Homeಅಂಕಣಗಳುಸಂಪಾದಕೀಯ | ಆಶಾಭ್ರಾಂತಿಯ ಆಚೆಗೆ ಸಾಗುವ ಸಮಯ

ಸಂಪಾದಕೀಯ | ಆಶಾಭ್ರಾಂತಿಯ ಆಚೆಗೆ ಸಾಗುವ ಸಮಯ

- Advertisement -
- Advertisement -

ಸಿನೆಮಾ ಕುರಿತ ವಿಶೇಷ ಒಳನೋಟ ಇರುವ ಗೆಳೆಯರೊಬ್ಬರು ಅಮೀರ್ ಖಾನ್‍ರ ‘ಪಿಕೆ’ ಸಿನೆಮಾ ಬಂದ ಸಂದರ್ಭದಲ್ಲಿ ಹೇಳಿದ ಮಾತು ಆಶ್ಚರ್ಯಕರವಾಗಿತ್ತು. ‘ಈ ಸಿನೆಮಾ ನನಗೆ ಇಷ್ಟವಾಗಲಿಲ್ಲ’, ‘ಅಲ್ಲಾರೀ ಇಷ್ಟೊಂದು ಪಾಪ್ಯುಲರ್ ಶೈಲಿಯಲ್ಲಿ ಹುಸಿ ಧಾರ್ಮಿಕತೆಯನ್ನು ಬಯಲುಗೊಳಿಸಿದೆ. ನಿಮಗೆ ಇಷ್ಟವಾಗದ ಅಂಶ ಏನು ಇದರಲ್ಲಿ?’, ‘ಅದೇ ನನಗೆ ಸಮಸ್ಯೆ ಅನ್ನಿಸಿದ್ದು. ಇದನ್ನು ಹೊಗಳುತ್ತಿರುವ ಸೆಕ್ಯುಲರ್‍ಗಳೆಲ್ಲರೂ, ತಮ್ಮ ಜವಾಬ್ದಾರಿಯನ್ನು ಮರೆತು ಅವೆಲ್ಲವನ್ನೂ ಅಮೀರ್ ಖಾನ್ ಮೇಲೆ ಅಥವಾ ಸಿನೆಮಾ ನಿರ್ದೇಶಕರ ಮೇಲೆ ಹಾಕುತ್ತಿದ್ದಾರೆ. ಸಿನೆಮಾ ಒಂದರಿಂದ ಇದನ್ನು ಮಾಡಲು ಸಾಧ್ಯವೇ?’ ಸಿನೆಮಾ ಚೆನ್ನಾಗಿದ್ದರೆ ಮೆಚ್ಚಿಕೊಳ್ಳಬೇಕು. ಇದ್ಯಾಕೋ ವಿಚಿತ್ರ ವಾದ ಎನಿಸಿತ್ತು.

ಈಗ ಇದು ನೆನಪಾಗಲು ಕಾರಣವಿದೆ. ಉತ್ತರ ದೇಶದಿಂದ ಹೊರಟಿರುವ ಬಿಜೆಪಿಯ ರಥವನ್ನು ಮತ್ತು ಫ್ಯಾಸಿಸ್ಟರ ಓಟವನ್ನು ದಕ್ಷಿಣಾಪಥದಲ್ಲಿ ಕಟ್ಟಿಹಾಕಲು ಸಿದ್ದರಾಮಯ್ಯ ವಿಫಲರಾದರು ಎಂದು ನಾವು ದೂರುತ್ತಾ ಕೂತರೆ? ಈ ಸಂಚಿಕೆಯ ಒಂದು ವರದಿಯಲ್ಲಿ ಸಿದ್ದರಾಮಯ್ಯನವರ ಮಿತಿಗಳೇನಾಗಿದ್ದವು ಮತ್ತು ಬಿಜೆಪಿಯ ಅನೈತಿಕ ಆಕ್ರಮಣಕಾರಿ ನಡೆಗಳೇನಾಗಿದ್ದವು ಎಂಬುದನ್ನು ವಿಸ್ತಾರವಾಗಿ ಬರೆಯಲಾಗಿದೆ. ಸಿದ್ದರಾಮಯ್ಯನವರ ಮಿತಿಗಳ ಬಗ್ಗೆ ಅದರಲ್ಲಿ ಬರೆದಿರುವ ಅಂಶಗಳು ಸರಿಯಾಗಿಯೇ ಇವೆ. ಅವರೂ ಮಿತಿಗಳಿರುವ ಮನುಷ್ಯರೇ. ಆ ಮಿತಿಗಳು ಅವರಲ್ಲಿ ಮುಖ್ಯಮಂತ್ರಿಯಾಗುವುದಕ್ಕಿಂತ ಮುಂಚೆಯಿಂದಲೂ ಇತ್ತು, ಬಹುಶಃ ರಾಜಕಾರಣಕ್ಕೆ ಬಂದಾಗಿನಿಂದಲೂ ಇದ್ದವು. ಅವೆಲ್ಲದರ ನಡುವೆಯೂ, ಕಳೆದ ಮೂರ್ನಾಲ್ಕು ದಶಕಗಳ ಈ ರಾಜ್ಯದ ಮುಖ್ಯಮಂತ್ರಿಗಳಲ್ಲೇ ಉತ್ತಮ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ತಮ್ಮ ಆಡಳಿತವನ್ನು ಘನತೆಯಿಂದಲೇ ನಡೆಸಿದ್ದಾರೆ.

