Homeಕರ್ನಾಟಕಘೋಷಿತ ಗ್ಯಾರಂಟಿಗಳು ಮತ್ತು ಉದ್ದೇಶಿತ ಹೊಸ ಆರ್ಥಿಕ ಮಾದರಿಯ ನಡುವೆ..

ಘೋಷಿತ ಗ್ಯಾರಂಟಿಗಳು ಮತ್ತು ಉದ್ದೇಶಿತ ಹೊಸ ಆರ್ಥಿಕ ಮಾದರಿಯ ನಡುವೆ..

- Advertisement -
- Advertisement -

ಹೊಸ ಸರಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಈ ಬಜೆಟ್ ಬಗ್ಗೆ ದೇಶದಾದ್ಯಂತ ಅದಮ್ಯ ಕುತೂಹಲವಿತ್ತು. ರಾಜ್ಯವೊಂದರ ಬಜೆಟ್ ಕುರಿತಾಗಿ ಈ ರೀತಿ ವ್ಯಾಪಕ ಕುತೂಹಲ ಕಂಡದ್ದು ದೇಶದ ಚರಿತ್ರೆಯಲ್ಲೇ ಇದುವೇ ಮೊದಲಿರಬೇಕು. ಅಷ್ಟೇ ಅಲ್ಲ. ಅಭೂತಪೂರ್ವ ಎನ್ನುವಂತೆ ಬಜೆಟ್ ಮಂಡಿಸಲಿರುವ ದಿನ ರಾಜ್ಯ ಸರಕಾರ ದಿನಪತ್ರಿಕೆಗಳಲ್ಲಿ ಬಜೆಟ್ ಬಗ್ಗೆ ಮುಖಪುಟ ಜಾಹೀರಾತೊಂದನ್ನು ಪ್ರಕಟಿಸಿತು. ಅದರಲ್ಲಿ ಈ ಬಜೆಟ್‌ನ ಮೂಲಕ ರಾಜ್ಯದಲ್ಲಿ ಹೊಸದೊಂದು ಅಭಿವೃದ್ಧಿಯ ಮಾದರಿಯನ್ನು ಹುಟ್ಟುಹಾಕುವುದಾಗಿ ಹೇಳಿಕೊಂಡಿತು.

ಬಜೆಟ್ ಕುರಿತಾಗಿ ಎದ್ದ ಕುತೂಹಲಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಪ್ರಕಟಿಸಿದ ಐದು ಗ್ಯಾರಂಟಿ ಯೋಜನೆಗಳು. ಕಾಂಗ್ರೆಸ್ ಭಾರೀ ಗೆಲುವು ಸಾಧಿಸಿದ್ದರಲ್ಲಿ ಈ ಭರವಸೆಗಳು ಎಷ್ಟು ಕೆಲಸ ಮಾಡಿದವು ಎನ್ನುವುದನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಆದರೆ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಕಾಂಗ್ರೆಸ್ ಸರಕಾರವನ್ನು ಕಾಡಿದ ಪ್ರಶ್ನೆ ಎಂದರೆ ಈ ಯೋಜನೆಗಳ ಅನುಷ್ಠಾನಕ್ಕೆ ಹಣ ಹೊಂದಿಸುವುದು ಹೇಗೆ ಎನ್ನುವುದು. ಬಜೆಟ್‌ನಲ್ಲಿ ಇದಕ್ಕೊಂದು ಉತ್ತರ ಸಿಗಲೇಬೇಕಿತ್ತು. ನಾಡಿನ ಕುತೂಹಲ ಇದ್ದದ್ದು ಈ ಉತ್ತರದ ಬಗ್ಗೆಯೇ ಹೊರತು ಇನ್ನೇನಲ್ಲ.