Homeಮುಖಪುಟ12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ

12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ

- Advertisement -
- Advertisement -

ಕೆ.ಆರ್. ಶ್ಯಾಮ ಸುಂದರ್

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಇದೇ ಎಪ್ರಿಲ್ 15ರಂದು ಕೇಂದ್ರ ಗೃಹ ಸಚಿವಾಲಯವು ಒಂದು ವಿವರವಾದ ಅಧಿಸೂಚನೆಯನ್ನು ಹೊರಡಿಸಿತು. ಅದು ದಿಗ್ಬಂಧಿತವಲ್ಲದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನರಾಂಭಿಸಬಹುದಾದ ಶರತ್ತುಗಳನ್ನು ವಿವರಿಸಿತ್ತು.

ಈ ಆದೇಶವು- “ಸಾಮಾಜಿಕ ಅಂತರ” (ದೈಹಿಕ ಅಂತರ), ಕಾರ್ಮಿಕರಿಗೆ ಖಾಸಗಿ ಸಾರಿಗೆ, ವೈದ್ಯಕೀಯ ವಿಮೆ ಮುಂತಾದ ಕಡ್ಡಾಯವಾದ “ಮಾಡು”, “ಮಾಡಬೇಡ” ನಿಯಮಗಳನ್ನು ಹೇರಿದೆ. ಈ ನಿರ್ದೇಶನಗಳ ಯಾವುದೇ ಉಲ್ಲಂಘನೆಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯಿದೆ 2005 (ಎನ್‌ಡಿಎಂಎ)ರ ಅಡಿಯಲ್ಲಿ ಸೆರೆವಾಸ ಸೇರಿದಂತೆ ಭಾರೀ ದಂಡ ವಿಧಿಸಬಹುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ಇದಕ್ಕಿಂತ ಎರಡು ದಿನಗಳ ಮೊದಲು, ಅಂದರೆ ಎಪ್ರಿಲ್ 13ರಂದು ಭಾರತದ ಕೇಂದ್ರೀಯ ಕಾರ್ಮಿಕ ಸಂಘ (ಸಿಟಿಯು)ಗಳು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದು, ಸರಕಾರವು ಪರಿಗಣಿಸುತ್ತಿರುವುದಾಗಿ ಹೇಳಲಾದ ಕಾರ್ಖಾನೆ ಕಾಯಿದೆ, 1948 (ಎಫ್‌ಎ)ಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

ಈ ತಿದ್ದುಪಡಿಯು ಕಂಪೆನಿಗಳಿಗೆ ಕಾರ್ಖಾನೆಗಳ ಕಾರ್ಮಿಕರಿಗೆ ಕೆಲಸದ ಅವಧಿಯನ್ನು ಈಗಿರುವ- ದಿನಕ್ಕೆ ಎಂಟು ಗಂಟೆ, ವಾರಕ್ಕೆ ಆರು ದಿನ (48ಗಂಟೆ)ದಿಂದ, ದಿನಕ್ಕೆ 12 ಗಂಟೆ, ವಾರಕ್ಕೆ ಆರು ದಿನ (72 ಗಂಟೆ)ಕ್ಕೆ ಹೆಚ್ಚಿಸಲು ಅವಕಾಶ ಮಾಡಿಕೊಡುತ್ತಿತ್ತು.

ಈ ನಡೆಯು ವಿವಾದಾಸ್ಪದವಾಗಿದೆ. ಏಕೆಂದರೆ, ವಾರಕ್ಕೆ 48 ಗಂಟೆಗಳ ಕೆಲಸವು ಜಾಗತಿಕವಾಗಿ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘ (ಐಎಲ್ಓ)ದಿಂದ ಒಪ್ಪಿತವಾದ ನಿಯಮವಾಗಿದೆ. ಹಾಗೆ ನೋಡುವುದಾದಲ್ಲಿ ಐಎಲ್ಓ ಅಂಗೀಕರಿಸಿದ ಮೊತ್ತಮೊದಲ ಒಪ್ಪಂದವೇ ಕೆಲಸದ ಅವಧಿ (ಕೈಗಾರಿಕೆ) ಒಪ್ಪಂದ 1919 (ನಂ.1) ಆಗಿದೆ. ಇದಕ್ಕೆ ಭಾರತವು 1921ರಲ್ಲಿಯೇ ಸಹಿ ಹಾಕಿ, ವಾರಕ್ಕೆ 48 ಗಂಟೆಗಳ ಕೆಲಸವನ್ನು ನಿಗದಿಪಡಿಸಿತ್ತು.

