Homeಸಿನಿಮಾಕ್ರೀಡೆವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

ವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

ಕರಿಯರ ಸಮಾನತೆಗಾಗಿ ವೇದಿಕೆಯಾಗಿದ್ದ ಕ್ರಿಕೆಟ್ ರೂಪಾಂತರವಾಗುತ್ತಾ ಇಂದು ಬಂಡವಾಳಿಗರ ತೆಕ್ಕೆಗೆ ಬಿದ್ದು ಬ್ಯಾಟ್ಸ್‌ಮನ್‌ಗಳ ಆಟವಾಗಿ ಬೆಳೆದು ನಿಂತಿದೆ.

- Advertisement -
- Advertisement -

ಕ್ರಿಕೆಟ್ ಭಾರತದ ಮತ್ತೊಂದು ಧರ್ಮವೆಂದೇ ಹೇಳಲಾಗುತ್ತದೆ. ಜಗತ್ತಿನಾದ್ಯಂತ ಫುಟ್‌ಬಾಲ್ ಗೇ ಹೆಚ್ಚು ಪ್ರೇಕ್ಷಕರು ಇದ್ದರೂ ಭಾರತದ ಮಟ್ಟಕ್ಕೆ ಕ್ರಿಕೆಟ್ ಎಲ್ಲವೂ ಆಗಿಬಿಟ್ಟಿದೆ‌. ಹಳ್ಳಿಯ ಕೆರೆ ಮೈದಾನ, ಗಲ್ಲಿಯ ಓಣಿಯಿಂದ ಎಲ್ಲಡೆಯೂ ಕ್ರಿಕೆಟ್ ಆಟ ಸಾಮಾನ್ಯವಾಗಿದೆ. ಇನ್ನೂ ಐಪಿಎಲ್ ಹೊತ್ತಲ್ಲಿ ಮನೆಯಲ್ಲಿ ಅಡುಗೆಯೂ ಮಾಡದೇ ಹೊರಗಿನಿಂದ ಊಟ ತರಿಸಿಕೊಂಡು ಕ್ರಿಕೆಟ್ ನೋಡುಗರ ಸಂಖ್ಯೆ ಹೆಚ್ಚು ಎಂದು ಸ್ವಿಗ್ಗಿ, ಜೋಮಾಟೋ ಅಂಕಿ ಅಂಶಗಳು ಹೇಳುತ್ತದೆ. ಜಗತ್ತೇ ಕರೋನಾದಿಂದ ತಲ್ಲಣಿಸಿ ಹೋದರೂ, ಭಾರತದ ಕೂಲಿ ಕಾರ್ಮಿಕರು ಮುನ್ಸೂಚನೆ ಮುನ್ನೋಟವಿಲ್ಲದ ಲಾಕ್‌ಡೌನ್ ನಿಂದಾಗಿ ಇಂದಿಗೂ ಚೇತರಿಕೆ ಕಾಣದ ಈ ಹೊತ್ತಲ್ಲೂ ದೂರದ ದುಬೈನಲ್ಲಿ IPL- ಇಂಡಿಯನ್ ಪ್ರೀಮಿಯರ್ ಲೀಗ್ ನ ಟೂರ್ನಿ ನಡೆಸಲು ಸಿದ್ಧತೆ ಮಾಡಿಕೊಂಡು ಆಡಿಸಿ ಈಗ ಫೈನಲ್ ಹಂತ ತಲುಪಿ ಇಂದು ಮುಂಬೈ ಮತ್ತು ಡೆಲ್ಲಿ ತಂಡಗಳ ನಡುವೆ 2020 ರ ಕಪ್ ಗಾಗಿ ಹಣಾಹಣಿ ನಡೆಯುತ್ತಿರುವುದು ನೋಡಿದರೆ ಐಪಿಎಲ್ ಎಷ್ಟು “ಜನಪ್ರಿಯ” ಎಂದು ನೀವು ಅಂದಾಜಿಸಬಹುದಾಗಿದೆ!

