Homeಮುಖಪುಟಟ್ರಂಪ್‌ ಘೋಷಿಸಿದಂತೆ ಅಮೇರಿಕಾದಿಂದ ಭಾರತಕ್ಕೆ ಬಂದ ವೆಂಟಿಲೇಟರ್‌ಗಳೆಷ್ಟು ಗೊತ್ತೆ?

ಟ್ರಂಪ್‌ ಘೋಷಿಸಿದಂತೆ ಅಮೇರಿಕಾದಿಂದ ಭಾರತಕ್ಕೆ ಬಂದ ವೆಂಟಿಲೇಟರ್‌ಗಳೆಷ್ಟು ಗೊತ್ತೆ?

ಹಾಸ್ಯಾಸ್ಪದವೆಂದರೆ ಮೇ 12 ರಂದು ’ಆತ್ಮನಿರ್ಭರ ಭಾರತ’ ಎಂದು ಘೋಷಿಸಿ, ಸ್ವಾವಲಂಬಿಗಳಾಗುವ ಬಗ್ಗೆ ಪಾಠ ಹೇಳಿದ ಪ್ರಧಾನಿ ಮೇ 16 ರಂದು ಅಮೆರಿಕ ದಾನ ನೀಡಿದ್ದಕ್ಕಾಗಿ ಧನ್ಯವಾದ ಹೇಳುತ್ತಾರೆ. ಆದರೆ ದೇಶದ ಹೆದ್ದಾರಿಗಳಲ್ಲಿ ನಡೆಯುತ್ತಿರುವ ದೇಶವನ್ನು ಕಟ್ಟಿ ಬೆಳೆಸಿದ ಲಕ್ಷಾಂತರ ಜನರ ಬದುಕು ಬರ್ಭರವಾಗಿರುವುದರ ಬಗ್ಗೆ ನಮ್ಮ ಪ್ರಧಾನಿ ಇನ್ನೂ ಒಂದು ಮಾತೂ ಆಡಿಲ್ಲ.

- Advertisement -
- Advertisement -

ಮೇ 16 ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದಲ್ಲಿ ನಮ್ಮ ಸ್ನೇಹಿತರಿಗೆ ಅಮೇರಿಕಾದಿಂದ ವೆಂಟಿಲೇಟರುಗಳನ್ನು ದಾನ ಮಾಡುತ್ತೇವೆ ಎಂದು ತಮ್ಮ ಟ್ವಿಟ್ಟರ್‌ ಅಕೌಂಟಿನಿಂದ ಸಂದೇಶವನ್ನು ಹಾಕಿದ್ದರು. ಅಷ್ಟಕ್ಕೆ ದೇಶದಲ್ಲಿ ಭಾರಿ ಸುದ್ದಿಯಾಯಿತು.

ವಾಸ್ತವದಲ್ಲಿ ಅಮೆರಿಕಾ ಹೇಳಿದ್ದು ಕೇವಲ 200 ವೆಂಟಿಲೇಟರುಗಳನ್ನು ಕೊಡುವುದಷ್ಟೇ ಆಗಿತ್ತು. 135 ಕೋಟಿಗಿಂತಲೂ ಜಾಸ್ತಿ ಜನಸಂಖ್ಯೆಯಿರುವ, 60,000 ಕ್ಕೂ ಹೆಚ್ಚು ಕೊರೊನಾ ರೋಗಿಗಳಿರುವ ಭಾರತಕ್ಕೆ 200 ವೆಂಟಿಲೇಟರುಗಳು ದೊಡ್ಡ ವಿಷಯವೇನೂ ಅಲ್ಲ, ಆದರೆ ಪ್ರಸ್ತುತ ಬಿಕ್ಕಟ್ಟಿನಲ್ಲಿ ಒಂದು ಹುಲ್ಲು ಕಡ್ಡಿ ಕೂಡಾ ದೊಡ್ಡ ವಿಷಯವೇ ಆಗಿರುತ್ತದೆ ಅಂದುಕೊಳ್ಳೋಣ.

ಆದರೆ ಇಲ್ಲಿ ವೆಂಟಿಲೇಟರ್‌ಗಿಂತ ಹೆಚ್ಚಾಗಿ ಅಮೇರಿಕಾದಂತಹ ದೊಡ್ಡಣ್ಣ ಭಾರತವನ್ನು ’ಫ್ರೆಂಡ್’ ಎಂದು ಕರೆದದ್ದನ್ನು ಮಹಾವಿಷಯವಾಗಿ ನೋಡಲಾಯಿತು, ಅಂದರೆ ಆರೋಗ್ಯಕ್ಕಿಂತ ಹೆಚ್ಚು ಇದನ್ನು ರಾಜಕೀಯವಾಗಿಯೆ ಹೆಚ್ಚು ಪ್ರಚಾರ ಪಡೆಯಲು ಬಳಸಲಾಯಿತು. ನಿಜಕ್ಕೂ ಹೇಳಬೇಕೆದಂರೆ ಅಮೇರಿಕಾದಂತಹ ಬಂಡವಾಳಶಾಹಿ ದೇಶ ಯಾವ ಕೊಡುಗೆಯನ್ನೂ ಕೂಡಾ ಪುಕ್ಕಟೆಯಾಗಿ ನೀಡಲ್ಲ, ಅದರ ಪ್ರತಿಯೊಂದೂ ನಡೆಯಲ್ಲೂ ವ್ಯಾಪಾರ ಹಾಗೂ ಲಾಭದ ಉದ್ದೇಶ ಇದ್ದೇ ಇರುತ್ತದೆ.

