Homeಸಿನಿಮಾಕ್ರೀಡೆ37 ಎಸೆತಗಳಲ್ಲಿ 100 ರನ್: 9 ಬೌಂಡರಿ, 11 ಸಿಕ್ಸರ್ ಸಿಡಿಸಿದ ‘ಅಜರ್’

37 ಎಸೆತಗಳಲ್ಲಿ 100 ರನ್: 9 ಬೌಂಡರಿ, 11 ಸಿಕ್ಸರ್ ಸಿಡಿಸಿದ ‘ಅಜರ್’

ಸದ್ಯ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ದೇಸಿ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಕ್ರಿಕೆಟ್‌ಗೆ ಅಷ್ಟೇನೂ ಹೆಸರುವಾಸಿಯಲ್ಲದ ಕೇರಳ ತಂಡದ ‘ಅಜರ್’ ರನ್‌ಗಳ ಧಮಾಕಾ ಸೃಷ್ಟಿಸಿದ್ದಾನೆ.

- Advertisement -
- Advertisement -

ಅದು ಬಲಿಷ್ಠ ಮುಂಬೈ ತಂಡ. ಇವನು ಅಶಕ್ತ ಕೇರಳ ತಂಡದವನು. 54 ಎಸೆತಗಳಲ್ಲಿ ಈ ಯುವಕ 137 ರನ್ ಚಚ್ಚಿದ್ದಾನೆ. 100 ರನ್ ತಲುಪಲು ಆತನಿಗೆ ಕೇವಲ 37 ಎಸೆತ ಸಾಕಾಯಿತು. ಟ್ವೆಂಟಿ-20ಯಲ್ಲಿ ಭಾರತೀಯನೊಬ್ಬ ಗಳಿಸಿದ ವೇಗದ ಸೆಂಚುರಿಯಲ್ಲಿ ಇದೀಗ ಇದು ಮೂರನೆ ಸ್ಥಾನದಲ್ಲಿದೆ. ಹಿಂದೆ ರಿಷಬ್ ಪಂತ್ 32 ಎಸೆತಗಳಲ್ಲಿ ಮತ್ತು ರೋಹಿತ್ ಶರ್ಮಾ 35 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಕ್ರಿಕೆಟ್-ಕ್ರೇಜಿ ಹಿರಿಯ ಸಹೋದರ ಈ ಹುಡುಗನಿಗೆ ಹೆಚ್ಚಿನ ವೃತ್ತಿಜೀವನದ ಆಯ್ಕೆಯನ್ನು ನೀಡಲಿಲ್ಲ. ಅವನ ಹೆಸರನ್ನು ಅಜ್ಮಲ್‌ನಿಂದ ಮೊಹಮ್ಮದ್ ಅಜರುದ್ದೀನ್ ಎಂದು ಬದಲಾಯಿಸಿ ಕ್ರಿಕೆಟ್ ಅಂಗಳಕ್ಕೆ ದಬ್ಬಿಬಿಟ್ಟ!
ಇದಲ್ಲದೆ, ಈ ಅಜರ್ ಕಾಸರಗೋಡಿನ ಹೊರವಲಯದಲ್ಲಿರುವ ಕೇರಳದ ಅಪರೂಪದ ಪಟ್ಟಣವಾದ ತಲಂಗರಾದಿಂದ ಬಂದವನು. ಅಲ್ಲಿ ಮಕ್ಕಳು ಚೆಂಡನ್ನು ಬ್ಯಾಟ್‌ನಿಂದ ಹೊಡೆಯಲು ಬಯಸುತ್ತಾರೆ ಹೊರತು, ಅದನ್ನು ಕಿಕ್ ಮಾಡಲು ಅಲ್ಲ. ಕೇರಳದಲ್ಲಿ ಫುಟ್‌ಬಾಲ್ ಹೆಚ್ಚು ಜನಪ್ರಿಯ ಎಂಬುದನ್ನು ಗಮನಿಸಿ.