T-20 (20 ಓವರ್‌ಗಳ ಆಟ) ಪ್ರಕಾರವನ್ನು ಕ್ರಿಕೆಟ್ ಅಲ್ಲಿ ಪರಿಚಯಿಸಿದಾಗ ಹಲವು ಹಿರಿಯ ಆಟಗಾರರು ಕ್ರಿಕೆಟ್ ಸಾಂಪ್ರದಾಯಕ್ಕೆ ಇದು ಮಾರಕವೆಂದು ಜರಿದರೆ, ಹಲವರು ಸ್ವಾಗತಿಸಿದರು. ಇಂತಹ ಪರವಿರೋಧಗಳ ಚರ್ಚೆಯಲ್ಲಿಯೂ IPL ಜಾಗತಿಕಮಟ್ಟದಲ್ಲಿ ಜನಪ್ರಿಯವಾಗಿದೆ.

ಇಂದಿನ ಕ್ರಿಕೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಬ್ಯಾಟ್ಸ್‌ಮನ್ ಗಳ ಆಟವೆಂದು ಅರ್ಥವಾಗುತ್ತದೆ! ಹೆಚ್ಚು ಬ್ಯಾಟ್ಸ್‌ಮನ್‌ಗಳೇ ತಂಡದ ನಾಯಕರಾಗಿ ಆಯ್ಕೆ ಆಗುವುದು, ಬ್ಯಾಟ್ಸ್‌ಮನ್‌ಗಳೇ ಹೆಚ್ಚು ಮೊತ್ತಕ್ಕೆ ಹರಾಜು ಆಗುವುದು ಇಂತಹ ಕಾರಣಗಳು ಮಾತ್ರವಲ್ಲ ಕ್ರಿಕೆಟ್ ನ ಮೂಲಭೂತ ನಿಯಮಗಳೇ ಬೌಲರ್ ಗಳಿಗೆ ಕಠಿಣವಾಗಿ ಮತ್ತು ಬ್ಯಾಟ್ಸ್‌ಮನ್ ಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ.

ಬೌಲರ್ ಗಳಿಗೆ ಇರುವ ಆ ನಿಯಮಗಳೇನು?

ಬ್ಯಾಟ್ಸ್‌ಮನ್ ಬ್ಯಾಟಿನ ಅಳತೆ ಮೀರಿ ಅಗಲಕ್ಕೆ ಮತ್ತು ಕಾಲಿನ (ಲೆಗ್‌ಸೈಡ್) ಬದಿಯಿಂದ ಒಂದು ಇಂಚೂ ಹೊರಗೆ ಬಾಲ್ ಹಾಕುವಂತಿಲ್ಲ, ಬ್ಯಾಟ್ಸ್‌ಮನ್ ನ ತಲೆಯ ಮೇಲೆನಿಂದಲೂ ಬಾಲ್ ಹಾಕುವಂತಿಲ್ಲ ಹಾಕಿದರೆ ಅದನ್ನು ವೈಡ್ ಎಂದು ಕರೆದು ಆ ಬಾಲ್ ಅನ್ನು ಲೆಕ್ಕಕ್ಕೆ ತಗೆದುಕೊಳ್ಳದೆ ಒಂದು ಪುಕ್ಕಟೆ ರನ್ ಅನ್ನು ನೀಡಲಾಗುತ್ತದೆ. ಅಂತೆಯೇ ನೋಬಾಲ್ ಕೂಡ. ಕ್ರೀಸ್ ಅನ್ನು ದಾಟಿ ಮಾಡಿದ ಬಾಲ್ ಹಾಗೂ ಬ್ಯಾಟ್ಸ್‌ಮನ್ ನ ಸೊಂಟಕ್ಕಿಂತ ಎತ್ತರಕ್ಕೆ ನೇರವಾಗಿ ಬಾಲ್ ಹಾಕಿದರೆ ಅದು ನೋಬಾಲ್ ಆಗಿ ಪರಿವರ್ತನೆ ಆಗುತ್ತದೆ ಆ ಬಾಲ್ ಲೆಕ್ಕಕ್ಕೆ ಇರುವುದಿಲ್ಲ ಮತ್ತು ನೋಬಾಲ್ ಅಲ್ಲಿ ಔಟ್ ಆದರೂ ಔಟ್ ಇರುವುದಿಲ್ಲ ಹಾಗೂ ಆ ಬಾಲ್ ನಲ್ಲಿ ಗಳಿಕೆ ಮೊತ್ತ (ರನ್) ಮಾತ್ರ ಲೆಕ್ಕಕ್ಕೆ ಇರುತ್ತದೆ! ಅಷ್ಟೆ ಅಲ್ಲದೆ ಹೊಸ ನಿಯಮಾವಳಿಯ ಪ್ರಕಾರ ನೋಬಾಲ್ ನಂತರದಲ್ಲಿ ಹಾಕುವ ಬಾಲ್ ‘ಫ್ರೀ ಹಿಟ್’ ಆಗಿರುತ್ತದೆ. ಅಂದರೆ ಆ ಬಾಲ್ ನಲ್ಲಿ ಬ್ಯಾಟ್ಸ್‌ಮನ್ ಎಷ್ಟು ಬೇಕಾದರೂ ರನ್ ಗಳಿಸಬಹುದು ಆದರೆ ಆ ಬಾಲ್ ಅಲ್ಲಿ ಔಟ್ ಆದರೆ ಅದು ಔಟ್ ಅಲ್ಲ (ರನ್ ಔಟ್ ಹೊರತುಪಡಿಸಿ)!

