Homeಕರ್ನಾಟಕಈ ಅವಾಂತರದ ಕೇಂದ್ರ ಪಾತ್ರಧಾರಿ ಸಿದ್ದು!!?? ಏನೇಳುತ್ತಿವೆ ವಾದಗಳು

ಈ ಅವಾಂತರದ ಕೇಂದ್ರ ಪಾತ್ರಧಾರಿ ಸಿದ್ದು!!?? ಏನೇಳುತ್ತಿವೆ ವಾದಗಳು

- Advertisement -
- Advertisement -

| ನೀಲಗಾರ |

ಸಮ್ಮಿಶ್ರ ಸರ್ಕಾರದ ಬಂದ ನಂತರ ಸಿದ್ದರಾಮಯ್ಯನವರ ಪಾತ್ರದ ಕುರಿತಾಗಿ ಹಲವು ಅಭಿಪ್ರಾಯಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳೆಯದಲ್ಲಿ ಓಡಾಡುತ್ತಲೇ ಇವೆ. ಈ ರಾಜೀನಾಮೆ ಅವಾಂತರದ ಹಿಂದೆಯೂ ಸಿದ್ರಾಮಯ್ಯನವರೇ ಕೆಲಸ ಮಾಡಿದ್ದಾರೆ ಅನ್ನೋ ವಾದ ಹುಟ್ಟುಕೊಳ್ಳಲೂ ಇಂಥಾ ಅಭಿಪ್ರಾಯಗಳು ನೀರೆರೆಯುತ್ತಿವೆ. ಇದು ಎಷ್ಟರಮಟ್ಟಿಗೆ ಸತ್ಯವೋ ಸುಳ್ಳೋ ಗೊತ್ತಿಲ್ಲ. ಅವು ಹೀಗಿವೆ.

1. ಮೊಟ್ಟ ಮೊದಲ ದಿನದಿಂದಲೂ ಸಿದ್ದರಾಮಯ್ಯ ಈ ಸರ್ಕಾರದ ಪರವಾಗಿ ಇರಲಿಲ್ಲ. ಈ ಸರ್ಕಾರ ಬಿದ್ದು ಹೋಗಲೇಬೇಕು ಎನ್ನುವುದು ಅವರ ಇರಾದೆಯಾಗಿತ್ತು. ಮೊದಲಿಂದಲೂ ಭಿನ್ನಮತ ಇರುವಂತೆ ನೋಡಿಕೊಂಡಿದ್ದು ಅವರೇ. ಸರ್ಕಾರದಲ್ಲಿ ಡಿಕೆಶಿ ಮತ್ತು ಪರಮೇಶ್ವರ್ ಅವರ ಕೈ ಮೇಲಾದದ್ದೂ ಸಹಾ ಅವರಿಗೆ ಅಸಮಾಧಾನ ತಂದಿತ್ತು. ಭಿನ್ನಮತವನ್ನು ಹುಟ್ಟುಹಾಕಿ ತನ್ನ ಹಿಡಿತ ಹೆಚ್ಚಾಗುವಂತೆ ನೋಡಿಕೊಳ್ಳುತ್ತಿದ್ದರು. ಸುಮಲತಾ ಅವರ ಕ್ಯಾಂಡಿಡೇಟ್. ಆ ಭಾಗದ ಎಲ್ಲಾ ಕಾಂಗ್ರೆಸ್ ನಾಯಕರೂ ಇವರ ಹಿಂಬಾಲಕರೇ. ಅವರೆಲ್ಲರೂ ಸುಮಲತಾಗೆ ಬೆಂಬಲಿಸುವಂತೆ ನೋಡಿಕೊಂಡರು. ಕೆ.ಎನ್.ರಾಜಣ್ಣರನ್ನು ಎತ್ತಿಕಟ್ಟಿ ದೇವೇಗೌಡರೂ ಸೋಲುವಂತೆ ನೋಡಿಕೊಂಡರು. ಕೋಲಾರದಲ್ಲಿ ರಮೇಶ್ ಕುಮಾರ್‍ರನ್ನು ಮನವೊಲಿಸುವ ಕೆಲಸ ಮಾಡದೇ ಮುನಿಯಪ್ಪರ ಸೋಲಿನ ಅಂತಹ ಹೆಚ್ಚಾಗುವಂತೆ ಆಯಿತು. ಮೊಯಿಲಿಯವರ ವಿರುದ್ಧ ಕೆಲಸ ಮಾಡಿದ್ದ ಚಿಕ್ಕಬಳ್ಳಾಪುರದ ಸುಧಾಕರ್ ಮನೆಯಲ್ಲೇ ಫಲಿತಾಂಶದ ದಿನ ಊಟ ಮಾಡಿದರು.

