Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಮೋದಿ, ಹಿಟ್ಲರ್ ಮಾತ್ರವಲ್ಲ ಗೋಬೆಲ್ಸ್ ಕೂಡ....

ಮೋದಿ, ಹಿಟ್ಲರ್ ಮಾತ್ರವಲ್ಲ ಗೋಬೆಲ್ಸ್ ಕೂಡ….

- Advertisement -
- Advertisement -

‘ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಿಂದ ರೈತರನ್ನು ಕಡೆಗಣಿಸಿದೆ, ರೈತ ವಿರೋಧಿ ನೀತಿಯನ್ನು ಪಾಲಿಸಿಕೊಂಡು ಬರುತ್ತಿದೆ, ಕಾಂಗ್ರೆಸ್ ರೈತರನ್ನು ವೋಟ್ ಬ್ಯಾಂಕಾಗಿ ಬಳಸಿಕೊಂಡಿದ್ದಾರೆ. ರೈತರಿಗೆ ಸುಳ್ಳು ಆಶ್ವಾಸನೆಗಳನ್ನಷ್ಟೆ ನೀಡಿದ್ದಾರೆ, ಬಹುಕಾಲದ ರೈತರ ಬವಣೆಯನ್ನು ನಿರ್ಲಕ್ಷಿಸಿದೆ’ ಎಂದು ಮೋದಿಯವರು ಆರೋಪಿಸಿದ್ದಾರೆ. ಇದೀಗ ಮೋದಿ ಸರ್ಕಾರ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾತಾಡುತ್ತಿದೆ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರೈತರ ನೆನಪಾಗುತ್ತದೆ ಮೋದಿ ಸಾಹೇಬರಿಗೆ. ಬೆಂಬಲ ಬೆಲೆ ನಾಲ್ಕು ವರ್ಷಗಳ ಹಿಂದೆಯೇ ಜಾಹೀರು ಮಾಡಿದ್ದರೆ ನಿಜವಾಗಿ ಅವರಿಗೆ ರೈತರ ಬಗೆಗೆ ಕಾಳಜಿ ಇದೆ ಎಂದು ಭಾವಿಸಬಹುದಾಗಿತ್ತು. ಚುನಾವಣೆ ಮುಂದಿಟ್ಟುಕೊಂಡು ಬೆಂಬಲ ಬೆಲೆ ಮಾತಾಡಿ ರೈತರ ಬಾಯಲ್ಲಿ ನೀರೂರುವಂತೆ ಮಾಡಿ ಅವರ ಓಟು ಕೀಳುವ ಈ ತಂತ್ರ ಫಲ ನೀಡುವುದಿಲ್ಲವೆಂದು ಹೇಳಬಯಸುತ್ತೇನೆ.
ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆಂದು, ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುತ್ತೇವೆಂದು ರೈತರಿಗೆ ಆಶ್ವಾಸನೆ ಕೊಟ್ಟು ಗೆದ್ದು ಬಂದ ಮೋದಿ ಸರ್ಕಾರ ಈ ನಾಲ್ಕು ವರ್ಷಗಳಲ್ಲಿ ಮಾಡಿದ್ದೇನು? ಭಾಷಣಗಳನ್ನು ಬಿಟ್ಟರೆ ಬೇರೇನೂ ಇಲ್ಲ. ತಮ್ಮ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಎಲ್ಲೆಡೆ ರೈತರು ಬೀದಿಗಿಳಿದಿದ್ದಾರೆಂಬ ಕಟು ವಾಸ್ತವವನ್ನು ಮನಗಂಡಿರುವ ಮೋದಿಯವರು, ಇನ್ನು ತಮ್ಮ ಮಾಮೂಲಿ ಕಣ್ಕಟ್ಟು ಜಾದೂ ಮಾತುಗಾರಿಕೆ ಮೂಲಕ ಮರುಳು ಮಾಡಲು ಸಾಧ್ಯವಿಲ್ಲವೆಂಬುದನ್ನು ಅರಿತು ದಿಢೀರ್ ರೈತರ ಬಗ್ಗೆ ಕಾಳಜಿ ತೋರುತ್ತಿದ್ದಾರೆಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.
