Homeರಾಜಕೀಯಶಿವಮೊಗ್ಗದಲ್ಲೊಂದು ಶಂಕರಪ್ಪನ ಸಾಹಿತ್ಯ ಸಮಾರಂಭ

ಶಿವಮೊಗ್ಗದಲ್ಲೊಂದು ಶಂಕರಪ್ಪನ ಸಾಹಿತ್ಯ ಸಮಾರಂಭ

- Advertisement -
- Advertisement -

 ವರದಿಗಾರ

ಶಿವಮೊಗ್ಗದಲ್ಲಿ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿನ ಕವಿಗೋಷ್ಠೀಯಲ್ಲಿ ಉದಯೋನ್ಮುಖ ಕವಿಯೊಬ್ಬ ಓದಿದ ಕವನ ಹೀಗಿತ್ತು.
‘ಪತ್ರಿಕೆಗಳಲ್ಲಿ ಸಾಹಿತ್ಯ’
ಪ್ರಜಾವಾಣಿ, ಉದಯವಾಣಿ ವಿಜಯ ಕರ್ನಾಟಕ
ವಿಜಯವಾಣಿ ಸಂಯುಕ್ತ ಕರ್ನಾಟಕ
ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಸುದ್ದಿ
ಎರಡನೇ ಪುಟದಲ್ಲಿ ಸ್ಥಳೀಯ ಸುದ್ದಿ
ಮೂರನೇ ಪುಟದಲ್ಲಿ ಜಿಲ್ಲೆಯ ಸುದ್ದಿ
ನಾಲ್ಕನೇ ಪುಟದಲ್ಲಿ ರಾಜ್ಯದ ಸುದ್ದಿ
ಐದನೇ ಪುಟದಲ್ಲಿ ವಾಚಕರವಾಣಿ
ಆರನೇ ಪುಟದಲ್ಲಿ ದೇಶದ ಸುದ್ದಿ
ಏಳನೇ ಪುಟದಲ್ಲಿ ಕ್ರೀಡೆ ಮತ್ತು
ಕಡೇ ಪುಟದಲ್ಲಿ ಅದೇ ಸುದ್ದಿ
ಜೊತೆಗೆ ಮಹಿಳಾ ಪುಟ ವಾಣಿಜ್ಯ ಪುಟ….
ಹೀಗೆ ಪತ್ರಿಕೆಗಳ ಪುಟ ತಿರುವಿ ಕವನ ಬರೆದುಕೊಂಡು ಬಂದ ಆ ಕವಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಬಿ. ಶಂಕರಪ್ಪನ ಕೃಪೆಯಿಂದ ಮಾತ್ರ ಕವಿಗೋಷ್ಠಿಗಳಲ್ಲಿ ಓದುವಂತಹ ಕವನ. ನಗು ಕಳೆದುಕೊಂಡ ಸಾಹಿತ್ಯ ಲೋಕದ ಜನ ನಗಬೇಕಾದರೆ ಈ ಶಂಕರಪ್ಪ ಏರ್ಪಡಿಸುವ ಸಾಹಿತ್ಯ ಸಭೆಗೆ ಬಂದು ಕೂತರಾಯ್ತು. ಹೊಟ್ಟೆ ತುಂಬ ನಕ್ಕು ಹೋಗಬಹುದು. ಈ ನಗು ಅವರ ಆಹ್ವಾನ ಪತ್ರಿಕೆ ನೋಡಿದಾಗಲೇ ಶುರುವಾಗುತ್ತದೆ. ಶಿವಮೊಗ್ಗದ ಓಟರ್ ಲಿಸ್ಟಿನಂತೆ ಕಾಣುವ ಆಹ್ವಾನ ಪತ್ರಿಕೆಯಲ್ಲಿ ಶಂಕರಪ್ಪನಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಸಮ್ಮೇಳನದಲ್ಲಿ ಉಪಸ್ಥಿತರು ಎಂದು ಅವರು ಪ್ರಿಂಟಾಕಿಸಿದ ಜನ, ಇತ್ತ ಸುಳಿದು ನೋಡುವುದಿಲ್ಲ. ಒಂದು ಇಸಮೂ ತಪ್ಪದಂತೆ ಬರುವವರಾರೆಂದರೆ ಈ ಸಮ್ಮೇಳನದಲ್ಲಿ ಕವನ ಓದುವ ಜನ ಮತ್ತು ಸನ್ಮಾನಿತರು. ಈ ಸನ್ಮಾನಿತರ ಸಂಖ್ಯೆ ಹೇಗಿರುತ್ತದೆಂದರೆ ಅವರೆಲ್ಲಾ ಎದ್ದು ವೇದಿಕೆಗೆ ಹೋದರೆ ಅರ್ಧ ರಂಗಮಂದಿರವೇ ಖಾಲಿ ಬೀಳುತ್ತದೆ. ಇನ್ನುಳಿದ ಜನ ಯಾರೆಂದರೆ ಸನ್ಮಾನಿತರ ಸಂಬಂಧಿಗಳು. ಇಂತಹ ಆಧ್ವಾನದ ಜಾತ್ರೆಗೆ ಸದ್ಯ ಒಳ್ಳೆಯ ವಿದ್ವಾಂಸ ಜಯಪ್ರಕಾಶ ಮಾವಿನಕುಳಿ ಅಧ್ಯಕ್ಷರಾಗಿದ್ದರು. ಇವರ ಸಾಧನೆ ದೊಡ್ಡದಿದೆ. ಆದ್ದರಿಂದ ಅವರ ಭಾಷಣ ಕೂಡ ಸಾಹಿತ್ಯಾಸಕ್ತರನ್ನು ತಟ್ಟುವಂತಿತ್ತು.