ಬ್ಯಾಟ್ಸ್‌ಮನ್ ಎಷ್ಟು ಓವರ್ ಬೇಕಾದರೂ ಆಡಬಹುದು. ಮೊದಲು ಬಂದು ಪಂದ್ಯದ ಅಂತಿಮ‌ ಬಾಲ್ ವರೆಗೂ ಆಡಬಹುದು ಆದರೆ ಬೌಲರ್ 20 ಓವರಿನ ಮ್ಯಾಚ್ ಆದರೆ ಕೇವಲ ನಾಲಕ್ಕು ಓವರ್ ಬೌಲಿಂಗ್ ಮಾಡಬಹುದು, ಏಕದಿನ ಪಂದ್ಯವಾದಲ್ಲಿ 10 ಓವರ್ ಗಳನ್ನು ಮಾತ್ರ ಮಾಡಬಹುದಾಗಿದೆ.

ಎದೆಯ ಮಟ್ಟಕ್ಕೆ ಓವರ್ ಒಂದರಲ್ಲಿ ಒಂದು ಅಥವಾ ಎರಡು ಬಾಲ್ ಗಳನ್ನು ಮಾತ್ರ ಹಾಕಬಹುದು ಅದಕ್ಕಿಂತ ಹೆಚ್ಚಾದರೆ ಅದೂ ಕೂಡ ನೋ ಬಾಲ್ ಆಗುತ್ತದೆ.

ಬ್ಯಾಟ್ಸ್‌ಮನ್ ಗಳಿಗೆ ಅನುಕೂಲವಾಗುವಂತೆ ಪವರ್ ಪ್ಲೇ ನಿಯಮವೂ ಇದೆ. ಅಂದರೆ ನಿಗದಿತ ಓವರ್‌ಗಳಲ್ಲಿ ಕೇವಲ ಇಬ್ಬರು ಫೀಲ್ಡರ್ ಗಳು ಮಾತ್ರ 30 ಯಾರ್ಡ್ ವೃತ್ತದ ಹೊರಗಿರಬೇಕು ಉಳಿದವರೆಲ್ಲಾ ವೃತ್ತದ ಒಳಗೇ ಇರಬೇಕು ಅಂದರೆ ಬ್ಯಾಟ್ಸ್‌ಮನ್ ಗಳಿಗೆ ಬೌಂಡರಿಗಳು ಹೊಡಯಲು ಸುಲಭವಾಗುವಂತ ನಿಯಮ ಇದಾಗಿದೆ.