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರಕಾರಕ್ಕೆ 52,000 ಕೋಟಿ ರೂಪಾಯಿಗಳು ಬೇಕು ಎಂದು ಅಧಿಕೃತವಾಗಿ ಬಜೆಟ್ ಹೇಳಿತು. ಈ ಆರ್ಥಿಕ ವರ್ಷದಲ್ಲಿ ಇನ್ನು ಉಳಿದಿರುವುದು ಎಂಟು ತಿಂಗಳುಗಳು. ಈ ಎಂಟೂವರೆ ತಿಂಗಳುಗಳ ಅವಧಿಯಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಬೇಕಾದ ಮೊತ್ತ ಸುಮಾರು ಮೂವತ್ತರಿಂದ ಮೂವತ್ತೈದು ಕೋಟಿ ರೂಪಾಯಿಗಳು. ಕೆಲ ಹೊಸ ತೆರಿಗೆಗಳನ್ನು ಹೇರುವ ಮೂಲಕ, ಕೆಲ ಇಲಾಖೆಗಳಿಗೆ ಒಂದಷ್ಟು ಅನುದಾನ ಕಡಿತಗೊಳಿಸುವ ಮೂಲಕ, ಇನ್ನಷ್ಟೇ ವಿವರಿಸಬೇಕಿರುವ ಇನ್ನೊಂದಷ್ಟು ಮಿತವ್ಯಯ ಕ್ರಮಗಳ ಮೂಲಕ ಈ ವರ್ಷದ ಮಟ್ಟಿಗೆ ಹೊಸ ಯೋಜನೆಗಳ ಅನುಷ್ಠಾನಕ್ಕೆ ಬೇಕಾದಷ್ಟು ಹಣ ಹೊಂದಿಸಲಾಗುವುದು ಎಂದು ಬಜೆಟ್ ಹೇಳಿದೆ. ಹಾಗಂತ ವಿರೋಧ ಪಕ್ಷಗಳು ಮತ್ತು ಮೇಲ್ಜಾತಿ-ಮಧ್ಯಮ ವರ್ಗದ ಮಂದಿ ಆಕಾಶ ತಲೆಮೇಲೆ ಬಿದ್ದುಹೋಗಲಿದೆ ಎಂದು ಆಡುತ್ತಿದ್ದಂತೆ ಏನೂ ಆಗಿಲ್ಲ; ರಾಜ್ಯವೂ ದಿವಾಳಿಯಾಗುವ ಹಂತಕ್ಕೆ ಬಂದು ನಿಂತ ಹಾಗೆ ಕಾಣಿಸುತ್ತಿಲ್ಲ; ಜನರ ಮೇಲೆ ಬಹುದೊಡ್ಡ ತೆರಿಗೆಯ ಹೊರೆ ಬೀಳಲಿಲ್ಲ; ’ಅಭಿವೃದ್ಧಿ’ಗೆ ನೀಡಬೇಕಾಗಿದ್ದ ಹಣವನ್ನೆಲ್ಲ ಕಡಿತಗೊಳಿಸಿ ಬಡವರನ್ನೇ ಕೇಂದ್ರೀಕರಿಸಿಕೊಂಡಿರುವ ಈ ಯೋಜನೆಗಳಿಗೆ ವರ್ಗಾಯಿಸಿದ ಹಾಗೆಯೂ ಕಾಣಿಸುವುದಿಲ್ಲ.

