Homeಮುಖಪುಟಆರೇ ಪದಗಳ ಟ್ವೀಟ್: ಒನ್ ಶಾಟ್ ಲಸಿಕೆ ಮಂಪರಿನಿಂದ ಹೊರಬಂದ ’Low-ಕಲ್’ ಸೆಲೆಬ್ರಿಟಿಗಳು!

ಆರೇ ಪದಗಳ ಟ್ವೀಟ್: ಒನ್ ಶಾಟ್ ಲಸಿಕೆ ಮಂಪರಿನಿಂದ ಹೊರಬಂದ ’Low-ಕಲ್’ ಸೆಲೆಬ್ರಿಟಿಗಳು!

ನಮ್ಮ ದೇಶದ ವಿಷಯಗಳಲ್ಲಿ ಯಾರೂ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂಬುದು ಈ ದೇಸಿ ಟ್ವಿಟರಿಸ್ಟ್‌ಗಳ ಯುಎಸ್‌ಪಿ (Unique Selling Point). ರಿಹಾನ್ನಾ ದೆಹಲಿ ಗಡಿಗಳಲ್ಲಿನ ಬ್ಯಾರಿಕೇಡಿಂಗ್, ಇಂಟರ್‌ನೆಟ್ ಸ್ಥಗಿತದ ಕುರಿತಾಗಿ ಕಮೆಂಟ್ ಮಾಡಿದ್ದು ಅಷ್ಟೇ. ಅದರ ಹಿಂದಿರುವ ಭೀಕರ ಸತ್ಯ ಅರಗಿಸಿಕೊಳ್ಳದ ಅಂಧಭಕ್ತರು ಟ್ವೀಟ್‌ಗಳಲ್ಲಿ ರೆಡಿಮೇಡ್ ಉತ್ತರ ಕೊಡುತ್ತಿದ್ದಾರೆ.

- Advertisement -
- Advertisement -

ನಮ್ಮ ದೇಶದ ವಿಷಯಗಳಲ್ಲಿ ಯಾರೂ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂಬುದು ಈ ದೇಸಿ ಟ್ವಿಟರಿಸ್ಟ್‌ಗಳ ಯುಎಸ್‌ಪಿ (Unique Selling Point). ರಿಹಾನ್ನಾ ದೆಹಲಿ ಗಡಿಗಳಲ್ಲಿನ ಬ್ಯಾರಿಕೇಡಿಂಗ್, ಇಂಟರ್‌ನೆಟ್ ಸ್ಥಗಿತದ ಕುರಿತಾಗಿ ಕಮೆಂಟ್ ಮಾಡಿದ್ದು ಅಷ್ಟೇ. ಅದರ ಹಿಂದಿರುವ ಭೀಕರ ಸತ್ಯ ಅರಗಿಸಿಕೊಳ್ಳದ ಅಂಧಭಕ್ತರು ಟ್ವೀಟ್‌ಗಳಲ್ಲಿ ರೆಡಿಮೇಡ್ ಉತ್ತರ ಕೊಡುತ್ತಿದ್ದಾರೆ.

ನೀವು ಎಂದಾದರೂ ಈ ಸಚಿನ್ ತೆಂಡೂಲ್ಕರ್ ರಾಜ್ಯಸಭೆಯಲ್ಲಿ ಈ ದೇಶದ ಸಂಕಷ್ಟಗಳ ಬಗ್ಗೆ ಮಾತಾಡಿದ್ದನ್ನು ಕೇಳಿದ್ದೀರಾ? ಅದಿರಲಿ, ಈ ದಾಖಲೆವೀರ ಕ್ರಿಕೆಟಿಗ ಕಲಾಪಗಳಿಗೆ ಹಾಜರಾದದ್ದೇ ಅಪರೂಪ. ಇಂತಹ ಸಚಿನ್ ಕೂಡ ಬರ್ನಿಂಗ್ ಇಶ್ಯೂ ಮೇಲೆ ಟ್ವೀಟ್ ಮಾಡಬೇಕಾಯಿತು!

