Homeಮುಖಪುಟ12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ

12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ

- Advertisement -
- Advertisement -

ಕೆ.ಆರ್. ಶ್ಯಾಮ ಸುಂದರ್

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಇದೇ ಎಪ್ರಿಲ್ 15ರಂದು ಕೇಂದ್ರ ಗೃಹ ಸಚಿವಾಲಯವು ಒಂದು ವಿವರವಾದ ಅಧಿಸೂಚನೆಯನ್ನು ಹೊರಡಿಸಿತು. ಅದು ದಿಗ್ಬಂಧಿತವಲ್ಲದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನರಾಂಭಿಸಬಹುದಾದ ಶರತ್ತುಗಳನ್ನು ವಿವರಿಸಿತ್ತು.

ಈ ಆದೇಶವು- “ಸಾಮಾಜಿಕ ಅಂತರ” (ದೈಹಿಕ ಅಂತರ), ಕಾರ್ಮಿಕರಿಗೆ ಖಾಸಗಿ ಸಾರಿಗೆ, ವೈದ್ಯಕೀಯ ವಿಮೆ ಮುಂತಾದ ಕಡ್ಡಾಯವಾದ “ಮಾಡು”, “ಮಾಡಬೇಡ” ನಿಯಮಗಳನ್ನು ಹೇರಿದೆ. ಈ ನಿರ್ದೇಶನಗಳ ಯಾವುದೇ ಉಲ್ಲಂಘನೆಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯಿದೆ 2005 (ಎನ್‌ಡಿಎಂಎ)ರ ಅಡಿಯಲ್ಲಿ ಸೆರೆವಾಸ ಸೇರಿದಂತೆ ಭಾರೀ ದಂಡ ವಿಧಿಸಬಹುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ಇದಕ್ಕಿಂತ ಎರಡು ದಿನಗಳ ಮೊದಲು, ಅಂದರೆ ಎಪ್ರಿಲ್ 13ರಂದು ಭಾರತದ ಕೇಂದ್ರೀಯ ಕಾರ್ಮಿಕ ಸಂಘ (ಸಿಟಿಯು)ಗಳು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದು, ಸರಕಾರವು ಪರಿಗಣಿಸುತ್ತಿರುವುದಾಗಿ ಹೇಳಲಾದ ಕಾರ್ಖಾನೆ ಕಾಯಿದೆ, 1948 (ಎಫ್‌ಎ)ಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

ಈ ತಿದ್ದುಪಡಿಯು ಕಂಪೆನಿಗಳಿಗೆ ಕಾರ್ಖಾನೆಗಳ ಕಾರ್ಮಿಕರಿಗೆ ಕೆಲಸದ ಅವಧಿಯನ್ನು ಈಗಿರುವ- ದಿನಕ್ಕೆ ಎಂಟು ಗಂಟೆ, ವಾರಕ್ಕೆ ಆರು ದಿನ (48ಗಂಟೆ)ದಿಂದ, ದಿನಕ್ಕೆ 12 ಗಂಟೆ, ವಾರಕ್ಕೆ ಆರು ದಿನ (72 ಗಂಟೆ)ಕ್ಕೆ ಹೆಚ್ಚಿಸಲು ಅವಕಾಶ ಮಾಡಿಕೊಡುತ್ತಿತ್ತು.

ಈ ನಡೆಯು ವಿವಾದಾಸ್ಪದವಾಗಿದೆ. ಏಕೆಂದರೆ, ವಾರಕ್ಕೆ 48 ಗಂಟೆಗಳ ಕೆಲಸವು ಜಾಗತಿಕವಾಗಿ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘ (ಐಎಲ್ಓ)ದಿಂದ ಒಪ್ಪಿತವಾದ ನಿಯಮವಾಗಿದೆ. ಹಾಗೆ ನೋಡುವುದಾದಲ್ಲಿ ಐಎಲ್ಓ ಅಂಗೀಕರಿಸಿದ ಮೊತ್ತಮೊದಲ ಒಪ್ಪಂದವೇ ಕೆಲಸದ ಅವಧಿ (ಕೈಗಾರಿಕೆ) ಒಪ್ಪಂದ 1919 (ನಂ.1) ಆಗಿದೆ. ಇದಕ್ಕೆ ಭಾರತವು 1921ರಲ್ಲಿಯೇ ಸಹಿ ಹಾಕಿ, ವಾರಕ್ಕೆ 48 ಗಂಟೆಗಳ ಕೆಲಸವನ್ನು ನಿಗದಿಪಡಿಸಿತ್ತು.

