Homeರಾಜಕೀಯಶಿವಮೊಗ್ಗದಲ್ಲೊಂದು ಶಂಕರಪ್ಪನ ಸಾಹಿತ್ಯ ಸಮಾರಂಭ

ಶಿವಮೊಗ್ಗದಲ್ಲೊಂದು ಶಂಕರಪ್ಪನ ಸಾಹಿತ್ಯ ಸಮಾರಂಭ

- Advertisement -
- Advertisement -

 ವರದಿಗಾರ

ಶಿವಮೊಗ್ಗದಲ್ಲಿ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿನ ಕವಿಗೋಷ್ಠೀಯಲ್ಲಿ ಉದಯೋನ್ಮುಖ ಕವಿಯೊಬ್ಬ ಓದಿದ ಕವನ ಹೀಗಿತ್ತು.
‘ಪತ್ರಿಕೆಗಳಲ್ಲಿ ಸಾಹಿತ್ಯ’
ಪ್ರಜಾವಾಣಿ, ಉದಯವಾಣಿ ವಿಜಯ ಕರ್ನಾಟಕ
ವಿಜಯವಾಣಿ ಸಂಯುಕ್ತ ಕರ್ನಾಟಕ
ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಸುದ್ದಿ
ಎರಡನೇ ಪುಟದಲ್ಲಿ ಸ್ಥಳೀಯ ಸುದ್ದಿ
ಮೂರನೇ ಪುಟದಲ್ಲಿ ಜಿಲ್ಲೆಯ ಸುದ್ದಿ
ನಾಲ್ಕನೇ ಪುಟದಲ್ಲಿ ರಾಜ್ಯದ ಸುದ್ದಿ
ಐದನೇ ಪುಟದಲ್ಲಿ ವಾಚಕರವಾಣಿ
ಆರನೇ ಪುಟದಲ್ಲಿ ದೇಶದ ಸುದ್ದಿ
ಏಳನೇ ಪುಟದಲ್ಲಿ ಕ್ರೀಡೆ ಮತ್ತು
ಕಡೇ ಪುಟದಲ್ಲಿ ಅದೇ ಸುದ್ದಿ
ಜೊತೆಗೆ ಮಹಿಳಾ ಪುಟ ವಾಣಿಜ್ಯ ಪುಟ….
ಹೀಗೆ ಪತ್ರಿಕೆಗಳ ಪುಟ ತಿರುವಿ ಕವನ ಬರೆದುಕೊಂಡು ಬಂದ ಆ ಕವಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಬಿ. ಶಂಕರಪ್ಪನ ಕೃಪೆಯಿಂದ ಮಾತ್ರ ಕವಿಗೋಷ್ಠಿಗಳಲ್ಲಿ ಓದುವಂತಹ ಕವನ. ನಗು ಕಳೆದುಕೊಂಡ ಸಾಹಿತ್ಯ ಲೋಕದ ಜನ ನಗಬೇಕಾದರೆ ಈ ಶಂಕರಪ್ಪ ಏರ್ಪಡಿಸುವ ಸಾಹಿತ್ಯ ಸಭೆಗೆ ಬಂದು ಕೂತರಾಯ್ತು. ಹೊಟ್ಟೆ ತುಂಬ ನಕ್ಕು ಹೋಗಬಹುದು. ಈ ನಗು ಅವರ ಆಹ್ವಾನ ಪತ್ರಿಕೆ ನೋಡಿದಾಗಲೇ ಶುರುವಾಗುತ್ತದೆ. ಶಿವಮೊಗ್ಗದ ಓಟರ್ ಲಿಸ್ಟಿನಂತೆ ಕಾಣುವ ಆಹ್ವಾನ ಪತ್ರಿಕೆಯಲ್ಲಿ ಶಂಕರಪ್ಪನಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಸಮ್ಮೇಳನದಲ್ಲಿ ಉಪಸ್ಥಿತರು ಎಂದು ಅವರು ಪ್ರಿಂಟಾಕಿಸಿದ ಜನ, ಇತ್ತ ಸುಳಿದು ನೋಡುವುದಿಲ್ಲ. ಒಂದು ಇಸಮೂ ತಪ್ಪದಂತೆ ಬರುವವರಾರೆಂದರೆ ಈ ಸಮ್ಮೇಳನದಲ್ಲಿ ಕವನ ಓದುವ ಜನ ಮತ್ತು ಸನ್ಮಾನಿತರು. ಈ ಸನ್ಮಾನಿತರ ಸಂಖ್ಯೆ ಹೇಗಿರುತ್ತದೆಂದರೆ ಅವರೆಲ್ಲಾ ಎದ್ದು ವೇದಿಕೆಗೆ ಹೋದರೆ ಅರ್ಧ ರಂಗಮಂದಿರವೇ ಖಾಲಿ ಬೀಳುತ್ತದೆ. ಇನ್ನುಳಿದ ಜನ ಯಾರೆಂದರೆ ಸನ್ಮಾನಿತರ ಸಂಬಂಧಿಗಳು. ಇಂತಹ ಆಧ್ವಾನದ ಜಾತ್ರೆಗೆ ಸದ್ಯ ಒಳ್ಳೆಯ ವಿದ್ವಾಂಸ ಜಯಪ್ರಕಾಶ ಮಾವಿನಕುಳಿ ಅಧ್ಯಕ್ಷರಾಗಿದ್ದರು. ಇವರ ಸಾಧನೆ ದೊಡ್ಡದಿದೆ. ಆದ್ದರಿಂದ ಅವರ ಭಾಷಣ ಕೂಡ ಸಾಹಿತ್ಯಾಸಕ್ತರನ್ನು ತಟ್ಟುವಂತಿತ್ತು.