ಇನ್ನು ಈ ಅಕ್ಷಯಕುಮಾರ್, ಸುನೀಲ್ ಶೆಟ್ಟಿ, ಅಜಯ್ ದೇವಗನ್ ತಮ್ಮ ಸಿನಿಮಾಗಳಲ್ಲಿ ಕೂಡ ರೈತರ ಇಶ್ಯೂ ಹೈಲೈಟ್ ಮಾಡಿದ್ದೆ ಇಲ್ಲ. ಈ ಮೂವರ ಸಿನಿಮಾಗಳ ತಿರುಳುಗಳೂ ಒಂದೇ, ಅಷ್ಟೇ ಕಳಪೆ. ಅಕ್ಷಯಕುಮಾರ್ ಈಗಾಗಲೆ ಬಿಜೆಪಿಯ ’ಪೋಸ್ಟರ್ ಬಾಯ್’ ಎಂಬ ಬಿರುದನ್ನು ಆನಂದಿಸುತ್ತಿರುವ ಮನುಷ್ಯ. ಸೇನೆ, ಧ್ವಜ ಕೆಲವೊಮ್ಮೆ ಪಂಜಾಬಿ ಅಸ್ಮಿತೆಯ ಕಥಾನಕಗಳ ಮೇಲೆ ವರ್ಷಕ್ಕೊಂದು ಬಿಗ್ ಬಜೆಟ್ ಸಿನಿಮಾ ಮಾಡಿ ಅಸ್ತಿತ್ವ ಉಳಿಸಿಕೊಂಡಿರುವ ಸ್ಟಾರ್. ಈತನೂ ಈಗ ರೈತರ ಪರ ಎನ್ನುವಂತೆ, ಸರ್ಕಾರ ಸಮಸ್ಯೆ ಬಗೆಹರಿಸುತ್ತಿದೆ ಎನ್ನುವಂತೆ ಟ್ವೀಟ್ ಮಾಡಿದ್ದಾನೆ. (ಟ್ವೀಟ್ ಮಾಡಿಸಿದ್ದಾರೆ ಎಂದೂ ಓದಿಕೊಳ್ಳಬಹುದು!)

ಅಜಯ್ ದೇವಗನ್ ಮತ್ತು ಸುನೀಲ್ ಶೆಟ್ಟಿ ಈಗ ಸಿನಿಮಾ ನಿರ್ಮಿಸಬಹುದೇ ಹೊರತು ಅವರೇ ಅಭಿನಯಿಸಿದರೆ ಪುಟ್ಟಾಪೂರಾ ಲಾಸ್ ಪಕ್ಕಾ. ’ವಿಮಲ್’ ಎಂಬ ಗುಟ್ಕಾದ ’ರಾಯಭಾರಿ’ ಆಗಿಯಷ್ಟೇ ’ಕೇಸರಿ’ ಸ್ವಾದದ ಬಗ್ಗೆ ಮಾತನಾಡುವ ಅಜಯ್ ದೇವಗನ್, ಮೊದಲ ಸಲ ’ಕೇಸರಿ’ ಪಡೆಯ ಪರವಾಗಿ ಒಂದು ಟ್ವೀಟನ್ನೂ ಮಾಡಬೇಕಾಗಿತು. (ಟ್ವೀಟ್ ಮಾಡಿಸಿದ್ದಾರೆ ಎಂದೂ ಓದಿಕೊಳ್ಳಬಹುದು!)

ಇದನ್ನೂ ಓದಿ: ಅಮೆರಿಕದ ದ್ವಂದ್ವ ನೀತಿ: ಡೆಮಾಕ್ರಸಿಗಾಗಿ ರೈತರಿಗೆ ಬೆಂಬಲ, ಬಂಡವಾಳಶಾಹಿಗಳಿಗಾಗಿ ಕೃಷಿ ಕಾಯ್ದೆಗಳ ಸ್ತುತಿ!

ಭಾರತದ ಶ್ರೀಮಂತ ಅವಿಭಕ್ತ ಕುಟುಂಬಗಳು, ಎನ್‌ಆರ್‌ಐಗಳ ಕತೆ-ಚಿತ್ರಕತೆಗಳ ನಿರ್ದೇಶನಕ್ಕೆ ಸಿಮೀತರಾದ ಕರಣ್ ಜೋಹರ್ ಕೂಡ ಭಾರತದ ಒಗ್ಗಟ್ಟಿನ ಕುರಿತು ಟ್ವೀಟ್ ಮಾಡಿದ್ದಾರೆ.