ಲೋಕಸಭಾ ಫಲಿತಾಂಶವು ಅವರಿಗೆ ಬೇಸರವನ್ನೇನೂ ತಂದಿರಲಿಲ್ಲ. ಅಂದು ಸಿದ್ದರಾಮಯ್ಯನವರ ಮನೆಯಲ್ಲಿ ಸೇರಿದ್ದವರಲ್ಲಿ ಎಲ್ಲರೂ ಜೋಕ್ ಮಾಡಿಕೊಂಡು ನಗುತ್ತಿದ್ದರು. ಎಸ್.ಟಿ.ಸೋಮಶೇಖರ್ ಸಂಪೂರ್ಣ ಅವರು ಹೇಳಿದಂತೆ ಕೇಳದಿದ್ದರೂ, ಭೈರತಿ ಬ್ರದರ್ಸ್ ಪೂರ್ಣ ಅವರ ಹಿಡಿತದಲ್ಲಿರುವವರು. ಹಾಗಾಗಿ ಇವರೇ ಬಿಜೆಪಿಗೆ ಬೆಂಬಲ ಕೊಡಲು ಹೇಳಿದ್ದಾರೆ ಎಂಬುದು ಒಂದು ವಾದ. ಇದಕ್ಕೆ ಪೂರಕವಾಗಿ 2008ರಲ್ಲಿ ಬಿಜೆಪಿಗೆ 5 ಜನ ಪಕ್ಷೇತರರ ಬೆಂಬಲದ ಅಗತ್ಯವಿತ್ತು. ಪಕ್ಷೇತರರಲ್ಲಿ ಇಬ್ಬರಾದ ವರ್ತೂರು ಪ್ರಕಾಶ್ ಮತ್ತು ನರೇಂದ್ರಸ್ವಾಮಿ ಸಿದ್ದರಾಮಯ್ಯನವರು ಹೇಳಿದವರಿಗೇ ತಮ್ಮ ಬೆಂಬಲ ಎಂದಿದ್ದರು. ಆದರೆ, ಇಬ್ಬರಿಗೂ ಸಿದ್ದರಾಮಯ್ಯನವರು ಬಿಜೆಪಿಗೆ ಹೋಗಿ ಮಂತ್ರಿಗಳಾಗಿ ಎಂದೇ ಹೇಳಿದ್ದರು. ಬಾಯಿ ಭದ್ರವಿಲ್ಲದ ವರ್ತೂರು ಇದನ್ನು ನಂತರದ ದಿನಗಳಲ್ಲಿ ಬಹಿರಂಗಪಡಿಸಿದ್ದರು. ಹಾಗಾಗಿ ಸಿದ್ದರಾಮಯ್ಯನವರು ಈ ಬಿಕ್ಕಟ್ಟಿನ ಸೃಷ್ಟಿಗೆ ನೇರ ಕಾರಣ.

ಶಾಸಕರ ರಾಜೀನಾಮೆ ನಂತರ ಬೆಂಗಳೂರಿಗೆ ಬಂದ ಕೆ.ಸಿ.ವೇಣುಗೋಪಾಲ್‍ರಿಗೆ ‘ಪ್ರತಿಪಕ್ಷದಲ್ಲಿ ಕೂತು ಪಕ್ಷ ಕಟ್ಟೋಣ. ಸಾಕಿನ್ನು ಇವರ ಸಹವಾಸ’ ಎಂದೇ ಸಿದ್ದು ಹೇಳಿದ್ದಾರೆ. ಇವೆಲ್ಲವೂ ಸಿದ್ದರಾಮಯ್ಯನವರ ಧೋರಣೆಯನ್ನು ತೋರಿಸುತ್ತದೆ. ಸರ್ಕಾರ ಬೀಳಲಿ, ವಿರೋಧಪಕ್ಷವಾಗಿರೋಣ. ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರೋಣ. ಆ ಹೊತ್ತಿಗೆ ಈಗ ಹೋದವರೂ ವಾಪಸ್ಸು ಬರುತ್ತಾರೆ ಎಂಬುದು ಅವರ ಲೆಕ್ಕಾಚಾರ. ಇದು ಮೊದಲ ವಾದ.