ಪ್ರಜಾತಂತ್ರವನ್ನು ನಾಶ ಮಾಡಲು ಹೊರಟಿರುವ ಬಿಜೆಪಿಯ ರಥವನ್ನು ಕಟ್ಟಿ ಹಾಕುವ ಜವಾಬ್ದಾರಿ, ಅದನ್ನು ಬಯಸುವ ನಮ್ಮೆಲ್ಲರದ್ದೂ ಆಗಿದೆ. ಸಾಮಾಜಿಕ ನ್ಯಾಯ, ಜಾತ್ಯಾತೀತ ಮೌಲ್ಯಗಳ ಬಗ್ಗೆ ಬದ್ಧತೆಯಿಟ್ಟುಕೊಂಡಿರುವ ಜನಪ್ರಿಯ ರಾಜಕಾರಣಿ ಸಿದ್ದರಾಮಯ್ಯನವರಿಗೂ ಅದರಲ್ಲಿ ಒಂದು ಮುಖ್ಯ ಪಾತ್ರವಿರುತ್ತದೆ. ಆದರೆ, ಸಿದ್ದರಾಮಯ್ಯನವರು ನಡೆಸಿದ ಈ ಪ್ರಯೋಗವು ನಮಗೆ ಒಂದು ಬಹುಮುಖ್ಯವಾದ ಅಂಶವನ್ನು ಮನವರಿಕೆ ಮಾಡಿಕೊಟ್ಟಿದೆ. ಅದೇನೆಂದರೆ, ಈ ಚುನಾವಣೆ ಮತ್ತು ಚುನಾವಣೋತ್ತರ ಬೆಳವಣಿಗೆಗಳು ನಮ್ಮ ಇಂದಿನ ಪರಿಸ್ಥಿತಿಯನ್ನು, ನಮ್ಮ ಮುಂದಿರುವ ಕರ್ತವ್ಯವನ್ನು ಸ್ಫುಟವಾಗಿ ತೆರೆದಿಟ್ಟಿವೆ. ನಾವು ಎಚ್ಚೆತ್ತುಕೊಳ್ಳಲೇ ಬೇಕಾದ ಅಂತಿಮ ಕರೆ ಕೇಳುತ್ತಿದೆ.