ಮೋದಿಯವರು ಹಿಟ್ಲರ್ ಮಾತ್ರವಲ್ಲ, ಗೋಬೆಲ್ಸ್ ಕೂಡ ಎಂದು ಹೇಳಬೇಕಾಗುತ್ತದೆ. ಪ್ರಚಾರ ಮಾಡುವುದು ಅವರ ಹಕ್ಕು. ಅದರೆ ಅಪಪ್ರಚಾರ ಮಾಡುವುದು ನೀಚತನ. ಮೋದಿಯವರು ಇತಿಹಾಸದ ವಾಸ್ತವಗಳನ್ನು ಮರೆಮಾಚಿ, ಸುಳ್ಳಿನ ಕಂತೆ ಹೆಣೆಯುತ್ತಿದ್ದಾರೆ.
ಕಾಂಗ್ರೆಸ್‍ನ ಸಿ.ಸುಬ್ರಹ್ಮಣ್ಯಂ ವ್ಯವಸಾಯ ಮಂತ್ರಿಗಳಾಗಿದ್ದಾಗ ಭಾರತದಲ್ಲಿ ಹಸಿರುಕ್ರಾಂತಿ ಮತ್ತು ಶ್ವೇತಕ್ರಾಂತಿ ಏಕಕಾಲದಲ್ಲಿ ಆಯಿತು. ವ್ಯವಸಾಯದಲ್ಲಿ ಸುಧಾರಣೆಗಳಾದವು. ಭಾರತದ ತುಂಬಾ ಡ್ಯಾಂಗಳನ್ನು ನಿರ್ಮಿಸಲಾಯಿತು. ಪೋಲಾಗಿ ಸಮುದ್ರಕ್ಕೆ ಸೇರುತ್ತಿದ್ದ ನದಿಗಳ ನೀರನ್ನೆಲ್ಲ ಈ ಅಣೆಕಟ್ಟೆಗಳನ್ನು ಕಟ್ಟುವ ಮೂಲಕ ಸಂಗ್ರಹಿಸಲಾಯಿತು. ಒಣಬೇಸಾಯ ನಡೆಯುತ್ತಿದ್ದ ಕಡೆÀಯಲ್ಲೆಲ್ಲಾ ಗೋಧಿ, ಭತ್ತ, ಕಬ್ಬು ಬೆಳೆಯುವಂತಾಯಿತು. ಒಂದು ಬೆಳೆ ಬೆಳೆಯುತ್ತಿದ್ದ ರೈತರು ವರ್ಷದಲ್ಲಿ 3 ಬೆಳೆ ಬೆಳೆಯತೊಡಗಿದರು. ಆಹಾರ ಪದಾರ್ಥಗಳ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಲಾಯಿತು. ಸಕ್ಕರೆ, ಗೋಧಿಗಳ ರಫ್ತು ವ್ಯಾಪಾರಕ್ಕೂ ಉತ್ತೇಜನ ಸಿಕ್ಕಿತು. ‘ವ್ಯವಸಾಯ ಪ್ರಧಾನವಾದ ಭಾರತ ಆಹಾರ ಪದಾರ್ಥಗಳಿಗಾಗಿ ಜೋಳಿಗೆ ಹಿಡಿದು ಬೇರೆ ದೇಶಗಳ ಕೃಪೆಗಾಗಿ ಕಾಯುವುದು ನಾಚಿಕೆಗೇಡು’ ಎಂದಿದ್ದರು ಮಹಾತ್ಮ ಗಾಂಧಿ. ಈ ಮಾತನ್ನು ಅಂದಿನ ಕಾಂಗ್ರೆಸ್ ಸರ್ಕಾರ ಅಕ್ಷರಶಃ ಪಾಲಿಸಿತ್ತು.