ಇನ್ನು ಉದ್ಘಾಟನಾ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ. ಸಿದ್ಧರಾಮಯ್ಯನವರು ಕನ್ನಡ ಭಾಷೆಗೆ ಒದಗಿರುವ ದುರ್ಗತಿಯನ್ನು ಮನಮುಟ್ಟುವಂತೆ ಹೇಳಿದರೆ ಸಮಾರೋಪ ನುಡಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಕನ್ನಡ ಭಾಷೆ ನಶಿಸಿಹೋಗುತ್ತಿರುವ ಬಗ್ಗೆ ಯಾವುದೇ ಅನುಮಾನವನ್ನು ಇಟ್ಟುಕೊಳ್ಳಬೇಡಿ, ನಮ್ಮ ಭಾಷೆ ಹೊರಟುಹೋಗುತ್ತೆ ಎಂದು ಹೆದರಿಸಿದರು. ಯಾಕೆಂದರೆ ಅವರು ಕೊಟ್ಟ ಸಾಕ್ಷ್ಯಾಧಾರಗಳು ದಂಗುಬಡಿಸುವಂತಿದ್ದವು. ಅದೇ ಸಮಾರೋಪದಲ್ಲಿ ಮಾತನಾಡಿದ ಡಿ.ಎಚ್.ಶಂಕರಮೂರ್ತಿ ಎಂಬ ಶೆಟ್ಟರು, ಥೇಟ್ ಶೆಟ್ಟರಂತೆಯೇ ಮಾತನಾಡಿದರು. ಕನ್ನಡ ಭಾಷೆ ನಿರ್ಲಕ್ಷ್ಯದ ಬಗ್ಗೆ ಮನಮುಟ್ಟುವಂತೆ ಮಾತನಾಡುವ ಇವರ ಮಗ ಇಂಗ್ಲಿಷ್ ಕಾನ್ವೆಂಟ್ ನಡೆಸುತ್ತಾನೆ. ಬಿ.ಜೆ.ಪಿ.ಗಳು ಶಿವಮೊಗ್ಗದಲ್ಲಿ ಬಂದ್ ಕರೆಕೊಟ್ಟರೆ ಶಂಕರಮೂರ್ತಿ ವ್ಯವಹಾರಗಳು ಬಂದ್ ಆಗುವುದಿಲ್ಲ. ಇಷ್ಟರ ನಡುವೆ ಬಿ.ಜೆ.ಪಿ. ಸಿದ್ಧಾಂತಕ್ಕೆ ಬದ್ಧರಾಗಿ ಬದುಕುತ್ತಿರುವ ಇವರನ್ನು ಕಂಡರೆ ಶಂಕರಪ್ಪನ ಟೀಮಿಗೆ ಎಲ್ಲಿಲ್ಲದ ಅಕ್ಕರೆ. ಅದಕ್ಕೆ ಕ್ಲೀಷೆಯಾಗುವಷ್ಟು ಉಪಮೆ ಬಳಸುತ್ತವೆ.