ಹಾಗೆ ನೋಡಿದರೆ ಬಿಜೆಪಿ ಪಕ್ಷ ಮುಖ್ಯಮಂತ್ರಿಯಾಗಿ ಮುಂದುವರೆದರೆ ಕರ್ನಾಟಕಕ್ಕೆ, ದೇಶಕ್ಕೆ ಎಷ್ಟು ಅಪಾಯ ಎಂಬುದರ ಬಗ್ಗೆ ಚರ್ಚೆಯ ಅಗತ್ಯವೇ ಇಲ್ಲ. ಈ ವಿಷಯ ಮಂಡನೆಯಲ್ಲಿ ಪಟ್ಟು ಸಾಧಿಸಿರುವ ಡಜನ್‍ಗಟ್ಟಲೆ ಚಿಂತಕರು, ವಾಗ್ಮಿಗಳು ನಮ್ಮ ನಡುವೆ ಇದ್ದಾರೆ. ಅಸಲಿ ಪ್ರಶ್ನೆ ಇರುವುದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಅದು ಉಂಟುಮಾಡಬಹುದಾದ ಅಪಾಯದ ಕುರಿತಾದದ್ದು. ಇಲ್ಲಿ ಸಮಸ್ಯೆಯಿರುವುದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೂ ಅಲ್ಲ; ಸರ್ಕಾರ ರಚಿಸುವುದು ಅಲ್ಲ. ಅದು ನಾಡಿನ ಪ್ರಜಾತಂತ್ರವಾದಿಗಳಲ್ಲಿ, ಸಾಮಾಜಿಕ ಕಾರ್ಯಕರ್ತರಲ್ಲಿ ತರುವ ನಿರಾಳತೆಗೆ ಹಾಗೂ ಆ ಮೂಲಕ ಬರಬಹುದಾದ ನಿಷ್ಕ್ರಿಯತೆಗೆ ಸಂಬಂಧಿಸಿದ್ದು. ಫ್ಯಾಸಿಸಂನ ಅಪಾಯಗಳ ಕುರಿತು ಇತಿಹಾಸದ ಉದಾಹರಣೆಗಳನ್ನೂ ಹೆಕ್ಕಿ ಹೆಕ್ಕಿ ಮಾತನಾಡುತ್ತಾ ಹೋಗುವ ನಾವು, ಅದನ್ನು ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳುವಲ್ಲಿ ಮಾತ್ರ ಪದೇ ಪದೇ ಸೋಲುತ್ತಿದ್ದೇವೆ. ಇದು ನಮ್ಮೆಲ್ಲರ ಮುಂದಿರುವ ಕಟು ಸತ್ಯ.

ಇಂಗ್ಲಿಷಿನಲ್ಲೊಂದು ಪದ-ಪರಿಕಲ್ಪನೆ ಇದೆ. wishful thinking ಎಂದು. ಕನ್ನಡದಲ್ಲಿ ಇದಕ್ಕೆ ಸೂಕ್ತ ಪದವಿಲ್ಲ. ಗೂಗಲ್ ಟ್ರಾನ್ಸ್‍ಲೇಟ್‍ನ ಮೂರನೇ ಆಯ್ಕೆ ಆಶಾಭ್ರಾಂತಿ ಎಂದಿತ್ತು. ಬಹಳ ಸೂಕ್ತವಾದ ಅನುವಾದ. 2014ರ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ನಾವು ತರ್ಕಬದ್ಧವಾಗಿÀ ವಾದಗಳನ್ನು ಮಂಡಿಸಿದೆವು. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಪುನರಾಯ್ಕೆ ಬಗ್ಗೆ ಕೂಡ ನಾವು ವಾದ, ತರ್ಕಗಳನ್ನು ಮುಂದಿಟ್ಟೆವು. ತರ್ಕ ಸರಿಯಿರಲಿಲ್ಲವೆಂದೇನಲ್ಲ. ಜೊತೆಗೆ ಇವಿಎಂನ ಕುರಿತು ಇನ್ನೂ ಅಂತಿಮ ಅನಿಸಿಕೆಗೆ ಬರುವುದಕ್ಕೂ ಸಾಧ್ಯವಾಗಿಲ್ಲ. ಆದರೂ, ಅವು ತರ್ಕಕ್ಕಿಂತಲೂ ನಮ್ಮ ನಿರೀಕ್ಷೆ ಅಥವಾ ಬಯಕೆಯಾಗಿತ್ತು. Actually the writing on the wall was clear in one way or the other.
.