ಸರಕಾರವು ಇನ್ನೂ ಕಾರ್ಖಾನೆ ಕಾಯಿದೆಯನ್ನು ತಿದ್ದುಪಡಿ ಮಾಡಿಲ್ಲವಾದರೂ, ಕನಿಷ್ಟ ನಾಲ್ಕು ಸರಕಾರಗಳು ಕಳೆದ ಕೆಲವು ದಿನಗಳ ಅವಧಿಯಲ್ಲಿ ಮೇಲೆ ಹೇಳಿರುವ ರೀತಿಯಲ್ಲಿ ಕೆಲಸದ ಅವಧಿಯನ್ನು ಹೆಚ್ಚಿಸುವ ಅಧಿಸೂಚನೆಗಳನ್ನು ಹೊರಡಿಸಿವೆ. ಅವುಗಳೆಂದರೆ, ರಾಜಸ್ಥಾನ (ಎಪ್ರಿಲ್ 11), ಗುಜರಾತ್ (ಎಪ್ರಿಲ್ 17), ಪಂಜಾಬ್ (ಎಪ್ರಿಲ್ 20) ಮತ್ತು ಹಿಮಾಚಲ ಪ್ರದೇಶ (ಎಪ್ರಿಲ್ 21).

ಇದೇ ಹೊತ್ತಿಗೆ, ಭಾರತದಲ್ಲಿ ಐತಿಹಾಸಿಕವಾಗಿಯೂ ಹಾಗೂ ಇತ್ತೀಚಿನ ವರೆಗೂ ಇದು ಕಾರ್ಮಿಕ ಕಾನೂನುಗಳ “ಸುಧಾರಣೆ” (ವಾಸ್ತವವಾಗಿ ಕಾರ್ಮಿಕರ ಹಕ್ಕುಗಳಿಗೆ ಕತ್ತರಿ)ಗಳನ್ನು ಜಾರಿಗೊಳಿಸಲು ಅತ್ಯಂತ ಅನುಕೂಲಕರ ಕಾರ್ಯತಂತ್ರವಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಮಾರುಕಟ್ಟೆ “ಸುಧಾರಣೆ”ಗಳನ್ನು ಕಾರ್ಮಿಕ ಚಳವಳಿಯು ಸಾಕಷ್ಟು ಒಗ್ಗಟ್ಟಿನಿಂದ ಕೋಟ್ಯಂತರ ಕಾರ್ಮಿಕರ ಬೃಹತ್ ಮುಷ್ಕರಗಳ ಮೂಲಕ ಮತ್ತು ತ್ರಿಪಕ್ಷೀಯ ವೇದಿಕೆಗಳಲ್ಲೂ ಬಲವಾಗಿ ಎದುರಿಸುತ್ತಾ ಬಂದಿದೆ. ಆಗೊಮ್ಮೆ, ಈಗೊಮ್ಮೆ ಅವಕಾಶವಾದಿ ರಾಜಕೀಯ ಪ್ರತಿಪಕ್ಷಗಳ ಬೆಂಬಲವೂ ಅವುಗಳಿಗೆ ಸಿಕ್ಕಿದೆ.

