Homeಸಿನಿಮಾಕ್ರೀಡೆ37 ಎಸೆತಗಳಲ್ಲಿ 100 ರನ್: 9 ಬೌಂಡರಿ, 11 ಸಿಕ್ಸರ್ ಸಿಡಿಸಿದ ‘ಅಜರ್’

37 ಎಸೆತಗಳಲ್ಲಿ 100 ರನ್: 9 ಬೌಂಡರಿ, 11 ಸಿಕ್ಸರ್ ಸಿಡಿಸಿದ ‘ಅಜರ್’

ಸದ್ಯ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ದೇಸಿ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಕ್ರಿಕೆಟ್‌ಗೆ ಅಷ್ಟೇನೂ ಹೆಸರುವಾಸಿಯಲ್ಲದ ಕೇರಳ ತಂಡದ ‘ಅಜರ್’ ರನ್‌ಗಳ ಧಮಾಕಾ ಸೃಷ್ಟಿಸಿದ್ದಾನೆ.

- Advertisement -
- Advertisement -

ಅದು ಬಲಿಷ್ಠ ಮುಂಬೈ ತಂಡ. ಇವನು ಅಶಕ್ತ ಕೇರಳ ತಂಡದವನು. 54 ಎಸೆತಗಳಲ್ಲಿ ಈ ಯುವಕ 137 ರನ್ ಚಚ್ಚಿದ್ದಾನೆ. 100 ರನ್ ತಲುಪಲು ಆತನಿಗೆ ಕೇವಲ 37 ಎಸೆತ ಸಾಕಾಯಿತು. ಟ್ವೆಂಟಿ-20ಯಲ್ಲಿ ಭಾರತೀಯನೊಬ್ಬ ಗಳಿಸಿದ ವೇಗದ ಸೆಂಚುರಿಯಲ್ಲಿ ಇದೀಗ ಇದು ಮೂರನೆ ಸ್ಥಾನದಲ್ಲಿದೆ. ಹಿಂದೆ ರಿಷಬ್ ಪಂತ್ 32 ಎಸೆತಗಳಲ್ಲಿ ಮತ್ತು ರೋಹಿತ್ ಶರ್ಮಾ 35 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಕ್ರಿಕೆಟ್-ಕ್ರೇಜಿ ಹಿರಿಯ ಸಹೋದರ ಈ ಹುಡುಗನಿಗೆ ಹೆಚ್ಚಿನ ವೃತ್ತಿಜೀವನದ ಆಯ್ಕೆಯನ್ನು ನೀಡಲಿಲ್ಲ. ಅವನ ಹೆಸರನ್ನು ಅಜ್ಮಲ್‌ನಿಂದ ಮೊಹಮ್ಮದ್ ಅಜರುದ್ದೀನ್ ಎಂದು ಬದಲಾಯಿಸಿ ಕ್ರಿಕೆಟ್ ಅಂಗಳಕ್ಕೆ ದಬ್ಬಿಬಿಟ್ಟ!
ಇದಲ್ಲದೆ, ಈ ಅಜರ್ ಕಾಸರಗೋಡಿನ ಹೊರವಲಯದಲ್ಲಿರುವ ಕೇರಳದ ಅಪರೂಪದ ಪಟ್ಟಣವಾದ ತಲಂಗರಾದಿಂದ ಬಂದವನು. ಅಲ್ಲಿ ಮಕ್ಕಳು ಚೆಂಡನ್ನು ಬ್ಯಾಟ್‌ನಿಂದ ಹೊಡೆಯಲು ಬಯಸುತ್ತಾರೆ ಹೊರತು, ಅದನ್ನು ಕಿಕ್ ಮಾಡಲು ಅಲ್ಲ. ಕೇರಳದಲ್ಲಿ ಫುಟ್‌ಬಾಲ್ ಹೆಚ್ಚು ಜನಪ್ರಿಯ ಎಂಬುದನ್ನು ಗಮನಿಸಿ.