ಬಿಜೆಪಿ ಮತ್ತದರ ಪರಿವಾರವು ಸ್ವಾತಂತ್ರ್ಯೋತ್ತರ ಭಾರತದ ಅತೀ ದೊಡ್ಡ ದುಷ್ಟಕೂಟವಾಗಿ ರೂಪುತಳೆದಿದೆ. ಲಕ್ಷಾಂತರ ಕೋಟಿಗಳ ಅಕ್ರಮ ಸಂಪತ್ತನ್ನು ಬಾಚಿ ಗುಡ್ಡೆ ಹಾಕಿಕೊಂಡಿರುವ ಕಾರ್ಪೊರೇಟ್ ಕುಳಗಳು ಇವರ ಬೆನ್ನೆಲುಬಾಗಿ ನಿಂತಿವೆ. ಒಂದಲ್ಲಾ ಒಂದು ರೀತಿಯಲ್ಲಿ ಇದೇ ಕಾರ್ಪೊರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕಿರುವ ಮಾಧ್ಯಮಗಳು ಈ ದುಷ್ಟಕೂಟದ ಪರವಾಗಿ ಸಾಮಾಜದ ಮನೋಭೂಮಿಕೆಯನ್ನು ಸಿದ್ಧಪಡಿಸಲು ಬಹಿರಂಗವಾಗಿಯೇ ಇಳಿದಿವೆ. ಫ್ಯಾಸಿಸ್ಟರು ಏನೆಲ್ಲಾ ಮಾಡಬಹುದೆಂಬುದನ್ನು ಇತಿಹಾಸವು ನಮಗೆ ತೋರಿಸಿಕೊಟ್ಟಿದೆಯೋ ಅವೆಲ್ಲವನ್ನೂ ಮಾಡಲು ಅವರು ಇಳಿದಾಗಿದೆ. ಹಾಗಾಗಿ ನಾವು ಕೂಡಲೇ ಕಾರ್ಯೋನ್ಮುಖರಾಗಬೇಕು; ಮುಂದಿನ ಚುನಾವಣೆಗೆ ನಾವು ಈಗಿನಿಂದಲೇ ತಯಾರಿ ನಡೆಸಬೇಕಿದೆ. ಇದು ಕೇವಲ ಚುನಾವಣೆಯ ವಿಚಾರವೂ ಅಲ್ಲ. ಏಕೆಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷದ ಚಟುವಟಿಕೆಗಳು ವಿಪರೀತವಿದ್ದ 2013ರ ಸಂದರ್ಭದಲ್ಲಿ ಒಂದು ಕ್ಷೇತ್ರ ಹೊರತುಪಡಿಸಿ ಎಲ್ಲಾ ಸೋತಿದ್ದ ಬಿಜೆಪಿ, 5 ವರ್ಷಗಳ ಕಾಂಗ್ರೆಸ್ ಆಡಳಿತ ಮತ್ತು ಕೋಮುದ್ವೇಷದ ಚಟುವಟಿಕೆಗಳು ಸಾಪೇಕ್ಷವಾಗಿ ಕಡಿಮೆಯಿರುವ 2018ರ ಈ ಚುನಾವಣೆಯಲ್ಲಿ ಒಂದನ್ನು ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಗೆದ್ದಿದೆ. ಅದೂ ಹೊಸ, ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಿ! ಹೊರಗೆ ಕೋಮುಗಲಭೆಗಳು ಎಷ್ಟು ನಡೆಯುತ್ತಿವೆ ಎಂಬುದಕ್ಕಿಂತ ವಿಷ ಹಾಗೂ ವಿಷಪೂರಿತ ಸಂಘಟನೆಯನ್ನು ಎಷ್ಟು ಸಬಲವಾಗಿ ಹಾಗೂ ವ್ಯಾಪಕವಾಗಿ ಹರಡುವುದು ಸಾಧ್ಯವಾಗಿದೆ ಎಂಬುದೇ ನಿರ್ಣಾಯಕವಾಗುತ್ತಿದೆ.

