Homeಅಂಕಣಗಳುಸಂಪಾದಕೀಯ | ಆಶಾಭ್ರಾಂತಿಯ ಆಚೆಗೆ ಸಾಗುವ ಸಮಯ

ಸಂಪಾದಕೀಯ | ಆಶಾಭ್ರಾಂತಿಯ ಆಚೆಗೆ ಸಾಗುವ ಸಮಯ

- Advertisement -
- Advertisement -

ಸಿನೆಮಾ ಕುರಿತ ವಿಶೇಷ ಒಳನೋಟ ಇರುವ ಗೆಳೆಯರೊಬ್ಬರು ಅಮೀರ್ ಖಾನ್‍ರ ‘ಪಿಕೆ’ ಸಿನೆಮಾ ಬಂದ ಸಂದರ್ಭದಲ್ಲಿ ಹೇಳಿದ ಮಾತು ಆಶ್ಚರ್ಯಕರವಾಗಿತ್ತು. ‘ಈ ಸಿನೆಮಾ ನನಗೆ ಇಷ್ಟವಾಗಲಿಲ್ಲ’, ‘ಅಲ್ಲಾರೀ ಇಷ್ಟೊಂದು ಪಾಪ್ಯುಲರ್ ಶೈಲಿಯಲ್ಲಿ ಹುಸಿ ಧಾರ್ಮಿಕತೆಯನ್ನು ಬಯಲುಗೊಳಿಸಿದೆ. ನಿಮಗೆ ಇಷ್ಟವಾಗದ ಅಂಶ ಏನು ಇದರಲ್ಲಿ?’, ‘ಅದೇ ನನಗೆ ಸಮಸ್ಯೆ ಅನ್ನಿಸಿದ್ದು. ಇದನ್ನು ಹೊಗಳುತ್ತಿರುವ ಸೆಕ್ಯುಲರ್‍ಗಳೆಲ್ಲರೂ, ತಮ್ಮ ಜವಾಬ್ದಾರಿಯನ್ನು ಮರೆತು ಅವೆಲ್ಲವನ್ನೂ ಅಮೀರ್ ಖಾನ್ ಮೇಲೆ ಅಥವಾ ಸಿನೆಮಾ ನಿರ್ದೇಶಕರ ಮೇಲೆ ಹಾಕುತ್ತಿದ್ದಾರೆ. ಸಿನೆಮಾ ಒಂದರಿಂದ ಇದನ್ನು ಮಾಡಲು ಸಾಧ್ಯವೇ?’ ಸಿನೆಮಾ ಚೆನ್ನಾಗಿದ್ದರೆ ಮೆಚ್ಚಿಕೊಳ್ಳಬೇಕು. ಇದ್ಯಾಕೋ ವಿಚಿತ್ರ ವಾದ ಎನಿಸಿತ್ತು.

ಈಗ ಇದು ನೆನಪಾಗಲು ಕಾರಣವಿದೆ. ಉತ್ತರ ದೇಶದಿಂದ ಹೊರಟಿರುವ ಬಿಜೆಪಿಯ ರಥವನ್ನು ಮತ್ತು ಫ್ಯಾಸಿಸ್ಟರ ಓಟವನ್ನು ದಕ್ಷಿಣಾಪಥದಲ್ಲಿ ಕಟ್ಟಿಹಾಕಲು ಸಿದ್ದರಾಮಯ್ಯ ವಿಫಲರಾದರು ಎಂದು ನಾವು ದೂರುತ್ತಾ ಕೂತರೆ? ಈ ಸಂಚಿಕೆಯ ಒಂದು ವರದಿಯಲ್ಲಿ ಸಿದ್ದರಾಮಯ್ಯನವರ ಮಿತಿಗಳೇನಾಗಿದ್ದವು ಮತ್ತು ಬಿಜೆಪಿಯ ಅನೈತಿಕ ಆಕ್ರಮಣಕಾರಿ ನಡೆಗಳೇನಾಗಿದ್ದವು ಎಂಬುದನ್ನು ವಿಸ್ತಾರವಾಗಿ ಬರೆಯಲಾಗಿದೆ. ಸಿದ್ದರಾಮಯ್ಯನವರ ಮಿತಿಗಳ ಬಗ್ಗೆ ಅದರಲ್ಲಿ ಬರೆದಿರುವ ಅಂಶಗಳು ಸರಿಯಾಗಿಯೇ ಇವೆ. ಅವರೂ ಮಿತಿಗಳಿರುವ ಮನುಷ್ಯರೇ. ಆ ಮಿತಿಗಳು ಅವರಲ್ಲಿ ಮುಖ್ಯಮಂತ್ರಿಯಾಗುವುದಕ್ಕಿಂತ ಮುಂಚೆಯಿಂದಲೂ ಇತ್ತು, ಬಹುಶಃ ರಾಜಕಾರಣಕ್ಕೆ ಬಂದಾಗಿನಿಂದಲೂ ಇದ್ದವು. ಅವೆಲ್ಲದರ ನಡುವೆಯೂ, ಕಳೆದ ಮೂರ್ನಾಲ್ಕು ದಶಕಗಳ ಈ ರಾಜ್ಯದ ಮುಖ್ಯಮಂತ್ರಿಗಳಲ್ಲೇ ಉತ್ತಮ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ತಮ್ಮ ಆಡಳಿತವನ್ನು ಘನತೆಯಿಂದಲೇ ನಡೆಸಿದ್ದಾರೆ.

