯ್ದೆ (Whisಣಟebಟoತಿeಡಿ ಚಿಛಿಣ)’ ತರಬೇಕೆಂಬ ಒತ್ತಾಯ ಕೇಳಿಬಂದಿತು. ಆದರೆ, ಈಗ ಎಲ್ಲವೂ ಉಲ್ಟಾ ಹೊಡೆಯಲು ಶುರುವಾಗಿದೆ. ಆರ್‍ಟಿಐ ಅರ್ಜಿ ಹಾಕಿದ ವ್ಯಕ್ತಿ ಸತ್ತರೆ, ಆ ಅರ್ಜಿಯನ್ನೂ ಕೈ ಬಿಡಬೇಕೆಂಬ ತಿದ್ದುಪಡಿ ತರಲಾಗುತ್ತಿದೆಯೆಂಬ ಸುದ್ದಿ ಇದೆ. ಅಂದರೆ, ನಿಮ್ಮ ಭ್ರಷ್ಟಾಚಾರವನ್ನು ಬಯಲುಗೊಳಿಸಬಹುದಾದ ಅರ್ಜಿ ಬಂದರೆ, ಅರ್ಜಿದಾರನನ್ನೇ ಮುಗಿಸಿ ಎಂಬ ಸಂದೇಶ ಅದರಿಂದ ಹೊರಡುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಪ್ರಧಾನ ಆಪಾದಿತನಾಗಿರುವ ಕೇಸ್ ವಿಚಾರಣೆ ನಡೆಸುತ್ತಿದ್ದ ಸಿಬಿಐ ಜಡ್ಜ್ ಜಸ್ಟೀಸ್ ಲೋಯಾ ನಿಗೂಢವಾಗಿ ಸಾವನ್ನಪ್ಪಿದ್ದು, ಅದೇ ಪ್ರಕರಣದ ಮತ್ತೊಬ್ಬ ಇತ್ತೀಚೆಗೆ ಸಂಶಯಾಸ್ಪದವಾಗಿ ಸತ್ತದ್ದು, ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶದ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ನೂರಕ್ಕು ಹೆಚ್ಚು ಜನ ಸತ್ತು ಹೋದದ್ದನ್ನೆಲ್ಲ ಮೋದಿ ಸರ್ಕಾರ ನಗಣ್ಯವೆಂದು ಪರಿಗಣಿಸುತ್ತಿರೋದು ನೋಡಿದರೆ, ಇಂದು ಆರ್‍ಟಿಐ ಕಾಯ್ದೆಯೇ ಇಲ್ಲವಾಗುವಂತೆ ಅಥವಾ ದುರ್ಬಲವಾಗುವಂತೆ ಮಾಡಲು ಹೊರಟಿದ್ದಾರೆಂಬ ಆರೋಪವು ಗಂಭೀರವಾಗಿ ಕಾಡುತ್ತೆ. ಈ ಆರೋಪ ಮತ್ತು ಹೋರಾಟದ ಕುರಿತ ಕೆಲವು ವಿವರಗಳನ್ನು ನಮ್ಮ ಪತ್ರಿಕೆಯ ಓದುಗರಿಗೆ ತಲುಪಿಸಬೇಕಿದೆ.
ಜುಲೈ 18ರಿಂದ ಆರಂಭವಾಗಿರುವ ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ತಿದ್ದುಪಡಿಯ ನಿರ್ದಿಷ್ಟ ಅಂಶಗಳ ಬಗ್ಗೆ ಸಾರ್ವಜನಿಕವಾಗಿ ಯಾವ ಮಾಹಿತಿಯನ್ನು ಸಹ ಬಿಟ್ಟುಕೊಟ್ಟಿಲ್ಲ. ತಿದ್ದುಪಡಿಯ ಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂಬ ಮನವಿಯನ್ನು ಸರ್ಕಾರ ತಿರಸ್ಕರಿಸಿದೆ. ಮೇಲ್ನೋಟಕ್ಕೆ ಮುಖ್ಯ ಮಾಹಿತಿ ಆಯುಕ್ತರ ಸಂಬಳ ನೀಡುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವ ತಿದ್ದುಪಡಿ ಮಾತ್ರವೇ ಎಂದು ಹೇಳುತ್ತಿದ್ದರೂ, ಅಧಿಕೃತ ಪ್ರಕಟಣೆ ಮಾಡದೇ ಇಷ್ಟೊಂದು ಗೌಪ್ಯತೆ ಕಾಪಾಡುತ್ತಿರುವುದರಿಂದ ಸಹಜವಾಗಿಯೇ ಗುಮಾನಿ ಹೆಚ್ಚಾಗಿದೆ.