ಅದಕ್ಕೆ ವಿರುದ್ಧವಾಗಿ ಪ್ರಜಾತಂತ್ರದ – ಅಂದರೆ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆಯ – ಅರಿವನ್ನು ಸಮಾಜದ ತಳಮಟ್ಟದಿಂದ ಬೆಳೆಸುವ ಮತ್ತು ಬಲಿಷ್ಢ ಸಂಘಟನೆಯನ್ನು ಕಟ್ಟುವ ನಿಟ್ಟಿನಲ್ಲಿ ನಾವೆಷ್ಟು ಕಾರ್ಯಪ್ರವೃತ್ತಾರಾಗಿದ್ದೇವೆ ಅಥವ ಕಾರ್ಯಪ್ರವೃತ್ತರಾಗಲಿದ್ದೇವೆ? ನಮ್ಮ ಪ್ರಜಾತಂತ್ರವಾದಿಗಳಲ್ಲಿ ಗಣನೀಯ ವಿಭಾಗದ ಕಾಳಜಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾರಿಕೊಳ್ಳುವುದು ಅಥವಾ ನಮ್ಮದೇ ವರ್ತುಲದಲ್ಲಿ ತಂತಮ್ಮ ವಾದವನ್ನು ಗೆಲ್ಲಿಸಿಕೊಳ್ಳುವುದು ಅಥವ ಇನ್ನಾವುದೋ ವಾದವನ್ನು ಸೋಲಿಸುವುದರಲ್ಲಿ ಪರ್ಯಾವಸಾನಗೊಳ್ಳುತ್ತಿವೆ. ಹೀಗೆ ನಮ್ಮ ಶಕ್ತಿ ಸಾಮಥ್ರ್ಯ ಹರಿದು ಹಳ್ಳಹಿಡಿಯುತ್ತಿದೆ ಅನಿಸುತ್ತಿದೆ.

ಇವೆಲ್ಲದರ ಅರ್ಥ, ಪರಿಸ್ಥಿತಿ ಅತ್ಯಂತ ನಿರಾಶಾದಾಯಕವಾಗಿದೆ ಎಂದೇನೂ ಅಲ್ಲ. ಬಿಜೆಪಿ ನಡೆಸಿದ ಬಹುಮುಖೀ ಆಕ್ರಮಣಕಾರಿ ದಾಳಿಯ ನಂತರವೂ ರಾಜ್ಯದಲ್ಲಿ ಅತ್ಯಂತ ಹೆಚ್ಚು ಮತ ಪಡೆದ ಪಕ್ಷ ಅದಾಗಲಿಲ್ಲ. ಆಯಾ ಕ್ಷೇತ್ರದಲ್ಲಿ ಗೆಲುವಾಗಿ ಪರಿಣಮಿಸುವ ರೀತಿಯಲ್ಲಿ ಮತಗಳು ಕ್ರೋಢೀಕೃತವಾಗಲಿಲ್ಲ ಅಷ್ಟೇ. ಈ ಸನ್ನಿವೇಶದಲ್ಲಿ ಜೆಡಿಎಸ್‍ನೊಂದಿಗೆ ಕಾಂಗ್ರೆಸ್ ಹೃತ್ಪೂರ್ವಕವಾಗಿ ಕೈ ಜೋಡಿಸಿರುವುದು ಒಂದು ಒಳ್ಳೆಯ ಬೆಳವಣಿಗೆಯೇ. ಈ ರಾಜ್ಯದ ರಾಜಕಾರಣದಲ್ಲಿ ಜಾತ್ಯತೀತತೆಯನ್ನು ನೆಲೆಗೊಳಿಸಲು ಇದಕ್ಕಿಂತ ಉತ್ತಮ ಅವಕಾಶ ಸಿಗಲಾರದು. ಆದರೆ ಇಂದಿನ ಪರಿಸ್ಥಿತಿಯನ್ನು ಅಂತಿಮ ಕರೆಗಂಟೆ ಎಂದು ಗಂಭೀರವಾಗಿ ಪರಿಗಣಿಸಬೇಕು ಅಷ್ಟೇ. ಹಾಗೆಯೇ ಯಾವ ರೀತಿಯ ಆಶಾಭ್ರಾಂತಿಯೂ ನಮ್ಮನ್ನು ಆವರಿಸದಂತೆ ಕಾಪಾಡಿಕೊಳ್ಳಬೇಕು.