ಮದ್ಯದ ಮೇಲೆ ತೆರಿಗೆ ಏರಿಸಲಾಗಿದೆ. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಬೆಲೆ ಏರಿದಾಗ ಬೇಡಿಕೆ ಇಳಿಯುತ್ತದೆ ಎನ್ನುವ ಅರ್ಥಶಾಸ್ತ್ರದ ನಿಯಮಕ್ಕೆ ವಿರುದ್ಧವಾಗಿರುವ ವಸ್ತುಗಳಲ್ಲಿ ಮದ್ಯವೂ ಒಂದು. ಮದ್ಯ ಕುಡಿಯುವವರು ಕುಡಿದೇ ಕುಡಿಯುತ್ತಾರೆ. ಬೆಂಗಳೂರಿನ ಆಕರ್ಷಕ ಪಬ್‌ಗಳಲ್ಲಿ ಸಂಜೆಯಾದರೆ ಕಿಕ್ಕಿರಿದು ಸೇರಿ ಬಿಯರ್ ಇತ್ಯಾದಿ ಸೇವಿಸುವ ಶ್ರೀಮಂತ ವರ್ಗಕ್ಕೆ ಈಗಾಗಲೇ ನೀಡುವ ಬಿಲ್‌ನಲ್ಲಿ ಒಂದೆರಡು ನೂರು ರೂಪಾಯಿ ಹೆಚ್ಚು ನೀಡುವುದು ಎಂದಾದರೆ ಅವರಿಗದು ದೊಡ್ಡದಲ್ಲ. ಹಾಗಂತ ಮದ್ಯ ಸೇವಿಸುವವರಲ್ಲಿ ಬಡ ಕಾರ್ಮಿಕ ವರ್ಗಕ್ಕೆ ಸೇರಿದವರೂ ಇದ್ದಾರೆ. ಅವರು ಮದ್ಯ ಸೇವಿಸಿ ಉಳಿದ ಹಣದಲ್ಲಿ ಮನೆಗೇನಾದರೂ ಒಯ್ಯುವವರು. ಇನ್ನು ಅವರು ಮನೆಗೊಯ್ಯುವ ಸರಕು ಮತ್ತಷ್ಟೂ ಕಡಿಮೆಯಾದೀತು ಎನ್ನುವ ವಾದವಿದೆ. ಐದು ಗ್ಯಾರಂಟಿಗಳು ಅಂತಹ ವರ್ಗದ ಜನರಿಗಾಗಿಯೇ ರೂಪುಗೊಂಡಿರುವುದರಿಂದ (ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಎಲ್ಲರೂ ಬಳಸಿಕೊಳ್ಳುತ್ತಿದ್ದಾರೆ) ಈ ಬಗ್ಗೆ ದೊಡ್ಡ ಮಟ್ಟಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದೇ ರೀತಿ ಇನ್ನು ಮುಂದೆ ಭೂಮಿ ಖರೀದಿಸಿ ಅದನ್ನು ನೋಂದಣಿ ಮಾಡಿಕೊಳ್ಳುವಾಗ ಸರ್ಕಾರಕ್ಕೆ ನೀಡಬೇಕಾದ ಮೊತ್ತದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಎಷ್ಟು ಏನು ಅಂತ ಬಜೆಟ್‌ನಲ್ಲಿ ಹೇಳಿಲ್ಲ. ಇದು ಆದಾಗ ಭೂಮಿ ಕೊಳ್ಳುವವರಿಗೆ ಸ್ವಲ್ಪ ಹೆಚ್ಚುವರಿ ಖರ್ಚು ತಗುಲಬಹುದು. ಅದು ಬಡವರನ್ನು ಮತ್ತು ಕೆಳ ಮಧ್ಯಮ ವರ್ಗದವರನ್ನು ದೊಡ್ಡದಾಗಿ ಬಾಧಿಸಲಾರದು. ಹಾಗೆಯೇ ಮೋಟಾರು ವಾಹನ ತೆರಿಗೆಯಲ್ಲೂ ಸ್ವಲ್ಪ ಏರಿಕೆ ಆಗುವ ಸೂಚನೆಗಳಿವೆ. ಇವೆಲ್ಲವೂ ಗ್ಯಾರಂಟೀ ಯೋಜನೆಗಳು ಇಲ್ಲದ ಕಾಲದಲ್ಲೂ ಸಾಮಾನ್ಯವಾಗಿ ಸರಕಾರಗಳು ಏರಿಸುತ್ತಲೇ ಬಂದಿರುವ ಶುಲ್ಕಗಳು. ಎಲ್ಲಾ ಹೆಚ್ಚುವರಿ ಆದಾಯವನ್ನು ಲೆಕ್ಕ ಹಾಕಿದರೂ ಈ ವರ್ಷ ಗ್ಯಾರಂಟೀ ಅನುಷ್ಠಾನಕ್ಕೆ ಬೇಕಾದ ಒಟ್ಟು ಹಣಹೊಂದಿಕೆ ಆಗುವುದಿಲ್ಲ. ಮಿತವ್ಯಯ ಇತ್ಯಾದಿಗಳ ಮೂಲಕ ಬಾಕಿ ಹಣ ಹೊಂದಿಸಲಾಗುವುದು ಎಂದಿದೆ. ಅಷ್ಟರಮಟ್ಟಿಗೆ ಅಲ್ಲೊಂದು ಅಸ್ಪಷ್ಟತೆ ಇದೆ! ಏನೇ ಇರಲಿ ತೆರಿಗೆಯ ಹೊರೆ ಬಿದ್ದೀತು ಎನ್ನುವ ಆತಂಕ ಸೃಷ್ಟಿಸಿ ಕಾಯುತಿದ್ದವರಿಗೆ ನಿರಾಶೆ ಆಗಿದೆ. ಹೊರೆ ಆಗದಂತೆ ಮುಂದೆಯೂ ಕೂಡಾ ಈ ಯೋಜನೆಗಳಿಗೆ ಬೇಕಾದ ಹಣ ಹೊಂದಿಸಲಾಗುವುದು ಎಂದು ಬಜೆಟ್‌ನಲ್ಲಿ ಸರಕಾರ ಹೇಳಿದೆ.

