Homeರಾಜಕೀಯಹೆಗಡೆ ಮಗಳು ಕೈ ಕ್ಯಾಂಡಿಡೇಟಾದರೆ ಅನಂತ್ಮಾಣಿಗೆ ಸೋಲು ಗ್ಯಾರಂಟಿ!

ಹೆಗಡೆ ಮಗಳು ಕೈ ಕ್ಯಾಂಡಿಡೇಟಾದರೆ ಅನಂತ್ಮಾಣಿಗೆ ಸೋಲು ಗ್ಯಾರಂಟಿ!

- Advertisement -
- Advertisement -

ಶುದ್ಧೋದನ |

ಉತ್ತರ ಕನ್ನಡದಲ್ಲಿ ಲೋಕಸಭೆ ಚುನಾವಣೆಯ ಸಂಭಾವ್ಯ ಪೈಲ್ವಾನಕುರಿತು ರಂಗು-ರಂಗಿನ ಮಾತುಕತೆ ನಡೆಯಲಾರಂಭಿಸಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರಾದ ಬ್ರಾಹ್ಮಣರೂ ಅಧಿಕ ಪ್ರಸಂಗಿ ಸಂಸದ ಅನಂತ್ಮಾಣಿಯ ಹಾವಳಿಗೆ ರೋಸತ್ತು ಹೋಗಿದ್ದಾರೆ. ಸ್ವಪಕ್ಷದೊಳಗಿನ ಬ್ರಾಹ್ಮಣ ಲಾಬಿಯೂ ಆತನಿಗೆ ತಿರುಗಿ ಬಿದ್ದಿರೋದು ಚುನಾವಣಾ ಕಣಕ್ಕೆ ರೋಚಕತೆಯನ್ನು ತಂದುಕೊಟ್ಟಿದೆ. ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ, ಶಿರಸಿ ಶಾಸಕ-ಕಾಗೇರಿ ಹೆಗಡೆ ವಗೈರೆ ವಿಪ್ರೋತ್ತಮರ ವಿರೋಧಿ ಪಡೆ ಅನಂತ್ಮಾಣಿಗೆ ಗೇಟ್‌ಪಾಸ್ ಕೊಡಿಸುವ ಹಠಕ್ಕೆ ಬಿದ್ದಿದೆ. ಈಚೆಗೆ ನಿಧನರಾದ ಕೇಂದ್ರ ಮಂತ್ರಿ ಅನಂತ ಕುಮಾರ್ ಶಾಸ್ತ್ರೀಯ ಇಂಗಿತವೂ ಇದೇ ಆಗಿತ್ತು. ಹಿಂದುತ್ವದ ಇತಿಹಾಸ ‘ತಜ್ಞ’ ಸೂಲಿಬೆಲೆ ಚಕ್ರವರ್ತಿಯನ್ನು ಉತ್ತರಕನ್ನಡದಲ್ಲಿ ಬಿಜೆಪಿ ಕ್ಯಾಂಡಿಡೇಟ್ ಮಾಡುವ ಪ್ರಯತ್ನ ಬಿರುಸಾಗಿ ನಡೆಯುತ್ತಿದೆ. ಇದು ಸಾಧ್ಯವಾಗದಿದ್ದರೆ ಅನಂತ್ಮಾಣಿಯ ಆಜನ್ಮ ಶತ್ರು ಕಾಗೇರಿ ಹೆಗಡೆಯನ್ನು ಕೇಸರಿ ಪಾಳೆಯದ ಕಪ್ಪುಕುದುರೆ ಮಾಡಿ ಯುದ್ಧಕ್ಕಿಳಿಸುವ ಪ್ಲಾನ್-ಬಿ ಕೂಡ ಹೆಣೆಯಲಾಗಿದೆ.

