Homeಅಂಕಣಗಳು2019ರ ಚುನಾವಣೆ: ಜವಾನ್ ಔರ್ ಕಿಸಾನ್

2019ರ ಚುನಾವಣೆ: ಜವಾನ್ ಔರ್ ಕಿಸಾನ್

- Advertisement -
- Advertisement -

2014ರ ಲೋಕಸಭಾ ಚುನಾವಣೆ ನಡೆದಾಗ ಬಿಜೆಪಿಯು ರೈತರ ಆದಾಯ ದ್ವಿಗುಣ ಮಾಡುವುದಾಗಿಯೂ, ರೈತರ ಎಲ್ಲಾ ಬೆಳೆಗಳಿಗೂ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಲೆ ಸಿಗುವಂತೆ ಮಾಡುವುದಾಗಿಯೂ ಹೇಳಿತ್ತು. ಆದರೆ, ಆ ಚುನಾವಣೆಯು ಗ್ರಾಮೀಣ ಭಾಗದ ಇಶ್ಯೂಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯಲಿಲ್ಲ. ಯುಪಿಎ ಭ್ರಷ್ಟಾಚಾರ, 10 ವರ್ಷಗಳ ಆಡಳಿತ ವಿರೋಧಿ ಅಲೆ, ಕಪ್ಪುಹಣ, ಹೊಸ ಪರ್ಯಾಯ, ಮೋದಿ ಮಾದರಿ ಮತ್ತು ಗುಜರಾತ್ ಮಾದರಿ, ಅಭಿವೃದ್ಧಿ, ಕೋಮು ಧ್ರುವೀಕರಣ ಹೀಗೆ ಹತ್ತು ಹಲವು ಅಂಶಗಳನ್ನೊಳಗೊಂಡ ಒಂದು ಪ್ಯಾಕೇಜ್‍ಅನ್ನು ಬಿಜೆಪಿಯು ಮುಂದಿಟ್ಟಿತ್ತು. ಮಾಧ್ಯಮಗಳು ಮತ್ತು ಹಣದ ಬಲದೊಂದಿಗೆ ಅತ್ಯಂತ ಚಾಣಾಕ್ಷತೆ ಮತ್ತು ಕಠಿಣ ಶ್ರಮದ ಮೂಲಕ ಅದನ್ನು ಜನರ ಮುಂದಿಟ್ಟು ಸೃಷ್ಟಿಸಿದ ಅಲೆಯು, ಬಿಜೆಪಿಗೆ ಸ್ವಂತ ಬಲದ ಮೇಲೆ ಅಧಿಕಾರ ಪಡೆದುಕೊಳ್ಳುವಷ್ಟು ಜೋರಾಗಿ ಬೀಸಿತ್ತು. ಆದರೆ, 2019ರ ಚುನಾವಣೆಯು ಹಾಗಿರುವುದಿಲ್ಲವೆಂದು ಭಾವಿಸಲು ಕಾರಣಗಳಿವೆ.
2004ರಲ್ಲಿ ವಾಜಪೇಯಿಯವರ ನೇತೃತ್ವದಲ್ಲಿ ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಘೋಷಣೆಯಡಿ ಚುನಾವಣೆಗೆ ಹೊರಟಾಗ, ಜನರಲ್ಲಿ ‘ಫೀಲ್ ಗುಡ್ ಫ್ಯಾಕ್ಟರ್ (ಎಲ್ಲಾ ಚೆನ್ನಾಗಿದೆ ಎಂಬ ಭಾವನೆ)’ ಇದೆ ಎಂಬ ತಪ್ಪು ಲೆಕ್ಕಾಚಾರ ಮಾಡಲಾಗಿತ್ತು. ಗ್ರಾಮೀಣ ಭಾರತವು ಆಗ ತತ್ತರಿಸಿತ್ತು. ಹೀಗಾಗಿ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ-1 ಅಧಿಕಾರಕ್ಕೆ ಬಂದಿತ್ತು. 2009ಕ್ಕೆ ಮತ್ತೆ ಚುನಾವಣೆಗೆ ಹೊರಟಾಗ ಕಾಂಗ್ರೆಸ್ ಮತ್ತು ಯುಪಿಎಗೆ ಕಡಿಮೆ ಸೀಟು ಬರುತ್ತದೆಂದು ಭಾವಿಸಲಾಗಿತ್ತು. ಆರ್‍ಜೆಡಿಯಂತಹ ಕೆಲವು ಪಕ್ಷಗಳು ಚುನಾವಣೆಗೆ ಸ್ವಲ್ಪ ಮುಂಚೆ ಯುಪಿಎ ತೊರೆದಿದ್ದವು. ಆದರೆ, ಚುನಾವಣೆಗೆ ಮುಂಚೆ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಅತೀ ದೊಡ್ಡ ರೈತರ ಸಾಲಮನ್ನಾ ಮಾಡಿತು. ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿತಲ್ಲದೇ, ಹೆಚ್ಚು ಕಷ್ಟವಿಲ್ಲದೇ ಯುಪಿಎ-2ರ ಮುಖಾಂತರ ಮತ್ತೆ ಅಧಿಕಾರ ಹಿಡಿಯಿತು.