26ರ ಹರೆಯದ ಯುವಕ ಅಜರ್, ಭಾರತೀಯ ಬ್ಯಾಟಿಂಗ್ ಶ್ರೇಷ್ಠ ಮೊಹಮ್ಮದ್ ಅಜರುದ್ದೀನ್ ಅವರ “ಅಜೀವ ಅಭಿಮಾನಿ”ಯಾದ ತನ್ನ ಹಿರಿಯ ಸಹೋದರ ಕಮರುದ್ದೀನ್ ನಿರೀಕ್ಷೆಗೆ ತಕ್ಕಂತೆ ಏನಾದರೂ ವಿಶೇಷವಾದ ಕೆಲಸವನ್ನು ಮಾಡಬೇಕೆಂದು ನಿರ್ಧರಿಸಿದ್ದ. ತಲಂಗರಾ ಪಟ್ಟಣ ಕೂಡ ಅವರ “ನೆಕ್ಸ್ಟ್ ಅಜರ್”ನಿಂದ ಹೆಚ್ಚಿನ ಸಾಧನೆ ನಿರೀಕ್ಷಿಸಿತ್ತು.

ಮೊನ್ನೆ ಬುಧವಾರ, ಅಜರ್ ತನ್ನ ಏಳು ಸಹೋದರರು, ತನ್ನ ಸ್ವಂತೂರು ಮತ್ತು ಇಡೀ ರಾಜ್ಯ ಹೆಮ್ಮೆಪಡುವ ಆಟ ಆಡಿಬಿಟ್ಟ. ಈ ಎರಡು ದಶಕಗಳಲ್ಲಿ ಶ್ರೀಶಾಂತ್ ಬಿಟ್ಟರೆ ಕೇರಳದ ಕ್ರಿಕೆಟಿಗರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದು ಕಡಿಮೆಯೇ. ಆರ್‌ಸಿಬಿ ತಂಡಕ್ಕೆ ಆಡುವ ದೇವದತ್ತ ಪಡಿಕ್ಕಲ್ ಮೂಲತಃ ಕೇರಳದ ಹುಡುಗ. ದಶಕದಿಂದ ಬೆಂಗಳೂರು ನಿವಾಸಿಯಾಗಿರುವ ದೇವದತ್ತ ಈಗ ಟ್ವೆಂಟಿ-20 ಮಾದರಿಯಲ್ಲಿ ಗಮನ ಸೆಳೆಯುತ್ತಿರುವ ಪ್ರತಿಭೆ.

ಮುಂಬೈ ವಿರುದ್ಧ 54 ಎಸೆತಗಳಲ್ಲಿ 137 ರನ್ ಗಳಿಸಿದ ಅಜರುದ್ದೀನ್ ಅಲಿಯಾಸ್ ಅಜ್ಮಲ್, ಶತಕ ಗಳಿಸಲು 37 ಎಸೆತ ತೆಗೆದುಕೊಂಡ. ರಿಷಭ್ ಪಂತ್ (32 ಎಸೆತಗಳು) ಮತ್ತು ರೋಹಿತ್ ಶರ್ಮಾ (35 ಎಸೆತಗಳು) ನಂತರ ಭಾರತೀಯರು ಮಾಡಿದ ಮೂರನೇ ಅತಿ ವೇಗದ ಟ್ವೆಂಟಿ-20 ಶತಕ ಇದು.

“ನಾವು ಮಾತ್ರವಲ್ಲ, ಇಡೀ ತಲಂಗರಾದ ಜನ ಅವತ್ತು ಟಿವಿಗೆ ಅಂಟಿಕೊಂಡಿದ್ದರು” ಎಂದು ಹಿರಿಯ ಸಹೋದರ ಕಮರುದ್ದೀನ್ ಹೆಮ್ಮೆ ಪಟ್ಟಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಜರುದ್ದೀನ್ ಅವರ ಬ್ಯಾಟಿಂಗ್ ರೇಸಿಂಗ್‌ನ ವಿಡಿಯೊ ತುಣುಕುಗಳೊಂದಿಗೆ, ಭಾರತ ಕ್ರಿಕೆಟ್ ವಲಯಗಳು ಮತ್ತೆ ಹಳೆಯ ‘ಅಜರ್’ ಅವರನ್ನು ನೆನಪಿಸಿಕೊಂಡಿವೆ. ಬಿಗ್ ಶಾಟ್ ವೀರ ವೀರೇಂದ್ರ ಸೆಹ್ವಾಗ್, “ವಾಹ್ ಅಜರುದ್ದೀನ್, ಬೆಹ್ತರೀನ್!. ನಿನ್ನ ಆಟವನ್ನು ಆನಂದಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಬಲಿಷ್ಠ ಬೌಲರ್‌ಗಳ ಬೆವರಿಳಿಸಿದ