ಇದನ್ನೂ ಓದಿ: FCI ನಿಂದ ಅಕ್ಕಿ ಕೊಳ್ಳುವವರಿಲ್ಲ: ಅಕ್ಕಿ ವ್ಯರ್ಥವಾದರೂ ಸರಿ ಜನರ ಹಸಿವು ನೀಗಿಸಬಾರದು ಎನ್ನುವ…

ತೆರಿಗೆ ಹೆಚ್ಚಿಸಿ ಜನರ ಮೇಲೆ ಬರೆ ಎಳೆಯುವ ಕೆಲಸವನ್ನು ಸರಕಾರ ಮಾಡಲಿಲ್ಲ ಎನ್ನುವುದು ನಿಜ ಇರಬಹುದು. ಹಾಗೆಯೇ ಹೊರೆ ಹೊತ್ತುಕೊಳ್ಳಲು ಶಕ್ತರಾಗಿದ್ದವರ ಮೇಲೆ ತೆರಿಗೆ ಹಾಕುವ ಅವಕಾಶವನ್ನು ಸರಕಾರ ಬಳಸಿಕೊಂಡಿಲ್ಲ ಎನ್ನುವ ವಾದವೂ ಇದೆ. ಅದೇನೇ ಇರಲಿ, ಅಭಿವೃದ್ಧಿಗಾಗಿ ತೊಡಗಿಸಬೇಕಾದ ಹಣವನ್ನು ರಾಜಕೀಯ ಲಾಭದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ನೀಡಲಾಯಿತು ಎನ್ನುವ ವಾದದಲ್ಲಿ ಕಿಂಚಿತ್ ಸತ್ಯ ಇದೆ. ಅದಕ್ಕೆ ಕಾರಣ ಹೀಗಿದೆ. ಸಾಮಾನ್ಯವಾಗಿ ಬಜೆಟ್‌ನಲ್ಲಿ ಎರಡು ರೀತಿಯ ವೆಚ್ಚಗಳನ್ನು ತೋರಿಸಲಾಗುತ್ತದೆ. ಒಂದು ರಾಜಸ್ವ ವೆಚ್ಚ. ಇನ್ನೊಂದು ಬಂಡವಾಳ ವೆಚ್ಚ. ರಾಜಸ್ವ ವೆಚ್ಚ ಎಂದರೆ ಸಂಬಳ ಸಾರಿಗೆ ನಿರ್ವಹಣಾ ವೆಚ್ಚ ಇತ್ಯಾದಿ. ಇದು ಅಭಿವೃದ್ಧಿ ವೆಚ್ಚವಲ್ಲ. ಎರಡನೆಯದ್ದು ಬಂಡವಾಳ ವೆಚ್ಚ. ಅರ್ಥಾತ್ ಹೂಡಿಕೆ. ಹೊಸ ಆಸ್ತಿಗಳ (ಅಸೆಟ್ಸ್) ಸೃಷ್ಟಿಗಾಗಿ ಮಾಡುವ ವೆಚ್ಚ. ಒಟ್ಟು ಬಜೆಟ್‌ನ ಗಾತ್ರದಲ್ಲಿ ಈ ವೆಚ್ಚದ ಪ್ರಮಾಣ ಹಿಂದಿಗಿಂತ ಸಣ್ಣ ಪ್ರಮಾಣದಲ್ಲಿ ಕಡಿತ ಆಗಿದೆ.