ನವೆಂಬರ್‌ನಲ್ಲಿ ಅಮೇರಿಕಾದ ಅಧ್ಯಕ್ಷೀಯ ಚುಣಾವಣೆಯಿದೆ ಹಾಗೂ ಟ್ರಂಪ್ ಭಾರತೀಯ ಮೂಲದ ಮತದಾರರನ್ನು ಸೆಳೆಯಲು ಈ ಹಿಂದಿನಿಂಲೂ ಬಹಳ ಕಸರತ್ತು ನಡೆಸುತ್ತಿರುವುದು ಎಲ್ಲರಿಗೂ ತಿಳಿಯದ್ದೇನಲ್ಲ. ಟ್ರಂಪ್ ಘೋಷಿಸಿದ ಈ ದಾನದಲ್ಲೂ ಏನು ಉದ್ಧೇಶವಿದೆಯೆಂದು ನಾವು ಹುಡುಕಲೇ ಬೇಕಾಗುತ್ತದೆ.

ಟ್ರಂಪ್ ದಾನ ಘೋಷಿಸಿದ ಗಂಟೆಗಳ ಅಂತರದಲ್ಲಿ ನಮ್ಮ ದೇಶದ ಪ್ರಧಾನಿಯೂ ಅವರಿಗೆ ಧನ್ಯವಾದ ಅರ್ಪಿಸಿ ಪುನೀತರಾದರು. ಅಮೇರಿಕಾ ಭಾರತ ಸ್ನೇಹ ಇನ್ನೂ ಗಟ್ಟಿಯಾಗಲಿ ಎಂದು ಹಾರೈಸಿದರು. ಇವೆಲ್ಲವೂ ಒಳ್ಳೆಯದೇ, ಆದರೆ ದೇಶದ ವಲಸಿಗರ ನೋವು, ಪಾದಗಳ ರಕ್ತ, ಕಣ್ಣೀರು, ಹತಾಶೆ ನಮ್ಮ ಪ್ರಧಾನಿಯ ಟ್ವಿಟ್ಟರ್ ಖಾತೆಗೆ, ಅವರ ಕಣ್ಣು-ಕಿವಿಗೆ, ಅವರ ಹೃದಯವನ್ನು ಕಲಕಿಲ್ಲ ಹಾಗೂ ತಲುಪಿಲ್ಲ ಎಂದರೆ… ಏನು ಹೇಳುವುದು?

ಪ್ರಧಾನಿಯಾದಿಯಾಗಿ ಮಾಧ್ಯಮಗಳ ಸಹಿತ ಇಷ್ಟೆಲ್ಲ ಪ್ರಚಾರ ಪಡೆದ ಈ ವೆಂಟಿಲೇಟರ್ ಭಾರತವನ್ನು ಮುಂದಿನವಾರ ತಲುಪಬಹುದು. ಆದರೆ ಅಮೇರಿಕಾ ಘೋಷಿಸಿದ 200 ವೆಂಟಿಲೇಟರುಗಳಲ್ಲಿ ಸದ್ಯಕ್ಕೆ ಭಾರತವನ್ನು ತಲುಪಿರುವುದು ಕೇವಲ 50 ಮಾತ್ರ!. ಬಾಕಿ ವೆಂಟಿಲೇಟರುಗಳು ಯಾವತ್ತು ಬರಲಿವೆ ಎಂದು ಅಮೇರಿಕವೆ ಹೇಳಲಿದೆ.

ಸಧ್ಯಕ್ಕೆ ಭಾರತದಲ್ಲಿ ಇರುವ ವೆಂಟಿಲೇಟರುಗಳ ಸಂಖ್ಯೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಸೇರಿ 48 ಸಾವಿರ. ಈ ಬರಹ ಬರೆಯುತ್ತಿರುವ ಹೊತ್ತಿಗೆ ಭಾರತದಲ್ಲಿ 1 ಲಕ್ಷದ ಆರು ಸಾವಿಕ್ಕಿಂತಲೂ ಹೆಚ್ಚು ಕೊರೊನಾ ಪ್ರಕರಣಗಳು ಹಾಗೂ 3300 ಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿವೆ. ಕೊರೊನಾ ತಡೆಯಲು ಯಾವುದೇ ಮಾಹಿತಿಯಿಲ್ಲದೆ ಏಕಾಏಕಿ ಲಾಕ್‌ಡೌನ್ ಮಾಡಿದ ಪರಿಣಾಮ ದೇಶದಾದ್ಯಂತ ಹೆದ್ದಾರಿಗಳಲ್ಲೇ ನೂರಾರು ಜೀವಗಳು ಅಸುನೀಗಿವೆ.