ಇನ್ನು ಒಂದು ಗೋಷ್ಠಿಗೆ ಸ್ವಾಗತ ಕೋರುವ, ವಂದನಾರ್ಪಣೆ ಮಾಡುವ, ನಿರೂಪಣೆ ಮಾಡುವ ಹಾಗೂ ನಿರ್ವಹಣೆ ಮಾಡುವವರೆಂದು ನಾಲ್ಕು ಜನರಿರುತ್ತಾರೆ. ಇವರು ತಿಂದುಬಿಟ್ಟ ಸಮಯದಲ್ಲಿ ಅತಿಥಿಗಳಿಗೆ ಉಳಿಯುವುದು ಹತ್ತು ನಿಮಿಷಗಳು. ಆದರೂ ಜಗಮೊಂಡರಾದ ಭಾಷಣಕಾರರು ಮೂರನೇ ಚೀಟಿ ಬಂದರೂ ಜಗ್ಗುವುದಿಲ್ಲ. ಹೀಗಾಗಿ ಹನ್ನೆರಡು ಗಂಟೆಗೆ ಆರಂಭವಾಗುವ ಗೋಷ್ಠಿ ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗುತ್ತಿತ್ತು. ಗೋಷ್ಠಿಯ ವೇದಿಕೆಯಲ್ಲಿರಬೇಕಾದ ಅತಿಥಿಗಳು ಒಂದೇ ಉಸಿರಿಗೆ ಅನ್ನಸಾರು ಸಾಪಳಿಸಿ ಓಡುತ್ತಿದ್ದರು. ನಿರೂಪಕ, ಊಟ ಮಾಡಿದ ಕೂಡಲೇ ಒಳ ಬಂದು ಕೂರಬೇಕೆಂದು ಎಷ್ಟು ಗೋಗರೆದರೂ ಮೂವತ್ತು ಜನಕ್ಕಿಂತ ಜಾಸ್ತಿಯಿರುತ್ತಿರಲಿಲ್ಲ. ಇದನ್ನು ಗ್ರಹಿಸಿಯೊ ಏನೊ ಶಂಕರಪ್ಪ ಶಾಲೆ ಹುಡುಗರನ್ನು ತರಿಸಿದ್ದರು. ಅವು ಮರಕ್ಕೆ ತುಂಬಿದ ಹಕ್ಕಿಗಳಂತೆ ಕಲರವಿಸುತ್ತಿದ್ದವೇ ಹೊರತು ಯಾರ ಮಾತಿಗೂ ಕಿವಿಗೊಡಲಿಲ್ಲ. ಚೆನ್ನಾಗಿ ಮಾತನಾಡಿದ ಜಯಪ್ರಕಾಶ್ ಮಾವಿನಕುಳಿ ಮಾತಿಗೂ ಕಿವಿಗೊಡಲಿಲ್ಲ. ಯಾಕೆಂದರೆ ಸಾಹಿತ್ಯ ಪರಿಷತ್ ಅಧ್ಯಕ್ಷನೂ ಯಾರ ಮಾತಿಗೂ ಕಿವಿಗೊಡುವುದಿಲ್ಲ. ಜಿಲಾ,್ಲ ತಾಲ್ಲೂಕು ಮತ್ತು ಹೋಬಳಿ ಸಮ್ಮೇಳನಗಳು ಹೀಗೆ ಅಧ್ವಾನವಾಗಿರುವುದಕ್ಕೆ ಕಾರಣ ಈ ಸಂಸ್ಥೆಗಳು ಅಸಾಹಿತ್ಯಿಕ ವ್ಯಕ್ತಿಗಳ ಕೈಗೆ ಸಿಕ್ಕಿ ಹೋಗಿರುವುದೇ ಆಗಿದೆ.

