Homeಮುಖಪುಟಆರೇ ಪದಗಳ ಟ್ವೀಟ್: ಒನ್ ಶಾಟ್ ಲಸಿಕೆ ಮಂಪರಿನಿಂದ ಹೊರಬಂದ ’Low-ಕಲ್’ ಸೆಲೆಬ್ರಿಟಿಗಳು!

ಆರೇ ಪದಗಳ ಟ್ವೀಟ್: ಒನ್ ಶಾಟ್ ಲಸಿಕೆ ಮಂಪರಿನಿಂದ ಹೊರಬಂದ ’Low-ಕಲ್’ ಸೆಲೆಬ್ರಿಟಿಗಳು!

ನಮ್ಮ ದೇಶದ ವಿಷಯಗಳಲ್ಲಿ ಯಾರೂ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂಬುದು ಈ ದೇಸಿ ಟ್ವಿಟರಿಸ್ಟ್‌ಗಳ ಯುಎಸ್‌ಪಿ (Unique Selling Point). ರಿಹಾನ್ನಾ ದೆಹಲಿ ಗಡಿಗಳಲ್ಲಿನ ಬ್ಯಾರಿಕೇಡಿಂಗ್, ಇಂಟರ್‌ನೆಟ್ ಸ್ಥಗಿತದ ಕುರಿತಾಗಿ ಕಮೆಂಟ್ ಮಾಡಿದ್ದು ಅಷ್ಟೇ. ಅದರ ಹಿಂದಿರುವ ಭೀಕರ ಸತ್ಯ ಅರಗಿಸಿಕೊಳ್ಳದ ಅಂಧಭಕ್ತರು ಟ್ವೀಟ್‌ಗಳಲ್ಲಿ ರೆಡಿಮೇಡ್ ಉತ್ತರ ಕೊಡುತ್ತಿದ್ದಾರೆ.

- Advertisement -
- Advertisement -

ನಮ್ಮ ದೇಶದ ವಿಷಯಗಳಲ್ಲಿ ಯಾರೂ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂಬುದು ಈ ದೇಸಿ ಟ್ವಿಟರಿಸ್ಟ್‌ಗಳ ಯುಎಸ್‌ಪಿ (Unique Selling Point). ರಿಹಾನ್ನಾ ದೆಹಲಿ ಗಡಿಗಳಲ್ಲಿನ ಬ್ಯಾರಿಕೇಡಿಂಗ್, ಇಂಟರ್‌ನೆಟ್ ಸ್ಥಗಿತದ ಕುರಿತಾಗಿ ಕಮೆಂಟ್ ಮಾಡಿದ್ದು ಅಷ್ಟೇ. ಅದರ ಹಿಂದಿರುವ ಭೀಕರ ಸತ್ಯ ಅರಗಿಸಿಕೊಳ್ಳದ ಅಂಧಭಕ್ತರು ಟ್ವೀಟ್‌ಗಳಲ್ಲಿ ರೆಡಿಮೇಡ್ ಉತ್ತರ ಕೊಡುತ್ತಿದ್ದಾರೆ.

ನೀವು ಎಂದಾದರೂ ಈ ಸಚಿನ್ ತೆಂಡೂಲ್ಕರ್ ರಾಜ್ಯಸಭೆಯಲ್ಲಿ ಈ ದೇಶದ ಸಂಕಷ್ಟಗಳ ಬಗ್ಗೆ ಮಾತಾಡಿದ್ದನ್ನು ಕೇಳಿದ್ದೀರಾ? ಅದಿರಲಿ, ಈ ದಾಖಲೆವೀರ ಕ್ರಿಕೆಟಿಗ ಕಲಾಪಗಳಿಗೆ ಹಾಜರಾದದ್ದೇ ಅಪರೂಪ. ಇಂತಹ ಸಚಿನ್ ಕೂಡ ಬರ್ನಿಂಗ್ ಇಶ್ಯೂ ಮೇಲೆ ಟ್ವೀಟ್ ಮಾಡಬೇಕಾಯಿತು!