ಹಾಗಾದರೆ 2014ರಲ್ಲಿ ಗ್ರಾಮೀಣ ಭಾರತವು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪಾತ್ರ ಕಳೆದುಕೊಂಡಿತೇ? ಹಾಗೆ ಹೇಳಲು ಯಾವ ಕಾರಣವೂ ಇಲ್ಲ. ಈ ಮಧ್ಯೆ ಹೆಚ್ಚಾದ ಕೃಷಿ ಬಿಕ್ಕಟ್ಟಿಗೆ ಯುಪಿಎ ಸಹಾ ಯಾವ ವಿಶೇಷ ಕ್ರಮವನ್ನೂ ತೆಗೆದುಕೊಂಡಿರಲಿಲ್ಲ. ನರೇಗಾದಂತಹ ಕ್ರಮಗಳು ಈ ಬಿಕ್ಕಟ್ಟನ್ನು ಮರೆಮಾಚುವಷ್ಟು ಸಮರ್ಥವೂ ಆಗಿರಲಿಲ್ಲ; ಇದ್ದಷ್ಟು ಪ್ರಮಾಣದಲ್ಲಿ ಜಾರಿಯೂ ಆಗಲಿಲ್ಲ. ಇದರಾಚೆಗೂ ಯುಪಿಎ ಸರ್ಕಾರದ ತಂದಿದ್ದ ಕೆಲವು ಕ್ರಮಗಳ ಜನಪರತೆಯನ್ನು ಜನರ ಮುಂದಿಡುವಷ್ಟು ಸಾಮಥ್ರ್ಯ ಕಾಂಗ್ರೆಸ್ಸಿನ ಪ್ರಚಾರ ಯಂತ್ರಾಂಗಕ್ಕೆ ಅಂದೂ ಇರಲಿಲ್ಲ; ಇಂದೂ ಇಲ್ಲ. ಯುಪಿಎ ತಂದಿದ್ದ ಭೂಸ್ವಾಧೀನ ಕಾಯ್ದೆ ಎಷ್ಟು ಜನಪರ ಎಂದು ಗೊತ್ತಾದದ್ದು, ಮೋದಿ ಸರ್ಕಾರ ಬಂದ ಮೇಲೆ ಅದನ್ನು ತಿದ್ದಲು ಯತ್ನಿಸಿದಾಗಲೇ!
2016ರ ಡಿಸೆಂಬರ್‍ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್‍ನ ಗ್ರಾಮೀಣ ಭಾಗ ಮತ್ತು ನಗರ ಭಾಗಗಳು ಭಿನ್ನ ರೀತಿಯಲ್ಲಿ ಮತ ಚಲಾಯಿಸಿದವು ಎಂಬುದನ್ನು ಎಲ್ಲರೂ ಗುರುತಿಸಿದ್ದಾರೆ. ಇದಕ್ಕೆ ಕಾರಣವಿಲ್ಲದಿಲ್ಲ. ಯಾವ ಕಛ್ ಮತ್ತು ಸೌರಾಷ್ಟ್ರದ ಹೆಸರೇಳಿ ನರ್ಮದಾ ನದಿಗೆ ಒಂದಾದ ಮೇಲೆ ಒಂದರಂತೆ ಅಣೆಕಟ್ಟುಗಳನ್ನು ಕಟ್ಟಲಾಯಿತೋ, ಅಲ್ಲಿಗೆ ನೀರೂ ಹೋಗಿರಲಿಲ್ಲ; ಅವರ ಬವಣೆಯೂ ತೀರಿರಲಿಲ್ಲ. ಇಂತಹ ಹಲವು ಕಾರಣಗಳಿಂದ ಅಲ್ಲಿನ ಗ್ರಾಮೀಣ ಭಾಗ ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಿತು.
ಮುಂದಿನ ಚುನಾವಣೆಗಳಿರುವುದು ಛತ್ತೀಸ್‍ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ. ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಮಹಾರಾಷ್ಟ್ರಗಳು ಸೇರಿದಂತೆ ಇವಿಷ್ಟೂ ರಾಜ್ಯಗಳಲ್ಲಿ ಪಡೆದುಕೊಂಡ ಸೀಟುಗಳೇ ಮೋದಿಯವರನ್ನು ಪ್ರಧಾನಿಯಾಗಿಸಿದ್ದು. ಅಲ್ಲಿ ಬಿಜೆಪಿಯು ಎಷ್ಟು ಸೀಟುಗಳನ್ನು ಪಡೆದುಕೊಂಡಿತ್ತು ಎಂದು ನೋಡುವ ಮುನ್ನ ಉತ್ತರ ಪ್ರದೇಶದ ಈಚಿನ ಒಂದು ವಿದ್ಯಮಾನವನ್ನು ನೋಡೋಣ.