ಹಾಸ್ಯಾಸ್ಪದವೆಂದರೆ ಮೇ 12 ರಂದು ’ಆತ್ಮನಿರ್ಭರ ಭಾರತ’ ಎಂದು ಘೋಷಿಸಿ, ಸ್ವಾವಲಂಬಿಗಳಾಗುವ ಬಗ್ಗೆ ಪಾಠ ಹೇಳಿದ ಪ್ರಧಾನಿ ಮೇ 16 ರಂದು ಅಮೆರಿಕ ದಾನ ನೀಡಿದ್ದಕ್ಕಾಗಿ ಧನ್ಯವಾದ ಹೇಳುತ್ತಾರೆ. ಆದರೆ ದೇಶದ ಹೆದ್ದಾರಿಗಳಲ್ಲಿ ನಡೆಯುತ್ತಿರುವ ದೇಶವನ್ನು ಕಟ್ಟಿ ಬೆಳೆಸಿದ ಲಕ್ಷಾಂತರ ಜನರ ಬದುಕು ಬರ್ಭರವಾಗಿರುವುದರ ಬಗ್ಗೆ ನಮ್ಮ ಪ್ರಧಾನಿ ಇನ್ನೂ ಒಂದು ಮಾತೂ ಆಡಿಲ್ಲ.

ಇವೆಲ್ಲವನ್ನೂ ಬಿಡಿ, ದೊಡ್ಡಣ್ಣ ಎಣಿಸಿ ಕೊಂಡಿರುವ ಅಮೆರಿಕಾ ನಮಗೆ 200 ವೆಂಟಿಲೇಟರ್‌ ದಾನ ನೀಡುತ್ತೇವೆ ಎಂದಿದೆ. ಆದರೆ ಅಮೆರಿಕಾದಲ್ಲಿ ಇದುವರೆಗೂ 15 ಲಕ್ಷದ ಹದಿನೈದು ಸಾವಿರ ಕೊರೊನಾ ಸೋಂಕಿತರು ಇದ್ದು, 92 ಸಾವಿರಕ್ಕಿಂತಲೂ ಹೆಚ್ಚು ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾಸೋಂಕಿತರಿರುವ ದೇಶವದು. ಅಲ್ಲಿನ ವೈದ್ಯರು ಅಮೆರಿಕಾದಲ್ಲಿ ಸಾಕಷ್ಟು ವೆಂಟಿಲೇಟರ್ ಇಲ್ಲವೆಂದು ಹೇಳುತ್ತಿದ್ದಾರೆ. ವರದಿಯೊಂದರ ಪ್ರಕಾರ ಅಮೇರಿಕಾದಲ್ಲಿ ಸಧ್ಯಕ್ಕೆ 9 ಲಕ್ಷ ಜನರಿಗೆ ವೆಂಟಿಲೇಟರುಗಳ ಅಗತ್ಯವಿದೆ. ಆದರೆ ಅಲ್ಲಿರುವ ವೆಂಟಿಲೇಟರುಗಳು 2 ಲಕ್ಷ ಮಾತ್ರ.

ಒಟ್ಟಿನಲ್ಲಿ ತನ್ನ ದೇಶದ ಬಗ್ಗೆ ಯಾವುದೆ ಕಾಳಜಿಯಿಲ್ಲದ ನಾಯಕರಿಬ್ಬರು ಕೊರೊನಾದಂತಹ ಜಾಗತಿಕ ಬಿಕ್ಕಟ್ಟಿನಲ್ಲೂ ಪ್ರಚಾರದಲ್ಲಿರಲು ಹಾಗೂ ಪ್ರಚಾರ ಪಡೆಯಲು ಹವಣಿಸುತ್ತಲೇ ಇದ್ದಾರೆ. ಅದಕ್ಕಾಗಿ ಕೆಲವು ತುತ್ತೂರಿ ಊದುವ ಮಾಧ್ಯಮಗಳು ಕಾಯುತ್ತಲೇ ಇದೆ.


ಓದಿ: ಅತ್ಮಕ್ಕೆ ಬರ ಬಿದ್ದ ಆಡಳಿತದಲ್ಲಿ ಕೊರೊನಾ ಜೊತೆ ಬದುಕುವುದಾ ಕಲಿಯಬೇಕು


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...