ಇನ್ನು ಈ ಅಕ್ಷಯಕುಮಾರ್, ಸುನೀಲ್ ಶೆಟ್ಟಿ, ಅಜಯ್ ದೇವಗನ್ ತಮ್ಮ ಸಿನಿಮಾಗಳಲ್ಲಿ ಕೂಡ ರೈತರ ಇಶ್ಯೂ ಹೈಲೈಟ್ ಮಾಡಿದ್ದೆ ಇಲ್ಲ. ಈ ಮೂವರ ಸಿನಿಮಾಗಳ ತಿರುಳುಗಳೂ ಒಂದೇ, ಅಷ್ಟೇ ಕಳಪೆ. ಅಕ್ಷಯಕುಮಾರ್ ಈಗಾಗಲೆ ಬಿಜೆಪಿಯ ’ಪೋಸ್ಟರ್ ಬಾಯ್’ ಎಂಬ ಬಿರುದನ್ನು ಆನಂದಿಸುತ್ತಿರುವ ಮನುಷ್ಯ. ಸೇನೆ, ಧ್ವಜ ಕೆಲವೊಮ್ಮೆ ಪಂಜಾಬಿ ಅಸ್ಮಿತೆಯ ಕಥಾನಕಗಳ ಮೇಲೆ ವರ್ಷಕ್ಕೊಂದು ಬಿಗ್ ಬಜೆಟ್ ಸಿನಿಮಾ ಮಾಡಿ ಅಸ್ತಿತ್ವ ಉಳಿಸಿಕೊಂಡಿರುವ ಸ್ಟಾರ್. ಈತನೂ ಈಗ ರೈತರ ಪರ ಎನ್ನುವಂತೆ, ಸರ್ಕಾರ ಸಮಸ್ಯೆ ಬಗೆಹರಿಸುತ್ತಿದೆ ಎನ್ನುವಂತೆ ಟ್ವೀಟ್ ಮಾಡಿದ್ದಾನೆ. (ಟ್ವೀಟ್ ಮಾಡಿಸಿದ್ದಾರೆ ಎಂದೂ ಓದಿಕೊಳ್ಳಬಹುದು!)

ಅಜಯ್ ದೇವಗನ್ ಮತ್ತು ಸುನೀಲ್ ಶೆಟ್ಟಿ ಈಗ ಸಿನಿಮಾ ನಿರ್ಮಿಸಬಹುದೇ ಹೊರತು ಅವರೇ ಅಭಿನಯಿಸಿದರೆ ಪುಟ್ಟಾಪೂರಾ ಲಾಸ್ ಪಕ್ಕಾ. ’ವಿಮಲ್’ ಎಂಬ ಗುಟ್ಕಾದ ’ರಾಯಭಾರಿ’ ಆಗಿಯಷ್ಟೇ ’ಕೇಸರಿ’ ಸ್ವಾದದ ಬಗ್ಗೆ ಮಾತನಾಡುವ ಅಜಯ್ ದೇವಗನ್, ಮೊದಲ ಸಲ ’ಕೇಸರಿ’ ಪಡೆಯ ಪರವಾಗಿ ಒಂದು ಟ್ವೀಟನ್ನೂ ಮಾಡಬೇಕಾಗಿತು. (ಟ್ವೀಟ್ ಮಾಡಿಸಿದ್ದಾರೆ ಎಂದೂ ಓದಿಕೊಳ್ಳಬಹುದು!)

ಇದನ್ನೂ ಓದಿ: ಅಮೆರಿಕದ ದ್ವಂದ್ವ ನೀತಿ: ಡೆಮಾಕ್ರಸಿಗಾಗಿ ರೈತರಿಗೆ ಬೆಂಬಲ, ಬಂಡವಾಳಶಾಹಿಗಳಿಗಾಗಿ ಕೃಷಿ ಕಾಯ್ದೆಗಳ ಸ್ತುತಿ!

ಭಾರತದ ಶ್ರೀಮಂತ ಅವಿಭಕ್ತ ಕುಟುಂಬಗಳು, ಎನ್‌ಆರ್‌ಐಗಳ ಕತೆ-ಚಿತ್ರಕತೆಗಳ ನಿರ್ದೇಶನಕ್ಕೆ ಸಿಮೀತರಾದ ಕರಣ್ ಜೋಹರ್ ಕೂಡ ಭಾರತದ ಒಗ್ಗಟ್ಟಿನ ಕುರಿತು ಟ್ವೀಟ್ ಮಾಡಿದ್ದಾರೆ.

