Homeಸಿನಿಮಾಕ್ರೀಡೆವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

ವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

ಕರಿಯರ ಸಮಾನತೆಗಾಗಿ ವೇದಿಕೆಯಾಗಿದ್ದ ಕ್ರಿಕೆಟ್ ರೂಪಾಂತರವಾಗುತ್ತಾ ಇಂದು ಬಂಡವಾಳಿಗರ ತೆಕ್ಕೆಗೆ ಬಿದ್ದು ಬ್ಯಾಟ್ಸ್‌ಮನ್‌ಗಳ ಆಟವಾಗಿ ಬೆಳೆದು ನಿಂತಿದೆ.

- Advertisement -
- Advertisement -

ಕ್ರಿಕೆಟ್ ಭಾರತದ ಮತ್ತೊಂದು ಧರ್ಮವೆಂದೇ ಹೇಳಲಾಗುತ್ತದೆ. ಜಗತ್ತಿನಾದ್ಯಂತ ಫುಟ್‌ಬಾಲ್ ಗೇ ಹೆಚ್ಚು ಪ್ರೇಕ್ಷಕರು ಇದ್ದರೂ ಭಾರತದ ಮಟ್ಟಕ್ಕೆ ಕ್ರಿಕೆಟ್ ಎಲ್ಲವೂ ಆಗಿಬಿಟ್ಟಿದೆ‌. ಹಳ್ಳಿಯ ಕೆರೆ ಮೈದಾನ, ಗಲ್ಲಿಯ ಓಣಿಯಿಂದ ಎಲ್ಲಡೆಯೂ ಕ್ರಿಕೆಟ್ ಆಟ ಸಾಮಾನ್ಯವಾಗಿದೆ. ಇನ್ನೂ ಐಪಿಎಲ್ ಹೊತ್ತಲ್ಲಿ ಮನೆಯಲ್ಲಿ ಅಡುಗೆಯೂ ಮಾಡದೇ ಹೊರಗಿನಿಂದ ಊಟ ತರಿಸಿಕೊಂಡು ಕ್ರಿಕೆಟ್ ನೋಡುಗರ ಸಂಖ್ಯೆ ಹೆಚ್ಚು ಎಂದು ಸ್ವಿಗ್ಗಿ, ಜೋಮಾಟೋ ಅಂಕಿ ಅಂಶಗಳು ಹೇಳುತ್ತದೆ. ಜಗತ್ತೇ ಕರೋನಾದಿಂದ ತಲ್ಲಣಿಸಿ ಹೋದರೂ, ಭಾರತದ ಕೂಲಿ ಕಾರ್ಮಿಕರು ಮುನ್ಸೂಚನೆ ಮುನ್ನೋಟವಿಲ್ಲದ ಲಾಕ್‌ಡೌನ್ ನಿಂದಾಗಿ ಇಂದಿಗೂ ಚೇತರಿಕೆ ಕಾಣದ ಈ ಹೊತ್ತಲ್ಲೂ ದೂರದ ದುಬೈನಲ್ಲಿ IPL- ಇಂಡಿಯನ್ ಪ್ರೀಮಿಯರ್ ಲೀಗ್ ನ ಟೂರ್ನಿ ನಡೆಸಲು ಸಿದ್ಧತೆ ಮಾಡಿಕೊಂಡು ಆಡಿಸಿ ಈಗ ಫೈನಲ್ ಹಂತ ತಲುಪಿ ಇಂದು ಮುಂಬೈ ಮತ್ತು ಡೆಲ್ಲಿ ತಂಡಗಳ ನಡುವೆ 2020 ರ ಕಪ್ ಗಾಗಿ ಹಣಾಹಣಿ ನಡೆಯುತ್ತಿರುವುದು ನೋಡಿದರೆ ಐಪಿಎಲ್ ಎಷ್ಟು “ಜನಪ್ರಿಯ” ಎಂದು ನೀವು ಅಂದಾಜಿಸಬಹುದಾಗಿದೆ!