ಪ್ರಜಾತಂತ್ರವನ್ನು ನಾಶ ಮಾಡಲು ಹೊರಟಿರುವ ಬಿಜೆಪಿಯ ರಥವನ್ನು ಕಟ್ಟಿ ಹಾಕುವ ಜವಾಬ್ದಾರಿ, ಅದನ್ನು ಬಯಸುವ ನಮ್ಮೆಲ್ಲರದ್ದೂ ಆಗಿದೆ. ಸಾಮಾಜಿಕ ನ್ಯಾಯ, ಜಾತ್ಯಾತೀತ ಮೌಲ್ಯಗಳ ಬಗ್ಗೆ ಬದ್ಧತೆಯಿಟ್ಟುಕೊಂಡಿರುವ ಜನಪ್ರಿಯ ರಾಜಕಾರಣಿ ಸಿದ್ದರಾಮಯ್ಯನವರಿಗೂ ಅದರಲ್ಲಿ ಒಂದು ಮುಖ್ಯ ಪಾತ್ರವಿರುತ್ತದೆ. ಆದರೆ, ಸಿದ್ದರಾಮಯ್ಯನವರು ನಡೆಸಿದ ಈ ಪ್ರಯೋಗವು ನಮಗೆ ಒಂದು ಬಹುಮುಖ್ಯವಾದ ಅಂಶವನ್ನು ಮನವರಿಕೆ ಮಾಡಿಕೊಟ್ಟಿದೆ. ಅದೇನೆಂದರೆ, ಈ ಚುನಾವಣೆ ಮತ್ತು ಚುನಾವಣೋತ್ತರ ಬೆಳವಣಿಗೆಗಳು ನಮ್ಮ ಇಂದಿನ ಪರಿಸ್ಥಿತಿಯನ್ನು, ನಮ್ಮ ಮುಂದಿರುವ ಕರ್ತವ್ಯವನ್ನು ಸ್ಫುಟವಾಗಿ ತೆರೆದಿಟ್ಟಿವೆ. ನಾವು ಎಚ್ಚೆತ್ತುಕೊಳ್ಳಲೇ ಬೇಕಾದ ಅಂತಿಮ ಕರೆ ಕೇಳುತ್ತಿದೆ.