ರೈತನು ಬೆಳೆದ ಆಹಾರ ಪದಾರ್ಥಗಳಿಗೆ ಈ 70 ವರ್ಷಗಳಲ್ಲಿ ಯಾವ ಸರ್ಕಾರವೂ  ಹಾಕಿರಲಿಲ್ಲ ಎಂಬುದು ಕಟು ವಾಸ್ತವ. ಮೋದಿಯವರೇ ನೀವೇ ಹೇಳಿ. ನೀವು ರೈತರಿಗಾಗಿ ಸ್ವರ್ಗವನ್ನೇ ಇಳಿಸಿಬಿಡುವ ಮಾತನ್ನಾಡುತ್ತಿದ್ದೀರಿ. 70 ವರ್ಷಗಳಿಂದ ಯಾರೂ ಹಾಕದೇ ಇದ್ದ ಜೆಸಿಯಾವನ್ನು ರೈತ ಹಿತೈಷಿಗಳೆನ್ನುವ ನೀವು ರೈತರ ಮೇಲೆ ಹೇರಿದ್ದೀರಿ. ಆಡುವುದೊಂದು ಮಾಡುವುದೊಂದು ನಿಮಗೆ ರಕ್ತಗತ ಆದಂತಿದೆ. ಮೊದಲು ರೈತರು ಬೆಳೆದ ಆಹಾರ ಧಾನ್ಯಗಳ ಮೇಲೆ ಹಾಕಿರುವ ಜೆಸಿಯಾವನ್ನು ತೆಗೆದುಹಾಕಿ ನಿಮ್ಮ ಪಾಪದ ಪ್ರಾಯಶ್ಚಿತ್ತ ಮಾಡಿಕೊಳ್ಳಿ.
ಮೋದಿಯವರೇ ನಿಮ್ಮ ಫಸಲ್ ಬೀಮಾ ಯೋಜನೆಯಿಂದ ಖಾಸಗಿ ಜೀವವಿಮಾ ಸಂಸ್ಥೆಗಳಿಗೆ ಲಾಭವಾಗುತ್ತಿದೆಯೇ ಹೊರತು ವಿಮೆಮಾಡುವ ರೈತರಿಗಲ್ಲ. ‘ಮೋದಿ ಪ್ರಧಾನಿಯಾಗುವುದಕ್ಕೆ ಮೊದಲು ಭಾರತ ಕತ್ತಲೆಯ ದೇಶವಾಗಿತ್ತು. ಅವತಾರ ಪುರುಷರಂತೆ ಬಂದ ಮೋದಿಯವರಿಂದ ಭಾರತ ಬೆಳಕು ಕಂಡಿತು. ಅಭಿವೃದ್ಧಿ ದಾಂಗುಡಿ ಇಡುತ್ತಿದೆ’ ಎಂದು ನಿಮ್ಮ ಪ್ರಚಾರ ಪಡೆ ಅಪ್ಪಟ ಸುಳ್ಳು ಹೇಳುತ್ತಿದೆ.
ಮೋದಿಯವರೇ, ನೀವು ಪ್ರಧಾನಿಯಾಗುವ ಎಷ್ಟೋ ವರ್ಷ ಮೊದಲು ಭಾರತಾದ್ಯಂತ ಶ್ವೇತಕ್ರಾಂತಿಯಾದದ್ದು ನಿಮ್ಮ ಗಮನಕ್ಕೆ ಬರಲೇ ಇಲ್ಲವೇ? ಹಾಲಿನಕ್ರಾಂತಿ ನಿಮ್ಮ ಗುಜರಾತಿನಿಂದಲೇ ಆರಂಭವಾದದ್ದು ಎಂಬ ಸಂಗತಿಯೂ ನಿಮಗೆ ಗೊತ್ತಿಲ್ಲವೇ? ಕುರಿಯನ್‍ರವರು ಹಾಲಿನಕ್ರಾಂತಿಗೆ ಕಾರಣಧೂತರು. ಅಮುಲ್ ಹಾಲಿನಪುಡಿ ವಿಶ್ವಕ್ಕೆಲ್ಲ ಸರಬರಾಜಾದದ್ದನ್ನು ಮರೆಮಾಚುವ ನೀವು ದುಷ್ಟ ರಾಜಕಾರಣಿಗಳಲ್ಲವೇ? ಗುಜರಾತಿಗೆ ಹಾಲಿನಕ್ರಾಂತಿ ವರವಾಯಿತೆಂಬುದನ್ನು ತಿಳಿಯದಷ್ಟು ಅಜ್ಞಾನಿಗಳೇ ನೀವು? ರಾಜ್ಯದ ಮರಳುಗಾಡು ಜಿಲ್ಲೆಗಳ ಜನರಿಗೆ ವರವಾದ ಕುರಿಯನ್‍ರವರ ಈ ಯೋಜನೆಯನ್ನು ಮುಚ್ಚಿಹಾಕುವ ನೀವು ಕೃತಘ್ನರಲ್ಲವೇ?