ಆದರೆ, ಗ್ಯಾರಂಟಿ ಯೋಜನೆಗಳಿಗೇನು ವೆಚ್ಚ ಆಗಲಿದೆ ಆ ವೆಚ್ಚ ಕೂಡಾ ಒಂದು ರೀತಿಯ ಹೂಡಿಕೆಯ ಆಗಿದೆ ಎನ್ನುವ ವಾದದ ಆಧಾರದಲ್ಲಿ ಸರಕಾರ ಬಂಡವಾಳ ವೆಚ್ಚವನ್ನು ತಗ್ಗಿಸಿ ಜನಕಲ್ಯಾಣ ವೆಚ್ಚವನ್ನು ಹೆಚ್ಚಿಸಿರುವುದು. ಪ್ರತಿ ವರ್ಷ ವಿವಿಧ ರೂಪದಲ್ಲಿ ಬಡ ಜನರ ಕೈಸೇರಲಿರುವ ಹಣವನ್ನು ಅವರು ಖರ್ಚು ಮಾಡಲಿರುವ ಕಾರಣ ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚುತ್ತದೆ, ಬೇಡಿಕೆ ಹೆಚ್ಚಿದಾಗ ಉತ್ಪಾದನೆ ಹೆಚ್ಚುತ್ತದೆ, ಉತ್ಪಾದನೆ ಹೆಚ್ಚಿದಾಗ ಉದ್ಯೋಗ ಸೃಷ್ಟಿಯಾಗುತ್ತದೆ, ಈ ಮೂಲಕ ಸರಕಾರಕ್ಕೆ ಬರುವ ತೆರಿಗೆ ಆದಾಯವೂ ಹೆಚ್ಚುತ್ತದೆ ಎನ್ನುವುದು ಲೆಕ್ಕಾಚಾರ. ಇದನ್ನು ಕರ್ನಾಟಕ ಆವಿಷ್ಕರಿಸಿಕೊಂಡ ಹೊಸ ಆರ್ಥಿಕ ಮಾದರಿ ಅಂತ ಬಣ್ಣಿಸಿದೆ. ಈ ಕುರಿತು ಬಜೆಟ್‌ನಲ್ಲಿ ಹೀಗೆ ಹೇಳಲಾಗಿದೆ:

“ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ವರ್ಷದಲ್ಲಿ ಸುಮಾರು 52,000 ಕೋಟಿ ರೂಪಾಯಿಗಳನ್ನು ಸುಮಾರು 1.3 ಕೋಟಿ ಕುಟುಂಬಗಳಿಗೆ ತಲುಪಿಸುತ್ತಿರುವುದರಿಂದ ಪ್ರತಿ ಕುಟುಂಬಕ್ಕೆ ಮಾಸಿಕ 4000ದಿಂದ 5000 ರೂಗಳಷ್ಟು ಅಂದರೆ ವಾರ್ಷಿಕವಾಗಿ ಸರಾಸರಿ 48,000ದಿಂದ 60000 ರೂ ಗಳಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ ಮೂಲ ಆದಾಯ ಎನ್ನುವ (Universal Basic Income) ಪರಿಕಲ್ಪನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ.” (ಪುಟ 10, ಪ್ಯಾರ 19)

ಆದರೆ ಕೆಲವೊಂದು ವಿಚಾರಗಳನ್ನು ನೆನಪಲ್ಲಿರಿಸಿಕೊಳ್ಳಬೇಕಾಗಿದೆ.