ಹಾಗೆ ನೋಡಿದರೆ ಬಿಜೆಪಿ ಪಕ್ಷ ಮುಖ್ಯಮಂತ್ರಿಯಾಗಿ ಮುಂದುವರೆದರೆ ಕರ್ನಾಟಕಕ್ಕೆ, ದೇಶಕ್ಕೆ ಎಷ್ಟು ಅಪಾಯ ಎಂಬುದರ ಬಗ್ಗೆ ಚರ್ಚೆಯ ಅಗತ್ಯವೇ ಇಲ್ಲ. ಈ ವಿಷಯ ಮಂಡನೆಯಲ್ಲಿ ಪಟ್ಟು ಸಾಧಿಸಿರುವ ಡಜನ್‍ಗಟ್ಟಲೆ ಚಿಂತಕರು, ವಾಗ್ಮಿಗಳು ನಮ್ಮ ನಡುವೆ ಇದ್ದಾರೆ. ಅಸಲಿ ಪ್ರಶ್ನೆ ಇರುವುದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಅದು ಉಂಟುಮಾಡಬಹುದಾದ ಅಪಾಯದ ಕುರಿತಾದದ್ದು. ಇಲ್ಲಿ ಸಮಸ್ಯೆಯಿರುವುದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೂ ಅಲ್ಲ; ಸರ್ಕಾರ ರಚಿಸುವುದು ಅಲ್ಲ. ಅದು ನಾಡಿನ ಪ್ರಜಾತಂತ್ರವಾದಿಗಳಲ್ಲಿ, ಸಾಮಾಜಿಕ ಕಾರ್ಯಕರ್ತರಲ್ಲಿ ತರುವ ನಿರಾಳತೆಗೆ ಹಾಗೂ ಆ ಮೂಲಕ ಬರಬಹುದಾದ ನಿಷ್ಕ್ರಿಯತೆಗೆ ಸಂಬಂಧಿಸಿದ್ದು. ಫ್ಯಾಸಿಸಂನ ಅಪಾಯಗಳ ಕುರಿತು ಇತಿಹಾಸದ ಉದಾಹರಣೆಗಳನ್ನೂ ಹೆಕ್ಕಿ ಹೆಕ್ಕಿ ಮಾತನಾಡುತ್ತಾ ಹೋಗುವ ನಾವು, ಅದನ್ನು ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳುವಲ್ಲಿ ಮಾತ್ರ ಪದೇ ಪದೇ ಸೋಲುತ್ತಿದ್ದೇವೆ. ಇದು ನಮ್ಮೆಲ್ಲರ ಮುಂದಿರುವ ಕಟು ಸತ್ಯ.

ಇಂಗ್ಲಿಷಿನಲ್ಲೊಂದು ಪದ-ಪರಿಕಲ್ಪನೆ ಇದೆ. wishful thinking ಎಂದು. ಕನ್ನಡದಲ್ಲಿ ಇದಕ್ಕೆ ಸೂಕ್ತ ಪದವಿಲ್ಲ. ಗೂಗಲ್ ಟ್ರಾನ್ಸ್‍ಲೇಟ್‍ನ ಮೂರನೇ ಆಯ್ಕೆ ಆಶಾಭ್ರಾಂತಿ ಎಂದಿತ್ತು. ಬಹಳ ಸೂಕ್ತವಾದ ಅನುವಾದ. 2014ರ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ನಾವು ತರ್ಕಬದ್ಧವಾಗಿÀ ವಾದಗಳನ್ನು ಮಂಡಿಸಿದೆವು. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಪುನರಾಯ್ಕೆ ಬಗ್ಗೆ ಕೂಡ ನಾವು ವಾದ, ತರ್ಕಗಳನ್ನು ಮುಂದಿಟ್ಟೆವು. ತರ್ಕ ಸರಿಯಿರಲಿಲ್ಲವೆಂದೇನಲ್ಲ. ಜೊತೆಗೆ ಇವಿಎಂನ ಕುರಿತು ಇನ್ನೂ ಅಂತಿಮ ಅನಿಸಿಕೆಗೆ ಬರುವುದಕ್ಕೂ ಸಾಧ್ಯವಾಗಿಲ್ಲ. ಆದರೂ, ಅವು ತರ್ಕಕ್ಕಿಂತಲೂ ನಮ್ಮ ನಿರೀಕ್ಷೆ ಅಥವಾ ಬಯಕೆಯಾಗಿತ್ತು. Actually the writing on the wall was clear in one way or the other.
.

