Homeಚಳವಳಿಅಮೃತಭೂಮಿಯಲ್ಲಿ ಬಿತ್ತಿದ ಬೀಜಗಳು  ನಾಡೆಲ್ಲಾ ಪಸರಿಸಲಿ....

ಅಮೃತಭೂಮಿಯಲ್ಲಿ ಬಿತ್ತಿದ ಬೀಜಗಳು  ನಾಡೆಲ್ಲಾ ಪಸರಿಸಲಿ….

- Advertisement -
ರೈತ ಚಳವಳಿಯ ಪುನಶ್ಚೇತನ ಆಗಬೇಕೆಂದರೆ ಯುವಜನರು ದೊಡ್ಡ ಪ್ರಮಾಣದಲ್ಲಿ ಸಂಘಟನೆಯೊಳಕ್ಕೂ ಬರಬೇಕು; ರೈತ ಚಳವಳಿಯೊಳಕ್ಕೂ ಬರಬೇಕು. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ನಡೆಸಿದ ಆತ್ಮಾವಲೋಕನವು ಹೀಗಿತ್ತು. ರೈತ ಚಳವಳಿಗೆ ಬಂದ ಹೊಸಬರಿಗೆ ರೈತ ಸಂಘದ ಮೂಲ ಸಿದ್ಧಾಂತಗಳನ್ನು ಹೇಳಿಕೊಡುವ ಕೆಲಸ ನಡೆಯಲಿಲ್ಲ. ಹಾಗಾಗಿಯೇ ಎಂಬತ್ತರ ದಶಕದ ತಲೆಮಾರಿಗಿದ್ದ ಸೈದ್ಧಾಂತಿಕ ಸ್ಪಷ್ಟತೆ ನಂತರದ ದಶಕಗಳಲ್ಲಿ ಬಂದ ತಲೆಮಾರುಗಳಲ್ಲಿ ಕಾಣಲಿಲ್ಲ. ವಿಚಾರದ ಮೇಲೆ ಕಟ್ಟುವ ಹೊಸ ತಲೆಮಾರಿನ ರೈತ ಚಳವಳಿ ಕೇವಲ ಸಂಘರ್ಷದ ಜೊತೆಗೆ ರಚನಾತ್ಮಕ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳಬೇಕೆಂಬುದು ಈ ಹೊತ್ತಿನ ತುರ್ತಾಗಿದೆ.
ಆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಅಮೃತಭೂಮಿಯಲ್ಲಿ “ಹೊಸ ತಲೆಮಾರಿನ ರೈತ ಚಳವಳಿ ಕಟ್ಟಲು” ಎಂಬ ಮೂರು ದಿನಗಳ ಯುವ ರೈತರ ಅಧ್ಯಯನ ಶಿಬಿರ ನಡೆಸಲಾಯಿತು. ಕೃಷಿಗೆ ಅಂಟಿಕೊಂಡಿರುವ ರೋಗಗಳಿಗೆ ಪರಿಹಾರದ ಹುಡುಕಾಟ ಶಿಬಿರದಲ್ಲಿ ನಡೆದಿತ್ತು. ಭಾಗವಹಿಸಿದ್ದ ಸಕ್ರಿಯ ರೈತ ಯುವ ಕಾರ್ಯಕರ್ತರಲ್ಲಿ ಕೃಷಿಯನ್ನು ಪುನರ್ ಸ್ಥಾಪಿಸಲೇಬೇಕೆಂಬ ಹೊಸ ಕನಸು ಎದ್ದು ಕಾಣುತ್ತಿತ್ತು. ಇದಾಗಬೇಕಾದರೆ ಇಂದಿನ ಯುವ ಸಮೂಹ ವೈಚಾರಿಕ ಸ್ಪಷ್ಟತೆಯೊಂದಿಗೆ ಚಳವಳಿ ರೂಪಿಸಿದಲ್ಲಿ ಮಾತ್ರ ಸಾಧ್ಯ ಎಂಬ ಎಚ್ಚರದೊಂದಿಗೆ ಈ ಮೂರೂ ದಿನಗಳು ಕಳೆದವು.