ಮುಂಬೈ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಹಿಂದೆ ಭಾರತ ತಂಡಕ್ಕೆ ಆಡಿದ್ದ ವೇಗಿ ಧವನ್ ಕುಲಕರ್ಣಿ ಮತ್ತು 2020ರ ಟ್ವೆಂಟಿ-20ಯಲ್ಲಿ ಮಿಂಚಿದ ತುಷಾರ್ ದೇಶಪಾಂಡೆ ಎಸೆತಗಳನ್ನು ಹಿಗ್ಗಾಮುಗ್ಗಾ ಬಾರಿಸಿದ ಅಜರ್, ಅವರನ್ನು ಬೌಂಡರಿ ಲೈನಿನಾಚೆಗೆ ದೂಕಿಬಿಟ್ಟ.

ಭಾರತ ತಂಡಕ್ಕೆ ಆಡಿದ್ದ ವೇಗಿ ಮತ್ತು ಸದ್ಯ ಕೇರಳ ತಂಡದ ಕೋಚ್ ಆಗಿರುವ ಟಿನು ಯೊಹಾನ್ನನ್, ‘ಅವನಿಂದ ಅಂತಹ ಒಂದು ಆಟವನ್ನು ನಿರೀಕ್ಷೆ ಮಾಡಿದ್ದೆ. ಆದರೆ ಅದು ಈ ಪ್ರಮಾಣದಲ್ಲಿ ಎಂದು ಊಹೆ ಕೂಡ ಮಾಡಿರಲಿಲ್ಲ. ಅಜರ್‌ನ ಸ್ಕ್ವೇರ್ ಲೆಗ್ ಶಾಟ್‌ಗಳಿಗಿಂತ ಅವನ ಪಿಕ್-ಅಪ್ ಶಾಟ್‌ಗಳು ನನಗೆ ಇಷ್ಟ. ಇಂತಹ ಆಟ ನೋಡುವುದೇ ಸೊಬಗು. ಆದರೆ ಬೌಲರ್‌ಗಳ ಪಾಲಿಗೆ ಇದು ನರಕ. ಅವರು ಶಾರ್ಟ್ ಆಫ್ ಲೆಂಥ್ ಎಸೆದರೆ ಇವನು ಸೀದಾ ಬೌಂಡರಿಯಾಚೆ ಚೆಂಡನ್ನು ಅಟ್ಟಿದಾಗ ಅದು ಬೌಲರ್‌ಗಳ ನೈತಿಕ ಶಕ್ತಿಯನ್ನೇ ಕಸಿದು ಬಿಟ್ಟಿತ್ತು’ ಎಂದಿದ್ದಾರೆ.

ರಣಜಿ, ಮುಷ್ತಾಕ್ ಅಲಿ ಮುಂತಾದ ದೇಸಿ ಚಾಂಪಿಯನ್‌ಶಿಪ್‌ಗಳಲ್ಲಿ ಕೇರಳ ಬೇಗ ನಿರ್ಗಮಿಸುವುದರಿಂದ ಅಜರ್‌ಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಆದರೆ ಸಿಕ್ಕ ಅವಕಾಶವನ್ನು ಈ ಸಲ ಆತ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ‘ಮತ್ತೊಬ್ಬ ಅಜರ್’ಗಾಗಿ ಕಾಯೋಣ.


ಇದನ್ನೂ ಓದಿ: ವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...