ಬಿಜೆಪಿ ಮತ್ತದರ ಪರಿವಾರವು ಸ್ವಾತಂತ್ರ್ಯೋತ್ತರ ಭಾರತದ ಅತೀ ದೊಡ್ಡ ದುಷ್ಟಕೂಟವಾಗಿ ರೂಪುತಳೆದಿದೆ. ಲಕ್ಷಾಂತರ ಕೋಟಿಗಳ ಅಕ್ರಮ ಸಂಪತ್ತನ್ನು ಬಾಚಿ ಗುಡ್ಡೆ ಹಾಕಿಕೊಂಡಿರುವ ಕಾರ್ಪೊರೇಟ್ ಕುಳಗಳು ಇವರ ಬೆನ್ನೆಲುಬಾಗಿ ನಿಂತಿವೆ. ಒಂದಲ್ಲಾ ಒಂದು ರೀತಿಯಲ್ಲಿ ಇದೇ ಕಾರ್ಪೊರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕಿರುವ ಮಾಧ್ಯಮಗಳು ಈ ದುಷ್ಟಕೂಟದ ಪರವಾಗಿ ಸಾಮಾಜದ ಮನೋಭೂಮಿಕೆಯನ್ನು ಸಿದ್ಧಪಡಿಸಲು ಬಹಿರಂಗವಾಗಿಯೇ ಇಳಿದಿವೆ. ಫ್ಯಾಸಿಸ್ಟರು ಏನೆಲ್ಲಾ ಮಾಡಬಹುದೆಂಬುದನ್ನು ಇತಿಹಾಸವು ನಮಗೆ ತೋರಿಸಿಕೊಟ್ಟಿದೆಯೋ ಅವೆಲ್ಲವನ್ನೂ ಮಾಡಲು ಅವರು ಇಳಿದಾಗಿದೆ. ಹಾಗಾಗಿ ನಾವು ಕೂಡಲೇ ಕಾರ್ಯೋನ್ಮುಖರಾಗಬೇಕು; ಮುಂದಿನ ಚುನಾವಣೆಗೆ ನಾವು ಈಗಿನಿಂದಲೇ ತಯಾರಿ ನಡೆಸಬೇಕಿದೆ. ಇದು ಕೇವಲ ಚುನಾವಣೆಯ ವಿಚಾರವೂ ಅಲ್ಲ. ಏಕೆಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷದ ಚಟುವಟಿಕೆಗಳು ವಿಪರೀತವಿದ್ದ 2013ರ ಸಂದರ್ಭದಲ್ಲಿ ಒಂದು ಕ್ಷೇತ್ರ ಹೊರತುಪಡಿಸಿ ಎಲ್ಲಾ ಸೋತಿದ್ದ ಬಿಜೆಪಿ, 5 ವರ್ಷಗಳ ಕಾಂಗ್ರೆಸ್ ಆಡಳಿತ ಮತ್ತು ಕೋಮುದ್ವೇಷದ ಚಟುವಟಿಕೆಗಳು ಸಾಪೇಕ್ಷವಾಗಿ ಕಡಿಮೆಯಿರುವ 2018ರ ಈ ಚುನಾವಣೆಯಲ್ಲಿ ಒಂದನ್ನು ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಗೆದ್ದಿದೆ. ಅದೂ ಹೊಸ, ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಿ! ಹೊರಗೆ ಕೋಮುಗಲಭೆಗಳು ಎಷ್ಟು ನಡೆಯುತ್ತಿವೆ ಎಂಬುದಕ್ಕಿಂತ ವಿಷ ಹಾಗೂ ವಿಷಪೂರಿತ ಸಂಘಟನೆಯನ್ನು ಎಷ್ಟು ಸಬಲವಾಗಿ ಹಾಗೂ ವ್ಯಾಪಕವಾಗಿ ಹರಡುವುದು ಸಾಧ್ಯವಾಗಿದೆ ಎಂಬುದೇ ನಿರ್ಣಾಯಕವಾಗುತ್ತಿದೆ.

ಅದಕ್ಕೆ ವಿರುದ್ಧವಾಗಿ ಪ್ರಜಾತಂತ್ರದ – ಅಂದರೆ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆಯ – ಅರಿವನ್ನು ಸಮಾಜದ ತಳಮಟ್ಟದಿಂದ ಬೆಳೆಸುವ ಮತ್ತು ಬಲಿಷ್ಢ ಸಂಘಟನೆಯನ್ನು ಕಟ್ಟುವ ನಿಟ್ಟಿನಲ್ಲಿ ನಾವೆಷ್ಟು ಕಾರ್ಯಪ್ರವೃತ್ತಾರಾಗಿದ್ದೇವೆ ಅಥವ ಕಾರ್ಯಪ್ರವೃತ್ತರಾಗಲಿದ್ದೇವೆ? ನಮ್ಮ ಪ್ರಜಾತಂತ್ರವಾದಿಗಳಲ್ಲಿ ಗಣನೀಯ ವಿಭಾಗದ ಕಾಳಜಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾರಿಕೊಳ್ಳುವುದು ಅಥವಾ ನಮ್ಮದೇ ವರ್ತುಲದಲ್ಲಿ ತಂತಮ್ಮ ವಾದವನ್ನು ಗೆಲ್ಲಿಸಿಕೊಳ್ಳುವುದು ಅಥವ ಇನ್ನಾವುದೋ ವಾದವನ್ನು ಸೋಲಿಸುವುದರಲ್ಲಿ ಪರ್ಯಾವಸಾನಗೊಳ್ಳುತ್ತಿವೆ. ಹೀಗೆ ನಮ್ಮ ಶಕ್ತಿ ಸಾಮಥ್ರ್ಯ ಹರಿದು ಹಳ್ಳಹಿಡಿಯುತ್ತಿದೆ ಅನಿಸುತ್ತಿದೆ.