2. ಅವರೇ ಕಳಿಸಿದ್ದು ಎನ್ನುವುದು ವಾಸ್ತವವಲ್ಲ. ಆದರೆ, ಮೊದಮೊದಲು ಎತ್ತಿಕಟ್ಟಿದ್ದರು. ತನ್ನನ್ನು ಉಪೇಕ್ಷಿಸುವಂತಿಲ್ಲ ಎಂಬ ಸಂದೇಶ ಕೊಡುವುದು ಸರ್ಕಾರವನ್ನು ದುರ್ಬಲಗೊಳಿಸಿ ಸಂದರ್ಭ ನೋಡಿ ಸರ್ಕಾರ ಬೀಳಿಸುವುದು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆದುಕೊಂಡಲ್ಲಿ ಬೆಂಬಲ ಹಿಂತೆಗೆದುಕೊಂಡು ಚುನಾವಣೆ ಎದುರಿಸುವುದು ಅವರ ಉದ್ದೇಶವಾಗಿತ್ತು. ಹಾಗಾಗಿಯೇ ರಮೇಶ್ ಜಾರಕಿಹೊಳಿ & ಟೀಂ ಮುಂಬೈಗೆ ಹೋಗಿ ಕೂತಾಗ ಅದರ ಹಿಂದೆ ಸಿದ್ದರಾಮಯ್ಯನವರದ್ದೇ ಕೈವಾಡವಿತ್ತು. ಉಮೇಶ್ ಜಾಧವ್‍ರಿಗೂ ಧೈರ್ಯ ಕೊಟ್ಟು ಆ ಕಡೆಗೆ ಅವರೇ ಕಳಿಸಿದ್ದರು. ಇಲ್ಲದಿದ್ದರೆ ಅಂತಹ ಧೈರ್ಯ ಅವರಿಗೆ ಇರಲೇ ಇಲ್ಲ. ಅಲ್ಲಿಂದಾಚೆಗೆ ಜಾಧವ್‍ರು ಬಿಜೆಪಿಯ ಸಂಪರ್ಕಕ್ಕೆ ಹೆಚ್ಚೆಚ್ಚು ಹೋದರೂ ಅದನ್ನು ತಡೆಯುವ ಕೆಲಸ ಇವರು ಮಾಡಲಿಲ್ಲ. ಅಂತಿಮವಾಗಿ ಅದು ಖರ್ಗೆಯವರ ಸೋಲಿನಲ್ಲಿ ಪರ್ಯವಸಾನವಾಯಿತು. ಕಡೆಯ ದಿನಗಳಲ್ಲಿ ಸ್ವತಃ ಸಿದ್ದು ಕಲಬುರ್ಗಿಗೆ ಹೋಗಿ ಮೂರ್ನಾಲ್ಕು ದಿನ ಉಳಿದರೂ ಏನೂ ಪ್ರಯೋಜವಾಗಲಿಲ್ಲ. ಸೋಮಶೇಖರ್, ಭೈರತಿ ಮತ್ತಿತರರಿಗೂ ಹೋಗಿ ಎಂದು ಇವರು ಹೇಳಿಲ್ಲ. ಹಾಗಾಗಿ ಇಂದಿನ ಬಿಕ್ಕಟ್ಟಿಗೆ ಸಿದ್ದರಾಮಯ್ಯನವರು ಕಾರಣ, ಆದರೆ ಪರೋಕ್ಷ ಕಾರಣ ಎಂಬುದು ಎರಡನೇ ವಾದ.