ಇವುಗಳಲ್ಲಿ ಕೆಲವು ಅಗತ್ಯವಾದ ನಿಯಮಗಳು ಇವೆ ಮತ್ತು ಕೆಲವು ಕೇವಲ ಬ್ಯಾಟ್ಸ್‌ಮನ್ ಗಳಿಗೆ ಸುಲಭವಾಗುವಂತ ನಿಯಮಗಳೂ ಇವೆ. ಹೀಗಾಗಿ ಈ ಆಟದಲ್ಲಿ ಬ್ಯಾಟ್ಸ್‌ಮನ್ ಗಳೇ ಹೆಚ್ಚು ಹೀರೋಗಳಾಗಿ ಮಿಂಚುತ್ತಾರೆ.

ಹಾಗಾದರೆ ಈ ಆಟ ಹೀಗೆಯೇ ಇತ್ತ?

1960 ರಿಂದ ಹೆಚ್ಚು ಕಡಿಮೆ 80 ರ ದಶಕದವರೆಗೂ ಕ್ರಿಕೆಟ್ ಅಂದರೆ ಬೌಲರ್ ಗಳೇ ಹೀರೋಗಳಾಗಿ ಮೆರದ ದಿನಗಳಾಗಿದ್ದವು. ಕ್ರಿಕೆಟ್‌ ಅನ್ನು ಭಾರತದಲ್ಲಿ ಆರಾಧಿಸಿದಂತಯೇ ವೆಸ್ಟ್‌ಇಂಡೀಸ್ ಅಲ್ಲಿಯೂ ಕ್ರಿಕೆಟ್ ಒಂದು ಧರ್ಮದಂತೆ‌. ಅಷ್ಟೇ ಅಲ್ಲ ತಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುವ ಬ್ರಿಟಿಷ್ ವಸಾಹತುಶಾಹಿ ಒಡೆಯರ ವಿರುದ್ಧ ತಮ್ಮದೇ ದೊರೆಗಳಿಗೆ ನಾವು ಕೂಡ ಎಲ್ಲಾ ಹಕ್ಕುಗಳನ್ನು ಹೊಂದಿರುವ ನಿಮ್ಮಂತೆಯೇ ಸಮಾನರು ಎಂದು ತೋರಿಸಲು ಕ್ರಿಕೆಟ್ ಅನ್ನು ಅಸ್ತ್ರವಾಗಿಟ್ಟುಕೊಂಡು ವೇದಿಕೆಯಾಗಿಸಿಕೊಂಡಿದ್ದರು. 1975 ರಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದಾಗ ಆಸ್ಟ್ರೇಲಿಯಾ ತಂಡದಲ್ಲಿ ಬಲಿಷ್ಠ ಫಾಸ್ಟ್ ಬೌಲರ್ ಗಳು ವೆಸ್ಟ್ ಇಂಡೀಸ್ ತಂಡವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಅಕ್ಷರಸಹ ಮಿಲಿಟರಿ ದಾಳಿಯಂತೆ ಗಾಯಗಳನ್ನೂ ಮಾಡಿದ್ದರು. ಸಾಲದಕ್ಕೆ ಪ್ರೇಕ್ಷಕರ ಗ್ಯಾಲರಿ ಇಂದ ಆಸ್ಟ್ರೇಲಿಯಾ ಬೌಲರ್ ಗಳಿಗೆ ವೆಸ್ಟ್ ಇಂಡೀಸ್ ನ ಆಟಗಾರರನ್ನು ಕೊಲ್ಲಿ “ಲಿಲ್ಲಿ ಲಿಲ್ಲಿ ಕಿಲ್ ಕಿಲ್” ಎಂದು ಘೋಷಣೆಗಳನ್ನು ಹಾಕುತ್ತಿದ್ದರು ಅಲ್ಲದೆ ಕಪ್ಪು ಬಣ್ಣವನ್ನು ಆಡಿಕೊಳ್ಳುವುದು, “ಗೋ ಬ್ಯಾಕ್ ಟು ಟ್ರೀಸ್” ನೀವು ಕೋತಿಗಳು ಮರಗಳಿಗೆ ವಾಪಾಸ್ ಹೋಗಿ ಎಂದು ಕೂಗುತ್ತಾ ಅವಮಾನಿಸಲಾಯಿತು.