ಪ್ರೊ.ನಂಜುಂಡಸ್ವಾಮಿ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ, ಸಸಿನೆಡುವುದರ ಮುಖಾಂತರ ಶಿಬಿರಕ್ಕೆ ಅಧಿಕೃತವಾಗಿ ಕೆ.ಟಿ.ಗಂಗಾದರ್‍ರವರು ಚಾಲನೆ ನೀಡಿದರು. ಚುಕ್ಕಿ ನಂಜುಂಡಸ್ವಾಮಿರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಶಿಬಿರದ ಹಿಂದಿನ ಉದ್ದೇಶ ಮತ್ತು ಅಗತ್ಯತೆಯ ಕುರಿತು ಆಶಯ ನುಡಿಯನ್ನು ತಿಳಿಸಿದರು.
ಹಿರಿಯರಾದ ಕೆಸಿ ಬಸವರಾಜು, ಬಡಗಲಪುರ ನಾಗೇಂದ್ರ, ಚಾಮರಸ ಮಾಲೀ ಪಾಟೀಲ್ ರೈತ ಚಳವಳಿಯ ಇತಿಹಾಸದ ಕುರಿತು ಮಾತನಾಡಿದರು. ಅನಂತರ ಆಹಾರ ತಜ್ಞರಾದ  ಕೆ.ಸಿ ರಘುರವರು ಮಾತನಾಡಿ ಪ್ರಸ್ತುತ ಸರ್ಕಾರದ ನೀತಿಗಳು ದೇಶದ ಆರ್ಥಿಕ ನೀತಿಯನ್ನು ದಿವಾಳಿಯೆಡೆಗೆ ಕೊಂಡೊಯ್ಯುತ್ತಿವೆ. ಆದ್ದರಿಂದ ರೈತರು ವಲಯಾದಾರಿತ ಮತ್ತು ಪಾರಂಪರಿಕ ಕೃಷಿಯನ್ನು ಅನುಸರಿಸಿ, ಆಹಾರ ಸಾರ್ವಭೌಮತ್ವವನ್ನು ಹೇಗೆ ಹೊಂದಬಹುದೆಂದು ವಿವರಿಸಿದರು.
ಕೃಷಿಯಲ್ಲಿ ಮಹಿಳೆಯರು ಎನ್ನುವ ವಿಷಯದ ಕುರಿತು ಮಾತನಾಡುತ್ತಾ ಸಾಮಾಜಿಕ ಹೋರಾಟಗಾರ್ತಿ ಕವಿತ ಕುರಗಂಟಿ ಭಾರತದಲ್ಲಿ ಕೃಷಿ ಎಂದ ಕೂಡಲೆ ಮಹಿಳೆಯರು ಕೊಡುಗೆ ಪರಿಗಣನೆಗೆ ಬರುವುದೇ ಇಲ್ಲ. ರೈತನೆಂದರೆ ಪುರುಷ ಎಂಬ ಮನಸ್ಥಿತಿ ಬಹುತೇಕರದ್ದು ಭಾರತದ ಮಹಿಳೆ ಕೃಷಿಕರ ಬಗ್ಗೆಯೂ ಚರ್ಚೆಗಳು ನಡೆಯುವುದು ಅಗತ್ಯ ಮತ್ತು ಭಾರತ ಕೃಷಿ ನಿಂತಿರುವುದು ಮಹಿಳಾ ಕೃಷಿಕರ ಕೊಡುಗೆಯಿಂದ ಇನ್ನಾದರೂ ನಾವು ರೈತ ಮಹಿಳೆಯರ ಪಾತ್ರವನ್ನು  ಗುರುತಿಸಿ ಅವರಿಗೆ ಸಮಾನ ಹಕ್ಕುಗಳು ಹಾಗೂ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.
ರಾಸಾಯನಿಕ ಕೃಷಿ ಸೃಷ್ಟಿಸಿರುವ ದುರಂತಗಳು ಕೃಷಿ ಕ್ಷೇತ್ರಕ್ಕಿರುವ ಸವಾಲುಗಳು ಮತ್ತು ಅವುಗಳನ್ನು ಹಿಮ್ಮೆಟ್ಟಿಸಿ ನಾವು ಹೇಗೆ ಕೃಷಿಯಲ್ಲಿ ಪರ್ಯಾಯಗಳನ್ನು ಸೃಷ್ಟಿಸಿ ಸ್ವಾವಲಂಬನೆ ಸಾಧಿಸಬಹುದು ಎನ್ನುವುದರ ಕುರಿತು ಸುರೇಶ್ ಕೆ.ಪಿ ಅವರು ರೈತ ಸಂಘದ ಯುವ ಕೃಷಿಕರೊಂದಿಗೆ ಚರ್ಚೆ ನಡೆಸಿದರು.