ಚೊಚ್ಚಲ ಮಗುವಿನ ಸಂಭ್ರಮದಲ್ಲಿದ್ದರೆಂದು ಕಾಣುತ್ತದೆ. ಡೌನ್ ಆರ್ಡರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ವಿರಾಟ್ ಕೊಹ್ಲಿ ಸ್ವಲ್ಪ ತಡವಾಗಿ ಇಂತದ್ದೊಂದು ಟ್ವೀಟ್ ಬೌಂಡರಿ ಬೀಸಿದ್ದಾರೆ.

ಗೌತಮ್ ಗಂಭೀರ್ ಈ ಬಗ್ಗೆ ಟ್ವೀಟ್ ಮಾಡಿಲ್ಲ ಅಂತಾ ಕಾಣುತ್ತೆ. ಮೋಸ್ಟ್ಲಿ, ಅವರು ಗಣರಾಜ್ಯ ದಿನದ ಗಲಾಟೆಗೆ ಆಪ್ ಕಾರಣ ಎಂಬ ತಮ್ಮ ಸಂಶೋಧನೆಗೆ ಸಾಕ್ಷ್ಯ ಕಲೆ ಹಾಕುತ್ತಿರಬಹುದು.

ಹೀಗೆ ಇವರೆಲ್ಲ ಒಮ್ಮಿಂದೊಮ್ಮೆಲೆ ತಮ್ಮ ಐಷಾರಾಮಿ ಮಂಪರಿನಿಂದ ಹೊರಬರಲು ರಿಹಾನ್ನಾಳ ಆರು ಪದಗಳ ಟ್ವೀಟ್ ಪುಟಿ ಪುಟಿದು, ಆಕೆಯ ಹಾಡಿನಂತೆ ತೇಲಿ ತೇಲಿ ಬರಬೇಕಾಯಿತು. ಅಷ್ಟಕ್ಕೂ ಇವರೇನೂ ತಾವಾಗಿಯೇ ಟ್ವೀಟ್ ಮಾಡಿದಂತೆ ಕಾಣುತ್ತಿಲ್ಲ. ಬಿಜೆಪಿಯ ಇವರ ’ಉನ್ನತ’ ಹಿತೈಷಿಗಳಿಂದ ಅರ್ಜೆಂಟ್ ಕಾಲ್ ಬಂದ ನಂತರವಷ್ಟೇ ಒಂದು ಟ್ವೀಟ್ ಮಾಡಿ ಮತ್ತೆ ಎಂದಿನಂತೆ ತಮ್ಮ ಮಂಪರಿಗೆ ಜಾರಿದ್ದಾರೆ.

ಹಾಗೆ ನೋಡಿದರೆ, ಬಿಜೆಪಿಯ ಹೊಸ ’ಪೋಸ್ಟರ್ ಗರ್ಲ್’ ಕಂಗನಾ ರಾಣಾವತ್ ಅವರೇ ವಾಸಿ. ಈ ’ಹುಡುಗಿ’ ಸ್ಪಾಂಟೆನಿಯಸ್ ಆಗಿ ರಿಹಾನ್ನಾಗೆ ನೇರಾನೇರ ಪ್ರಶ್ನೆ ಮಾಡಿತ್ತು. ’ರೈತರಲ್ಲ, ಅವರು ಭಯೋತ್ಪಾದಕರು. ಚೀನಾ ಇದರ ಹಿಂದೆ ಇದೆ. ಭಾರತವನ್ನು ದುರ್ಬಲಗೊಳಿಸಿ, ಭಾರತವನ್ನು ತನ್ನ ವಸಾಹತುವನ್ನಾಗಿ ಮಾಡಿಕೊಳ್ಳುವ ಹುನ್ನಾರ ಇಲ್ಲಿದೆ’ ಎಂಬ ಹೊಸ some-ಶೋಧನೆಯನ್ನು ಈ ಚಂದುಳ್ಳಿ ’ಅಂಧಭಕ್ತೆ’ ಮಾಡಿದೆ. ಬಹುಸಮಯ ಪಾಕಿಸ್ತಾನದ ಸುತ್ತಲೆ ಗಿರಕಿ ಹೊಡೆಯುವ sum-ಶೋಧಕ ಅಮಿತ್ ಮಾಳವಿಯನಿಗೆ ಈ ’ಹುಡುಗಿಯನ್ನು’ ನೋಡಿ ನಾಚಿಕೆಯಾಗಬೇಕು!