ಕೈರಾನಾ ಎಂಬ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಬಿಜೆಪಿ ಗೆದ್ದಿತ್ತು. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಇತರ ಮತಗಳ ಧ್ರುವೀಕರಣ ಬಿಜೆಪಿಗೆ ಸಾಧ್ಯವಾಗಿದ್ದು ಮುಜಫ್ಫರ್‍ನಗರದ ಕೋಮುಗಲಭೆಯಿಂದ. ಈ ಕ್ಷೇತ್ರದ ಬಿಜೆಪಿ ಸಂಸದ ತೀರಿಕೊಂಡಿದ್ದರಿಂದ ಅಲ್ಲಿ ಉಪಚುನಾವಣೆ ನಡೆಯಿತು. ಮತ್ತೆ ಕೋಮು ಧ್ರುವೀಕರಣ ನಡೆಸಲು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಕಾಲದಿಂದಲೂ ಇದ್ದ ಜಿನ್ನಾ ಅವರ ಭಾವಚಿತ್ರದ ವಿಚಾರವನ್ನು ಬಿಜೆಪಿಯು ಬಳಸಿಕೊಂಡಿತು. ಮೇಲಾಗಿ ಈ ಸಾರಿ ಬಿಜೆಪಿಗೆದುರಾಗಿ ನಿಂತ ಮುಸ್ಲಿಂ ಮಹಿಳೆಯ ವಿರುದ್ಧವೂ ಸಾಕಷ್ಟು ಅಪಪ್ರಚಾರ ನಡೆಸಲಾಯಿತು. ಆಕೆ ಐಎಸ್‍ಐ ಏಜೆಂಟ್ ಇತ್ಯಾದಿ ಪೋಸ್ಟ್‍ಗಳನ್ನು ಯಥೇಚ್ಛವಾಗಿ ಹಾಕಲಾಯಿತು.
ಬಿಜೆಪಿಗೆದುರಾಗಿ ನಿಂತಿದ್ದು ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ತಬಸ್ಸುಮ್ ಹಸನ್. ಆಕೆ ವಾಸ್ತವದಲ್ಲಿ ಸಮಾಜವಾದಿ ಪಕ್ಷದ ಕುಟುಂಬದವರು. ಆಕೆಯ ಪತಿ ಎಸ್‍ಪಿಯಿಂದ ಎಂ.ಎಲ್.ಎ ಮತ್ತು ಎಂ.ಪಿ ಆಗಿದ್ದವರು. ಈ ಮುಸ್ಲಿಂ ಅಭ್ಯರ್ಥಿ ನಿಂತಿದ್ದು ಜಾಟ್ ಸಮುದಾಯದ ಪಕ್ಷವೆಂದು ಹೆಸರಾದ ಲೋಕದಳದಿಂದ. ಈಕೆಯ ಪತಿ ಇಲ್ಲಿನ ಕಬ್ಬು (ಹಿಂದಿಯಲ್ಲಿ ಗನ್ನಾ) ಬೆಳೆಗಾರರ ಪರವಾಗಿ ಕೆಲಸ ಮಾಡಿದ್ದವರು. ಇವೆಲ್ಲವೂ ಸೇರಿ ಕೈರಾನಾದಲ್ಲಿ ಬಿಜೆಪಿ ಸೋತಿತು.