ಇಂತಹ ಭೀಕರವಾದ ಅವಮಾನದ ಸೋಲಿನ ನಂತರ ತಂಡದ ನಾಯಕ ಕ್ಲೈವ್ ದೇಶದಾದ್ಯಂತ ಓಡಾಡಿ ಪಾಸ್ಟ್ ಬೌಲರ್‌ಗಳಿಗಾಗಿ ಹುಡುಕಾಡಿದ. ಹಳ್ಳಿ ಹಳ್ಳಿಯನ್ನು ಸುತ್ತಾಡಿ ಬೌಲರ್ ಗಳನ್ನು ಕರೆತಂದು ಒಂದು ಬಲಿಷ್ಠ ತಂಡವನ್ನು ಕಟ್ಟಲು ಪ್ರಯತ್ನಿಸಿದ ವಿವಿ ಲಿಚರ್ಡ್ ನಂತಹ ಬ್ಯಾಟಿಂಟ್ ಲೆಜೆಂಡ್ ಅನ್ನು ಒಳಗೊಂಡಂತೆ ಪಾಸ್ಟ್ ಬೌಲರ್ ಗಳಾದ ಜೋಲ್ ಗಾರ್ನರ್, ಮೈಕಲ್, ರಾಬರ್ಟ್, ಕಾಲಿನ್ ಕ್ರಾಫ್ ನಂತಹ 90 ಮೈಲಿ ಕ್ಕಿಂತ ಹಚ್ಚು ವೇಗವಾಗಿ ಬೌಲ್ ಮಾಡುವ ತಂಡ ಸಿದ್ದವಾಯಿತು. ಇಂತಹ ತಂಡ ಸಿದ್ಧವಾದ ನಂತರ ಸುನಿಲ್ ಗವಾಸ್ಕರ್ ನೇತೃತ್ವದ ಭಾರತ ತಂಡದ ಮೇಲೆ ದಾಳಿ ನಡೆಸಿತು. ಭಾರತವು ಫಾಸ್ಟ್ ಬೌಲರ್ ಗಳನ್ನು ಎದುರಿಸಲಾಗದೆ ಆಟವನ್ನು ಅರ್ಧಕ್ಕೆ ನಿಲ್ಲಿಸಿ ಶರಣಾಯಿತು.

ನಂತರ 1976 ರಲ್ಲಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಗೆ ಪ್ರವಾಸ ಬಳಸಿತು‌. ಬಾಲ್ಯದಲ್ಲಿ ಉತ್ತಮ ಜೀವನದ ನಿರೀಕ್ಷೆಯಲ್ಲಿ ಇಂಗ್ಲೆಂಡ್ ಗೆ ವಲಸೆ ಹೋಗಿ ಕಪ್ಪು ವರ್ಣದ ಕಾರಣಕ್ಕೆ ವಸತಿ, ಉದ್ಯೋಗ ಆಹಾರವೂ ಇಲ್ಲದೆ ಗುಲಾಮರಂತೆ, ಕ್ರಿಮಿನಲ್ ಗಳಂತೆ ಬಿಂಬಿಸಿಕೊಂಡು ಅವಮಾನ ಅನುಭವಿಸಿದ ಕುಟುಂಬ ಸದಸ್ಯರು ಈಗ ವೆಸ್ಟ್ ಇಂಡೀಸ್ ತಂಡದಲ್ಲಿ ಆಡುತ್ತಿದ್ದಾರೆ. ಪಂದ್ಯದ ಮುನ್ನ ಟಿವಿ ಸಂದರ್ಶದಲ್ಲಿ ಇಂಗ್ಲೆಂಡ್ ನ ವೇಗಿ ಟೋನಿ ಗ್ರೇಗ್ “ಈ ಕರಿಯರನ್ನು ತೆವಳುವಂತೆ ಮಾಡುವೆ” ಎಂದು ಹೇಳಿಕೆ ನೀಡಿದ. ಇದನ್ನು ಗಂಭೀರವಾಗಿ ತಗೆದುಕೊಂಡ ವೆಸ್ಟ್ ಇಂಡೀಸ್ ಆಟಗಾರರು ತಮ್ಮ ವೇಗದ ಬೌಲಿಂಗ್ ನಿಂದ ತಮ್ಮ ಹಳೆಯ ಒಡೆಯರ ವಿರುದ್ಧವೇ ಗೆಲುವಿನ ಸೇಡು ತೀರಿಸಿಕೊಂಡರು. ಮರುದಿನ ಪತ್ರಿಕೆಗಳಲ್ಲಿ “ಈಗ ತೆವಳಿದ್ದಿ ಯಾರು?” ಎಂದು ವರದಿಗಳು ಪ್ರಕಟವಾದವು.