* * * * * *
ಮೋದಿಯವರು ಜವಾಹರಲಾಲ್‍ನೆಹರು ಬಗ್ಗೆ ಹೋದಲ್ಲಿ ಬಂದಲ್ಲೆಲ್ಲಾ ಲಘುವಾಗಿ ಮಾತನಾಡುತ್ತಿದ್ದಾರೆ ಮತ್ತು ಕಾಂಗ್ರೆಸ್ಸನ್ನು ನಾಮಾವಶೇಷ ಮಾಡುತ್ತೇವೆಂದು ಪದೇಪದೇ ಘೋಷಿಸುತ್ತಿದ್ದಾರೆ. ಈ ಎರಡೂ ವಿಷಯಗಳ ಬಗ್ಗೆ ನಮ್ಮ ಆಕ್ಷೇಪಣೆ ಇದೆ.
ಜವಾಹರಲಾಲ್‍ನೆಹರು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರು. ಅವರ ತಂದೆ ಮೋತಿಲಾಲ್‍ನೆಹರು ಹೆಸರಾಂತ ವಕೀಲರು. ವಕೀಲ ವೃತ್ತಿಯಿಂದ ಸಾಕಷ್ಟು ಆಸ್ತಿ ಸಂಪಾದಿಸಿದ್ದರು. ಜವಾಹರಲಾಲ್‍ಗೆ ಇಂಗ್ಲೆಂಡಿನಲ್ಲಿ ಶಿಕ್ಷಣ ದೊರೆಯಿತು. ಜವಾಹರಲಾಲ್ ಪ್ರಸಿದ್ಧ ವಾಗ್ಮಿ, ಒಳ್ಳೆಯ ಬರಹಗಾರ, ಸಾಹಸಿ ಆಗಿದ್ದರು. ಆದರೆ ಮೋದಿಯವರು ತಮ್ಮ ಸಭೆಗಳಿಗೆ ಜನರನ್ನು ಸೇರಿಸಲು, ಜನರಿಗೆ ಹಣಕೊಟ್ಟು ಬಸ್‍ಗಳಲ್ಲಿ ಕರೆದುಕೊಂಡು ಬರುವ ಸಂಪ್ರದಾಯವನ್ನು ಅಳವಡಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಚಳುವಳಿ ನಡೆಯುತ್ತಿದ್ದಾಗ ಜನರು ತಾವೇತಾವಾಗಿ ಸಾರ್ವಜನಿಕ ಸಭೆಗಳಿಗೆ ಬರುತ್ತಿದ್ದರು. ಗಾಂಧೀಜಿ, ನೆಹರು, ವಲ್ಲಭಾಯ್‍ಪಟೇಲ್ ಇವರ ಸಾರ್ವಜನಿಕ ಸಭೆಗಳಿಗೆ ಜನಸಾಗರವೇ ಬಂದು ಸೇರುತ್ತಿತ್ತು. ಅಂದಿನ ನಾಯಕರು ಸಾರ್ವಜನಿಕ ಸಭೆಗಳಿಗೆ ಅವರ ಮಾತುಗಳನ್ನು ಕೇಳಲು ಮೈಲುಗಟ್ಟಲೆ ನಡೆದುಕೊಂಡು ಜನ ಬರುತ್ತಿದ್ದರು. ಗಾಂಧೀಜಿ ರೈಲ್ವೆ ಪ್ರವಾಸ ಕೈಗೊಂಡರು ಎಂದರೆ ಪ್ರತಿ ರೈಲ್ವೆ ಸ್ಟೇಷನ್‍ನಲ್ಲೂ ಸಹಸ್ರಾರು ಜನ ಜಮಾಯಿಸಿ ಬಿಡುತ್ತಿದ್ದರು. ಗಾಂಧೀಜಿ ರೈಲಿನಿಂದ ಇಳಿದು ಬಂದು ಭಾಷಣ ಮಾಡಿಯೇ ಹೋಗಬೇಕಾಗಿತ್ತು. ಬ್ರಿಟಿಷ್ ಸರ್ಕಾರದ ಕೈಲಿ ರೈಲ್ವೆ ಇಲಾಖೆ ಇದ್ದರೂ ಗಾಂಧೀಜಿಗಾಗಿ ಪ್ರತಿ ಸ್ಟೇಷನ್‍ನಲ್ಲಿ 10-15 ನಿಮಿಷ ರೈಲು ನಿಲ್ಲುವುದು ಅನಿವಾರ್ಯವಾಗಿತ್ತು.