T-20 (20 ಓವರ್‌ಗಳ ಆಟ) ಪ್ರಕಾರವನ್ನು ಕ್ರಿಕೆಟ್ ಅಲ್ಲಿ ಪರಿಚಯಿಸಿದಾಗ ಹಲವು ಹಿರಿಯ ಆಟಗಾರರು ಕ್ರಿಕೆಟ್ ಸಾಂಪ್ರದಾಯಕ್ಕೆ ಇದು ಮಾರಕವೆಂದು ಜರಿದರೆ, ಹಲವರು ಸ್ವಾಗತಿಸಿದರು. ಇಂತಹ ಪರವಿರೋಧಗಳ ಚರ್ಚೆಯಲ್ಲಿಯೂ IPL ಜಾಗತಿಕಮಟ್ಟದಲ್ಲಿ ಜನಪ್ರಿಯವಾಗಿದೆ.

ಇಂದಿನ ಕ್ರಿಕೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಬ್ಯಾಟ್ಸ್‌ಮನ್ ಗಳ ಆಟವೆಂದು ಅರ್ಥವಾಗುತ್ತದೆ! ಹೆಚ್ಚು ಬ್ಯಾಟ್ಸ್‌ಮನ್‌ಗಳೇ ತಂಡದ ನಾಯಕರಾಗಿ ಆಯ್ಕೆ ಆಗುವುದು, ಬ್ಯಾಟ್ಸ್‌ಮನ್‌ಗಳೇ ಹೆಚ್ಚು ಮೊತ್ತಕ್ಕೆ ಹರಾಜು ಆಗುವುದು ಇಂತಹ ಕಾರಣಗಳು ಮಾತ್ರವಲ್ಲ ಕ್ರಿಕೆಟ್ ನ ಮೂಲಭೂತ ನಿಯಮಗಳೇ ಬೌಲರ್ ಗಳಿಗೆ ಕಠಿಣವಾಗಿ ಮತ್ತು ಬ್ಯಾಟ್ಸ್‌ಮನ್ ಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ.

ಬೌಲರ್ ಗಳಿಗೆ ಇರುವ ಆ ನಿಯಮಗಳೇನು?

ಬ್ಯಾಟ್ಸ್‌ಮನ್ ಬ್ಯಾಟಿನ ಅಳತೆ ಮೀರಿ ಅಗಲಕ್ಕೆ ಮತ್ತು ಕಾಲಿನ (ಲೆಗ್‌ಸೈಡ್) ಬದಿಯಿಂದ ಒಂದು ಇಂಚೂ ಹೊರಗೆ ಬಾಲ್ ಹಾಕುವಂತಿಲ್ಲ, ಬ್ಯಾಟ್ಸ್‌ಮನ್ ನ ತಲೆಯ ಮೇಲೆನಿಂದಲೂ ಬಾಲ್ ಹಾಕುವಂತಿಲ್ಲ ಹಾಕಿದರೆ ಅದನ್ನು ವೈಡ್ ಎಂದು ಕರೆದು ಆ ಬಾಲ್ ಅನ್ನು ಲೆಕ್ಕಕ್ಕೆ ತಗೆದುಕೊಳ್ಳದೆ ಒಂದು ಪುಕ್ಕಟೆ ರನ್ ಅನ್ನು ನೀಡಲಾಗುತ್ತದೆ. ಅಂತೆಯೇ ನೋಬಾಲ್ ಕೂಡ. ಕ್ರೀಸ್ ಅನ್ನು ದಾಟಿ ಮಾಡಿದ ಬಾಲ್ ಹಾಗೂ ಬ್ಯಾಟ್ಸ್‌ಮನ್ ನ ಸೊಂಟಕ್ಕಿಂತ ಎತ್ತರಕ್ಕೆ ನೇರವಾಗಿ ಬಾಲ್ ಹಾಕಿದರೆ ಅದು ನೋಬಾಲ್ ಆಗಿ ಪರಿವರ್ತನೆ ಆಗುತ್ತದೆ ಆ ಬಾಲ್ ಲೆಕ್ಕಕ್ಕೆ ಇರುವುದಿಲ್ಲ ಮತ್ತು ನೋಬಾಲ್ ಅಲ್ಲಿ ಔಟ್ ಆದರೂ ಔಟ್ ಇರುವುದಿಲ್ಲ ಹಾಗೂ ಆ ಬಾಲ್ ನಲ್ಲಿ ಗಳಿಕೆ ಮೊತ್ತ (ರನ್) ಮಾತ್ರ ಲೆಕ್ಕಕ್ಕೆ ಇರುತ್ತದೆ! ಅಷ್ಟೆ ಅಲ್ಲದೆ ಹೊಸ ನಿಯಮಾವಳಿಯ ಪ್ರಕಾರ ನೋಬಾಲ್ ನಂತರದಲ್ಲಿ ಹಾಕುವ ಬಾಲ್ ‘ಫ್ರೀ ಹಿಟ್’ ಆಗಿರುತ್ತದೆ. ಅಂದರೆ ಆ ಬಾಲ್ ನಲ್ಲಿ ಬ್ಯಾಟ್ಸ್‌ಮನ್ ಎಷ್ಟು ಬೇಕಾದರೂ ರನ್ ಗಳಿಸಬಹುದು ಆದರೆ ಆ ಬಾಲ್ ಅಲ್ಲಿ ಔಟ್ ಆದರೆ ಅದು ಔಟ್ ಅಲ್ಲ (ರನ್ ಔಟ್ ಹೊರತುಪಡಿಸಿ)!