ಇಂದಿನ ಕಾಲಘಟ್ಟಕ್ಕೆ ಹೊಸ ಆಶಯ ವಿಷಯಗಳೊಂದಿಗೆ ರಚನಾತ್ಮಕವಾಗಿ ಹೊಸ ತಲೆಮಾರಿನ ರೈತ ಚಳವಳಿಯನ್ನು ಹೇಗೆ ಕಟ್ಟಿಕೊಂಡು ಮುನ್ನಡೆಯಬೇಕು ಎನ್ನುವುದರ ಬಗ್ಗೆ ಕುರಿತು ಮಲ್ಲಿಗೆ ಸಿರಿಮನೆಯವರು ಯುವ ಕೃಷಿಕರೊಂದಿಗೆ ಸಂವಾದ ನಡೆಸಿದರು. ದೇಶದಲ್ಲಿ ಉಲ್ಬಣಿಸುತ್ತಿರುವ ನಿರುದ್ಯೋಗ ಸಮಸ್ಯೆ ಕುರಿತು ಮಾತನಾಡುತ್ತಾಮುತ್ತುರಾಜ್ ಅವರು  ಗ್ರಾಮೀಣ ಪ್ರದೇಶದಲ್ಲೆ ಉದ್ಯೋಗ ಸೃಷ್ಟಿಸುವ ಸಾಧ್ಯತೆಗಳ ಬಗ್ಗೆ ಇಂದಿನ ಯುವಜನಾಂಗ  ಚಿಂತಿಸಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು. ಜನಶಕ್ತಿಯ ಡಾ.ವಾಸು ಹೊಸ ತಲೆಮಾರಿನ ರೈತ ಚಳವಳಿ ಕಟ್ಟಲು ನಾವೇನು ಮಾಡಬೇಕು ಎನ್ನುವುದರ ಕುರಿತು ಸವಿವರವಾಗಿ ಮಾತನಾಡುತ್ತಾ ಮುಂದಿನ ರೋಪುರೇಷೆಗಳನ್ನು ತಯಾರಿಸುವ ಕುರಿತು ಚರ್ಚೆ ನಡೆಸಿದರು.
ರೈತ ಸಂಘ ಉದಯವಾದ ಸಮಯದಲ್ಲಿ ರೈತ ಸಂಘಟನೆಯೊಳಗೆ ಸಾಂಸ್ಕೃತಿಕ ವಿಭಾಗ ತುಂಬಾ ಸಕ್ರಿಯವಾಗಿತ್ತು. ಅಂದು ಯುವ ರೈತ ಹೋರಾಟಗಾರರು ರಚಿಸಿದ ಅನೇಕ ಹಾಡುಗಳು ರೈತಸಂಘದೊಳಗೆ ಕ್ರಾಂತಿಯ ಕಿಚ್ಚನ್ನು ಹೆಚ್ಚಿಸಿದ್ದವು. ಈ ಗೀತೆಗಳು ಅಂದಿನ ಸಮಯದಲ್ಲಿ ರೈತ ಸಂಘದ ಅವಿಭಾಜ್ಯ ಅಂಗವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಮರೆಯಾಗಿದ ಅವನ್ನು ಮತ್ತೆ ನಮಗೆ ತಲುಪಿಸಿಕೊಡುವ ಕೆಲಸವನ್ನು ಹಿರಿಯರಾದ ಹಿ.ಶಿ.ರಾಮಚಂದ್ರಗೌಡರು ಶಿಬಿರದಲ್ಲಿ ಹಾಡು ಹಾಡಿಸುವ ಮೂಲಕ ಮಾಡಿದರು. ಶಿಬಿರದಲ್ಲಿ ಕುವೆಂಪು ಅವರ ರೈತಗೀತೆ -ನೇಗಿಲಯೋಗಿ,  ಮೈಲಾರಪ್ಪ ಸಗರ ಅವರು ಬರೆದಿರುವ ‘ನಮ್ಮ ಹಸಿರು ಬಾವುಟ’ ಹಾಗೂ ‘ಹಾರಿಸೋಣ ಕರ್ನಾಟಕ ರಾಜ್ಯ ರೈತ ಬಾವುಟ’ ಮತ್ತು ಹಿ.ಶಿ.