ಗಾಂಧೀಜಿ ದೇಶದ ಚುಕ್ಕಾಣಿ ಹಿಡಿದ ಒಡನೆ ಅವರೊಂದಿಗೆ ಅನೇಕ ರಾಜ್ಯ ಮಟ್ಟದ ನಾಯಕರು ಅವರೊಡನೆ ಕೈಜೋಡಿಸಿದರು. ಅಂತಹ ಚುಂಬಕಶಕ್ತಿ ಗಾಂಧೀಜಿಯವರದಾಗಿತ್ತು. ಹಾಗೆ ಆಕರ್ಷಿತರಾದವರಲ್ಲಿ ಜವಾಹರಲಾಲ್‍ರೂ ಒಬ್ಬರು.
ಜವಾಹರಲಾಲ್‍ನೆಹರು ಅವರಿಗೆ ಮೊದಲ ಬಾರಿಗೆ ಸೆರೆಮನೆಗೆ ಹೋಗುವ ಸಂದರ್ಭ ಒದಗಿತ್ತು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಮಗ ಸೆರೆಮನೆಯಲ್ಲಿ ಎಷ್ಟು ಕಷ್ಟಪಡುವನೋ ಎಂಬ ಚಿಂತೆ ಅವರ ತಂದೆ ಮೋತಿಲಾಲರಿಗೆ. ಇಡೀ ರಾತ್ರಿ ಅವರಿಗೆ ನಿದ್ರೆ ಬರಲಿಲ್ಲ. ಮಗನ ಬಗೆಯ ಚಿಂತೆ ಸರಿಹೊತ್ತಿನಲ್ಲಿ ಅವರು ಪಲ್ಲಂಗ ಬಿಟ್ಟು ಬಂದು ನೆಲದಲ್ಲಿ ಮಲಗಿದರಂತೆ. ನನ್ನ ಮಗನಿಗೆ ಇದೆಂಥ ಪರಿಸ್ಥಿತಿ ಉಂಟಾಗಿರಬಹುದೋ ಎಂದು ಚಿಂತಿಸಿದರಂತೆ ಮುಂದೆ ಮೋತಿಲಾಲರು ಕಾಂಗ್ರೆಸ್ ಸೇರಿದರು. ಸೆರೆಮನೆಯ ವಾಸವನ್ನು ಅನುಭವಿಸಿದರು. ಮೋತಿಲಾಲರ ಮೊದಲ ಮಗಳು ವಿಜಯಲಕ್ಷ್ಮಿ ಪಂಡಿತ್ ಇನ್ನೊಬ್ಬ ಮಗಳು ಕೃಷ್ಣಹತೀಸಿಂಗ್ ಮತ್ತು ಅವರ ಗಂಡಂದಿರು ಎಲ್ಲರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದರು. ದೇಶವನ್ನು ದಾಸ್ಯದಿಂದ ಬಿಡಿಸಲು ನೆಹರು ಮನೆತನದವರೆಲ್ಲ ದುಡಿದಿದ್ದಾರೆ. ಅವರು ತಮ್ಮ ಬಲಿದಾನಗಳಿಂದ ಗಳಿಸಿದ ಸ್ವತಂತ್ರ ಭಾರತಕ್ಕೆ, ದೇಶಕ್ಕಾಗಿ ಏನೂ ಮಾಡದ ಪಕ್ಷವೊಂದರ ವ್ಯಕ್ತಿ ದೇಶದ ಪ್ರಧಾನಿ ಆದದ್ದು ಒಂದು ದುರಂತ. ಬಂಜೆಗೇನು ಗೊತ್ತು ಗರ್ಭಿಣಿ ಹೆಣ್ಣಿನ ಬವಣೆ ನೋವು?