ಬ್ಯಾಟ್ಸ್‌ಮನ್ ಎಷ್ಟು ಓವರ್ ಬೇಕಾದರೂ ಆಡಬಹುದು. ಮೊದಲು ಬಂದು ಪಂದ್ಯದ ಅಂತಿಮ‌ ಬಾಲ್ ವರೆಗೂ ಆಡಬಹುದು ಆದರೆ ಬೌಲರ್ 20 ಓವರಿನ ಮ್ಯಾಚ್ ಆದರೆ ಕೇವಲ ನಾಲಕ್ಕು ಓವರ್ ಬೌಲಿಂಗ್ ಮಾಡಬಹುದು, ಏಕದಿನ ಪಂದ್ಯವಾದಲ್ಲಿ 10 ಓವರ್ ಗಳನ್ನು ಮಾತ್ರ ಮಾಡಬಹುದಾಗಿದೆ.

ಎದೆಯ ಮಟ್ಟಕ್ಕೆ ಓವರ್ ಒಂದರಲ್ಲಿ ಒಂದು ಅಥವಾ ಎರಡು ಬಾಲ್ ಗಳನ್ನು ಮಾತ್ರ ಹಾಕಬಹುದು ಅದಕ್ಕಿಂತ ಹೆಚ್ಚಾದರೆ ಅದೂ ಕೂಡ ನೋ ಬಾಲ್ ಆಗುತ್ತದೆ.

ಬ್ಯಾಟ್ಸ್‌ಮನ್ ಗಳಿಗೆ ಅನುಕೂಲವಾಗುವಂತೆ ಪವರ್ ಪ್ಲೇ ನಿಯಮವೂ ಇದೆ. ಅಂದರೆ ನಿಗದಿತ ಓವರ್‌ಗಳಲ್ಲಿ ಕೇವಲ ಇಬ್ಬರು ಫೀಲ್ಡರ್ ಗಳು ಮಾತ್ರ 30 ಯಾರ್ಡ್ ವೃತ್ತದ ಹೊರಗಿರಬೇಕು ಉಳಿದವರೆಲ್ಲಾ ವೃತ್ತದ ಒಳಗೇ ಇರಬೇಕು ಅಂದರೆ ಬ್ಯಾಟ್ಸ್‌ಮನ್ ಗಳಿಗೆ ಬೌಂಡರಿಗಳು ಹೊಡಯಲು ಸುಲಭವಾಗುವಂತ ನಿಯಮ ಇದಾಗಿದೆ.