ಪರ್ಯಾಯ ಮಾಧ್ಯಮಗಳನ್ನು ಕಟ್ಟಲು ಬೇಕಾದ ಸಂವಾದವನ್ನು ಶುರು ಮಾಡೋಣವೆಂಬ ಕರೆಯನ್ನು ಈ ನಿಮ್ಮ ಪತ್ರಿಕೆ ಕೊಟ್ಟಿದೆ. ಅದನ್ನು ಓದಬೇಕೆಂದು ಕೋರುತ್ತೇವೆ ಮತ್ತು ಕಟ್ಟುವ ಪ್ರಕ್ರಿಯೆಯಲ್ಲಿ ಮುಂದೆ ಬರುವವರನ್ನು ಉತ್ತೇಜಿಸಲು, ಸೂಕ್ತ ಅವಕಾಶ ಕಲ್ಪಿಸಿಕೊಡಲು ಗೌರಿ ಮೀಡಿಯಾ ಟ್ರಸ್ಟ್ ಪ್ರಯತ್ನ ಹಾಕುತ್ತದೆಂದು ಹೇಳಬಯಸುತ್ತೇವೆ. ಗೌರಿ ಲಂಕೇಶರಿಗೆ ಇದಕ್ಕಿಂತ ಉತ್ತಮವಾದ ಶ್ರದ್ಧಾಂಜಲಿ ಇನ್ನೇನಿರಲು ಸಾಧ್ಯ?

ಸಂಪಾದಕೀಯ ತಂಡದ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

​ಚನ್ನರಾಯಪಟ್ಟಣ ರೈತರಿಗೆ ಅಂತಿಮ ವಿಜಯ; ​ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ತಿಳಿಸಿದ ‘ಹೋರಾಟ ಸಮಿತಿ’

​ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಭೂ ಹೋರಾಟ ಕೊನೆಗೂ ಸುಖಾಂತ್ಯವಾಗಿದೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಜೊತೆಗೆ ರಾಜ್ಯದ ಹತ್ತಾರು ಜನಪರ ಸಂಘಟನೆಗಳು ನಡೆಸಿದ ಸುದೀರ್ಘ ಹೋರಾಟ...

ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಬಗ್ಗೆ ತುಟಿ ಬಿಚ್ಚದ ಸರ್ಕಾರ; ‘ಬೆಳಗಾವಿ ಚಲೋ’ ಹೋರಾಟಕ್ಕೆ ಕರೆ

ಗುರುವಾರ (ಡಿ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಮೀಸಲಾತಿ ಬಗ್ಗೆ ತುಟಿ ಬಿಚ್ಚದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ' 'ಬೆಳಗಾವಿ ಚಲೋ'...

ಅಖಂಡ ಕರ್ನಾಟಕದ ಪ್ರದೇಶಗಳನ್ನು ಸಾಂಸ್ಕೃತಿಕವಾಗಿ ವಿಲೀನಗೊಳಿಸಲು ಇದು ಸಕಾಲ: ಡಾ.ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಮತ್ತು ನೆರೆ ರಾಜ್ಯಗಳ ಅಚ್ಚ ಕನ್ನಡ ಪ್ರದೇಶಗಳ ನಡುವಿನ ಭೌತಿಕ ಗಡಿಗಳು ಇದ್ದಂತೆ ಇದ್ದರೂ ಸಾಂಸ್ಕೃತಿಕವಾಗಿ ಹೇರಲಾಗುತ್ತಿರುವ ಗಡಿಗಳನ್ನು ಅಪ್ರಸ್ತುತವಾಗಿಸುವುದು ಸಾಧ್ಯವಿದೆ. ಇಂತಹ ಪ್ರದೇಶಗಳೊಂದಿಗೆ ಕರ್ನಾಟಕದ ಭಾವನಾತ್ಮಕ ಸಂಬಂಧದ ವಿಸ್ತರಣೆಗೆ ಇದು...

ಅರುಂಧತಿ ರಾಯ್ ಅವರ ಪುಸ್ತಕದ ಮುಖಪುಟ ವಿರೋಧಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಖ್ಯಾತ ಲೇಖಕಿ ಅರುಂಧತಿ ರಾಯ್ ಅವರ 'ಮದರ್ ಮೇರಿ ಕಮ್ಸ್ ಟು ಮಿ' ಪುಸ್ತಕದ ಮುಖಪುಟ ಚಿತ್ರದ ಪ್ರಸಾರದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ಏಕೆಂದರೆ, ಲೇಖಕರು ಧೂಮಪಾನವನ್ನು...