ಈಗಾಗಲೇ ನಡೆದಿರುವ ಸಮೀಕ್ಷೆಗಳೆಲ್ಲವೂ ಮಾಣಿ ಗೆಲ್ಲುವುದು ಅನುಮಾನ ಎಂತಲೇ ಹೇಳಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಎಚ್ಚರಿಕೆಯ ಒಮ್ಮತದ ಗೇಮ್‌ಪ್ಲ್ಯಾನ್ ಹೆಣೆದರೆ ಅನಂತ್ಮಾಣಿಯನ್ನು ಮಾಜಿ ಮಾಡೋದು ಕಷ್ಟದ ಕೆಲಸವೇನೂ ಅಲ್ಲ. ಕಾಂಗ್ರೆಸ್-ಜೆಡಿಎಸ್ ಹೈಕಮಾಂಡ್ ಎರಡನ್ನು ಏಕಕಾಲದಲ್ಲಿ ನಿಭಾಯಿಸಬಲ್ಲ ಆರ್.ವಿ.ದೇಶಪಾಂಡೆ ದಗಲುಬಾಜಿತನ ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮೈತ್ರಿಕೂಟದ ಹುರಿಯಾಳು ನಿರಾಯಾಸವಾಗಿ ಗೆಲ್ಲಬಹುದು. ಹಾಗಂತ ದೇಶಪಾಂಡೆ, ಕಳೆದ ಬಾರಿ ಬರೋಬ್ಬರಿ ಒಂದು ಮುಕ್ಕಾಲು ಲಕ್ಷ ಮತದಂತರದಲ್ಲಿ ಸೋತಿರುವ ತನ್ನ ಮಗ ಪ್ರಶಾಂತನನ್ನೇ ಮತ್ತೆ ಅಭ್ಯರ್ಥಿಯಾಗಿಸಿದರೆ ಅದು ಕಾಂಗ್ರೆಸ್ಸಿಗೇ ಲುಕ್ಸಾನು. ಯಾಕೆಂದರೆ ಜಿಲ್ಲೆಯ ಎರಡು ಪ್ರಬಲ ಜಾತಿಯಾದ ಹವ್ಯಕ ಬ್ರಾಹ್ಮಣರು ಮತ್ತು ದೀವರನ್ನು ದೇಶಪಾಂಡೆ ಎದುರು ಹಾಕಿಕೊಂಡಿರೋದು ಅವರಿಗೆ ಮುಳುವಾಗಲಿದೆ.

ಮಗನಲ್ಲದಿದ್ದರೆ, ಡಿಸಿಸಿ ಅಧ್ಯಕ್ಷನೂ ಕಳೆದ ಅಸೆಂಬ್ಲಿ ಇಲೆಕ್ಷನ್ನಲ್ಲಿ ಶಿರಸಿಯಲ್ಲಿ ಸೋತಿರುವ ಭೀಮಣ್ಣ ನಾಯ್ಕನನ್ನಾದರು ಅಭ್ಯರ್ಥಿಯಾಗಿಸುವ ಸಾಹಸಕ್ಕೆ ದೇಶಪಾಂಡೆ ಸಾಹೇಬರು ಕೈಹಾಕಬಹುದು. ಆದರೆ ಸ್ವಜಾತಿ ದೀವರ ನಡುವೆಯೇ ಲೀಡರ್‌ಗಿರಿ ಬೆಳೆಸಿಕೊಳ್ಳಲಾಗದ ಭೀಮಣ್ಣನಿಗೆ ಎಂಪಿಗಿರಿ ಕ್ಯಾಂಡಿಡೇಟಾಗುವ ವರ್ಚಸ್ಸಿಲ್ಲ ಅನ್ನೋದು ಮಾತ್ರ ಸತ್ಯ. ಇನ್ನು ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌ರಿಗೆ ಉತ್ತರಕನ್ನಡದಿಂದ ಎಂಪಿಗಿರಿಗೆ ಸ್ಪರ್ಧಿಸುವ ಯೋಚನೆಯಿದ್ದಂತಿದೆ. ಆದರೆ ಈಡಿಗರ ನಾಯಕನೆಂಬ ಬ್ರ್ಯಾಂಡೇ ಹರಿಪ್ರಸಾದ್‌ಗೆ ಮುಳುವಾಗಿದೆ. ಯಾಕೆಂದರೆ ಜಿಲ್ಲೆಯಲ್ಲಿ ದೀವರ ವಿರುದ್ದ ಇತರ ಸಣ್ಣ ಪುಟ್ಟ ಜಾತಿಗಳು-ಬ್ರಾಹ್ಮಣರು ಒಂದಾಗುವ ದ್ವೇಷದ ವಾತಾವರಣವಿದೆ. ಇದು ಹಿಂದುತ್ವದ ಅಡ್ಡ ಪರಿಣಾಮ! ಬ್ರಾಹ್ಮಣಿಕೆಯ ತಂತ್ರಗಾರಿಕೆ!!