ನಂತರ ತಮ್ಮ ಹಳೆಯ ಶತ್ರು ಆಸ್ಟ್ರೇಲಿಯಾ ತಂಡವನ್ನು 1979 ರಲ್ಲಿ ಎದುರುಗೊಂಡರು‌. ಈ ಹೊತ್ತಿಗೆ ಆಸ್ಟ್ರೇಲಿಯಾ ತಂಡ ಜಗತ್ತಿನ ನಂ.1 ತಂಡವಾಗಿತ್ತು. ಅವರ ವಿರುದ್ಧವೂ ಅವರದ್ದೇ ನೆಲದಲ್ಲಿ ಅಜೇಯ ಗೆಲುವು ಸಾಧಿಸಿ ಇತಿಹಾಸ ಬರೆಯಿತು‌. ಈ ಎಲ್ಲಾ ಗೆಲುವುಗಳು ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ನ ಕಿರಿಯರಿಗೆ ಆತ್ಮಾಭಿಮಾನ ತಂದು ಕೊಟ್ಟಿತು. ಕ್ಲೈವ್ ಕ್ರಿಕೆಟ್ ತಂಡದ ನಾಯಕನಲ್ಲದೆ ಇಡೀ ದೇಶದ ನಾಯಕನಂತೆ ಹೊರಹೊಮ್ಮಿದ. “ಕರಿಯರೂ ಈಗ ಸುಂದರವಾಗಿ ಕಾಣುವಂತೆ ನೀವು ಮಾಡಿದಿರಿ” ಎಂದು ಜನರು ಬ್ಯಾನರ್ ಗಳನ್ನು ಹಾಕಿದರು, ಬಾವುಟಗಳನ್ನು ಹಾರಿಸಿದರು. ನಾವು ಬಿಳಿಯರಿಗೆ ಸರಿಸಮಾನರು ಎಂದು ತೋರಿಸಿದಿರಿ, ರಾಜಕಾರಣಿಗಳು ಮಾಡಲು ಸಾಧ್ಯವಾಗದ್ದನ್ನು ಕ್ರಿಕೆಟ್ ತಂಡ ಮಾಡಿತು ಎಂದು ಜನರು ಹೊಗಳಲು ಆರಂಭಿಸಿದರು.

ದಶಕಗಳಿಂದ ಕರಿಯರ ಕಲೆ ಸಂಸ್ಕೃತಿಗಳನ್ನು criminalisation ಮಾಡಲಾಗಿತ್ತು. ಆದರೆ ವೆಸ್ಟ್ ಇಂಡೀಸ್ ತಂಡದ ಗೆಲುವಿನ ನಾಗಲೋಟವು ಜಾಗತಿಕ ಮಟ್ಟದಲ್ಲಿ ಹೊಸ ಭರವಸೆಯನ್ನು ಹುಟ್ಟಿಸುವ ಜತೆ ಜೊತೆಗೆ ಬಾಬ್ ಮಾರ್ಲೆ ಅಂತಹ ಗಾಯಕರು ಹುಟ್ಟಿಕೊಂಡರು ಕರಿಯರ ಕಲೆ ಸಂಸ್ಕೃತಿಗಳು ಮತ್ತು ಮುನ್ನಲೆಗೆ ಬಂದಿತು. ಈ ಕ್ರಿಕೆಟರ್ ಗಳನ್ನು ತಮ್ಮ ಹಿರೋಗಳಂತೆ ಅಭಿಮಾನಿಸುತ್ತಾ ತಮ್ಮ ಹಕ್ಕುಗಳಿಗಾಗಿ ಬಂಡಾಯದ ಹಾಡುಗಳು ಜನಪ್ರಿಯವಾದವು.

