Homeಸಿನಿಮಾಕ್ರೀಡೆ37 ಎಸೆತಗಳಲ್ಲಿ 100 ರನ್: 9 ಬೌಂಡರಿ, 11 ಸಿಕ್ಸರ್ ಸಿಡಿಸಿದ ‘ಅಜರ್’

37 ಎಸೆತಗಳಲ್ಲಿ 100 ರನ್: 9 ಬೌಂಡರಿ, 11 ಸಿಕ್ಸರ್ ಸಿಡಿಸಿದ ‘ಅಜರ್’

ಸದ್ಯ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ದೇಸಿ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಕ್ರಿಕೆಟ್‌ಗೆ ಅಷ್ಟೇನೂ ಹೆಸರುವಾಸಿಯಲ್ಲದ ಕೇರಳ ತಂಡದ ‘ಅಜರ್’ ರನ್‌ಗಳ ಧಮಾಕಾ ಸೃಷ್ಟಿಸಿದ್ದಾನೆ.

- Advertisement -
- Advertisement -

ಅದು ಬಲಿಷ್ಠ ಮುಂಬೈ ತಂಡ. ಇವನು ಅಶಕ್ತ ಕೇರಳ ತಂಡದವನು. 54 ಎಸೆತಗಳಲ್ಲಿ ಈ ಯುವಕ 137 ರನ್ ಚಚ್ಚಿದ್ದಾನೆ. 100 ರನ್ ತಲುಪಲು ಆತನಿಗೆ ಕೇವಲ 37 ಎಸೆತ ಸಾಕಾಯಿತು. ಟ್ವೆಂಟಿ-20ಯಲ್ಲಿ ಭಾರತೀಯನೊಬ್ಬ ಗಳಿಸಿದ ವೇಗದ ಸೆಂಚುರಿಯಲ್ಲಿ ಇದೀಗ ಇದು ಮೂರನೆ ಸ್ಥಾನದಲ್ಲಿದೆ. ಹಿಂದೆ ರಿಷಬ್ ಪಂತ್ 32 ಎಸೆತಗಳಲ್ಲಿ ಮತ್ತು ರೋಹಿತ್ ಶರ್ಮಾ 35 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಕ್ರಿಕೆಟ್-ಕ್ರೇಜಿ ಹಿರಿಯ ಸಹೋದರ ಈ ಹುಡುಗನಿಗೆ ಹೆಚ್ಚಿನ ವೃತ್ತಿಜೀವನದ ಆಯ್ಕೆಯನ್ನು ನೀಡಲಿಲ್ಲ. ಅವನ ಹೆಸರನ್ನು ಅಜ್ಮಲ್‌ನಿಂದ ಮೊಹಮ್ಮದ್ ಅಜರುದ್ದೀನ್ ಎಂದು ಬದಲಾಯಿಸಿ ಕ್ರಿಕೆಟ್ ಅಂಗಳಕ್ಕೆ ದಬ್ಬಿಬಿಟ್ಟ!
ಇದಲ್ಲದೆ, ಈ ಅಜರ್ ಕಾಸರಗೋಡಿನ ಹೊರವಲಯದಲ್ಲಿರುವ ಕೇರಳದ ಅಪರೂಪದ ಪಟ್ಟಣವಾದ ತಲಂಗರಾದಿಂದ ಬಂದವನು. ಅಲ್ಲಿ ಮಕ್ಕಳು ಚೆಂಡನ್ನು ಬ್ಯಾಟ್‌ನಿಂದ ಹೊಡೆಯಲು ಬಯಸುತ್ತಾರೆ ಹೊರತು, ಅದನ್ನು ಕಿಕ್ ಮಾಡಲು ಅಲ್ಲ. ಕೇರಳದಲ್ಲಿ ಫುಟ್‌ಬಾಲ್ ಹೆಚ್ಚು ಜನಪ್ರಿಯ ಎಂಬುದನ್ನು ಗಮನಿಸಿ.