ಅಂದರೆ, ಕಟು ಕೋಮು ಧ್ರುವೀಕರಣವನ್ನು ದಾಟಿ ಕೃಷಿ ಬಿಕ್ಕಟ್ಟಿನ ಸಮಸ್ಯೆಯ ಪರಿಹಾರ ಗ್ರಾಮೀಣ ಭಾರತಕ್ಕೆ ಮುಖ್ಯವಾಗಿದೆ. ಈ ಸದ್ಯ ಕೃಷಿ ಬಿಕ್ಕಟ್ಟು ಬಾಧಿಸುತ್ತಿರುವ, ರೈತ ಹೋರಾಟವೂ ಗರಿಗೆದರಿರುವ ಮತ್ತು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆದ್ದಿತ್ತು ಎಂಬುದನ್ನು ನೋಡೋಣ. ಮಧ್ಯಪ್ರದೇಶದ 29 ಸೀಟುಗಳಲ್ಲಿ 27, ಛತ್ತೀಸ್‍ಗಡದ 11 ಸೀಟುಗಳಲ್ಲಿ 10, ರಾಜಸ್ಥಾನದ 25 ಸೀಟುಗಳಲ್ಲಿ 25, ಮಹಾರಾಷ್ಟ್ರದ 42 ಸ್ಥಾನಗಳಲ್ಲಿ ಬಿಜೆಪಿ 18, ಶಿವಸೇನಾ 16 ಮತ್ತು ಅವರ ಇನ್ನೊಬ್ಬ ಎನ್‍ಡಿಎ ಸಂಬಂಧಿ 1 ಸೀಟು. ಈ ಒಂದು ಸೀಟು ಸ್ವಾಭಿಮಾನಿ ಷೇತ್ಕರಿ ಸಂಘಟನೆ (ರೈತ ಸಂಘಟನೆ)ಯ ರಾಜು ಶೆಟ್ಟಿಯವರದ್ದಾಗಿತ್ತು. ರಾಜು ಶೆಟ್ಟಿಯವರು ಈಗ ಎನ್‍ಡಿಎಯಿಂದ ಹೊರಬಂದಿದ್ದಾರೆ ಮತ್ತು ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿಯ ಭಾಗವಾಗಿದ್ದಾರೆ.
ಅಂದರೆ, ಇದು 2019ರಲ್ಲಿ ಬಿಜೆಪಿಗೆ ಇದು ತಲೆ ನೋವಾಗಲಿದೆ. ಹಾಗಾಗಿಯೇ ಈ ಸಾರಿಯ ಬಜೆಟ್‍ನಲ್ಲಿ ಮತ್ತೆ ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸಾದ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಖಾತರಿ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತು. ಆ ನಿಟ್ಟಿನಲ್ಲಿ ಈವರೆಗೂ ಏನೂ ಆಗಿಲ್ಲ ಎಂಬುದು ಮಾತ್ರ ವಾಸ್ತವ.
ಈ ಮಧ್ಯೆ, ದೇಶದ ಉತ್ತರ ಭಾಗದಲ್ಲಿ ನಡೆಯುತ್ತಿರುವ ಆಂದೋಲನದ ಬಗ್ಗೆ ಕೇಳಲಾದ ಪ್ರಶ್ನೆಗೆ ಕೇಂದ್ರ ಕೃಷಿ ಸಚಿವ ರಾಧಾಮೋಹನ್, ಇದು ಪ್ರಚಾರಕ್ಕಾಗಿ ಮಾಡುತ್ತಿರುವುದು ಮತ್ತು ಈ ಸಂಘಟನೆಗಳಲ್ಲಿ ಕೆಲವು ಸಾವಿರ ಸದಸ್ಯರಿರಬಹುದು ಅಷ್ಟೇ ಎಂದಿದ್ದಾರೆ. ಕಡಿಮೆ ಸಂಖ್ಯೆಯ ಸದಸ್ಯರಿರುವ ಸಂಘಟನೆಗಳೇ ಮೂವತ್ತು ಸಾವಿರಕ್ಕೂ ಹೆಚ್ಚು ರೈತರನ್ನು ಒಟ್ಟುಗೂಡಿಸಿ ನೂರಾರು ಕಿ.ಮೀ. ದೂರದ ಜಾಥಾ ಮಾಡಿದ್ದು ಎಂಬುದನ್ನು ಅವರು ಮರೆತಂತಿದೆ.
ಇವೆಲ್ಲಾ ಕಾರಣಗಳಿಂದ, ದೇಶದ ಗ್ರಾಮೀಣ ಭಾಗವು 2019ರ ಚುನಾವಣೆಗೆ ಮುಂಚೆ ವಿಶೇಷ ಮಹತ್ವವನ್ನು ಪಡೆದುಕೊಳ್ಳಲಿದೆ. ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿಯ ನೇತಾರರಲ್ಲೊಬ್ಬರಾದ ಯೋಗೇಂದ್ರ ಯಾದವ್‍ರ ಪ್ರಕಾರ ಜವಾನ್ ಮತ್ತು ಕಿಸಾನ್ ಮುಂದಿನ ದಿನಗಳ ದೇಶದ ದಿಕ್ಕನ್ನು ನಿರ್ಧರಿಸುತ್ತಾರೆ. ಇಲ್ಲಿ ಜವಾನ್ ಎಂದರೆ ಸೈನಿಕರಲ್ಲ; ಯುವಜನರು. ಕಿಸಾನ್, ರೈತರು. ಯುವಜನರು ಮತ್ತು ರೈತರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು ಎಂಬುದು ಮುಂದಿನ ಚುನಾವಣೆಗಳ ದಿಕ್ಕನ್ನೂ ಬದಲಿಸುತ್ತದೆ.

– ಡಾ.ವಾಸು ಎಚ್.ವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...