ಇನ್ನು ಉದ್ಘಾಟನಾ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ. ಸಿದ್ಧರಾಮಯ್ಯನವರು ಕನ್ನಡ ಭಾಷೆಗೆ ಒದಗಿರುವ ದುರ್ಗತಿಯನ್ನು ಮನಮುಟ್ಟುವಂತೆ ಹೇಳಿದರೆ ಸಮಾರೋಪ ನುಡಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಕನ್ನಡ ಭಾಷೆ ನಶಿಸಿಹೋಗುತ್ತಿರುವ ಬಗ್ಗೆ ಯಾವುದೇ ಅನುಮಾನವನ್ನು ಇಟ್ಟುಕೊಳ್ಳಬೇಡಿ, ನಮ್ಮ ಭಾಷೆ ಹೊರಟುಹೋಗುತ್ತೆ ಎಂದು ಹೆದರಿಸಿದರು. ಯಾಕೆಂದರೆ ಅವರು ಕೊಟ್ಟ ಸಾಕ್ಷ್ಯಾಧಾರಗಳು ದಂಗುಬಡಿಸುವಂತಿದ್ದವು. ಅದೇ ಸಮಾರೋಪದಲ್ಲಿ ಮಾತನಾಡಿದ ಡಿ.ಎಚ್.ಶಂಕರಮೂರ್ತಿ ಎಂಬ ಶೆಟ್ಟರು, ಥೇಟ್ ಶೆಟ್ಟರಂತೆಯೇ ಮಾತನಾಡಿದರು. ಕನ್ನಡ ಭಾಷೆ ನಿರ್ಲಕ್ಷ್ಯದ ಬಗ್ಗೆ ಮನಮುಟ್ಟುವಂತೆ ಮಾತನಾಡುವ ಇವರ ಮಗ ಇಂಗ್ಲಿಷ್ ಕಾನ್ವೆಂಟ್ ನಡೆಸುತ್ತಾನೆ. ಬಿ.ಜೆ.ಪಿ.ಗಳು ಶಿವಮೊಗ್ಗದಲ್ಲಿ ಬಂದ್ ಕರೆಕೊಟ್ಟರೆ ಶಂಕರಮೂರ್ತಿ ವ್ಯವಹಾರಗಳು ಬಂದ್ ಆಗುವುದಿಲ್ಲ. ಇಷ್ಟರ ನಡುವೆ ಬಿ.ಜೆ.ಪಿ. ಸಿದ್ಧಾಂತಕ್ಕೆ ಬದ್ಧರಾಗಿ ಬದುಕುತ್ತಿರುವ ಇವರನ್ನು ಕಂಡರೆ ಶಂಕರಪ್ಪನ ಟೀಮಿಗೆ ಎಲ್ಲಿಲ್ಲದ ಅಕ್ಕರೆ. ಅದಕ್ಕೆ ಕ್ಲೀಷೆಯಾಗುವಷ್ಟು ಉಪಮೆ ಬಳಸುತ್ತವೆ.