26ರ ಹರೆಯದ ಯುವಕ ಅಜರ್, ಭಾರತೀಯ ಬ್ಯಾಟಿಂಗ್ ಶ್ರೇಷ್ಠ ಮೊಹಮ್ಮದ್ ಅಜರುದ್ದೀನ್ ಅವರ “ಅಜೀವ ಅಭಿಮಾನಿ”ಯಾದ ತನ್ನ ಹಿರಿಯ ಸಹೋದರ ಕಮರುದ್ದೀನ್ ನಿರೀಕ್ಷೆಗೆ ತಕ್ಕಂತೆ ಏನಾದರೂ ವಿಶೇಷವಾದ ಕೆಲಸವನ್ನು ಮಾಡಬೇಕೆಂದು ನಿರ್ಧರಿಸಿದ್ದ. ತಲಂಗರಾ ಪಟ್ಟಣ ಕೂಡ ಅವರ “ನೆಕ್ಸ್ಟ್ ಅಜರ್”ನಿಂದ ಹೆಚ್ಚಿನ ಸಾಧನೆ ನಿರೀಕ್ಷಿಸಿತ್ತು.

ಮೊನ್ನೆ ಬುಧವಾರ, ಅಜರ್ ತನ್ನ ಏಳು ಸಹೋದರರು, ತನ್ನ ಸ್ವಂತೂರು ಮತ್ತು ಇಡೀ ರಾಜ್ಯ ಹೆಮ್ಮೆಪಡುವ ಆಟ ಆಡಿಬಿಟ್ಟ. ಈ ಎರಡು ದಶಕಗಳಲ್ಲಿ ಶ್ರೀಶಾಂತ್ ಬಿಟ್ಟರೆ ಕೇರಳದ ಕ್ರಿಕೆಟಿಗರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದು ಕಡಿಮೆಯೇ. ಆರ್‌ಸಿಬಿ ತಂಡಕ್ಕೆ ಆಡುವ ದೇವದತ್ತ ಪಡಿಕ್ಕಲ್ ಮೂಲತಃ ಕೇರಳದ ಹುಡುಗ. ದಶಕದಿಂದ ಬೆಂಗಳೂರು ನಿವಾಸಿಯಾಗಿರುವ ದೇವದತ್ತ ಈಗ ಟ್ವೆಂಟಿ-20 ಮಾದರಿಯಲ್ಲಿ ಗಮನ ಸೆಳೆಯುತ್ತಿರುವ ಪ್ರತಿಭೆ.

ಮುಂಬೈ ವಿರುದ್ಧ 54 ಎಸೆತಗಳಲ್ಲಿ 137 ರನ್ ಗಳಿಸಿದ ಅಜರುದ್ದೀನ್ ಅಲಿಯಾಸ್ ಅಜ್ಮಲ್, ಶತಕ ಗಳಿಸಲು 37 ಎಸೆತ ತೆಗೆದುಕೊಂಡ. ರಿಷಭ್ ಪಂತ್ (32 ಎಸೆತಗಳು) ಮತ್ತು ರೋಹಿತ್ ಶರ್ಮಾ (35 ಎಸೆತಗಳು) ನಂತರ ಭಾರತೀಯರು ಮಾಡಿದ ಮೂರನೇ ಅತಿ ವೇಗದ ಟ್ವೆಂಟಿ-20 ಶತಕ ಇದು.

“ನಾವು ಮಾತ್ರವಲ್ಲ, ಇಡೀ ತಲಂಗರಾದ ಜನ ಅವತ್ತು ಟಿವಿಗೆ ಅಂಟಿಕೊಂಡಿದ್ದರು” ಎಂದು ಹಿರಿಯ ಸಹೋದರ ಕಮರುದ್ದೀನ್ ಹೆಮ್ಮೆ ಪಟ್ಟಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಜರುದ್ದೀನ್ ಅವರ ಬ್ಯಾಟಿಂಗ್ ರೇಸಿಂಗ್‌ನ ವಿಡಿಯೊ ತುಣುಕುಗಳೊಂದಿಗೆ, ಭಾರತ ಕ್ರಿಕೆಟ್ ವಲಯಗಳು ಮತ್ತೆ ಹಳೆಯ ‘ಅಜರ್’ ಅವರನ್ನು ನೆನಪಿಸಿಕೊಂಡಿವೆ. ಬಿಗ್ ಶಾಟ್ ವೀರ ವೀರೇಂದ್ರ ಸೆಹ್ವಾಗ್, “ವಾಹ್ ಅಜರುದ್ದೀನ್, ಬೆಹ್ತರೀನ್!. ನಿನ್ನ ಆಟವನ್ನು ಆನಂದಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಬಲಿಷ್ಠ ಬೌಲರ್‌ಗಳ ಬೆವರಿಳಿಸಿದ