ಸಾಮಾನ್ಯವಾಗಿ ಈ ರೀತಿ ಒಟ್ಟು ಆದಾಯದ ದೊಡ್ಡ ಪಾಲೊಂದನ್ನು ಜನಕಲ್ಯಾಣದ ಬಾಬತ್ತಾಗಿ ಖರ್ಚು ಮಾಡುವುದು ಈಗಾಗಲೇ ಮುಂದುವರಿದಿರುವ ದೇಶಗಳು. ಅಲ್ಲಿ ಸರಕಾರಕ್ಕೆ ಹೂಡಿಕೆಯ ವಿಚಾರದಲ್ಲಿ ಹೊಸದೇನನ್ನೂ ಮಾಡಲು ಉಳಿದಿಲ್ಲ. ಅಂದರೆ ರಸ್ತೆ, ಸಾರಿಗೆ, ಚರಂಡಿ, ವಿದ್ಯುತ್ತು, ನೀರು ಸರಬರಾಜು, ಆಸ್ಪತ್ರೆಗಳು, ಶಾಲೆ, ವಿಶ್ವವಿದ್ಯಾನಿಲಯ ಹೀಗೆ ಒಂದು ಸಮಾಜದಲ್ಲಿ ಎಲ್ಲರಿಗೂ ಬೇಕಾಗಿರುವ ಏನೇನು ಅವಶ್ಯಕತೆಗಳಿವೆಯೋ ಅವೆಲ್ಲವನ್ನು ಈಗಾಗಲೇ ಬಹುತೇಕ ಪೂರೈಸಿ ಆಗಿರುವ ಹಿನ್ನೆಲೆಯಲ್ಲಿ, ಆ ದೇಶಗಳ ಸರಕಾರಗಳು ಆರ್ಥಿಕವಾಗಿ ಹಿಂದುಳಿದವರನ್ನು ಜತೆಗೆ ಕರೆದುಕೊಂಡು ಹೋಗುವ ದೃಷ್ಟಿಯಲ್ಲಿ ಜನಕಲ್ಯಾಣದ ಬಾಬತ್ತಿನಲ್ಲಿ ದೊಡ್ಡ ಪ್ರಮಾಣದ ವೆಚ್ಚ ಮಾಡುತ್ತಿದೆ. ಭಾರತದಲ್ಲಿ ಪರಿಸ್ಥಿತಿ ಹಾಗಿಲ್ಲ. ಇಲ್ಲಿ ಇನ್ನು ಕೂಡಾ ಸರಕಾರದ ಕಡೆಯಿಂದ ಆಗಲೇಬೇಕಿರುವ ಹಲವಾರು ಕೆಲಸಗಳು ಬಾಕಿ ಉಳಿದಿವೆ. ಈ ಕೆಲಸಗಳಿಗೆ ಇನ್ನೂ ಅಪಾರ ಪ್ರಮಾಣದ ಹಣ ಹೂಡಿಕೆಯ ಅಗತ್ಯವಿದೆ. ಹಾಗಾಗಿ ಈ ಹಂತದಲ್ಲೇ ಗ್ಯಾರಂಟಿಗಳಂತಹ ಯೋಜನೆಗಳಿಗೆ ಹಣ ನೀಡುವ ವಿಚಾರದಲ್ಲಿ ಒಂದು ಪ್ರಶ್ನಾರ್ಥಕ ಚಿಹ್ನೆ ಸದಾ ಇರಲಿದೆ. ಹಾಗೆಂದು, ಈ ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆಯನ್ನು ನೋಡಿದಾಗ ಸರಕಾರ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿದ ನಂತರವೇ ಬಡವರ ಕುರಿತಾಗಿ ಯೋಚಿಸಬೇಕು ಎನ್ನುವ ವಾದವನ್ನೂ ಒಪ್ಪಿಕೊಳ್ಳಲಾಗುವುದಿಲ್ಲ. ಹಾಗಾಗಿ ಮದ್ಯದ ದಾರಿಯೊಂದು ಈ ದೇಶಕ್ಕೆ ಅವಶ್ಯಕವಾಗಿದೆ. ಆ ಮದ್ಯದ ದಾರಿಯನ್ನು ಕರ್ನಾಟಕ ಈಗ ಆಯ್ದುಕೊಂಡಿದೆ. ರಾಜಕೀಯ ಲೆಕ್ಕಾಚಾರದಿಂದ ಆಯ್ದುಕೊಂಡ ಮಾದರಿಯನ್ನು ನಿಜವಾದ ಅರ್ಥದಲ್ಲಿ ಹೊಸ ಕಲ್ಯಾಣ ಕೇಂದ್ರಿತ ಅಭಿವೃದ್ಧಿ ಮಾದರಿಯನ್ನಾಗಿ ಮಾಡುವ ಸವಾಲು ಈಗ ಹೊಸ ಸರಕಾರದ ಮುಂದಿದೆ.