ಸರಕಾರವು ಇನ್ನೂ ಕಾರ್ಖಾನೆ ಕಾಯಿದೆಯನ್ನು ತಿದ್ದುಪಡಿ ಮಾಡಿಲ್ಲವಾದರೂ, ಕನಿಷ್ಟ ನಾಲ್ಕು ಸರಕಾರಗಳು ಕಳೆದ ಕೆಲವು ದಿನಗಳ ಅವಧಿಯಲ್ಲಿ ಮೇಲೆ ಹೇಳಿರುವ ರೀತಿಯಲ್ಲಿ ಕೆಲಸದ ಅವಧಿಯನ್ನು ಹೆಚ್ಚಿಸುವ ಅಧಿಸೂಚನೆಗಳನ್ನು ಹೊರಡಿಸಿವೆ. ಅವುಗಳೆಂದರೆ, ರಾಜಸ್ಥಾನ (ಎಪ್ರಿಲ್ 11), ಗುಜರಾತ್ (ಎಪ್ರಿಲ್ 17), ಪಂಜಾಬ್ (ಎಪ್ರಿಲ್ 20) ಮತ್ತು ಹಿಮಾಚಲ ಪ್ರದೇಶ (ಎಪ್ರಿಲ್ 21).

ಇದೇ ಹೊತ್ತಿಗೆ, ಭಾರತದಲ್ಲಿ ಐತಿಹಾಸಿಕವಾಗಿಯೂ ಹಾಗೂ ಇತ್ತೀಚಿನ ವರೆಗೂ ಇದು ಕಾರ್ಮಿಕ ಕಾನೂನುಗಳ “ಸುಧಾರಣೆ” (ವಾಸ್ತವವಾಗಿ ಕಾರ್ಮಿಕರ ಹಕ್ಕುಗಳಿಗೆ ಕತ್ತರಿ)ಗಳನ್ನು ಜಾರಿಗೊಳಿಸಲು ಅತ್ಯಂತ ಅನುಕೂಲಕರ ಕಾರ್ಯತಂತ್ರವಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಮಾರುಕಟ್ಟೆ “ಸುಧಾರಣೆ”ಗಳನ್ನು ಕಾರ್ಮಿಕ ಚಳವಳಿಯು ಸಾಕಷ್ಟು ಒಗ್ಗಟ್ಟಿನಿಂದ ಕೋಟ್ಯಂತರ ಕಾರ್ಮಿಕರ ಬೃಹತ್ ಮುಷ್ಕರಗಳ ಮೂಲಕ ಮತ್ತು ತ್ರಿಪಕ್ಷೀಯ ವೇದಿಕೆಗಳಲ್ಲೂ ಬಲವಾಗಿ ಎದುರಿಸುತ್ತಾ ಬಂದಿದೆ. ಆಗೊಮ್ಮೆ, ಈಗೊಮ್ಮೆ ಅವಕಾಶವಾದಿ ರಾಜಕೀಯ ಪ್ರತಿಪಕ್ಷಗಳ ಬೆಂಬಲವೂ ಅವುಗಳಿಗೆ ಸಿಕ್ಕಿದೆ.