3. ಸಿದ್ದರಾಮಯ್ಯನವರು ಸ್ಟ್ರಾಟೆಜಿಸ್ಟ್ ಅಲ್ಲವೇ ಅಲ್ಲ. ಅವರ ಸಮಸ್ಯೆ ಇರುವುದು ಬೇರೆ ರೂಪದಲ್ಲಿ. ಅವರು ಇಂತಹ ತಂತ್ರಗಳನ್ನೆಲ್ಲಾ ಹೆಣೆದು ಕೆಲಸ ಮಾಡಿಲ್ಲ. ಆದರೆ, ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಪಾತ್ರ ನಿರ್ವಹಿಸಲಿಲ್ಲ. ಮೊದಲ ದಿನದಿಂದ ಎಂದೂ ಸಮ್ಮಿಶ್ರ ಸರ್ಕಾರದ ಕುರಿತು ಹೃತ್ಪೂರ್ವಕವಾದ ಒಂದೇ ಒಂದು ಮಾತನ್ನು ಹೇಳಲಿಲ್ಲ. ಸಮಸ್ಯೆಗಳಾದಾಗ ಮಧ್ಯೆ ನಿಂತು ಬಗೆಹರಿಸಲಿಲ್ಲ. ಬದಲಿಗೆ, ತಮ್ಮ ವಲಯದಲ್ಲಿ ಸದಾ ಗೌಡರ ಕುಟುಂಬ ಮತ್ತು ಸಿಎಂಅನ್ನು ಬೈದುಕೊಂಡೇ ಕಾಲ ಕಳೆದರು. ಇದು ಒಟ್ಟಾರೆ, ಪ್ರಯೋಜನಕ್ಕಿಲ್ಲದ ಸರ್ಕಾರ ಎಂಬ ಭಾವನೆ ಬಲವಾಗಲು ಕಾರಣವಾಯಿತು. ಅವರ ಹತ್ತಿರದ ಬಳಗಕ್ಕೆ ಈ ಸರ್ಕಾರ ಬೀಳಲು ಏನು ಮಾಡಿದರೂ ತಪ್ಪಿಲ್ಲ ಎಂಬ ಭಾವನೆ ಬಲವಾಗುವಂತೆ ಮಾಡಿದರು.

ರಾಮಲಿಂಗಾರೆಡ್ಡಿ ಮತ್ತಿತರರನ್ನು ಉಪೇಕ್ಷೆ ಮಾಡಿದ್ದು, ಬಿ.ಸಿ.ಪಾಟೀಲರಂಥವರಿಗೆ ಮಂತ್ರಿ ಸ್ಥಾನ ಸಿಗದಂತಾಗಿದ್ದು ಇಂತಹ ಹಲವು ತಪ್ಪುಗಳಿಗೆ ಸಿದ್ದರಾಮಯ್ಯರೇ ಕಾರಣ. ಎಚ್.ವಿಶ್ವನಾಥ್‍ರು ಕಾಂಗ್ರೆಸ್ ಬಿಟ್ಟು ಹೋಗಲು ಸಿದ್ದರಾಮಯ್ಯನವರ ಉಡಾಫೆ ವ್ಯಕ್ತಿತ್ವ ಹಾಗೂ ಅಹಂಕಾರದ ಧೋರಣೆಗಳು ಪಾತ್ರ ವಹಿಸಿದ್ದವು. ಈ ಸರ್ಕಾರ ಉಳಿಸಿಕೊಳ್ಳುವುದರಲ್ಲಿ ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ. ಹಾಗೆಂದು ನೀವು ಬಿಜೆಪಿಗೆ ಹೋಗಿ ಎಂದು ಅವರು ಹೇಳಿಲ್ಲ. – ಇದು ಮೂರನೆಯ ವಾದ.

ಮೂರರಲ್ಲಿ ಯಾವುದನ್ನೂ ತಳ್ಳಿ ಹಾಕುವಂತಿಲ್ಲ. ಆದರೆ ಮೂರನೆಯದಷ್ಟೇ ಕಾರಣ ಎಂದುಕೊಂಡರೂ ಸಿದ್ದರಾಮಯ್ಯನವರ ನಡೆ ಆಕ್ಷೇಪಾರ್ಹವೇ ಆಗಿತ್ತು. ರಾಜ್ಯದಲ್ಲಿ ಪಕ್ಷವನ್ನು ಕಟ್ಟಲು ಪ್ರವಾಸ ಮಾಡಿದರೂ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದಂತಾಗುತ್ತದೆಂಬ ಮಾತಿಗೆ ಅರ್ಥವಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುತ್ತಲೇ ಉಳಿದುದನ್ನು ಮಾಡುವುದು ಮುತ್ಸದ್ದಿಯ ಲಕ್ಷಣ. ಅಂತಹ ಮುತ್ಸದ್ದಿ ಅವರಲ್ಲವೇ ಅಲ್ಲ. ಸರ್ಕಾರದ ಬಗ್ಗೆಯಿರಲಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಹೃತ್ಪೂರ್ವಕವಾಗಿ ಅವರು ಹೊಗಳಿದ್ದೇ ಇಲ್ಲ. ಖರ್ಗೆಯಂಥವರು ಪಾರ್ಲಿಮೆಂಟಿನಲ್ಲಿರಬೇಕು ಎಂದು ಕಲಬುರ್ಗಿಯ ಚುನಾವಣಾ ಭಾಷಣದಲ್ಲಿ ಹೇಳಿದರಾದರೂ, ಅದೂ ಸಹಾ ಒಂದೆರಡು ವಾಕ್ಯಗಳಿಗಿಂತ ಹೆಚ್ಚಿರಲಿಲ್ಲ. ತಾನು ಯಾವುದೋ ಒಂದು ರೀತಿಯಲ್ಲಿ ಖರ್ಗೆಯವರ ಅವಕಾಶವನ್ನು ಕಸಿದಿದ್ದೇನೆ ಎಂದು ಸಿದ್ದರಾಮಯ್ಯನವರು ಖಾಸಗಿ ಮಾತುಕತೆಗಳಲ್ಲಿಯಾದರೂ ಹೇಳಿದ್ದು ಬೆಳಕಿಗೆ ಬಂದಿಲ್ಲ.