ಇವುಗಳಲ್ಲಿ ಕೆಲವು ಅಗತ್ಯವಾದ ನಿಯಮಗಳು ಇವೆ ಮತ್ತು ಕೆಲವು ಕೇವಲ ಬ್ಯಾಟ್ಸ್‌ಮನ್ ಗಳಿಗೆ ಸುಲಭವಾಗುವಂತ ನಿಯಮಗಳೂ ಇವೆ. ಹೀಗಾಗಿ ಈ ಆಟದಲ್ಲಿ ಬ್ಯಾಟ್ಸ್‌ಮನ್ ಗಳೇ ಹೆಚ್ಚು ಹೀರೋಗಳಾಗಿ ಮಿಂಚುತ್ತಾರೆ.

ಹಾಗಾದರೆ ಈ ಆಟ ಹೀಗೆಯೇ ಇತ್ತ?

1960 ರಿಂದ ಹೆಚ್ಚು ಕಡಿಮೆ 80 ರ ದಶಕದವರೆಗೂ ಕ್ರಿಕೆಟ್ ಅಂದರೆ ಬೌಲರ್ ಗಳೇ ಹೀರೋಗಳಾಗಿ ಮೆರದ ದಿನಗಳಾಗಿದ್ದವು. ಕ್ರಿಕೆಟ್‌ ಅನ್ನು ಭಾರತದಲ್ಲಿ ಆರಾಧಿಸಿದಂತಯೇ ವೆಸ್ಟ್‌ಇಂಡೀಸ್ ಅಲ್ಲಿಯೂ ಕ್ರಿಕೆಟ್ ಒಂದು ಧರ್ಮದಂತೆ‌. ಅಷ್ಟೇ ಅಲ್ಲ ತಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುವ ಬ್ರಿಟಿಷ್ ವಸಾಹತುಶಾಹಿ ಒಡೆಯರ ವಿರುದ್ಧ ತಮ್ಮದೇ ದೊರೆಗಳಿಗೆ ನಾವು ಕೂಡ ಎಲ್ಲಾ ಹಕ್ಕುಗಳನ್ನು ಹೊಂದಿರುವ ನಿಮ್ಮಂತೆಯೇ ಸಮಾನರು ಎಂದು ತೋರಿಸಲು ಕ್ರಿಕೆಟ್ ಅನ್ನು ಅಸ್ತ್ರವಾಗಿಟ್ಟುಕೊಂಡು ವೇದಿಕೆಯಾಗಿಸಿಕೊಂಡಿದ್ದರು. 1975 ರಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದಾಗ ಆಸ್ಟ್ರೇಲಿಯಾ ತಂಡದಲ್ಲಿ ಬಲಿಷ್ಠ ಫಾಸ್ಟ್ ಬೌಲರ್ ಗಳು ವೆಸ್ಟ್ ಇಂಡೀಸ್ ತಂಡವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಅಕ್ಷರಸಹ ಮಿಲಿಟರಿ ದಾಳಿಯಂತೆ ಗಾಯಗಳನ್ನೂ ಮಾಡಿದ್ದರು. ಸಾಲದಕ್ಕೆ ಪ್ರೇಕ್ಷಕರ ಗ್ಯಾಲರಿ ಇಂದ ಆಸ್ಟ್ರೇಲಿಯಾ ಬೌಲರ್ ಗಳಿಗೆ ವೆಸ್ಟ್ ಇಂಡೀಸ್ ನ ಆಟಗಾರರನ್ನು ಕೊಲ್ಲಿ “ಲಿಲ್ಲಿ ಲಿಲ್ಲಿ ಕಿಲ್ ಕಿಲ್” ಎಂದು ಘೋಷಣೆಗಳನ್ನು ಹಾಕುತ್ತಿದ್ದರು ಅಲ್ಲದೆ ಕಪ್ಪು ಬಣ್ಣವನ್ನು ಆಡಿಕೊಳ್ಳುವುದು, “ಗೋ ಬ್ಯಾಕ್ ಟು ಟ್ರೀಸ್” ನೀವು ಕೋತಿಗಳು ಮರಗಳಿಗೆ ವಾಪಾಸ್ ಹೋಗಿ ಎಂದು ಕೂಗುತ್ತಾ ಅವಮಾನಿಸಲಾಯಿತು.