ಇನ್ನು ಒಂದು ಗೋಷ್ಠಿಗೆ ಸ್ವಾಗತ ಕೋರುವ, ವಂದನಾರ್ಪಣೆ ಮಾಡುವ, ನಿರೂಪಣೆ ಮಾಡುವ ಹಾಗೂ ನಿರ್ವಹಣೆ ಮಾಡುವವರೆಂದು ನಾಲ್ಕು ಜನರಿರುತ್ತಾರೆ. ಇವರು ತಿಂದುಬಿಟ್ಟ ಸಮಯದಲ್ಲಿ ಅತಿಥಿಗಳಿಗೆ ಉಳಿಯುವುದು ಹತ್ತು ನಿಮಿಷಗಳು. ಆದರೂ ಜಗಮೊಂಡರಾದ ಭಾಷಣಕಾರರು ಮೂರನೇ ಚೀಟಿ ಬಂದರೂ ಜಗ್ಗುವುದಿಲ್ಲ. ಹೀಗಾಗಿ ಹನ್ನೆರಡು ಗಂಟೆಗೆ ಆರಂಭವಾಗುವ ಗೋಷ್ಠಿ ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗುತ್ತಿತ್ತು. ಗೋಷ್ಠಿಯ ವೇದಿಕೆಯಲ್ಲಿರಬೇಕಾದ ಅತಿಥಿಗಳು ಒಂದೇ ಉಸಿರಿಗೆ ಅನ್ನಸಾರು ಸಾಪಳಿಸಿ ಓಡುತ್ತಿದ್ದರು. ನಿರೂಪಕ, ಊಟ ಮಾಡಿದ ಕೂಡಲೇ ಒಳ ಬಂದು ಕೂರಬೇಕೆಂದು ಎಷ್ಟು ಗೋಗರೆದರೂ ಮೂವತ್ತು ಜನಕ್ಕಿಂತ ಜಾಸ್ತಿಯಿರುತ್ತಿರಲಿಲ್ಲ. ಇದನ್ನು ಗ್ರಹಿಸಿಯೊ ಏನೊ ಶಂಕರಪ್ಪ ಶಾಲೆ ಹುಡುಗರನ್ನು ತರಿಸಿದ್ದರು. ಅವು ಮರಕ್ಕೆ ತುಂಬಿದ ಹಕ್ಕಿಗಳಂತೆ ಕಲರವಿಸುತ್ತಿದ್ದವೇ ಹೊರತು ಯಾರ ಮಾತಿಗೂ ಕಿವಿಗೊಡಲಿಲ್ಲ. ಚೆನ್ನಾಗಿ ಮಾತನಾಡಿದ ಜಯಪ್ರಕಾಶ್ ಮಾವಿನಕುಳಿ ಮಾತಿಗೂ ಕಿವಿಗೊಡಲಿಲ್ಲ. ಯಾಕೆಂದರೆ ಸಾಹಿತ್ಯ ಪರಿಷತ್ ಅಧ್ಯಕ್ಷನೂ ಯಾರ ಮಾತಿಗೂ ಕಿವಿಗೊಡುವುದಿಲ್ಲ. ಜಿಲಾ,್ಲ ತಾಲ್ಲೂಕು ಮತ್ತು ಹೋಬಳಿ ಸಮ್ಮೇಳನಗಳು ಹೀಗೆ ಅಧ್ವಾನವಾಗಿರುವುದಕ್ಕೆ ಕಾರಣ ಈ ಸಂಸ್ಥೆಗಳು ಅಸಾಹಿತ್ಯಿಕ ವ್ಯಕ್ತಿಗಳ ಕೈಗೆ ಸಿಕ್ಕಿ ಹೋಗಿರುವುದೇ ಆಗಿದೆ.