ಮುಂಬೈ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಹಿಂದೆ ಭಾರತ ತಂಡಕ್ಕೆ ಆಡಿದ್ದ ವೇಗಿ ಧವನ್ ಕುಲಕರ್ಣಿ ಮತ್ತು 2020ರ ಟ್ವೆಂಟಿ-20ಯಲ್ಲಿ ಮಿಂಚಿದ ತುಷಾರ್ ದೇಶಪಾಂಡೆ ಎಸೆತಗಳನ್ನು ಹಿಗ್ಗಾಮುಗ್ಗಾ ಬಾರಿಸಿದ ಅಜರ್, ಅವರನ್ನು ಬೌಂಡರಿ ಲೈನಿನಾಚೆಗೆ ದೂಕಿಬಿಟ್ಟ.

ಭಾರತ ತಂಡಕ್ಕೆ ಆಡಿದ್ದ ವೇಗಿ ಮತ್ತು ಸದ್ಯ ಕೇರಳ ತಂಡದ ಕೋಚ್ ಆಗಿರುವ ಟಿನು ಯೊಹಾನ್ನನ್, ‘ಅವನಿಂದ ಅಂತಹ ಒಂದು ಆಟವನ್ನು ನಿರೀಕ್ಷೆ ಮಾಡಿದ್ದೆ. ಆದರೆ ಅದು ಈ ಪ್ರಮಾಣದಲ್ಲಿ ಎಂದು ಊಹೆ ಕೂಡ ಮಾಡಿರಲಿಲ್ಲ. ಅಜರ್‌ನ ಸ್ಕ್ವೇರ್ ಲೆಗ್ ಶಾಟ್‌ಗಳಿಗಿಂತ ಅವನ ಪಿಕ್-ಅಪ್ ಶಾಟ್‌ಗಳು ನನಗೆ ಇಷ್ಟ. ಇಂತಹ ಆಟ ನೋಡುವುದೇ ಸೊಬಗು. ಆದರೆ ಬೌಲರ್‌ಗಳ ಪಾಲಿಗೆ ಇದು ನರಕ. ಅವರು ಶಾರ್ಟ್ ಆಫ್ ಲೆಂಥ್ ಎಸೆದರೆ ಇವನು ಸೀದಾ ಬೌಂಡರಿಯಾಚೆ ಚೆಂಡನ್ನು ಅಟ್ಟಿದಾಗ ಅದು ಬೌಲರ್‌ಗಳ ನೈತಿಕ ಶಕ್ತಿಯನ್ನೇ ಕಸಿದು ಬಿಟ್ಟಿತ್ತು’ ಎಂದಿದ್ದಾರೆ.

ರಣಜಿ, ಮುಷ್ತಾಕ್ ಅಲಿ ಮುಂತಾದ ದೇಸಿ ಚಾಂಪಿಯನ್‌ಶಿಪ್‌ಗಳಲ್ಲಿ ಕೇರಳ ಬೇಗ ನಿರ್ಗಮಿಸುವುದರಿಂದ ಅಜರ್‌ಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಆದರೆ ಸಿಕ್ಕ ಅವಕಾಶವನ್ನು ಈ ಸಲ ಆತ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ‘ಮತ್ತೊಬ್ಬ ಅಜರ್’ಗಾಗಿ ಕಾಯೋಣ.


ಇದನ್ನೂ ಓದಿ: ವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...