“ಗೊತ್ತುಮಾಡಿ-ವಜಾಮಾಡಿ” (Hire and Fire) ಎಂಬ ಸುಲಭವಾದ “ಸುಧಾರಣೆ”ಗಳು ನಿರುದ್ಯೋಗದಂತಹ ಋಣಾತ್ಮಕ ಪರಿಣಾಮ ಉಂಟುಮಾಡಿ, ಆಳುವ ಪಕ್ಷಗಳಿಗೆ ಪ್ರತಿಕೂಲವಾಗಿ ಪರಿಣಮಿಸಿ ನಷ್ಟ ಉಂಟುಮಾಡುತ್ತವೆ. ಈ ಕಾರಣದಿಂದಲೇ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಕಾಯಿದೆಗಳ ಮೂಲಭೂತ ಸುಧಾರಣೆಯು ಆಳುವ ಪಕ್ಷಗಳಿಗೆ ಸಮಸ್ಯೆ ಉಂಟುಮಾಡುವಂತವುಗಳಾಗಿರುತ್ತದೆ.

ಆಗ, ಇದರಿಂದ ಹೊರಬರಲು ಕೇಂದ್ರ ಸರಕಾರದ ದಾರಿ ಯಾವುದಾಗಿರುತ್ತದೆ? “ಕಾರ್ಮಿಕ” ಎಂಬುದು ಕೇಂದ್ರ ಮತ್ತು ರಾಜ್ಯಗಳ ಸಮಾನ ಪಟ್ಟಿಯಲ್ಲಿ ಬರುವ ವಿಷಯವಾಗಿರುವುದರಿಂದ, ಕೇಂದ್ರ ಸರಕಾರವು ಮನಸ್ಸಿರುವ ರಾಜ್ಯಗಳಿಗೆ ಈ “ಸುಧಾರಣೆ”ಗಳನ್ನು ಅನುಷ್ಟಾನಗೊಳಿಸಲು ಒತ್ತಾಸೆ ನೀಡುತ್ತದೆ. ನಂತರ, ಮೂಲತಃ ಕೇಂದ್ರ ಸಂಪುಟದ ನಿರ್ಧಾರವೇ ಆಗಿರುವ ರಾಷ್ಟ್ರಪತಿಯವರ ಅಂಗೀಕಾರ ಅವುಗಳಿಗೆ ಸಿಗುತ್ತದೆ.

ಇದೇ ರೀತಿಯಲ್ಲಿ ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನ) ಕಾಯಿದೆ 1970ಕ್ಕೆ ಆಗಿನ ‘ಏಕೀಕೃತ’ ಆಂಧ್ರಪ್ರದೇಶವು 2003ರಲ್ಲಿ, ರಾಜಸ್ಥಾನ 2014ರಲ್ಲಿ ಮತ್ತು ಮಹಾರಾಷ್ಟ್ರ 2017ರಲ್ಲಿ ತಿದ್ದುಪಡಿ ತಂದು “ಸುಧಾರಣೆ”ಗಳನ್ನು ಜಾರಿಗೊಳಿಸಿದ್ದವು. ಅದೇ ರೀತಿಯಲ್ಲಿ, 100 ಕಾರ್ಮಿಕರು ಇರುವ ಕೈಗಾರಿಕಾ ಸ್ಥಾಪನೆಗಳಿಗೆ ಅನ್ವಯವಾಗುತ್ತಿದ್ದುದನ್ನು 300ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಿರುವ ಸ್ಥಾಪನೆಗಳಿಗೆ ಮಾತ್ರ ಅನ್ವಯವಾಗುವಂತೆ ರಾಜಸ್ಥಾನವು 2014ರಲ್ಲಿ ಅಧ್ಯಾಯ ‘V-ಬಿ’ಗೆ “ಸುಧಾರಣೆ”ಗಳನ್ನು ಜಾರಿಗೊಳಿಸಿತು. ಇದಾದ ಕೂಡಲೇ 2016ರಲ್ಲಿ ಜಾರ್ಖಂಡ್ ಸೇರಿದಂತೆ ಇತರ ಅನೇಕ ರಾಜ್ಯಗಳು ಇದನ್ನು ಅನುಸರಿಸಿದವು.