ಚೊಚ್ಚಲ ಮಗುವಿನ ಸಂಭ್ರಮದಲ್ಲಿದ್ದರೆಂದು ಕಾಣುತ್ತದೆ. ಡೌನ್ ಆರ್ಡರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ವಿರಾಟ್ ಕೊಹ್ಲಿ ಸ್ವಲ್ಪ ತಡವಾಗಿ ಇಂತದ್ದೊಂದು ಟ್ವೀಟ್ ಬೌಂಡರಿ ಬೀಸಿದ್ದಾರೆ.

ಗೌತಮ್ ಗಂಭೀರ್ ಈ ಬಗ್ಗೆ ಟ್ವೀಟ್ ಮಾಡಿಲ್ಲ ಅಂತಾ ಕಾಣುತ್ತೆ. ಮೋಸ್ಟ್ಲಿ, ಅವರು ಗಣರಾಜ್ಯ ದಿನದ ಗಲಾಟೆಗೆ ಆಪ್ ಕಾರಣ ಎಂಬ ತಮ್ಮ ಸಂಶೋಧನೆಗೆ ಸಾಕ್ಷ್ಯ ಕಲೆ ಹಾಕುತ್ತಿರಬಹುದು.

ಹೀಗೆ ಇವರೆಲ್ಲ ಒಮ್ಮಿಂದೊಮ್ಮೆಲೆ ತಮ್ಮ ಐಷಾರಾಮಿ ಮಂಪರಿನಿಂದ ಹೊರಬರಲು ರಿಹಾನ್ನಾಳ ಆರು ಪದಗಳ ಟ್ವೀಟ್ ಪುಟಿ ಪುಟಿದು, ಆಕೆಯ ಹಾಡಿನಂತೆ ತೇಲಿ ತೇಲಿ ಬರಬೇಕಾಯಿತು. ಅಷ್ಟಕ್ಕೂ ಇವರೇನೂ ತಾವಾಗಿಯೇ ಟ್ವೀಟ್ ಮಾಡಿದಂತೆ ಕಾಣುತ್ತಿಲ್ಲ. ಬಿಜೆಪಿಯ ಇವರ ’ಉನ್ನತ’ ಹಿತೈಷಿಗಳಿಂದ ಅರ್ಜೆಂಟ್ ಕಾಲ್ ಬಂದ ನಂತರವಷ್ಟೇ ಒಂದು ಟ್ವೀಟ್ ಮಾಡಿ ಮತ್ತೆ ಎಂದಿನಂತೆ ತಮ್ಮ ಮಂಪರಿಗೆ ಜಾರಿದ್ದಾರೆ.

ಹಾಗೆ ನೋಡಿದರೆ, ಬಿಜೆಪಿಯ ಹೊಸ ’ಪೋಸ್ಟರ್ ಗರ್ಲ್’ ಕಂಗನಾ ರಾಣಾವತ್ ಅವರೇ ವಾಸಿ. ಈ ’ಹುಡುಗಿ’ ಸ್ಪಾಂಟೆನಿಯಸ್ ಆಗಿ ರಿಹಾನ್ನಾಗೆ ನೇರಾನೇರ ಪ್ರಶ್ನೆ ಮಾಡಿತ್ತು. ’ರೈತರಲ್ಲ, ಅವರು ಭಯೋತ್ಪಾದಕರು. ಚೀನಾ ಇದರ ಹಿಂದೆ ಇದೆ. ಭಾರತವನ್ನು ದುರ್ಬಲಗೊಳಿಸಿ, ಭಾರತವನ್ನು ತನ್ನ ವಸಾಹತುವನ್ನಾಗಿ ಮಾಡಿಕೊಳ್ಳುವ ಹುನ್ನಾರ ಇಲ್ಲಿದೆ’ ಎಂಬ ಹೊಸ some-ಶೋಧನೆಯನ್ನು ಈ ಚಂದುಳ್ಳಿ ’ಅಂಧಭಕ್ತೆ’ ಮಾಡಿದೆ. ಬಹುಸಮಯ ಪಾಕಿಸ್ತಾನದ ಸುತ್ತಲೆ ಗಿರಕಿ ಹೊಡೆಯುವ sum-ಶೋಧಕ ಅಮಿತ್ ಮಾಳವಿಯನಿಗೆ ಈ ’ಹುಡುಗಿಯನ್ನು’ ನೋಡಿ ನಾಚಿಕೆಯಾಗಬೇಕು!