ಇಂತಹ ಭೀಕರವಾದ ಅವಮಾನದ ಸೋಲಿನ ನಂತರ ತಂಡದ ನಾಯಕ ಕ್ಲೈವ್ ದೇಶದಾದ್ಯಂತ ಓಡಾಡಿ ಪಾಸ್ಟ್ ಬೌಲರ್‌ಗಳಿಗಾಗಿ ಹುಡುಕಾಡಿದ. ಹಳ್ಳಿ ಹಳ್ಳಿಯನ್ನು ಸುತ್ತಾಡಿ ಬೌಲರ್ ಗಳನ್ನು ಕರೆತಂದು ಒಂದು ಬಲಿಷ್ಠ ತಂಡವನ್ನು ಕಟ್ಟಲು ಪ್ರಯತ್ನಿಸಿದ ವಿವಿ ಲಿಚರ್ಡ್ ನಂತಹ ಬ್ಯಾಟಿಂಟ್ ಲೆಜೆಂಡ್ ಅನ್ನು ಒಳಗೊಂಡಂತೆ ಪಾಸ್ಟ್ ಬೌಲರ್ ಗಳಾದ ಜೋಲ್ ಗಾರ್ನರ್, ಮೈಕಲ್, ರಾಬರ್ಟ್, ಕಾಲಿನ್ ಕ್ರಾಫ್ ನಂತಹ 90 ಮೈಲಿ ಕ್ಕಿಂತ ಹಚ್ಚು ವೇಗವಾಗಿ ಬೌಲ್ ಮಾಡುವ ತಂಡ ಸಿದ್ದವಾಯಿತು. ಇಂತಹ ತಂಡ ಸಿದ್ಧವಾದ ನಂತರ ಸುನಿಲ್ ಗವಾಸ್ಕರ್ ನೇತೃತ್ವದ ಭಾರತ ತಂಡದ ಮೇಲೆ ದಾಳಿ ನಡೆಸಿತು. ಭಾರತವು ಫಾಸ್ಟ್ ಬೌಲರ್ ಗಳನ್ನು ಎದುರಿಸಲಾಗದೆ ಆಟವನ್ನು ಅರ್ಧಕ್ಕೆ ನಿಲ್ಲಿಸಿ ಶರಣಾಯಿತು.

ನಂತರ 1976 ರಲ್ಲಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಗೆ ಪ್ರವಾಸ ಬಳಸಿತು‌. ಬಾಲ್ಯದಲ್ಲಿ ಉತ್ತಮ ಜೀವನದ ನಿರೀಕ್ಷೆಯಲ್ಲಿ ಇಂಗ್ಲೆಂಡ್ ಗೆ ವಲಸೆ ಹೋಗಿ ಕಪ್ಪು ವರ್ಣದ ಕಾರಣಕ್ಕೆ ವಸತಿ, ಉದ್ಯೋಗ ಆಹಾರವೂ ಇಲ್ಲದೆ ಗುಲಾಮರಂತೆ, ಕ್ರಿಮಿನಲ್ ಗಳಂತೆ ಬಿಂಬಿಸಿಕೊಂಡು ಅವಮಾನ ಅನುಭವಿಸಿದ ಕುಟುಂಬ ಸದಸ್ಯರು ಈಗ ವೆಸ್ಟ್ ಇಂಡೀಸ್ ತಂಡದಲ್ಲಿ ಆಡುತ್ತಿದ್ದಾರೆ. ಪಂದ್ಯದ ಮುನ್ನ ಟಿವಿ ಸಂದರ್ಶದಲ್ಲಿ ಇಂಗ್ಲೆಂಡ್ ನ ವೇಗಿ ಟೋನಿ ಗ್ರೇಗ್ “ಈ ಕರಿಯರನ್ನು ತೆವಳುವಂತೆ ಮಾಡುವೆ” ಎಂದು ಹೇಳಿಕೆ ನೀಡಿದ. ಇದನ್ನು ಗಂಭೀರವಾಗಿ ತಗೆದುಕೊಂಡ ವೆಸ್ಟ್ ಇಂಡೀಸ್ ಆಟಗಾರರು ತಮ್ಮ ವೇಗದ ಬೌಲಿಂಗ್ ನಿಂದ ತಮ್ಮ ಹಳೆಯ ಒಡೆಯರ ವಿರುದ್ಧವೇ ಗೆಲುವಿನ ಸೇಡು ತೀರಿಸಿಕೊಂಡರು. ಮರುದಿನ ಪತ್ರಿಕೆಗಳಲ್ಲಿ “ಈಗ ತೆವಳಿದ್ದಿ ಯಾರು?” ಎಂದು ವರದಿಗಳು ಪ್ರಕಟವಾದವು.