ಕಲ್ಯಾಣ ಕೇಂದ್ರಿತ ಹೊಸ ಅಭಿವೃದ್ಧಿಯ ಮಾದರಿಗೆ ಈ ಐದು ಯೋಜನೆಗಳೇ ಅತ್ಯುತ್ತಮ ಅಥವಾ ಅಂತಿಮವೇನಲ್ಲ. ಘೋಷಿಸಿದ ಯೋಜನೆಗಳಿಗೆ ಯಾವುದೋ ರೀತಿಯ ಕಸರತ್ತು ಮಾಡಿ ಹಣ ಹೊಂದಿಸಿಕೊಂಡರೆ ಹೊಸ ಮಾದರಿ ರೂಪುಗೊಳ್ಳುವುದಿಲ್ಲ. ಈ ಯೋಜನೆಗಳನ್ನು ಪ್ರಯೋಗಾತ್ಮಕ ಎಂದು ತಿಳಿದುಕೊಂಡು, ಅಗತ್ಯವಿದ್ದರೆ ಅವುಗಳಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳುವುದು, ಅಥವಾ ಕೆಲವನ್ನು ಕೈಬಿಟ್ಟು ಹೊಸದನ್ನು ಸೇರಿಸಿಕೊಳ್ಳುವುದು ಅಗತ್ಯವಾಗಬಹುದು. ಕಡಿತವಾದ ಬಂಡವಾಳ ವೆಚ್ಚವನ್ನು ಸರಿದೂಗಿಸುವ ಮಾರ್ಗ ಅಗತ್ಯವಿರಬಹುದು. ಉದ್ಯೋಗಗಳನ್ನು ಸೃಷ್ಟಿಸುವ ಹೊಸ ಮಾರ್ಗಗಳು, ಉದ್ಯೋಗಗಳನ್ನು ನಿರ್ವಹಿಸಲು ಬೇಕಾದ ಮಾನವ ಸಂಪನ್ಮೂಲದ ತಯಾರಿ ಇತ್ಯಾದಿಗಳಲ್ಲಾ ನಡೆಯದೆ ಹೊಸ ಮಾದರಿ ರೂಪುಗೊಳ್ಳದು. ಏನನ್ನೇ ಆಗಲಿ ಹಂಚುವ ಮುನ್ನ ಅದನ್ನು ಸೃಷ್ಟಿಸಲೇ ಬೇಕೆನ್ನುವುದು ಅರ್ಥಶಾಸ್ತ್ರದ ನಿಯಮವೂ ಹೌದು, ಪ್ರಕೃತಿಯ ನಿಯಮವೂ ಹೌದು. ಸಂಪತ್ತನ್ನು ಹೊಸ ರೀತಿಯಲ್ಲಿ ಸೃಷ್ಟಿಸಿ, ಸೃಷ್ಟಿಸಿದ ಸಂಪತ್ತನ್ನು ಹೊಸ ರೀತಿಯಲ್ಲಿ ಹಂಚಿ, ಆ ಹಂಚಿಕೆ ಇನ್ನಷ್ಟೂ ಸಂಪತ್ತಿನ ಸೃಷ್ಟಿಗೆ ಕಾರಣವಾಗುವ ಮತ್ತು ಈ ಮೂರೂ ಹಂತಗಳು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಸುಸ್ಥಿರವಾಗಿ ನಡೆದಾಗ ಮಾತ್ರ ಹೊಸ ಆರ್ಥಿಕ ಮಾದರಿಯೊಂದು ಕರ್ನಾಟಕದಲ್ಲಿ ಹುಟ್ಟಿದೆ ಅಂತ ಹೇಳಬಹುದು. ಆ ಹಾದಿಯಲ್ಲಿ ಕ್ರಮಿಸಬೇಕಾದ ಹಾದಿ ಇನ್ನಷ್ಟೂ ದೊಡ್ಡದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...