ಈ ಸರ್ಕಾರಕ್ಕೆ ರಾಜ್ಯದ ನಾಲ್ಕು ಪ್ರಮುಖ ಸಮುದಾಯಗಳ ಬೆಂಬಲವಿತ್ತು (ಯಾವ ಪಕ್ಷಕ್ಕೂ ಯಾವುದೇ ಸಮುದಾಯದ ಶೇ.100ರಷ್ಟು ಬೆಂಬಲವಿರಲ್ಲ ಎಂಬುದನ್ನು ಮನದಲ್ಲಿಟ್ಟುಕೊಂಡೇ ಇದನ್ನು ನೋಡಬೇಕು). ಒಕ್ಕಲಿಗರು, ಕುರುಬರು, ದಲಿತರು (ಎಡಗೈ ಸಮುದಾಯದ ಒಂದು ಸಣ್ಣ ಭಾಗವಷ್ಟೇ ದೂರವಾಗಿತ್ತು) ಮತ್ತು ಮುಸ್ಲಿಮರು. ಅದರ ಜೊತೆಗೆ ಜಾರಕಿಹೊಳಿ ಬ್ರದರ್ಸ್, ಬಳ್ಳಾರಿಯ ಶಾಸಕರು ಹಾಗೂ ಕೆ.ಎನ್.ರಾಜಣ್ಣ ಮತ್ತು ಉಗ್ರಪ್ಪನಂಥವರನ್ನು ಮುಂದೆ ತಂದು ವಾಲ್ಮೀಕಿ ಸಮುದಾಯದ ಗಣನೀಯ ಭಾಗವನ್ನು ಜೊತೆಗೆ ತರುವುದು ಹಾಗೂ ಎಂ.ಬಿ.ಪಾಟೀಲರಂಥವರೂ ಸೇರಿಸಿ ಲಿಂಗಾಯಿತ ಸಮುದಾಯದ ಒಂದಷ್ಟು ಭಾಗವನ್ನು ಗೆದ್ದುಕೊಳ್ಳುವುದು ಇತ್ಯಾದಿ ಸಾಧ್ಯತೆಗಳಿದ್ದವು. ಅಂತಹ ಪ್ರಯತ್ನಗಳಿಗಿಂತ ಸೀಮಿತವಾದ ಗೌಡರ ಕುಟುಂಬಕ್ಕೆ ವಿರೋಧ ಎಂಬಷ್ಟಕ್ಕೇ ಸೀಮಿತವಾದದ್ದು ಸಿದ್ದರಾಮಯ್ಯನವರ ಮಿತಿಯೂ ಆಗಿದೆ. ಆ ದೃಷ್ಟಿಯಲ್ಲಿ ಸಿದ್ದರಾಮಯ್ಯನವರು ತಮ್ಮ ಪಾತ್ರ ನಿರ್ವಹಿಸಲು ವಿಫಲರಾಗಿದ್ದಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಇದನ್ನು ಓದಿರಿ; ಮಾನಗೇಡಿ ಶಾಸಕರು, ಹೊಣೆಗೇಡಿ ನಾಯಕರೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...