ಇದನ್ನೂ ಓದಿ: ಹೋರಾಟ ಬೆಂಬಲಿಸಿದ್ದಕ್ಕೆ FIR: ಬೆದರಿಕೆಗೆ ಮಣಿಯಲ್ಲ, ನಾನಿನ್ನೂ ರೈತರ ಪರ ಎಂದ ಗ್ರೇಟಾ ಥನ್‌‌ಬರ್ಗ್

ಶಾ ಕೂಡ ಫೀಲ್ಡಿಗೆ!

ಬಂಪರ್ ಬಜೆಟ್ ತಯಾರಿಸಿ ಸುಸ್ತಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ, ’ಒನ್ಸ್ ಇನ್ ಎ ಸೆಂಚುರಿ’ ಬಜೆಟ್ ಎಂಬ ಅದಾನಿಯ ಟ್ವೀಟೇ ಟಾನಿಕ್ ಆಗಿ ಒದಗಿ ಬಂದು ಚೇತರಿಕೆ ಕಂಡಿದ್ದರು. ಅವರೂ ಒಂದು ಟ್ವೀಟ್ ಮಾಡಿಯೇ ಬಿಟ್ಟರು. ಕೇಂದ್ರ ಸಚಿವರಾದ ವಿ.ಕೆ.ಸಿಂಗ್, ಕಿಶನ್‌ ರೆಡ್ಡಿ ಮುಂತಾದವರೆಲ್ಲ ವಿದೇಶಾಂಗ ಸಚಿವಾಲಯದ ಪ್ರಕಟಣೆ ಶೇರ್ ಮಾಡಿ ಎರಡು ಸಾಲು ಗೀಚಿ ಒಗೆದರು.

ಆದರೆ ಮೇಲಿನ ಈ ಎಲ್ಲರ-ಸಿನಿಮಾ, ಕ್ರಿಕೆಟ್ ಮತ್ತು ಪಾಲಿಟಿಕ್ಸ್- ಫಾಲೋವರ್‌ಗಳ ಸಂಖ್ಯೆ ಒಟ್ಟುಗೂಡಿಸಿದರೂ ರಿಹಾನ್ನಾಳ ಫಾಲೋವರ್ ಸಂಖ್ಯೆ ಮುಂದೆ ಜುಜುಬಿ. ಛೇ, ಇದ್ಯಾಕೋ ಸರಿ ಹೋಗ್ತಿಲ್ಲ ಎಂದು ’ಕ್ರೊನೊಲಜಿ ಸಮಝಿಯೆ’ ಖ್ಯಾತಿಯ ಅಮಿತ್ ಶಾ ಕೂಡ ಟೇಲ್‌ಎಂಡ್ ಬ್ಯಾಟ್ಸ್‌ಮನ್ ಆಗಿ ಬಂದು ಗಾಳಿಯಲ್ಲಿ ’ಬ್ಯಾಟು’ ಬೀಸಿದ್ದಾರೆ. (ಅವರು ಬ್ಯಾಟ್ ಬದಲು ದೊಣ್ಣೆ ತಂದಿದ್ದರಂತೆ, ಅದನ್ನು ಅವರ ಕೈಗೆ ಕೊಟ್ಟಿದ್ದು ಜಯ್ ಶಾ ಅಂತೆ!)

ದೊಡ್ಡ ಸಂಖ್ಯೆಯ ಫಾಲೋವರ್‍ಸ್ ಹೊಂದಿರುವ “ವಿಶ್ವಗುರು” ಮೈದಾನಕ್ಕೆ ಇಳಿದಿದ್ದರೆ ಭಕ್ತಗಣಕ್ಕೆ ರೋಮಾಂಚನ ಆಗುತ್ತಿತ್ತೇನೋ? ಆದರೆ ಈ ವಿಷಯವನ್ನು ಮುಂದಿನ ಮನ್ ಕಿ ಬಾತ್‌ಗೆ ಸಾಹೇಬರು ರಿಸರ್ವ್ ಮಾಡಿ ಇಟ್ಟಂತಿದೆ. ಗಣರಾಜ್ಯ ದಿನದ ವಿಷಯವನ್ನು ವಾರದ ನಂತರ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ್ದು ನೆನೆಪಿದೆಯಲ್ಲ?


ಇದನ್ನೂ ಓದಿ: ’ಮೋದಿ-ಶಾ ನೇರ ಮಾತುಕತೆಗೆ ಬರಲಿ’- ಜಿಂದ್ ಮಹಾಪಂಚಾಯತ್‌ನ ಮಹಾ ನಿರ್ಣಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...