26ರ ಹರೆಯದ ಯುವಕ ಅಜರ್, ಭಾರತೀಯ ಬ್ಯಾಟಿಂಗ್ ಶ್ರೇಷ್ಠ ಮೊಹಮ್ಮದ್ ಅಜರುದ್ದೀನ್ ಅವರ “ಅಜೀವ ಅಭಿಮಾನಿ”ಯಾದ ತನ್ನ ಹಿರಿಯ ಸಹೋದರ ಕಮರುದ್ದೀನ್ ನಿರೀಕ್ಷೆಗೆ ತಕ್ಕಂತೆ ಏನಾದರೂ ವಿಶೇಷವಾದ ಕೆಲಸವನ್ನು ಮಾಡಬೇಕೆಂದು ನಿರ್ಧರಿಸಿದ್ದ. ತಲಂಗರಾ ಪಟ್ಟಣ ಕೂಡ ಅವರ “ನೆಕ್ಸ್ಟ್ ಅಜರ್”ನಿಂದ ಹೆಚ್ಚಿನ ಸಾಧನೆ ನಿರೀಕ್ಷಿಸಿತ್ತು.

ಮೊನ್ನೆ ಬುಧವಾರ, ಅಜರ್ ತನ್ನ ಏಳು ಸಹೋದರರು, ತನ್ನ ಸ್ವಂತೂರು ಮತ್ತು ಇಡೀ ರಾಜ್ಯ ಹೆಮ್ಮೆಪಡುವ ಆಟ ಆಡಿಬಿಟ್ಟ. ಈ ಎರಡು ದಶಕಗಳಲ್ಲಿ ಶ್ರೀಶಾಂತ್ ಬಿಟ್ಟರೆ ಕೇರಳದ ಕ್ರಿಕೆಟಿಗರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದು ಕಡಿಮೆಯೇ. ಆರ್‌ಸಿಬಿ ತಂಡಕ್ಕೆ ಆಡುವ ದೇವದತ್ತ ಪಡಿಕ್ಕಲ್ ಮೂಲತಃ ಕೇರಳದ ಹುಡುಗ. ದಶಕದಿಂದ ಬೆಂಗಳೂರು ನಿವಾಸಿಯಾಗಿರುವ ದೇವದತ್ತ ಈಗ ಟ್ವೆಂಟಿ-20 ಮಾದರಿಯಲ್ಲಿ ಗಮನ ಸೆಳೆಯುತ್ತಿರುವ ಪ್ರತಿಭೆ.

ಮುಂಬೈ ವಿರುದ್ಧ 54 ಎಸೆತಗಳಲ್ಲಿ 137 ರನ್ ಗಳಿಸಿದ ಅಜರುದ್ದೀನ್ ಅಲಿಯಾಸ್ ಅಜ್ಮಲ್, ಶತಕ ಗಳಿಸಲು 37 ಎಸೆತ ತೆಗೆದುಕೊಂಡ. ರಿಷಭ್ ಪಂತ್ (32 ಎಸೆತಗಳು) ಮತ್ತು ರೋಹಿತ್ ಶರ್ಮಾ (35 ಎಸೆತಗಳು) ನಂತರ ಭಾರತೀಯರು ಮಾಡಿದ ಮೂರನೇ ಅತಿ ವೇಗದ ಟ್ವೆಂಟಿ-20 ಶತಕ ಇದು.

“ನಾವು ಮಾತ್ರವಲ್ಲ, ಇಡೀ ತಲಂಗರಾದ ಜನ ಅವತ್ತು ಟಿವಿಗೆ ಅಂಟಿಕೊಂಡಿದ್ದರು” ಎಂದು ಹಿರಿಯ ಸಹೋದರ ಕಮರುದ್ದೀನ್ ಹೆಮ್ಮೆ ಪಟ್ಟಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಜರುದ್ದೀನ್ ಅವರ ಬ್ಯಾಟಿಂಗ್ ರೇಸಿಂಗ್‌ನ ವಿಡಿಯೊ ತುಣುಕುಗಳೊಂದಿಗೆ, ಭಾರತ ಕ್ರಿಕೆಟ್ ವಲಯಗಳು ಮತ್ತೆ ಹಳೆಯ ‘ಅಜರ್’ ಅವರನ್ನು ನೆನಪಿಸಿಕೊಂಡಿವೆ. ಬಿಗ್ ಶಾಟ್ ವೀರ ವೀರೇಂದ್ರ ಸೆಹ್ವಾಗ್, “ವಾಹ್ ಅಜರುದ್ದೀನ್, ಬೆಹ್ತರೀನ್!. ನಿನ್ನ ಆಟವನ್ನು ಆನಂದಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಬಲಿಷ್ಠ ಬೌಲರ್‌ಗಳ ಬೆವರಿಳಿಸಿದ