ಅಂದರೆ, ಕೇಂದ್ರ ಸರಕಾರಕ್ಕೆ ನೇರವಾಗಿ ಜಾರಿಗೊಳಿಸಲು ಸಾಮಾನ್ಯವಾಗಿ ಧೈರ್ಯವಿಲ್ಲದ “ಕಠಿಣ”ವಾದ ಕಾರ್ಮಿಕ ಕಾಯಿದೆ “ಸುಧಾರಣೆ”ಗಳನ್ನು- ಜಾರಿಗೊಳಿಸುವ ಧೈರ್ಯತೋರುವ ರಾಜ್ಯ ಸರಕಾರಗಳತ್ತ ಕೇಂದ್ರವು ತಳ್ಳುತ್ತಿದೆ. ರಾಜ್ಯ ಸರಕಾರಗಳು ಇಂತಹಾ ಕಾನೂನುಗಳನ್ನು ತರಲು ಅರ್ಹವಾಗಿರುವುದರಿಂದ ತಾನು ಏನನ್ನೂ ಮಾಡುವಂತಿಲ್ಲ ಎಂಬ ಅಸಹಾಯಕತೆಯ ಪ್ರದರ್ಶನ ಕೇಂದ್ರ ಸರಕಾರಕ್ಕೆ ಮಾಮೂಲಿಯಾಗಿದೆ.

ಇದೀಗ ಕೋವಿಡ್- 19 ಪಿಡುಗಿನ ಸಂದರ್ಭದಲ್ಲಿ ಇಂತದ್ದೇ ಕಾರ್ಯತಂತ್ರವನ್ನು ಸರಕಾರ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಏರಿಸಲು ಬಳಸಿಕೊಳ್ಳುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿ ಹಲವಾರು ಕಾನೂನು ದೋಷಗಳು, ಮಾಲಕರು ತಪ್ಪಿಸಿಕೊಳ್ಳಲು ಸಾಧ್ಯವಾಗುವ ರಂಧ್ರಗಳು ಇತ್ಯಾದಿಗಳು ಇವೆ. ಇವುಗಳಿಗೆ ಹೊರತಾಗಿ ಕಾರ್ಮಿಕರ ಆರೋಗ್ಯ, ಅವರಿಗೆ ಹಕ್ಕಿನಿಂದ ಸಿಗಬೇಕಾದ ವೇತನ- ಸೌಲಭ್ಯಗಳಲ್ಲಿ ಮೋಸ, ಉಳಿದ ಅರ್ಹ/ ಸಶಕ್ತ ಕಾರ್ಮಿಕರಿಗೆ ಉದ್ಯೋಗಾವಕಾಶ ನಷ್ಟ, ಕೈಗಾರಿಕಾ ಸಂಬಂಧಗಳ ಬಿಗಡಾಯಿಸುವಿಕೆ ಮುಂತಾದ ಹಲವಾರು ಸಮಸ್ಯೆಗಳಿದ್ದು, ಈ ಕುರಿತು ಪ್ರತ್ಯೇಕ ಲೇಖನವನ್ನೇ ಬರೆಯಬಹುದು.

ಇಷ್ಟಿದ್ದರೂ ಸರಕಾರವು ಕೊರೋನಾ ನೆಪದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆ ಗೆ ಹೆಚ್ಚಿಸಿ, ಹಿಂಬಾಗಿಲಿನ ಮೂಲಕ ಅವರಿಗೆ ಘೋರ ಮೋಸ ಮಾಡುತ್ತಿದೆ.

(ಲೇಖಕ  ಕೆ.ಆರ್. ಶ್ಯಾಮ ಸುಂದರ್ ಅವರು ಜೆಮ್ಶೆಡ್‌ಪುರದ ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಧ್ಯಾಪಕರು).


ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಡಲು ನರ್ಸ್‌ ಆಗಿ ಬದಲಾದ ಮುಂಬೈ ಮೇಯರ್‌: ಭಾರೀ ಮೆಚ್ಚುಗೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...