ಪುಕ್ಕಟೆ ಅಧಿಕಾರ ಗಿಟ್ಟಿಸಿದ ಮೋದಿ ಜವಾಹರಲಾಲರನ್ನು ವಾಚಾಮಗೋಚರವಾಗಿ ಬಯ್ಯುತ್ತಾರೆ. ಸ್ವತಂತ್ರಸಂಗ್ರಾಮದ ಕಾಲದಲ್ಲಿ ನೆಹರು ಅವರು ಅತಿ ಹೆಚ್ಚು ಕಾಲ ಸೆರೆಮನೆಯಲ್ಲಿದ್ದರು ಎಂಬುದನ್ನು ಪ್ರಧಾನಿ ಮೋದಿ ಮೊದಲು ಅರಿಯಬೇಕು. ಜವಾಹರಲಾಲ್‍ನೆಹರು ವಿಶ್ವದ ಎಲ್ಲ ರಾಷ್ಟ್ರ ನಾಯಕರಿಗೂ ಪರಿಚಿತರಾಗಿದ್ದರು. ಸ್ವಾತಂತ್ರಪ್ರಾಪ್ತಿಯಾಗುವ ಮೊದಲೇ ಎಷ್ಟೋ ಅಂತರಾಷ್ಟ್ರೀಯ ಸಭೆ ಸಮ್ಮೇಳನಗಳಿಗೆ ಅವರನ್ನು ಆಹ್ವಾನಿಸಲಾಗುತ್ತಿತ್ತೆಂಬುದೇ ಅವರ ವಿದ್ವತ್ತಿಗೆ ಸಾಕ್ಷಿ.
ಜವಾಹರಲಾಲ್‍ನೆಹರು ಪ್ರಧಾನಿಯಾದ ಮೇಲೆ ಒಂದು ನಿರ್ಧಾರಕ್ಕೆ ಬಂದರು. ಆಗ ವಿಶ್ವದ ಎರಡು ಶಕ್ತಿಕೇಂದ್ರಗಳಾಗಿದ್ದ ಅಮೆರಿಕ ಮತ್ತು ರಷ್ಯಗಳ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿತ್ತು. ಆಗ ಮಹಾತ್ಮಗಾಂಧಿ ಮತ್ತು ಜವಾಹರಲಾಲ್‍ನೆಹರು ವಿಶ್ವಶಾಂತಿಗಾಗಿ ಯುದ್ಧವಿಲ್ಲದ ವಿಶ್ವ ಸ್ಥಾಪನೆಗಾಗಿ ಪಣ ತೊಟ್ಟರು. ಶಕ್ತಿ ಬಣಗಳ ತೆಕ್ಕೆಗೆ ಬೀಳದೆ ಭಾರತವನ್ನು ಕೊನೆಯವರೆಗೂ ಅಲಿಪ್ತ ರಾಷ್ಟ್ರವನ್ನಾಗಿ ಉಳಿಸಿಕೊಂಡು ಬಂದರು. ಅವರು ಅಧಿಕಾರದಲ್ಲಿರುವವರೆಗೂ ಭಾರತ ಬಾಂಬ್ ತಯಾರಿಸಲು ಅವಕಾಶ ಕೊಡಲಿಲ್ಲ.
ಇಂತಹ ಒಬ್ಬ ಉದಾತ್ತ ನೆಹರುರನ್ನು ಕುರಿತು ಹಗುರವಾಗಿ ಮಾತನಾಡುವ ಮೂಢರನ್ನು ನಾವು ನಮ್ಮ ಪ್ರಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದೇವಲ್ಲಾ ಎಂದು ನಮ್ಮನ್ನು ನಾವೇ ಶಪಿಸಿಕೊಳ್ಳಬೇಕು.
ಕಾಂಗ್ರೆಸ್ಸನ್ನು ಹೇಳಹೆಸರಿಲ್ಲದಂತೆ
ಮಾಡುತ್ತೇವೆ ಎನ್ನುವ ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವದಲ್ಲಿ ಲವಲೇಶವೂ ನಂಬಿಕೆ ಇಲ್ಲ ಎಂಬುದು ಸುಸ್ಪಷ್ಟ. ಒಂದು ಪಕ್ಷ ಇನ್ನೊಂದು ಪಕ್ಷವನ್ನು ಚುನಾವಣೆಯಲ್ಲಿ ಪರಾಭವಗೊಳಿಸುತ್ತೇನೆ ಎನ್ನುವುದು ಅದರ ಹಕ್ಕು. ಆದರೆ ತನಗಾಗದ ಒಂದು ಸಂಸ್ಥೆಯನ್ನು ನಿರ್ನಾಮ ಮಾಡುತ್ತೇನೆ ಎನ್ನುವುದು ಸರ್ವಾಧಿಕಾರಿಯ ಧೋರಣೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರ ಅಪಾಯಕಾರಿ ಧೋರಣೆ.

 

 – ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...