ರೋಹಿಂಗ್ಯಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸಿಐಜೆ ಸೂರ್ಯಕಾಂತ್ ಅವರಿಗೆ ಮಾಜಿ ನ್ಯಾಯಾದೀಶರು, ವಕೀಲರು, ಶಿಕ್ಷಣ ತಜ್ಞರಿಂದ ಮುಕ್ತ ಪತ್ರ

ರೋಹಿಂಗ್ಯಾಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಶಿಕ್ಷಣ ತಜ್ಞರು ಸೂರ್ಯಕಾಂತ್ ಅವರಿಗೆ ಮುಕ್ತ ಪತ್ರ ಬರೆದಿದ್ದಾರೆ.  ಕಿರುಕುಳದಿಂದ ಪಲಾಯನ ಮಾಡಿದ...

ಛತ್ತೀಸ್‌ಗಢ: ‘ಎಸ್‌ಇಸಿಎಲ್‌ ಅಮೇರಾ’ ಕಲ್ಲಿದ್ದಲು ಗಣಿ ವಿಸ್ತರಣೆ ವಿರೋಧಿಸಿ ಪರ್ಸೋಡಿ ಕಲಾನ್ ಗ್ರಾಮದಲ್ಲಿ ಪ್ರತಿಭಟನೆ

ಛತ್ತೀಸ್‌ಗಢದ ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ಎಸ್‌ಇಸಿಎಲ್‌) ಅಮೇರಾ ಕಲ್ಲಿದ್ದಲು ಗಣಿಗಾರಿಕೆ ವಿಸ್ತರಣೆ ವಿರೋಧಿಸಿ ಡಿ.3 ರಂದು ಅಂಬಿಕಾಪುರದ ಪರ್ಸೋಡಿ ಕಲಾನ್ ಗ್ರಾಮದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಮೇಲೆ ಗ್ರಾಮಸ್ಥರು...

ಗಂಟೆಗಟ್ಟಲೆ ಇಂಡಿಗೋ ವಿಮಾನ ವಿಳಂಬ: ‘ನನ್ನ ಮಗಳಿಗೆ ಸ್ಯಾನಿಟರಿ ಪ್ಯಾಡ್‌ ಕೊಡಿ..’ ಎಂದು ಬೇಡಿಕೊಂಡ ತಂದೆ

ದೇಶಾದ್ಯಂತ ಇಂಡಿಗೋ ಪ್ರಯಾಣಿಕರು ಭಾರಿ ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ, ವಿಮಾನಯಾನ ಸಂಸ್ಥೆಯ ವಿಳಂಬ ಮತ್ತು ರದ್ದತಿ ನಿರ್ಧಾರವು ಸತತ ನಾಲ್ಕನೇ ದಿನವೂ (ಡಿ. 5) ಮುಂದುವರೆದಿದೆ. ಅವ್ಯವಸ್ಥೆಯ ನಡುವೆಯೇ, ವಿಮಾನ ನಿಲ್ದಾಣದಿಂದ ಬಂದ...

ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದೆ: ಪುಟಿನ್‌ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಹೇಳಿಕೆ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ. ಶಾಂತಿಯ ಪರವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭೇಟಿಗೆಂದು ಭಾರತಕ್ಕೆ ಆಗಮಿಸಿದ್ದು,...

ಮನೆ ಕಟ್ಟಲು, ವಾಹನ ಖರೀದಿಸಲು ಇದು ಸುಸಮಯ: ರೆಪೊ ದರ ಕಡಿತಗೊಳಿಸಿದ ಆರ್.ಬಿ.ಐ

ಡಿಸೆಂಬರ್ 05, ಶುಕ್ರವಾರದಂದು ನಡೆದ ಹಣಕಾಸು ನೀತಿ ಸಭೆಯಲ್ಲಿ (MPC) ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇಂದಿನ ಕಡಿತದ ನಂತರ, ಕೇಂದ್ರ ಬ್ಯಾಂಕ್ ಈ...

ಉತ್ತರ ಪ್ರದೇಶ| ದಲಿತ ಯುವಕನ ಮೇಲೆ ಹಲ್ಲೆ; ಬಂದೂಕು ತೋರಿಸಿ ವಿವಸ್ತ್ರಗೊಳಿಸಿದ ಗುಂಪು

ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗುಂಪೊಂದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಗುಂಪು ದಲಿತ ಯುವಕನನ್ನು ಚಪ್ಪಲಿಯಿಂದ ಹೊಡೆದು, ಮುಷ್ಟಿ, ಕಾಲು ಮತ್ತು...