ಆದರೆ ಇದೇ ಸಮಯದಲ್ಲಿ ವೆಸ್ಟ್ ಇಂಡೀಸ್ ನ ವೇಗಿಗಗಳಾದ ಜೋಲ್ ಗಾರ್ನರ್, ಮೈಕಲ್, ರಾಬರ್ಟ್, ಕಾಲಿನ್ ಕ್ರಾಫ್ ಅವರನ್ನು ಕ್ರಿಕೆಟ್ ತಜ್ಞರು, ಪತ್ರಿಕೆಗಳು, ಟಿವಿಗಳು ‘ಕೊಲೆಗಾರರು, ಭಯೋತ್ಪಾದಕರು’ ಎಂದು ಕರೆಯಲು ಆರಂಭಿಸಿದರು. ಈ ಬೌಲರ್ ಗಳನ್ನು ಕಟ್ಟಿಹಾಕಿ ಪಂದ್ಯ ನಿಯಮಗಳಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿ ಮಾಡಬೇಕು ಇಲ್ಲವಾದರೆ ಬ್ಯಾಟ್ಸ್‌ಮನ್‌ಗಳು ಪ್ರಾಣ ಕಳೆದುಕೊಳ್ಳಲಿದ್ದಾರೆ ಎನ್ನುವ ಕೂಗುಗಳು ಬಲವಾಗಿ ಮುನ್ನಲೆಗೆ ಬರಲು ಪ್ರಾರಂಭವಾಯಿತು‌. ಆದರೆ ನೆನಪಿರಲಿ ವಿಂಡೀಸ್ ಮೇಲೆ ಆಸ್ಟ್ರೇಲಿಯಾ, ಇಂಗ್ಲೆಂಡ್ ದಾಳಿ ಮಾಡಿದಾಗ ಇಂಹ ಮಾತುಗಳಾಗಲಿ ವಿಂಡೀಸ್ ತಂಡದವರು ಆಡಿರಲಿಲ್ಲ‌. ಹೀಗೆ ವಿಂಡೀಸ್ ಫಾಸ್ಟ್ ಬೌಲರ್ ಗಳನ್ನು ಉಗ್ರಗಾಮಿಗಳು ಎಂದು ಕರೆದು ಅವರನ್ನು ಕಟ್ಟಿಹಾಕಲು ಹೊಸ ಹೊಸ ನಿಯಮಗಳು ಹುಟ್ಟಿಕೊಳ್ಳುತ್ತಾ ಇಂದಿನ ವರೆಗೂ ರೂಪಾಂತರಗೊಳ್ಳುತ್ತಿದೆ.

ಕರಿಯರ ಸಮಾನತೆಗಾಗಿ ವೇದಿಕೆಯಾಗಿದ್ದ ಕ್ರಿಕೆಟ್ ರೂಪಾಂತರವಾಗುತ್ತಾ ಇಂದು ಬಂಡವಾಳಿಗರ ತೆಕ್ಕೆಗೆ ಬಿದ್ದು ಬ್ಯಾಟ್ಸ್‌ಮನ್‌ಗಳ ಆಟವಾಗಿ ಬೆಳೆದು ನಿಂತಿದೆ.

  • ಸರೋವರ್ ಬೆಂಕಿಕೆರೆ

(ಯುವ ವಿದ್ಯಾರ್ಥಿ ನಾಯಕ. ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕರು)


ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್‍ನಲ್ಲಿ ಭಾರತದ ಹೆಜ್ಜೆಗುರುತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...