ಜೆಡಿಎಸ್‌ನ ಆನಂದ ಅಸ್ನೋಟಿಕರ್ ತಾನೊಬ್ಬ ಹಿಂದುಳಿದ ವರ್ಗದ ನಾಯಕಾಗ್ರೇಸ ಎಂಬಂತೆ ಪೋಸು ಕೊಡುತ್ತಿದ್ದಾನೆ. ಆದರೆ ಅಸ್ನೋಟಿಕರ್‌ಗೆ ಕಾರವಾರದಾಚೆಗೆ ಮತ ಪಡೆಯುವ ಶಕ್ತಿಯಿಲ್ಲ. ಬಿಜೆಪಿಯ ಅನಂತ್ಮಾಣಿ ಸೋಲಿಸಲು ಮೈತ್ರಿಕೂಟ ಆತನದೇ ಜಾತಿಯ ಹವ್ಯಕ ಅಭ್ಯರ್ಥಿ ನಿಲ್ಲಿಸುವ ಸ್ಟಾçಟಜಿ ಮಾಡಬೇಕಾಗಿದೆ. ಅನಂತ್ಮಾಣಿ ಬಗ್ಗೆ ಬೇಸರದಲ್ಲಿರುವ ಹವ್ಯಕರ ಮತ ಈ ತಂತ್ರಗಾರಿಕೆಯಿಂದ ಸಲೀಸಾಗಿ ಪಡೆಯಬಹುದು. ದೇಶಪಾಂಡೆ ಖಾನ್‌ದಾನ್ ಇಲೆಕ್ಷನ್ ಕಣದಿಂದ ದೂರಾದರೆ ದೀವರು ಮತ್ತಿತರ ಹಿಂದುಳಿದ ಸಮುದಾಯದ ಮತವೂ ಮೈತ್ರಿಕೂಟಕ್ಕೆ ಬರುತ್ತದೆ. ಆದರೆ ಕಾಂಗ್ರೆಸ್‌ನಲ್ಲಿ ಅಂಥ ದೈತ್ಯ(ಅನಂತ್ಮಾಣಿ) ಸಂಹಾರಕ ಹವ್ಯಕ ಕಾಣಿಸುತ್ತಿಲ್ಲ. ಜೆಡಿಎಸ್‌ನಲ್ಲಿರುವ ಶಶಿಭೂಷಣ ಹೆಗಡೆ ಇಡೀ ಜಿಲ್ಲೆಯಲ್ಲಿ ಪ್ರಭಾವಳಿಯಿದೆ. ಹೆಗಡೆಜೀ ಮೊಮ್ಮಗನೆಂಬ ಬಲವಿದೆ. ಹವ್ಯಕರ ಮತ ಪಡೆಯಬಲ್ಲ ಶಶಿಭೂಷಣ್‌ಗೆ ಇತರ ವರ್ಗದ ಮತಕ್ಕೆ ಹಸ್ತ ಚಿಹ್ನೆ ಅನಿವಾರ್ಯ. ತೆನೆಹೊತ್ತ ಮಹಿಳೆಯಿಂದ ಇದು ಸಾಧ್ಯವಾಗದು. ಅಂದರೆ ಶಶಿ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿ, ದೇಶಪಾಂಡೆ ಶುದ್ಧಿಯಿಂದ ಕೆಲಸ ಮಾಡಿದರೆ ಗೆಲುವು ಸಾಧ್ಯ.

ಇದಕ್ಕೆ ದೇಶಪಾಂಡೆ ಒಪ್ಪುವುದು ಅನುಮಾನ. ಹಾಗೆಯೇ ಅನಂತ್ಮಾಣಿ ಬಗ್ಗೆ ಏನೋ ಒಂಥರ ಸೆಳೆತವಿರುವ ಶಶಿ ಆತನ ವಿರುದ್ಧ ನಿಲ್ಲಲಾರನೆಂಬ ಅಭಿಪ್ರಾಯ ಕಾಂಗ್ರೆಸ್-ಜೆಡಿಎಸ್-ಬಿಜೆಪಿಯಲ್ಲಿದೆ. ಈ ಒಳರಾಜಕಾರಣದ ಸುಳಿ ಸಂಕಷ್ಟ, ಜಿಲ್ಲೆಯ ಸೋಷಲ್ ಇಂಜಿನಿಯರಿಂಗ್, ಕ್ಯಾಸ್ಟ್ ಕೆಮಿಸ್ಟ್ರಿ ಲೆಕ್ಕಹಾಕಿರುವ ಕಾಂಗ್ರೆಸ್‌ನ ಒಂದು ಬಣ ತಣ್ಣಗೆ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮಗಳು ಮಮತಾ ನಿಚ್ಚಾನಿಯನ್ನು ಮೈತ್ರಿಕೂಟದ ಅಭ್ಯರ್ಥಿಯಾಗಿಸುವ ಪ್ಲಾನು ಹಾಕಿಕೊಂಡು ಆಕೆಯ ಹೆಸರು ತೇಲಿ ಬಿಡಲಾರಂಭಿಸಿದೆ. ಇದು ಸೂಕ್ತ ಆಯ್ಕೆ ಮತ್ತು ರಣತಂತ್ರ ಎಂದು ಜನಸಾಮಾನ್ಯರೂ ಹೇಳುತ್ತಿದ್ದಾರೆ. ಬಿಜೆಪಿಯ ಅನಂತ್ಮಾಣಿಯನ್ನು ಮನೆಗೆ ಕಳಿಸುವ ಮೂಡ್‌ನಲ್ಲಿರುವ ಮತದಾರರಿಗೆ ಹೆಗಡೆಜೀ ಖಾನ್‌ದಾನ್ ಹೆಸರು ಕೇಳುತ್ತಿದ್ದಂತೆಯೇ ಮೈತ್ರಿಕೂಟದತ್ತ ನೋಟ ಹರಿದಿದೆ.