ಇದನ್ನೂ ಓದಿ: ಹೋರಾಟ ಬೆಂಬಲಿಸಿದ್ದಕ್ಕೆ FIR: ಬೆದರಿಕೆಗೆ ಮಣಿಯಲ್ಲ, ನಾನಿನ್ನೂ ರೈತರ ಪರ ಎಂದ ಗ್ರೇಟಾ ಥನ್‌‌ಬರ್ಗ್

ಶಾ ಕೂಡ ಫೀಲ್ಡಿಗೆ!

ಬಂಪರ್ ಬಜೆಟ್ ತಯಾರಿಸಿ ಸುಸ್ತಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ, ’ಒನ್ಸ್ ಇನ್ ಎ ಸೆಂಚುರಿ’ ಬಜೆಟ್ ಎಂಬ ಅದಾನಿಯ ಟ್ವೀಟೇ ಟಾನಿಕ್ ಆಗಿ ಒದಗಿ ಬಂದು ಚೇತರಿಕೆ ಕಂಡಿದ್ದರು. ಅವರೂ ಒಂದು ಟ್ವೀಟ್ ಮಾಡಿಯೇ ಬಿಟ್ಟರು. ಕೇಂದ್ರ ಸಚಿವರಾದ ವಿ.ಕೆ.ಸಿಂಗ್, ಕಿಶನ್‌ ರೆಡ್ಡಿ ಮುಂತಾದವರೆಲ್ಲ ವಿದೇಶಾಂಗ ಸಚಿವಾಲಯದ ಪ್ರಕಟಣೆ ಶೇರ್ ಮಾಡಿ ಎರಡು ಸಾಲು ಗೀಚಿ ಒಗೆದರು.

ಆದರೆ ಮೇಲಿನ ಈ ಎಲ್ಲರ-ಸಿನಿಮಾ, ಕ್ರಿಕೆಟ್ ಮತ್ತು ಪಾಲಿಟಿಕ್ಸ್- ಫಾಲೋವರ್‌ಗಳ ಸಂಖ್ಯೆ ಒಟ್ಟುಗೂಡಿಸಿದರೂ ರಿಹಾನ್ನಾಳ ಫಾಲೋವರ್ ಸಂಖ್ಯೆ ಮುಂದೆ ಜುಜುಬಿ. ಛೇ, ಇದ್ಯಾಕೋ ಸರಿ ಹೋಗ್ತಿಲ್ಲ ಎಂದು ’ಕ್ರೊನೊಲಜಿ ಸಮಝಿಯೆ’ ಖ್ಯಾತಿಯ ಅಮಿತ್ ಶಾ ಕೂಡ ಟೇಲ್‌ಎಂಡ್ ಬ್ಯಾಟ್ಸ್‌ಮನ್ ಆಗಿ ಬಂದು ಗಾಳಿಯಲ್ಲಿ ’ಬ್ಯಾಟು’ ಬೀಸಿದ್ದಾರೆ. (ಅವರು ಬ್ಯಾಟ್ ಬದಲು ದೊಣ್ಣೆ ತಂದಿದ್ದರಂತೆ, ಅದನ್ನು ಅವರ ಕೈಗೆ ಕೊಟ್ಟಿದ್ದು ಜಯ್ ಶಾ ಅಂತೆ!)

ದೊಡ್ಡ ಸಂಖ್ಯೆಯ ಫಾಲೋವರ್‍ಸ್ ಹೊಂದಿರುವ “ವಿಶ್ವಗುರು” ಮೈದಾನಕ್ಕೆ ಇಳಿದಿದ್ದರೆ ಭಕ್ತಗಣಕ್ಕೆ ರೋಮಾಂಚನ ಆಗುತ್ತಿತ್ತೇನೋ? ಆದರೆ ಈ ವಿಷಯವನ್ನು ಮುಂದಿನ ಮನ್ ಕಿ ಬಾತ್‌ಗೆ ಸಾಹೇಬರು ರಿಸರ್ವ್ ಮಾಡಿ ಇಟ್ಟಂತಿದೆ. ಗಣರಾಜ್ಯ ದಿನದ ವಿಷಯವನ್ನು ವಾರದ ನಂತರ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ್ದು ನೆನೆಪಿದೆಯಲ್ಲ?


ಇದನ್ನೂ ಓದಿ: ’ಮೋದಿ-ಶಾ ನೇರ ಮಾತುಕತೆಗೆ ಬರಲಿ’- ಜಿಂದ್ ಮಹಾಪಂಚಾಯತ್‌ನ ಮಹಾ ನಿರ್ಣಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...