“ಗೊತ್ತುಮಾಡಿ-ವಜಾಮಾಡಿ” (Hire and Fire) ಎಂಬ ಸುಲಭವಾದ “ಸುಧಾರಣೆ”ಗಳು ನಿರುದ್ಯೋಗದಂತಹ ಋಣಾತ್ಮಕ ಪರಿಣಾಮ ಉಂಟುಮಾಡಿ, ಆಳುವ ಪಕ್ಷಗಳಿಗೆ ಪ್ರತಿಕೂಲವಾಗಿ ಪರಿಣಮಿಸಿ ನಷ್ಟ ಉಂಟುಮಾಡುತ್ತವೆ. ಈ ಕಾರಣದಿಂದಲೇ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಕಾಯಿದೆಗಳ ಮೂಲಭೂತ ಸುಧಾರಣೆಯು ಆಳುವ ಪಕ್ಷಗಳಿಗೆ ಸಮಸ್ಯೆ ಉಂಟುಮಾಡುವಂತವುಗಳಾಗಿರುತ್ತದೆ.

ಆಗ, ಇದರಿಂದ ಹೊರಬರಲು ಕೇಂದ್ರ ಸರಕಾರದ ದಾರಿ ಯಾವುದಾಗಿರುತ್ತದೆ? “ಕಾರ್ಮಿಕ” ಎಂಬುದು ಕೇಂದ್ರ ಮತ್ತು ರಾಜ್ಯಗಳ ಸಮಾನ ಪಟ್ಟಿಯಲ್ಲಿ ಬರುವ ವಿಷಯವಾಗಿರುವುದರಿಂದ, ಕೇಂದ್ರ ಸರಕಾರವು ಮನಸ್ಸಿರುವ ರಾಜ್ಯಗಳಿಗೆ ಈ “ಸುಧಾರಣೆ”ಗಳನ್ನು ಅನುಷ್ಟಾನಗೊಳಿಸಲು ಒತ್ತಾಸೆ ನೀಡುತ್ತದೆ. ನಂತರ, ಮೂಲತಃ ಕೇಂದ್ರ ಸಂಪುಟದ ನಿರ್ಧಾರವೇ ಆಗಿರುವ ರಾಷ್ಟ್ರಪತಿಯವರ ಅಂಗೀಕಾರ ಅವುಗಳಿಗೆ ಸಿಗುತ್ತದೆ.

ಇದೇ ರೀತಿಯಲ್ಲಿ ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನ) ಕಾಯಿದೆ 1970ಕ್ಕೆ ಆಗಿನ ‘ಏಕೀಕೃತ’ ಆಂಧ್ರಪ್ರದೇಶವು 2003ರಲ್ಲಿ, ರಾಜಸ್ಥಾನ 2014ರಲ್ಲಿ ಮತ್ತು ಮಹಾರಾಷ್ಟ್ರ 2017ರಲ್ಲಿ ತಿದ್ದುಪಡಿ ತಂದು “ಸುಧಾರಣೆ”ಗಳನ್ನು ಜಾರಿಗೊಳಿಸಿದ್ದವು. ಅದೇ ರೀತಿಯಲ್ಲಿ, 100 ಕಾರ್ಮಿಕರು ಇರುವ ಕೈಗಾರಿಕಾ ಸ್ಥಾಪನೆಗಳಿಗೆ ಅನ್ವಯವಾಗುತ್ತಿದ್ದುದನ್ನು 300ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಿರುವ ಸ್ಥಾಪನೆಗಳಿಗೆ ಮಾತ್ರ ಅನ್ವಯವಾಗುವಂತೆ ರಾಜಸ್ಥಾನವು 2014ರಲ್ಲಿ ಅಧ್ಯಾಯ ‘V-ಬಿ’ಗೆ “ಸುಧಾರಣೆ”ಗಳನ್ನು ಜಾರಿಗೊಳಿಸಿತು. ಇದಾದ ಕೂಡಲೇ 2016ರಲ್ಲಿ ಜಾರ್ಖಂಡ್ ಸೇರಿದಂತೆ ಇತರ ಅನೇಕ ರಾಜ್ಯಗಳು ಇದನ್ನು ಅನುಸರಿಸಿದವು.