ಈ ಅಸಾಹಿತ್ಯಿಕ ವ್ಯಕ್ತಿಗಳು ರಾಜಕಾರಣಿಗಳೂ ಆಗಿದ್ದಾರೆ. ಶಿವಮೊಗ್ಗದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ನೋಡಿದರೆ ಎಲ್ಲಾ ರಾಜಕಾರಣಿಗಳ ಪರಿಷೆಯಂತಿದೆ. ಸುದೈವಕ್ಕೆ ಬೆಳಗಾಂ ಅಧಿವೇಶನದ ಕಾರಣಕ್ಕೆ ಕರ್ಣಕಠೋರ ಭಾಷಣದಿಂದ ಜನ ಮುಕ್ತರಾದರು. ಅದೇನೆ ಆಗಲಿ, ಲಂಗುಲಗಾಮಿಲ್ಲದೇ ಹೋಗುತ್ತಿರುವ ಈ ಸಾಹಿತ್ಯ ಸಮ್ಮೇಳನಗಳು ಹೇಗೆ ಜರುಗಬೇಕೆಂಬ ನಿಯಮಗಳು ರೂಪುಗೊಳ್ಳದಿದ್ದರೆ ಇವು ಇನ್ನೂ ಅದ್ವಾನವೆದ್ದು ಹೋಗುತ್ತವೆ. ಅದಷ್ಟೆ ಅಲ್ಲ. ಕೆಲವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಈಗಾಗಲೇ ಭ್ರಷ್ಟರಾಗಿ ಹೋಗಿದ್ದಾರೆ. ಯರ್ರಿಸ್ವಾಮಿ ಎಂಬ ಜಿಲ್ಲಾಧ್ಯಕ್ಷ ಯಾವ ಕಾರ್ಯಕ್ರಮವನ್ನೂ ಮಾಡದೇ ಬೆಂಗಳೂರಿನ ಚಾಮರಾಜಪೇಟೆ ಸಮೀಪದಲ್ಲೇ ಹದಿನಾಲ್ಕು ಲಕ್ಷದ ಬೋಗಸ್ ಬಿಲ್ ತಯಾರಿಸಿಕೊಟ್ಟು ಕೋರ್ಟು ಮೆಟ್ಟಿಲು ಹತ್ತುವಂತಾಗಿದ್ದನ್ನು ಜಿಲ್ಲಾಧಿಕಾರಿಗಳು ಹೇಳಿದರು. ಮಂಡ್ಯದವನೊಬ್ಬ ಹಣ ಸಂಗ್ರಹಿಸಿಕೊಂಡು ವಿಧಾನಸಭೆ ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದ. ನಾಡಿನ ತುಂಬ ಇಂತಹ ಭ್ರಷ್ಟರು ಸಾಹಿತ್ಯ ವೇದಿಕೆ ಆಕ್ರಮಿಸಿಕೊಂಡಿದ್ದಾರೆ. ಈ ಶಂಕರಪ್ಪ ಈ ತರವಲ್ಲದಿದ್ದರೂ ಸ್ವಜಾತಿ ಪ್ರೇಮಿ. ರಾಜಕಾರಣಿಗಳನ್ನ ಕಂಡರೆ ಅತೀವ ಪ್ರೀತಿ. ವಿದ್ವಾಂಸರನ್ನ ಕಂಡರೆ ಅಷ್ಟಕ್ಕಷ್ಟೆ. ಅದೇನೆ ಆದರೂ ಇವರ ವರಸೆಗಳು ಸಾಕು ಎನ್ನಿಸುತ್ತವೆ. ಇವರ ಆಯ್ಕೆಗೆ ಶ್ರಮಿಸಿದ್ದ ಡಾ. ಶ್ರೀಕಂಠ ಕೂಡಿಗೆಯವರು ವೇದಿಕೆಯಲ್ಲೇ ಇವರ ನಡವಳಿಕೆ ಖಂಡಿಸುವಂತಹ ಮಾತನಾಡಿದ್ದನ್ನು ಎಲ್ಲಾ ಸಾಹಿತಿಗಳು ಅನುಸರಿಸಿದರೆ ಈ ಸಾಹಿತ್ಯ ಪರಿಷತ್ ಸುಧಾರಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...