ಮಾಹಿತಿ ಹಕ್ಕು ಕಾಯ್ದೆ ನಿಸ್ಸಂಶಯವಾಗಿ ದೇಶದ ಪ್ರತಿಯೊಬ್ಬ ಜನರ ಪ್ರಶ್ನಿಸುವ ಹಕ್ಕನ್ನು ಸಶಕ್ತಗೊಳಿಸುವ ಜನಪರ ಕಾಯ್ದೆಯಾಗಿದೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಸುಮಾರು 6 ಮಿಲಿಯನ್ ಮಾಹಿತಿ ಹಕ್ಕು ಅರ್ಜಿಗಳು ಸಲ್ಲಿಕೆಯಾಗುತ್ತವೆ. ಪ್ರಪಂಚದಲ್ಲೇ ವ್ಯಾಪಕವಾದ ಪಾರದರ್ಶಕತೆಗೆ ಹೆಸರಾದ ಕಾಯ್ದೆ ಇದಾಗಿದೆ. ಬಡ ಗ್ರಾಮೀಣ ಮತ್ತು ನಗರ ನಿವಾಸಿಗಳು ತಮ್ಮ ಮೂಲಭೂತ ಅಧಿಕಾರವನ್ನು ತಿಳಿಯಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆರ್‍ಟಿಐ ಅರ್ಜಿ ಸಲ್ಲಿಸಿದ್ದಾರೆಂದು ರಾಷ್ಟ್ರೀಯ ಮೌಲ್ಯಮಾಪನ ಸರ್ವೇ ಗುರುತಿಸಿದೆ. ಗ್ರಾಮಪಂಚಾಯ್ತಿಯಿಂದ ಹಿಡಿದು ದೇಶದ ದೊಡ್ಡ ದೊಡ್ಡ ಸಂಸ್ಥೆಗಳನ್ನು ಪ್ರಶ್ನಿಸುವ, ಪಾರದರ್ಶಕತೆಯನ್ನು ಕೇಳುವ ಮತ್ತು ಯಾವುದೇ ಮಾಹಿತಿ ಪಡೆಯುವ ಅತ್ಯುತ್ತಮ ಕಾಯ್ದೆ ಇದಾಗಿದೆ.
ಮೊದಲ ಬಾರಿಗೆ 2017ರ ಏಪ್ರಿಲ್‍ನಲ್ಲಿ ಈ ಸರ್ಕಾರವು ತಿದ್ದುಪಡಿಯಾಗಬೇಕಿರುವ ಕರಡು ನಿಯಮಗಳನ್ನು ಮುಂದಿಟ್ಟಿತು. ಅದರಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿ ಒಂದು ವೇಳೆ ಮರಣ ಹೊಂದಿದ್ದಲ್ಲಿ ಆ ಅರ್ಜಿಯನ್ನು ವಜಾ ಮಾಡುವ ಅಧಿಕಾರವನ್ನು ನೀಡುವುದು ಒಂದಾಗಿದೆ. ಎರಡನೆಯದಾಗಿ, ಮಾಹಿತಿ ಆಯೋಗದ ಮುಖ್ಯಾಧಿಕಾರಿಗಳಿಗೆ ಸಂಬಳ ನೀಡುವ ನಿರ್ಧಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಿದರೆ ಆಯೋಗದ ಸ್ವಾಯತ್ತತೆಗೆ ಧಕ್ಕೆ ಬರುವುದಲ್ಲದೇ ಅವರ ಸ್ವಾತಂತ್ರ್ಯವನ್ನು ನಿಯಂತ್ರಣದಲ್ಲಿಟ್ಟಂತಾಗುತ್ತದೆ. ಈಗಾಗಲೇ ರಾಷ್ಟ್ರೀಯ ಭದ್ರತೆ, ವೈಯಕ್ತಿಕ ಗೌಪ್ಯತೆ, ಕಾಪಿರೈಟ್ ಇತ್ಯಾದಿಗಳ ನೆಪದಲ್ಲಿ 2016-17ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಶೇ.35ರಷ್ಟು ಅರ್ಜಿಗಳನ್ನು ಮಾಹಿತಿ ನೀಡದೇ ವಜಾ ಮಾಡಲಾಗಿದೆ. ಇದೇ ರೀತಿಯ ತಿದ್ದುಪಡಿಗಳಾದಲ್ಲಿ ಶೇ.100ರಷ್ಟು ಅರ್ಜಿಗಳು ವಜಾಗೊಳ್ಳುವ ಕಾಲ ದೂರವಿಲ್ಲ.
ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಕಾರ್ಪೊರೇಟ್ ಕುಳಗಳ ದೊಡ್ಡ ದೊಡ್ಡ ಹಗರಣಗಳು ಬೆಳಕಿಗೆ ಬಾರದಂತೆ ತಡೆಯುವ ದುರುದ್ದೇಶದಿಂದಲೇ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಹಲವು ಸಂಘಟನೆಗಳು ಆರೋಪ ಮಾಡಿವೆ. ಜೊತೆಗೆ ದೇಶಾದ್ಯಂತ ನೂರಾರು ಭ್ರಷ್ಟಾಚಾರ ವಿರೋಧಿ ಮತ್ತು ಜನಪರ ಸಂಘಟನೆಗಳು ಈ ತಿದ್ದುಪಡಿಯ ವಿರುದ್ಧ ಹೋರಾಟಕ್ಕಿಳಿದಿವೆ. ಎನ್‍ಸಿಪಿಆರ್‍ಐ (ಜನರ ಮಾಹಿತಿ ಹಕ್ಕಿಗಾಗಿ ರಾಷ್ಟ್ರೀಯ ಆಂದೋಲನ) ಈ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದು ಎನ್‍ಎಪಿಎಂ, ಎಸಿಟಿ, ಎನ್‍ಆರ್‍ಪಿಸಿ, ಎನ್‍ಎಫ್‍ಐಡಬ್ಲೂ ಮುಂತಾದ ಸಂಘಟನೆಗಳು ಜುಲೈ 18ರಂದು ಅಧಿವೇಶನದ ಆರಂಭದ ದಿನವೇ ದೆಹಲಿಯಲ್ಲಿ ಬೃಹತ್ ರ್ಯಾಲಿ ಮತ್ತು ‘ಜನ್ ಮಂಚ್’ ಹೋರಾಟ ನಡೆಸಿವೆ.
ಉದ್ದೇಶಿತ ತಿದ್ದುಪಡಿಯನ್ನು ಕೈಬಿಡುವುದು ಮತ್ತು ವಿಶಲ್ ಬ್ಲೋಯರ್ಸ್ ಪ್ರೊಟೆಕ್ಷನ್ ಆಕ್ಟ್ ತಕ್ಷಣದಿಂದ ಜಾರಿಗೆ ತರುವುದು, ಚುನಾವಣಾ ಬಾಂಡ್ (ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಮಾಹಿತಿಯನ್ನು ಸಾರ್ವಜನಿಕಗೊಳಿಸದಿರುವುದು) ಪದ್ದತಿಯನ್ನು ಕೈಬಿಡುವುದು ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಗೆ ಕೂಡಲೇ ಮುಖ್ಯಸ್ಥರನ್ನು ನೇಮಿಸುವಂತೆ ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದಾರೆ. ಈ ಹೋರಾಟದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರಾಗಿ ದುಡಿದು ಕೊಲೆಯಾದ ನೂರಾರು ಕುಟುಂಬಗಳ ಸದಸ್ಯರು ಭಾಗವಹಿಸುತ್ತಿರುವುದು ಮಹತ್ವದ ಸಂಗತಿಯಾಗಿದೆ. ಇತ್ತೀಚೆಗೆ ಬಿಹಾರದಲ್ಲಿ ಭ್ರಷ್ಟಾಚಾರವನ್ನು ಬಯಲುಗೊಳಿಸಿದ್ದಕ್ಕಾಗಿ ಕೊಲೆಗೀಡಾದ ರಾಜೇಂದರ್ ಸಿಂಗ್ ಮತ್ತು ವಾಲ್ಮೀಕಿ ಯಾದವ್‍ರವರ ಕುಟುಂಬ ಕೂಡ ಜನ್ ಮಂಚ್‍ನಲ್ಲಿ ಭಾಗವಹಿಸಿದೆ. ವ್ಯಾಪಂ ಹಗರಣವನ್ನು ಬೆಳಕಿಗೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದ ಆಶಿಶ್ ಚತುರ್ವೇದಿ ಕೂಡ ಹೋರಾಟದಲ್ಲಿದ್ದಾರೆ.
ಕರ್ನಾಟಕವೂ ಈ ನಿಟ್ಟಿನಲ್ಲಿ ಕ್ರಿಯಾಶೀಲಗೊಳ್ಳುವ ಅಗತ್ಯವಿದೆ.

– ಮುತ್ತುರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...