ನಂತರ ತಮ್ಮ ಹಳೆಯ ಶತ್ರು ಆಸ್ಟ್ರೇಲಿಯಾ ತಂಡವನ್ನು 1979 ರಲ್ಲಿ ಎದುರುಗೊಂಡರು‌. ಈ ಹೊತ್ತಿಗೆ ಆಸ್ಟ್ರೇಲಿಯಾ ತಂಡ ಜಗತ್ತಿನ ನಂ.1 ತಂಡವಾಗಿತ್ತು. ಅವರ ವಿರುದ್ಧವೂ ಅವರದ್ದೇ ನೆಲದಲ್ಲಿ ಅಜೇಯ ಗೆಲುವು ಸಾಧಿಸಿ ಇತಿಹಾಸ ಬರೆಯಿತು‌. ಈ ಎಲ್ಲಾ ಗೆಲುವುಗಳು ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ನ ಕಿರಿಯರಿಗೆ ಆತ್ಮಾಭಿಮಾನ ತಂದು ಕೊಟ್ಟಿತು. ಕ್ಲೈವ್ ಕ್ರಿಕೆಟ್ ತಂಡದ ನಾಯಕನಲ್ಲದೆ ಇಡೀ ದೇಶದ ನಾಯಕನಂತೆ ಹೊರಹೊಮ್ಮಿದ. “ಕರಿಯರೂ ಈಗ ಸುಂದರವಾಗಿ ಕಾಣುವಂತೆ ನೀವು ಮಾಡಿದಿರಿ” ಎಂದು ಜನರು ಬ್ಯಾನರ್ ಗಳನ್ನು ಹಾಕಿದರು, ಬಾವುಟಗಳನ್ನು ಹಾರಿಸಿದರು. ನಾವು ಬಿಳಿಯರಿಗೆ ಸರಿಸಮಾನರು ಎಂದು ತೋರಿಸಿದಿರಿ, ರಾಜಕಾರಣಿಗಳು ಮಾಡಲು ಸಾಧ್ಯವಾಗದ್ದನ್ನು ಕ್ರಿಕೆಟ್ ತಂಡ ಮಾಡಿತು ಎಂದು ಜನರು ಹೊಗಳಲು ಆರಂಭಿಸಿದರು.

ದಶಕಗಳಿಂದ ಕರಿಯರ ಕಲೆ ಸಂಸ್ಕೃತಿಗಳನ್ನು criminalisation ಮಾಡಲಾಗಿತ್ತು. ಆದರೆ ವೆಸ್ಟ್ ಇಂಡೀಸ್ ತಂಡದ ಗೆಲುವಿನ ನಾಗಲೋಟವು ಜಾಗತಿಕ ಮಟ್ಟದಲ್ಲಿ ಹೊಸ ಭರವಸೆಯನ್ನು ಹುಟ್ಟಿಸುವ ಜತೆ ಜೊತೆಗೆ ಬಾಬ್ ಮಾರ್ಲೆ ಅಂತಹ ಗಾಯಕರು ಹುಟ್ಟಿಕೊಂಡರು ಕರಿಯರ ಕಲೆ ಸಂಸ್ಕೃತಿಗಳು ಮತ್ತು ಮುನ್ನಲೆಗೆ ಬಂದಿತು. ಈ ಕ್ರಿಕೆಟರ್ ಗಳನ್ನು ತಮ್ಮ ಹಿರೋಗಳಂತೆ ಅಭಿಮಾನಿಸುತ್ತಾ ತಮ್ಮ ಹಕ್ಕುಗಳಿಗಾಗಿ ಬಂಡಾಯದ ಹಾಡುಗಳು ಜನಪ್ರಿಯವಾದವು.