ಮುಂಬೈ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಹಿಂದೆ ಭಾರತ ತಂಡಕ್ಕೆ ಆಡಿದ್ದ ವೇಗಿ ಧವನ್ ಕುಲಕರ್ಣಿ ಮತ್ತು 2020ರ ಟ್ವೆಂಟಿ-20ಯಲ್ಲಿ ಮಿಂಚಿದ ತುಷಾರ್ ದೇಶಪಾಂಡೆ ಎಸೆತಗಳನ್ನು ಹಿಗ್ಗಾಮುಗ್ಗಾ ಬಾರಿಸಿದ ಅಜರ್, ಅವರನ್ನು ಬೌಂಡರಿ ಲೈನಿನಾಚೆಗೆ ದೂಕಿಬಿಟ್ಟ.

ಭಾರತ ತಂಡಕ್ಕೆ ಆಡಿದ್ದ ವೇಗಿ ಮತ್ತು ಸದ್ಯ ಕೇರಳ ತಂಡದ ಕೋಚ್ ಆಗಿರುವ ಟಿನು ಯೊಹಾನ್ನನ್, ‘ಅವನಿಂದ ಅಂತಹ ಒಂದು ಆಟವನ್ನು ನಿರೀಕ್ಷೆ ಮಾಡಿದ್ದೆ. ಆದರೆ ಅದು ಈ ಪ್ರಮಾಣದಲ್ಲಿ ಎಂದು ಊಹೆ ಕೂಡ ಮಾಡಿರಲಿಲ್ಲ. ಅಜರ್‌ನ ಸ್ಕ್ವೇರ್ ಲೆಗ್ ಶಾಟ್‌ಗಳಿಗಿಂತ ಅವನ ಪಿಕ್-ಅಪ್ ಶಾಟ್‌ಗಳು ನನಗೆ ಇಷ್ಟ. ಇಂತಹ ಆಟ ನೋಡುವುದೇ ಸೊಬಗು. ಆದರೆ ಬೌಲರ್‌ಗಳ ಪಾಲಿಗೆ ಇದು ನರಕ. ಅವರು ಶಾರ್ಟ್ ಆಫ್ ಲೆಂಥ್ ಎಸೆದರೆ ಇವನು ಸೀದಾ ಬೌಂಡರಿಯಾಚೆ ಚೆಂಡನ್ನು ಅಟ್ಟಿದಾಗ ಅದು ಬೌಲರ್‌ಗಳ ನೈತಿಕ ಶಕ್ತಿಯನ್ನೇ ಕಸಿದು ಬಿಟ್ಟಿತ್ತು’ ಎಂದಿದ್ದಾರೆ.

ರಣಜಿ, ಮುಷ್ತಾಕ್ ಅಲಿ ಮುಂತಾದ ದೇಸಿ ಚಾಂಪಿಯನ್‌ಶಿಪ್‌ಗಳಲ್ಲಿ ಕೇರಳ ಬೇಗ ನಿರ್ಗಮಿಸುವುದರಿಂದ ಅಜರ್‌ಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಆದರೆ ಸಿಕ್ಕ ಅವಕಾಶವನ್ನು ಈ ಸಲ ಆತ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ‘ಮತ್ತೊಬ್ಬ ಅಜರ್’ಗಾಗಿ ಕಾಯೋಣ.


ಇದನ್ನೂ ಓದಿ: ವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...