ರಾಮಚಂದ್ರಗೌಡರ ‘ಬಾ ತಂಗಿ ಬಾರವ್ವ’, ‘ಕೂತಂಡವರ ಮಾತು ಕೇಳಿ’, ‘ಏನು ಮಾಡಿ ಏನು ಬಂತಣ್ಣ’ ಗೀತೆಗಳನ್ನು ಶಿಬಿರಾರ್ಥಿಗಳು  ಅಬ್ಯಾಸಿಸಿ ಹಾಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಕೈಗೊಂಡ ದೇಶ ನಿರ್ಮಾಣದ ನಿರ್ಣಯಗಳು:
– ರೈತ ಯುವ ವಿಭಾಗವನ್ನು ರಾಜ್ಯಾದ್ಯಂತ ಬಲವಾಗಿ ಮತ್ತು ಪರಿಣಾಮಕಾರಿಯಾಗಿ ಕಟ್ಟಲು ನಿರ್ಧರಿಸಲಾಗಿದೆ.
– ಆರು ತಿಂಗಳ ಕಾಲ ವ್ಯವಸ್ಥಿತ ತಯಾರಿ ನಡೆಸಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ತಂಡಗಳನ್ನು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಹಂಗಾಮಿ ಸಮಿತಿಗಳನ್ನು ರಚಿಸುವುದು.
– ಆ ತಯಾರಿಯ ನಂತರ 2019 ಫೆಬ್ರವರಿ 13ರ ಪ್ರೋ.ಎಂ.ಡಿ.ಎನ್ ಜನ್ಮದಿನದಂದೂ ರಾಜ್ಯ ರೈತ ಸಂಘದ ಅಡಿಯಲ್ಲಿ ಅದರ ಅಂಗ ಸಂಘಟನೆಯಾಗಿ ಉದ್ಘಾಟಿಸುವುದು.
– ಹಂಗಾಮಿ ರಾಜ್ಯಸಮಿತಿಯನ್ನು ಆಯ್ಕೆಮಾಡಲಾಯಿತು.
– ಮೊದಲ ಹಂತದಲ್ಲಿ ಎಲ್ಲಾ ವಿಭಾಗಮಟ್ಟದಲ್ಲಿ ರಾಜ್ಯ ಶಿಬಿರದ ಮಾದರಿಯಲ್ಲಿ ಶಿಬಿರಗಳನ್ನು ಆಯೋಜಿಸುವುದು.
– ರಾಜ್ಯದ ವಿವಿಧ ಗ್ರಾಮಗಳಲ್ಲಿ ಉದ್ಯೋಗ ಸೃಷ್ಠಿಯ ಸಾಧ್ಯತೆಗಳು ಮತ್ತು ರಚನಾತ್ಮಕ ಕಾರ್ಯಕ್ರಮಗಳ ಸಾಧ್ಯತೆಗಳನ್ನು ಗುರುತಿಸಿ ಅದನ್ನು ಜಾರಿಮಾಡಲು ಬೇಕಾದ ತಯಾರಿಯನ್ನು ನಡೆಸುವುದು.
– ಗ್ರಾಮೀಣ ಭಾಗದ ಯುವತಿಯರು ಹಾಗೂ ಯುವಕರನ್ನು ಸಂಘಟಿಸುವುದಲ್ಲದೆ ರಾಜ್ಯದ ನಗರಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಆಸಕ್ತರು ಪರಿಣಿತರು ಮತ್ತು ಸಂಘಟನೆಗಳನ್ನು ನಮ್ಮ ಬಳಗವಾಗಿ ಒಳಗೊಳ್ಳುವ ಪ್ರಯತ್ನ ಮಾಡಲಾಗುವುದು.
– ನವಾಜ್ ಮತ್ತು ಮಹೇಶ್ 
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...