ಆದರೆ ಇದೇ ಸಮಯದಲ್ಲಿ ವೆಸ್ಟ್ ಇಂಡೀಸ್ ನ ವೇಗಿಗಗಳಾದ ಜೋಲ್ ಗಾರ್ನರ್, ಮೈಕಲ್, ರಾಬರ್ಟ್, ಕಾಲಿನ್ ಕ್ರಾಫ್ ಅವರನ್ನು ಕ್ರಿಕೆಟ್ ತಜ್ಞರು, ಪತ್ರಿಕೆಗಳು, ಟಿವಿಗಳು ‘ಕೊಲೆಗಾರರು, ಭಯೋತ್ಪಾದಕರು’ ಎಂದು ಕರೆಯಲು ಆರಂಭಿಸಿದರು. ಈ ಬೌಲರ್ ಗಳನ್ನು ಕಟ್ಟಿಹಾಕಿ ಪಂದ್ಯ ನಿಯಮಗಳಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿ ಮಾಡಬೇಕು ಇಲ್ಲವಾದರೆ ಬ್ಯಾಟ್ಸ್‌ಮನ್‌ಗಳು ಪ್ರಾಣ ಕಳೆದುಕೊಳ್ಳಲಿದ್ದಾರೆ ಎನ್ನುವ ಕೂಗುಗಳು ಬಲವಾಗಿ ಮುನ್ನಲೆಗೆ ಬರಲು ಪ್ರಾರಂಭವಾಯಿತು‌. ಆದರೆ ನೆನಪಿರಲಿ ವಿಂಡೀಸ್ ಮೇಲೆ ಆಸ್ಟ್ರೇಲಿಯಾ, ಇಂಗ್ಲೆಂಡ್ ದಾಳಿ ಮಾಡಿದಾಗ ಇಂಹ ಮಾತುಗಳಾಗಲಿ ವಿಂಡೀಸ್ ತಂಡದವರು ಆಡಿರಲಿಲ್ಲ‌. ಹೀಗೆ ವಿಂಡೀಸ್ ಫಾಸ್ಟ್ ಬೌಲರ್ ಗಳನ್ನು ಉಗ್ರಗಾಮಿಗಳು ಎಂದು ಕರೆದು ಅವರನ್ನು ಕಟ್ಟಿಹಾಕಲು ಹೊಸ ಹೊಸ ನಿಯಮಗಳು ಹುಟ್ಟಿಕೊಳ್ಳುತ್ತಾ ಇಂದಿನ ವರೆಗೂ ರೂಪಾಂತರಗೊಳ್ಳುತ್ತಿದೆ.

ಕರಿಯರ ಸಮಾನತೆಗಾಗಿ ವೇದಿಕೆಯಾಗಿದ್ದ ಕ್ರಿಕೆಟ್ ರೂಪಾಂತರವಾಗುತ್ತಾ ಇಂದು ಬಂಡವಾಳಿಗರ ತೆಕ್ಕೆಗೆ ಬಿದ್ದು ಬ್ಯಾಟ್ಸ್‌ಮನ್‌ಗಳ ಆಟವಾಗಿ ಬೆಳೆದು ನಿಂತಿದೆ.

  • ಸರೋವರ್ ಬೆಂಕಿಕೆರೆ

(ಯುವ ವಿದ್ಯಾರ್ಥಿ ನಾಯಕ. ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕರು)


ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್‍ನಲ್ಲಿ ಭಾರತದ ಹೆಜ್ಜೆಗುರುತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...