ಅಂದರೆ, ಕೇಂದ್ರ ಸರಕಾರಕ್ಕೆ ನೇರವಾಗಿ ಜಾರಿಗೊಳಿಸಲು ಸಾಮಾನ್ಯವಾಗಿ ಧೈರ್ಯವಿಲ್ಲದ “ಕಠಿಣ”ವಾದ ಕಾರ್ಮಿಕ ಕಾಯಿದೆ “ಸುಧಾರಣೆ”ಗಳನ್ನು- ಜಾರಿಗೊಳಿಸುವ ಧೈರ್ಯತೋರುವ ರಾಜ್ಯ ಸರಕಾರಗಳತ್ತ ಕೇಂದ್ರವು ತಳ್ಳುತ್ತಿದೆ. ರಾಜ್ಯ ಸರಕಾರಗಳು ಇಂತಹಾ ಕಾನೂನುಗಳನ್ನು ತರಲು ಅರ್ಹವಾಗಿರುವುದರಿಂದ ತಾನು ಏನನ್ನೂ ಮಾಡುವಂತಿಲ್ಲ ಎಂಬ ಅಸಹಾಯಕತೆಯ ಪ್ರದರ್ಶನ ಕೇಂದ್ರ ಸರಕಾರಕ್ಕೆ ಮಾಮೂಲಿಯಾಗಿದೆ.

ಇದೀಗ ಕೋವಿಡ್- 19 ಪಿಡುಗಿನ ಸಂದರ್ಭದಲ್ಲಿ ಇಂತದ್ದೇ ಕಾರ್ಯತಂತ್ರವನ್ನು ಸರಕಾರ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಏರಿಸಲು ಬಳಸಿಕೊಳ್ಳುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿ ಹಲವಾರು ಕಾನೂನು ದೋಷಗಳು, ಮಾಲಕರು ತಪ್ಪಿಸಿಕೊಳ್ಳಲು ಸಾಧ್ಯವಾಗುವ ರಂಧ್ರಗಳು ಇತ್ಯಾದಿಗಳು ಇವೆ. ಇವುಗಳಿಗೆ ಹೊರತಾಗಿ ಕಾರ್ಮಿಕರ ಆರೋಗ್ಯ, ಅವರಿಗೆ ಹಕ್ಕಿನಿಂದ ಸಿಗಬೇಕಾದ ವೇತನ- ಸೌಲಭ್ಯಗಳಲ್ಲಿ ಮೋಸ, ಉಳಿದ ಅರ್ಹ/ ಸಶಕ್ತ ಕಾರ್ಮಿಕರಿಗೆ ಉದ್ಯೋಗಾವಕಾಶ ನಷ್ಟ, ಕೈಗಾರಿಕಾ ಸಂಬಂಧಗಳ ಬಿಗಡಾಯಿಸುವಿಕೆ ಮುಂತಾದ ಹಲವಾರು ಸಮಸ್ಯೆಗಳಿದ್ದು, ಈ ಕುರಿತು ಪ್ರತ್ಯೇಕ ಲೇಖನವನ್ನೇ ಬರೆಯಬಹುದು.

ಇಷ್ಟಿದ್ದರೂ ಸರಕಾರವು ಕೊರೋನಾ ನೆಪದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆ ಗೆ ಹೆಚ್ಚಿಸಿ, ಹಿಂಬಾಗಿಲಿನ ಮೂಲಕ ಅವರಿಗೆ ಘೋರ ಮೋಸ ಮಾಡುತ್ತಿದೆ.

(ಲೇಖಕ  ಕೆ.ಆರ್. ಶ್ಯಾಮ ಸುಂದರ್ ಅವರು ಜೆಮ್ಶೆಡ್‌ಪುರದ ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಧ್ಯಾಪಕರು).


ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಡಲು ನರ್ಸ್‌ ಆಗಿ ಬದಲಾದ ಮುಂಬೈ ಮೇಯರ್‌: ಭಾರೀ ಮೆಚ್ಚುಗೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...