ಇವತ್ತಿಗೂ ಉತ್ತರ ಕನ್ನಡದಲ್ಲಿ ಹೆಗಡೆಜೀ ಮತ್ತು `ಬಂ’ ನಾಮ ಬಿಲದ ವಿಚಿತ್ರ ಸೆಳೆತವಿದೆ. ಹೆಗಡೆಜೀ ಅಂದರೆ ಆತನ ಜಾತಿಬಂಧುಗಳಾದ ಹವ್ಯಕರಲ್ಲಿ ಕಮಲ-ಅನಂತ್ಮಾಣಿಯನ್ನು ಮರೆಸುವಷ್ಟು ಮೇನಿಯಾ ಇದೆ. ಹೆಗಡೆಜೀ ವಂಶದ ಮಮತಾ ಕಾಂಗ್ರೆಸ್ ಅಭ್ಯರ್ಥಿ ಅಂತಾದರೆ ಹವ್ಯಕರು ಕಣ್ಮುಚ್ಚಿ ಓಟು ಹಾಕೋದು ಖಂಡಿತ. ಹಾಗೆಯೇ ನಾಡಾವರು, ಪಟಗಾರರು.. ಮುಂತಾದ ಸಣ್ಣ-ಪುಟ್ಟ ಸಮುದಾಯಕ್ಕೆ ಹೆಗಡೆಜೀ ಬಗ್ಗೆ ಅಭಿಮಾನವಿದೆ. ಬಿಜೆಪಿಯಲ್ಲಿರುವ ಹೆಗಡೆಜೀ ಶಿಷ್ಯ ಬಳಗವೂ ‘ಗುರುಕಾಣಿಕೆ’ ನೀಡದೇ ಇರಲಾರದು. ದೇಶಪಾಂಡೆಗೂ ತನ್ನನ್ನು ಈ ಮಟ್ಟಕ್ಕೆ ಬೆಳೆಯಲು ಆರಂಭದಲ್ಲಿ ನೀರೆರೆದ ಹೆಗಡೆಜೀ ಋಣ ತೀರಿಸಲು ಇದೊಂದು ಅವಕಾಶ. ದೇಶಪಾಂಡೆ ತನ್ನ ಜನ್ಮಜಾತ ದ್ರೋಹ ಗುಣ-ಧರ್ಮ ಬಿಟ್ಟು ಕೃತಜ್ಞತೆಯಿಂದ ಕೆಲಸ ಮಾಡಿದರೆ ಮೈತ್ರಿಕೂಟದ ಮಮತಾ ನಿರಾಯಾಸವಾಗಿ ಗೆಲ್ಲುತ್ತಾರೆ. ಮಮತಾ ಹೆಗಡೆ(ನಿಚ್ಚಾನಿ)ಯನ್ನು ಹಠ ಹಿಡಿದು ಮೈತ್ರಿಕೂಟದ ಕ್ಯಾಂಡಿಡೇಟ್ ಮಾಡಿದರೆ ಆತ ಹೆಗಡೆಜೀಗೆ ಮಾಡಿದ ಅನ್ಯಾಯಕ್ಕೆ ಪ್ರಾಯಶ್ಚಿತ್ತವೂ ಆಗುತ್ತದೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...