ಈ ಅಸಾಹಿತ್ಯಿಕ ವ್ಯಕ್ತಿಗಳು ರಾಜಕಾರಣಿಗಳೂ ಆಗಿದ್ದಾರೆ. ಶಿವಮೊಗ್ಗದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ನೋಡಿದರೆ ಎಲ್ಲಾ ರಾಜಕಾರಣಿಗಳ ಪರಿಷೆಯಂತಿದೆ. ಸುದೈವಕ್ಕೆ ಬೆಳಗಾಂ ಅಧಿವೇಶನದ ಕಾರಣಕ್ಕೆ ಕರ್ಣಕಠೋರ ಭಾಷಣದಿಂದ ಜನ ಮುಕ್ತರಾದರು. ಅದೇನೆ ಆಗಲಿ, ಲಂಗುಲಗಾಮಿಲ್ಲದೇ ಹೋಗುತ್ತಿರುವ ಈ ಸಾಹಿತ್ಯ ಸಮ್ಮೇಳನಗಳು ಹೇಗೆ ಜರುಗಬೇಕೆಂಬ ನಿಯಮಗಳು ರೂಪುಗೊಳ್ಳದಿದ್ದರೆ ಇವು ಇನ್ನೂ ಅದ್ವಾನವೆದ್ದು ಹೋಗುತ್ತವೆ. ಅದಷ್ಟೆ ಅಲ್ಲ. ಕೆಲವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಈಗಾಗಲೇ ಭ್ರಷ್ಟರಾಗಿ ಹೋಗಿದ್ದಾರೆ. ಯರ್ರಿಸ್ವಾಮಿ ಎಂಬ ಜಿಲ್ಲಾಧ್ಯಕ್ಷ ಯಾವ ಕಾರ್ಯಕ್ರಮವನ್ನೂ ಮಾಡದೇ ಬೆಂಗಳೂರಿನ ಚಾಮರಾಜಪೇಟೆ ಸಮೀಪದಲ್ಲೇ ಹದಿನಾಲ್ಕು ಲಕ್ಷದ ಬೋಗಸ್ ಬಿಲ್ ತಯಾರಿಸಿಕೊಟ್ಟು ಕೋರ್ಟು ಮೆಟ್ಟಿಲು ಹತ್ತುವಂತಾಗಿದ್ದನ್ನು ಜಿಲ್ಲಾಧಿಕಾರಿಗಳು ಹೇಳಿದರು. ಮಂಡ್ಯದವನೊಬ್ಬ ಹಣ ಸಂಗ್ರಹಿಸಿಕೊಂಡು ವಿಧಾನಸಭೆ ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದ. ನಾಡಿನ ತುಂಬ ಇಂತಹ ಭ್ರಷ್ಟರು ಸಾಹಿತ್ಯ ವೇದಿಕೆ ಆಕ್ರಮಿಸಿಕೊಂಡಿದ್ದಾರೆ. ಈ ಶಂಕರಪ್ಪ ಈ ತರವಲ್ಲದಿದ್ದರೂ ಸ್ವಜಾತಿ ಪ್ರೇಮಿ. ರಾಜಕಾರಣಿಗಳನ್ನ ಕಂಡರೆ ಅತೀವ ಪ್ರೀತಿ. ವಿದ್ವಾಂಸರನ್ನ ಕಂಡರೆ ಅಷ್ಟಕ್ಕಷ್ಟೆ. ಅದೇನೆ ಆದರೂ ಇವರ ವರಸೆಗಳು ಸಾಕು ಎನ್ನಿಸುತ್ತವೆ. ಇವರ ಆಯ್ಕೆಗೆ ಶ್ರಮಿಸಿದ್ದ ಡಾ. ಶ್ರೀಕಂಠ ಕೂಡಿಗೆಯವರು ವೇದಿಕೆಯಲ್ಲೇ ಇವರ ನಡವಳಿಕೆ ಖಂಡಿಸುವಂತಹ ಮಾತನಾಡಿದ್ದನ್ನು ಎಲ್ಲಾ ಸಾಹಿತಿಗಳು ಅನುಸರಿಸಿದರೆ ಈ ಸಾಹಿತ್ಯ ಪರಿಷತ್ ಸುಧಾರಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...