ಇವೆಲ್ಲದರ ಅರ್ಥ, ಪರಿಸ್ಥಿತಿ ಅತ್ಯಂತ ನಿರಾಶಾದಾಯಕವಾಗಿದೆ ಎಂದೇನೂ ಅಲ್ಲ. ಬಿಜೆಪಿ ನಡೆಸಿದ ಬಹುಮುಖೀ ಆಕ್ರಮಣಕಾರಿ ದಾಳಿಯ ನಂತರವೂ ರಾಜ್ಯದಲ್ಲಿ ಅತ್ಯಂತ ಹೆಚ್ಚು ಮತ ಪಡೆದ ಪಕ್ಷ ಅದಾಗಲಿಲ್ಲ. ಆಯಾ ಕ್ಷೇತ್ರದಲ್ಲಿ ಗೆಲುವಾಗಿ ಪರಿಣಮಿಸುವ ರೀತಿಯಲ್ಲಿ ಮತಗಳು ಕ್ರೋಢೀಕೃತವಾಗಲಿಲ್ಲ ಅಷ್ಟೇ. ಈ ಸನ್ನಿವೇಶದಲ್ಲಿ ಜೆಡಿಎಸ್‍ನೊಂದಿಗೆ ಕಾಂಗ್ರೆಸ್ ಹೃತ್ಪೂರ್ವಕವಾಗಿ ಕೈ ಜೋಡಿಸಿರುವುದು ಒಂದು ಒಳ್ಳೆಯ ಬೆಳವಣಿಗೆಯೇ. ಈ ರಾಜ್ಯದ ರಾಜಕಾರಣದಲ್ಲಿ ಜಾತ್ಯತೀತತೆಯನ್ನು ನೆಲೆಗೊಳಿಸಲು ಇದಕ್ಕಿಂತ ಉತ್ತಮ ಅವಕಾಶ ಸಿಗಲಾರದು. ಆದರೆ ಇಂದಿನ ಪರಿಸ್ಥಿತಿಯನ್ನು ಅಂತಿಮ ಕರೆಗಂಟೆ ಎಂದು ಗಂಭೀರವಾಗಿ ಪರಿಗಣಿಸಬೇಕು ಅಷ್ಟೇ. ಹಾಗೆಯೇ ಯಾವ ರೀತಿಯ ಆಶಾಭ್ರಾಂತಿಯೂ ನಮ್ಮನ್ನು ಆವರಿಸದಂತೆ ಕಾಪಾಡಿಕೊಳ್ಳಬೇಕು.

ಪರ್ಯಾಯ ಮಾಧ್ಯಮಗಳನ್ನು ಕಟ್ಟಲು ಬೇಕಾದ ಸಂವಾದವನ್ನು ಶುರು ಮಾಡೋಣವೆಂಬ ಕರೆಯನ್ನು ಈ ನಿಮ್ಮ ಪತ್ರಿಕೆ ಕೊಟ್ಟಿದೆ. ಅದನ್ನು ಓದಬೇಕೆಂದು ಕೋರುತ್ತೇವೆ ಮತ್ತು ಕಟ್ಟುವ ಪ್ರಕ್ರಿಯೆಯಲ್ಲಿ ಮುಂದೆ ಬರುವವರನ್ನು ಉತ್ತೇಜಿಸಲು, ಸೂಕ್ತ ಅವಕಾಶ ಕಲ್ಪಿಸಿಕೊಡಲು ಗೌರಿ ಮೀಡಿಯಾ ಟ್ರಸ್ಟ್ ಪ್ರಯತ್ನ ಹಾಕುತ್ತದೆಂದು ಹೇಳಬಯಸುತ್ತೇವೆ. ಗೌರಿ ಲಂಕೇಶರಿಗೆ ಇದಕ್ಕಿಂತ ಉತ್ತಮವಾದ ಶ್ರದ್ಧಾಂಜಲಿ ಇನ್ನೇನಿರಲು ಸಾಧ್ಯ?

ಸಂಪಾದಕೀಯ ತಂಡದ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...